ಶನಿವಾರ, ನವೆಂಬರ್ 1, 2014

ಕೋಮುವಾದದ ನೆಲೆಗಳು ಮತ್ತು ಗ್ರಹಿಕೆಯ ದೋಷಗಳು



ಹಲವಾರು ಭಾಷೆ ಮತ್ತು ಧರ್ಮಗಳ ಸಂಗಮದ ನೆಲವಾದ ಭಾರತವನ್ನು ನಾವು ಬಹುಸಂಸ್ಕತಿಯ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆ. ಇಂತಹ ನಿಜವಾದ ಅರ್ಹತೆ ದೇಶಕ್ಕೆ ಇಂದಿನ ದಿನಮಾನಗಳಲ್ಲಿ ಇದೆಯಾ? ಎಂಬ ಪ್ರಶ್ನೆಯನ್ನು ನಮ್ಮ ನಮ್ಮ ಅಂತರಂಗಕ್ಕೆ ಹಾಕಿಕೊಂಡಾಗ ಮನಸ್ಸು ಮೌನ ಮತ್ತು ಮುಜುಗರದಿಂದ ಮುದುಡಿಹೋಗುತ್ತದೆ. ಭಾರತದ ನಿಜವಾದ ಚರಿತ್ರೆ ಯಾವುದು? ಎಂಬ ಪ್ರಶ್ನೆಯೂ ನಮ್ಮನ್ನು ತೀವ್ರವಾಗಿ ಕಾಡುತ್ತದೆ.
ಇವೊತ್ತಿಗೂ ಭಾರತದ ನೈಜ ಇತಿಹಾಸವೆಂಬುದು ಪ್ರಾಮಾಣಿಕವಾಗಿ ದಾಖಲಾಗಿಲ್ಲ. ಕ್ರಿ.. ಒಂದನೆಯ ಶತಮಾನದಿಂದ ಹಿಡಿದು ಹದಿನಾರು ಅಥವಾ ಹದಿನೇಳನೆಯ ಶತಮಾನದವರೆಗೆ ಭಾರತದಲ್ಲಿ ಪ್ರವಾಸ ಮಾಡಿದ ಚೀನಾ ಯಾತ್ರಿಕರುಪೋರ್ಚುಗೀಸರು, ಡಚ್ಚರು  ಮುಂತಾದ ಪ್ರವಾಸಿಗರ ದಿನಚರಿಯ ಪುಟಗಳ ಆಧಾರದ ಮೇಲೆ ಭಾರತದ ಇತಿಹಾಸ ಮತ್ತು ವಸ್ತುಸ್ಥಿತಿ ದಾಖಲಾಗಿದೆ. ಆನಂತರದ ದಿನಗಳಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಬ್ರಿಟಿಷ್ ವಿದ್ವಾಂಸರು ಬರೆದ ಇತಿಹಾಸವೆಲ್ಲವೂ ಭಾರತದ ಅಧಿಕೃತ ಚರಿತ್ರೆಯಾಯಿತು.
ನೆಲದ ಸಂಸ್ಕøತಿಗೆ ಸಂಬಂಧಪಡವರ ಹಾಗೂ ಪಾಶ್ಚಿಮಾತ್ಯ ಕಣ್ಣಿನಿಂದ ನೋಡಿದ ಹಾಗೂ ಹೃದಯದಿಂದ ಗ್ರಹಿಸಿದವರ ಚಿಂತನೆಗಳು ಮತ್ತು ಕೃತಿಗಳು ನಮ್ಮ ಪಾಲಿಗೆ ಇತಿಹಾಸ ಪಠ್ಯಗಳಾದವು. ಆದರೆ  ಅವುಗಳಲ್ಲಿ ಬಹುತೇಕ ಪಾಲು ಒಂದೇ ಮಗ್ಗುಲಿನ ಚರಿತ್ರೆಯಾಗಿ ರೂಪುಗೊಂಡಿರುವುದನ್ನು  ಅಲ್ಲಗೆಳೆಯಲಾಗದು. ಕಾರಣದಿಂದಾಗಿ ಭಾರತದ ಚರಿತ್ರೆಯ ಮೂಲ ನೆಲೆಗಳನ್ನು ತೆರೆದ ಹೃದಯದಿಂದ ಶೋಧಿಸಿ, ಹೊಸ ಇತಿಹಾಸವನ್ನು ಸೃಷ್ಟಿಸುವ ಅಗತ್ಯವಿದೆ.


ಭಾರತದ ಇತಿಹಾಸದ ಉದ್ದಕ್ಕೂ ಸಾಮ್ರಾಜ್ಯದ ವಿಸ್ತರಣೆಗಾಗಿ ಮತ್ತು  ಹೆಣ್ಣಿಗಾಗಿ ಹಾಗೂ ಧರ್ಮದ ಮೇಲುಗೈಗಾಗಿ ಅನೇಕ ರಕ್ತ ಪಾತಗಳು, ಕದನಗಳು  ಜರುಗಿಹೋಗಿವೆ. ಜೊತೆಗೆ  ಅವುಗಳಲ್ಲಿ ಕೆಲವು ಸಂಘರ್ಷಗಳಿಗೆ ಕೋಮುವಾದ ಸಂಘರ್ಷದ ಲೇಪನ ಬಳಿಯಲಾಗಿದೆ. ಅದೇ ರೀತಿ ಭಾರತದ ಅಮೂಲ್ಯ ಸಂಪತ್ತಿನ ಲೂಟಿಗಾಗಿ ದಂಡೆತ್ತಿ ಬಂದ ವಿದೇಶಿ ದಾಳಿಕೋರರ ಕೃತ್ಯಗಳನ್ನು ( ಮಹಮ್ಮದ್ ಘಜನಿ, ಮಹಮ್ಮದ್ ಘೋರಿ, ತೈಮೂರ್ ಇತ್ಯಾದಿ) ಅವರು ದೇವಸ್ಥಾನಗಳ ಮೇಲೆ ದಾಳಿ ಮಾಡಿದ ಕಾರಣಕ್ಕಾಗಿ ಹಿಂದೂ ಧರ್ಮದ ಮೇಲಿನ ದಾಳಿ ಎಂದು ಇತಿಹಾಸದ ಪುಟಗಳಲ್ಲಿ ಬಣ್ಣಿಸಲಾಗಿದೆ. ಇಂತಹ ಅನೇಕ ಅರ್ಧಸತ್ಯದಿಂದ ಕೂಡಿದ ಘಟನೆಗಳು ನಮ್ಮ ಪಾಲಿಗೆ ಇತಿಹಾಸವಾಗಿ ಬೋಧಿಸಲ್ಪಡುತ್ತಿರುವುದು ನಮ್ಮ ಪಾಲಿನ ದುರಂತ.
ಭಾರತದಂತಹ ಬಹು ಸಂಸ್ಕತಿಯ ನೆಲದಲ್ಲಿ ಜನಾಂಗೀಯ ಘರ್ಷಣೆಗಳು, ಧರ್ಮ ಕುರಿತಂತೆ ಕೋಮು ಘರ್ಷಣೆಗಳು ಹೊಸ ಸಂಗತಿಗಳೇನಲ್ಲ. ಕ್ರಿಸ್ತಪೂರ್ವದ ಬುದ್ಧ ಮತ್ತು ಮಹಾವೀರರ ಅನುಯಾಯಿಗಳ ಬಡಿದಾಟ ಮತ್ತು ಸಾಮೂಹಿಕ ಕಗ್ಗೊಲೆಯಿಂದ  ಹಿಡಿದು ಇಪ್ಪತ್ತೊಂದನೆಯ ಶತಮಾನದ ಕೋಮುವಾದದ ಹಿಂಸೆಯ ಅಧ್ಯಾಯಗಳವರೆಗೂ ಮುಂದುವರಿದಿದೆ. ಭಾರತದ ಚರಿತ್ರೆಯಲ್ಲಿ ಬೌದ್ದರು -ಜೈನರು, ಹಿಂದೂಗಳ - ಸಿಖ್ಖರು, ಸಿಖ್ಖರು - ಮುಸ್ಲಿಮರು, ಹಿಂದೂಗಳು - ಕ್ರೈಸ್ತರುಹಿಂದೂಮುಸ್ಲಿಮರು ಹೀಗೆ ಎಲ್ಲರೂ ತಮ್ಮ ಬದುಕಿನುದ್ದಕ್ಕೂ ಹೊಡೆದಾಡಿಕೊಂಡು ಬಂದಿದ್ದಾರೆ. ಅನ್ಯ ಧರ್ಮಗಳ ಬಗೆಗಿನ ಪ್ರೀತಿಸಹಿಷ್ಣುತೆ ಮತ್ತು ಗೌರವ ಇವುಗಳಿಗಿಂತ ಹೆಚ್ಚಾಗಿ  ದ್ವೇಷವೇ ಧರ್ಮದ ಮೂಲವೆಂತಾಗಿರುವ ದಿನಮಾನಗಳಲ್ಲಿ ಧರ್ಮಗಳ ಕುರಿತಂತೆ ಮಾತನಾಡುವಾಗ ಅಥವಾ ಬರೆಯುವಾಗ ಜಾಗೃತ ಮನಸ್ಸಿನಿಂದ ನಾವು ಸದಾ ಎಚ್ಚರಗೊಂಡಿರಬೇಕು.



ಇಂದಿನ ದಿನಗಳಲ್ಲಿ ಕೋಮುವಾದ ಎಂದರೆ ಅದು ಹಿಂದೂ ಅಥವಾ ಮುಸ್ಲಿಂ ಧರ್ಮ ಕುರಿತಾಗಿ ಹೊಂದಿರುವ ಭಾವನೆಗಳು ಎಂದು ನಂಬಿಕೊಂಡು ಬರಲಾಗಿದೆ. ಇವೆರೆಡಕ್ಕೂ ಮೀರಿ ಅಂದರೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ  ಬುದ್ಧನ ಮಧ್ಯಮ ಮಾರ್ಗದಲ್ಲಿ ನಡೆದು  ಧರ್ಮ ನಿರಪೇಕ್ಷ ಪ್ರಜ್ಞೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಜಗತ್ತನ್ನು  ನೋಡುವ ವ್ಯಕ್ತಿಗಳನ್ನು ಮಾಕ್ರ್ಸ್ ಚಿಂತನೆಯ ವಾರಸುದಾರರು ಅಥವಾ ಎಡಪಂಥಿಯರು ಎಂಬ ಹಣೆಪಟ್ಟಿಯೊಂದಿಗೆ ಕರೆಯಲಾಗುತ್ತಿದೆ. ಜೊತೆಗ  ಇವರೆಲ್ಲರೂ ಇಸ್ಲಾಂ ಧರ್ಮದ ಸಹಾನುಭೂತಿಗಳು ಮತ್ತು ಹಿಂದೂ ಧರ್ಮದ ದಂಗೆಕೋರರು ಎಂದು ಬಣ್ಣಿಸಿಕೊಂಡು ಬರಲಾಗಿದೆ. ಇತಿಹಾಸವೆಂಬುದು ಕೇವಲ ಘಟಿಸಿಹೋದ ಘಟನೆಯೊಂದರ ಕುರಿತ ಮಾಹಿತಿ ಮಾತ್ರವಲ್ಲ, ಅದು ಮನುಷ್ಯ ಕುಲವು ತನ್ನ ಅವಿವೇಕತನದಿಂದ  ಎಸಗಿದ ಅಪರಾಧಗಳಿಗೆ ಸಾಕ್ಷಿ ಕೂಡ ಹೌದು. ಜೊತೆಗೆ ಅಂತಹ ತಪ್ಪುಗಳನ್ನು ಮಾನವಕುಲ ಮತ್ತೇ ಎಸಗದಂತೆ ದಾರಿ ತೋರಿಸುವ, ಎಚ್ಚರಿಸುವ ದಾರಿ ದೀಪ ಕೂಡ ಹೌದು. ಆದರೆ ಇಂದು ಇತಿಹಾಸ ಮಾಹಿತಿಗಳು ಭಾರತೀಯ ಸಮುದಾಯಗಳ ಪಾಲಿಗೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ  ತಮ್ಮ ಪೂರ್ವಿಕರು ಅನುಭವಿಸಿದ ನೋವಿಗೆ ಸೇಡು ತೀರಿಸಿಕೊಳ್ಳುವ ಆಯುಧಗಳಾಗಿ ಬಳಸಲ್ಪಡುತ್ತಿವೆ. ಇಂತಹ ಪೈಶಾಚಿಕ ಮನೋಭಾವವು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೆಚ್ಚಾಗಿ ಸಾಮಾಜಿಕ ವ್ಯಾಧಿಯಾಗಿ, ನೋವಾಗಿ ಸುಸಂಸ್ಕø ನಾಗರೀಕ ಸಮಾಜವನ್ನು ಕಾಡುತ್ತಾ ಬಾಧಿಸುತ್ತಿದೆ.
ಏಷ್ಯಾದ ಅಥವಾ ಅವಿಭಜಿತ ಭಾರತ ಉಪಖಂಡದ ಶತಮಾನದ ಅತಿಘೋರ ಮಾನವ ದುರಂತ ಎಂದು ಬಣ್ಣಿಸಲಾದ ಹಾಗೂ ಭಾರತದ ವಿಭಜನೆಯ ಸಂದರ್ಭದಲ್ಲಿ ಉಂಟಾದ ಹಿಂದೂಮುಸ್ಲಿಂ - ಸಿಖ್ಕರ ನಡುವಿನ ಕೋಮುಗಲಭೆಯಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರೆ, ಲಕ್ಷಾಂತರ ಕುಟುಂಬಗಳು ಬೀದಿಪಾಲಾದವು. ಇತಿಹಾಸದ ಇಂತಹ ಘೋರ ದುರಂತದಿಂದ ಭಾರತ, ಪಾಕ್ ನಾಗರೀಕರು ಎಂದಿಗೂ  ಪಾಠ ಕಲಿಯಲೇ ಇಲ್ಲ. 1947 ರಿಂದ ದೇಶದಲ್ಲಿ ನಿರಂತರ ನಡೆದ ಅಸಂಖ್ಯಾತ ಕೋಮುಘಲಭೆಗಳ ನಡೆದವು.  1984 ಅಕ್ಟೋಬರ್ 30 ರಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯ ನಂತರ  ರಾಜಧಾನಿ ದೆಹಲಿ ನಗರದ ಸೇರಿದಂತೆ ವಿವಿಧೆಡೆ ನಡೆದ ಸಿಖ್ಖರ ನರಮೇಧ ಹಾಗೂ 2002 ರಲ್ಲಿ ಗುಜರಾತಿನ ಗೋದ್ರಾದಲ್ಲಿ ನಡೆದ ಕೋಮುಗಲಭೆ ಇವೆಲ್ಲವೂ ಭಾರತದ ಇತಿಹಾಸಕ್ಕೆ ಅಂಟಿದ ಕಪ್ಪು ಚುಕ್ಕೆಗಳು ಎಂದು ದಾಖಲಿಸಬಹುದು. ಇಂತಹ ಅಮಾನವೀಯ ಘಟನೆಗಳಿಗೆ ಮತ್ತು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಹಿಂದೂ - ಮುಸ್ಲಿಂ ಸಂಘಟನೆಗಳು ಇಂದಿಗೂ ತೆರೆ ಮರೆಯಲ್ಲಿ ಕ್ರಿಯಾಶೀಲವಾಗಿರುವುದು ಭಾರತದ ನಾಗರೀಕ ಜಗತ್ತು ತಲೆ ತಗ್ಗಿಸುವ ಸಂಗತಿಯಾಗಿದೆ.


ಧರ್ಮ, ಜಾತಿಗಿಂತ ಮಾನವೀಯತೆ ದೊಡ್ಡದು ಮತ್ತು ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಮಾನವ ಜೀವಿಗಳ ಪ್ರಾಣ ಅಮೂಲ್ಯವಾದುದು ಎಂಬ ಕನಿಷ್ಟ ತಿಳುವಳಿಕೆಯಿಲ್ಲದೆ ಪ್ರತಿಯೊಂದು ಕೋಮಿನ ಸಂಘಟನೆಗಳು ಇತಿಹಾಸದಲ್ಲಿ ಜರುಗಿದ ಘಟನೆಗಳಿಗೆ ಸೇಡು ತೀರಿಸಿಕೊಳ್ಳುವ ತವಕದಲಿ ತಮ್ಮ ತಮ್ಮ ಸಮುದಾಯದಲ್ಲ್ಲಿ ಕೋಮುವಾದವನ್ನು ಉದ್ದೇಪಿಸುತ್ತಿವೆ. ಇವುಗಳಲ್ಲಿ ಹಿಂದೂ ಧರ್ಮವನ್ನು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವ ಸಂಘ ಎಂಬ ಸಂಘಟನೆ ಪ್ರಮುಖವಾದುದು. ಹಿಂದೂ ಮಹಾ ಸಭಾ ಹೆಸರಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಕ್ರಿಯಾಶೀಲವಾಗಿದ್ದ ಸಂಸ್ಥೆ ಅಂತಿಮವಾಗಿ 1948 ಜನವರಿಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಬಲಿ ತೆಗೆದುಕೊಳ್ಳುವುದರ ಮೂಲಕ ನಿಷೇಧಕ್ಕೆ ಒಳಪಟ್ಟಿತು. ಆನಂತರ ಸಾಂಸ್ಕತಿಕ ಸಂಘಟನೆ ಎಂದು ಹೇಳಿಕೊಳ್ಳುವುದರ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರಿನಲ್ಲಿ ತಲೆ ಎತ್ತಿದ ಸಂಘಟನೆ ದೇಶ ಸೇವೆ ಮತ್ತು ಸಾಮಾಜಿಕ ಸೇವೆಗಿಂತ ಧರ್ಮದ ನೆಪದಲ್ಲಿ ಮನುಷ್ಯ ಮನುಷ್ಯರ ನಡುವೆ ಅಪನಂಬಿಕೆಯ ಬೀಜಗಳನ್ನು ಬಿತ್ತಿ ದೇಶದಲ್ಲಿ ಕೋಮು ಗಲಭೆಯನ್ನು ಹರಡುವುದರಲ್ಲಿ ಯಶಸ್ವಿಯಾಯಿತು. ಸಂಸ್ಥೆ ದೇಶಾದ್ಯಂತ ಹುಟ್ಟು ಹಾಕಿರುವ ಅನೇಕ ವಿದ್ಯಾ ಸಂಸ್ಥೆಗಳ ಪಠ್ಯದಲ್ಲಿ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ಸೃಷ್ಟಿಸಿಕೊಂಡು ಎಳೆಯ ಮಕ್ಕಳ ಎದೆಯಲ್ಲಿ ವಿಷಬೀಜವನ್ನು ಬಿತ್ತಲಾಗುತ್ತಿದೆ. ಸಂಸ್ಥೆಯ ಕರಾಳ ಇತಿಹಾಸವನ್ನು ದೆಹಲಿ ಮೂಲದ ಇತಿಹಾಸ ತಜ್ಞರೂ ಸೇರಿದಂತೆ ದೇಶದ ಹಲವಾರು ಇತಿಹಾಸ ಪಂಡಿತರು ಕರಾರು ವಕ್ಕಾದ ಅಂಕಿ ಅಂಶಗಳೋಂದಿಗೆ  ರಚಿಸಿ ಸಂಪಾದಿಸಿರುವಆರ್.ಎಸ್.ಎಸ್. ಟೆಕ್ಸ್ಟ್ ಅಂಡ್ ದಿ ಮರ್ಡರ್ ಆಪ್ ಮಹಾತ್ಮಗಾಂಧಿಎಂಬ ಕೃತಿ ಆರ್.ಎಸ್.ಎಸ್. ಸಂಘಟನೆಯ ಮುಖವಾಡವನ್ನು ಕಳಚಿಹಾಕಬಲ್ಲ ಕೃತಿಯಾಗಿದೆ. ಭಾರತವನ್ನಾಳಿದ ಬ್ರಿಟಿಷರ ವಿರುದ್ಧ ಹೋರಾಡಿದ ಸಂದರ್ಭದಲ್ಲಿ ಜಾತಿ ಧರ್ಮದ ನೆಲೆಗಳನ್ನು ಮೀರಿ ಹೋರಾಡಿದ ಅನೇಕ ಮುಸ್ಲಿಂ ಹೋರಾಟಗಾರರ ಬಗ್ಗೆ ಇತಿಹಾಸದ ಪ್ರಜ್ಞೆಯಿಲ್ಲದ ಸಂಘಟನೆಯು ದೇಶ ಭಕ್ತಿ ಮತ್ತು ಧರ್ಮ ಭಕ್ತಿಯ ನೆಪದಲ್ಲಿ ಹಿಂದೂ ಯುವಕರನ್ನು ಮುಸ್ಲಿಂರ ವಿರುದ್ಧ ಎತ್ತಿಕಟ್ಟುವುದನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ. ಇಂತಹ ಆಪತ್ ಸಮಯದಲ್ಲಿ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿರುವ ಅನೇಕ ರಾಜಕೀಯ ಪಕ್ಷಗಳು ನಾಗರೀಕರನ್ನು ವಿಶ್ವ ಮಾನವ ಪ್ರಜ್ಞೆಯಿಂದ ದೂರ ಸರಿಸಿ, ಅವರನ್ನು ಪುನಃ ಜಾತಿ ಮತ್ತು ಧರ್ಮದ ನೆಲೆಯತ್ತ ಕೊಂಡೊಯ್ಯುತ್ತಿವೆ.

ಮನುಷ್ಯ ಕುಡಿಯುವ ನೀರಿಗೆ, ಉಸಿರಾಡುವ ಗಾಳಿಗೆ ಅಥವಾ ಆತನ ಬಡತನ, ಅಪಮಾನ, ಹಸಿವು, ನೋವು ನಿಟ್ಟುಸಿರು ಮತ್ತು ಆತನ ದೇಹದಲ್ಲಿ ಹರಿಯುವ ಬಿಸಿನೆತ್ತರಿಗೆ ಜಾತಿ ಧರ್ಮದ ಹಣೆಪಟ್ಟಿಯಿಲ್ಲ ಎಂಬ  ವಿವೇಕದ ಪ್ರಜ್ಞೆಯಿಲ್ಲದ  ವ್ಯಕ್ತಿ , ಆತ ಮುಸ್ಲಿಂಆಗಿರಲಿ, ಹಿಂದೂ ಆಗಿರಲಿ ಇಂತಹವನು ಮಾತ್ರ ಮೃಗದಂತೆ ವರ್ತಿಸಬಲ್ಲ. ಹಾಗಾಗಿ ವರ್ತಮಾನ ಜಗತ್ತಿನ ಧರ್ಮಗುರುಗಳು ನಮಗೆ ಆತ್ಮ ಸಾಕ್ಷಿ ಪ್ರಜ್ಞೆಯುಳ್ಳ ಮನುಷ್ಯರಂತೆ ಗೋಚರಿಸುವ ಬದಲಾಗಿ  ಧರ್ಮದೆಸರಿನಲ್ಲಿ ದ್ವೇಷ ಬಿತ್ತುವ ಪಿಶಾಚಿಗಳಂತೆ ಗೋಚರಿಸುತ್ತಾರೆ.
ಮಾತು ತೀರಾ ಕಠಿಣವೆನಿಸಿದರೂ ಸಹ ಹೇಳಲೇ ಬೇಕಾದ ವಾಸ್ತವ ಕಹಿ ಸಂಗತಿಯಿದು. ಧರ್ಮಾತೀತವಾಗಿ ಅಥವಾ ಜಾತ್ಯಾತೀತವಾಗಿ ಮಾತನಾಡುವುದು ಪ್ರಗತಿಪರ ಚಿಂತನೆಯ ಲಕ್ಷಣ ಎಂದುಕೊಂಡಿರುವ ನಾವು ಅನುಕಂಪದ ನೆಪದಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಕೂಡ ಮುಸ್ಲಿಂ ಜಗತ್ತನ್ನು ಆವರಿಸಿಕೊಂಡಿರುವ ಮೌಡ್ಯದ ಬಗ್ಗೆ ಚಕಾರವೆತ್ತುತ್ತಿಲ್ಲ. ಸ್ವತಃ ಅದೇ ಸಮುದಾಯದಿಂದ ಬಂದು ಅಕ್ಷರ ಲೋಕದ ಮೂಲಕ ವೈಚಾರಿಕ ಜಗತ್ತನ್ನು ಪ್ರವೇಶಿಸಿ, ಬಿಡುಗಡೆಗೊಂಡ ಮುಸ್ಲಿಂ ಲೇಖಕರಂತೂ ತಮ್ಮ ಧರ್ಮದ ಅನಿಷ್ಟ ಕಟ್ಟು ಪಾಡುಗಳ ಬಗ್ಗೆ ಧ್ವನಿಯೆತ್ತಿದ್ದು ತೀರಾ ಅಪರೂಪದ ಸಂಗತಿ ಎಂದು ಹೇಳಬೇಕು.
ಇತ್ತೀಚೆಗೆ ಲಂಡನ್ ಮೂಲದ ಬಿ.ಬಿ.ಸಿ. ಛಾನಲ್ ಮತ್ತು ಎಕನಾಮಿಸ್ಟ್ ಪತ್ರಿಕೆ ನಡೆಸಿರುವ ಅದ್ಯಯನಗಳು ಮುಸ್ಲಿಂ ಜಗತ್ತಿನ ಬಡತನವನ್ನು ಮತ್ತು ಮೌಡ್ಯವನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿವೆ. ತೀವ್ರ ಪೈಪೋಟಿಯಿಂದ  ಕೂಡಿರುವ ವರ್ತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಮಹುತೇಕ ಮುಸ್ಲಿಂರು ಶಿಕ್ಷಣದಿಂದ ವಂಚಿತರಾಗಿ  ಧರ್ಮದ ಪಂಜರದೊಳಗೆ ಬಂಧಿಯಾಗಿದ್ದಾರೆ. ಜಗತ್ತಿನಲ್ಲಿರುವ ಸುಮಾರು 162 ಕೋಟಿ ಮುಸ್ಲೀಮರಲ್ಲಿ ಶೇಕಡ 80 ರಷ್ಟು ಮಂದಿ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ 58 ರಾಷ್ಟ್ರಗಳಲ್ಲಿ ಅರಬ್ ರಾಷ್ಟ್ರಗಳನ್ನು ಹೊರತು ಪಡಿಸಿದರೆ, ಬಹುತೇಕ ರಾಷ್ಟ್ರಗಳು ಬಡತನದಲ್ಲಿ ಮುಳುಗಿಹೋಗಿವೆ. ಜಗತ್ತಿನ ಅತ್ಯಂತ ಬಡರಾಷ್ಟ್ರಗಳ ಪೈಕಿ ಪಾಕಿಸ್ಥಾನ, ಬಾಂಗ್ಲಾ, ಆಪ್ಘಾನಿಸ್ಥಾನ, ಸೋಮಾಲಿಯ, ನೈಜಿರಿಯಾ, ರುವಾಂಡ ಇವೆಲ್ಲವೂ ಮುಸ್ಲಿಂ ಧರ್ಮಗುರುಗಳು ಇಲ್ಲವೆ, ಬಂಡುಕೋರರು ಅಥವಾ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಮೂಲಕ ಪರೋಕ್ಷವಾಗಿ ಆಳಲ್ಪಡುತ್ತಿವೆ. ಒಟ್ಟು ಜಾಗತಿಕ ಸೇವೆ ಮತ್ತು ಸರಕುಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಕೊಡುಗೆ ಕೇವಲ ಐದರಷ್ಟು ಮಾತ್ರ.
ಭಾರತದ ಸ್ಥಿತಿ ಕೂಡ ಜಾಗತಿಕ ವಿದ್ಯಾಮಾನಕ್ಕಿಂತ ಭಿನ್ನವಾಗಿಲ್ಲ. ಭಾರತದ ಸುಮಾರು ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ 13 ಕೋಟಿ 80 ಲಕ್ಷ ಜನ ಮುಸ್ಲಿಂರಿದ್ದು, ಇವರಲ್ಲಿ ಶೇಕಡ 31 ರಷ್ಟು ಮಂದಿ ಕಡು ಬಡತನದಲ್ಲಿದ್ದಾರೆ. (ಭಾರತದ ಆದಿವಾಸಿಗಳ ನಂತರ ಇವರ ಸ್ಥಿತಿ ಎರಡನೆಯದು) ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 35.6 ರಷ್ಟು ಬಡವರಿದ್ದರೆ, ನಗರ ಪ್ರದೇಶದ ಕೊಳಚೆಗೇರಿಗಳಲ್ಲಿ ಶೇಕಡ 55.8 ರಷ್ಟು ಬಡವರಿದ್ದಾರೆ. ಇವರ ಸಾಕ್ಷರತಾ ಪ್ರಮಾಣದ ಸಂಖ್ಯೆ ಕೂಡ ಭಾರತದ ಸರಾಸರಿಗಿಂತ ಕಡಿಮೆಯಿದೆ. ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇಕಡ 65 ರಷ್ಟು ಇದ್ದರೆ, ಮದರಸಾ ಶಾಲೆಗಳ ಶಿಕ್ಷಣವೂ ಸೇರಿದಂತೆ ಮುಸ್ಲಿಂರ ಸಾಕ್ಷರತೆಯ ಪ್ರಮಾಣ ಶೇಕಡ 60 ರಷ್ಟಿದೆ. ಪ್ರತಿ 25 ಮಂದಿಗೆ ಒಬ್ಬ ಪದವೀಧರನಿದ್ದರೆ, ಪ್ರತಿ 55 ಮುಸ್ಲಿಂ ಮಂದಿಗೆ ಒಬ್ಬ ಸ್ನಾತಕೋತ್ತರ ಪದವೀಧರನಿದ್ದಾನೆ. ಉದ್ಯೋಗದಲ್ಲಿಯೂ ಕೂಡ ಇವರ ಸ್ಥಿತಿ  ಚಿಂತಾಜನಕವಾಗಿದೆ. ಭಾರತೀಯ ಸೇನೆಯಲ್ಲಿ ಶೇಕಡ 3ರಷ್ಟು, ಸರ್ಕಾರಿ ನೌಕರಿಯಲ್ಲಿ ಶೇಕಡ 7ರಷ್ಟು, ರೈಲ್ವೆಯಲ್ಲಿ ಶೇಕಡ 5ರಷ್ಟು, ಬ್ಯಾಂಕುಗಳಲ್ಲಿ ಶೇಕಡ 3.2 ರಷ್ಟು, ಮತ್ತು ನ್ಯಾಯಾಂಗ ಇಲಾಖೆಯಲ್ಲಿ ಶೇಕಡ 7.8 ರಷ್ಟು ಮತ್ತು ಭಾರತೀಯ ನಾಗರೀಕ ಸೇವೆಯಂತಹ ಅತ್ಯುನ್ನುತ ಹುದ್ದೆಯಲ್ಲಿ ಶೇಕಡ 1.8 ರಷ್ಟು ಇದ್ದಾರೆ.

ಭಾರತದ ಬಹುತೇಕ ಗ್ರಾಮಾಂತರದ ಪ್ರದೇಶದ ಶೇಕಡ 60 ರಷ್ಟು ಮಂದಿ ಮುಸ್ಲಿಂರು ಭೂರಹಿತ ಕೃಷಿ ಕಾರ್ಮಿಕರಾಗಿದ್ದು, ಸರ್ಕಾರಿ ಸಬ್ಸಿಡಿ ಯೋಜನೆಗಳಿಂದ ವಂಚಿತರಾಗಿರುವ ಕುಟುಂಬಗಳ ಪ್ರಮಾಣ ಸರಾಸರಿ ಐವತ್ತನ್ನು ದಾಟುತ್ತದೆ. ನಗರ ಪ್ರದೇಶಗಳಲ್ಲಿರುವ ಮುಸ್ಲಿಂರ ಸ್ಥಿತಿ ಗತಿಗಳಲ್ಲೂ ಕೂಡ ವೆತ್ಯಾಸ ಕಾಣುವುದಿಲ್ಲ. ಆದರೆ ಮುಸ್ಲಿಂ ಧರ್ಮಗುರುಗಳು ಹಳ್ಳಿ ಮತ್ತು ನಗರಗಳು ಎಂಬ ಬೇಧಭಾವವಿಲ್ಲದೆ, ಝಗಮಗಿಸುವ ವೈಭವೋಪೇತ ಮಸೀದಿಗಳನ್ನು ಕಟ್ಟಿಸಿ, ದಿನಕ್ಕೆ ಐದು ಬಾರಿ ನಮಾಜು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಹೊಟ್ಟೆಗೆ ಅನ್ನ, ನೆತ್ತಿಯ ಮೇಲೊಂದು ಸೂರು ಇರದಿದ್ದರೂ ಸರಿಯೇ ದೇವರ ಪ್ರಾರ್ಥನೆಯನ್ನು ಕಡ್ಡಾಯವಾಗಿ ಮಾಡಬೇಕು. ಇಂದು ಮಸೀದಿಗಿಂತ ಮುಖ್ಯವಾಗಿ  ಬೇಕಿರುವುದು ಶಾಲೆ ಮತ್ತು ಶೌಚಾಲಯ ಎಂಬ ಅರಿವು ಇವರಿಗಿಲ್ಲವಾಗಿದೆ.
ಹಿಂದೂಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಕೊಳೆಯುತ್ತಿರುವ ಧಾರ್ಮಿಕ ಗೊಡ್ಡು ಮನಸ್ಸುಗಳಿಗೆ ಶಿಕ್ಷಣ ಮತ್ತು ಜ್ಞಾನ ಇವುಗಳು ಬಡತನ ಎಂಬ ನರಕದಿಂದ ಪಾರು ಮಾಡಬಲ್ಲ ಏಕೈಕ ಪರಿಣಾಮಕಾರಿ ಮಾರ್ಗ ಎಂಬ ಸತ್ಯ ಗೊತ್ತಿಲ್ಲ. ಹಾಗಾಗಿ ಕೋಮುವಾದವೆಂಬುದು ಜಗತ್ತಿನಾದ್ಯಂತ  ರಕ್ತ ಬೀಜಾಸುರನಂತೆ ವಿವಿಧ ರೂಪ ತಾಳುತ್ತಿದೆ. ನಿಟ್ಟಿನಲ್ಲಿ ನಮ್ಮ ಗ್ರಹಿಕೆಯ ನೆಲೆಗಳು ಕೂಡ ಬದಲಾಗಬೇಕಿದೆ. ಕಾರಣಕ್ಕಾಗಿ ಕಾರ್ಲ್ ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಿದ್ದ. ಅವನ ಚಿಂತನೆಇಂದಿಗೂ ಕೂಡ ಬದಲಾಗದೆ ಉಳಿದಿರುವುದು ವರ್ತಮಾನ ಜಗತ್ತಿನ ದುರಂತ.

            ( ಅಭಿಮನ್ಯು ಪಾಕ್ಷಿಕ ಪತ್ರಿಕೆಯ ದೀಪಾವಳಿ ಮತ್ತು ರಾಜ್ಯೋತ್ಸವ ವಿಶೇಷ ಸಂಚಿಕೆಗೆ ಬರೆದ ಲೇಖನ)


ಗುರುವಾರ, ಅಕ್ಟೋಬರ್ 30, 2014

ಬಿಳಿ ಸಾಹೇಬನ ಭಾರತ- ಒಂದು ನೋಟ


ಡಾ.ಎನ್. ಜಗದೀಶ್ ಕೊಪ್ಪ ಅವರಬಿಳಿ ಸಾಹೇಬನ ಭಾರತಪುಸ್ತಕವು ಜಿಮ್ ಕಾರ್ಬೆಟ್ ಅದ್ಭುತ ಬೇಟೆ ಕೇವಲ ರೋಮಾಂಚನ ಕಥೆ ಮಾತ್ರವಲ್ಲ ಆತನೊಬ್ಬ ನಿಸರ್ಗಪ್ರೇಮಿ, ಮಾನವತಾವಾದಿ, ಬ್ರಿಟಿಷ್ ರಾಜ್ಯಕ್ಕೆ ಬೇಕಾಗಿದ್ದ ಅಡವಿತಜ್ಞ ಎಂಬ ಮಾಹಿತಿಗಳನ್ನು ಒದಗಿಸುತ್ತದೆ. ಕನ್ನಡ ಭರತ ಭೂಮಿಯ ಆಧ್ಯಾತ್ಮವನ್ನು ನಿಸರ್ಗವನ್ನು ಕುವೆಂಪು ಹೇಗೆ ಔನ್ನತ್ಯದಲ್ಲಿ ಲೇಖಿಸಿದರೋ ಹಾಗೆ ಅವರ ಮಗ ತೇಜಸ್ವಿ ಜಿಮ್ ಕಾರ್ಬೆಟ್ನಂತಹ ವಿಶ್ವಕೌತುಕಗಳನ್ನು ಕನ್ನಡಕ್ಷರಗಳಲ್ಲಿ ತಂದು ವಿಸ್ಮಯ ಮೂಡಿಸಿದರು. ಆಗ ಲಂಕೇಶ ಪತ್ರಿಕೆ ಓದುವ ನಮಗೆಲ್ಲಾ ಹಿಮಾಲಯದೊಳಗೆ ಬರೀ ಜಗದಚ್ಚರಿಯ ಬಿಳಿನೊರೆಯಿಲ್ಲ ನರಬೇಟೆಯ ಕ್ರೌರ್ಯಗಳಿವೆ; ಕ್ರೌರ್ಯವನ್ನು ಹದಗೊಳಿಸುವ ಜಿಮ್ಕಾರ್ಬೆಟ್ನಂತವರಿದ್ದರು ಎಂಬರಿವಾಗಿತ್ತು. ಜಿಮ್ಕಾರ್ಬೆಟ್ನನ್ನು ಮತ್ತಷ್ಟು ತಿಳಿದುಕೊಂಡಿದ್ದ ಲಂಕೇಶ್; ಕಾರ್ಬೆಟ್ ಕೇವಲ ಬೇಟೆಗಾರನಲ್ಲ ಅವನೊಬ್ಬ ನಿಸರ್ಗಪ್ರೇಮಿ ಎಂಬ ಉಪದೇಶ ಜಾಡು ಹಿಡಿದು ಸ್ಥಳ ಸಂಶೋಧನೆ ಮಾಡುತ್ತಾ ಕೊಪ್ಪ ಅವರು ಒಂದು ಕೃತಿಯನ್ನು ತಂದು ಬಿಳಿಸಾಹೇಬನನ್ನು ಕನ್ನಡಕ್ಕೆ ಅತ್ಯಂತ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಾರೆ. ಕರ್ನಾಟಕದ ಪಶ್ಚಿಮ ತೀರದ ಅಡವಿಯ ಲೋಕದೊಳಗಿನ ತಲ್ಲಣಗಳಿಗೆ ಕೋವಿ ಹಿಡಿದು ಹಿಂಸೆಯನ್ನು ನಿಯಂತ್ರಿಸಿ ಅಹಿಂಸೆಯ ದಾರಿತೋರಿದವನು ಕೆನಿತ್ ಅಂಡರ್ಸನ್. ಹಿಮಾಲಯದೊಳಗಿನ ತಲ್ಲಣಗಳಿಗೆ ಕೋವಿ ಹಿಡಿದು ಜನರಿಗೆ ಸಾಂತ್ವನ ನೀಡಿದವನು ಜಿಮ್ಕಾರ್ಬೆಟ್. ಪಶ್ಚಿಮದ ಬಿಳಿಯರು ಸಾಹಸಿಗಳು, ರೋಮಾಂಚನಕಾರಿ ಬದುಕು ನಿರ್ವಹಿಸಿದವರು. ಅವರ ಆಳ್ವಿಕೆಯ ಹೃದಯದೊಳಗೆ ಅನುಕಂಪದ ಅಲೆಗಳೂ ಸಹಾ ಇವೆ ಎಂಬುದನ್ನರಿಯಲು ಜಿಮ್ಕಾರ್ಬೆಟ್ ಜೀವನಗಾಥೆ ಓದಬೇಕು. ಜಗದೀಶ ಕೊಪ್ಪ ಅವರು ಸಹಾ ಕಾರ್ಬೆಟ್ ತಿರುಗಾಡಿದ ನೆಲೆಸಿದ ನೆಲಮನೆ ಜಾಡು ಹಿಡಿದ ಕಥನ ಕೂಡ ಕಾರ್ಬೆಟನಿಗೆ ಸಂದ ಗೌರವೇ ಸರಿ!
                ಭಾರತದ ಸ್ವತಂತ್ರ ಹೆಜ್ಜೆ ಗುರುತಗಳಲ್ಲಿ ತಮ್ಮವರ ಜೀವಕ್ಕೆ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗಬಾರದು ಎಂಬ ಷರತ್ತುಗಳನ್ನಿರಿಸಿಕೊಂಡು ಸ್ವತಂತ್ರ ನೀಡುವ ಹೆಜ್ಜೆಗಳನ್ನು ಅವರು ಇರಿಸುವಾಗ ಭಾರತದ ಗಿರಿಶಿಖರ ಅಡವಿಯೊಳಗಿದ್ದ ಬಹುತೇಕ ವಿದೇಶಿಗಳು ಇಲ್ಲೆ ಉಳಿಯಲು ಮನಸ್ಸು ಮಾಡಲಿಲ್ಲ. ಕರ್ನಾಟಕದ ಮಲೆನಾಡಿನಲ್ಲಿ ಸಹಾ ಅದು ಸಾಕಮ್ಮನ ತೋಟವಿರಬಹುದು, ಕಾಡುಮನೆ ತೋಟವಿರಬಹುದು. ನೀಲಗಿರಿ ಬೆಟ್ಟಗಳಲ್ಲಿರಬಹುದು, ಬಾಬಾಬುಡನ್ಗಿರಿ ಕೊಡೈಕೆನಾಲ್, ಏರ್ಕಾಡ್, ಸಿಮ್ಲಾ, ಮಸೂರಿ, ಡಾರ್ಜಲಿಂಗ್, ನೈನಿತಾಲ್, ಕುಲು, ಮನಾಲಿ ಅನ್ವೇಷಣೆಯ ಗಿರಿಧಾಮ ತೋಟಗಳಿರಬಹುದು ಬಹಳಷ್ಟು ಮಾಲೀಕರು ತೋಟ ಮಾರಿದರು. ಬೆಂಗಳೂರಿನ ದಂಡು ಪ್ರದೇಶದಲ್ಲಿ ಮನೆಮಠ ಮಾರಿದರು, ಆಳುಕಾಳುಗಳಿಗೆ ಬಿಟ್ಟು ಹೊರಟರು. ಇದು ಅಲ್ಲಿವರೆಗೆ ತಮ್ಮದೇ ಭಾರತದಲ್ಲಿದ್ದ ಇಲ್ಲಿನ ವಿದೇಶಿಗಳು ಸ್ವತಂತ್ರ ಭಾರತ ತಮ್ಮದಲ್ಲ ಎಂದೇ ತಿಳಿದರು. ಅದಕ್ಕೆ ಕಾರಣ ಸ್ವತಂತ್ರ ಪಡೆಯುವಾಗ ಆಗುತ್ತಿದ್ದ ದಂಗೆಗಳು ಕಥನದಲ್ಲಿ ಸಿಗುತ್ತವೆ. ಕೊಪ್ಪ ಅವರು ಕಾರ್ಬೆಟ್ ಕುರಿತ ಜೀವನ ಹಾಗೂ ಕೃತಿಗಳನ್ನಿಟ್ಟುಕೊಂಡು ಕಾರ್ಬೆಟ್ನನ್ನು ಕನ್ನಡದಲ್ಲಿ ಮರುಸೃಷ್ಟಿ ಮಾಡಿಕೊಡುತ್ತಾರೆ.


 ಜಿಮ್ಕಾರ್ಬೆಟ್ (ಎಡ್ವರ್ಡ್ ಜೇಮ್ ಕಾರ್ಬೆಟ್) 1875ರಲ್ಲಿ ನೈನಿತಾಲ್ ಗಿರಿಧಾಮದಲ್ಲಿ ತನ್ನ ತಾಯಿ ಮೇರಿಗೆ ಹನ್ನೊಂದನೇ ಹೆರಿಗೆಯಲ್ಲಿ ಭಾರತದ ಗಿರಿ ನೆಲದ ಮೇಲೆ ಕಣ್ಣು ಬಿಡುತ್ತಾನೆ. ಆಕೆಗೆ ಮೊದಲ ಗಂಡನ ನಾಲ್ಕು ಮಕ್ಕಳೂ ಸೇರಿದಂತೆ ಅವರೊಳಗೆ ಬೆಳೆಯುತ್ತಾನೆ. ತಂದೆ ಕ್ರಿಸ್ಟೋಫರ್ ವಿಲಿಯಮ್ಸ್. ತಾಯಿ ಇಷ್ಟು ಮಕ್ಕಳನ್ನು ಸಾಕುವ ಛಲಗಾತಿ. ನೈನಿತಾಲ್ ಗಿರಿಧಾಮದಲ್ಲಿ ಎಸ್ಟೇಟ್ ವ್ಯವಹಾರಕ್ಕಿಳಿಯುತ್ತಾಳೆ. ತಂದೆ ಪುರಸಭೆ ಸದಸ್ಯನಾಗಿ ಅಧ್ಯಕ್ಷನಾಗಿ ಕಾಲಕ್ಕಾಗಲೇ ಒಳಚರಂಡಿ ಸೇರಿದಂತೆ ನಿರ್ಮಲ ಪಟ್ಟಣವಾಗಿಸುವತ್ತ ಕಾರ್ಯ ನಿರ್ವಹಿಸುತ್ತಾನೆ. ಮುಂದೆ ಮಗ ಸಹಾ ಇದೇ ದಾರಿ ಹಿಡಿಯುತ್ತಾನೆ. ಕಾರ್ಬೆಟ್ ಅಕ್ಕ ಮ್ಯಾಗಿ(ಮಾರ್ಗರೇಟ್) ಹಾಗೂ ಕಾರ್ಬೆಟ್; ಆತನ ತಾಯಿ ಹೇಳುವಂತೆ ಬ್ರೆಡ್ ಅಂಡ್ ಜಾಮ್ ರೀತಿ ಬದುಕಿದವರು. ಕಾರ್ಬೆಟ್ ಬದುಕಿನ ಕಡೆಯಲ್ಲಿ ಕೀನ್ಯಾದಲ್ಲಿ ಅಕ್ಕನ ತೊಡೆಯ ಮೇಲೆಯೇ ಪ್ರಾಣಬಿಟ್ಟವನು. ಇಬ್ಬರೂ ಅವಿವಾಹಿತರಾಗಿಯೇ ಇದ್ದವರು. ಕಾರ್ಬೆಟ್ ಮಗುವಾಗಿದ್ದಾಗ ಪೋಷಣೆ ಮಾಡುವ ಬಡ ಹೆಣ್ಣುಮಕ್ಕಳೊಡನೆ ಬೆಳೆದವನು. ಕುಮಾವನ್ ಸ್ಥಳೀಯ ಭಾಷೆಯಲ್ಲಿ ಜೋಗುಳ ಕೇಳಿದವನು. ಅವರಿಂದಲೇ ಅಂಡು ತೊಳೆಸಿಕೊಂಡವನು, ಬಿಸಿನೀರು ಸ್ನಾನ ಮಾಡಿಸಿಕೊಂಡವನು, ಸ್ಥಳೀಯ ಸಂಸ್ಕøತಿ ರೂಢಿಸಿಕೊಂಡವನು, ತನಗರಿವಿಲ್ಲದಂತೆ ಅಲ್ಲಿನ ಬಡಹೆಣ್ಣುಮಕ್ಕಳ ಎದೆಯಾಳದಲ್ಲಿ ಶಾಶ್ವತವಾಗಿ ಉಳಿದವನು, ಬದುಕಿನುದ್ದಕ್ಕೂ ಬಡವರ ಬದುಕಿನ ನೆರವಾದವನು, ತನ್ನ ಮನೆಯಲ್ಲಿ ಕುಳಿತು ಇಂತಹದೇ ಪಕ್ಷಿಯ ಧ್ವನಿ, ಪ್ರಾಣಿಯ ಕೂಗು ಎಂದು ನಿಖರವಾಗಿ ಹೇಳಬಲ್ಲವನು, ನೆಲದ ಮೇಲಿನ ತರಗಲೆ ಸದ್ದಿನೊಳಗೆ ಕದಲುವಿಕೆಯಲ್ಲಿ ಏನಿದೆ ಎಂಬ ಜ್ಞಾನದ ಅರಿವಿದ್ದವನು. ಆರಂಭದಲ್ಲಿ ಅವನೂ ಸಹಾ ಅರಣ್ಯ ಹಾಗೂ ಅರಣ್ಯದೊಳಗಿನ ಪ್ರಾಣಿಪಕ್ಷಿಗಳು ಇರುವುದೇ ಭೇಟೆಗಾಗಿ ಎಂದು ತಿಳಿದಿದ್ದವನು. ಬೆಳೆಬೆಳೆಯುತ್ತಾ ಉರುಳುವ ಮರಗಳನ್ನು ಕಂಡು ಬರಿದಾಗುವ ಜೀವಿಗಳ ಕಂಡು ತನಗರಿವಿಲ್ಲದಂತೆ ಪರಿಸರ ರಕ್ಷಣೆಯ ಜಾಗೃತ ಪ್ರಜ್ಞೆಗೆ ಎಚ್ಚರಾದವನು. ಮರಬಿದ್ದಾಗ ಚೆಲ್ಲಾಡುವ ಹಕ್ಕಿ ಪಕ್ಷಿಗಳ ಗೂಡು ಅಲ್ಲಿನ ಮರಿಹಕ್ಕಿಗಳು ಬಾಯ್ಬಿಡುವ ಗೋಳಾಟಕ್ಕೆ ಮನಕರಗಿದವನು. ಕಾಲು ಮುರಿದುಕೊಂಡ ಪುಟ್ಟ ಸಾರಂಗ ತಂದು ಸಾಕಿದವನು, ಹಳ್ಳಿಯ ಜಾನುವಾರಿನ ಮುರಿದ ಕಾಲನ್ನು ಸರಿಪಡಿಸಿದವನು.
    ಬಿಹಾರ ರಾಜ್ಯಕ್ಕೆ ಹೊಂದಿಕೊಂಡಿರುವ ಗಂಗಾನದಿಯ ದಕ್ಷಿಣ ಭಾಗಕ್ಕೆ ಮೊಕಮೆಘಾಟ್ ಎಂತಲೂ ಉತ್ತರ ಭಾಗಕ್ಕೆ ಸಮಾರಿಯ ಘಾಟ್ ಎಂದು ಹೆಸರು. ಅಲ್ಲಿ ರೇಲ್ವೆ ಸಾಗಣಿಕೆಯ ಉಸ್ತುವಾರಿಗೆ ಕಾರ್ಬೆಟ್ ಸೇರಿಕೊಂಡ. ಬಡ ಕಾರ್ಮಿಕರ ಆಗುಹೋಗುಗಳಿಗೆ ನೇತಾರನಾಗಿ ನಿಂತ. ತಾತ್ಕಾಲಿಕ ಷೆಡ್ ನಿರ್ಮಿಸಿ ಎರಡು ವರ್ಷಗಳಲ್ಲಿ 270 ಮಕ್ಕಳ ಏಳು ಮಂದಿ ಶಿಕ್ಷಕರ ಶಾಲೆ ತೆರೆದವನು. ಕಷ್ಟ ಕಾಲದಲ್ಲಿ ಸಂಬಳ ತಡವಾಗಿದ್ದಾಗ ತನ್ನಲ್ಲಿದ್ದ ಹಣವನ್ನೆಲ್ಲಾ ಅವರ ಬಡತನಕ್ಕೆ ವಿನಿಯೋಗಿಸಿ ಬೆಳಿಗ್ಗೆ ಸಾಯಂಕಾಲ ಒಂದೊಂದು ಚಪಾತಿ ಮಾತ್ರ ತಿಂದು ಬದುಕಿದ್ದವನು.



 ಒಬ್ಬ ಮುಸ್ಲಿಂ ವೃದ್ಧ ವಿಷಯ ತಿಳಿದುಹಸಿವಿನಲ್ಲೆ ಸಾಯುವ ಮಂದಿ ನಾವು ಇದು ಹೊಸದಲ್ಲಇದರಲ್ಲಿ ಹೆಂಡತಿಯ ಒಡವೆಗಳಿವೆ ಮಾರಿ ಮನೆಗೆ ಸಾಮಾನು ತಂದು ಕೊಳ್ಳಿ ಎಂದು ಕಾಲುಬಳಿ ಕಣ್ಣೀರಿಡುತ್ತ ಬೇಡಿನಿಂತ ವಿಚಾರ ಬರುತ್ತದೆ (ಪು. 38) ಕಾರ್ಬೆಟ್ ದಿನ ಕಳೆದಂತೆಲ್ಲಾ ಭಾರತದ ಬಡತನಕ್ಕೆ  ಸ್ಪಂದಿಸುತ್ತಾನೆ. ಆಳುವ ದೊರೆಗಳಿಗೆ ತಿಳಿಸಿ ಹೇಳುತ್ತಾನೆ. ತನ್ನ ಕೈಲಾದ ಸಹಾಯ ಮಾಡುವಾಗ ಗೇದುಣ್ಣುವವರ ನೆರವಿಗೆ ಬರುತ್ತಾನೆ. “ ನನ್ನ ಭಾರತದಲ್ಲಿ ಬಡತನವಿದೆ ನಿಜ, ಆದರೆ ಬಡವರಲ್ಲಿ ಹೃದಯ ಶ್ರೀಮಂತಿಕೆಯೂ ಇದೆ ಎಂಬುದನ್ನು ನನ್ನ ಬಿಳಿಯರ ಜಗತ್ತಿಗೆ ಹೇಗೆ ಸಾಬೀತುಪಡಿಸಲಿ (ಪು 40) ಎಂದು ಖಿನ್ನನಾಗಿ ಸಿಗರೇಟ್ ಹಚ್ಚುತ್ತಿದ್ದುದುಂಟು. ಕಾರ್ಬೆಟ್ ಬದುಕಿನಲ್ಲಿ ಒಂದು ಮಾದರಿಯಾಗಿದ್ದ. ಪ್ರಾಮಾಣಿಕತೆಗೆ ಬೆಲೆ ಕೊಡುತ್ತಿದ್ದ. ಒಬ್ಬ ಅಸ್ಪøಶ್ಯ ಅವನ ಹೆಸರು ಚಮರಿ. ಅವನ ಪ್ರಾಮಾಣಿಕತೆಗೆ ಮೆಚ್ಚಿ ಸಂಬಳವನ್ನು 15 ರಿಂದ 40ಕ್ಕೆ ಏರಿಸುತ್ತಾನೆ. ಅವನು ಹಳೆಯ ಸಂಬಳದ 15ರೂ.ಗಳನ್ನು ತಾನು ತನ್ನ ಹೆಂಡತಿ ಜೀವನ ನಿರ್ವಹಣೆಗೆ ಇಟ್ಟುಕೊಂಡು ಉಳಿದದ್ದನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದ್ದ. ಇದನ್ನು ತಿಳಿದ ಕಾರ್ಬೆಟ್ ಒಳ್ಳೆ ಬಟ್ಟೆ ಧರಿಸಲು ಹಣ ಉಳಿಸಲು ಹೇಳುತ್ತಾನೆ. “ಮಹಾರಾಜ್ ಮಕ್ಕಳಿಲ್ಲದ ನನ್ನ ಕುಟುಂಬಕ್ಕೆ ಹದಿನೈದು ರೂಪಾಯಿ ಸಾಕು. ಉಳಿತಾಯ ಮಾಡಿ ಏನು ಮಾಡಲಿ? ನಿಮ್ಮ ದಯೆಯಿಂದ ನಾಲ್ಕಾರು ಜನಕ್ಕೆ ಸಹಾಯ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಬದುಕಿನ ಪುಣ್ಯ (ಪು 43) ಎಂದು ಹೇಳುವಲ್ಲಿ ಆಗಿನ ಗಾಂಧಿಭಾರತ ತತ್ವಗಳು ವಿದೇಶಿ ಚರ್ಮ ಹೊದ್ದ ಕಾರ್ಬೆಟನಂತವರ ಮಾರ್ಗದಲ್ಲೂ ಇತ್ತು ಎಂಬುದು ಮಾರ್ಗ ಕಾಣುತ್ತದೆ. ಇದೇ ಚಮರಿಯ ಅಂತ್ಯಕ್ರಿಯೆಯಲ್ಲಿ ಇಡೀ ಪಟ್ಟಣ ಬಂದ್ ಆಚರಿಸಿತ್ತಂತೆ. ಇದು ಕಾರ್ಬೆಟ್ ಬದುಕಿನ ಮಾರ್ಗ.
       ಗಯಾ ಪಟ್ಟಣದಲ್ಲಿ ಲಾಲಾಜಿ ಎಂಬ ವ್ಯಾಪಾರಿಯಿದ್ದ. ಅವನ ಗೆಳೆಯ ವ್ಯಾಪಾರದಲ್ಲಿ ಅವನಿಗೆ ಮೋಸ ಮಾಡಿದ. ಗಂಗಾನದಿಗೆ ಹಾರಲು ಯತ್ನಿಸುತ್ತಿದ್ದ ಲಾಲಾಜಿಯನ್ನು ಕಾರ್ಬೆಟ್ ನೋಡಿ ಉಳಿಸಿದ. ವಿಷಯ ತಿಳಿದು ಐನೂರು ರೂಪಾಯಿ ಸಾಲ ನೀಡಿ ಮತ್ತೆ ವ್ಯಾಪಾರ ಮಾಡಲು ಪ್ರೇರೇಪಿಸಿದ. ಎಷ್ಟೋ ದಿನಗಳಾದ ಮೇಲೆ ಅದೇ ಲಾಲಾಜಿ ಬಂದ. ವ್ಯಾಪಾರ ಭರ್ಜರಿಯಾಗಿ ಪುನಃ ಬಂಡವಾಳಗಾರನಾಗಿದ್ದ. ಹಣ ಮತ್ತು ಬಡ್ಡಿ ಲೆಕ್ಕ ಹಾಕಿ ನೀಡಲು ಹೋದ. ಲಾಲಾಜಿಯಿಂದ ಕೇವಲ ಅಸಲು ಪಡೆದು ಹರಸಿದ. ಇದು ಜಿಮ್ ಕಾರ್ಬೆಟ್ ಸಾಮಾಜಿಕ ನೆರವು. ಕಾರ್ಬೆಟ್ ಪ್ರಾಮಾಣಿಕವಾಗಿ ದುಡಿಯುತ್ತಿದ್ದ. ದುಡಿದದ್ದನ್ನೆಲ್ಲಾ ಹಂಚಿಯೂ ಬಿಡುತ್ತಿದ್ದ. “ಕಲದೊಂಗಿ ಹಾಗೂ ಚೋಟಿ ಹಲ್ದವಾನಿ ಹಳ್ಳಿಯಲ್ಲಿ ತಾನು ಖರೀದಿಸಿದ್ದ ಸಾವಿರಾರು ಎಕರೆ ಭೂಮಿಯನ್ನು ಬಡರೈತರಿಗೆ ಉಚಿತವಾಗಿ (ಪು 47) ಹಂಚಲು ಪರೋಕ್ಷ ಕಾರಣಗಳು ಒದಗಿದವು. ತನ್ನ ಮದುವೆ ಮಕ್ಕಳ ವಿಚಾರಗಳಿಗೆಲ್ಲಾ ತಿಲಾಂಜಲಿ ನೀಡಿದ. ಪ್ರಾಣಿ ಹಾಗೂ ಪರಿಸರ ಅನನ್ಯ ಪ್ರೀತಿ ಬೆಳೆಸಿಕೊಂಡ.
               

  ಬಡಜನತೆಯ ಉದ್ಧಾರಕ್ಕಾಗಿ ಇಡೀ ಒಂದು ಹಳ್ಳಿಯನ್ನು ಖರೀದಿಸಿ ಅದನ್ನು ಹಳ್ಳಿಗರಿಗೆ ದಾನ ಮಾಡಿದ ಭಾರತದ ಏಕೈಕ ಹೃದಯವಂತ (ಐರಿಷ್) ಮೂಲದ ವ್ಯಕ್ತಿಯೆಂದರೆ ಅದು ಜಿಮ್ ಕಾರ್ಬೆಟ್ ಮಾತ್ರ (ಪು 59) ತಲಾ ಎರಡರಿಂದ ಐದು ಎಕರೆ ಭೂಮಿ ಹಂಚುತ್ತಾನೆ. ಕಾಡು ಪ್ರಾಣಿಗಳ ಕಾಟಕ್ಕೆ ತಡೆಗೋಡೆಯಾಗಿ ಇಡೀ ಗ್ರಾಮಕ್ಕೆ ನಾಲ್ಕು ಅಡಿ ದಪ್ಪದ ಆರು ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುತ್ತಾನೆ. ಅಲ್ಲಿ ಈಗ ಒಂದು ಮಾವಿನ ಮರ ಹೆಮ್ಮರವಾಗಿ ಅವನ ಹೆಸರು ಹೇಳುತ್ತಿದೆ. ಆಗ ಬೆಳೆಗೆ ಬೆನ್ನೆಲುಬಾಗಿ ನೈನಿತಾಲ್ನಲ್ಲಿ ಮಾರುಕಟ್ಟೆ ಸ್ಥಾಪಿಸುತ್ತಾನೆ. ಮಧ್ಯವರ್ತಿಗಳ ಕಾಟ ತಪ್ಪಿಸುತ್ತಾನೆ. ಹೀಗೆ ಅವನು ಮುಂದೆ ಬರುವ ಸ್ವತಂತ್ರ ಭಾರತಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾನೆ. “ಅವನ ಬದುಕು ನಡವಳಿಕೆ ಎಲ್ಲವೂ ಸ್ಥಳೀಯ ಜನರಿಗೆ ಮಾದರಿಯಾಗಿದ್ದವು. ಅಷ್ಟೇ ಅಲ್ಲದೆ ಕಾರ್ಬೆಟ್ ಮಾತುಗಳನ್ನು ದೇವರ ಅಪ್ಪಣೆ ಎಂಬಂತೆ ಅಲ್ಲಿನ ಜನತೆ ಪಾಲಿಸುತ್ತಿದ್ದರು. (ಪು 61). ವಿಚಾರಗಳನ್ನೆಲ್ಲಾ ಕಲೆಹಾಕುತ್ತ ಕ್ಷೇತ್ರ ಕಾರ್ಯ ಮಾಡುತ್ತ ಹೋಗುವ ಜಗದೀಶ ಕೊಪ್ಪ ಅವರನ್ನು ಅಲ್ಲಿ ಒಬ್ಬ ಮುಸ್ಲಿಂ ಹೆಣ್ಣು ಮಗಳು ಮನೆಗೆ ಕರೆದು ತನ್ನ ತಾತ ಬಹದ್ದೂರ್ಖಾನ್ ಕಾರ್ಬೆಟ್ನೊಡನೆ ಮೂವತ್ತು ವರ್ಷ ಆತನ ಬಂಟನಾಗಿದ್ದ ಎಂಬ ವಿಚಾರ ಹೇಳಿ ಭಾರತದ ವೈಸರಾಯ್ ಹಾಗೂ ಕಾರ್ಬೆಟ್ನೊಡನೆ ತನ್ನ ತಾತ ನಿಂತಿರುವ ಫೋಟೋ ತೋರಿಸುತ್ತಾಳೆ. (ಪು 62) ಈಗ ಚೋಟಿ ಹಲ್ದವಾನಿ ಯುವಕರು ಒಗ್ಗೂಡಿ ಕಾರ್ಬೆಟ್ ಹೆಸರಿನಲ್ಲಿ ಎಕೋಟೂರಿಸಂ ರೆಸಾರ್ಟ್ ಮಾಡಿಕೊಂಡಿದ್ದಾರಂತೆ. ಇದು ಒಬ್ಬ ಮನುಷ್ಯ ನೆಲದಲ್ಲಿ ಬದುಕಿ ಹೋದ ಮಾರ್ಗ.
                ಇಷ್ಟಾದರೂ ಅಪ್ಪಟ ಭಾರತೀಯನಾಗಿ ಬದುಕಿದರೂ ಭಾರತವನ್ನು ತೊರೆದು ಕೀನ್ಯಾದಲ್ಲಿ ಏಕೆ ಅನಾಮಿಕನಂತೆ ನಿಧನ ಹೊಂದಿದ ಎಂಬುದಕ್ಕೆ ಅವನ ತಾಯಿ ಮೇರಿಯಲ್ಲಿ ಅಡಗಿದ್ದ ಒಳಗಿನ ಭಯ ಎಂದು ಕಾಣುತ್ತದೆ. 1857 ಸಿಪಾಯಿ ದಂಗೆಯನ್ನು ಕಂಡವಳು. ಬ್ರಿಟಿಷರ ಆಳ್ವಿಕೆ ನಂತರ ಭಾರತದಲ್ಲಿ ವಿದೇಶಿಯರಿಗೆ ಬದುಕಿಲ್ಲ ಎಂದು ಎಳೆಯ ಹರದಯದಲ್ಲಿ ಆಕೆ ಪಿಸುಗುಟ್ಟಿದ್ದಳು. ಅದು ಕಾರ್ಬೆಟ್ ಎದೆಯೊಳಗೆ ಹೆಮ್ಮರವಾಗಿ ಬೆಳೆದಂತಿದೆ ಎಂದು ಕೃತಿಕಾರರು ಹೇಳುತ್ತಾರೆ (ಪು 119) ಕಾರ್ಬೆಟ್ ಅವನ ಗಿರಿಧಾಮದ ಮನೆಗಳನ್ನು ಮಾರಾಟ ಮಾಡುತ್ತಾನೆ. ಗಾರ್ನಿಹೌಸ್; ಎಂಬ ಬೃಹತ್ ಬಂಗಲೆ ಕೊಂಡ ಸಕ್ಕರೆ ವ್ಯಾಪಾರಿ ಶರ್ಮಸ್ವರ್ಗದ ಮೇಲೆ ಭೂಮಿಯ ತುಣುಕೊಂದನ್ನು ಖರೀದಿಸಿದ್ದೀನಿಎಂದು ಬಂದುಮಿತ್ರರೊಡನೆ ಸಂತಸ ಹಂಚಿಕೊಂಡಿದ್ದನಂತೆ.
     



   ಕೃತಿಯಲ್ಲಿ ಕಾರ್ಬೆಟ್ ಶಿಕಾರಿ ನೆನಪುಗಳ ಕಿರು ಪರಿಚಯಗಳಿವೆ. ಪಾಲಿ ಎಂಬ ಹಳ್ಳಿಯಲ್ಲಿ 1907ರಲ್ಲಿ ಪ್ರಥಮವಾಗಿ ನರಭಕ್ಷಕ ಹುಲಿ ಬೇಟೆಯಾಡುತ್ತಾನೆ. ಅದು ಇಲ್ಲಿ 200 ಜನರನ್ನು ತಿಂದು ಹಾಕಿದ್ದ ನೇಪಾಲದಿಂದ ತಪ್ಪಿಸಿಕೊಂಡು ಬಂದಿದ್ದ ಹೆಣ್ಣು ಹುಲಿ. ಜಿಲ್ಲಾಧಿಕಾರಿ ಕೋರಿಕೆಯಂತೆ ಕೊಲ್ಲಲು ಒಪ್ಪಿರುತ್ತಾನೆ. ಸರ್ಕಾರ ಬಹುಮಾನ ಘೋಷಿಸಬಾರದು ಹಾಗೂ ಇತರೆ ಬೇಟೆಗಾರರು ಅಲ್ಲಿ ಸುಳಿಯಬಾರದು ಎಂಬುದು ಇವನ ಷರತ್ತು. ಅದಕ್ಕೆ ಕಾರಣ ಅಮಾಯಕ ಇನ್ನಿತರೆ ಪ್ರಾಣಿಗಳನ್ನು ಬಹುಮಾನದಾಸೆಗೆ ಇತರರು ಕೊಲ್ಲುತ್ತಾರೆಂಬ ಇವನ ಭಯ. ಕಾರ್ಬೆಟ್ ಹುಲಿ ಹೆಜ್ಜೆ ಗುರುತುಗಳಲ್ಲಿ ಹುಲಿ ವಯಸ್ಸು ಹಾಗೂ ಅದರ ಆರೋಗ್ಯ ಗುರುತಿಸುವ ಸೂಕ್ಷ್ಮಜ್ಞ. ನರಭಕ್ಷಕ ಹುಲಿಯ ಕೊಂದ ಅಂದು ಕಥೆ ಜಗತ್ತಿನ ರೋಮಾಂಚನಕಾರಿ ಅನುಭವ. ಆಗ ಇದು ಬ್ರಿಟಿಷ್ ಪಾರ್ಲಿಮೆಂಟನ್ನು ಚಿಂತೆಗೀಡು ಮಾಡಿತ್ತು. ಮತ್ತೊಂದು ಹುಲಿ 24 ಮಂದಿ ಕೊಂದಿತ್ತು. ಮುಕ್ತೇಶ್ವರ ಎಂಬ ಹಳ್ಳಿಯ ಸತ್ಯ ಕತೆಯಿದು. ಅಕ್ಷರಶಃ ಆಗ ಜೀವಂತ ಶವವಾಗಬೇಕಿದ್ದ ಕಾರ್ಬೆಟನು ಕರಾಳ ರಾತ್ರಿಯಲ್ಲಿ ಮಳೆ ಚಳಿಯಲ್ಲಿ ಮರಗಟ್ಟಿ ಹೋಗಿದ್ದ. ಮತ್ತೊಂದು ರುದ್ರಪ್ರಯಾಗದ ನರಭಕ್ಷಕ ಚಿರತೆ ಕೊಂದ ಕತೆಯು ಜಗತ್ತಿನ ಭಯಾನಕ ಅನುಭವಗಳಲ್ಲೊಂದು. ಭಾರತದ ವೈಸರಾಯ್ ಇವನ ಅತಿಥಿಯಾಗಿ ಬಂದು ಕಾರ್ಯಕ್ಕೆ ಶ್ಲಾಘಿಸಿದ್ದ. “ ಸೋಜಿಗದ ಸಂಗತಿ ಎಂದರೆ ... ಅಲ್ಲಿನ ಕಾಡು ದಾರಿಯಲ್ಲಿ ಪುಟ್ಟದಾದ ಹನುಮಾನ್ ದೇವಾಲಯಗಳಿವೆ. ಜೊತೆಗೆ ಕೆಲವು ದೇವಸ್ಥಾನಗಳಲ್ಲಿ ಜಿಮ್ ಕಾರ್ಬೆಟನ ಕಪ್ಪು ಬಿಳುಪಿನ ಚಿತ್ರಗಳಿವೆ. ಕಾಡು ಪ್ರಾಣಿಗಳಿಂದ ಹನುಮಾನ್ ಮತ್ತು ಕಾರ್ಬೆಟ್ ಸಾಹೇಬ್ ನಮ್ಮನ್ನು ರಕ್ಷಿಸುತ್ತಾರೆ ಎಂದು ಅಲ್ಲಿನ ಜನ ನಂಬಿಕೊಂಡಿರುವುದನ್ನು ನಾವು ಕಾಣಬಹುದು. (ಪು 78) ಇದು ಕೃತಿಕಾರನ ಮಾತಿನ ಸಂಶೋಧನೆ. ಇದು ಪವಾಡದಂತೆ ಬದುಕಿದÀ  ಚಾರಿತ್ರಿಕ ಪುರುಷರ ಬಗೆಯ ನಂಬಿಕೆ. ಜನಪದವೆಂದರೆ ಒಂದು ನಂಬಿಕಾವಿಧಾನ. ಬದುಕಿನ ಮಾರ್ಗಕಾರನ ಅಭಿಮಾನ. ಮನುಷ್ಯ ಪೂಜಿತನಾಗುವುದು ಹೀಗೆ.
  



 ಜಿಮ್ ಕಾರ್ಬೆಟ್ ತಾನು ನರಭಕ್ಷಕ ಹುಲಿ, ಚಿರತೆ ಕೊಂದ ಕತೆಗಳು ಕೇವಲ ಭಾರತದಲ್ಲಿ ಅಷ್ಟೇ ಅಲ್ಲ. ಅಂದು ವಿಶ್ವದ ಎಲ್ಲಾ ಬ್ರಿಟಿಷ್ ಸಾಮ್ರಾಜ್ಯದಲ್ಲೆಲ್ಲಾ ಹರಡಿ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗುತ್ತದೆ. ಇವನು ಭಾರತಕ್ಕೆ ಅಷ್ಟೇ ಏಕೆ ಜಗತ್ತಿಗೆ ಬೇಕಾದ ಮನುಷ್ಯನಾಗುತ್ತಾನೆ. ಅವನ ಶಿಕಾರಿ ಚತುರತೆಯೊಡನೆ ಸ್ಥಳೀಯ ಜನರಿಗೆ ಬೇಕಾದ ಬಿಳಿ ಸಾಹೇಬನಾಗಿ ಸಮಾಜದ ನೋವು ನಲಿವಿಗೆ ಬೇಕಾದ ಸಂಪನ್ಮೂಲ ವ್ಯಕ್ತಿಯಾಗಿ ರೂಪಿತಗೊಳ್ಳುತ್ತಾನೆ. ಭಾರತದ ವೈಸರಾಯ್ ಗೆಳೆಯನಾಗುತ್ತಾನೆ. ಜಿಲ್ಲಾಧಿಕಾರಿಗಳ ಸಂಸಾರಿ ಗೆಳೆಯನಾಗುತ್ತಾನೆ. “ಹಸಿವು ಮತ್ತು ಕಾಮವನ್ನು ಗೆಲ್ಲುವುದು ಸುಲಭದ ಮಾತಲ್ಲ. ಕೃತಿಯಲ್ಲಿ ಕೊಪ್ಪ ಅವರು ಹೇಳುವಂತೆ ಜಿಲ್ಲಾಧಿಕಾರಿ ಇಬೊಟ್ಟನ್ ಪತ್ನಿ ಜೀನ್ ಜೊತೆ ಸಂಬಂಧವಿತ್ತು ಎಂಬ ದಾಖಲೆಗಳಿವೆ. ಅರಣ್ಯಾಧಿಕಾರಿ ಸ್ನೇಹಿತನೊಬ್ಬನ ನಾದಿನಿ ಹೆಲೆನ್ ಎಂಬುವಳಿಗೆ ಹತ್ತೊಂಭತ್ತು ವರ್ಷ. ಆದರೆ ಕಾರ್ಬೆಟ್ಗೆ ಆಗಲೇ ಇಳಿವಯಸ್ಸು. ಆಕೆಯ ಮತ್ತು ಕಾರ್ಬೆಟ್ ಪ್ರೀತಿಗೆ ಅವರ ಪೋಷಕರು ಸಹಕರಿಸಲಿಲ್ಲ. ಇಂಗ್ಲೆಂಡಿಗೂ ಹೋಗಿ ಒಪ್ಪಿಸಲು ನೋಡಿದ. ಆಗಲಿಲ್ಲ. ಹಲವು ತಿಂಗಳು ಮೌನಿಯಾದ. ಆಗಿನ ಕಾಲದ ಭಾರತದ ಬ್ರಿಟಿಷ್ ಕುಟುಂಬಗಳಲ್ಲಿ ವಿಧವೆ ಅಥವಾ ವಿಚ್ಛೇದಿತಳನ್ನು ಮದುವೆ ಆಗಬಹುದಿತ್ತು. ಯಾವುದಕ್ಕೂ ಒಪ್ಪಲಿಲ್ಲ. ‘ಭಾರತವೇ ನನ್ನ ಕುಟುಂಬಎಂದುಬಿಟ್ಟ. ‘ಆಡಂಬರದ ಬದುಕು ಅವನದಲ್ಲ. ಮನೆಯಲ್ಲಿ ಸಾಕಿಕೊಂಡಿದ್ದ ಆನೆ, ಕುದುರೆ, ನಾಯಿ ಬಗೆಬಗೆಯ ಪಕ್ಷಿಗಳು ಇವುಗಳೆಲ್ಲದರ ಮೇಲ್ವಿಚಾರಕರು ಇವರೆಲ್ಲ ಸೇರಿ ಅವನ ಮನೆ ಮಿನಿ ಭಾರತವಾಗಿತು್ತ. (ಪು 113).
                ಪ್ರಥಮವಾಗಿ 1931ರಲ್ಲಿ ಪತ್ರಿಕೆಯೊಂದಕ್ಕೆಪಿಪಾಲ್ ಪಾನಿ ಟೈಗರ್ಪ್ರಸಂಗ ಬರೆದ. ಅನೇಕ ಬ್ರಿಟಿಷ್ ಅಧಿಕಾರಿಗಳು ಪತ್ರಿಕೆಯ ಚಂದಾದಾರರು. ಅನಂತರ ಅನುಭವಗಳನ್ನೆಲ್ಲಾ ಬರೆಯುತ್ತಾ ಹೋದ. ಬರವಣಿಗೆಯನ್ನು ಹಾಗೂ ಸ್ನೇಹವನ್ನು ಬಯಸಿದ ಭಾರತದ ವೈಸರಾಯ್ ಲಿನ್ಲಿಥ್ ಗೌ ತಾನು ಆಸಕ್ತಿ ವಹಿಸುತ್ತಿದ್ದಲ್ಲದೆ ಕುಟುಂಬದೊಡನೆ ಇದ್ದು ಹೋಗುತ್ತಿದ್ದ. ಮುಂದೆ ಕಾರ್ಬೆಟ್ ತನ್ನ ಆಸ್ತಿ ಮಾರಾಟದ ಹಣವನ್ನು ಸೇರಿಸಿ ಇನ್ಸೂರೆನ್ಸ್ ಕಂಪೆನಿ ಪ್ರಾರಂಭಿಸಿದ. ಜೈಪುರದ ಮಹಾರಾಜನಿಗೆ ಸಾಲ ನೀಡಿದ್ದ. ಸ್ನೇಹಿತರೊಡಗೂಡಿ ಕೀನ್ಯಾದಲ್ಲಿ ಅಪಾರ ಆಸ್ತಿ ಮಾಡಿದ. ಎರಡನೇ ಮಹಾಯುದ್ಧದಲ್ಲಿ ಬರ್ಮಾದಲ್ಲಿ ಭಾರತ ಸೈನ್ಯವು ಇವನಿಂದ ಅಡವಿಜ್ಞಾನ ಪ್ರಾಣಿಜ್ಞಾನ ನೆರವು ಪಡೆಯಿತು. ಬ್ರಿಟಿಷ್ ಸರ್ಕಾರ ಇವನಿಗೆಕಂಪಾನಿಯನ್ ಆಪ್ ಬಿ ಇಂಡಿಯನ್ ಎಂಪೈರ್ಎಂಬ ಬಿರುದು ನೀಡಿತು. ಇವನಜಂಗಲ್ ಸ್ಟೋರೀಸ್ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ಲ್ಲಿ ಯಶಸ್ಸು ಪಡೆದು ಆಗಿನ ಕಾಲಕ್ಕೆ 5 ಲಕ್ಷ ಪ್ರತಿಗಳು ಖರ್ಚಾದವು. ‘ಮ್ಯಾನ್ ಈಟರ್ ಆಪ್ ಕುಮಾವನ್ಚಲನಚಿತ್ರವೂ ಆಯಿತು. ‘ ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರ ಪ್ರಯಾಗ್ಹೊರಬಂದಿತು. ಹೀಗೆ ಎಲ್ಲವೂ ಜಗದ್ವಿಖ್ಯಾತವಾದವು.
  


  ಅವನುಗಾರ್ನಿಹೌಸ್ಬಿಡುವುದನ್ನು ಗುಟ್ಟಾಗಿಟ್ಟಿದ್ದ. ಮನೆ ತೊರೆದು ಹೊರಟಾಗ ಇಡೀ ಹಳ್ಳಿಗೆ ಆಘಾತವಾಯಿತು. ಸೇವಕರು ಮತ್ತು ಅವರ ಕುಟುಂಬದ ಸದಸ್ಯರು ಕಣ್ಣೀರು ಕರೆದರು. ಅವನ ನೆಚ್ಚಿನ ಸೇವಕ ರಾಮಸಿಂಗ್ಲಕ್ನೋ ರೇಲ್ವೆ ನಿಲ್ದಾಣದಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅತ್ತ. ಅತ್ತ ಕಾರ್ಬೆಟ್ ಕೀನ್ಯಾದಲ್ಲಿ ನೈನಿತಾಲ್ ಗಿರಿಧಾಮದಂತಹ ಜಾಗ ಸ್ಥಿರಗೊಳಿಸಲು ಹೆಣಗಾಡಿದ. ಅಲ್ಲಿಯೂಸಫಾರಿ ಲ್ಯಾಂಡ್ಎಂಬ ಸಂಸ್ಥೆ ಪ್ರಾರಂಭಿಸಿದ. ಅಲ್ಲಿ ಅವನಜಂಗಲ್ ಲೋರ್ಕೃತಿ ದಾಖಲೆ ಮಾರಾಟ ಸೃಷ್ಟಿಸಿತು. ಕೀನ್ಯಾ ಪ್ರವಾಸದಲ್ಲಿ ಎಲಿಜಬತ್ ರಾಣಿಗೆ ಮಚ್ಚಾನಿ ಮೇಲೆ ವನಮೃಗ ವೀಕ್ಷಣೆ ಸೃಷ್ಟಿಸಿದ. ಇದೆಲ್ಲಾ ಬಿಳಿಸಾಹೇಬನ ಸಾಹಸ.
                1955ರಲ್ಲಿ ಹೃದಯಾಘಾತದಿಂದ ಅಕ್ಕನ ತೊಡೆ ಮೇಲೆ ಪ್ರಾಣಬಿಟ್ಟ. ಆಕೆ ಅವನ ಆಸೆಯಂತೆ ಭಾರತದ ಚೋಟಿ ಹಲ್ದವಾನಿ ಹಳ್ಳಿಯ ಕಂದಾಯವನ್ನು ರೈತರ ಪರವಾಗಿ ಭರಿಸುತ್ತ ಬಂದಳು. ಭಾರತ ಸರ್ಕಾರ ಅಲ್ಲಿನ ಭೂಮಿ ಮತ್ತು ನಿವೇಶನಗಳನ್ನು ರೈತರ ಹೆಸರಿಗೆ ವರ್ಗಾಯಿಸಿತು. ಬಂಗಲೆಕೊಂಡಿದ್ದ ಚಿರಂಜಿಲಾಲ್ ಷಾ ಕುಟುಂಬದವನ್ನು ಒಪ್ಪಿಸಿ ಇಪ್ಪತ್ತು ಸಾವಿರಕ್ಕೆ ಕೊಂಡು ಸ್ಮಾರಕ ಮಾಡಿತು. ಅಲ್ಲಿನ ಅರಣ್ಯವನ್ನುಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ಎಂದು ಘೋಷಿಸಿತು. ಇದು ಒಬ್ಬ ವಿದೇಶಿ ಪ್ರಜೆಯ ಬದುಕಿಗೆ ಭಾರತ ನೀಡಿದ ಗೌರವ. ಇವತ್ತಿಗೂ ಉತ್ತರ ಭಾರತದ ಜನತೆ ನೈನಿತಾಲ್ ಗಿರಿಧಾಮವನ್ನು ಕಾರ್ಬೆಟ್ ನೈನಿತಾಲ್ ಎಂದು ಕರೆಯುತ್ತಾರೆ. ಆದರೆ ನೈನಿತಾಲ್ ಗಿರಿಧಾಮದ ಜನತೆಗೆ ತನ್ನ ನೆಲದ ಒಬ್ಬ ಇತಿಹಾಸ ಪುರುಷನ ಬಗ್ಗೆ ಮಾಹಿತಿ ಇಲ್ಲದಿರುವುದು ನಿಜಕ್ಕೂ ನೋವಿನ ಸಂಗತಿ. ತಾವು ಬದುಕುತ್ತಿರುವ ವರ್ತಮಾನ ಬದುಕಿಗೆ ಇತಿಹಾಸದ ಹಂಗು ಬೇಕಿಲ್ಲ ಎಂಬಂತೆ ಅಲ್ಲಿನ ಜನತೆ ಬದುಕುತ್ತಿದ್ದಾರೆ.” ಇದು ಕೃತಿಕಾರ ಜಗದೀಶ ಕೊಪ್ಪ ಅವರ ಬರಹದ ಅಂತಿಮ ನುಡಿಗಳು (ಪು 131) ಆದರೆ ಕೃತಿಯ ಆರಂಭದಲ್ಲಿ ಬರುವ ಮಾತುಗಳಂತೆ ಅವನು ಬಾಳಿದ ಗಿರಿಧಾಮ ಸಮೀಪದ ಕಲದೊಂಗಿ ಮತ್ತು ಚೋಟಿಹಲ್ದವಾನಿ ಮನೆ ಅವನು ಹಿಂದಿರುಗಿ ಬರುತ್ತಾನೆಂದು ಕಾಯುತ್ತಿದೆ.
               


  ‘ಕಾರ್ಪೆಟ್ ಸಾಹೇಬ್ಎಂಬುದು ಬ್ರಿಟಿಷ್ ಪತ್ರಕರ್ತ ಮಾರ್ಟಿನ್ ಭೂತ್ ಬರೆದ ಕೃತಿ. ಕಾರ್ಬೆಟ್ ಸಾಕ್ಷ್ಯಚಿತ್ರ ತೆಗೆಯಲು ಚಿತ್ರತಂಡ ಬ್ರಿಟನ್ನಿನಿಂದ ಬಂದಿತ್ತು. ದಿನ ವೃದ್ಧನೊಬ್ಬ ಕಾಲ್ನಡಿಗೆಯಲ್ಲಿ 90 ಕಿಮೀ ದೂರದೂರಿನಿಂದ ಗುಡ್ಡ ಹತ್ತಿ ಇಳಿದು ಬಂದಿದ್ದ. ಕಾರ್ಬೆಟ್ ಪಾತ್ರದಾರಿಯನ್ನೆ ಕುರಿತು ಅಲ್ಲಿನ ಗಢವಾಲ್ ಭಾಷೆಯಲ್ಲಿಸಾಹೇಬ್ ನಮ್ಮನ್ನು ಇಷ್ಟು ವರ್ಷ ಅನಾಥರನ್ನಾಗಿ ಮಾಡಿ ಎಲ್ಲಿ ಹೋಗದ್ದಿರಿ? ದಯಮಾಡಿ ನೀವು ಪುನಃ ನಮ್ಮನ್ನು ತೊರೆದು ಹೋಗಬೇಡಿ ಎಂದು ಅಂಗಲಾಚ ತೊಡಗಿದ್ದ. ( ಪು 2) ಕಾರ್ಬೆಟ್ ತೀರಿ ಹೋಗಿ ಅವನ ಸಾಕ್ಷ್ಯಚಿತ್ರ ತಯಾರಿ ಇದಾಗಿದೆಯೆಂದು ಚಿತ್ರತಂಡ ಟೊಂಗೆ ಊರಿ ಬಂದಿದ್ದ ಮುದುಕನಿಗೆ ಹೇಳುವ ಮಾತುಗಳು ಆತನಿಗೆ ಹೇಗೆ ಅರ್ಥವಾದೀತು! ಇದು ಕಾರ್ಬೆಟ್ನೊಡನೆ ಜನತೆ ಹೊಂದಿದ್ದ ಅವಿನಾವ ಸಂಬಂಧ ಬದುಕು. ಈಗ ಅವನದೊಂದು ದಂತ ಕಥೆ. ಸಾಹಸಿಗಳೇ ಹೀಗೆ! ಅವರದೊಂದು ಚಲನೆ. ಅವರದೊ ಅವಧೂತ ಮಾರ್ಗ, ಅವರದೊಂದು ಸಂತರ, ಸೂಫಿಗಳ ಬದುಕು, ಒಂಟಿಯಾಗಿದ್ದರೂ ಸಂಸಾರದೊಳಗಿದ್ದ ಕಾರ್ಬೆಟ್ ಭಾರತವೆಂಬ ಸಂಸಾರಕ್ಕೆ ಕಥನವಾದ ಬಗೆ. ಇವನು ದೇಶ ಯಾಕೆ ತೊರೆದ. ತೊರೆಯುದಿದ್ದರೇನಾಗುತ್ತಿತ್ತು ಎಂಬುದಕ್ಕೆ ಉತ್ತರಗಳಿಲ್ಲ. ವಿಶ್ವದ ಚಲನೆಯೇ ಹೀಗಲ್ಲವೆ! ಕೊಪ್ಪ ಅವರ ಕೃತಿ ಇಂತಹ ವಿಶ್ವಮಾನವನ ಪರಿಚಯ ಮಾಡಿಕೊಡುತ್ತದೆ. ಭಾರತದ ಬಿಳಿಸಾಹೇಬನ ಹುಡುಕುತ್ತ ಹೋಗುವ ಕೃತಿ ಶ್ಲಾಘನೀಯ ಕಾರ್ಯದ ಸಂಶೋಧನೆಯದು.
                                                    ಡಾ|| ರಾಜೇಗೌಡ ಹೊಸಹಳ್ಳಿ
                                                 413, ಒಂದನೇ ತಿರುವು, ಟೀಚರ್ಸ್ ಕಾಲನಿ, ನಾಗರಭಾವಿ, ಬೆಂಗಳೂರು - 72
                                           ಮೊಬೈಲ್ : 9980066070