ಬುಧವಾರ, ಸೆಪ್ಟೆಂಬರ್ 3, 2014

ಮೋದಿಮಯ ಭಾರತದಲ್ಲಿ ರಾಜ್ಯಪಾಲರೆಂಬ ಕಾಲ್ಚೆಂಡುಗಳು



ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜಕೀಯದಲ್ಲಿ ವಿಕ್ರಮ ಸಾಧಿಸಿದ  ಇಂದಿರಾಗಾಂಧಿಯವರ ನಂತರ, ವರ್ಷ ಅಂತಹದ್ದೇ ದಾಖಲೆ ಸ್ಥಾಪಿಸಿದ ನರೇಂದ್ರ ಮೋದಿಯವರು ಎನ್.ಡಿ.. ಮೈತ್ರಿಕೂಟದ   ಪ್ರಧಾನಿ ಗದ್ದುಗೆ ಏರಿದ್ದಾರೆ. ನಂತರ ಒಂದೊಂದೇ ಕ್ಷೇತ್ರದ ಮೇಲೆ ತಮ್ಮ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಬಿ.ಜೆ.ಪಿ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ  ತಮ್ಮ ನೆಚ್ಚಿನ ಭಂಟ ಅಮಿತ್ ಷಾ ರವನ್ನು ತಂದು ಕೂರಿಸಿದ್ದು, ಪಕ್ಷದ ಸಂಸದಿಯ ಮಂಡಳಿಯಿಂದ ಹಿರಿಯ ನಾಯಕರಾದ ಎಲ್.ಕೆ.ಅಧ್ವಾನಿ ಮತ್ತು ಮುರಳಿಮನೋಹರ ಜೋಷಿಯಂತಹವರನ್ನು ಹೊರಗಿಟ್ಟಿದ್ದು ಇವೆಲ್ಲವೂ ಅವರ ಚಾಣಾಕ್ಷ ರಾಜಕೀಯ ನಡೆಗಳಿಗೆ ಸಾಕ್ಷಿಯಾಗಿವೆ.
ಕಡಿಮೆ ಸಿಬ್ಬಂದಿ ಮತ್ತು ಪರಿಣಾಮಕಾರಿಯಾದ ಆಡಳಿತ ಎಂಬ ಘೋಷಣೆಯೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಮೋದಿಯವರು ಆಮೆಗತಿಯ ಆಡಳಿತಕ್ಕೆ  ಚುರುಕು ಮುಟ್ಟಿಸುವುದರ ಮೂಲಕ ಕಾರ್ಯಾಂಗಕ್ಕೆ ಚುರುಕು ತಂದಿರುವುದನ್ನು ಅಲ್ಲಗೆಳೆಯಲಾಗದು. ಆದರೆ, ತಾನೋರ್ವ ಪ್ರಶ್ನಾತೀತ ನಾಯಕ ಎಂಬ ಭಾವನೆಯಿಂದ ವಿಜೃಂಭಿಸುತ್ತಿರುವ ಮೋದಿಯವರು ಅಂತಿಮವಾಗಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕೊನೆಯ ದಿನಗಳಲ್ಲಿ  ತಾಳಿದ ಸರ್ವಾಧಿಕಾರಿ ಧೋರಣೆಯನ್ನು ತಾಳ ಬಹುದೇನೊ ಎಂಬ ಸಣ್ಣ ಸಂಶಯ ಮತ್ತು ಸುಳಿವು ಇತ್ತೀಚೆಗಿನ ಅವರ ರಾಜಕೀಯ ನಡೆಗಳಲ್ಲಿ ಕಾಣುತ್ತಿವೆ. ಪ್ರಶ್ನೆಗಳಿಗೆ ಅಂತಿಮವಾಗಿ ಕಾಲ ಉತ್ತರಿಸಬೇಕಾಗಿದೆ.
ಯು.ಪಿ.. ಸರ್ಕಾರದ ಆಢಳಿತಾವಧಿಯಲ್ಲಿ  ನೇಮಕ ಮಾಡಲಾಗಿದ್ದ ರಾಜ್ಯಪಾಲರನ್ನು ಅತ್ಯಂತ ನಾಜೂಕು ನಡೆಯ ಮೂಲಕ ಒಬ್ಬಬ್ಬರಾಗಿ ತಾವೇ ರಾಜಿನಾಮೆ ನೀಡಿ ನಿರ್ಗಮಿಸುವಂತೆ ಮಾಡಿರುವ ಪ್ರಧಾನಿಯ ಗುಪ್ತ ಕಾರ್ಯಾಚರಣೆಯನ್ನು ಪ್ರಜಾಪ್ರಭುತ್ವದ ನೀತಿ, ನಿಯಮಗಳನ್ನು ಬಲ್ಲ ಯಾವೊಬ್ಬ ನಾಗರೀಕನೂ ಒಪ್ಪಲಾರ. ಇತ್ತೀಚೆಗೆ ನೀಡಲಾದ ಮಣಿಪುರದ ರಾಜ್ಯಪಾಲ ವಿ.ಕೆ. ದುಗ್ಗಾಲ್ ರವರ ರಾಜಿನಾಮೆಯನ್ನೂ ಸಹ ಒಳಗೊಂಡಂತೆ ಒಟ್ಟು ಒಂಬತ್ತು ಮಂದಿ ರಾಜ್ಯಪಾಲರು ರಾಜಿನಾಮೆ ನೀಡಿ ರಾಜಭವನಗಳಿಂದ ನಿರ್ಗಮಿಸಿದ್ದಾರೆ. ರಾಜ್ಯಪಾಲರುಗಳು ರಾಜಿನಾಮೆಗಾಗಿ ಮೋದಿ ಸರ್ಕಾರ ಅನುಸರಿಸಿದ ಪರೋಕ್ಷ ಒತ್ತಡದ  ಕ್ರಮ ಮಾತ್ರ ಆಕ್ಷೇಪಾರ್ಹವಾದುದು. ರಾಜ್ಯಪಾಲರುಗಳೊಂದಿಗೆ ಯಾವೊಂದು ಪೂರ್ವ ಸಮಾಲೋಚನೆಯನ್ನು ನಡೆಸದೆ, ಸರ್ಕಾರಿ ನೌಕರರನ್ನು ವರ್ಗಾಯಿಸುವ ರೀತಿಯಲ್ಲಿ ವರ್ಗಾವಣೆ ಮಾಡಿ ªರುಗಳÀನ್ನು ಅಪಮಾನಿಸಲಾಯಿತು. ಸಂವಿಧಾನ ಬದ್ಧ ಹಕ್ಕು ಮತ್ತು ನಿಯಮದಡಿ ನೇಮಕಗೊಂಡು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳಿಂದ ನಿಗದಿತ ಅಂತರವನ್ನು ಕಾಪಾಡಿಕೊಂಡು, ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಾಂಗ ಮತ್ತು ಶಾಸಕಾಂಗದ ಮುಖ್ಯಸ್ಥರುಗಳಂತೆ ಕಾರ್ಯನಿರ್ವಹಿಸುತ್ತಿದ್ದ ರಾಜ್ಯಪಾಲರ ಹುದ್ದೆಗಿದ್ದ ಗೌರವ ಮತ್ತು ಘನತೆಗೆ ಧಕ್ಕೆ ತರಲಾಯಿತು. ಇದರ ಜೊತೆಗೆ ಅತ್ಯಂತ ಹೀನಾಯ ಮಾರ್ಗವನ್ನು ಸಹ ಮೋದಿ ಸರ್ಕಾರ ತುಳಿಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಹಾಗೂ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣ್ ಅವರ ಮೇಲೆ ಆಗಸ್ಟ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟ್ರ್ ಖರೀದಿ ಹಗರಣ ಕುರಿತಂತೆ ಸಿ.ಬಿ.. ತನಿಖೆ ಕೈಗೊಳ್ಳುವ ಬೆದರಿಕೆ ಒಡ್ಡಿ ರಾಜಿನಾಮೆ ಪಡೆಯಲಾಯಿತು. ಅದೇ ರೀತಿ ಗೋವಾದ ರಾಜ್ಯಪಾಲರಾಗಿದ್ದ ವಿ.ಕೆ. ವಾಂಚು ಅವರನ್ನು ಸಹ ಇದೇ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಸಿ.ಬಿ.. ತನಖೆಗೆ ಒಳಪಡಿಸುವುದರ ಮೂಲಕ ಅವರಿಗೆ ಮುಜುಗರವನ್ನುಂಟು ಮಾಡಿ ಹುದ್ದೆ ತ್ಯೆಜಿಸುವಂತೆ ಮಾಡಲಾಯಿತುಇನ್ನು ನರೇಂದ್ರಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರೊಂದಿಗೆ ನಿರಂತರ ಸಂಘರ್ಷಕ್ಕೆ ಇಳಿದಿದ್ದರು ಎಂಬ ಏಕೈಕ ಕಾರಣಕ್ಕೆ ಅಲ್ಲಿನ ರಾಜ್ಯಪಾ¯ರಾಗಿದ್ದ  ಎಂಬತ್ತೆರೆಡು ವಯಸ್ಸಿನ ಶ್ರೀಮತಿ ಕಮಲ ಬೆನಿವಾಲ್ ಅವರನ್ನು ಒಂದು ಮಾತು ಕೂಡ ಕೇಳದೆ, ದೂರದ ಈಶಾನ್ಯ ಭಾರತದ ರಾಜ್ಯವೊಂದಕ್ಕೆ ವರ್ಗಾಯಿಸಿ ಅವಮಾನಿಸಲಾಯಿತು. ಇದರಿಂದ ಬೇಸತ್ತ ಅವರು ಸಹ ತಮ್ಮ ಹುದ್ದೆ ತೊರೆಯಬೇಕಾಯಿತು. ಮುನ್ನ ಉತ್ತರಪ್ರದೇಶದ ರಾಜ್ಯಪಾಲರಾಗಿದ್ದ ಬಿ.ಎಲ್,ಜೋಷಿ ಮತ್ತು ಛತ್ತೀಸ್ ಗಡದ ರಾಜ್ಯಪಾಲರಾಗಿದ್ದ ಶೇಖರ್ ದತ್ತ ಯಾವುದೇ ರೀತಿಯ ಅಪಮಾನಕ್ಕೂ ಒಳಗಾಗದೆ, ಮೋದಿಯವರ ಆದೇಶದ ಮೇರೆಗೆ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ  ಮೌಖಿಕವಾಗಿ ನೀಡಿದ ಸೂಚನೆಯಂತೆ ತಲೆ ಬಾಗಿ ಹೊರನಡೆದರು.

ಇವರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಶಂಕರ್ ನಾರಾಯಣ್ ಮಾತ್ರ  ತಮ್ಮನ್ನು ರಾತ್ರೋರಾತ್ರಿ ಮಿಜೋರಾಂ ಗೆ ವರ್ಗಮಾಡಿರುವುದನ್ನು ಖಂಡಿಸಿ, ಮೋದಿಯವರ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿಮುಟ್ಟಿಸುವುದರ ಮೂಲಕ ರಾಜಿನಾಮೆ ನೀಡಿದರು. ರಾಷ್ಟ್ರಪತಿಯವರಿಗೆ ರಾಜಿನಾಮೆ ನೀಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರುಮನ ಬಂದಂತೆ ಅಧಿಕಾರದ ಮಂತ್ರ ದಂಡವನ್ನು ಬಳಸುತ್ತಿರುವ ನರೇಂದ್ರಮೋದಿ ನೇತೃತ್ವದ ಎನ್.ಡಿ.. ಸರ್ಕಾರ ನಿರಂಕುಶವಾದಿಯಂತೆ ವರ್ತಿಸುತ್ತಿದೆ. ರೀತಿಯ ಸರ್ವಾಧಿಕಾರತನದ ಧೋರಣೆ ಎನ್.ಡಿ.. ಸರ್ಕಾರದ ವಂಶವಾಹಿಯಲ್ಲಿ ( ಡಿ.ಎನ್.) ಅಡಗಿದೆ ಎಂದು ನನಗೆ ಖಾತ್ರಿಯಾಗಿದೆ ಎಂದರು. ಶಂಕರ್ ನಾರಾಯಣ್ ಅವರಿಗಿಂತ ಇನ್ನೊಂದು ದೃಢ ಹೆಜ್ಜೆ ಇಟ್ಟಿರುವ ಉತ್ತರಾಖಂಡದ ರಾಜ್ಯಪಾಲ ಅಜೀಜ್ ಖುರೇಷಿಯವರು ಕೇಂದ್ರ ಸರ್ಕಾರದ ವಜಾ ಯತ್ನದ ವಿರುದ್ಧ ಸುಪ್ರೀಂಕೋರ್ಟಿನ ಮೆಟ್ಟಿಲೇರುವುದರ ಮೂಲಕ ರಾಜ್ಯಪಾಲರುಗಳ ನೇಮಕ ಮತ್ತು ವಜಾ ಕುರಿತಂತೆ ಇರುವ ಸಂವಿಧಾನದ ಹಕ್ಕುಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈಗಾಗಲೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಗೊಂಡಿರುವ ಸುಪ್ರೀಂಕೋರ್ಟ್ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿಯವರಿಗೆ ನೋಟಿಸ್ ಜಾರಿ ಮಾಡಿದೆ. ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಥಮವಾಗಿ ರಾಜ್ಯಪಾಲರೊಬ್ಬರು ತಮ್ಮನ್ನು ವಜಾಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಪ್ರಕರಣ ಇದಾಗಿದ್ದು, ಮುಖ್ಯನಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆಯುತ್ತಿದೆ. ಸಂದರ್ಭದಲ್ಲಿ  ಕೇಂದ್ರ ಸರ್ಕಾರದ ಮುಂದಿನ ಕಾರ್ಯತಂತ್ರ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದೆ. ನಡುವೆ ರಾಜಸ್ಥಾನದ ರಾಜ್ಯಪಾಲರಾಗಿದ್ದ ಶ್ರೀಮತಿ ಮಾರ್ಗರೇಟ್ ಆಳ್ವರವನ್ನು ಗೋವಾ ಕೇಂದ್ರಾಡಳಿತ ಪ್ರದೇಶಕ್ಕೆ ವರ್ಗಾಯಿಸಲಾಗಿದ್ದು, ಅವರು ಯಾವುದೇ ಆಕ್ಷೇಪಣೆಯಿಲ್ಲದೆ ಗೋವಾದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, ಕೇರಳದ ರಾಜ್ಯಪಾಲರಾಗಿ ಇತ್ತೀಚೆಗೆ ತಾನೆ ಯು.ಪಿ.. ಸರ್ಕಾರದ ಕೊನೆಯ ದಿನಗಳಲ್ಲಿ ನೇಮಕವಾಗಿದ್ದ ದೆಹಲಿಯ ಮಾಜಿ ಮುಖ್ಯಮಂತ್ರಿ ಶ್ರೀಮತಿ ಶೀಲಾ ದೀಕ್ಷಿತ್ ರವರು  ರಾಜಿನಾಮೆ ನೀಡಿ ಹೊರ ಬಂದಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಭಾರತದ ರಾಜಕಾರಣದ ಕಪ್ಪು ಚುಕ್ಕೆ ಎಂದು ಗುರುತಿಸಲ್ಪಟ್ಟಿರುವ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದುಕೊಂಡು ಅಯೋಧ್ಯೆ ನಗರದ ಬಾಬರಿ ಮಸೀದಿ ಧ್ವಂಸಕ್ಕೆ ಪರೋಕ್ಷ ಕಾರಣರಾದ ಕಲ್ಯಾಣ್ ಸಿಂಗ್ ನೇಮಕವಾಗಿದ್ದಾರೆ.


ರಾಜ್ಯಪಾಲರ ರಾಜಿನಾಮೆ ಕುರಿತಂತೆ ಎದ್ದಿರುವ ವಿವಾದಕ್ಕೆ ಸೃಷ್ಟಣೆ ನೀಡಿ ಸಮರ್ಥಿಸಿಕೊಂಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಸರ್ಕಾರ ಬದಲಾದಂತೆ ರಾಜ್ಯಪಾಲರುಗಳು ತಮ್ಮ ಹುದ್ದೆಗೆ ರಾಜಿನಾಮೆ ನೀಡಿ ನಿರ್ಗಮಿಸಬೇಕು ಎಂದು ಪರ್ಮಾನು ಹೊರಡಿಸಿದ್ದಾರೆ. ಇದಕ್ಕೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಧ್ವನಿಗೂಡಿಸಿದ್ದಾರೆ. ಹಾಗಾದರೆ ರಾಜ್ಯಪಾಲರ ಹುದ್ದೆಗಳು ರಾಜಕೀಯ ಪ್ರೇರಿತ ನೇಮಕಾತಿಯ ಹುದ್ದೆಗಳೇ? ಪ್ರಶ್ನೆಗೆ ಸರ್ವೋಚ್ಛ ನ್ಯಾಯಾಲಯದಿಂದ ಹೊರಬೀಳುವ  ತೀರ್ಪಿನಿಂದ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಸರ್ಕಾರಗಳು ಬದಲಾದಂತೆ ನಿಗಮ ಮತ್ತು ಮಂಡಳಿಗೆ ನೇಮಕವಾಗುವ ವ್ಯಕ್ತಿಗಳು ತಮ್ಮ ತಮ್ಮ ಹುದ್ದೆಗೆ ರಾಜಿನಾಮೆ ನೀಡುವುದು ಅಲಿಖಿತ ನಿಯಮ ಅಥವಾ ಸಂಪ್ರದಾಯದಂತೆ ಚಾಲ್ತಿಯಲ್ಲಿತ್ತು. ಕಾರಣಕ್ಕಾಗಿ  ಡಾ. ಮನಮೋಹನ್ ಸಿಂಗ್ ನೇತೃತ್ವದ ಯು.ಪಿ.. ಸರ್ಕಾರದಲ್ಲಿ ಯೋಜನಾ ಮಂಡಳಿಯ ಉಪಾಧ್ಯಕ್ಷರಾಗಿದ್ದ ಮೊಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ರಿಸರ್ವ್ ಬ್ಯಾಂಕಿನ ಮಾಜಿ ಗೌರ್ನರ್ ಸಿ.ರಂಗರಾಜನ್ ಸೇರಿದಂತೆ, ರಾಷ್ಟ್ರೀಯ ವಿಪತ್ತು ನಿರ್ವಹಣ ಮಂಡಳಿಯ ಅಧ್ಯಕ್ಷರಾಗಿದ್ದ ಶಶಿಧರ ರೆಡ್ಡಿ ಮತ್ತು ಇತರೆ ಐದು ಮಂದಿ ಸದಸ್ಯರು ತಮ್ಮ ತಮ್ಮ ಹುದ್ದೆಗಳನ್ನು ತೊರೆದರು. ಒಂದು ಸರ್ಕಾರದ ಆಳ್ವಿಕೆಯಲ್ಲಿ ನೇಮಕಗೊಂಡ ನಂತರ ಮತ್ತೊಂದು ಸರ್ಕಾರದ ಆಳ್ವಿಕೆಯಲ್ಲಿ ನಾವು ಹುದ್ದೆಯಲ್ಲಿ ಇರಬಾರದು ಎಂಬ ನೈತಿಕ ಪ್ರಜ್ಞೆ ಹುದ್ದೆಗಳನ್ನು ತೊರೆಯಲು ಇವರಿಗೆ ಆಧಾರವಾಗಿತ್ತೇ ಹೊರತು, ಇದು ಕಾನೂನು ಬದ್ಧ ನಿಯಮವಾಗಿರಲಿಲ್ಲ.
ಇತ್ತೀಚೆಗೆ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೇಸ್ ಕೂಡ ಸರ್ಕಾರ ನಿಗಮ ಮಂಡಳಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಿಂದಿನ ಬಿ.ಜೆ.ಪಿ. ಸರ್ಕಾರದ ಆಳ್ವಿಕೆಯಲ್ಲಿ ನೇಮಕ ಮಾಡಿದ್ದ ಸಿಂಡಿಕೇಟ್ ಸದಸ್ಯರುಗಳ ವಜಾ ಮಾಡಲು ಹೊರಟಿತ್ತು. ಸಮಯದಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಕೆಲ ಸದಸ್ಯರು ತಡೆಯಾಜ್ಞೆ ತರುವುದರ ಮೂಲಕ ತಮ್ಮ ತಮ್ಮ ಹುದ್ದೆಗಳನ್ನು ರಕ್ಷಿಸಿಕೊಂಡರು. ಹಿಂದಿನ ಸರ್ಕಾರ ನಮ್ಮನ್ನು ಮೂರು ವರ್ಷಗಳ ಅವಧಿಗೆ  ನೇಮಕ ಮಾಡಿರುವಾಗ, ನಮ್ಮನ್ನು ಹುದ್ದೆಯಿಂದ ವಜಾ ಮಾಡುವ ಹಕ್ಕು ನೂತನ ಸರ್ಕಾರಕ್ಕೆ ಇಲ್ಲ ಎಂದು ಸದಸ್ಯರು ವಾದಿಸಿದ್ದರು. ವಾದಕ್ಕೆ  ಹೈಕೋರ್ಟ್ ಸಹಮತ ಸೂಚಿಸಿತು.
ಕರ್ನಾಟಕ ರಾಜ್ಯದ ನಿಗಮ ಮತ್ತು ಮಂಡಳಿಗಳ ಸದಸ್ಯರ ಬೆಳವಣಿಗೆಯನ್ನು ಗಮನಿಸಿದರೆ, ಇದೇ ನಿಯಮವನ್ನು ಕೇಂದ್ರ ಸರ್ಕಾರಕ್ಕೆ ಏಕೆ ಅನ್ವಯಿಸಬಾರದು? ಎಂಬ ಪ್ರಶ್ನೆ ಸಹಜವಾಗಿ ನಮ್ಮನ್ನು ಕಾಡುತ್ತದೆ. ವಾಸ್ತವವಾಗಿ ಇತ್ತೀಚೆಗಿನ ರಾಜ್ಯಪಾಲಕರ ನೇಮಕಾತಿಯನ್ನು ಸೂಕ್ಷ್ಮವಾಗಿ ಗಮನಸಿದಾಗ ದೇಶದ ರಾಜಭವನಗಳು ರಾಜಕೀಯ ವೃದ್ಧಾಶ್ರಮಗಳಾಗಿ ಪರಿವರ್ತನೆಗೊಂಡಿರುವುದನ್ನು ನಾವು ಗಮನಿಸಬಹುದು. ರಾಜಪಾಲ್ಯರ ಹುದ್ದೆಗೆ ಬೇಕಾದ ಅರ್ಹತೆಗಳೇನು ಎಂಬ ಪ್ರಶ್ನೆ ಇವೊತ್ತಿಗೂ ಯಕ್ಷಪ್ರಶ್ನೆಗಳಾಗಿ ಉಳಿದಿದೆ. ರಾಜ್ಯಪಾಲರ ಹುದ್ದೆಯು ಸಂವಿಧಾನ ಬದ್ಧ ಹುದ್ದೆಯಾಗಿದೆಯೇ ವಿನಃ, ಇಂತಹ ಜವಬ್ದಾರಿಯುತ ಹುದ್ದೆಗೆ ಏರಬೇಕಾದ ವ್ಯಕ್ತಿಗೆ  ರಾಜ್ಯದ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತದ ಬಗ್ಗೆ ಕನಿಷ್ಟ ಜ್ಞಾನವಿರಬೇಕು ಎಂಬ ನಿಯಮ ಜಾರಿಯಲ್ಲಿಲ್ಲ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ವಯೋವೃದ್ಧ ರಾಜಕಾರಣಿಳಿಗೆ ಆಶ್ರಯ ಕಲ್ಪಿಸುವ ತಾಣಗಳಾಗಿ ರಾಜಭವನಗಳು ಮಾರ್ಪಾಟಾಗಿವೆ. ಮೋದಿ ನೇತೃತ್ವದ ಎನ್.ಡಿ.. ಸರ್ಕಾರ ಕೂಡ ಇದರಿಂದ ಹೊರತಾಗಿಲ್ಲ. ಗುಜಾರಾತಿನ ಸ್ಪೀಕರ್ ಆಗಿದ್ದÀ ವಾಜುಬಾಯ್ ವಾಲ ಅವರು ಹಿಂದೊಮ್ಮೆ (2001ರಲ್ಲಿ) ತಮಗೆ ಗುಜರಾತಿನಲ್ಲಿ ವಿಧಾನ ಸಭಾ ಕ್ರೇತ್ರವೊಂದÀನ್ನು ತೆರವು ಮಾಡಿಕೊಟ್ಟರು ಎಂಬ ಏಕೈಕ ಕಾರಣಕ್ಕೆ ನರೇಂದ್ರಮೋದಿಯವರು ಅವರನ್ನು ಕರ್ನಾಟಕ ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದಾರೆ. ಗುಜರಾತಿನ ವಿಧಾನ ಸಭೆಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡುವ ಅವಶ್ಯಕತೆ ಏನಿತ್ತು ಇದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ.





ಎರಡು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟಿಷರು ಬಿಟ್ಟು ಹೋದ ಆಡಳಿತದ ಪಳಿಯುಳಿಕೆಗಳಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಹುದ್ದೆಗಳು ಸಹ ಪ್ರಮುಖವಾದವು. ರಾಷ್ಟ್ರಪತಿ ಭವನ ಮತ್ತು ರಾಜಭವನಗಳಲ್ಲಿರುವ ಬಹುತೇಕ ಶಿಷ್ಟಾಚಾರಗಳು ಬ್ರಿಟೀಷರು ಭಾರತೀಯರ ಮೇಲೆ ಹೇರಲಾಗಿದ್ದ ಗುಲಾಮಗಿರಿತನದ ಕುರುಹುಗಳಾಗಿ ಉಳಿದಿವೆ. ಜೊತೆಗೆ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಖಾಸಾಗಿ ಬದುಕು ಕೂಡ ಈಸ್ಟ್ ಇಂಡಿಯ ಕಂಪನಿಯ ಗೌರ್ನರ್ ಜನರಲ್ ಗಳು ಬದುಕಿದ್ದ ವೈಭವೊಪೇತ ಬದುಕಿನ ಪ್ರತಿಬಿಂಬಗಳಂತೆ ಗೋಚರಿಸುತ್ತವೆ. ಒಮ್ಮೆ ದೆಹಲಿ ರೈಸಿನಾ ಹಿಲ್ಸ್ ನಲ್ಲಿರುವ ಮುನ್ನೂರ ಎಂಟು ಕೋಣೆಗಳುಳ್ಳ ರಾಷ್ಟ್ರಪತಿ ಭವನವನ್ನು ಮತ್ತು ಮುಂಬೈ ನಗರದ ಮಲಬಾರ್ ಹಿಲ್ಸ್ ನಲ್ಲಿರುವ ಮಹಾರಾಷ್ಟ್ರ ರಾಜ್ಯಪಾಲರ ಅಧಿಕೃತ ನಿವಾಸ ರಾಜಭವನ ಇಲ್ಲಿನ ಚಟುವಟಿಕೆಗಳನ್ನು ಕಣ್ಣಾರೆ ವೀಕ್ಷಿಸಿದರೆ, ಭಾರತದಂತಹ ಪ್ರಜಾಪ್ರಭುತ್ವವಾದಿ ರಾಷ್ಟ್ರಕ್ಕೆ ಇಂತಹ ವ್ಯವಸ್ಥೆ ಬೇಕಿತ್ತಾ? ಎಂಬ ಪ್ರಶ್ನೆ ನಿರಂತರವಾಗಿ ನಮ್ಮನ್ನು ಕಾಡುತ್ತದೆ.

                                ( ದಿನಾಂಕ 3-9-14 ರಂದು ವಾರ್ತಾ ಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ)



ಬುಧವಾರ, ಆಗಸ್ಟ್ 27, 2014

ಸಾಕ್ಷಿ ಪ್ರಜ್ಞೆಯೊಂದರ ನಿರ್ಗಮನ



ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿದ್ದ ಯು.ಆರ್. ಅನಂತಮೂರ್ತಿಯವರ ಸಾವು ಕಳೆದ ಶುಕ್ರವಾರದಿಂದ ಸೃಷ್ಟಿಸಿರುವ ಶೂನ್ಯತೆ ಮತ್ತು ಸೂತಕ ಛಾಯೆಯನ್ನು ಕನ್ನಡದ ಸಾಂಸ್ಕøತಿಕ ಜಗತ್ತು ಜೀರ್ಣಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಗಬಹುದು. ಮಾತಿಗೆ ಮಾಂತ್ರಿಕತೆಯನ್ನು ಮತ್ತು ಕನ್ನಡ ಭಾಷೆಗೆ ಬೆರಗು ಮತ್ತು ಭವ್ಯತೆಯನ್ನು ತಂದುಕೊಟ್ಟ ಯು.ಆರ್.ಅನಂತಮೂರ್ತಿಯವರ ಹೆಸರು ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹದ್ದು. ತಮ್ಮ ಬದುಕಿನುದ್ದಕ್ಕೂ ಚರ್ಚೆ ಮತ್ತು ವಾಗ್ವಾದಗಳ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕ ಲೋಕದ ಸರಹದ್ದನ್ನು ವಿಸ್ತರಿಸಿದ ಅನಂತಮೂರ್ತಿಯವರು ಇದಕ್ಕಾಗಿ  ಹಲವಾರು ವಿವಾದ ಗುರಿಯಾಗಬೇಕಾಯಿತು.
ಬೇಂದ್ರೆ, ಕುವೆಂಪು, ಶಿವರಾಮ ಕಾರಂತ ಮತ್ತು ಮಾಸ್ತಿ ಮುಂತಾದವರು ಇಪ್ಪತ್ತನೆಯ  ಶತಮಾನದ ಆದಿಭಾಗದಲ್ಲಿ ಆಧುನಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರೆ, ನಂತರ ಬಂದ ಎರಡನೆಯ ತಲೆಮಾರಿನ  ಲಂಕೇಶ್, ತೇಜಸ್ವಿ, ಅನಂತಮೂರ್ತಿ, ಡಿ.ಆರ್. ನಾಗರಾಜ್, ಕೀರಂ ರಂತಹ ಪ್ರತಿಭೆಗಳು ಅದಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವುದರ ಮೂಲಕ  ಭಾರತೀಯ  ಇತರೆ ಭಾಷೆಗಳಲ್ಲದೆ, ಜಗತ್ತು ಕನ್ನಡದತ್ತ ತಿರುಗಿ ನೋಡಿವಂತೆ ಮಾಡಿದರು. ಇದೀಗ ಇವರೆನ್ನೆಲ್ಲಾ ಕಳೆದು ಕೊಂಡಿರುವ ಕನ್ನಡ ಸಾಹಿತ್ಯ ಬಡವಾಯಿತು ಎಂಬ ಮಾತು ಕ್ಲೀಷೆಯಾಗಿ ತೋರುತ್ತದೆ. ಆದರೆ ಮಹಾನಿಯರಿಂದ ಪ್ರಭಾವಿತಗೊಂಡಿದ್ದ ನನ್ನ ತಲೆಮಾರು ಈಗ ಅಕ್ಷರಶಃ ಅನಾಥ ಪ್ರಜ್ಞೆಯನ್ನ, ತಬ್ಬಲಿತನವನ್ನು ಅನುಭವಿಸುತ್ತಿದೆ. ನಮ್ಮ ತಲೆಯೊಳಗಿನ ಕಸ ಮತ್ತು ಎದೆಯೊಳಗಿನ ವಿಷವನ್ನು ತೆಗೆದು ಹಾಕಿದ ಲಂಕೇಶ್, ತೇಜಸ್ವಿ, ಅನಂತಮೂರ್ತಿಯವರಿಲ್ಲದ ಕನ್ನಡದ ಸಾಂಸ್ಕತಿಕ ಜಗತುದಿನ್ನು ಮುಂದೆ ಲಂಗು ಲಗಾಮಿಲ್ಲದ ಕುದುರೆಯಾಗಬಹುದು ಎಂಬ ಆತಂಕ ಮನದೊಳಗೆ ಮಡುವುಗಟ್ಟುತ್ತಿದೆ.
ಲಂಕೇಶ್ ಮತ್ತು ತೇಜಸ್ವಿಯವರಿಗೆ ಹೋಲಿಕೆ ಮಾಡಿದಾಗ ಅನಂತಮೂರ್ತಿಯವರು ಅವರಿಗಿಂತ ಭಿನ್ನವಾಗಿ ತಮ್ಮ ಅಸ್ಮಿತೆಯನ್ನು ಕಾಪಾಡಿಕೊಂಡವರಾಗಿದ್ದರು. ಲಂಕೇಶ್ ಮತ್ತು ತೇಜಸ್ವಿಯವರು ಅದ್ಭುತ ಬರಹಗಾರರಾಗಿದ್ದರೆ ಹೊರತು, ಮಾತುಗಾರರಾಗಿರಲ್ಲ. ಆದರೆ ಅನಂತಮೂರ್ತಿಯವರು ಅದು ಖಾಸಾಗಿ ಚರ್ಚೆಯಾಗಿರಲಿ, ಉಪನ್ಯಾಸವಾಗಿರಲಿ ಅಥವಾ ಸಾರ್ವಜನಿಕ ಭಾಷಣವಾಗಿರಲಿ ಅಲ್ಲಿ ತಮ್ಮ ಮಾತು ಮತ್ತು ವಿಚಾರಧಾರೆಗಳ ಮೂಲಕ ಮಾಂತ್ರಿಕಲೋಕವನ್ನು ಸೃಷ್ಟಿಸಿಬಿಡುತ್ತಿದ್ದರು. ಎಂದೂ ಖಾಸಾಗಿತನವನ್ನಾಗಲಿ ಅಥವಾ ಏಕಾಂಗಿತನವನ್ನಾಗಲಿ ಬಯಸದ ಅನಂತಮೂರ್ತಿಯವರು ಸದಾ ದೇಶ ವಿದೇಶಗಳನ್ನು ಸುತ್ತುತ್ತಾ ಸುದ್ಧಿಯಲ್ಲಿರುತ್ತಿದ್ದರು.

ಕಳೆದ ಮೂರು ದಶಕಗಳಲ್ಲಿ ಅಂದರೆ ನವ್ಯದ ಸಾಹಿತ್ಯ ಉತ್ತುಂಗದಲ್ಲಿದ್ದ ಕಾಲದಿಂದ ಅದರ ಉಗ್ರ ಪ್ರತಿಪಾದಕರಾಗಿದ್ದ ಅನಂತಮೂರ್ತಿಯವರ ಜೊತೆ  ಜಗಳವಾಡದೆ ಇರುವವರನ್ನು ಕರ್ನಾಟಕದಲ್ಲಿ ದುರ್ಬೀನು ಹಾಕಿ ಹುಡುಕಬೇಕಾಗುತ್ತದೆ. ಏಕೆಂದರೆ, ಅದು ಸಾಹಿತ್ಯಕವಾಗಿರಲಿ, ಸಾಮಾಜಿಕ ಸಂಗತಿಯಾಗಿರಲಿ ಅಥವಾ ರಾಜಕೀಯವಾಗಿರಲಿ ಹೊಸ ವಾಗ್ವದಗಳನ್ನು ಹುಟ್ಟು ಹಾಕುತ್ತಿದ್ದ ಅನಂತಮೂರ್ತಿಯವರು, ತಮ್ಮ ಕೃತಿಗಳು ಅಥವಾ ತಾವು ಮಂಡಿಸಿದ ವಿಷಯಗಳ ಕುರಿತು ಯಾರು ಎಷ್ಟೇ ಕಟುವಾಗಿ ಟೀಕಿಸಲಿ ಅಥವಾ ವಿರೋಧಿಸಲಿ ಅವರ ಜೊತೆ ತಾತ್ವಿಕವಾಗಿ ಜಗಳವಾಡುತ್ತಿದ್ದರೆ ಹೊರತು, ಎಂದೂ ತಮನ್ನ್ಮು ವಿರೋಧಿಸಿದವರ ಬಗ್ಗೆ ಮತ್ಸರವನ್ನಾಗಲಿ, ವಿಷವನ್ನಾಗಲಿ ತಮ್ಮ ಎದೆಯಲ್ಲಿ ಬಚ್ಚಿಟ್ಟುಕೊಂಡವರಲ್ಲ. ಅವರನ್ನು ಕಳೆದುಕೊಂಡ ಸಮಯದಲ್ಲಿ ಹಲವಾರು ನೆನಪುಗಳು ನನ್ನನ್ನು ನಿರಂತರವಾಗಿ ಕಾಡುತ್ತಿವೆ.
ಅದು 1980 ಇಸವಿ. ನಾನಾಗ ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿ ಓದುತ್ತಿದ್ದೆ. ಆಗಿನ ಮಲ್ಲಿಗೆ ಎಂಬ ಮಾಸಪತ್ರಿಕೆ ಸಂಪಾದಕರಾಗಿದ್ದ ಎಸ್.ದಿವಾಕರ್ ಮೂಲಕ ಬೆಂಗಳೂರಿನ ಬಹುತೇಕ ಲೇಖಕರ ಸಂಪರ್ಕಕ್ಕೆ ಬಂದಿದ್ದೆ. ಇದೇ ವೇಳೆಯಲ್ಲಿ ಗಿರಿ ಎಂಬುವವರ ಗತಿಸ್ಥಿತಿ ಎಂಬ ಕೆಟ್ಟ ಕಾದಂಬರಿಯೊಂದು ಬಿಡುಗಡೆಯಾಗಿತ್ತು. ನವ್ಯ ಸಾಹಿತ್ಯ ಕನ್ನಡವನ್ನು ಆವರಿಸಿಕೊಂಡಿದ್ದಾಗ ಅನಂತಮೂತಿಯವರು ಒಳಗೊಂಡಂತೆ ಕಾದಂಬರಿಯನ್ನು ಶತಮಾನದ ಕಾದಂಬರಿಯಂತೆ ಎಲ್ಲರೂ ಇನ್ನಿಲ್ಲದಂತೆ ಬಣ್ಣಿಸುತ್ತಿದ್ದರು. ಕಾದಂಬರಿಯನ್ನು ಓದಿದ್ದ ನನಗೆ  ತಲೆ ಕೆಟ್ಟು ಕೆರಹಿಡಿದು ಹೋಗಿತ್ತುಯಾವುದೇ ರೀತಿಯ ಪ್ರಬುದ್ಧತೆಯಲ್ಲದೆ ಹುಂಬನಂತಿದ್ದ ನಾನು ಒಂದು ದಿನ ಸೆಂಟ್ರಿಲ್ ಕಾಲೇಜಿನ ಸೆನೆಟ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಕುರಿತಾದ ಕಾರ್ಯಕ್ರಮದ ನಂತರ ಅನಂತಮೂತಿಯವರನ್ನು ಅಡ್ಡ ಹಾಕಿಕೊಂಡು ಗತಿಸ್ಥಿತಿ ಕಾದಂಬರಿಯ ಬಗ್ಗೆ ಜಗಳವಾಡಿದ್ದೆ. ಸುಮಾರು ಹತ್ತು ನಿಮಿಷಗಳ ಕಾಲ ನನ್ನ ಹೆಗಲ ಮೇಲೆ ಕೈ ಹಾಕಿ ಕಾಲೇಜಿನ ಕಾರಿಡಾರ್ ಬಳಿ ತಿರುಗಾಡುತ್ತಾ ಉಪನ್ಯಾಸ ಮಾಡಿದ ಅವರುಕಾಮು ಮತ್ತು ಕಾಪ್ಕ ಇವರನ್ನು ಓದುವ ಕುರಿತಂತೆ ಹಾಗೂ ಒಳ್ಳೆಯ ಕಾದಂಬರಿಗಳನ್ನು ಹೇಗೆ ಗ್ರಹಿಸಬೇಕು ಎಂಬುದರ ಕುರಿತು ನನಗೆ ಮನನ ಮಾಡಿಕೊಟ್ಟಿದ್ದರು. ಆದರೆ, ಆಲ್ಬರ್ಟ್ಕಾಮೂವಿನ ಕಾದಂಬರಿಗಳು ನನ್ನ ಎದೆಯನ್ನು ತಟ್ಟಿದ ಹಾಗೆ ಕಾಪ್ಕ ಮತ್ತು ಗಿರಿಯವರ ಕಾದಂಬರಿಗಳು ಕಥೆಗಳು ಯಾವ ಕಾಲಕ್ಕೂ ನನ್ನದೆಗೆ ತಾಕಲಿಲ್ಲ.
ಇನ್ನೊಂದು ಘಟನೆ 1992 ಅಕ್ಟೋಬರ್ ತಿಂಗಳಿನಲ್ಲಿ ನಡೆದದ್ದು. ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ಮತ್ತು ನನ್ನ ನಡುವಿನ ಸಂಬಂಧ  ಒಂದು ರೀತಿಯಲ್ಲಿ ತಂದೆ-ಮಗನ ಸಂಬಂಧ. 1980 ದಶಕದಲ್ಲಿ ಮುದ್ರಣರಂಗಕ್ಕೆ ಕಾಲಿಟ್ಟ ಡಿ.ಟಿ.ಪಿ. ಮತ್ತು ಆಫ್ ಸೆಟ್ ಮುದ್ರಣ ಇವುಗಳ ಆಗಮನದಿಂದಾಗಿ ಪುಸ್ತಕಗಳ ಮುದ್ರಣದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾದವು. ಆದರೆ ಸುಬ್ಬಣ್ಣನವರು ಮಾತ್ರ ಇವುಗಳಿಗೆ ತೆರೆದುಕೊಳ್ಳದೆ ತಮ್ಮ ಅಕ್ಷರ ಪ್ರಕಾಶನದ ಎಲ್ಲಾ ಕೃತಿಗಳನ್ನು ಹೆಗ್ಗೋಡಿನಲ್ಲಿದ್ದ ತಮ್ಮ ಮುದ್ರಾಣಾಲಯದಲ್ಲಿ ಅಕ್ಷರದ ಮೊಳೆಗಳನ್ನು ಜೋಡಿಸಿ, ಕಾಲದ ಪ್ರಿಂಟಿಂಗ್ ಪ್ರೆಸ್ ಮೆಷಿನ್ ನಲ್ಲಿ ಮುದ್ರಿಸಿ ಪ್ರಕಟಿಸುತ್ತಿದ್ದರು. ನಾನು ಹೊಸ ತಂತ್ರ ಜ್ಞಾನ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವಾಗಲೆಲ್ಲಾ ಅವರು ನಿರಾಕರಿಸುತ್ತಿದ್ದರು. ಅವರ ಮುದ್ರಣಾಲಯದಲ್ಲಿ ಮಹಿಳೆಯರೂ ಒಳಗೊಂಡಂತೆ ಹತ್ತು ಅಥವಾ ಹನ್ನೆರೆಡು ಮಂದಿ ನಿರಂತರವಾಗಿ ಕೆಲಸ ಮಾಡುತ್ತಿದ್ದರು. ತಾನು ಆಫ್ ಸೆಟ್ ಮುದ್ರಣಕ್ಕೆ ಹೋದರೆ ಕೆಲಸಗಾರರ ಅನ್ನ ಕಿತ್ತುಕೊಂಡಂತಾಗುತ್ತದೆ ಎಂಬ ಸಂಕಟ ಅವರನ್ನು ಬಾಧಿಸುತ್ತಿತ್ತು, ಒಮ್ಮೆ ನನ್ನ ಒತ್ತಾಯದ ಮೇರೆಗೆ ಬೆಂಗಳೂರಿಗೆ ಬಂದು ಆಫ್ ಸೆಟ್ ಮುದ್ರಣದಲ್ಲಿ ತ್ವರಿತ ಗತಿಯಲ್ಲಿ ಪುಸ್ತಕಗಳು ಪ್ರಿಂಟಾಗುವುದು, ಬಹು ವರ್ಣಗಳಲ್ಲಿ ಮುಖಪುಟಗಳು ಸಿದ್ಧವಾಗುವುದು ಇವುಗಳನ್ನು ನೋಡಿ ನಂತರದ ದಿನಗಳಲ್ಲಿ ಅರೆ ಮನಸ್ಸಿನಿಂದ ಒಪ್ಪಿಗೆ ನೀಡಿದ್ದರು. ಆನಂತರ 1993 ಅಥವಾ 94 ರಲ್ಲಿ ಅನಂತಮೂರ್ತಿಯವರ ಭವ ಎಂಬ ಕಾದಂಬರಿಯನ್ನು ಮುದ್ರಿಸಿ, ನನ್ನೂರಾದ ಕೊಪ್ಪದಲ್ಲಿ ವಾಸವಾಗಿದ್ದ ನನಗೂ ಒಂದು ಪ್ರತಿಯನ್ನು ರವಾನಿಸಿದ್ದರು.
ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹೆಗ್ಗೋಡಿನಲ್ಲಿ ನಡೆಯುತ್ತಿದ್ದ ನಿನಾಸಂ ಸಂಸ್ಕøತಿ ಶಿಬಿರಕ್ಕೆ ಪಾಲ್ಗೊಂಡಿದ್ದೆ. ಒಂದು ದಿನ ಬೆಳಿಗ್ಗೆ ಹೆಗ್ಗೋಡಿನ ಅವರ ಕಚೇರಿಯ ಮುಂದಿದ್ದ ಮೂರು ಅಡಿ ಎತ್ತರದ ಮೋಟು ಗೋಡೆಯ ಮೇಲೆ  ಗೋಡೆಗೆ ಒರಗಿ ಎಲೆ ಅಡಿಕೆ ಹಾಕಿಕೊಂಡು ಕುಳಿತಿದ್ದ  ಸುಬ್ಬಣ್ಣನವರು ನನ್ನನ್ನು ಕರೆದು ಭವ ಕಾದಂಬರಿಯನ್ನು ಓದಿದೆಯಾ ಕೊಪ್ಪ? ಎಂದರುಓದಿದೆ ಎಂದು ನಾನು ಉತ್ತರಿಸಿದೆ. ಏನನಿಸಿತು? ಎಂದು ಕುತೂಹಲದಿಂದ ಕೇಳಿದರು. ಸುತ್ತ ಮುತ್ತ ಶಿಬಿರಾರ್ಥಿಗಳು ಚಹಾ ಮತ್ತು ಕಾಫಿ ಕುಡಿಯುತ್ತಾ ನಿಂತಿದ್ದರಿಂದ ಮೆಲ್ಲನೆ ಅವರ ಕಿವಿಯ ಬಳಿ  ತೆರಳಿ, “ನಾನು ಓದಿದ ಕೆಟ್ಟ ಕಾದಂಬರಿಗಳಲ್ಲಿ ಅದು ಕೂಡ ಒಂದುಎಂದು ಉತ್ತರಿಸಿದೆ. ನನ್ನ ಮಾತು ಕೇಳಿ ಸ್ವಲ್ಪ ಕಾಲ ಮೌನಕ್ಕೆ ಶರಣಾದ ಅವರು, ಸ್ವಗತದ ಧ್ವನಿಯಲ್ಲಿ ಸಂಸ್ಕಾರ, ಭಾರತೀಪುರ ಮತ್ತು ಅವಸ್ಥೆ ಇವುಗಳು ಮಾತ್ರ ಅನಂತಮೂರ್ತಿಯ ಹೆಸರನ್ನು ಶಾಸ್ವತಗೊಳಿಸುವ ಕಾದಂಬರಿಗಳು ಎಂದರು. ಮಧ್ಯಾಹ್ನ ಊಟದ ಸಮಯದ ವೇಳೆಗೆ ಸರಿಯಾಗಿ ನಾನು ಹೇಳಿದ್ದ ಮಾತನ್ನು ಸುಬ್ಬಣ್ಣನವರು ಅನಂತಮೂರ್ತಿಗೆ ದಾಟಿಸಿಬಿಟ್ಟಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ  ನನ್ನನ್ನು ಕರೆದು ಪಕ್ಕದಲ್ಲಿ ಕೂರಿಸಿಕೊಂಡ ಅನಂತಮೂರ್ತಿಯವರು,  “ಏನಯ್ಯಾ ಕೊಪ್ಪ? ನೇಪಾಳಕ್ಕೆ ಹೋಗಿ ತಿಂಗಳು ಕಾಲ ಧ್ಯಾನಸ್ಥ ಮನಸ್ಸಿನಲ್ಲಿ ಕುಳಿತು ಬರೆದ  ಕಾದಂಬರಿಯನ್ನು ನೀನು ರೀತಿನಾ  ಟೀಕಿಸೋದು?” ಎಂದು ಪ್ರೀತಿಯಿಂದ ಗದರುತ್ತಾ ಕಾದಂಬರಿ ಕುರಿತು ಮಾತನಾಡಿದರು. ಹಿರಿಯ ಅಥವಾ ಕಿರಿಯ ಎನ್ನುವ ಬೇಧ ಭಾವವಿಲ್ಲದೆ ತಮ್ಮ ಮನಸ್ಸಿನ ಅನಿಸಿಕೆಗಳನ್ನು ಇನ್ನೊಬ್ಬರಿಗೆ ಮುಟ್ಟಿಸುವ ತವಕ ಅನಂತ ಮೂರ್ತಿಯವರಿಗೆ ಇದ್ದ ಹಾಗೆ ಬೇರೊಬ್ಬ ಲೇಖಕರಿಗೆ ಇದ್ದುದನ್ನು ನಾನು ಕಾಣಲೇ ಇಲ್ಲ. ಅದು ಪ್ರೀತಿಯಿರಲಿ, ಸಿಟ್ಟಿರಲಿ ಅವುಗಳನ್ನು ಹೊರ ಹಾಕಿದರೆ ಮಾತ್ರ ಅವರ ಆತ್ಮ ತೃಪ್ತಿಗೊಳ್ಳುತ್ತಿತ್ತು.

ಅನಂತಮೂತಿಯವರ ಬಹು ದೊಡ್ಡಗುಣವೆಂದರೆ, ಅವರೆಂದೂ ತಮ್ಮ ಜೀವಿತದಲ್ಲಿ ತಮ್ಮ ಕಟು ವಿರೋಧಗಳ ಬಗ್ಗೆಯಾಗಲಿ, ಟೀಕಿಸುವವರ ವಿರುದ್ಧ ಎಂದು ವೈರತ್ವವನ್ನು ಸಾಧಿಸಲಿಲ್ಲ. ಕಾರಣಕ್ಕಾಗಿ ಅವರಿಗೆ ತಮ್ಮ ಜೀವೀತಾವಧಿಯಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕದಿದ್ದರೂ ಸಹ ಅವರಿಗೆ ಪ್ರಶಸ್ತಿ ತಪ್ಪಿಸಿದವರ ಬಗ್ಗೆ ಎಂದೂ ಬೇಸರಗೊಳ್ಳಲಿಲ್ಲ. ನನಗಿನ್ನೂ ನೆನಪಿದೆಹತ್ತು ವರ್ಷಗಳ ಹಿಂದೆ ಇದೇ ಅಗ್ನಿ ವಾರಪತ್ರಿಕೆಯಲ್ಲಿ ಅನಂತಮೂರ್ತಿಯವರ ನಡೆ ನುಡಿ ಕುರಿತಾದ ಒಂದು ಲೇಖನ ಪ್ರಕಟವಾಯಿತು. ಲೇಖನದಿಂದ ಘಾಸಿಗೊಂಡ ಅವರು ಮರುದಿನ ತಮ್ಮ ಪತ್ನಿ, ಪುತ್ರ, ಸೊಸೆ ಸಮೇತರಾಗಿ ಅಗ್ನಿ ವಾರಪತ್ರಿಕೆ ಕಛೇರಿ ಎದುರು ಧರಣಿ ಕೂತು ಸಂಪಾದಕರಾಗಿದ್ದ ಶ್ರೀಧರ್, ಮತ್ತು ಅವರ ಬಳಗಕ್ಕೆ ಮುಜುಗರವನ್ನುವನ್ನುಂಟು ಮಾಡಿ, ತಾವೂ ಸಹ ಮಾಧ್ಯಮಗಳ ಎದುರು ಮುಜುಗರಕ್ಕೆ ಒಳಗಾದರು. ಘಟನೆ ನಡೆದ ಕೆಲವೇ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಅಗ್ನಿ ಶ್ರೀಧರ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು. ಕ್ಷಣಕ್ಕೆ ತಮ್ಮ ಎದೆಯೊಳಗೆ ಹುಟ್ಟುವ  ಸಿಟ್ಟು ಅಥವಾ ಪ್ರೀತಿಯನ್ನು ಅವರು ಎಂದೂ ಕಾಪಿಟ್ಟುಕೊಂಡವರಲ್ಲ, ಹಾಗಾಗಿ ಅವರು ತಮ್ಮ ಹೇಳಿಕೆಗಳಿಂದ ನಿರಂತರವಾಗಿ ವಿವಾದಗಳಿಗೆ ಬಲಿಯಾದರು. ನಿರಂತರವಾಗಿ ಚಲನಶೀಲ ಸಮಾಜದಲ್ಲಿ  ಚಾಲ್ತಿಯಲ್ಲಿರುವುದು ಅವರ ಪಾಲಿಗೆ ಒಂದು ರೀತಿಯಲ್ಲಿ ವ್ಯಸನವಾಗಿ ಮಾರ್ಪಟ್ಟಿತ್ತು.
ನಿಜ ಹೇಳಬೇಕೆಂದರೆ, ಅನಂತಮೂರ್ತಿಯವರ ಬರೆವಣಿಗೆಯ ಕಸುವು 1990 ವೇಳೆಗೆ ತೀರಿಹೋಗಿತ್ತು, ಸಮಯದಲ್ಲಿ ಬಂದ ಅವರ ಭವ ಮತ್ತು ದಿವ್ಯ ಎಂಬ ಎರಡು ಕಾದಂಬರಿಗಳನ್ನು ಕನ್ನಡ ಸಾರಸ್ವತಲೋಕ ಸಾರಾಸಗಟಾಗಿ ತಿರಸ್ಕರಿಸಿತ್ತು. ಹಾಗಾಗಿ ನಂತರದ ದಿನಗಳಲ್ಲಿ ಅವರು ತಮ್ಮ ಸೃಜನಶೀಲ ಬರೆವಣಿಗೆಗೆ ಕೈ ಹಾಕದೆ ಹೆಚ್ಚು ಹೆಚ್ಚು ಮಾತನಾಡತೊಡಗಿದರು. ಅವರ ಪಾಲಿಗೆ ಮಾತೆಂಬುದು ಮಂತ್ರವಾಯಿತು. 1990 ನಂತರ ಕೆಲವು ವಿಷಯಗಳ ಕುರಿತಾಗಿ ಬರೆದ ಲೇಖನಗಳು ಮತ್ತು ಹಲವು ಕೃತಿಗಳಿಗೆ ಬರೆದ ಮುನ್ನುಡಿ ಇಲ್ಲವೆ ಬೆನ್ನುಡಿ ಅವರ ಪಾಲಿನ ಸಾಹಿತ್ಯದ ಕೃಷಿಯಾಯಿತು. ಕನ್ನಡದ ಅತ್ಯಂತ ಪ್ರಸಿದ್ಧ ಪಡೆದ ಹಾಗೂ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದ ಅನಂತಮೂರ್ತಿಯವರು ಓರ್ವ ಪ್ರಸಿದ್ಧ ಲೇಖಕನಾಗಿ ತಾನು ಬದುಕುತ್ತಿದ್ದ ಸಮಾಜದೊಡನೆ ಕಾಯ್ದುಕೊಳ್ಳಬೇಕಾದ ಅಂತರವನ್ನು ಕಾಯ್ದುಕೊಳ್ಳಲಾರದೆ ಒಮ್ಮೊಮ್ಮೆ ತಮ್ಮ ಪ್ರತಿಷ್ಟೆ ಮತ್ತು ಘನತೆಯನ್ನು ಎಲ್ಲರದೆರು ಪಣಕ್ಕೊಡ್ಡಿ ಘಾಸಿಗೊಂಡರು ಜೊತೆಗೆ ಅಪಮಾನಿತರಾದರು. ತನ್ನ ಸುತ್ತ ಮುತ್ತಲಿನ ಜನ ಮತ್ತು ತಾನು ಬದುಕುತ್ತಿದ್ದ ವರ್ತಮಾನ ಜಗತ್ತಿನ  ಕ್ಷುದ್ರ ಸಮಾಜವನ್ನು ಕಂಡು ವ್ಯಗ್ರರಾಗುತ್ತಿದ್ದ ಲಂಕೇಶರ ಗುಣವಾಗಲಿ ಅಥವಾ ದಿವ್ಯ ನಿರ್ಲಕ್ಷ್ಯತೆಯಿಂದ ಇದೇ ಸಮಾಜವನ್ನು ನೋಡುತ್ತಿದ್ದ ತೇಜಸ್ವಿಯವರ ನಿರ್ಭಾವುಕತನವಾಗಲಿ ಅನಂತಮೂರ್ತಿಯವರಿಗೆ ದಕ್ಕಲಿಲ್ಲ. ಹಾಗಾಗಿ  ಕುಮಾರಸ್ವಾಮಿಯಂತಹ ಒಬ್ಬ ಆಕಸ್ಮಿಕ ಮುಖ್ಯಮಂತ್ರಿಯೊಬ್ಬ ಅಪ್ರಬುದ್ದವಾಗಿ  “ ಯಾರ್ರೀ ಅವನು ಅನಂತ ಮೂರ್ತಿಎಂದು ಸಾರ್ವಜನಿಕವಾಗಿ ಪ್ರಶ್ನಿಸಿದಾಗ, “ಕರ್ನಾಟಕದ ಮೂಲೆ ಮೂಲೆಗೆ ಹೋಗಿ ಬೀದಿಯಲ್ಲಿ ನಿಂತು ಪ್ರಶ್ನೆಯನ್ನು ಕೇಳುಎಂದು ನಾಡಿನ ಮುಖ್ಯಮಂತ್ರಿಯೊಬ್ಬನಿಗೆ ಉತ್ತರ ಹೇಳುವ ಸಾತ್ವಿಕ ಸಿಟ್ಟನ್ನು ಅವರು ಬೆಳಸಿಕೊಳ್ಳಲಿಲ್ಲ. ಅದೇ ಕುಮಾರಸ್ವಾಮಿ ಯಾವುದೋ ಒಂದು ಸಂದರ್ಭದಲ್ಲಿ ಉಪವಾಸ ಸತ್ಯಾಗ್ರಹ ಕುಳಿತಾಗ ವ್ಯಕ್ತಿಗೆ ನಿಂಬೆ ರಸ ಕುಡಿಸಲು ಇವರು ಮುಂದಾದರು. ಸಿನಿಮಾ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ವಲಯಗಳ ಚಟುವಟಿಕೆಗಳು  ಅವರ ಪಾಲಿಗೆ ಅನುಸಂಧಾನದ ಪ್ರಕ್ರಿಯೆಗಳಾದವು. ಹಾಗಾಗಿ ರಾಜಕೀಯವ್ಯಕ್ತಿಗಳಾಗಲಿ, ಪಕ್ಷಗಳಾಗಲಿ ಅವರ ಪಾಲಿಗೆ ಎಂದೂ ಮೈಲಿಗೆ ಅನಿಸಲಿಲ್ಲ. ಕಾರಣಕ್ಕಾಗಿ ಅವರು ನನ್ನ ತಲೆಮಾರಿನ ಬಹುತೇಕ ಜನರ ಸಿಟ್ಟು ಮತ್ತು ಪ್ರೀತಿ ಎರಡಕ್ಕೂ ಕಾರಣರಾದ ಅಪರೂಪದ ವ್ಯಕ್ತಿಯಾದರು.

ಅನಂತಮೂರ್ತಿಯವರ ಕುರಿತು ನಮ್ಮ ತಕರಾರುಗಳು ಏನೇ ಇರಲಿ, ಕನ್ನಡದ ಜಗತ್ತನ್ನು ಜಗತ್ತಿಗೆ ವಿಸ್ತರಿಸಿದವರಲ್ಲಿ ಅವರು ಅಗ್ರಗಣ್ಯರು. ಭಾರತೀಯ ಕಾದಂಬರಿಗಳೆಂದರೆ, ಮುಲ್ಕ್ ರಾಜ್ ಆನಂದ್   ಕೂಲಿಅನ್ ಟಚ್ ಬಲ್, ಹಾಸನದ ರಾಜಾರಾವ್ ಅವರ ಕಾಂತಾಪುರ, ಆರ್.ಕೆ. ನಾರಾಯಣ್ ಅವರ ಗೈಡ್ ಇವುಗಳಷ್ಟೇ ಎಂದು ಜಗತ್ತು ನಂಬಿಕೊಂಡು ನಿರ್ವಚಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಂಸ್ಕಾರ ಕಾದಂಬರಿಯತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದರು
              ( ಸಂಸ್ಕಾರ ಕಾದಂಬರಿಯನ್ನು .ಕೆ. ರಾಮಾನುಜಂ ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ)
ಕೊನೆಯ ಮಾತು. ಕಳೆದ ಶನಿವಾರ ಸಂಜೆ ಬೆಂಗಳೂರಿನಲ್ಲಿ ಅನಂತಮೂರ್ತಿಯವರ ಅಂತ್ಯಕ್ರಿಯೆ ಮುಗಿಸಿಕೊಂಡು ತಿಪಟೂರಿಗೆ ಹೊರಟಿದ್ದ ನಮ್ಮ ನಡುವಿನ ಕತೆಗಾರ, ಅನುವಾದಕ ಹಾಗೂ ಗೆಳಯ ಗಂಗಾಧರಯ್ಯನವರಿಗೆ ಪುನಃ ಯಾವಾಗ ಬೇಟಿಯಾಗೊಣ ಎಂದೆ. ಕ್ಷಣಕ್ಕೆ ಭಾವುಕರಾದ ಗಂಗಾಧರಯ್ಯ, ಇವೊತ್ತಿನಿಂದ ಬೆಂಗಳೂರು ನನ್ನದಲ್ಲ ಅನಿಸಿದೆ ಕೊಪ್ಪ, ಲಂಕೇಶರಿಲ್ಲದ, ಅನಂತಮೂರ್ತಿಯಿಲ್ಲದ, ಕೀರಂ ಇಲ್ಲದ, ಡಿ.ಆರ್ ನಾಗರಾಜ್ ಇಲ್ಲದ ಬೆಂಗಳೂರು ನಗರ ಯಾರಿಗೆ ಬೇಕು? ಇಲ್ಲಿಗೆ ಬಂದು ಯಾರ ಮಾತನ್ನು ಕೇಳೊಣ? ಎನ್ನುತ್ತಿದ್ದಂತೆ ಅವರ ಕೊರಳು ಕಟ್ಟಿಕೊಂಡಿತು. ಅವರ   ಮಾತುಗಳನ್ನು ಕೇಳಿಸಿಕೊಂಡ ನನ್ನ ಕಣ್ಣುಗಳು ಒದ್ದೆಯಾದವು. ಇವು ಕೇವಲ ಗಂಗಾಧರಯ್ಯನವರೊಬ್ಬರÀ ಹತಾಶೆಯ ಮಾತುಗಳಂತೆ ನನಗೆ ಕೇಳಿಸದೆಕನ್ನಡದ ಜಗತ್ತಿಗೆ ಶೂನ್ಯ ತುಂಬಿಕೊಂಡಿರುವಾಗ ಆಡಬಹುದಾದ ನನ್ನ ತಲೆಮಾರಿನ ಒಕ್ಕೊರಲಿನ ನೋವಿನ ದನಿಯಾಗಿ ಕೇಳಿಸಿತು.

                                                            (ಅಗ್ನಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)