tag:blogger.com,1999:blog-2903794876475576692.post4799284180535924819..comments2023-10-19T10:03:16.580-07:00Comments on ಭೂಮಿಗೀತ: ಕೊಳಗೇರಿಗಳೆಂಬ ಕೂಪಗಳುdr.jagadishkoppahttp://www.blogger.com/profile/02872011230800969126noreply@blogger.comBlogger1125tag:blogger.com,1999:blog-2903794876475576692.post-18395684890313274412013-06-16T06:57:08.348-07:002013-06-16T06:57:08.348-07:00ಮಾನ್ಯರೇ, ನೀವು ಒಬ್ಬ ಪತ್ರಕರ್ತರಾಗಿ, " ಜಾಗತೀಕರ...ಮಾನ್ಯರೇ, ನೀವು ಒಬ್ಬ ಪತ್ರಕರ್ತರಾಗಿ, " ಜಾಗತೀಕರಣ ಮತ್ತು ಗ್ರಾಮಭಾರತ" ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ ತಾವು ಕೊಳಚೆ ನಿವಾಸಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಲೇಖನ ಬರೆದಿರುವ ತಮಗೆ ಧನ್ಯವಾದಗಳು. ಕೊಳಚೆ ನಿವಾಸಿಗಳ ಪರವಾಗಿ ಕೇಳುವವರು ಯಾರು ಇಲ್ಲ ಎನ್ನುವ ಭಾವನೆ ಅವರಲ್ಲಿದೆ. ಈ ನಿಮ್ಮ ಲೇಖನದಿಂದ ನಮಗಾಗಿ ಸ್ಪಂಧಿಸುವವರು ಒಬ್ಬರಿದ್ದಾರೆಂಬ ಭಾವನೆ ಅವರಲ್ಲಿ ಮೂಡುತ್ತದೆ. ಸಾಮಾನ್ಯವಾಗಿ ಕೊಳಚೆ ಪ್ರದೇಶದಲ್ಲಿ ವಾಸಮಾಡುವವರು ನೀವು ತಿಳಿಸಿರುವಂತೆ, ಸುಮಾರು ೮೦-೯೦ ವರುಷಗಳಿಂದ, ಅನೇಕ ಕಾರಣಗಳಿಂದ ಹಳ್ಳಿಯನ್ನು ಬಿಟ್ಟು ಇಲ್ಲಿ ಬಂದು ನೆಲಸುತ್ತಾರೆ. ಇವರೆಲ್ಲಾ ಗಂಡಸರು ಬಹುತೇಕ ಕೂಲಿ ಕಾರ್ಮಿಕರು. ಹೆಣ್ಣುಮಕ್ಕಳು ಹಣವಂತರ ಮನೆಯಲ್ಲಿ ಬಟ್ಟೆ ಹೊಗೆಯುವುದು, ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು ಮಾಡುತ್ತಾರೆ. ಮಧುವೆ ಛತ್ರಗಳಲ್ಲಿ ಶುಚಿಗೊಳಿಸುವ ಕೆಲಸ ಮಾಡುತ್ತಾರೆ. ಆ ದಿನ ದುಡಿದು ಆ ದಿನ ತಿನ್ನಬೇಕು. ಇದರಿಂದಲೂ ಹಲವಾರು ಶೋಷಣೆಗೆ ಒಳಗಾಗುತ್ತಾರೆ. ಯಾವುದೇ ಸೌಲಭ್ಯ ಕೇಳುವಂತಿಲ್ಲ. ಮಕ್ಕಳು ಎಸ್.ಎಸ್.ಎಲ್.ಸಿ. ಮುಟ್ಟಿದರೆ ಹೆಚ್ಚು ಅವರೂ ಕೂಡ ಕೂಲಿ ಕಾರ್ಮಿಕರೋ, ಆಟೋ, ಟ್ಯಾಕ್ಸಿ ಚಾಲಕರಾಗಿ ಡುಡಿಯುತ್ತಾರೆ. ಕೊನೆಗೆ ಹತಾಶರಾಗಿ ಸಮಾಜಘಾತುಕ ಶಕ್ತಿಗಳಾಗಿ ಮಾರ್ಪಾಡಾಗುತ್ತಾರೆ. ಇದರಿಂದಾಗಿ ಅವರ ಜೀವನವೂ ಹಾಳಾಗುತ್ತದೆ. ಯಾವುದೇ ಅಭಿವೃದ್ದಿ ಆಗುವುದಿಲ್ಲ. ಇರುವ ಮನೆಯಲ್ಲಿಯೇ ವಾಸ. ಇವರ ಅಭಿವೃಡ್ಡಿಗೆಂದೇ ಕೊಳಚೆ ಅಭಿವೃದ್ದಿ ಮಂಡಳಿ ಎಂಬ ಇಲಾಖೆ ಇದ್ದರೂ ಯಾವ ಪ್ರಯೋಜನವೂ ಇಲ್ಲ. ಅವರಿಗೂ ಏನೋ ತಾತ್ಸಾರ, ಸರಕಾರದ ಸಹಾಯ ಹಸ್ತ ನಿವಾಸಿಗಳಿಗೆ ತಲುಪುವುದಿಲ್ಲ. ಇದಕ್ಕೆಲ್ಲಾ ನಿಮ್ಮಂತಹವರು ನಿವಾಸಿಗಳಿಗೆ ನ್ಯಾಯ ಕೊಡಿಸಬೇಕಷ್ಟೆ. ವಂದನೆಗಳು.NANJUNDARAJUhttps://www.blogger.com/profile/04146640406169144285noreply@blogger.com