ಭಾನುವಾರ, ಮೇ 12, 2013

ಮಾನ್ಸಂಟೊ ಮಹಾ ಮಾರಿಯ ಕಥನ- 1


ಅವಿಷ್ಕಾರ, ಅಧಿಕ ಉತ್ಪಾದನೆ ಮತ್ತು  ಅಧಿಕ ಬಳಕೆ ಇವು ತನ್ನ ಗುರಿ ಎಂದು ಘೋಷಿಸಿಕೊಂಡಿರುವ ಬಹುರಾಷ್ಟ್ರೀಯ ಸಂಸ್ಥೆಯಾದ ಮಾನ್ಸಂಟೊ ಕಂಪನಿಯ ಕಾರ್ಯಾಚರಣೆ ಆಧುನಿಕ ಕೃಷಿಜಗತ್ತಿನಲ್ಲಿ ಅನೇಕ ತಲ್ಲಣಗಳನ್ನು ಉಂಟು ಮಾಡಿದೆ. ಕೃಷಿ ಕುರಿತ ಚಟುವಟಿಕೆಗಳಿಗೆ ಪೂರಕವಾಗಿ ಬಿತ್ತನೆ ಬೀಜ, ಕೀಟನಾಶಕಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ, ಶತಮಾನದ ಇತಿಹಾಸವಿರುವ  ಈ ಕಂಪನಿ  ಹೆಚ್ಚುತ್ತಿರುವ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಆಹಾರ ಬೆಳೆಗಳ ಉತ್ಪಾದನೆಗಾಗಿ  ಕೈಗೊಂಡಿರುವ  ಅನೇಕ ಜೈವಿಕ ತಂತ್ರಜ್ಞಾನದ ಪ್ರಯೋಗಗಳು ವಿವಾದಕ್ಕೆ ಗುರಿಯಾಗಿವೆ. ಮಾನ್ಸಂಟೊ ನಡೆಸುತ್ತಿರುವ ಅನೇಕ ಪ್ರಯೋಗಗಳಲ್ಲಿ ರೈತರ ಹಿತಾಸಕ್ತಿಗಿಂತ ಕಂಪನಿಯ ಹಿತಾಸಕ್ತಿ ಅಡಗಿರುವುದು  ರಹಸ್ಯವಾಗಿ ಉಳಿದಿಲ್ಲ. ಮಾನ್ಸಂಟೊ ಕಂಪನಿ ಸೃಷ್ಟಿಸಿರುವ ಅನೇಕ ಕುಲಾಂತರಿ ಮತ್ತು ತಳಿತಂತ್ರಜ್ಙಾನದ ಆಧಾರದ  ಬಿತ್ತನೆ ಬೀಜಗಳು ಮತ್ತು ಅವುಗಳಿಂದ ಬೆಳೆದ ಅನೇಕ ಆಹಾರ ಮತ್ತು ವಾಣಿಜ್ಯ ಬೆಳೆಗಳು ಪಕೃತಿ ಮೇಲಿನ ಜೈವಿಕ ಜಗತ್ತಿಗೆ ಮತ್ತು   ಜೀವ ವೈವಿಧ್ಯತೆಗೆ ಧಕ್ಕೆ ತಂದಿವೆ.

ಆಧುನಿಕ ಜಗತ್ತಿನಲ್ಲಿ ಮನುಷ್ಯನ ಒಳಿತಿಗಾಗಿ ಅವಿಷ್ಕಾರಗೊಂಡ ಯಾವುದೇ ವಿಜ್ಙಾನದ ತಂತ್ರಜ್ಞಾನವನ್ನು ಈ ಜಗತ್ತು ಕಳೆದ ಶತಮಾನದಿಂದ ಮುಕ್ತವಾಗಿ ಸ್ವೀಕರಿಸಿಕೊಂಡು ಬಂದಿದೆ. ಆದರೆ, ಮನುಕುಲಕ್ಕೆ, ಮತ್ತು ಪರಿಸರಕ್ಕೆ ಎರವಾಗುವ ತಂತ್ರಜ್ಞಾನವನ್ನು ಮಾತ್ರ ವಿಚಾರವಂತರ ಜಗತ್ತು ಪ್ರತಿರೋಧಿಸುತ್ತಲೇ ಬಂದಿದೆ.  ಹಣ, ಅಧಿಕಾರ, ತೋಳ್ಬಲ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ಆಮೀಷದ ಮೂಲಕ ಮಣಿಸುತ್ತಾ ಬಂದಿರುವ ಮಾನ್ಸಂಟೊ ಕಂಪನಿಯ ವ್ಯವಹಾರ ಚತುರತೆಗೆ ಅದರ ವಿರೋಧಿಗಳು ಕೂಡ ತಲೆತೂಗಿದ್ದಾರೆ. ಏಕೆಂದರೆ, ಅಂತಹ ವ್ಯವಹಾರಿಕ ಸೂಕ್ಷ್ಮತೆಯನ್ನು ಈ  ಕಂಪನಿ ಮೈಗೂಡಿಸಿಕೊಂಡಿದೆ.
ವ್ಯವಸ್ಥಿತ ಪ್ರಚಾರದ ಮೂಲಕ ಮನಸ್ಸುಗಳನ್ನು ಕಲುಷಿತಗೊಳಿಸಬಹುದೆಂದು 1928ರಲ್ಲಿ ಪ್ರೊಪಗಂಡ(Propaganda)ಎಂಬ ಕೃತಿ ಬರೆದು, ಜಗತ್ತಿನ  ಜಾಹಿರಾತು ವಿಷಯಗಳ ಜನಕ ಎಂದು ಪ್ರಸಿದ್ದೀಯಾಗಿರುವ ಲೇಖಕ  ಎಡ್ವರ್ಡ್ ಬೆರ್ನೆಸ್ ( Edvard Bernyas) ತನ್ನ ಕೃತಿಯಲ್ಲಿ ಹೇಳಿರುವ “ The Conscious and intelligent manipulation of the organized habits and opinions of the masses is an important element in democratic society’ ಎನ್ನುವ ಹಾಗೆ ಎಲ್ಲಾ ಅಂಶಗಳನ್ನು ಚಾಚೂ ತಪ್ಪದೆ ಅನುಕರಿಸಿಕೊಂಡ ಬಂದ ಕಂಪನಿಗಳಲ್ಲಿ ಮಾನ್ಸಂಟೊ ಕಂಪನಿ ಮೊದಲನೇಯದು ಎಂದರೆ, ತಪ್ಪಾಗಲಾರದು.
1901 ರಲ್ಲಿ ಅಮೇರಿಕಾದ ಮಿಸ್ಸೊರಿ ಪ್ರಾಂತ್ಯದ  ಸೆಂಟ್ ಲೂಯಿಸ್ ನಗರದಲ್ಲಿ ಜಾನ್ ಎಫ್ ಕ್ವೀನಿ ಎಂಬಾತನಿಂದ ಆರಂಭಗೊಂಡ ಈ  ಕಂಪನಿ, ಇಂದು ಜಗತ್ತಿನ ಅತಿದೊಡ್ಡ ಹತ್ತು ಬಹುರಾಷ್ರೀಯ ಕಂಪನಿಗಳಲ್ಲಿ ಒಂದು, ಜಾನ್ ಎಫ್ ಕ್ವೀನಿ ಎಂಬಾತ ತನ್ನ ನೆಚ್ಚಿನ ಮಡದಿ ಒಲ್ಗಾ ಮಾನ್ಸಂಟೊ ಹೆಸರಿನಲ್ಲಿ ಈ ಕಂಪನಿಯನ್ನು ಸ್ಥಾಪಿಸಿದಾಗ, ಕೃಷಿ ಚಟುವಟಿಗಳಿಗೆ ಪೂರಕವಾಗುವಂತ ಕೀಟನಾಶಕ, ರಸಗೊಬ್ಬರ, ಬೀಜಗಳ ಸಂಗ್ರಹ ಮತ್ತು ವಿತರಣೆಗೆ ಇವುಗಳಿಗೆ ಅನೂಕೂಲವಾಗುವ ಹಾಗೆ ಗುರಿಯನ್ನು ಹೊಂದಿತ್ತು.. ತನ್ನ ಮೊದಲ ಉತ್ಪಾದನೆಯಾಗಿ ಸಚ್ಚರಿನ್ (Saccharine) ಎಂಬ ಕೀಟನಾಶಕ ರಸಾಯಿನಿಕ ಉತ್ಪಾದನೆಯ ಮೂಲಕ ಕೃಷಿಜಗತ್ತಿಗೆ ಕಾಲಿಟ್ಟ ನಂತರ, ಈ ಕಂಪನಿ ಬೆಳದ ಪರಿ ಮಾತ್ರ ಅಚ್ಚರಿ ಮೂಡಿಸುವಂತಹದ್ದು. 
 ಕೀಟನಾಶಕಗಳ ತಯಾರಿಕೆಯಲ್ಲಿ ಕುಖ್ಯಾತಿ ಗಳಿಸಿರುವ ಈ ಸಂಸ್ಥೆ ತನ್ನ ನೈಜ ಮುಖವಾಡವನ್ನು ಮುಚ್ಚಿಕೊಳ್ಳಲು ಅನೇಕ ಅಂಗ ಸಂಸ್ಥೆಗಳನ್ನು ಸ್ಥಾಪಿಸಿ, ತನ್ನ ಚಕ್ರಾಧಿಪತ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿದೆ. ಡವ್ ಎಂಬ ಪ್ರಸಿದ್ಧ ಕೀಟನಾಶಕ ತಯಾರಿಕೆಯ ಸಂಸ್ಥೆ ಕೂಡ ಮಾನ್ಸಂಟೊ ಕಂಪನಿಯ ಕೂಸು. 1940 ರವರೆಗೆ ಕೇವಲ 480 ಉದ್ಯೋಗಿಗಳನ್ನು ಹೊಂದಿದ್ದ ಮಾನ್ಸಂಟೊ ಈಗ ಜಗತ್ತಿನ 66 ರಾಷ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, ಒಟ್ಟು 21, 183 ಉದ್ಯೋಗಿಗಳನ್ನು ಹೊಂದಿದೆ. ಅಮೇರಿಕಾ ರಾಷ್ಟ್ರವೊಂದರಲ್ಲಿ ವಿವಿಧ ನಗರಗಳಲ್ಲಿ ಇರುವ ತಳಿಗಳ ಪ್ರಯೋಗಶಾಲೆಯಲ್ಲಿ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಮಾರುಕಟ್ಟೆಯ ವಿಭಾಗದಲ್ಲಿ 10,227 ಮಂದಿ ಉದ್ಯೋಗಿಗಳು ಸೇವೆ ಸಲ್ಲಿಸುತ್ತಿದ್ದಾರೆ.
1945 ರವರೆಗೆ ಸಚ್ಚರಿನ್, 2 ಮತ್ತು 4D ಎಂಬ ರಸಾಯಿನಿಕ ಹಾಗೂ ಅಪಾಯಕಾರಿ ಕೀಟನಾಶಕಗಳನ್ನು ತಯಾರಿಸುತ್ತಿದ್ದ ಮಾನ್ಸಂಟೊ 1960 ರಲ್ಲಿ ಕೃಷಿ ವಿಭಾಗಗಳನ್ನು ಸ್ಥಾಪಿಸಿ, ಹೈಬ್ರಿಡ್ ಬಿತ್ತನೆ ಬೀಜಗಳ ಪ್ರಯೋಗವನ್ನು ಆರಂಭಿಸಿತು. 1964ರಲ್ಲಿ ಮಾನ್ಸಂಟೊ ಹೆಸರಿನಲ್ಲಿ ಹೈಬ್ರಿಡ್ ಮುಸುಕಿನ ಜೋಳವನ್ನು ಪ್ರಥಮ ಬಾರಿಗೆ ಬಿಡುಗಡೆ ಮಾಡಿತು.  1975 ರಲ್ಲಿ ಜೀವಶಾಸ್ತ್ರ ಕೋಶ ಗಳ ಅಧ್ಯಯನಕ್ಕಾಗಿ ( Cell Biology)  ಪ್ರಯೋಗ ಶಾಲೆಯನ್ನು ಸ್ಥಾಪಿಸಿತು.
ಈ ವೇಳೆಗೆ ಈ ಕಂಪನಿಯ ಅಂಗ ಸಂಸ್ಥೆಯಾದ ಡವ್ ಕಂಪನಿ ತಯಾರಿಸಿದ ಏಜೆಂಟ್ ಆರೆಂಜ್ ಎಂಬ ಕಳೆನಾಶಕ ಔಷಧಿ ಅಮೇರಿಕಾದ ಸೇನೆಯಲ್ಲಿ ಬಳಕೆಯಾಗಿ ಅನೇಕ ದುಷ್ಪರಿಣಾಮಕ್ಕೆ ಕಾರಣವಾಗಿತ್ತು. 1962 ರಿಂದ 1970 ರ ವರೆಗೆ ವಿಯಟ್ನಾ ರಾಷ್ಟ್ರದ ಮೇಲೆ ನಿರಂತರ ಯುದ್ದ ಸಾರಿದ್ದ ಅಮೇರಿಕಾ ದೇಶಕ್ಕೆ ವಿಯಟ್ನಾಂ ಅನ್ನು ಮಣಿಸಲು ಸಾಧ್ಯವಾಗಲಿಲ್ಲ. ವಿಯಟ್ನಾಂ ಯೋಧರು ಅರಣ್ಯದಲ್ಲಿ ಅಡಗಿ ಕುಳಿತು ಗೆರಿಲ್ಲಾ ಯುದ್ದ ತಂತ್ರದ ಮೂಲಕ ಅಮೇರಿಕಾ ಸೇನೆಯ ಯುದ್ಧ ವಿಮಾನಗಳನ್ನು ಮತ್ತು ಹೆಲಿಕಾಪ್ಟರುಗಳನ್ನು ಹೊಡೆದು ಉರುಳಿಸುತ್ತಿದ್ದರು.  ಈ ಸಮಯದಲ್ಲಿ ವಿಯಟ್ನಾಂನ ಅರಣ್ಯದ ಮರಗಳ ಎಲೆಗಳನ್ನು ಉದುರಿಸುವ ತಂತ್ರಜ್ಞಾನ ವಾಗಿ ಅಮೇರಿಕಾ ಸೇನೆ ಏಜೆಂಟ್ ಆರಂಜ್ ಎಂಬ ಅಪಾಯಕಾರಿ ಕಳೆನಾಶಕ ರಸಾಯನಿಕವನ್ನು ಬಳಕೆ ಮಾಡಿತು. ಎಂಟು ವರ್ಷಗಳ ಅವಧಿಯಲ್ಲಿ ಅಮೇರಿಕಾ ಸೇನೆ 70 ದಶಲಕ್ಷ ಲೀಟರ್ ವಿಷಯುಕ್ತ ರಸಾಯನಿಕವನ್ನು ವಿಯಟ್ನಾಂ ಅರಣ್ಯದ ಮೇಲೆ ಸಿಂಪಡಿಸಿತ್ತು. ಆನಂತರ ಉಂಟಾದ ಪರಿಣಾಮ ಮಾತ್ರ ಇಡೀ ಮನುಕುಲ ತಲೆ ತಗ್ಗಿಸುವಂತಹದ್ದು.

 ಈ ರಸಾಯನಿಕ ದ್ರವ ಗಾಳಿ ಮತ್ತು ನೀರಿನಲ್ಲಿ ಬೆರೆತ ಫಲವಾಗಿ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ವಿಯಟ್ನಾಂ  ಮತ್ತು ದಕ್ಷಿಣ ಕೋರಿಯಾದಲ್ಲಿ ನಾಶವಾದವು. ಪರಿಸರದಲ್ಲಿ ಮಿಳಿತಗೊಂಡಿದ್ದ ಈ ವಿಷವನ್ನು ಗಾಳಿ ಮತ್ತು ನೀರಿನ ಮೂಲಕ ಸೇವಿಸಿದ ಪರಿಣಾಮ ವಿಯಟ್ನಾಂ ಮನುಕುಲದ ಸಂತತಿಯಲ್ಲಿ ವಿಕೃತ ಶಿಶುಗಳ ಜನನಕ್ಕೆ ಕಾರಣವಾಯಿತು. ಯುದ್ಧ ನಡೆದ ನಲವತ್ತು ವರ್ಷಗಳ ನಂತರವೂ ಮನುಷ್ಯರ ವಂಶವಾಹಿ ಮೂಲಕ ಮುಂದುವರಿದಿರುವ ಈ ವಿಷ , ಇಂದಿಗೂ ವಿಯಟ್ನಾಂನಲ್ಲಿ ಅನೇಕ .ವಿಕೃತ ಮಕ್ಕಳ ಜನನಕ್ಕೆ ಕಾರಣವಾಗಿದೆ.
 ಈ ಸಂದರ್ಭದಲ್ಲಿ  ನಮ್ಮ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ನೆರೆಯ ಕೇರಳದ ಕಾಸರಗೂಡು ಜಿಲ್ಲೆಯಲ್ಲಿ 1980ರ ದಶಕದಲ್ಲಿ ಗೇರು ಮರಗಳ ಮೇಲೆ ಎಂಡೋ ಸಲ್ಫಾನ್ ಎಂಬ ರಸಾಯನಿಕವನ್ನು ಸಿಂಪಡಿಸಿದ ಪರಿಣಾಮ ನಡೆದ ದುರಂತದ ಅಧ್ಯಾಯವನ್ನು ಇಲ್ಲಿ ನೆನೆಯಬಹುದು. ವಿಯಟ್ನಾಂ ಸಂತ್ರಸ್ತರು ಅಂತರಾಷ್ಟ್ರಿಯ ನ್ಯಾಯಾಲಯದಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಪರಿಹಾರಕ್ಕೆ ಮೊಕೊದ್ದಮೆ ದಾಖಲಿಸಿದ ಪರಿಣಾಮ 1984ರಲ್ಲಿ ಮಾನ್ಸಂಟೊ ಮತ್ತು ಡವ್ ಕಂಪನಿಗಳು  180 ದಶಲಕ್ಷ ಡಾಲರ್ ಹಣವನ್ನು ಪರಿಹಾರವಾಗಿ ನೀಡಿದವು. ದಕ್ಷಿಣ ಕೋರಿಯಾ ತನ್ನ ನೆಲದ 6,800 ಸಂತ್ರಸ್ತರ ಪರವಾಗಿ 60 ದಶಲಕ್ಷ ಡಾಲರ್ ಗಾಗಿ ಮೊಕದ್ದಮೆ ದಾಖಲಿಸಿದ್ದು  ವಿಚಾರಣೆ ಮುಂದುವರಿದಿದೆ. ಈ ಘಟನೆ ನಡೆದ ನಂತರ ಮಾನ್ಸಂಟೊ ಕಂಪನಿಯ ತನ್ನ ಏಜೆಂಟ್ ಆರೆಂಜ್ ರಸಾಯಿನಕದ ಬ್ರಾಂಡ್ ಹೆಸರನ್ನು ಬದಲಿಸಿ, ರೌಂಡ್ ಅಪ್ ಹೆಸರಿನಲ್ಲಿ ಕಳೆನಾಶಕ ಔಷಧಿಯನ್ನಾಗಿ ಬಿಡುಗಡೆಮಾಡಿದೆ. ಈಗ ಈ ಅಪಾಯಕಾರಿ ರಸಾಯಿಕ ನಮ್ಮ ಕರ್ನಾಟಕ, ಆಂಧ್ರ, ತಮಿಳುನಾಡು, ಸೇರಿದಂತೆ ಅಧಿಕ ಭತ್ತ ಬೆಳೆಯುವ ಭಾರತದ ರಾಜ್ಯಗಳಲ್ಲಿ ಬಳಕೆಯಾಗುತ್ತಿದೆ.ಇದಲ್ಲದೆ ಯಾವುದೇ ನೈತಿಕತೆ ಇಲ್ಲದೆ ಇತರೆ ಸಂಶೋಧನೆಯ ಜ್ಞಾನವನ್ನು ಕದಿಯುವುದು ಕೂಡ ಈ ಕಂಪನಿಯ ಹವ್ಯಾಸಗಳಲ್ಲಿ ಒಂದು. ಕ್ಯಾಲಿಪೊರ್ನಿಯ ವಿಶ್ವವಿದ್ಯಾಲಯ ಅಭಿವೃದ್ದಿ ಪಡಿಸಿದ್ದ, ಹಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿ ಮಾಡಬಹುದಾದ ಪೊಸಿಲ್ಯಾಕ್ (Posilac) ಎಂಬ ಹಾರ್ಮೋನನ್ನು ಕದ್ದ ಪರಿಣಾಮವಾಗಿ 100 ದಶಲಕ್ಷ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ.
ಹೀಗೆ ಅನೇಕ ರಾದ್ಧಾಂತಗಳನ್ನು ಸೃಷ್ಟಿಸಿರುವ ಈ ಕಂಪನಿಯ ಇತಿಹಾಸವನ್ನು ಇತ್ತೀಚೆಗೆ ಅಮೇರಿಕನ್ ಲೇಖಕ F. William engdahl ತನ್ನ ಖಚಿತ ಸಂಶೋಧನೆಯ ಮೂಲಕ ಹೊರತಂದಿರುವ ಬೀಜಗಳ ವಿರೂಪ ಕುರಿತ Seeds of Destrection ಕೃತಿಯಲ್ಲಿ ಅವಲೋಕಿಸಬಹುದು. ಕುಲಾಂತರಿ ತಳಿಗಳ ಆಹಾರವನ್ನು ಸೇವಿಸಿರುವ ಮನುಷ್ಯರು ಮತ್ತು ಪ್ರಾಣಿಗಳು( ಹಸು ಮತ್ತು ಹಂದಿ) ಇವುಗಳಲ್ಲಿ ಆಗಿರುವ ಜೀವಿಕ ಬದಲಾವಣೆಯನ್ನು ತನ್ನ ಕೃತಿಯಲ್ಲಿ ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ.


ಹೇರಳವಾದ ಧನ ಸಂಪತ್ತು ಮತ್ತು ವ್ಯವಹಾರದ ಕುಶಲತೆಯನ್ನು ಹೊಂದಿರುವ ಮಾನ್ಸಂಟೊ ಇದೀಗ ಜಗತ್ತಿನ ಹಿರಿಯಣ್ಣ ಎಂದು ನಾವು ಭಾವಿಸುವ ಅಮೇರಿಕಾವನ್ನು ಮಣಿಸಿದೆ. ಮಾನ್ಸಂಟೊ ರಕ್ಷಣಾ ಕಾಯ್ದೆ ಎಂದು ಕರೆಯಬಹುದಾದ H.R.933 ಸೆಕ್ಷನ್ 735 ಎಂಬ ಮಸೂದೆಗೆ ಅದ್ಯಕ್ಷ ಬರಾಕ್ ಒಬಾಮ ಇದೇ ಮಾರ್ಚಿ ಕೊನೆಯ ವಾರದಲ್ಲಿ ಅಂಕಿತ ಹಾಕಿದ್ದಾರೆ. ಈ ಕಾಯ್ದೆ ಅನ್ವಯ ಇನ್ನು ಮುಂದೆ ಮಾನ್ಸಂಟೊ ಕಂಪನಿಯ ಬೀಜಗಳು, ಕ್ರಿಮಿನಾಶಕಗಳನ್ನು ಬಳಸಿದ ಅಥವಾ ಕುಲಾಂತರಿ ತಳಿಗಳ ಆಹಾರ ಸೇವಿಸಿ ತೊಂದರೆಗೊಳಗಾದ ರೈತರು ಇಲ್ಲವೆ, ಗ್ರಾಹಕರು ಪರಿಹಾರಕ್ಕಾಗಿ ಫೆಡರಲ್ ನ್ಯಾಯಾಲಯಗಳಲ್ಲಿ ಮಾನ್ಸಂಟೊ ಕಂಪನಿ ವಿರುದ್ಧ ಮೊಕದ್ದಮೆ ದಾಖಲಿಸುವಂತಿಲ್ಲ. ಇದು ಅಮೇರಿಕನ್ ಸಾವಯವ ಕೃಷಿ ಆಹಾರ ಪದಾರ್ಥಗಳನ್ನು ಬಳಸುತ್ತಿರುವ ಎರಡು ಲಕ್ಷ ಗ್ರಾಹಕರನ್ನು ಕೆರಳಿಸಿದೆ. ಕಳೆದ ಎರಡು ತಿಂಗಳಿಂದ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ, ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟಿಸುವುದರ ಮೂಲಕ ಅಮೇರಿಕನ್ ನಾಗರೀಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
                               (ಮುಂದುವರಿಯುವುದು)

ಶುಕ್ರವಾರ, ಮೇ 10, 2013

ಕಲ್ಲಿದ್ದಲ ಕಪ್ಪು ಚರಿತ್ರೆ

ಕಲ್ಲಿದ್ದಲು ಗಣಿ ನಿಕ್ಷೇಪಗಳ ಹಂಚಿಕೆಯಲ್ಲಿ ನಡೆದಿರುವ ಮೋಸ, ವಂಚನೆ ಕುರಿತು ಕಳೇದ ಒಂದು ವರ್ಷದಿಂದ  ಸುಪ್ರೀಂ ಕೋರ್ಟ್ನ  ಕಣ್ಗಾವಲಿನಲ್ಲಿ ಸಿ.ಬಿ.ಐ. ತನಿಖೆ ನಡೆಸುತ್ತಿದೆ. ವರದಿ ಬಹಿರಂಗವಾಗುತ್ತಿದ್ದಂತೆ ದೇಶದ ಪ್ರಮುಖ ರಾಜಕಾರಣಿಗಳ ಮುಖವಾಡ ಕಳಚಿ ಬೀಳಲಿದೆ. ಕಲ್ಲಿದ್ದಲು ಗಣಿಯ ಸಂಪತ್ತು ದೋಚುವ ವಿಚಾರದಲ್ಲಿ ಅಧಿಕಾರಸ್ತ ರಾಜಕಾರಣಿಗಳು ಮತ್ತು ಉದ್ಯಮಿಗಳ  ಅಪವಿತ್ರ ಮೈತ್ರಿ ಭಾರತದ ರಾಜಕೀಯ ಮತ್ತು ಸಾಮಾಜಿಕ ಬದುಕಿನಲ್ಲಿ ಹೊಸ ಸಂಗತಿಯೇನಲ್ಲ. ಆದರೇ, ಈ ನೆಲದ ನಿಜವಾರಸುದಾರರಾದ ಆದಿವಾಸಿಗಳನ್ನು ನಮ್ಮ ಸರ್ಕಾರಗಳು ಹೇಗೆ ವಂಚಿಸಬಲ್ಲವು ಎಂಬುದಕ್ಕೆ ಒಂದು ಸತ್ಯ ಘಟನೆಯನ್ನು ನಿಮ್ಮದೆರು ಅನಾವರಣಗೊಳಿಸುತ್ತಿದ್ದೇನೆ.

ಕಳೆದ ಎರಡು ವರ್ಷಗಳಿಂದ ಮಧ್ಯಪ್ರದೇಶ ಮತ್ತು ಛತ್ತೀಸ್ಗಡ ರಾಜ್ಯಗಳ ಅರಣ್ಯ ಪ್ರದೇಶ ನನಗೀಗ ಅಪರಿಚಿತವಾಗಿ ಉಳಿದಿಲ್ಲ. ನಕ್ಷಲ್ ಕಥನದ ಮಾಹಿತಿಗಾಗಿ ಎರಡು ಬಾರಿ ಅಲ್ಲಿಗೆ ಬೇಟಿ ನೀಡಿದ್ದೆ. ಅನಂತರ ಕಳೆದ ಒಂದು ವರ್ಷದಿಂದ ನನ್ನ ಮಗ ಅನನ್ಯ ಇದೇ ಅರಣ್ಯಪ್ರದೇಶದ ಅಭಯಾರಣ್ಯದಲ್ಲಿರುವ ಕೇಂದ್ರ ಸರ್ಕಾರದ ಅರಣ್ಯಾಧಿಕಾರಿಗಳ ತರಬೇತಿ ಕೇಂದ್ರದಲ್ಲಿ  ವಲಯ ಅರಣ್ಯಾಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾನೆ. ಅವನ ಬೇಟಿಯ ನೆಪದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಮತ್ತೆ ಎರಡು ಬಾರಿ ಬೇಟಿ ನೀಡಿದ್ದೀನಿ. ಪ್ರತಿ ಬೇಟಿಯಲ್ಲಿ ಅಲ್ಲಿನ ಆದಿವಾಸಿಗಳ ಅಬಿವೃದ್ಧಿಗಾಗಿ ಶ್ರಮಿಸುತ್ತಿರುವ ಅನೇಕ ಸ್ವಯಂ ಸೇವಾ ಸಂಘಟನೆಗಳು, ಆ ಪ್ರದೇಶದಲ್ಲಿ  ನಡೆಯುತ್ತಿರುವ ಅನೇಕ ವಂಚನೆಗಳನ್ನು ದಾಖಲೆಗಳ ಮೂಲಕ ನನ್ನೆದೆರು ಅನಾವರಣಗೊಳಿಸುತ್ತಾ ಬಂದಿವೆ. ಅನಕ್ಷರಸ್ತರನ್ನು, ಮುಗ್ಧರನ್ನು ನಮ್ಮನ್ನಾಳುವ ಸರ್ಕಾರಗಳು ಹೀಗೂ ವಂಚಿಸಬಲ್ಲವೆ?, ವಂಚನೆಗಳಿಗೆ ಇಷ್ಟೊಂದು ಮುಖಗಳಿವೆಯಾ? ಎಂದು ನನಗೆ ಆಶ್ಚರ್ಯವಾಗುತ್ತದೆ.
ಈ ದೇಶದ ಶೇಕಡ 90 ರಷ್ಟು ಕಲ್ಲಿದ್ದಲು  ಮತ್ತು ಶೇಕಡ 55 ರಷ್ಟು ಇತರೆ ಲೋಹಗಳ ನಿಕ್ಷೇಪ ಭಾರತದ ಆದಿವಾಸಿಗಳು ನೆಲೆಗೊಂಡಿರುವ ಅರಣ್ಯಗಳಲ್ಲಿ ಶೇಖರಗೊಂಡಿವೆ. ಈ ವಾಸ್ತವ ಸಂಗತಿ ಆದಿವಾಸಿಗಳ ಪಾಲಿಗೆ ಕಂಟಕವಾಗಿದೆ. ದೇಶದ ಶೇಕಡ 60ರಷ್ಟು ಕಲ್ಲಿದ್ದಲು ನಿಕ್ಷೇಪ, ಛತ್ತೀಸ್ಗಡ ರಾಜ್ಯದ ಅರಣ್ಯದಲ್ಲಿದ್ದು ಅನೇಕ ಕಂಪನಿಗಳು ಇಲ್ಲಿಗೆ ಲಗ್ಗೆ ಇಟ್ಟಿವೆ, ಅನೇಕ ಉದ್ದಿಮೆಗಳು ರಾಜಕಾರಣಿಗಳೊಂದಿಗೆ ಶಾಮೀಲಾಗಿದ್ದು, ಯಾವ ಅಳುಕಿಲ್ಲದೆ ಅರಣ್ಯ ಭೂಮಿಯನ್ನು ಕಬಳಿಸುತ್ತಿವೆ.
ಈಗಾಗಲೇ 70 ಖಾಸಾಗಿ ಕಂಪನಿಗಳು, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಗೆ ಛತ್ತೀಸ್ ಗಡ ರಾಜ್ಯಕ್ಕೆ ಕಾಲಿಟ್ಟಿವೆ. ಅನಂತ್ ಗ್ರೂಪ್ ಆಫ್ ಕಂಪನೀಸ್ ಎಂಬ ಸಂಸ್ಥೆಗೆ ರಾಜ್ಯ ಸರ್ಕಾರ 358 ಹೆಕ್ಟೇರ್ ಪ್ರದೇಶವನ್ನು ಮಂಜೂರು ಮಾಡಿದೆ. ಇದರಲ್ಲಿ ಆದಿವಾಸಿಗಳಿಗೆ ಸೇರಿದ 58 ಹೆಕ್ಟೇರ್ ಅರಣ್ಯಪ್ರದೇಶವೂ ಸೇರಿದೆ, ಶಾರದಾ ಎನರ್ಜಿ ಲಿಮಿಟೆಡ್ ಎಂಬ ಸಂಸ್ಥೆ ಅಕ್ರಮವಾಗಿ ಆದಿವಾಸಿಗಳ ಹೆಸರಿನಲ್ಲಿ 24 ಹೆಕ್ಟೇರ್ ಪ್ರದೇಶವನ್ನು ಖರೀದಿಸಿದೆ, (ಆದಿವಾಸಿಗಳ ಭೂಮಿಯನ್ನು ಇತರೆ ಯಾರೂ ಖರೀದಿಸದಂತೆ ಕೇಂದ್ರ ಸರ್ಕಾರದ ಕಾನೂನು ಜಾರಿಯಲ್ಲಿದೆ) ಮಹಾರಾಷ್ಟ್ರದ ಔರಂಗಾಬಾದ್ ಮೂಲದ ವಿಡಿಯೋಕಾನ್ ಕಂಪನಿಗೆ ಆದಿವಾಸಿ ಮುಖಂಡನೊಬ್ಬ ಕಮಿಷನ್ ಹಣದ ಆಸೆಗಾಗಿ ಹನ್ನೆರೆಡು ಆದಿವಾಸಿ ಕುಟುಂಬಗಳ 160 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖರೀದಿಸಿದ್ದಾನೆ. ಇವೆಲ್ಲವೂ ಕಲ್ಲಿದ್ದಲು ನಿಕ್ಷೇಪ ಇರುವ ಪ್ರದೇಶಗಳು.
ಇದು ಖಾಸಾಗಿ ಕಂಪನಿಗಳು ವಂಚಿಸುವ ಬಗೆಯಾದರೆ, ಸ್ವತಃ ಛತ್ತೀಸ್ ಗಡ ಸರ್ಕಾರವೇ ಆದಿವಾಸಿಗಳನ್ನು ವಂಚಿಸಲು ಇದೀಗ ಮುಂದಾಗಿದೆ. ಸರ್ಗುಜ ಜಿಲ್ಲೆಯ ಪ್ರೇಮ್ ನಗರ ಬ್ಲಾಕ್ (ತಾಲ್ಲೂಕು) ನಲ್ಲಿ ಶೆಕಡ 61 ರಷ್ಟು ಬುಡಕಟ್ಟು ಜನಾಂಗಗಳು ವಾಸಿಸುವ 15 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅರಣ್ಯ ಪ್ರದೇಶದಲ್ಲಿ, ಛತ್ತೀಸಗಡ ಸರ್ಕಾರ ಮತ್ತು ಜಗತ್ತಿನ ಅತಿದೊಡ್ಡ ರೈತರ ಸಹಕಾರಿ ಸಂಸ್ಥೆಯಾದ ಇಪ್ಕೊ ಸಂಸ್ಥೆಗಳು ಜಂಟಿಯಾಗಿ 4.500 ಕೋಟಿ ಬಂಡವಾಳದಲ್ಲಿ 1320 ಮೆಗಾವ್ಯಾಟ್ ಉತ್ಪಾದನೆಗೆ ಮುಂದಾಗಿವೆ. ತಮ್ಮ ಭೂಮಿಯಲ್ಲಿ ಕಲ್ಲಿದ್ದಲು ನಿಕ್ಷೇಪ ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಡಾ.ರಮಣಸಿಂಗ್ ಈ ಪ್ರದೇಶವನ್ನು ನೆರೆಯ ಬಿಲಾಯ್ ಕೈಗಾರಿಕಾ ನಗರದಂತೆ ಪರಿವರ್ತಿಸುತ್ತೇನೆ, ಶಾಲಾ, ಕಾಲೇಜುಗಳು, ಅತ್ತ್ಯುತ್ತಮ ದರ್ಜೆಯ ಆಸ್ಪತ್ರೆಗಳು ತಲೆ ಎತ್ತುತ್ತವೆ, ಎಕರೆಗೆ ಕೇವಲ ಐವತ್ತು ಸಾವಿರ ಬೆಲೆ ಬಾಳುವ ಭೂಮಿ ನಂತರ 10 ಲಕ್ಷ ಬೆಲೆ ಬಾಳಲಿದೆ ಎಂದು ಆಮೀಷ ತೋರಿದರು. ಅಲ್ಲಿನ ಆದಿವಾಸಿ ರೈತರು ಯಾವುದೇ ಆಮೀಷಕ್ಕೆ ಬಲಿ ಬೀಳಲಿಲ್ಲ. ಭೂಮಿ ನೀಡಲು ನಿರಾಕರಿಸಿದರು, ಜೊತೆಗೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ನೀಡಿರುವ ಸಾರ್ವಭೌಮ ಹಕ್ಕುಗಳನ್ನು ಬಳಸಿ, ನಮ್ಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಯಾವುದೇ ಗಣಿಗಾರಿಕೆ ನಡೆಯಬಾರದು ಎಂಬ ನಿರ್ಣಯ ತೆಗೆದುಕೊಂಡರು.
ಗ್ರಾಮಪಂಚಾಯಿತಿಗಳ ನಿರ್ಣಯವನ್ನು ಮಣಿಸಲು ಛತ್ತೀಸ್ ಗಡದ ಬಿ.ಜೆ.ಪಿ. ಸರ್ಕಾರದ  ಮುಖ್ಯಮಂತ್ರಿ ರಮಣಸಿಂಗ್ ಬಳಸಿದ ವಾಮಮಾರ್ಗ ಮಾತ್ರ ಪ್ರಜಾಪ್ರಭುತ್ವದ ಮಾಲ್ಯಗಳಿಗೆ ಧಕ್ಕೆ ತರುವಂತಹದ್ದು. ತನ್ನ ಸಚಿವ ಸಂಪುಟದಲ್ಲಿ 15 ಗ್ರಾಮ ಪಂಚಾತಿಗಳನ್ನು ನಗರ ಸಭಾ ಪಂಚಾಯಿತಿಗಳಾಗಿ ಪರಿವರ್ತಿಸಿ, ಅವುಗಳ ಹಕ್ಕನ್ನು ಮೊಟಕುಗೊಳಿಸಲಾಯಿತು. ಕೇವಲ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಪಂಚಾಯಿತಿಗಳು ಛತ್ತೀಸ್ ಗಡದ ಸರ್ಕಾರದಲ್ಲಿ ನಗರ ಸಬೆ ಪಂಚಾಯಿತಿಗಳಾಗಿವೆ. ಇದಕ್ಕೆ ಮುಖ್ಯಮಂತ್ರಿ ರಮಣ್ ಸಿಂಗ್ ನೀಡಿದ ಉತ್ತರ ಹೀಗಿದೆ “ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯ ಒದಗಿಸಲು  ನಗರ ಸಭೆಗಳನ್ನಾಗಿ ಪರಿವರ್ತಿಸಲಾಗಿದೆ, ಇದು ಆದಿವಾಸಿಗಳಿಗೆ ಸರ್ಕಾರ ನಿಡಿದ ಉಡೂಗರೆ” ಇದು ದೇಶಭಕ್ತರ ಪಕ್ಷದಿಂದ ಬಂದ ಮುಖ್ಯಮಂತ್ರಿಯೊಬ್ಬನ ಮಾತು.
ಸರ್ಕಾರದ ನಿರ್ಣಯವನ್ನು ಪ್ರತಿಭಟಿಸಿದ ಸಾವಿರಾರು ಆದಿವಾಸಿ ರೈತರು, ತಮ್ಮ ತಲೆಗೂದಲು, ಮೀಸೆಗಳನ್ನು ಬೋಳಿಸಿಕೊಂಡು , ರಾಜ್ಯಪಾಲ ಎಂ.ಎಲ್ ನರಸಿಂಹನ್ ಅವರಿಗೆ 2008 ರಲ್ಲಿ ಮನವಿ ಸಲ್ಲಿಸಿದರು.
ಕುತೂಹಲದ ಸಂಗತಿಯೆಂದರೇ, ಈ ಪ್ರದೇಶದ 450 ಚದುರ ಕಿಲೋಮೀಟರ್ ಅರಣ್ಯವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಆನೆಗಳ ಕಾರಿಡಾರ್ ಎಂದು ಘೋಷಿಸಿತ್ತು. ಹುಲಿ, ಚಿರತೆ, ಐದು ಬಗೆಯ ವಿಶಿಷ್ಟ ಪತಂಗಗಳು, 15 ಬಗೆಯ ಸಸ್ತನಿ ಪ್ರಾಣಿಗಳು ಈ ಪ್ರದೇಶದಲ್ಲಿವೆ.ಸರ್ಗುಜ ಜಿಲ್ಲೆಯ ಪೂರ್ವ ಕರ್ಯ, ಹಾಗೂ ಕಂಟೆಬಸೇನ್, ಹಸ್ ಡೆಯಾ ನದಿತೀರದ ಪ್ರಾಂತ್ಯದಲ್ಲಿ ಶೇಕಡ 80 ರಷ್ಟು ಅರಣ್ಯವಿರುವುದನ್ನು ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದ ಹೈದರಾಬಾದಿನ ತಾರಾ ವಿಜ್ಞಾನ ಸಂಸ್ಥೆ ದೃಢಪಡಿಸಿದೆ. 70 ಸಾವಿರ ಗಿಡಗಳನ್ನು ವಿರಳವಾಗಿರುವ  ಅರಣ್ಯ ಪ್ರದೇಶದಲ್ಲಿ ನೆಡುವಂತೆ ಕೇಂದ್ರ ಸರ್ಕಾರಕ್ಕೆ ಈ  ಸಂಸ್ಥೆ ಶಿಫಾರಸ್ಸು ಮಾಡಿತ್ತು.
ಇದೀಗ ರಾಜಸ್ಥಾನದ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಲ್ಲಿ ತಯಾರಾಗುವ ವಿದ್ಯುತ್ ಅನ್ನು ಖರೀದಿಸಲು ಛತ್ತೀಸ್ ಗಡ ಮತ್ತು ಇಪ್ಕೊ ಸಂಸ್ಥೆ ಜೊತೆ ಒಪ್ಪಂಧ ಮಾಡಿಕೊಂಡಿದ್ದಾರೆ, ಹಾಗಾಗಿ ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಮೀಸಲು ಅರಣ್ಯ ಪ್ರದೇಶದ 450 ಚದುರ ಕಿ.ಮಿ.ವ್ಯಾಪ್ತಿಯನ್ನು ಕುಗ್ಗಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ, ಛತ್ತೀಸ್ಗಡದ ಆದಿವಾಸಿ ರೈತರು ಮಾತ್ರ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕಲ್ಲಿದ್ದಲು ಗಣಿಗಾರಿಕೆ ವಿರುದ್ದ ಹೋರಾಟ ಮುಂದುವರಿಸಿದ್ದಾರೆ. ಅವರ ಶ್ರಮ, ಪ್ರತಿಭಟನೆ, ಹೋರಾಟ ಎಲ್ಲವೂ ಇಲ್ಲಿ ಅರಣ್ಯ ರೋಧನ ದಂತೆ ಕಂಡುಬರುತ್ತಿದೆ. ಪ್ರತಿದಿನ ಛತ್ತೀಸ್ ಗಡ ಅರಣ್ಯದ ಒಡಲು ಬಗೆದು ತೆಗೆದ ಕಲ್ಲಿದ್ದಲು ದೇಶಾದ್ಯಂತ ರವಾನೆಯಾಗುತ್ತಿದೆ. ಭಾರತೀಯ ಮಧ್ಯ ರೈಲ್ವೆ ಕಲ್ಲಿದ್ದಲು ಸಾಗಾಣಿಕೆಗಾಗಿ, ಮಧ್ಯಭಾರತದಲ್ಲಿ ಪ್ರಯಾಣಿಕರ ರೈಲ್ವೆ ಮಾರ್ಗದ ಪಕ್ಕದಲ್ಲಿ ಸರಕು ಸಾಗಾಣಿಕೆ ರೈಲುಗಳಿಗಾಗಿ ಪ್ರತ್ಯೇಕ ಎರಡು ಮಾರ್ಗಗಳನ್ನು ಸೃಷ್ಟಿಸಿದೆ. ಛತ್ತೀಸ್ ಗಡದಲ್ಲಿ ನಡೆಯುವ ಕಲ್ಲಿದ್ದಲ ಗಣಿಗಾರಿಗಳು, ಮಹಾರಾಷ್ಟ್ರದ ಗಡಿ ಜಿಲ್ಲೆ ಚಂದ್ರಾಪುರ್ ಜಿಲ್ಲೆಯಲ್ಲಿ ಇರುವ 24 ಕಲ್ಲಿದ್ದಲು ಸಂಸ್ಕರಣ ಘಟಕಗಳು ಎಲ್ಲವೂ ಭಾರತದ ಪ್ರಮುಖ ರಾಜಕಾರಣಿಗಳ ಒಡೆತನದಲ್ಲಿವೆ. ಅಭಿವೃದ್ದಿಯೆಂಬ ವಿಕೃತಿಯ ನೆಪದಲ್ಲಿ ಪರಿಸರವನ್ನು, ಆದಿವಾಸಿ ರೈತರನ್ನು ಸದ್ದಿಲ್ಲದೆ ಶೋಷಿಸುತ್ತಿರುವ  ಈಗಿನ ಭಾರತದ ವ್ಯವಸ್ಥೆಯಲ್ಲಿ, ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ತೊಡಗಿಸಿಕೊಂಡಿರುವ ನನಗೆ ಅಭಿವೃದ್ಧಿಯ ಶಬ್ಧ ಕೇಳಿದರೆ, ಆತಂಕ ಶುರುವಾಗುತ್ತದೆ.

ಬುಧವಾರ, ಮೇ 8, 2013

ಅಳಂಗ್ ಎಂಬ ನೆಲದ ಮೇಲಿನ ನರಕ


ಗುಜರಾತಿನ ಮುಖ್ಯಮುಂತ್ರಿ ನರೇಂದ್ರಮೋದಿಯವರು ಪ್ರಖ್ಯಾತ ಹಿಂದಿಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ರವರನ್ನು ಪ್ರವಾಸೋದ್ಯಮದ ರಾಯಭಾರಿಯನ್ನಾಗಿ ಮಾಡಿಕೊಂಡು, ಗುಜರಾತ್ ರಾಜ್ಯವನ್ನು ಧರೆಯ ಮೇಲಿನ ಸ್ವರ್ಗ ಎಂದು ಪ್ರತಿಬಿಂಬಿಸುವ ಜಾಹಿರಾತನ್ನು  ಪ್ರಕಟಿಸುತ್ತಿರುವುದನ್ನು ನಾವು ಮಾದ್ಯಮಗಳಲ್ಲಿ ನೋಡುತ್ತಿದ್ದೇವೆ. ಅಲ್ಲಿನ ಕಡಲತೀರ, ದ್ವಾರಕದಂತಹ  ಸಮುದ್ರದಡಿ ಮುಳುಗಿದ ಅವಶೇಷಗಳು, ಐತಿಹಾಸಿಕ, ಮತ್ತು ಪೌರಾಣಿಕ ಹಿನ್ನಲೆಯುಳ್ಳ ದೇಗುಲಗಳು, ಗುಜರಾತಿನ ವಿಶಿಷ್ಟ ಸಂಸ್ಕೃತಿ, ಈ ಎಲ್ಲವೂ ಕೂಡ ಜಾಹಿರಾತಿನಲ್ಲಿ  ಗಮನ ಸೆಳೆಯುವಂತವು. ಇದರ ಕುರಿತು ಎರಡು ಮಾತಿಲ್ಲ. ಆದರೆ, ಇದರ ಜೊತೆ ಜೊತೆಯಲ್ಲಿ ಗುಜರಾತಿನ ಕಡಲ ತೀರದಲ್ಲಿ ನೆಲದ ಮೇಲಿನ ನರಕವೂ ಕೂಡ ಇದೆ ಎಂಬ ವಿಷಯವನ್ನು ಜಾಹಿರು ಪಡಿಸಿದ್ದರೆ, ಚೆನ್ನಾಗಿರುತ್ತಿತ್ತು.
ಜಗತ್ತಿನಲ್ಲಿ ಹಡಗು ಒಡೆಯುವ ಅತಿ ದೊಡ್ಡ ಕೇಂದ್ರ, ಇದೇ ಗುಜರಾತಿನ ಕಡಲ ತೀರದ ಅಳಂಗ್ ಎಂಬ ಸ್ಥಳದಲ್ಲಿದೆ. ಮನುಷ್ಯನೊಬ್ಬನ ಜೀವವನ್ನು ಹೊರತುಪಡಿಸಿ, ಭಾರತದಲ್ಲಿ ಎಲ್ಲವೂ ದುಬಾರಿ ಎಂಬ ಅಂಶವನ್ನು ಮನದಟ್ಟಾಗಬೇಕಾದರೆ, ಒಮ್ಮೆ ಗುಜರಾತಿನ ಅಳಂಗ್ ಎಂಬ ಬಂದರು ಪ್ರದೇಶವನ್ನು ಹಾಗೂ ಅಲ್ಲಿನ ದುರಂತವನ್ನು ನಾವು ಒಮ್ಮೆ ಕಣ್ಣಾರೆ ನೋಡಬೇಕು.

ಪಾಶ್ಚಿಮಾತ್ಯ ರಾಷ್ಟ್ರಗಳ ಪಾಲಿಗೆ ಕಸ ಸುರಿಯುವ ತಿಪ್ಪೆಗುಂಡಿಯಾಗಿರುವ ಭಾರತ ಮತ್ತು ಇಲ್ಲಿನ ಪರಿಸರ ಕುರಿತ ಅಜ್ಞಾನವೆಂದರೆ, ಎಲ್ಲಿಲ್ಲದ ಮೋಹ. ಭಾರತದಿಂದ ರಫ್ತಾಗುವ ಹಣ್ಣು, ಅಥವಾ ತರಕಾರಿ ಇಲ್ಲವೆ, ಆಹಾರ ಪದಾರ್ಥಗಳಲ್ಲಿ ಒಂದಿನಿತು ವಿಷಕಾರಿ ಅಂಶ ಕಂಡರೆ ಸಾರಾ ಸಗಟಾಗಿ ತಿರಸ್ಕರಿಸುವ ಈ ರಾಷ್ತ್ರಗಳು ತಮ್ಮ ನೆಲ, ಜಲ ಹಾಗೂ ಪರಿಸರಕ್ಕೆ ಅಪಾಯವಾಗುವ  ಹಡಗುಗಳನ್ನು ಮಾತ್ರ,ಒಡೆಯುವ ಕ್ರಿಯೆಗೆ ಕೈ ಹಾಕದೆ, ಎಲ್ಲವನ್ನು ತಂದು ಭಾರತದ ಅಳಂಗ್ ಮತ್ತು ಬಂಗ್ಲಾದೇಶದ ಚಿತ್ತಗಾಂಗ್ ಬಂದರಿಗೆ ತಂದು ಬಿಸಾಡಿಹೋಗುತ್ತವೆ,
ಇಲ್ಲಿನ ಅಶಿಕ್ಷಿತ ಕೂಲಿಜನ. ಬಡತನ ಮತ್ತು ಎರಡನೇ ದರ್ಜೆ ವಸ್ತುಗಳಿಗೆ ಬಲಿಬೀಳುವ ಹಪಾಹಪಿನ ಇಂತಹ ನಮ್ಮ ದೌರ್ಬಲ್ಯಗಳನ್ನು ಜಗತ್ತಿನ ಮುಂದುವರಿದ ರಾಷ್ತ್ರಗಳು ಬಂಡವಾಳ ಮಾಡಿಕೊಂಡಿವೆ.

ಗುಜರಾತಿನ ಭಾವನಗರದಿಂದ 50 ಕಿಲೋಮೀಟರ್ ದೂರದಲ್ಲಿರುವ ಅಳಂಗ್ ಬಂದರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಂಪನಿಗಳು ಹಡಗು ಒಡೆದು ಹಾಕುವ ಕಾರ್ಯದಲ್ಲಿ  ನಿರತವಾಗಿವೆ. ನೆರೆಯ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನದಿಂದ ಬಂದ ಅನಕ್ಷರಸ್ತ ಕೂಲಿಕಾರ್ಮಿಕರು ಇಲ್ಲಿನ ಶೆಡ್ಡುಗಳಲ್ಲಿ ವಾಸಿಸುತ್ತಾ ದಿನವೊಂದಕ್ಕೆ 200 ರೂಪಾಯಿನಿಂದ 300 ರೂಪಾಯಿಗಳಿಗೆ ದುಡಿಯುತ್ತಿದ್ದಾರೆ.
ಉದ್ಯೊಗ ಕುರಿತ ಯಾವ ಸುರಕ್ಷತೆಯಾಗಲಿ, ಭದ್ರತೆಯಾಗಲಿ ಇಲ್ಲಿ ಇಲ್ಲ. ಸುಮಾರು 18 ಸಾವಿರ ಪುರುಷರು ಮತ್ತು 3 ಸಾವಿರ ಮಹಿಳೆಯರೂ ದುಡಿಯುತ್ತಿರುವ ಅಳಂಗ್  ಬಂದರಿನಲ್ಲಿ ಪ್ರತಿ ತಿಂಗಳು ಆಕಸ್ಮಿಕ ಅಪಘಾತಗಳಿಂದ ಸರಾಸರಿ 9 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಕೂಲಿ ಕಾರ್ಮಿಕರ ಸಾವಿನ ಸಂಖ್ಯೆಗಿಂತ ಶೇಕಡ ಆರು ಪಟ್ಟು ಹೆಚ್ಚಿದೆ. ಇದಲ್ಲದೆ, ಅಪಾಯಕಾರಿ ರಸಾಯನಿಕ ವಸ್ತುಗಳು ಮತ್ತು ವಿವಿಧ ಬಗೆಯ ತೈಲ ಅಥವಾ ತ್ಯಾಜ್ಯವಸ್ತುಗಳನ್ನು ಸಾಗಿಸಿ ಹಳೆಯದಾದ ಹಡಗುಗಳನ್ನು ಒಡೆಯುವಾಗ ಹೊರ ಹೊಮ್ಮಿದ ವಿಷಾನಿಲಗಳಿಗೆ ಮತ್ತು ಹಡಗಿನ ವಿವಿಧ ಭಾಗಗಳನ್ನು ಗ್ಯಾಸ್ ಕಟ್ಟರ್ ಮೂಲಕ ಕತ್ತರಿಸುವಾಗ ಉತ್ಪಾದನೆಯಾಗುವ ವಿಷದ ಗಾಳಿಗೆ ತೆರದುಕೊಂಡ ಫಲವಾಗಿ ಇಲ್ಲಿನ ಕಾರ್ಮಿಕರು ಶ್ವಾಸಕೋಶದ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಹಡಗಿನ ಒಳಾಂಗಣವನ್ನು ಕಲ್ನಾರು ಮತ್ತು ಪೈಬರ್ ಗಳಿಂದ ವಿನ್ಯಾಸಗೊಳಿಸಿರುವುದರಿಂದ ಬೆಂಕಿಯ ಶಾಖಕ್ಕೆ ಉರಿಯುವ ಕಲ್ನಾರಿನಲ್ಲಿ ವಿಷಾನಿಲ ಹೊರಬರುತ್ತಿದ್ದು, ಇದನ್ನು ಉಸಿರಾಡುವ ಗಾಳಿಯ ಮೂಲಕ ಸೇವಿಸುತ್ತಿರುವ ಇಲ್ಲಿನ ಕಾರ್ಮಿಕರಿಗೆ ಇದರ ಬಗ್ಗೆ ಅರಿವಿಲ್ಲ.
ಭಾರತದಲ್ಲಿ ಅತಿಹೆಚ್ಚು ವೇಗವಾಗಿ ಏಡ್ಸ್ ಕಾಯಿಲೆಯನ್ನು ಹರಡುವುದರಲ್ಲಿ ಇಲ್ಲಿನ ಕಾರ್ಮಿಕರು ಲಾರಿ ಚಾಲಕರ ಜೊತೆ ಸ್ವರ್ಧೆಗೆ ಇಳಿದವರಂತೆ ಕಾಣುತ್ತಾರೆ. ತಿಂಗಳುಗಟ್ಟಲೆ ತಮ್ಮ ಸಂಸಾರದಿಂದ ದೂರವಿದದ್ದು. ದಿನವಿಡಿ ಮೈ ಮುರಿಯುವಂತೆ ದುಡಿಯುವ ಇವರಿಗೆ ಏಕೈಕ ಮನರಂಜನೆಯೆಂದರೆ, ಅಗ್ಗದ ಸೆಕ್ಸ್ ಮತ್ತು ತಂಬಾಕು. ( ಗುಜರಾತ್ ನಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿದೆ) ತಮಗೆ ಅರಿವಿಲ್ಲದೆ ಅಂಟಿಸಿಕೊಂಡ ಈ ಏಡ್ಸ್ ಕಾಯಿಲೆಯನ್ನು ತಮ್ಮ ಪತ್ನಿಯರಿಗೂ ಅಂಟಿಸಿ, ತಾವು ಯಾವ ಕಾಯಿಲೆಯಿಂದ ನರಳುತ್ತಿದ್ದವೆ? ಅಥವಾ ಸಾಯುತ್ತಿದ್ದೆವೆ? ಎಂಬುದನ್ನು ತಿಳಿಯಲಾರದ ನತದೃಷ್ಟರು ಇವರು.
ಇದು ಕಾರ್ಮಿಕರ ನೋವಿನ ಕಥನವಾದರೆ, ಅಲ್ಲಿನ ಸಮುದ್ರ ತಿರದ ಪರಿಸರದ ಕಥನ ತೀರಾ ಶೋಚನೀಯವಾಗಿದೆ,ಅಳಂಗ್  ಕಡಲ ತೀರದ ಉತ್ತರದಿಂದ ದಕ್ಷಿಣ ಭಾಗದ 50 ಕಿಲೋಮೀಟರ್ ಉದ್ದ ಹಾಗೂ ಸಮುದ್ರದ ನೀರಿನೊಳಗೆ 20 ಕಿಲೋಮಿಟರ್ ಉದ್ದದವರೆಗೆ  ನೀರು ಮತ್ತು ಕಡಲ ತೀರ ತೈಲ ಹಾಗೂ ರಸಾಯನಿಕ ಟ್ಯಾಂಕರ್ ಗಳ ಹಡಗುಗಳನ್ನು ಒಡೆದ ಪರಿಣಾಮ ಕಪ್ಪಾಗಿದೆ. ನೀರಿನಲ್ಲಿ ತೈಲ ಮತ್ತು ಗ್ರೀಸ್ ಜಿಡ್ಡು ತೇಲುತ್ತಿದೆ. ಇದರಿಂದಾಗಿ ಇಲ್ಲಿ ಯಾವ ಸಮುದ್ರ ಜೀವಿಗಳಿಗೂ ಉಳಿಗಾಲವಿಲ್ಲದಂತಾಗಿದೆ.
ಇಲ್ಲಿ ಒಡೆದು ಹಾಕಿದ ಹಡಗಿನ ಕಬ್ಬಿಣದ ಭಾಗಗಳು, ಮೋಟಾರ್ ಸೇರಿದಂತೆ ಕೆಲವು ಭಾಗಗಳು ಮರು ಉಪಯೋಗಕ್ಕೆ ಮಾರುಕಟ್ಟೆಗೆ ಸಾಗಲ್ಪಡುತ್ತವೆ. ತೀರಾ ತುಕ್ಕು ಹಿಡಿದ ಪ್ಲಾಸ್ಟಿಕ್ ಮತ್ತು ಕಬ್ಭಿಣದಂತ ವಸ್ತುಗಳು ಮಾತ್ರ ಮರುಬಳಕೆಯ ಕಚ್ಚಾವಸ್ತುಗಳಾಗಿ ಕಾರ್ಖಾನೆಗೆ ಸಾಗಿಸಲ್ಪಡುತ್ತವೆ.
ಅಳಂಗ್ ಬಂದರು ಜಗತ್ತಿನ ಅತಿದೊಡ್ಡ ಹಡಗುಗಳನ್ನು ಒಡೆಯುವ ಕೇಂದ್ರವಾಗಿದೆ, (ಚಿತ್ತಗಾಂಗ್ ಎರಡನೇಯದು) ಇಲ್ಲಿ ಹಡಗುಗಳನ್ನು ಒಡೆಯುವ ಮುನ್ನ ಪರಿಸರಕ್ಕೆ ಸಂಬಂಧ ಪಟ್ಟಂತೆ, ಭಾರತದ ಅರಣ್ಯ ಮತ್ತು ಪರಿಸರ ಇಲಾಖೆಯ ಕೆಲವು ನಿಯಾಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಲಾಗಿದೆ. ವಿದೇಶಗಳಿಂದ ಭಾರತಕ್ಕೆ ಬರುವ ಹಡಗುಗಳು ಮೊದಲು ಪರಿಸರ ಇಲಾಖೆಯ ಅನುಮತಿ ಪಡೆಯಬೇಕು. ಆದರೆ, ಅಮೇರಿಕಾದಂತಹ ದೊಡ್ಡಣ್ಣ ಭಾರತದ ನಿಯಾಮಾವಳಿಗಳನ್ನು ಗಾಳಿಗೆ ತೂರಿದ ದಾಖಲೆಗಳಿವೆ.
1997ರ ಆಗಸ್ಟ್ 5 ರಂದು ಭಾರತದಲ್ಲಿರುವ ಅಮೇರಿಕಾ ರಾಯಭಾರಿ ಎರಡು ಅಪಾಯಕಾರಿ ರಸಾಯನಿಕ ವಸ್ತುಗಳನ್ನು ಸಾಗಿಸುತ್ತಿದ್ದ ಹಡಗುಗಳನ್ನು ಒಡೆದು ಹಾಕಲು, ಭಾರತದ ಪ್ರವೇಶಕ್ಕೆ ಅನುಮತಿ ಕೋರಿದ್ದರು. ಭಾರತದ ಪರಿಸರ ಇಲಾಖೆ ಅನುಮತಿ ನಿರಾಕರಿಸಿತ್ತು. ಆದರೆ, ಸೆಪ್ಟಂಬರ್ ತಿಂಗಳಿನಲ್ಲಿ ಈ ಎರಡು ಹಡಗುಗಳು ಅಳಂಗ್ ಬಂದರಿನಲ್ಲಿ ಲಂಗರು ಹಾಕಿದ್ದವು. 8 ಸಾವಿರ ಮೆಟ್ರಿಕ್ ಟನ್ ತೂಕದ ಓವರ್ ಸೀಸ್ ವೆಲ್ದೆಜ್ ಮತ್ತು 15 ಸಾವಿರದ 700 ಮೆಟ್ರಿಕ್ ಟನ್ ತೂಕದ ಕಿಟ್ಟನಿಂಗ್ ಎಂಬ ಈ ಹಡಗುಗಳ ಬಗ್ಗೆ ಮಾದ್ಯಮದಲ್ಲಿ ವರದಿಯಾಗಿ, ಆನಂತರ ಲೊಕಸಭೆಯಲ್ಲಿ ಪ್ರಸ್ತಾಪವಾದ ಮೇಲೆ  ತನಿಖೆ ನಡೆಸಲಾಯಿತು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದ ಫಲವಾಗಿ 2006 ರಲ್ಲಿ ಕೇಂದ್ರ ಸರ್ಕಾರ, ಪರಿಸರ ಇಲಾಖೆಯ ಕಾರ್ಯದರ್ಶಿ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಅಳಂಗ್ ಬಂದರಿನ ಪರಿಸರ ರಕ್ಷಣೆ ಬಗ್ಗೆ ಮತ್ತು ಅಲ್ಲಿನ ಕಾರ್ಮಿಕರ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಿದ ಸಮಿತಿ, ಏಳು ಶಿಫಾರಸ್ಸುಗಳನ್ನು  ಜಾರಿಗೆ ತರಲು ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಹಲಾವಾರು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಸಧ್ಯಕ್ಕೆ ಇವೆಲ್ಲವೂ ಕಾಗದದ ಮೇಲೆ ಮಾತ್ರ ಜಾರಿಯಲ್ಲಿವೆ. ಸ್ಥಳಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ನೀಡಲಾಗುವ ಲಂಚದ ಆಮೀಷದ ಮೂಲಕ ಪರಿಸಕ್ಕೆ ಎರವಾಗುವ ಎಲ್ಲಾ ಕಾರ್ಯಗಳು ಅಳಂಗ್ ಬಂದರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿವೆ.
ಇತ್ತೀಚೆಗೆ ಇಂಗ್ಲೆಂಡ್ನ ಬ್ಲೂ ಲೇಡಿ ಮತ್ತು ಪ್ರಾನ್ಸ್ ನ ಕ್ಲೆಮೆನ್ಸಿ ಎಂಬ ಎರಡು ಯುದ್ದ ನೌಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ, ಭಾರತದಲ್ಲಿ ಎಂತಹಾ ಗಂಭೀರ ವಿಷಯಗಳಾದರೂ ಸರಿ. ಅವುಗಳಿಗೆ ಒಂದು ಆಯೋಗ ಅಥವಾ ಸಮಿತಿ ರಚಿಸಿ, ಅವುಗಳ ವರದಿಯನ್ನು  ಅಧಿಕಾರಸ್ತರು ತಮ್ಮ ಅಂಡುಗಳ ಅಡಿ ಹಾಕಿ ಕುಳಿತರೆ, ಕೆಲಸ ಮುಗಿಯುತ್ತದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಸೋಮವಾರ, ಮೇ 6, 2013

ಪಶ್ಚಿಮಘಟ್ಟದ ಕಥೆ-ವ್ಯಥೆ-3 ಎರಡು ಬಿನ್ನ ವರದಿಗಳು


                 ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳ ಕುರಿತ ಒಂದು ನೋಟ
ಪಶ್ಚಿಮಘಟ್ಟದ ಜೀವಜಾಲದ ಸುರಕ್ಷತೆ ಕುರಿತಂತೆ ಎರಡು ವರದಿಗಳು ಈಗ ನಮ್ಮ ಮುಂದಿವೆ. ಇವುಗಳಲ್ಲಿ ಖ್ಯಾತ ಪರಿಸರ ತಜ್ಞ ಪ್ರೊ. ಮಾದವಗಾಡ್ಗೀಳ್ ನೇತೃತ್ವದ ತಜ್ಞರ ಸಮಿತಿ ಸಮಿತಿ ನೀಡಿದ್ದ ವರದಿ ಮೊದಲನೇಯದಾದರೆ, ಇನ್ನೊಂದು, ಬಾಹ್ಯಾಕಾಶ ವಿಜ್ಞಾನಿ ಕೆ.ಕಸ್ತೂರಿ ರಂಗನ್ ನೇತೃತವದ ತಜ್ಞರ ಸಮಿತಿ ವರದಿ.  ಇಬ್ಬರೂ ಭಾರತದ ಪ್ರಖ್ಯಾತ ಮೇಧಾವಿಗಳು ಮತ್ತು ವಿಜ್ಞಾನಿಗಳು. ಇದರಲ್ಲಿ ಎರಡು ಮಾತಿಲ್ಲ. ಅವರದೇ ಆದ ಕ್ಷೇತ್ರಗಳಲ್ಲಿ ಅದ್ವಿತೀಯರು ಕೂಡ.
2011 ರಲ್ಲಿ ಮಾದವ ಗಾಡ್ಗೀಳ್ ನೇತೃತ್ವದ 13 ತಜ್ಞರ ತಂಡ,  ಸತತ 18 ತಿಂಗಳುಗಳ ಕಾಲ ಪಶ್ಚಿಮಘಟ್ಟದ ಉದ್ದಕ್ಕೂ ಓಡಾಡಿ, ಎಂಟು ಬಾರಿ ಐದು ರಾಜ್ಯಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ನಲವತ್ತು ಬಾರಿ ಪಶ್ಚಿಮಘಟ್ಟದ ಉಳುವಿಗಾಗಿ ಹೋರಾಟ ನಡೆಸುತ್ತಿರುವ ಐದು ರಾಜ್ಯಗಳ (ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು) ನೂರಕ್ಕು ಹೆಚ್ಚು ಸ್ವಯಂ ಸೇವಾ ಸಂಘಟನೆಗಳ ಜೊತೆ ಸಂವಾದ ನಡೆಸಿ, ಹದಿನಾಲ್ಕು ಬಾರಿ ಪಶ್ಚಿಮ ಘಟ್ಟದಲ್ಲಿ ಕ್ಷೇತ್ರ ಕಾರ್ಯ ನಡೆಸಿ  ತಯಾರಿಸಿದ ವರದಿಯಾಗಿತ್ತು.

 ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಖಾತೆಗೆ ಈ ತಜ್ಞರ ಕೂಲಂಕುಷವಾದ, ನಿಖರವಾದ ಹಾಗೂ ಪಶ್ಚಿಮ ಘಟ್ಟದ ಸ್ಥಿತಿ ಗತಿಗೆ ತೀರಾ ಹತ್ತಿರವಾಗಿದ್ದ ಈ ವರದಿಯನ್ನು ಜೀರ್ಣಿಸಿಕೊಳ್ಳಿಸುವುದು ಕಷ್ಟವಾಯಿತು. ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಜೈರಾಂ ರಮೇಶ್ ಒಬ್ಬರನ್ನು ಹೊರತು ಪಡಿಸಿ, ಉಳಿದ ಸಚಿವರಿಂದ ವರದಿಗೆ ವಿರೋಧ ವ್ಯಕ್ತವಾಗಿತ್ತು. ಏಕೆಂದರೆ, ಪಶ್ಚಿಮಘಟ್ಟಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಅನೇಕ ಗಣಿಗಾರಿಕೆಗಳು, ಉದ್ದಿಮೆಗಳು, ರಿಸಾರ್ಟ್ ಗಳು ಮತ್ತು ಪ್ರವಾಸೋದ್ಯಮ ನೆಪದಲ್ಲಿ ಸೃಷ್ಟಿಯಾಗಿರುವ ದ್ವೀಪ ಮತ್ತು ಗಿರಿಧಾಮಗಳಲ್ಲಿ ಅನೇಕ ಕೇಂದ್ರ ಸಚಿವರ ಕುಟುಂಬದ ಸದಸ್ಯರುಗಳ ಬಂಡವಾಳ ವಿನಿಯೋಗವಾಗಿತ್ತು. ಇದಕ್ಕಾಗಿ ಪರಿಸರ ಇಲಾಖೆಯ ಅನೇಕ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು. ಇದಕ್ಕೊಂದು ಉದಾಹರಣೆಯೆಂದರೆ, ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿ ಸುಪ್ರೀ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಪೂನಾ ಸಮೀಪದ ಲಾವಾಸ ದ್ವೀಪದ ನಿರ್ಮಾಣ ಕಂಪನಿಯಲ್ಲಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಪುತ್ರಿ ಸುಪ್ರಿಯಾ ಕಾಳೆ ಇವರ ಹೆಸರಿನಲ್ಲಿ ಶೇರು ಬಂಡವಾಳವಿದೆ. ಇದು ಪಶ್ಚಿಮಘಟ್ಟದ ಅತಿ ಸೂಕ್ಷ್ಮ ವಲಯದಲ್ಲಿ ಲಾವಸ ಕಂಪನಿಗೆ  12.500 ಎಕರೆ ಪ್ರದೇಶವನ್ನು ಮಹಾರಾಷ್ರ ಸರ್ಕಾರದ ಪರವಾಗಿ, ಎನ್.ಸಿ.ಪಿ. ಸಚಿವರು ಉಡೂಗರೆಯಾಗಿ ನೀಡಿದ ಫಲವಾಗಿ, ಶರದ್ ಪವಾರ್ ಕುಟುಂಬಕ್ಕೆ  ಪುಕ್ಕಟೆಯಾಗಿ ಸಿಕ್ಕಿದ ಬಂಡವಾಳ ಇದಾಗಿದೆ.

ಭಾರತದ ಪರಿಸರ ರಕ್ಷಣೆ ಕುರಿತ ಕಾನೂನಿನ ಪರಿಕಲ್ಪನೆಗೆ  1970ರ ದಶಕದಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಂತರ ಮಾಧವ ಗಾಡ್ಗೀಳ್ ನೀಡಿದ ಶಿಫಾರಸ್ಸು ಮತ್ತು ವರದಿಯನ್ನು ಆಧರಿಸಿ 1986 ರಲ್ಲಿ ಪರಿಸರ ರಕ್ಷಣೆ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತರಲಾಯಿತು. ಈವರೆಗೆ ಇದು ಕೇವಲ ತೋರಿಕೆಯ ಕಾನೂನು ಎಂಬುದಕ್ಕೆ, ಲಾವಸ  ದ್ವೀಪನಗರ  ಎಂಬ ಉಳ್ಳವರ ವಿಲಾಸದ ಮೋಜಿನ ತಾಣ ನಮ್ಮೆದುರು ಸಾಕ್ಷಿಯಾಗಿದೆ.
ಪ್ರೊ. ಮಾಧವ ಗಾಡ್ಗಿಳ್ ಅವರ ಪರಿಸರ ಮತ್ತು ಜೀವ ವೈವಧ್ಯತೆಗಳ ಕಾಳಜಿಯನ್ನು ಮತ್ತು ಅವರ ಬದ್ಧತೆಯನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ. ಅವರು ತಮ್ಮ ಸುಧೀರ್ಘ ಅರ್ಧಶತಮಾನವನ್ನು ಪಶ್ಚಿಮ ಘಟ್ಟದ ಜೀವಜಾಲದ ಅಧ್ಯಯನ ಮತ್ತು ರಕ್ಷಣೆಗಾಗಿ ತಮ್ಮ ಜೀವವನ್ನು ಸೆವೆಸಿದ್ದಾರೆ. ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿ ಪುಟದಲ್ಲೂ, ಪ್ರತಿ ಅಕ್ಷರದಲ್ಲೂ  ಪಶ್ಚಿಮಘಟ್ಟದ ಗರಿಕೆ ಹುಲ್ಲಿನಿಂದ ಹಿಡಿದು ಎಲ್ಲಾ ಜೀವರಾಶಿ ಮತ್ತು ಸಸ್ಯರಾಶಿಯ ಮೇಲಿನ ಅವರ ಪ್ರೀತಿ ವ್ಯಕ್ತವಾಗುತ್ತದೆ. ಅವರು ತಮ್ಮ ಜೀವಿತದ ಉದ್ದಕ್ಕೂ ಪಶ್ಚಿಮಘಟ್ಟದ ಹಸಿರನ್ನು, ನದಿಗಳನ್ನು, ಕಡಲ ಕಿನಾರೆಯನ್ನು,ದುಮ್ಮುಕ್ಕುವ ಜಲಪಾತಗಳನ್ನು ,ಪಕ್ಷಿ ಮತ್ತು ಪ್ರಾಣಿ ಸಂಕುಲವನ್ನು ತಮ್ಮ ಉಸಿರಿನಂತೆ ಕಾಪಾಡಿಕೊಂಡವರು. ಅವರಿಗೆ ಪಶ್ಚಿಮ ಘಟ್ಟವೆಂದರೆ, ಒಂದು  ಧ್ಯಾನ ಮತ್ತು ಅದೊಂದು  ವ್ಯಸನ ಎಂಬಂತಾಗಿದೆ. ಅವರ ಈ ಕಾಳಜಿಯನ್ನು ಅವರ ವರದಿಯಲ್ಲಿ ಕಾಣಬಹುದು. ಅವರ ಪ್ರಕೃತಿ  ಮೇಲಿನ ಈ ಪ್ರೀತಿಯಿಂದಾಗಿ ಗಾಡ್ಗೀಳ್ ರವರ ವರದಿ, ನಮ್ಮನ್ನಾಳುವ ಜನಪ್ರತಿನಿಧಿಗಳಿಗೆ ನುಂಗಲಾರದ, ಉಗುಳಲಾರದ ಬಿಸಿತುಪ್ಪವಾಯಿತು. ಈ ಕಾರಣಕ್ಕಾಗಿ ಪ್ರತಿ ರಾಜ್ಯದಲ್ಲಿಯೂ ಕೂಡ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ ನೇರಕ್ಕೆ ವರದಿಯ ಕೆಲವು ಆಯ್ದ ಭಾಗಗಳನ್ನು ಸ್ಥಳಿಯ ಭಾಷೆಗೆ ಅನುವಾದಿಸಿಕೊಂಡು ವರದಿಯ ಬಗ್ಗೆ ತಪ್ಪು ಕಲ್ಪನೆಗಳನ್ನು ಸೃಷ್ಟಿ ಮಾಡಿದರು. ಇವರ ಹಿಂದೆ ಬಿಲ್ಡರ್ ಗಳು ಮತ್ತು ರಿಯಲ್ ಎಸ್ಟೇಟ್ ಏಜೆಂಟರುಗಳು, ಕೈಗಾರಿಕೋದ್ಯಮಿಗಳು, ಹಾಗೂ ಗಣಿ ಮಾಫಿಯ ಹೀಗೆ ಎಲ್ಲಾ ದುಷ್ಟಶಕ್ತಿಗಳು ಕೈ ಜೋಡಿಸಿದ್ದವು.
ಗಾಡ್ಗೀಳ್ ನೇತೃತ್ವದ ತಜ್ಞರ ವರದಿ ಪಶ್ಚಿಮಘಟ್ಟದ ಉದ್ದ, ಅಗಲ, ವಿಸ್ತೀರ್ಣ ಕುರಿತಂತೆ ಕರಾರುವಕ್ಕಾದ ಅಂಶಗಳನ್ನು ಒಳಗೊಂಡಿದೆ. ಗುಜರಾತ್- ಮಹಾರಾಷ್ಟ್ರದ ತಾಪಿ ಕಣಿವೆಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ 1490 ಕಿಲೋಮೀಟರ್ ಉದ್ದವಿದೆ ಎಂದು ತಿಳಿಸಿರುವ ವರದಿ, ಕೆಲವೆಡೆ 210 ಕಿ.ಮಿ.ಅಗಲವಿರುವ ಪಶ್ಚಿಘಟ್ಟ, ಮತ್ತೆ ಕೆಲವು ಸ್ಥಳಗಳಲ್ಲಿ ಕೇವಲ 48 ಕಿ.ಮಿ. ಅಗಲವಿರುವ ಅಂಶವನ್ನು ಸಹ ಗುರುತಿಸಲಾಗಿದೆ. ಈ ವರದಿಯ ಮತ್ತೊಂದು ವೈಶಿಷ್ಟವೆಂದರೆ, ಮಹಾರಾಷ್ಟ್ರದ ಸಿಂಧು ದುರ್ಗದ ಬಳಿಯ ಕಡಲತೀರವನ್ನು ಸಹ ಸೂಕ್ಷ್ಮ ಜೀವಿಗಳ ತಾಣವೆಂದು ಗುರುತಿಸಿ, ಪಶ್ಚಿಮಘಟ್ಟಕ್ಕೆ ಸೇರಿಸಲಾಗಿದೆ.
ವರದಿಯಲ್ಲಿ ಎರಡು ಭಾಗಗಳಿದ್ದು, ಪಶ್ಚಿಮ ಘಟ್ಟದಲ್ಲಿ ಆಗಿರುವ ಅನಾಹುತ ಹಾಗೂ ಕೈಗೊಳ್ಳಬೇಕಾದ ಕಠಿಣ ನಿಲುವುಗಳ ಬಗ್ಗೆ ಚರ್ಚಿಸಲಾಗಿದೆ.
ವರದಿಯಲ್ಲಿ ಪಶ್ಚಿಮ ಘಟ್ಟದ ಪ್ರದೇಶವನ್ನು ಅತಿ ಸೂಕ್ಷ್ಮ ಜೀವಿಗಳ ವಲಯ, ಸೂಕ್ಷ್ಮ ಜೀವಿಗಳ ವಲಯ ಮತ್ತು ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯ ಎಂದು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ಕರ್ನಾಟಕದ 11 ಜಿಲ್ಲೆಗಳ 26 ಸ್ಥಳಗಳನ್ನು ಅತಿ ಸೂಕ್ಷ್ಮ ಮತ್ತು 5 ಸ್ಥಳಗಳನ್ನು ಸೂಕ್ಷ್ಮ ಹಾಗೂ 12 ತಾಣಗಳನ್ನು ಸಾಮಾನ್ಯ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿದೆ.
ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತ 25 ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿ , ಕುಲಾಂತರಿ ತಳಿಗಳ ಬೆಳೆ, ಕೈಗಾರಿಕೆ, ಪ್ರವಾಸೋದ್ಯಮ, ಗಣಿಗಾರಿಕೆ ಸೇರಿದಂತೆ ಮಾನವ ನಿರ್ಮಿತ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಸೂಕ್ಷ್ಮ ವಲಯದ ತಾಣಗಳ ಸುತ್ತ ಮುತ್ತ, ಈಗಾಗಲೇ ಪರವಾನಗಿ ನೀಡಿರುವ ಎಲ್ಲಾ ವಿಧವಾದ ಚಟುವಟಿಕೆಗಳ ಪರವಾನಗಿಯನ್ನು ಮತ್ತೇ ನವೀಕರಿಸಬಾರದು ಎಂದು ತಿಳಿಸಿದೆ.
ಸಾಮಾನ್ಯ ಸೂಕ್ಷ್ಮ ಜೀವಿಗಳ ವಲಯದಲ್ಲಿ ತೀವ್ರ ನಿಗಾ ಇಡುವುದರ ಮೂಲಕ ಆರ್ಥಿಕ ಚಟುವಟಿಕೆಗೆ ಅವಕಾಶ ನೀಡಲು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದ್ದರೂ, ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನು ಖಾಸಾಗಿ ಕಂಪನಿಗಳಿಗೆ ಅಥವಾ ವ್ಯಕ್ತಿಗಳಿಗೆ ಹಸ್ತಾಂತರಿಸಬಾರದು ಎಂದು ಹೇಳಿದೆ. ಅಲ್ಲದೆ, ಗಿರಿಧಾಮಗಳ ಸೃಷ್ಟಿಗೆ ಅಥವಾ ಅಭಿವೃದ್ಧಿಗೆ ಅವಕಾಶ ನೀಡದೆ, ಪಶ್ಚಿಮ ಘಟ್ಟದ ಎಲ್ಲಾ ಸ್ಥಳಗಳಲ್ಲಿ ಪ್ಲಾಸ್ಷಿಕ್ ಚೀಲಗಳ ಬಳಕೆಗೆ ನಿಷೇಧ ಹೇರಬೇಕೆಂದು ತಿಳಿಸಲಾಗಿದೆ. ಇಂತಹ ಕಠಿಣವಾದ ಷರತ್ತುಗಳೇ ಅಂತಿಮವಾಗಿ  ಮಾಧವ ಗಾಡ್ಗೀಳ್ ವರದಿಯ ಮೇಲೆ  ಅಧಿಕಾರಸ್ಥರು ಕೆಂಗೆಣ್ಣು ಬೀರಲು ಕಾರಣವಾಯಿತು.
ಈ ಕಾರಣಕ್ಕಾಗಿಯೇ ಗಾಡ್ಗೀಳ್ ನೇತೃತ್ವದ ತಜ್ಞರ ವರದಿಯಲ್ಲಿ ಪಶ್ಚಿಮಘ್ಟದ ರೈತರ ಬಗ್ಗೆ, ಅಲ್ಲಿನ ಬುಡಕಟ್ಟುನಿವಾಸಿಗಳ ಬಗ್ಗೆ ಪ್ರಸ್ತಾಪವಿಲ್ಲ ಎಂದು ಗುಲ್ಲೆಬ್ಬಿಸಲಾಯಿತು. ಈ ರೀತಿ ಅಪಪ್ರಚಾರ ನಡೆಸಿದವರು ವರದಿಯನ್ನು ಓದಿಲ್ಲವೆಂಬುದು ಅವರ ವ್ಯವಸ್ಥಿತ ಪ್ರಚಾರದಲ್ಲಿ ಅರ್ಥವಾಗಿಬಿಡುತ್ತದೆ. ಗಾಡ್ಗೀಳ್ ಮತ್ತು ಅವರ ಸಹ ಸದಸ್ಯರು ( ಈ ತಂಡದಲ್ಲಿ ವಿಜ್ಞಾನಿ, ಹಾಗೂ ಕನ್ನಡದ ಲೇಖಕ ಡಾ.ಕೆ.ಎನ್. ಗಣೇಶಯ್ಯ ಕೂಡ ಇದ್ದಾರೆ)ವರದಿಯ ಪುಟ 15 ರಲ್ಲಿ ಬುಡಕಟ್ಟು ಜನಾಂಗದ ಸುಸ್ಥಿರ ಅಭಿವೃದ್ಧಿಗೆ ಏನೆಲ್ಲಾ ಕಾರ್ಯಕ್ರಮ ರೂಪಿಸಬಹುದು ಎಂಬುದಕ್ಕೆ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಬದುಕನ್ನು ಉದಾಹರಣೆಯಾಗಿ ಕೊಡುತ್ತಾರೆ. ಒಂದು ಕಾಲದಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಸೋಲಿಗರು ಈಗ ಜೇನು ಕೃಷಿಯಲ್ಲಿ ತೊಡಗಿಕೊಂಡಿರುವುದು, ತಾವೇ ಸಂಸ್ಕರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದನ್ನು ವಿವರಿಸಿದ್ದಾರೆ. ಬೇಸಿಗೆಯ ಕಾಲದಲ್ಲಿ ಕಾಡ್ಗಿಚ್ಚಿಗೆ ಕಾರಣವಾಗುತ್ತಿದ್ದ ಲಂಟಾನ ಗಿಡಗಳನ್ನು ತೆರವುಗೊಳಿಸಿ, ಕಾಡ್ಗಿಚ್ಚನ್ನು ನಿಯಂತ್ರಿಸಿರುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ಸೋಲಿಗರ ಅಭಿವೃದ್ಧಿಯ ಹಿಂದೆ ಇರುವ ಡಾ.ಸುದರ್ಶನ್  ಅವರ ವಿವೇಕಾನಂದ ಗಿರಿಜನ ಅಭಿವೃದ್ಧಿ ಕೇಂದ್ರ ಕುರಿತು ಪ್ರಶಂಸಿಸಲಾಗಿದೆ.

ಅದೇ ರೀತಿ ವರದಿಯ ಎರಡನೇ ಭಾಗದ ಪುಟ 13 ರಲ್ಲಿ ಮಹಾಬಲೇಶ್ವರ ಗಿರಿಧಾಮದ ತಪ್ಪಲಲ್ಲಿ ಇರುವ ರೈತರ ಕುರಿತು ಪ್ರಸ್ತಾಪಿಸಲಾಗಿದೆ. ಕಳೆದ 60 ವರ್ಷಗಳಿಂದ ಕೇವಲ ತಲಾ ಎರಡು ಎಕರೆ ಭೂಮಿಯಲ್ಲಿ ಜೀವಿಸುತ್ತಿರುವ ರೈತರು ಇತ್ತೀಚೆಗಿನ ಪ್ರವಾಸೋದ್ಯಮದ ಚಟುವಟಿಕೆಯಿಮದಾಗಿ ಬಸವಳಿದಿರುವುದನ್ನು ವಿವರವಾಗಿ ದಾಖಲಿಸಿದ್ದಾರೆ.ಅಲ್ಲಿನ  ಕೃಷಿ ಭೂಮಿ ಉದ್ಯಮಿಗಳ ಪಾಲಾಗುತ್ತಿರುವ ಹಿಂದೆ ಸರ್ಕಾರಿ ಅಧಿಕಾರಿಗಳ ಪಾಲುದಾರಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ, ಸದಾಶಿವಗಡ, ಸಾವಂತವಾಡಿ, ಸಿಂಧೂದುರ್ಗ, ರತ್ನಗಿರಿ ಜಿಲ್ಲೆಗಳ ಪ್ರದೇಶದಲ್ಲಿ ರೈತರಿಗೆ ಆಧಾರವಾಗಿದ್ದ ಜಲಮೂಲ ತಾಣಗಳು ಅದಿರಿನಿ ದೂಳಿನಿಂದ ರಾಡಿಯಾಗಿರುವುದನ್ನು ಪ್ರಸ್ತಾಪಿಸಿದ್ದಾರೆ. ವರದಿಯ ಸತ್ಯಾ ಸತ್ಯತೆಯನ್ನು ಅರಿಯಲು ನಾವು ಒಮ್ಮೆ ಗೋವಾದಿಂದ ಮುಂಬೈಗೆ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಂತವಾಡಿಯಿಂದ ಕರಾಡ್ ವರೆಗೆ ಪ್ರಯಾಣಿಸಿದರೆ ಸಾಕು ಮನದಟ್ಟಾಗುತ್ತದೆ. ಗಣಿಗಾರಿಕೆಯ ಫಲವಾಗಿ ಇಲ್ಲಿ ಹರಿಯುತ್ತಿರುವುದು ನೀರಿನ ಹೊಳೆಯೊ? ಅಥವಾ ನೆತ್ತರಿನ ಹೊಳೆಯೊ ? ಎಂಬ ಗೊಂದಲಕ್ಕೆ ಬೀಳುವಷ್ಟರ ಮಟ್ಟಿಗೆ  ನದಿಗಳ ನೀರು ಕಲ್ಮಶಗೊಂಡು ಕೆಂಪು ಬಣ್ಣದ ರಾಡಿಯಾಗಿ ಹರಿಯುತ್ತಿದೆ.
ಇನ್ನು ಗಾಡ್ಗೀಳ್ ರ ವರದಿಗೆ ಪ್ರತಿಯಾಗಿ ಕೆ.ಕಸ್ತೂರಿ ರಂಗನ್ ನೇತೃತ್ವದ ತಜ್ಞರ ವರದಿಯಲ್ಲಿ ಅಂತಹ ಭಿನ್ನವಾದ ಅಂಶಗಳಿಲ್ಲ. ಗಾಡ್ಗೀಳರ ವರದಿಯನ್ನು ಕಸ್ತೂರಿ ರಂಗನ್ ವರದಿ ಬಹುತೇಕ ಅನುಮೋದಿಸುತ್ತದೆ. ಎರಡು ವಿಷಯಗಳಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸುತ್ತದೆ. ಗಾಡ್ಗೀಳ್ ಅತಿ ಸೂಕ್ಷ್ಮ ಜೀವಿಗಳ ತಾಣದ ಸುತ್ತಾ 25 ಸಾವಿರ ಚದುರ ಕಿ.ಮಿ. ಪ್ರದೇಶದ ಸುತ್ತ ಮುತ್ತ ಚಟುವಟಿಕೆಗಳಿಗೆ ನಿಷೇಧ ಹೇರಲು ಶಿಪಾರಸ್ಸು ಮಾಡಿದ್ದರು. ಆದರೆ, ಕಸ್ರೂರಿ ರಂಗನ್ ಈ ವ್ಯಾಪ್ತಿಯನ್ನು 10ರಿಂದ 13 ಸಾವಿರ ಚದುರ ಕಿ.ಮಿ.ಗೆ ಇಳಿಸಲು ಶಿಪಾರಸ್ಸು ಮಾಡಿದ್ದಾರೆ.

ಎರಡನೇಯದಾಗಿ ಒಂದು ಹಳ್ಳಿಯ ಪ್ರದೇಶ ಅತಿಸೂಕ್ಷ್ಮಜೀವಿಗಳ ವಲಯ ಎಂದು ಕಂಡು ಬಂದಲ್ಲಿ ಇಡೀ ತಾಲ್ಲೂಕನ್ನು ಸೂಕ್ಮ ಪ್ರದೇಶವೆಂದು ಗುರುತಿಸಲು ಗಾಡ್ಗೀಳ್ ಒತ್ತಾಯಿಸಿದ್ದರು. ಆದರೆ, ಕಸ್ತೂರಿ ರಂಗನ್ ಈ ನಿಯಮವನ್ನು ಸಡಿಲಿಸಿ, ಕೇವಲ ಗ್ರಾಮವನ್ನು ಒಂದು ಘಟಕವೆಂದು ಪರಿಗಣಿಸಿ ಉಳಿದ ಪ್ರದೇಶವನ್ನು ಮುಕ್ತಗೊಳಿಸಲು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ. ಕಸ್ತೂರಿ ರಂಗನ್ ಅವರ ಈ ನಿರ್ಣಯ ಅತ್ಯಂತ ಅಪಾಯಕಾರಿಯಾದುದು. ಹಳ್ಳಿಯನ್ನು ಹೊರತುಪಡಿಸಿ ಅದರ ಸುತ್ತಾ ಕೈಗಾರಿಕೆ ಚಟುವಟಿಕೆ ಆರಂಭವಾದರೆ, ಸೂಕ್ಷ್ಮ ಜೀವಿಗಳು ಉಳಿಯಬಲ್ಲವೆ? ಈ ಕಾರಣಕ್ಕಾಗಿ ಕಸ್ತೂರಿ ರಂಗನ್ ವರದಿ ಪರಿಸರ ತಜ್ಞರಲ್ಲಿ ಮತ್ತು ಪರಿಸರವಾದಿಗಳಲ್ಲಿ ಆತಂಕ ಹುಟ್ಟಿಸಿದೆ. ಉಪಗ್ರಹ ಚಿತ್ರಗಳ ಮೂಲಕ ಪಶ್ಚಿಮ ಘಟ್ಟದ ಪರಿಸ್ಥಿತಿಯನ್ನು ಅರಿಯಲು ಸಾಧ್ಯವೆ? ಇದು ಎಲ್ಲರ ಪ್ರಶ್ನೆ. ಕಸ್ತೂರಿ ರಂಗನ್ ರವರ ಈ ಶಿಫಾರಸ್ಸಿನಿಂದಾಗಿ ಎಲ್ಲಾ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಏಜೆಂಟರು ಪಶ್ಚಿಮಘಟ್ಟಕ್ಕೆ ಲಗ್ಗೆ ಇಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಸ್ಥಗಿತಗೊಂಡಿದ್ದ ಗುಂಡ್ಯ ಜಲವಿದ್ಯುತ್ ಯೋಜನೆಗೆ ಮರು ಜೀವ ಸಿಗಲಿದೆ. 113 ಹೆಕ್ಟೇರ್ ಅರಣ್ಯ ಹಾಗೂ 263 ಹೆಕ್ಟೇರ್ ಕಂದಾಯ ಭೂಮಿಯನ್ನು ನುಂಗುವ ಯೋಜನೆಗೆ ಗಾಡ್ಗೀಳ್ ವರದಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ 2010 ರ ಜೂನ್ ತಿಂಗಳಲ್ಲಿ ಅನುಮತಿಯನ್ನು ನಿರಾಕರಿಸಲಾಗಿತ್ತು.
ಒಟ್ಟಾರೆ, ಕಸ್ತೂರಿ ರಂಗನ್ ರವರ ವರದಿಯಲ್ಲಿ ಆಡಳಿತ ವ್ಯವಸ್ಥೆಯನ್ನು ಓಲೈಸುವ  ಅಂಶಗಳಿರುವುದನ್ನು ತಳ್ಳಿ ಹಾಕುವಂತಿಲ್ಲ. ಇಲ್ಲಿ ಎರಡು ವರದಿಗಳನ್ನು ತುಲನೆ ಮಾಡುವುದರ ಜೊತೆ ಜೊತೆಗೆ ನಮ್ಮ ನಮ್ಮ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಈ ನೆಲದ ಜಲದ  ಅಥವಾ ಪರಿಸರದ ರಕ್ಷಣೆಗೆ ಯಾವ ತಜ್ಞರ ವರದಿ ಅಥವಾ ಅಧ್ಯಯನದ ಅವಶ್ಯಕತೆ ಇಲ್ಲದ ಹಾಗೆ ನಾವು ಬದುಕುವ ಪರಿಸರ ಮತ್ತು ಜೀವ ಜಾಲವನ್ನು ರಕ್ಷಿಸಿಕೊಳ್ಳುವ ಸಾರ್ವಭೌಮ ಹಕ್ಕನ್ನು ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರೀಕನಿಗೂ ದಯಪಾಲಿಸಿದೆ. ಇದನ್ನು ಪರಿಣಾಮಕಾರಿಕಾಗಿ ಬಳಸಿದ ಕೇರಳದ ಜನತೆ ನಮಗೆ ಮಾದರಿಯಾಗಿದ್ದರೆ.
ಭಾರತ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಯ ಭಾಗಗಳು ಹಳ್ಳಿಗಳ ಗ್ರಾಮ ಪಂಚಾಯಿತಿ ಅಥವಾ ಗ್ರಾಮಸಭಾಗಳಂತಹ ಸ್ಥಳಿಯ ಸಂಸ್ಥೆಗಳಿಗೆ, ಸಂಪನ್ಮೂಲಗಳನ್ನು ಕ್ರೂಡೀಕರಿಸಿಕೊಳ್ಳುವ, ಆಸ್ತಿಗಳನ್ನು ರಕ್ಷಿಸಿಕೊಳ್ಳುವ, ಅಧಿಕಾರದ ಹಕ್ಕನ್ನು ನೀಡಿವೆ. ಈ ಹಕ್ಕನ್ನು ಬಳಸಿಕೊಂಡು, ಕೇರಳದ ಉತ್ತರ ಭಾಗದ ಪಟ್ಟುವಂ ಎಂಬ ಹಳ್ಳಿ ಗ್ರಾಮ ಪಂಚಾಯಿತಿ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ತನ್ನ ಜೈವಿಕ ಹಾಗೂ ಪಾಕೃತಿಕ ಸಂಪತ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ 1997ರಲ್ಲಿ ಈ ಕೆಳಗಿನಂತೆ ಐತಿಹಾಸಿಕ ನಿರ್ಣಯವೊಂದನ್ನು ತೆಗೆದುಕೊಂಡಿತು.
“ ಈ ಪಂಚಾಯಿತಿಯ ನಿವಾಸಿಗಳಾದ ನಾವು ಈ ಮೂಲಕ ಘೋಷಿಸುವುದೇನೆಂದರೆ, ನಮ್ಮ ಪಂಚಾಯಿತಿಯ ಭೌಗೂಳಿಕ ವ್ಯಾಪ್ತಿಯಲ್ಲಿ ಬರುವ,  ಜನತೆಗೆ ತಿಳಿದಿರುವ, ತಿಳಿಯದಿರುವ  ಅಥವಾ ಹೆಸರಿಸಿರುವ,  ಹೆಸರಿಸದಿರುವ  ಎಲ್ಲಾ ರೀತೀಯ ಜೀವ ಪ್ರಭೇಧಗಳು, ಸಸ್ಯ ಪ್ರಭೇಧಗಳು, ನೆಲ, ಜಲ, ಮತ್ತು ಪಾಕೃತಿಕ ಸಂಪತ್ತಿನ ಮೇಲೆ ಪಂಚಾಯಿತಿಯ ಪೂರ್ವ ಅನುಮತಿಯಿಲ್ಲದೆ, ಹಕ್ಕು ಸ್ಥಾಪಿಸುವ ಅಧಿಕಾರ ಈ ಜಗತ್ತಿನಲ್ಲಿ ಯಾರಿಗೂ ಇಲ್ಲ. ಮುಂದೆ ನಮ್ಮ ಗಮನಕ್ಕೆ ಭಾರದ ಹಾಗೆ ಸ್ಥಾಪಿಸುವ ಅಥವಾ ಸ್ಥಾಪಿಸಬಹುದಾದ ಅಧಿಕಾರಕ್ಕೆ ನಮ್ಮ ಸಮ್ಮತಿಯಿಲ್ಲ.. ಅಂತಹ ಹಕ್ಕುಗಳನ್ನು ನಾವು ಮಾನ್ಯತೆ ಮಾಡುವುದಿಲ್ಲ.”
ಈ ನಿರ್ಣಯದ ವಿರುದ್ಧ ತನ್ನ ತಂಪು ಪಾನೀಯ ಘಟಕಕ್ಕೆ ಕೊಳವೆ ಬಾವಿ ತೆಗೆಯಲು ನೀರಾಕರಿಸಿಕೊಂಡ ಕೋಕಕೋಲಾ ಸೇರಿದಂತೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಸುಪ್ರೀಂ ಕೋರ್ಟಿನ ಮೆಟ್ಟಿಲೇರಿ ಛೀಮಾರಿ ಕಾಕಿಸಿಕೊಂಡು ಬಂದಿವೆ. ಈಗ ಒರಿಸ್ಸಾದ ನಿಯಮಗಿರಿ ಪರ್ವತ ಶ್ರೇಣಿಯಲ್ಲಿ ಬಾಕ್ಷೈಟ್ ಅದಿರು ಗಣಿಗಾರಿಕೆಗೆ ಮುಂದಾಗಿದ್ದ  ಇಂಗ್ಲೆಂಡ್ ಮೂಲದ ವೇದಾಂತ ಕಂಪನಿಯನ್ನು ಅಲ್ಲಿನ ಜನ ಇಂತಹದ್ದೇ ನಿರ್ಣಯದ ಮೂಲಕ ಓಡಿಸಿದ್ದಾರೆ.
ಸರ್ಕಾರಗಳ ದ್ವಂದ್ವ ನೀತಿಯಿಂದ ಬೇಸತ್ತು ಹೋಗಿರುವ ಪರಿಸರ ತಜ್ಞ ಮಾಧವ ಗಾಡ್ಗೀಳರು ಈ ಅಸ್ತ್ರವನ್ನು ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ಸ್ಥಳಿಯ ಜನತೆಯ ಮೂಲಕ ಬಳಸಲು ಮುಂದಾಗಿದ್ದಾರೆ. ಈಗಾಗಲೇ ಗೋವಾ ರಾಜ್ಯದಲ್ಲಿ ಅನೇಕ ಗ್ರಾಮಪಂಚಾಯಿತಿಗಳು, ತಮ್ಮ ನೆಲ-ಜಲ ವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹದ್ದೇ ನಿರ್ಣಯ ಕೈಗೊಂಡಿದ್ದಾರೆ. ಜೊತೆಗೆ “ಗೋವಾ ವಿಷನ್ 2021” ಎಂಬ ಯೋಜನೆ ರೂಪಿಸಿದ್ದಾರೆ.ಎಂಬ  ಇಂತಹ ಪ್ರಜ್ಞೆ ಎಲ್ಲೆಡೆ ಆವರಿಸಿದಾಗ ಮಾತ್ರ ಪಶ್ಚಿಮ ಘಟ್ಟ ಉಳಿಯಬಲ್ಲದು.
                                           (ಮುಗಿಯಿತು)

ಶನಿವಾರ, ಮೇ 4, 2013

ಪಶ್ಚಿಮಘಟ್ಟದ ಕಥೆ-ವ್ಯಥೆ-2 ( ಕರ್ನಾಟಕದ ಕರಾಳ ಇತಿಹಾಸ)

ಅಭಿವೃದ್ದಿಯ ವಾಖ್ಯಾನಗಳು ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗಬಲ್ಲವು ಎಂಬುದಕ್ಕೆ ಏಷ್ಯಾ ಡೆವಲಪ್ ಮೆಂಟ್ ಬ್ಯಾಂಕಿನ  ಅಧ್ಯಕ್ಷ ತಕಿಹಿಕೊ ನಕಾವೊ ಅವರು, ಮೂರು ದಿನಗಳ ಹಿಂದೆ ನವದೆಹಲಿಯಲ್ಲಿ ಆಡಿದ ಮಾತುಗಳು ಇವು “ಏಷ್ಯಾದ ರಾಷ್ಟ್ರಗಳಲ್ಲಿ ಬಡತನದ ರೇಖೆಯ ಕೆಳಗೆ ಬದುಕುತ್ತಿರುವ ಸುಮಾರು 80 ಕೋಟಿ ಜನರ ಬಡತನದ ನಿವಾರಣೆಗೆ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವುದೊಂದೇ ದಾರಿ” ಇದು ಅವರ ಮನದಾಳದ ಮಾತು. ಅಂದರೆ, ರಾಷ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸುವುದು, ಬೃಹತ್ ಸೇತುವೆ, ಮತ್ತು ಬಂದರು, ಹಾಗು ರೈಲ್ವೆ ಮಾರ್ಗ ನಿರ್ಮಿಸುವುದರ ಮೂಲಕ ಬಡತನದ ನಿವಾರಣೆಗೆ ಹೊಸ ಸಾಧ್ಯತೆಯನ್ನು ಕಂಡುಕೊಂಡಿದ್ದಾರೆ. ಏಷ್ಯಾ ರಾಷ್ಟ್ರಗಳಿಗೆ ಒಳಚರಂಡಿ, ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ ಇವುಗಳಿಗೆ ಸಾಲ ನೀಡುವುದನ್ನು ವೃತ್ತಿಯಾಗಿಸಿಕೊಂಡ  ಬ್ಯಾಂಕೊಂದರ ಅಧ್ಯಕ್ಷನಿಂದ ಬಡತನ ಕುರಿತಂತೆ ಇನ್ನೆನು  ನಿರೀಕ್ಷಿಸಲು ಸಾದ್ಯ?

ಜನಸಾಮಾನ್ಯರಿಗೆ ನಿಲುಕಲಾರದ ಆರೋಗ್ಯ, ಶಿಕ್ಷಣ, ವಸತಿ, ಪೂರ್ಣಪ್ರಮಾಣದ ಉದ್ಯೋಗ ಮುಂತಾದ ಜನಕಲ್ಯಾಣ ಸೇವೆ, ಹಾಗೂ  ಕೈಗೆಟುಕದೆ, ಗಗನಕ್ಕೇರುತ್ತಿರು ಅಗತ್ಯ ವಸ್ತುಗಳ ಬೆಲೆ ಏರಿಕೆ ಇವುಗಳ ಬಗ್ಗೆ ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದ ಇಂತಹ ಮಾರವಾಡಿ ಬಡ್ಡಿ ವ್ಯಾಪರಸ್ಥರಿಂದಾಗಿಯೇ ಇಂದು  ಪಶ್ಚಿಮ ಘಟ್ಟದ ಸ್ಥಿತಿ ಅಧೋಗತಿಗೆ ನೂಕಲ್ಪಟ್ಟಿದೆ.
ಪಶ್ಚಿಮ ಘಟ್ಟ ಹರಡಿರುವ ಐದು ರಾಜ್ಯಗಳಲ್ಲಿ ಕೇರಳ ಮತ್ತು ತಮಿಳು ನಾಡನ್ನು ಹೊರತು ಪಡಿಸಿದರೆ, ಉಳಿದ ಮಹಾರಾಷ್ಟ್ರ, ಗೋವಾ,ಮತ್ತು ಕರ್ನಾಟಕ  ರಾಜ್ಯಗಳು ಅಭಿವೃದ್ಧಿಯ ನೆಪದಲ್ಲಿ ಪಶ್ಚಿಮಘಟ್ಟದ ಮೇಲೆ ನೇರ ದಾಳಿ ಇಟ್ಟಿವೆ.ಇದರಲ್ಲಿ ನಮ್ಮ ಕರ್ನಾಟಕದ ಸ್ಥಾನ ಮೂರನೇಯದು. ಬೆಳಗಾವಿ ಜಲ್ಲೆಯ ಖಾನಾಪುರ ಅರಣ್ಯ ಪ್ರದೇಶದಲ್ಲಿ ಮತ್ತು ಉತ್ತರ ಕನ್ನಡದ ಗಿರಿಶ್ರೇಣಿ ಮತ್ತು ಕಣಿವೆ ಪ್ರದೇಶದಲ್ಲಿದ್ದ ಅಪರೂಪ ಔಷಧೀಯ ಗಿಡಮೂಲಿಕೆಗಳನ್ನು ಬುಡಸಮೇತ ಕಿತ್ತು, ಮುಂಬೈ ನಗರಕ್ಕೆ ಮಾರಾಟ ಮಾಡುವ ಜಾಲವೊಂದು ತಲೆಯೆತ್ತಿ ನಿಂತಿದೆ. ಅತ್ಯಮೂಲ್ಯ ಗಿಡಮೂಲಿಕೆಗಳ ದರೋಡೆಗೆ ಕರ್ನಾಟಕದ ಇಡೀ ವ್ಯವಸ್ಥೆ  ಕಣ್ಮುಚ್ಚಿ ಕುಳಿತಿದೆ. ಇಂತಹದ್ದೇ ದರೋಡೆ ಕೇರಳದ ವೈನಾಡು ಪ್ರದೇಶ, ಇಡುಕ್ಕಿ ಜಿಲ್ಲೆಯ ಮೌನ ಕಣಿವೆ, ಮತ್ತು ತಮಿಳುನಾಡಿನ  ಈರೋಡು ಜಿಲ್ಲೆಯ ಆರಣ್ಯ ಪ್ರದೇಶ ಹಾಗೂ ನಾಗರಕೋಯಿಲ್ – ತಿರುವನಂತಪುರದ ಗಡಿಭಾಗದ ಅರಣ್ಯದಲ್ಲಿ ಸಹ ನಿರಂತರವಾಗಿ ಸಾಗಿದೆ.

ಕರ್ನಾಟಕದಲ್ಲಿ 80 ರ ದಶಕದಲ್ಲಿ ಅರಂಭವಾದ ಕುದುರೆ ಮುಖ ಗಣಿಗಾರಿಕೆಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. “ತುಂಗಾ ಮೂಲ ಉಳಿಸಿ” ಎಂಬ ಚಳುವಳಿ ಮಲೆನಾಡಿನಲ್ಲಿ ಅರಂಭಗೊಂಡಿತ್ತು. ಪಾಂಡುರಂಗ ಹೆಗ್ಡೆ, ಕಲ್ಕುಳಿ ವಿಠಲ ಹೆಗ್ಡೆ, ಅನಂತ ಹೆಗ್ಡೆ ಆಶಿಸಿರ ಮುಂತಾದವರು  ನಡೆಸಿದ ನಿರಂತರ ಚಳವಳಿಯ ನಡುವೆಯೂ ಸಹ ಏನನ್ನೂ ಲೆಕ್ಕಿಸಿದ ಕೇಂದ್ರ ಸರ್ಕಾರ ಗಣಿಗಾರಿಕೆಗೆ ಅವಕಾಶ ನೀಡಿತು. ಇದರಿಂದಾಗಿ ಕುದುರೆ ಮುಖದ ಗುಡ್ಡಗಳು ಕರಗುವುದರ ಜೊತೆಗೆ ಕೋಟ್ಯಾಂತರ ಟನ್ ಅದಿರಿನ ದೂಳು ತುಂಗೆಯ ಒಡಲು ಸೇರಿತು.

ಇಂದು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿರುವ  ಸುಮಾರು 3.500 ಮೆಗಾವ್ಯಾಟ್ ವಿದ್ಯುತ್ ನಲ್ಲಿ 3000  ಮೆ.ವ್ಯಾ. ವಿದ್ಯುತ್ ಪಶ್ಚಿಮ ಘಟ್ಟದ  ಒಡಲಲ್ಲಿರುವ ಜಲಾಶಯಗಳಿಂದ ಉತ್ಪತ್ತಿಯಾಗುತ್ತಿದೆ. ಇಡೀ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ 50 ಜಲಾಶಯಗಳಲ್ಲಿ ಕರ್ನಾಟಕದ ಲಿಂಗನಮಕ್ಕಿ, ಭದ್ರಾ, ನಾಗಜರಿ, ಕದ್ರ, ಕೊಡಸಳ್ಳಿ, ಜಲಾಶಯಗಳಲ್ಲಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇವುಗಳ ಜೊತೆಗೆ ಯಾವ ಕ್ಷಣದಲ್ಲಾದರೂ ಸಿಡಿಯಬಹುದಾದ ನೆಲಬಾಂಬ್ ನಂತೆ ಕಾರವಾರ ಸಮೀಪದ ಕೈಗಾ ಬಳಿ ಅಣು ವಿದ್ಯುತ್ ರಿಯಾಕ್ಷರ್ ನಲ್ಲೂ ಸಹ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಆರಂಭದಲ್ಲಿ 730 ಕೋಟಿ ಎಂದು ಅಂದಾಜಿಸಲಾಗಿದ್ದ ಕೈಗಾ ಅಣುಸ್ಥಾವರದ ನಾಲ್ಕು ವಿದ್ತುತ್ ಘಟಕಗಳಿಗೆ ಈವರೆಗೆ ಆಗಿರುವ ವೆಚ್ಚ 2750 ಕೋಟಿ ರೂಪಾಯಿಗಳು. ಇದರಲ್ಲಿ ನಿರ್ಮಾಣದ ಹಂತದಲ್ಲಿ ಕುಸಿದು ಬಿದ್ದ ಗೋಪುರದಿಂದ ಆದ 15ಕೋಟಿ ವೆಚ್ಚವೂ ಸೇರಿದೆ. ಕೈಗಾ ಸ್ಥಾವರಕ್ಕಾಗಿ 700 ಎಕರೆ ಪಶ್ಚಿಘಟ್ಟದ ಕಾಡನ್ನು ನೆಲಸಮ ಮಾಡಲಾಯಿತು. ಇದರ ಜೊತೆಗೆ ಗೋವಾ ದಿಂದ ಕೈಗಾ ವರೆಗೆ ತಜ್ಞರು ಬಂದು ಹೋಗುವುದಕ್ಕಾಗಿ ನಿರ್ಮಿಸಿದ 150ಕಿ.ಮಿ.ದೂರದ ರಸ್ತೆ, ಹಾಗೂ ಕಾರವಾರದಿಂದ ಕೈಗಾವರೆಗೆ ನಿರ್ಮಿಸಿದ 60 ಕಿ.ಮಿ. ರಸ್ತೆಗಾಗಿ ಮತ್ತು ಇಲ್ಲಿನ ಸಿಬ್ಬಂಧಿಗಳ ವಸತಿ ಕಾಲೋನಿಗಾಗಿ ನೆಲಸಮ ಮಾಡಿದ ಅರಣ್ಯದ ಲೆಕ್ಕ ಇನ್ನೂ ಸಿಕ್ಕಿಲ್ಲ. ಇದಲ್ಲದೆ  ಕೈಗಾ ಅಣುಸ್ಥಾವರದಲ್ಲಿ ಉತ್ಪಾದಿಸಲಾಗುವ ವಿದ್ಯುತ್ ಅನ್ನು  ಶಿರಸಿ ಬಳಿ ಇರುವ ಸಂಪರ್ಕ ಜಾಲಕ್ಕೆ ಜೋಡಿಸಲಾಗಿದೆ. ಕೈಗಾ ಅಣುಸ್ಥಾವರದಿಂದ ಶಿರಸಿಯವರೆಗೆ ಹಾದು ಹೋಗಿರುವ ವಿದ್ಯುತ್ ತಂತಿಗಳ ಕೆಳೆಗೆ 130 ಅಡಿ ವಿಸ್ತಿರ್ಣದಷ್ಟು ಕಾಡನ್ನು 77 ಕಿಲೋಮೀಟರ್ ಉದ್ದಕ್ಕೂ ಕಡಿಯಲಾಗಿದೆ.

ಅಣು ವಿದ್ಯುತ್ ಸ್ಥಾವರಕ್ಕೆ ಬಳಸಲಾಗುವ ಯುರೇನಿಯಂ ಅನ್ನು ಕೊಲ್ಕತ್ತದಿಂದ 220 ಕಿ.ಮಿ. ಹಾಗೂ ಜೆಮ್ ಶೆಡ್ ಪುರದಿಂದ  ಕೇವಲ 24 ಕಿ.ಮಿ.ದೂರವಿರುವ ಬಿಹಾರ ರಾಜ್ಯದ ಪೂರ್ವಸಿಂಗಭೂಮಿ ಜಿಲ್ಲೆಯ ಜಾದುಗುಡ ಎಂಬಲ್ಲಿ ತೆಗೆಯಲಾಗುತ್ತಿದ್ದು, ಈ ಕಚ್ಛಾ ಯುರೇನಿಯಂ ಅದಿರನ್ನು ಹೈದರಾಬಾದಿಗೆ ಸಾಗಿಸಿ, ನಂತರ ಅದನ್ನು ಸಂಸ್ಕರಿಸಲಾಗುತ್ತದೆ. ಬಿಲ್ಲೆ ರೂಪದ ಸಂಸ್ಕರಿತ ಯುರೇನಿಯಂ ಅದಿರು ಹೈದರಾಬಾದಿನಿಂದ ಲಾರಿಯಲ್ಲಿ ಕೈಗಾ ತಲುಪುತ್ತಿದೆ. ಇಲ್ಲಿ ವಿದ್ಯತ್ ಉತ್ಪಾದನೆಗೆ ಬಳಸಿದ ನಂತರ ಕಸವಾಗುವ ಯುರೇನಿಯಂ ತ್ಯಾಜ್ಯವನ್ನು ಕೈಗಾ ಘಟಕದ ಆವರಣದಲ್ಲಿ ದಪ್ಪನೆಯ ಹೊದಿಕೆಯುಳ್ಳ ಸ್ಟೀಲ್ ಡ್ರಮ್ ಗಳಲ್ಲಿ ಹಾಕಿ ಭೂಮಿಯಲ್ಲಿ ಹೂತು ಹಾಕಲಾಗುತ್ತಿದೆ. ಯುರೇನಿಯಂ ಅದಿರು ಮತ್ತು ಕಸದಿಂದ ಹೊರಸೂಸುವ ಅಣುವಿಕಿರಣ ಮನುಷ್ಯನೂ ಸೇರಿದಂತೆ ಜಗತ್ತಿನ ಎಲ್ಲಾ ಜೀವಿಗಳಿಗೆ ಅತ್ಯಂತ ಅಪಾಯಕಾರಿಯಾದುದು. ಇದೇರೀತಿ ಕೇರಳದ ಕರಾವಳಿಯಲ್ಲಿ ದೊರೆಯುವ ಥೋರಿಯಂ ಅದಿರನ್ನು ಅಣು ಬಾಂಬ್ ತಯಾರಿಸಲು ಉಪಯೋಗಿಸಲಾಗುತ್ತಿದೆ. ಇದರ ಸಂಸ್ಕರಣಾ ಘಟಕ ಮೈಸೂರು ಸಮೀಪ ಮಡಿಕೇರಿ ಹೆದ್ದಾರಿಯಲ್ಲಿ ಕೃಷ್ಣರಾಜಸಾಗರದ ಹಿನ್ನೀರಿನ ಬಳಿ ಇರುವ ರಟ್ಟೆ ಹಳ್ಳಿ ಬಳಿ ಇದೆ. ಇಲ್ಲಿಯೂ ಸಹ ತ್ಯಾಜ್ಯವನ್ನು ಆವರಣದ ಭೂಮಿಯಲ್ಲಿ ಹೂಳಲಾಗುತ್ತಿದೆ ಈ ಘಟಕ ಜನ ಸಾಮಾನ್ಯರ ಗಮನಕ್ಕೆ ಬಾರದಂತೆ ಸುತ್ತಾ ಹತ್ತು ಅಡಿ ಎತ್ತರದ ಕಲ್ಲಿನ ಗೋಡೆಯನ್ನು ನಿರ್ಮಿಸಲಾಗಿದೆ. ನಾಳೆ ಇಂತಹ ಪ್ರದೇಶಗಳಲ್ಲಿ ಭೂಕಂಪ ಸಂಭವಿಸಿ ಭೂಮಿ ಬಾಯಿ ತೆರೆದರೆ, ಪಶ್ಚಿಮಘಟ್ಟದ ಭವಿಷ್ಯವೇನು? ಇದಕ್ಕೆ ಯಾರಲ್ಲೂ ಉತ್ತರವಿಲ್ಲ. ಪಶ್ಚಿಘಟ್ಟದಲ್ಲಿ ಜಲವಿದ್ಯುತ್ ಉತ್ಪಾದನೆ ಮೀಸಲಾದ ಜಲಾಶಯಗಳ ಜೊತೆಗೆ ನೀರಾವರಿಗಾಗಿ ರೂಪುಗೊಂಡ ಶಿವಮೊಗ್ಗದ ಗಾಜನೂರು ಬಳಿಯ ಲಕ್ಕುವಳ್ಳಿ ಡ್ಯಾಂ, ಕೃಷ್ಣರಾಜಸಾಗರ, ಕಬಿನಿ, ಹೇಮಾವರಿ, ಹಾರಂಗಿ, ಸುವರ್ಣಾವತಿ ಮುಂತಾದ ಅಣೆ,ಕಟ್ಟುಗಳಿವೆ.
ಕಾರವಾದ ಬಳಿ ಕೈಗಾ ಅಣುಸ್ಥಾವರದ ಜೊತೆಗೆ ಅಣುಬಾಂಬುಗಳ ಸಿಡಿತಲೆಯನ್ನು ಹೊಂದಿರುವ ರಾಕೇಟ್ ಗಳನ್ನು ಜಲಂತರ್ಗಾಮಿ ನೌಕೆಗಳಲ್ಲಿ ಇಟ್ಟು ಕಾಯುವ ಸುರಕ್ಷಿತ ಸ್ಥಳವಾಗಿ ಕಾರವಾರ ಬಂದರಿನ ಬಳಿ ಸೀ ಬರ್ಡ್ ನೌಕಾ ನೆಲೆ ನಿರ್ಮಿಸಲಾಗಿದೆ. ಈ ಮೊದಲು ಗುಜರಾತು ಬಂದರಿನಲ್ಲಿ ಈ ನೆಲೆಯನ್ನು ನಿರ್ಮಿಸಲಾಗಿತ್ತು. ಆದರೆ, ನೆರೆಯ ವೈರಿ ರಾಷ್ಟ್ರವಾದ ಪಾಕಿಸ್ಥಾನಕ್ಕೆ ಈ ಬಂದರು ಹತ್ತಿರವಾದ ಕಾರಣ, ಕಾರವಾರಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕಾಗಿ ಕಾರವಾರ-ಅಂಕೋಲಾ ನಡುವಿನ ಸಮುದ್ರ ತೀರದ 13 ಹಳ್ಳಿಗಳ, ಮತ್ತು ಮೀನುಗಾರಿಕೆಯನ್ನು ವೃತ್ತಿಯಾಗಿಸಿಕೊಂಡಿದ್ದ 4779 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಅವರೆಲ್ಲರನ್ನು ಕಾರವಾರ-ಯಲ್ಲಾಪು ರಸ್ತೆಯ ಮಾಸ್ತಿಕಟ್ಟ ಅರಣ್ಯ ಪ್ರದೇಶದಲ್ಲಿರುವ ತೋಡೂರು ಎಂಬ ವಸತಿ ಕಾಲೋನಿಗೆ ತಂದು ಬಿಡಲಾಗಿದೆ. ಏನೋಂದು ವೃತ್ತಿಯನ್ನು ಮಾಡಲಾಗದ ಈ ಮೀನುಗಾರರು ಹಿಟ್ಲರನ ನಾಜಿ ಶಿಬಿರದಲ್ಲಿ ಬದುಕುಳಿದಿದ್ದ ಖೈದಿಗಳಂತೆ ಬದುಕುತ್ತಿದ್ದಾರೆ. ಖಿನ್ನತೆಯಿಂದಾಗಿ ಈ ಕಾಲೋನಿಯಲ್ಲಿ ಮಹಿಳೆಯರೂ ಮತ್ತು ಪುರುಷರೂ ಸೇರಿದಂತೆ 600 ಮಂದಿ ಮಾನಸಿಕ ಅಸ್ವಸ್ತರಾಗಿದ್ದಾರೆ.
ಕಾರವಾರದ ಕಡಲು ಮತ್ತು ಇಲ್ಲಿನ ಪಶ್ಚಿಮ ಘಟ್ಟದ ಅರಣ್ಯ ಅನೇಕ ಜೀವಿಗಳ ಪಾಲಿಗೆ ತೊಟ್ಟಿಲಿನಂತಿದೆ. ಇಲ್ಲಿನ ಪ್ರದೇಶವನ್ನು ಪಕ್ಷಿಕಾಶಿ ಎಂದು ಕರೆಯಲಾಗುತ್ತದೆ. ಇಲ್ಲಿ ದೊರೆಯುವ ವಿವಿಧ ಬಗೆಯ ಹಣ್ಣುಗಳಿಗಾಗಿ, ಮತ್ತು ತಮ್ಮ ಸಂತಾನದ  ಅಭಿವೃದ್ಧಿಗಾಗಿ ದೂರ ಚಳಿ ದೇಶಗಳಾದ ಸೈಬಿರಿಯಾ, ಅಲಸ್ಕಾ,ಮತ್ತು ಯುರೋಪ್ ರಾಷ್ಟ್ರಗಳಿಂದ ನಾನಾ ಹಕ್ಕಿಗಳು ವಲಸೆ ಬರುತ್ತಿವೆ. ಇವುಗಳಲ್ಲಿ ಗೋಲ್ಡನ್ ಪ್ಲವರ್, ಬೂದು ಪ್ಲವರ್, ಕೆಂಪು ಕಾಲಿನ ಹಕ್ಕಿ, ಗಾಡ್ ವಿಜ್, ಸ್ವಂಟ್, ಸ್ಯಾಂಡರ್ ಲಿಂಗ್, ಮುಖ್ಯವಾದವುಗಳು. ಅದೇ ರೀತಿ ಹಿಮಾಲಯ ತಪ್ಪಲಿನಿಂದ ಪಟ್ಟಿತಲೆಯುಳ್ಳ ಬಾತು, ಹಳದಿ ಸಿಪಿಲೆ, ಗುಲಾಬಿ, ಮೈನಾ, ಮರ್ಶಾ ಹ್ಯಾರಿಯರ್ ಕೊಕ್ಕರೆಗಳು ಬರುತ್ತಿವೆ. ಕಾರವಾರದ ಕಡಲಿನಲ್ಲಿ ಅತ್ಯಂತ ರುಚಿಯಾದ ಮ್ಯಾಕರೆಲ್ ಎಂಬ ಜಾತಿ ಮೀನುಗಳು ದೊರೆಯುತ್ತವೆ, ಇಲ್ಲಿನ ಭೂಮಿಯಲ್ಲಿ ಹೂತು ಹಾಕಿರುವ ಅಣುತ್ಯಾಜ್ಯದಿಂದ ಅಣು ವಿಕಿರಣಗಳು ಹೊರಸೂಸಿದರೆ, ಈ ಅಪರೂಪದ ಸಸ್ಯ ಸಂಪತ್ತು, ಪ್ರಾಣಿ ಸಂಪತ್ತು, ಪಕ್ಷಿ ಸಂಕುಲ, ಹಾಗೂ ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಏಲಕ್ಕಿ, ಮೆಣಸು, ಬಾಳೆ, ಅಡಿಕೆ ಮುಂತಾದ ಬೆಳೆಗಳ ಗತಿಯೇನು? ಇದಕ್ಕೆ ಉತ್ತರಿಸುವವರು ಯಾರು?  ಅಭಿವೃದ್ಧಿಯೆಂಬ ವಿಕೃತಿಯ ಯೋಜನೆಗಳ ಬಗ್ಗೆ ಲಂಗು ಲಗಾಮು ಇಲ್ಲದೆ ಮಾತನಾಡುವ ಮಂದಿ, ಒಮ್ಮೆ ಪಶ್ಚಿಮ ಘಟ್ಟ ನಿರ್ಜನ ಅರಣ್ಯದಲ್ಲಿ ಓಡಾಡಬೇಕಿದೆ. ಆಗ ಮಾತ್ರ ಪಶ್ಚಿಮ ಘಟ್ಟದ ಮಹತ್ವ ಅರಿವಾಗುವುದು.
                               ( ಮುಂದುವರಿಯುವುದು)

ಶುಕ್ರವಾರ, ಮೇ 3, 2013

ಪಶ್ಚಿಮಘಟ್ಟದ ಕಥೆ ಮತ್ತು ವ್ಯಥೆ -1



dUÀwÛ£À fêÀ ¸ÀAPÀÄ®UÀ¼À C¥ÀgÀÆ¥ÀzÀ JAlÄ vÁtUÀ¼À°è ¨sÁgÀvÀzÀ ¥À²ÑªÀÄWÀlÖªÀÇ MAzÀÄ. dUÀwÛ£À fêÀ ªÉÊ«zsÀåvÉAiÀÄ vÉÆnÖ®AwgÀĪÀ ¥À²ÑªÀÄWÀlÖvÁt, E¢ÃUÀ C©üªÀÈ¢ÝAiÀÄ £É¥ÀzÀ°è ºÀ®ªÀÅ C£ÁZÁgÀUÀ½UÉ ªÀiË£À ¸ÁQëAiÀiÁV ¤AwzÉ.
UÀÄdgÁvï gÁdå¢AzÀ »rzÀÄ zÀQët ¨sÁgÀvÀzÀ PÀ£ÁåPÀĪÀiÁjAiÀĪÀgÉUÉ ¨sÁgÀvÀzÀ ¥À²ÑªÀÄzÀ CgÀ©â ¸ÀªÀÄÄzÀæzÀ PÀgÁªÀ½AiÀÄÄzÀÝPÀÆÌ 1.600 Q¯ÉÆëÄÃlgï GzÀÝ ºÀ©âgÀĪÀ ¥À²ÑªÀÄ WÀlÖzÀ Vj±ÉæÃtÂUÀ¼ÀÄ, zÀlÖPÁ£À£À, zÀÄ«ÄäPÀÄ̪À d®¥ÁvÀUÀ¼ÀÄ, D¼À ¥Àæ¥ÁvÀzÀ PÀtªÉUÀ¼ÀÄ, ªÀÄÄV¯ÉvÀÛgÀPÉÌ ¨É¼ÉzÀÄ ¤AvÀ ªÀÄgÀUÀ¼ÀÄ, J¯ÉèqÉ ºÀ¹j£À ºÉÆ¢PÉ ºÉÆzÀÄÝ ªÀÄ®VgÀĪÀ ºÀÄ®ÄèUÁªÀ®Ä ¥ÀæzÉñÀUÀ¼ÀÄ EªÉ®èªÀÇ ¥À²ÑªÀÄWÀlÖzÀ ªÉʲµÀÖUÀ¼ÀÄ.
ªÀÄ£ÀĵÀå PÁ°lÖ £É®zÀ°è ºÀÄ®Äè UÀjPÉ PÀÆqÀ ¨É¼ÉAiÀįÁgÀzÀÄ JA§ »jAiÀÄgÀ £ÁtÄÚrAiÉÆAzÀÄ £ÀªÀÄä d£À¥ÀzÀgÀ £ÀqÀÄªÉ ZÁ°ÛAiÀÄ°èzÉ, F ªÀiÁvÀÄ £ÀªÀÄUÉ CxÀðªÁUÀ¨ÉÃPÁzÀgÉ, CxÀªÁ ªÀÄ£À£ÀªÁUÀ¨ÉÃPÁzÀgÉ, EwÛÃZÉV£À ¥À²ÑªÀÄWÀlÖªÀ£ÀÄß PÀuÁÚgÉ MªÉÄä PÀuÁÚgÉ £ÉÆÃqÀ¨ÉÃPÀÄ. EªÉÇwÛUÀÆ ªÀÄ£ÀĵÀå£ÉA§ ¥Áæt PÁ°qÀ¯ÁUÀzÀ zÀÄUÀðªÀÄ CgÀtå ¥ÀæzÉñÀzÀ°è ªÀiÁvÀæ CzÀgÀ ªÀÄÆ® ¸ÀégÀÆ¥À ºÁUÉAiÉÄà G½¢zÉ.

ªÀĺÁgÁµÀæ ªÀÄvÀÄÛ PÀ£ÁðlPÀzÀ°è ¸ÀºÁå¢æAiÀÄ Vj±ÉæÃt JAvÀ®Æ, PÉÃgÀ¼ÀzÀ°è ªÀÄ®¨Ágï ¥ÁæAvÀå ªÀÄvÀÄÛ ªÀiË£À PÀt廃 JAvÀ®Æ ºÁUÀÆ vÀ«Ä¼ÀÄ£Ár£À°è ¤Ã®Vj ªÀÄvÀÄÛ UÉÆêÁzÀ°è PÉÆAPÀt ¥ÁæAvÀå JAzɯÁè §UÉ §UÉAiÀÄ°è PÀgɹPÉƼÀÄîªÀ ¥À²ÑªÀÄWÀlÖzÀ ªÉʨsÀªÀªÀ£ÀÄß £ÁªÀÅ, ªÀĺÁgÁµÀæzÀ ªÀĺÁ¨sÀ¯ÉñÀégÀ, ¯ÉÆãÁªÁ®, ©üêÀiÁ±ÀAPÀgÀ,CA¨ÉÆýWÁmï, RAqÁ®, ¥ÀAZÁVß, PÀ£ÁðlPÀzÀ PÉÆqÀZÁ¢æ, ªÀÄļÀîAiÀÄå£À Vj, §æºÀäVj, ¥ÀĵÀàVj, PÀĪÀiÁgÀ ¥ÀªÀðvÀ, PÀÄzÀÄgɪÀÄÄR, ©½VjgÀAUÀ£À ¨ÉlÖ, »ªÀĪÀzï UÉÆÃ¥Á® ¸Áé«Ä ¨ÉlÖ, PÉÆqÀV£À vÀrAiÉÆA§¼ï, PÉÃgÀ¼ÀzÀ ªÀÄ£Áßgï, vÀ«Ä¼ÀÄ£Ár£À ¤Ã®Vj ªÀÄÄAvÁzÀ ¥ÀæzÉñÀUÀ½UÉ ¨ÉÃn ¸À«AiÀĨÉÃQzÉ. F ¥ÀæzÉñÀUÀ¼À°è ªÀÄvÀÄÛ PÉÃgÀ¼ÀzÀ ªÀiË£À PÀtªÉAiÀÄ°è ¥À²ÑªÀÄWÀlÖzÀ ¤dªÁzÀ zÀ±Àð£ÀªÁUÀĪÀÅzÀÄ.
¥À²ÑªÀÄWÀlÖzÀ°ègÀĪÀ ¥ÀæªÀÄÄR 32 Vj¥ÀªÀðvÀUÀ¼ÀÄ ªÀÄvÀÄÛ ±ÉæÃtÂUÀ¼À ¸ÀÄvÀÛ¼ÀvÉ MAzÀÄ ®PÀëzÀ CgÀªÀvÀÄÛ ¸Á«gÀ ZÀzÀÄgÀ Q.«Ä. JAzÀÄ CAzÁf¸À¯ÁVzÉ.
fêÀ eÁ®zÀ dUÀwÛ£À°è C¥ÀgÀÆ¥À J£À߯ÁzÀ 5 ¸Á«gÀ VqÀªÀÄÆ°PÉ ¸À¸ÀåUÀ¼ÀÄ ªÀÄvÀÄÛ ºÀÆ«£À VqÀUÀ¼ÀÄ, 139 ¸À¸ÀÛ¤ ¥Àæ¨sÉÃzsÀUÀ¼ÀÄ, 508 §UÉAiÀÄ ¥ÀQë ¥Àæ¨ÉÃzsÀUÀ¼ÀÄ, 179 ««zsÀ §UÉAiÀÄ PÀ¥ÉàUÀ¼ÀÄ ¥À²ÑªÀÄ WÀlÖzÀ°è PÀAqÀÄ §A¢ªÉ. EªÀÅUÀ¼À°è «£Á±ÀzÀ CAaUÉ vÀ®Ä¦gÀĪÀ 325 ¥Àæ¨sÉÃzsÀUÀ¼ÀÄ ¸ÉÃjªÉ. EªÀÅUÀ¼À°è 33 ¸À¸ÀÛ¤ ¥ÁætÂUÀ¼ÀÄ C¥ÁAiÀÄzÀ ¸ÀĽUÉ ¹®ÄQªÉ. PÉÃgÀ¼ÀzÀ ªÀiË£À PÀtªÉAiÀÄ°è G½¢gÀĪÀ ¹AºÀ ¨Á®zÀ ªÀÄAUÀ PÀÆqÀ EªÀÅUÀ¼À°è MAzÀÄ.


dUÀwÛ£À°è ¨ÉÃgÉ®Æè PÁt¯ÁUÀzÀ 16 §UÉAiÀÄ C¥ÀgÀÆ¥ÀzÀ ¥ÀQëUÀ¼ÀÄ, 1600 ««zsÀ §UÉAiÀÄ ºÀÆ«£À VqÀUÀ¼ÀÄ, ( DQðqï ¸ÉÃjzÀAvÉ) ºÁUÀÆ 7 ¸À¸ÀÛ¤ ¥ÁætÂUÀ¼ÀÄ E°èªÉ. PÉÃgÀ¼ÀzÀ°ègÀĪÀ C£ÀªÀÄÄr ²RgÀ 8842 Cr JvÀÛgÀ«zÀÄÝ, ¥À²ÑªÀÄWÀlÖ Cw JvÀÛgÀzÀ ¥ÀªÀðvÀ J¤¹PÉÆAqÀgÉ, Hn ¸À«ÄÃ¥ÀzÀ zÉÆqÀØ ¨ÉlÖ 8652 Cr JvÀÛgÀ«zÀÄÝ JgÀqÀ£Éà Cw JvÀÛgÀzÀ ²RgÀªÁVzÉ. ªÀÄÄV®Ä ZÀÄA©¸ÀĪÀµÀÄÖ JvÀÛgÀzÀ Vj±ÉæÃtÂUÀ½AzÁV, ¥À²ÑªÀÄWÀlÖzÀ ºÀ®ªÀÅ ¥ÀæzÉñÀUÀ¼À°è ªÁ¶ðPÀªÁV 3000 ¢AzÀ 4000 «Ä° «ÄÃlgï ªÀļÉAiÀiÁUÀÄwÛzÉ. G½zÉqÉ ¸ÀgÁ¸Àj 900 «Ä.«Ä. ªÀļÉAiÀiÁUÀÄwÛzÉ. PÉÃgÀ¼ÀzÀ ªÀiË£ÀPÀtªÉ, ªÀÄ£Áßgï. Hn, ªÀÄÄAvÁzÀ VjzsÁªÀÄzÀ ¥ÀæzÉñÀUÀ¼À°è ¸ÀgÁ¸Àj GµÁÚA±À 15 rVæ ¸É°ìAiÀÄ¸ï ¤AzÀ 24 rVæAiÀĪÀgÉUÉ EgÀÄvÀÛzÉ.
Erà ¥À²ÑWÀlÖzÀ°è 13 gÁ¶ÛçÃAiÀÄ GzÁå£ÀªÀ£ÀUÀ½zÀÝgÉ, JgÀqÀÄ eÉÊ«PÀ GzÁå£ÀªÀ£ÀUÀ¼ÀÄ ¸ÀºÀ EªÉ. ¥À²ÑªÀÄWÀlÖzÀ°è ºÀÄnÖ ºÀjAiÀÄĪÀ £À¢UÀ½UÉ ¯ÉPÀÌ«lÖªÀj®è. EªÀÅUÀ¼À°è ¥ÀæªÀÄÄRªÁzÀªÀÅUÀ¼ÀÄ PÀȵÀÚ, PÁªÉÃj, UÉÆÃzÁªÀj, PÁ½, vÀÄAUÁ, ªÀiÁAqÀ«, dĪÁj, ¨sÀzÁæ, ªÀÄ®¥Àæ¨sÀ, WÀl¥Àæ¨sÀ, PÀ©¤, ºÉêÀiÁªÀw. ¥ÉjAiÀiÁgï ªÀÄÄRåªÁzÀ £À¢UÀ¼ÀÄ. eÉÆvÉUÉ ªÀĺÀgÁµÀÛç ¢AzÀ »rzÀ PÉÃgÀ¼ÀzÀªÀgÉUÉ ¸Á«gÁgÀÄ d®¥ÁvÀUÀ½UÉ, zÀÆzï ¸ÁUÀgï, eÉÆÃUÀ d®¥ÁvÀ, PÀÄAaPÀ¯ï, GAZÀ½î d®¥ÁvÀUÀ¼À£ÀÄß ¥ÀæªÀÄÄRªÁV ºÉ¸Àj¸À§ºÀÄzÀÄ.
¥À²ÑªÀÄWÀlÖzÀ CgÀtåUÀ¼À°è CAzÁdÄ 45 ®PÀë §ÄqÀPÀlÄÖ ¤ªÁ¹UÀ¼ÀÄ §zÀÄPÀÄwÛzÁÝgÉ JAzÀÄ CAzÁf¸À¯ÁVzÉ. EªÀgÀ°è PÀÄ«Äæ, ºÁ®QÌ, ºÀPÀ̯ï, ¹¢Ý, PÀjMPÀÌ®, ªÀÄgÁl, U˽,ªÀÄÄQæ, PÁqÀÄPÀÄgÀħ, eÉãÀÄ PÀÄgÀħ, ¸ÉÆðUÀ, vÉÆÃqÀ, d£ÁAUÀUÀ¼À£ÀÄß EA¢UÀÆ PÁt§ºÀÄzÀÄ. F d£ÁAUÀUÀ¼À eÉÆvÉ eÉÆvÉAiÀÄ°è ºÀ®ªÁgÀÄ ¸ÁPÀÄ¥ÁætÂUÀ¼À (ºÀ¸ÀÄ, ªÉÄÃPÉ, PÀÄj) «²µÀÖ eÁwAiÀÄ vÀ½UÀ½UÉ ¥À²ÑWÀlÖ ºÉ¸ÀgÀĪÁ¹AiÀiÁVzÉ. PÉÃgÀ¼ÀzÀ°è ªÀiÁgÀªÁj, PÀ£ÁðlPÀzÀ°è ªÀįɣÁqÀÄVqÀØ, zÀ£ÀUÀÆgÀÄ PÀÄj, ªÀĺÁgÁµÀÛçzÀ°è aUÀÄ ªÀÄvÀÄÛ ©Ãlgï ºÁUÀÆ vÀ«Ä¼ÀÄ£Ár£À°è ¤Ã®Vgï ªÀÄvÀÄÛ ªÀiÁ¯ÉÊ«ÄqÀÄØ  ¥ÀæªÀÄÄR eÁ£ÀĪÁgÀÄ vÀ½UÀ¼ÀÄ.
¨sÀvÀÛzÀ vÀ½UÀ¼À°è PÀ£ÁðlPÀzÀ ¥À²ÑªÀÄWÀlÖzÀ ¥ÁæAvÀåzÀ°è ¨É¼ÉAiÀÄĪÀ ¸ÀtÚQÌ §ºÀ¼À ªÀÄÄRåªÁzÀzÀÄ. CzÉà jÃw C£ÉÃPÀ vÀgÁªÀj vÀgÀPÁj ¨É¼ÉUÀ¼ÀÄ ªÀÄvÀÄÛ ºÀtÄÚUÀ½UÉ ¥À²ÑªÀÄWÀlÖ ¥Àæ¹¢ÝAiÀiÁVzÉ.
EµÉÖ¯Áè ªÉÊ«zsÀåªÀÄAiÀÄ ¸À¸ÀågÁ², ¥ÀQë ¸ÀAPÀÄ® ªÀÄvÀÄÛ fêÀeÁ®UÀ¼À£ÀÄß ºÉÆA¢gÀĪÀ ¥À²ÑªÀÄWÀlÖPÉÌ FUÀ eÁUÀwÃPÀgÀtzÀ ¥sÀ®ªÁV gÀ¨sÀ¸À¢AzÀ ¸ÁUÀÄwÛgÀĪÀ C©üªÀÈ¢ÝAiÀÄ £É¥ÀzÀ°è£À UÀtÂUÁjPÉ, PÉÊUÁjPÉÆÃzÀåªÀÄ, ¥ÀæªÁ¸ÉÆÃzÀåªÀÄ EwÛÃZÉUÉ ±Á¥ÀªÁVzÉ. PÀ¼ÉzÀ zÀ±ÀPÀzÀ°è DgÀA¨sÀªÁzÀ, ªÀÄÄA¨ÉÊ-UÉÆêÁ £ÀqÀÄ«£À 720 Q.«Ä. zÀÆgÀzÀ PÉÆAPÀt gÉʯÉé EzÀPÉÌ ¥ÀgÉÆÃPÀëªÁV PÁgÀtªÁ¬ÄvÀÄ. F ¥ÀæzÉñÀUÀ¼À°è ¤ªÀiÁðtªÁUÀÄwÛgÀĪÀ §AzÀgÀÄUÀ¼ÀÄ, d®«zÀÄåvï AiÉÆÃd£ÉUÀ¼ÀÄ, CuÉPÀlÄÖUÀ¼ÀÄ ºÁUÀÆ vÀ¯É JvÀÄÛwÛgÀĪÀ PÉÊUÁjPÉUÀ¼À ªÉÃUÀªÀ£ÀÄß UÀªÀĤ¹zÀgÉ, ¥À²ÑªÀÄ WÀlÖzÀ fêÀ ªÉÊ«zÀåvÉUÉ G½UÁ®«®è J¤¸ÀÄvÀÛzÉ.

ªÀĺÁgÁµÀÖç gÁdåªÉÇAzÉà PÉÆAPÀt ªÀÄvÀÄÛ gÁAiÀÄWÀqÀ ¥ÁæAvÀåzÀ°è 33 «±ÉÃóµÀ CyðPÀ ªÀ®AiÀÄ ºÉ¸Àj£À°è PÉÊUÁjPÉUÀ¼À ¸ÁÜ¥À£ÉUÉ C£ÀĪÀÄw ¤ÃrzÉ. eÉÆvÉ SÁ¸ÁV PÀA¥À¤AiÉÆAzÀPÉÌ ¯ÁªÀ¸À JA§ 12.500 JPÀgÉ ¥ÀæzÉñÀzÀ ¢éÃ¥ÀªÀ£ÀÄß ¥ÀæªÁ¸ÉÆÃzÀåªÀÄ £ÀUÀgÀªÁV ¨É¼ÉAiÀÄ®Ä zÉÃtÂUÉAiÀiÁV ¤ÃrzÉ,
UÉÆêÁzÀ°è ¥ÀgÀªÁ£ÀV ¥ÀqÉ¢gÀĪÀ 300 PÀA¥À¤UÀ¼À°è 182 UÀtÂPÀA¥À¤UÀ¼ÀÄ UÀtÂUÁjPÉ £ÀqɸÀÄwÛzÀÄÝ, EzÀjAzÁV FªÀgÉUÉ 77 «Ä°AiÀÄ£ï l£ï £ÀµÀÄÖ C¢j£À zÀƼÀÄ £À¢ ªÀÄvÀÄÛ ¸ÀªÀÄÄzÀæ ¸ÉÃjzÉ JAzÀÄ vÀdÕgÀÄ CAzÁf¹zÁÝgÉ.
 ªÀĺÁgÁµÀÖçzÀ°èAiÀÄÆ PÀÆqÀ ¥À²ÑªÀÄWÀlÖzÀ MqÀ®°ègÀÄZÀ 56 ºÀ½îUÀ¼À°è UÀtÂUÁjPÉ £ÀqÉAiÀÄÄwÛzÉ. EªÀÅUÀ¼À eÉÆvÉ ®PÁëAvÀgÀ ºÉPÉÖÃgï CgÀtå ¨sÀÆ«Ä »¤ßÃj£À°è ªÀÄļÀÄUÀÄqÉAiÀiÁUÀĪÀ jÃwAiÀÄ°è ºÉƸÀ CuÉPÀlÄÖUÀ½UÉ C£ÀĪÀÄw ¤qÀ¯ÁUÀÄwÛzÉ. EAvÀºÀ C©üªÀÈ¢ÞAiÀÄ CAzsÁ£ÀÄPÀgÀuÉ ªÀÄÄA¢£À ªÀÄĪÀvÀÄÛ ªÀµÀðUÀ¼À PÁ® ¥À²ÑªÀÄWÀlÖzÀ°è ªÀÄÄAzÀĪÀgÉzÀgÉ, ±ÉÃPÀqÀ 27 gÀµÀÄÖ CgÀtå ªÀÄvÀÄÛ fêÀ ¸ÀAPÀÄ®UÀ¼ÀÄ £Á±ÀªÁUÀÄvÀÛªÉ JAzÀÄ ¥Àj¸ÀgÀ vÀdÕgÀÄ C©ü¥ÁæAiÀÄ ¥ÀnÖzÁÝgÉ.  FUÁUÀ¯Éà ¥À²ÑªÀÄWÀlÖzÀ°è ±ÉÃ.24 gÀµÀÄÖ vÉAV£À ¨É¼ÉAiÀÄ C©üªÀÈ¢Þ PÀÄApvÀªÁVzÀÄÝ, ¥ÀæwªÀµÀð 1.8 gÀµÀÄÖ GµÁÚA±À KjPÉAiÀiÁUÀÄwÛzÉ JAzÀÄ ¨ÉAUÀ¼ÀÆj£À ¨sÁgÀwÃAiÀÄ «eÁÕ£À ¸ÀA¸ÉÜAiÀÄ ¥ÉÆæ. gÀ«ÃAzÀæ£Áxï JZÀÑj¹zÁÝgÉ,
                       (ªÀÄÄAzÀĪÀjAiÀÄĪÀÅzÀÄ)

ಬುಧವಾರ, ಮೇ 1, 2013

ಜೀವ ವೈವಿಧ್ಯತೆಗೆ ವಿಷ ಕಕ್ಕುವವರ ಕಥನ



EwÛÃZÉV£À ¢£ÀUÀ¼À°è ¨sÁgÀvÀzÀ fêÀ ªÉÊ«zÀåvÉAiÀÄ vÉÆnÖ®Ä J¤¹gÀĪÀ ¥À²ÑªÀÄWÀlÖ ¸ÀzÁ ¸ÀÄ¢ÞAiÀÄ°ègÀÄvÀÛzÉ. E¢ÃUÀ SÁåvÀ ¨ÁºÁåPÁ±À «eÁÕ¤ PÉ. PÀ¸ÀÆÛj gÀAUÀ£ï PÉÃAzÀæ ¸ÀPÁðgÀzÀ CgÀtå ªÀÄvÀÄÛ ¥Àj¸ÀgÀ E¯ÁSÉUÉ ¥À²ÑªÀÄ WÀlÖzÀ ¸ÀÄgÀPÀëvÉ PÀÄjvÀÄ ¤ÃrzÀ ªÀgÀ¢¬ÄAzÁV eÉÊ«PÀ ªÉÊ«zÀå F ¥ÀæzÉñÀ ªÀÄvÉÛ ¸ÀÄ¢ÞAiÀÄ°èzÉ, F ªÉÆzÀ®Ä 1986gÀ°è SÁåvÀ ¥Àj¸ÀgÀ vÀdÕ ªÀiÁzsÀªÀ UÁrÎÃ¼ï ¤ÃrzÀ ªÀgÀ¢AiÀÄ£ÀÄß PÉÃAzÀæ ¸ÀPÁðgÀ M¦àPÉƼÀî®Ä »AdjzÀ PÁgÀtPÁÌV, PÀ¸ÀÆÛj gÀAUÀ£ï £ÉÃvÀÈvÀézÀ°è ªÀÄvÉÆÛAzÀÄ ¸À«ÄwAiÀÄ£ÀÄß gÀa¹vÀÄÛ. PÀ¸ÀÆÛj gÀAUÀ£ï E¢ÃUÀ ¤ÃrgÀĪÀ ªÀgÀ¢AiÀÄ°è CAvÀºÀ ºÉ½PÉƼÀÄîªÀAvÀºÀ §zÀ¯ÁªÀuÉUÀ¼ÀÄ PÁtĪÀÅ¢®è.  UÁrÎÃ¼ï ¤ÃrzÀÝ PÉ®ªÀÅ ¸À®ºÉ ªÀÄvÀÄÛ ²¥sÁgÀ¸ÀÄìUÀ¼À£ÀÄ ¸Àr°¹zÁÝgÉ. ( F PÀÄjvÀÄ ªÀÄÄA¢£À CzsÁåAiÀÄzÀ°è ZÀað¸À¯ÁUÀĪÀÅzÀÄ)
FUÀ PÀ¸ÀÆÛj gÀAUÀ£ï ¤ÃrgÀĪÀ ªÀgÀ¢AiÀÄ£ÀÄß ¤dPÀÆÌ PÉÃAzÀæ ¸ÀPÁðgÀ M¦àPÉƼÀî®Ä ¹zÀÞ«zÉAiÀiÁ? EzÀÄ «Ä°AiÀÄ£ï qÁ®gï ¥Àæ±ÉßAiÀiÁVzÉ. KPÉAzÀgÉ, 1860 jAzÀ 1950 gÀ ªÀgÉUÉ ©ænõÀjAzÀ PÁ¦ü ªÀÄvÀÄÛ nà ¥ÁèAmÉñÀ£ï UÀ½UÁV ¤gÀAvÀgÀ £ÀqÉzÀ ªÀÄgÀUÀ¼À ªÀiÁgÀt ºÉÆêÀÄ, £ÀAvÀgÀ  ©ænõÀgÀ ªÁgÀ¸ÀÄzÁgÀgÀAvÉ EgÀĪÀ £ÀªÀÄä gÁdPÁgÀtÂUÀ¼ÀÄ, PÉÊUÁjPÉÆÃzÀå«ÄUÀ¼ÀÄ, ªÀÄvÀÄÛ ¸ÀPÁðgÀUÀ½AzÀ, UÀtÂUÁjPÉ, CuÉPÀlÄÖUÀ¼ÀÄ, ¥ÀæªÁ¸ÉÆÃzÀåªÀÄzÀ £É¥ÀzÀ°è £ÀqÉAiÀÄÄwÛgÀĪÀ C©üªÀÈ¢ÞAiÀÄ «PÀÈwUÀ½AzÁV ¥À²ÑªÀÄ WÀlÖ vÀ£Àß  £ÉÊd ¸ÀégÀÆ¥ÀªÀ£ÀÄß PÀ¼ÉzÀÄPÉÆArzÉ.
¥À²ÑªÀÄ WÀlÖUÀ¼À ¥ÀæzÉñÀzÀ°è 1920 jAzÀ 1990 gÀªÀgÉUÉ ±ÉÃPÀqÀ 57gÀµÀÄÖ ¥ÀæªÀiÁtzÀ°è CgÀtå £Á±ÀªÁVzÉ. ±ÉÃ. 28gÀµÀÄÖ ºÀÄ®ÄèUÁªÀ°£À CgÀtå, ªÀÄvÀÄÛ ±ÉÃ,19.5 gÀµÀÄÖ zÀlÖ CgÀtå ¥À²ÑªÀÄWÀlÖzÀ°è £Á±ÀªÁVgÀĪÀÅzÀÄ ¸ÀA±ÉÆÃzsÀ£É¬ÄAzÀ zÀÈqsÀ¥ÀnÖzÉ. EzÀjAzÁV ¥À²ÑªÀÄWÀlÖzÀ CgÀtå ¨sÀÆ«ÄAiÀÄ°è PÉƼÉAiÀÄÄ«PÉ (Vegitation) ¥ÀæªÀiÁt ±ÉÃ.25 gÀµÀÄÖ £Á±ÀªÁVgÀĪÀÅzÀjAzÀ CgÀtåUÀ¼À ¥sÀ®ªÀvÀÛvÉ ¸ÀºÀ QëÃt¸ÀÄwÛzÉ.

EAvÀºÀ DvÀAPÀzÀ ¹ÜwAiÀÄ°è ¨sÁgÀvÀzÀ PÉÃAzÀæ ¸ÀPÁðgÀ 2006 gÀ°è ¥À²ÑªÀÄ WÀlÖUÀ¼À ¥ÀæzÉñÀUÀ¼À£ÀÄß ¥ÁgÀA¥ÀjPÀ vÁtUÀ¼ÁV ¥ÀjUÀt¸À®Ä AiÀÄģɸÉÆÌ ªÀiÁ£ÀåvÉ UÁV Cfð ¸À°è¹vÀÄ. F ¥ÀæzÉñÀUÀ¼À°è ¸ÀvÀvÀ LzÀÄ ªÀµÀð ¥ÀæªÁ¸À ªÀiÁrzÀ AiÀÄģɸÉÆÌ vÀdÕgÀ vÀAqÀ, ¥À²ÑªÀÄWÀlÖzÀ 39 ¸ÀܼÀUÀ¼À£ÀÄß UÀÄgÀÄw¹ ¥ÁgÀA¥ÀjPÀ ªÀĺÀvÀÝzÀ ¸ÀܼÀUÀ¼ÀÄ JAzÀÄ 2012 gÀ°è C¢üPÀÈvÀªÁV WÉÆö¹vÀÄ. AiÀÄģɸÉÆÌ ªÀiÁ£ÀåvÉ ¹PÀÌ £ÀAvÀgÀ ¥À²ÑªÀÄWÀlÖUÀ¼À eÉÊ«PÀ ¸ÀܼÀUÀ¼ÀÄ ºÁUÀÆ E°è£À C¥ÀgÀÆ¥ÀzÀ fëUÀ¼ÀÄ ªÀÄvÀÄÛ  ¸À¸Àå ¥Àæ¨ÉÃzsÀ UÀ¼ÀÄ EªÀÅUÀ½UÉ gÀPÀëuÉ zÉÆgÉAiÀÄ°zÉ JAzÀÄ ¥Àj¸ÀgÀ ¥ÉæëÄUÀ¼ÀÄ ¤lÄÖ¹gÀÄ ©qÀÄwÛgÀĪÁUÀ¯Éà AiÀÄģɸÉÆÌ ¥ÁgÀA¥ÀjPÀ ¥ÀnÖAiÀÄ£ÀÄß PÉÊ PÉÆqÀUÀÄ f¯ÉèAiÀÄ£ÀÄß PÉÊ ©qÀ¨ÉÃPÉAzÀÄ PÉÆqÀUÀÄ f¯ÉèAiÀÄ°è PÉ®ªÀÅ C«ªÉÃQUÀ¼ÀÄ PÀÆUÉ©â¹zÁÝgÉ. PÀ¼ÉzÀ ªÀµÀð AiÀÄģɸÉÆÌ vÀAqÀ ªÀÄrPÉÃjAiÀÄ°è G½zÀÄPÉÆArzÀÝ Cwy UÀȺÀzÀ §½ C°è£À ¸ÀܽAiÀÄgÀÄ ¥Àæw¨sÀl£É £ÀqɹzÀÝgÀÄ. EAvÀºÀ ªÀÄÆRðjUÉ £ÀªÀÄä d£À¥Àæw¤¢üUÀ¼ÁzÀ C¥ÀàZÀÄÑ gÀAd£ï, ¹àÃPÀgï ¨ÉÆÃ¥ÀAiÀÄå ªÀÄÄAvÁzÀªÀgÀÄ PÉÊ eÉÆÃr¹zÀÝgÀÄ. F ¥Àæw¨sÀl£ÉAiÀÄ »AzÉ ªÀÄgÀUÀ¼À PÀ¼Àî ¸ÁUÁtÂzÁgÀgÀÄ ªÀÄvÀÄÛ CgÀtå ¨sÀÆ«ÄAiÀÄ£ÀÄß CPÀæªÀĪÁV PÁ¦ü vÉÆÃlUÀ¼ÁV ¥ÀjªÀwð¹PÉÆArgÀĪÀ ¥Àæ¨sÁ« gÁdPÁgÀtÂUÀ¼À PÉʪÁqÀ«gÀĪÀÅzÀÄ ºÉÆgÀ dUÀwÛUÉ FUÀ UÀÄmÁÖV G½¢®è.
AiÀÄģɸÉÆÌ ¸ÀA¸ÉÜ ¥À²ÑªÀÄWÀlÖUÀ¼À°è UÀÄgÀÄw¹gÀĪÀ 39 ¥ÁgÀA¥ÀjPÀ vÁtUÀ¼À°è PÀ£ÁðlPÀzÀ°è ¥ÀĵÀàVj, §æºÀäVjAiÀÄ vÀ¥Àà®Ä ¥ÀæzÉñÀ, vÀ®PÁªÉÃjAiÀÄ PÀtªÉ, PÀÄzÀÄgÉ ªÀÄÄR C¨sÀAiÀiÁgÀtå ªÀÄvÀÄÛ ¥ÀªÀðvÀ,¥ÀæzÉñÀ, ¸ÉÆêÉÄñÀégÀ C¨sÀAiÀiÁgÀtå ªÀÄvÀÄÛ «Ä¸À®Ä CgÀtå, DUÀÄA¨ÉAiÀÄ Vj±ÉæÃt ªÀÄvÀÄÛ CgÀtå  ªÀÄvÀÄÛ §®ºÀ½îAiÀÄ «ÄøÀ®Ä CgÀtå ¥ÀæzÉñÀ. ¸ÉÃjªÉ. EªÉ®èªÀÇ PÉÆqÀUÀÄ, aPÀ̪ÀÄUÀ¼ÀÆgÀÄ ªÀÄvÀÄÛ zÀQët PÀ£ÀßqÀ f¯ÉèUÀ½UÉ ¸ÉÃjzÀ ¥ÀæzÉñÀUÀ¼ÁVgÀĪÀÅzÀÄ «±ÉõÀ. MªÉÄä F ¥ÀæzÉñÀUÀ½UÉ AiÀÄģɸÉÆÌ ªÀiÁ£ÀåvÉ zÉÆgÉvÀ £ÀAvÀgÀ EªÀÅUÀ¼À gÀPÀëuÉUÁV ºÉÃgÀ¼À zsÀ£À ¸ÀºÁAiÀÄ, AiÀÄģɸÉÆÌ ¸ÀA¸ÉܬÄAzÀ ºÀjzÀÄ §gÀ°zÉ. eÉÆvÉUÉ J¯Áè «zsÀªÁzÀ PÀ¼Àî¸ÀUÁtÂPÉ, CgÀtå £Á±À EªÀÅUÀ½UÉ PÀrªÁt ©Ã¼À°zÉ. F PÁgÀtPÁÌV PÉÆqÀUÀÄ f¯ÉèAiÀÄ°è £ÀPÀ° ºÉÆÃgÁlUÀgÀgÀÄ ¥Àæw¨sÀl£ÉAiÀÄ £É¥ÀzÀ°è ¥À²ÑªÀÄ WÀlÖzÀ fêÀ ªÉÊ«zsÀåvÉUÉ «µÀªÀÅt¸À®Ä ºÉÆgÀnzÁÝgÉ.
PÉÆqÀV£À CgÀtå ªÀÄvÀÄÛ ªÀ£ÀåfëUÀ¼À£ÀÄß G½¹PÉƼÀÄîªÀÅzÀÄ £ÀªÀÄUÉ UÉÆwÛzÉ JAzÀÄ ªÀiÁzsÀåªÀÄUÀ¼À ªÀÄÄAzÉ §qÁ¬Ä PÉÆaÑPÉƼÀÄîªÀ F C«ªÉÃQUÀ½UÉ PÉÆqÀUÀÄ f¯ÉèAiÀÄ ¥Àj¸ÀgÀzÀ ¥Àj¹ÜwAiÀÄ eÁÕ£À«zÀÝAw®è.
C©üªÀÈ¢Þ, ¥ÀæªÁ¸ÉÆÃzÀåªÀÄ ªÀÄvÀÄÛ PÁ¦ü, ZÀºÁ vÉÆÃlUÀ¼À «¸ÀÛgÀuɬÄAzÁV QvÀÛ¯ÉAiÀÄ £ÁqÁVzÀÝ, zÀQëtzÀ PÁ²ägÀªÉAzÀÄ PÀgɹPÉÆArzÀÝ PÉÆqÀUÀÄ f¯Éè, CgÀtåzÀ ªÀÄgÀUÀ¼À ªÀiÁgÀtºÉÆêÀÄ¢AzÀ ¨ÉÆüÀÄUÀÄqÀØUÀ¼À gÀÄzÀæ ¨sÀÆ«ÄAiÀiÁVzÉ.
¨sÁgÀvÀzÀ°è ¥Àæw ªÀµÀð ±ÉÃ.12 gÀµÀÄÖ ¥ÀæªÀiÁtzÀ°è CgÀtå £Á±ÀªÁUÀÄwÛzÀÝgÉ, PÉÆqÀUÀÄ f¯ÉèAiÀÄ°è ¥Àæw ªÀµÀð ±É.18 gÀµÀÄÖ CgÀtå £Á±ÀªÁUÀÄwÛzÉ.


ªÀÄĪÀvÀÄÛ ªÀµÀðUÀ¼À »AzÉ PÉÆqÀUÀÄ f¯ÉèAiÀÄ°è,ªÁ¶PÀ ªÀļÉAiÀÄ ¸ÀgÁ¸Àj ¥ÀæªÀiÁt 2717 gÀµÀÄÖ EzÀÝzÀÄÝ, FUÀ ¸ÀgÁ¸Àj 900 «Ä.«Ä. ¬ÄAzÀ 1100 «Ä° «ÄÃlgï UÉ PÀĹ¢zÉ. dÆ£ï ¤AzÀ CPÉÆÖçgï wAUÀ½£ÀªÀgÉUÉ EzÀÝ ªÀļÉUÁ®zÀ ¢£ÀUÀ¼À°è 12 ªÀļÉAiÀÄ ¢£ÀUÀ¼ÀÄ PÀrªÉÄAiÀiÁVªÉ. F ¥ÀæªÀiÁt EwÛZÉUÉ ªÀµÀðPÉÌ £Á®ÄÌ ¢£ÀUÀ¼ÀÄ PÀrªÉÄAiÀiÁUÀÄwÛgÀĪÀÅzÀ£ÀÄß ¸ÀºÀ vÀdÕgÀÄ zÁR°¹zÁÝgÉ.
1980- 1990 gÀ £ÀqÀÄªÉ ¨ÉùUÉAiÀÄ ¢£ÀUÀ¼À°è 28 jAzÀ 31 ¸É°ìAiÀĸï rVæ EgÀÄwÛzÀÝ GµÁÚA±À FUÀ 35 jAzÀ 38 ¸É°ìAiÀĸï rVæUÉ zsÁÀR¯ÁUÀÄwÛzÉ.
ªÁvÁªÀgÀtzÀ°è, 1960 gÀ°è ¥Àæw «Ä°UÁæA UÉ ±ÉÃ,1.6 gÀµÀÄÖ EzÀÝ EAUÁ¯ÁªÀÄèzÀ ¥ÀæªÀiÁt 2010 gÀ ªÉüÉUÉ ±ÉÃ.6.6gÀµÀÄÖ zÁR¯ÁVzÉ. F ¥ÀæªÀiÁt FUÀ ªÀµÀðªÉÇAzÀPÉÌ ±ÉÃ.0.3 gÀµÀÄÖ ºÉZÀÄÑwÛzÉ.
PÉÆqÀUÀÄ f¯ÉèAiÀÄ ¥Àj¸ÀgÀ £Á±À PÀÄjvÀAvÉ PÀtÂÚUÉ gÁZÀĪÀAvÉ EµÉÖ¯Áè CAQ CA±ÀUÀ¼ÀÄ, PÀlÄ ªÁ¸ÀÛªÀzÀ ¸ÀvÀåUÀ¼ÀÄ £ÀªÉÄäzÀÄgÀÄ EgÀĪÁUÀ ¥À²ÑªÀÄWÀlÖzÀ eÉÊ«PÀ vÉÆnÖ°£À gÀPÀëuÉ ªÀÄÄAzÁVgÀĪÀ AiÀÄģɸÉÆÌ AiÉÆÃd£ÉUÉ CqÀØUÁ®Ä ºÁPÀÄwÛgÀĪÀ £ÀªÀÄä d£À¥Àæw¤¢UÀ¼ÀÄ ªÀÄvÀÄÛ PÀtÄäaÑ PÀĽvÀ ¸ÀPÁðgÀªÀ£ÀÄß £ÁªÀÅ K£ÉAzÀÄ PÀgÉAiÉÆÃt?