ಬುಧವಾರ, ಜೂನ್ 8, 2016

ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ದೇವತೆಯರು





ನಾವು ಬದುಕುತ್ತಿರುವ ವರ್ತಮಾನದ ಕಾಲ ಮತ್ತು ಸಮಾಜ ಎರಡೂ ಅತಿ ಸೂಕ್ಷ್ಮತೆ ಮತ್ತು ನಾಜೂಕಿನಿಂದ ಕೂಡಿವೆ. ನಾವು ಆಡಬಹುದಾದ ಮಾತು, ಬರೆಯಬಹುದಾದ ಕಥೆ ಅಥವಾ ಕಾವ್ಯ, ಚಿತ್ರಿಸಬಹುದಾದ ಚಿತ್ರ, ಹಾಡುವ ಹಾಡು ಎಲ್ಲವೂ ಧಾರ್ಮಿಕ ಸೋಸು ಪರದೆಯನ್ನು (ಫಿಲ್ಟರ್ ಕ್ಲಾತ್) ಹಾಯ್ದು ಬರಬೇಕು. ಒಂದು ಸಮುದಾಯದ ನಾಯಕ ಅಥವಾ ಒಬ್ಬ ಧಾರ್ಮಿಕ ಮುಖಂಡನೊಬ್ಬ ಲೇಖಕನೊಬ್ಬನ ಸೃಜನಶೀಲ ಕೃತಿಗಳ ಬಗ್ಗೆ  ಅಕಸ್ಮಾತ್ ಏನಾದರೂ ಅಪಸ್ವರ ಎತ್ತಿದರೆ, ಪ್ರತಿಯೊಬ್ಬ ಲೇಖಕ ಅಥವಾ ಕಲಾವಿದ ಸತ್ವ ಪರೀಕ್ಷೆಯ ಅಗ್ನಿಕುಂಡವನ್ನು ಹಾಯಬೇಕು ಜೊತೆಗೆ ಕಾಣದ ಕೈ ಗಳ ಬಂದೂಕಿನ ಗುಂಡಿಗೂ ಎದೆಯೊಡ್ಡಲು ಸಿದ್ಧನಿರಬೇಕು.

ಸದಾ ಇಂತಹ ಆತಂಕ ಮತ್ತು  ಭಯಗಳೆಂಬ ಸಾವು ಬದುಕಿನ ತೂಗು ಕತ್ತಿಯ ಕೆಳಗಿನ ಬದುಕಿಗಿಂತ ಏನೂ ಬರೆಯದೆ, ಮಾತನಾಡದೆ ಮೌನವಾಗಿರುವುದು ಲೇಸು ಎಂಬಂತೆ ಅನೇಕ ಕನ್ನಡದ ಹಿರಿಯ ಜೀವಗಳು ಮೌನಕ್ಕೆ ಶರಣಾಗಿದ್ದಾರೆ. ಧರ್ಮ ಮತ್ತು ಜಾತಿಯ ನೆಪವೊಡ್ಡಿ ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ಹಾಕಿದ  ಬಾಯಿ ಬೀಗ ಎಲ್ಲರಲ್ಲೂ ತಲ್ಲಣವನ್ನುಂಟು ಮಾಡಿದೆಕಳೆದ ತಿಂಗಳು ಧಾರವಾಡದಲ್ಲಿ ಖಾಸಾಗಿಯಾಗಿ ಮಾತನಾಡುತ್ತಿದ್ದ  ಹಿರಿಯ ವಿಮರ್ಶಕರಾದ ಡಾ. ಗಿರಡ್ಡಿಗೋವಿಂದರಾಜ ರವರು ತಮ್ಮ ಅರ್ಧ ಶತಮಾನದÀ ಗೆಳೆಯ ಡಾ.ಎಂ.ಎಂ. ಕಲ್ಬುರ್ಗಿಯವರನ್ನು ನೆನಪಿಸಿಕೊಳ್ಳುತ್ತಾ, ಏನನ್ನೂ ಬರೆಯಲಾಗುತ್ತಿಲ್ಲ, ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಅತ್ಯಂತ ನೋವಿನಿಂದ ಗಂಟಲಿನಲ್ಲಿ ಹೂತು ಹೋದ ಪಿಸು ಮಾತಿನಂತಹ ಧ್ವನಿಯಲ್ಲಿ ಮಾತನಾಡತೊಡಗಿದರು. ಘಟನೆ ನಡೆದ ಒಂದು ವಾರP ಸರಿಯಾಗಿÉ್ಕ ಬೆಂಗಳೂರಿನ ಮತ್ತೊಬ್ಬ ಹಿರಿಯ ವಿದ್ವಾಂಸ ಕೆ.ವಿ. ನಾರಾಯಣ ರವರ ಜೊತೆ  ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗನಾನೀಗ ಯಾವುದೇ ಸಭೆ ಸಮಾರಂಭದಲ್ಲಿ ಭಾಗವಹಿಸಬಾರದು ಮತ್ತು ಮಾತನಾಡಬಾರದು ಎಂದು ನಿರ್ಧರಿಸಿದ್ದೀನಿಎಂದು ನುಡಿದರು. ಜೊತೆಗೆ 1971 ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಸೆನಟ್ ಸಭಾಂಗಣದಲ್ಲಿ ನಡೆದ ಘಟನೆಯೊಂದನ್ನು ನನಗೆ ವಿವರಿಸಿದರು. ಬೇಂದ್ರೆ ಕಾವ್ಯ ಕುರಿತು ನಡೆದ  ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಬೇಂದ್ರೆ ಕೊನೆಯ ದಿನಗಳ ಕಾವ್ಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ ಲಂಕೇಶರ ನಿಲುವನ್ನು ಹಲವರು ಪ್ರತಿಭಟಿಸಿದಾಗ, “ ಅಭಿವ್ಯಕ್ತಿ ಸ್ವಾತಂತ್ರ್ಯವೆಂದರೆ ಅದು ಗೋಡೆಯೆದುರು ನಿಂತು ಮಾತನಾಡುವುದಂತಹದÀÀಲ್ಲ, ಸಮಾಜದ ಎದುರು ನಿಂತು ಮಾತನಾಡುವುದುಎಂದು ಲಂಕೇಶರು ಹೇಳಿದ ಮಾತನ್ನು ನೆನಪಿಸಿದರು. ಎರಡು ಘಟನೆಗಳ  ಜೊತೆಗೆ ಏಪ್ರಿಲ್ 29 ರಂದು ಧಾರವಾಡದಲ್ಲಿ ನಡೆದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಮತ್ತೊಬ್ಬ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ನನ್ನ ಜೊತೆ ಮಾತನಾಡುತ್ತಾ, “ನನಗೀಗ ಮಾತನಾಡಲು ಮತ್ತು ಬರೆಯಲು ಆತಂಕವಾಗುತ್ತಿದೆ. ಇಂತಹ ಅಸಹನೀಯ ಬದುಕಿಗೆ ಏನಾದರೂ ಅರ್ಥವಿದೆಯಾ?” ಎಂದು ಪ್ರಶ್ನಿಸತೊಡಗಿದರು.

ಇದೇನಿದು? ಎಲ್ಲಾ ಹಿರಿಯ ಜೀವಗಳು ಒಬ್ಬರಿಗೊಬ್ಬರು ಮಾತನಾಡಿಕೊಂಡವರಂತೆ ಹೀಗೆ ಮೌನಕ್ಕೆ ಶರಣಾಗಿಬಿಟ್ಟರೆ, ಧರ್ಮದ ಹೆಸರಿನಲ್ಲಿ ಮತ್ತು ಜಾತಿಯ ನೆಪದಲ್ಲಿ ಕೊಳ್ಳಿದೆವ್ವಗಳಂತೆ ಹುಚ್ಚೆದ್ದು ಕುಣಿಯುವವರನ್ನು ವರ್ತಮಾನದ ಸಮಾಜದಲ್ಲಿ  ತಡೆಯುವವರು ಯಾರು? ತಣಿಸುವವರು ಯಾರು? ನನ್ನ ತಲೆಮಾರನ್ನೂ ಒಳಗೊಂಡಂತೆ, ನನ್ನ ನಂತರದ ಒಂದೆರೆಡು ತಲೆಮಾರನ್ನು ತಮ್ಮ ಕಾದಂಬರಿಗಳು. ಸಂಶೋಧನೆ ಮತ್ತು ಸಾಹಿತ್ಯದ ಮೂಲಕ ಉದ್ದೇಪಿಸಿದ  ಅನೇಕ ಹಿರಿಯ ಜೀವಗಳು ಇಂದು ಯಾವದೇ ಬಗೆಯ ಆತ್ಮಸಾಕ್ಷಿಯ ಪ್ರಜ್ಞೆಯೂ ಇಲ್ಲದಂತೆ ಮುಸ್ಲಿಂ ಸಮುದಾಯವನ್ನು ಅಪರಾಧದ ಕಟಕಟೆಗೆ ಏರಿಸಿ, ವಿಚಾರಣೆಯಿಲ್ಲದೆ ನೇಣುಗಂಬಕ್ಕೆ ಏರಿಸುತ್ತಿದ್ದಾರಲ್ಲಾಇಂತಹ ತಲ್ಲಣದ, ಆತಂಕದ  ಘಳಿಗೆಯಲ್ಲಿ ನಾವು ಯಾರತ್ತ ತಿರುಗಿ ನೋಡಬೇಕು? ಬೆಂಗಳೂರಿನಲ್ಲಿ ಲಂಕೇಶರಿಲ್ಲ, ಅನಂತಮೂರ್ತಿಯವರಿಲ್ಲ, ಪ್ರೊ.ನಂಜುಂಡಸ್ವಾಮಿಯವರೂ ಇಲ್ಲ, ಮೈಸೂರಿನಲ್ಲಿ ಕೆ.ರಾಮದಾಸರಿಲ್ಲ, ಅತ್ತ ಹಾಗೊಮ್ಮೆ ಹೀಗೊಮ್ಮೆ ದಿಡೀರನೆ ಸ್ಪೋಟಿಸುತ್ತಿದ್ದ ಮೂಡಿಗೆರೆಯಲಿನ್ಲ ತೇಜಸ್ವಿಯವರಿಲ್ಲ? ನಮ್ಮ ನಡುವೆ ಇರುವ ಹಿರಿಯ ಮಿತ್ರ ದೇವನೂರು ಮಹಾದೇವು ಒಬ್ಬರ ಧ್ವನಿ ಮಾತ್ರ ಅಂತರಂಗದ ಪಿಸು ಮಾತಿನಂತೆ ಕೆಲವೊಮ್ಮೆ ಕೇಳಿ ಬರುತ್ತಿದೆ.

ಬಾಯಿದ್ದವನು ಬರಗಾಲದಲ್ಲಿಯೂ ಬದುಕಿದ ಎನ್ನುವ ಹಾಗೆ, ಧರ್ಮದ ನೆಪದಲ್ಲಿ ಅನ್ಯ ಧರ್ಮಿಯರನ್ನು ನೋಯಿಸುವ, ಅಪಮಾನಿಸುವ ಹಾಗೂ ಸಂಶಯ ದೃಷ್ಟಿಕೋನದಿಂದ ನೋಡುವ ದೃಷ್ಟಿಕೋನ ಬಲವಾಗಿ ಬೇರೂರುತ್ತಿದೆ. ಇದನ್ನು ಸತ್ಯ ಎಂದು ನಂಬಿದ ಆಧುನಿಕ ತಲೆಮಾರು ಧರ್ಮ ಮತ್ತು ಜಾತಿಯ ನೆಪದಲ್ಲಿ ಕತ್ತಿ ಜಳುಪಿಸುತ್ತಿದೆ. ಹಾಗಾದರೆ   ನೆಲಕ್ಕೆ ಅನ್ಯ ಧರ್ಮೀಯರ ಕೊಡುಗೆ ಏನೂ ಇಲ್ಲವೆ? ಕಲೆ, ಸಂಗೀತ, ಹಾಗೂ ವಾಸ್ತು ಶಿಲ್ಪ ಕ್ಷೇತ್ರಗಳಿಗೆ ಇಸ್ಲಾಂ ಧರ್ಮ ನೀಡಿದ ಕೊಡುಗೆ ಮತ್ತು ಭಾರತದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಕೊಡುಗೆಯನ್ನು ಅಲ್ಲಗೆಳೆಯಲು ಸಾದ್ಯವೆ? ಹಿಂದೂ ಧರ್ಮದ ಪರಮ ಪ್ರತಿಪಾದಕರೆಂದು ಗುರುತಿಸಿಕೊಂಡಿರುವ ಪಂಡಿತರು ಮತ್ತು ವಿದ್ವಾಂಸರು ಒಮ್ಮೆ ಇತಿಹಾಸದ ಪುಟಗಳನ್ನು ಗಂಭೀರವಾಗಿ ಅವಲೋಕಿಸಿದ್ದರೆ, ಧಾರ್ಮಿಕ ಅಸಹಿಷ್ಣುತೆ ಎಂಬುದು  ನಮ್ಮ ನಡುವೆ ತಲೆಯೆತ್ತಲು ಸಾಧ್ಯವಾಗುತ್ತಿರಲಿಲ್ಲ.

ದಕ್ಷಿಣ ಭಾರತದ ದೇವದಾಸಿಯರ ಇತಿಹಾಸ ಕುರಿತು ಕಳೆದ ನಾಲ್ಕು ವರ್ಷಗಳಿಂದ ಅಧ್ಯಯನದಲ್ಲಿ ನಿರತನಾಗಿರುವ ನಾನು ಒರಿಸ್ಸಾ ಸೇರಿದಂತೆ ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದ 456 ದೇವಸ್ಥಾನಗಳಲ್ಲಿ ಕ್ಷೇತ್ರ ಕಾರ್ಯ ನಡೆಸುತ್ತಾ ಬಂದಿದ್ದೀನಿ.  2015 ಆಗಸ್ಟ್ ತಿಂಗಳಿನಲ್ಲಿ ತಮಿಳುನಾಡಿನ ತಿರುಚ್ಚರಾಪಳ್ಳಿ ಸಮೀಪದ ಶ್ರೀರಂಗಂ ಎಂಬ ದೇಗುಲಗಳ ಊರಿನಲ್ಲಿ ಶ್ರೀ ರಂಗನಾಥನ ಸನ್ನಿಧಿಯಲ್ಲಿದ್ದೆ. ಹದಿನಾಲ್ಕನೆಯ ಶತಮಾನದಲ್ಲಿ ದೆಹಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನೆಯು ದೇವಸ್ಥಾನದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದೇಗುಲದ ದೇವದಾಸಿಯಾಗಿದ್ದ ಅನಾಮಿಕ ಹೆಣ್ಣು ಮಗಳೊಬ್ಬಳು, ದೇವಸ್ಥಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಸೇನಾಧಿಕಾರಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ ಇತಿಹಾಸ ದೇವಸ್ಥಾನದೊಂದಿಗೆ ತಳುಕು ಹಾಕಿಕೊಂಡಿದೆ. ತ್ಯಾಗಮಯಿ ಹೆಣ್ಣು ಮಗಳ ವಿವರ ಕಲೆ ಹಾಕುವ ಸಲುವಾಗಿ ಬೆಳಗಿನ ಆರು ಗಂಟೆಯ ಪ್ರಥಮ ಪೂಜೆಯ ಸಮಯದಲ್ಲಿ ಗರ್ಭಗುಡಿಯ ಮುಂಬಾಗಲಲ್ಲಿ ನಿಂತು ಪೂಜಾ ವಿಧಿ ವಿಧಾನಗಳನ್ನು ವೀಕ್ಷಿಸುತ್ತಿದ್ದೆ. ಗರ್ಭಗುಡಿಗೆ ಹೊಂದಿಕೊಂಡಂತೆ ಇರುವ ಅರ್ಜುನ ಮಂಟಪದ ಬಳಿ ಇರುವ ತುಳಕ್ಕಮ್ಮ ನಾಚ್ಚಿಯಾರ್ ಎಂಬ ಮುಸ್ಲಿಂ ಹೆಣ್ಣು ದೇವತೆಗೆ ಅಲ್ಲಿ ಪೂಜೆ ಸಲ್ಲಿಸಿ. ತುಪ್ಪದಿಂದ ಮಾಡಿದ ಅಪ್ಪಟ ಮೊಗಲ್ ಶೈಲಿಯ ತಂದೂರಿ ರೊಟ್ಟಿ ಮತ್ತು ದಾಲ್ ( ಬೇಳೆಯಿಂದ ಮಾಡಿದ ಗೊಜ್ಜು) ನೈವೈದ್ಯ ಅರ್ಪಿಸುವುದನ್ನು ಕಂಡು ಅವಕ್ಕಾದೆ. ಏನಿದು? ಹಿಂದೂ ಧರ್ಮದ ಪವಿತ್ರ ಕ್ಷೇತ್ರ ಹಾಗೂ ದಕ್ಷಿಣ ಭಾರತದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥನ ಸನ್ನಿಧಿಯಲ್ಲಿ ಅನ್ಯ ಧರ್ಮದ ಹೆಣ್ಣು ಮಗಳಿಗೆ ಪೂಜೆ ಪುರಸ್ಕಾರವೆ? ಅಲ್ಲಿನ ಹಿರಿಯ ಆರ್ಚಕರು ಇತಿಹಾಸದ ಕಥೆಗಳನ್ನು ಹೇಳುತ್ತಾ ನನ್ನ ಕುತೂಹಲವನ್ನು ತಣಿಸಿದರು. ಅವರು ಹೇಳಿದ ಕಥೆ ಮತ್ತು ಇತಿಹಾಸದ ದಾಖಲೆಗಳನ್ನು ಹೋಲಿಕೆ ಮಾಡಿದಾಗ ಇದು ನೈಜ ಕಥೆಯಂತೆ ನಮಗೆ ತೋರುತ್ತದೆ.




ಹದಿನಾಲ್ಕನೆಯ ಶತಮಾನದಲ್ಲಿ ಅಂದರೆ, 1311 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಸೇನಾ ದಂಡನಾಯಕ ಮಲ್ಲಿಕಾಫರ್ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದು ಕನಾಟಕದ ಹಳೇಬೀಡು ( ದ್ವಾರ ಸಮುದ್ರ) ಮತ್ತು ಬನ್ನೂರು ಸಮೀಪದ ಸೋಮನಾಥನ ದೇವಸ್ಥಾನಗಳನ್ನು ಕೊಳ್ಳೆ ಹೊಡೆದು ನಂತರ ಮಧುರೈ ಮೀನಾಕ್ಷಿ ದೇವಾಲಯದತ್ತ ತೆರಳುವಾಗ ಮಾರ್ಗ ಮಧ್ಯೆ ಕಾವೇರಿ ನದಿ ದಂಡೆಯ ಮೇಲೆ ತನ್ನ ಸೇನೆಯ ಜೊತೆ ವಿಶ್ರಮಿಸಿಕೊಳ್ಳುತ್ತಿದ್ದ ಸಮಯದಲ್ಲಿ ಆತನಿಗೆ ಶ್ರೀರಂಗಂ ಬೃಹತ್ ದೇವಾಲಯ ಗೋಚರಿಸುತ್ತದೆ. ಬೆಳಿಗ್ಗೆ ಎದ್ದು ಶ್ರೀರಂಗಂ ದೇವಸ್ಥಾನದ ಮೇಲೆ ದಾಳಿ ಮಾಡಿ ಚಿನ್ನ, ಬೆಳ್ಳಿ, ಪಂಚ ಲೋಹದ ವಿಗ್ರಹಗಳನ್ನು ವಶಪಡಿಸಿಕೊಂಡ ಮಲ್ಲಿಕಾಫರ್ ನಂತರ  ಮಧುರೈ ಪಟ್ಟಣಕ್ಕೆ ತೆರಳುತ್ತಾನೆ. ಅಲ್ಲಿನ ಪಾಂಡ್ಯ ರಾಜನನ್ನು ಮಣಿಸಿ, ಮೀನಾಕ್ಷಿ ದೇವಾಲಯವನ್ನು ಕೊಳ್ಳೆ ಹೊಡೆದು ದೆಹಲಿಗೆ ಹಿಂತಿರುಗುತ್ತಾನೆ. ಶಿಲೆಯಲ್ಲಿ ಕೆತ್ತಲಾಗಿರುವ ದೇವರ ಪ್ರತಿಮೆಗಳನ್ನು ವಿರೂಪಗೊಳಿಸುವುದು, ಪಂಚಲೋಹ ಅಥವಾ ಹಿತ್ತಾಳೆ, ತಾಮ್ರದ ಲೋಹದ ಪ್ರತಿಮೆಗಳನ್ನು ದೆಹಲಿಗೆ ಕೊಂಡೊಯ್ದು ಅವುಗಳನ್ನು ಕರಗಿಸಿ, ತಮಗೆ ಬೇಕಾದ ಆಕಾರದಲ್ಲಿ ಪಾತ್ರೆ, ಹೂಜಿ, ಹೀಗೆ ಹಲವು  ಎರಕ ಹುಯ್ಯುವುದು  ಆಗಿನ ದೆಹಲಿ ಸುಲ್ತಾನರ ಪದ್ಧತಿಯಾಗಿತ್ತು. ಮಲ್ಲಿಕಾಫರ್ ದಕ್ಷಿಣ ಭಾರತದಲ್ಲಿ ಕೊಳ್ಳೆ ಹೊಡೆದ ವಿವರಗಳನ್ನು ಆಗಿನ ಇತಿಹಾಸಕಾರ ಜೈಯುದ್ದೀನ್ ಬರಾನಿ ಎಂಬಾತಒಟ್ಟು 241 ಟನ್ ಚಿನ್ನ, 20 ಸಾವಿರ ಕುದುರೆಗಳು ಮತ್ತು 612 ಆನೆಗಳೊಂದಿಗೆ ಮಲ್ಲಿಕಾಫರ್ ದೆಹಲಿಗೆ ಹಿಂತಿರುಗಿದಎಂದು ದಾಖಲಿಸಿದ್ದಾನೆ. ಆಶ್ಚರ್ಯಕರ ಸಂಗತಿಯೆಂದರೆ, ಮುಸ್ಲಿಂರ ದಾಳಿಗೆ ಹಿಂದೂ ದೇವಲಾಯಗಳು ನಾಶವಾದವು ಎಂದು ಇತಿಹಾಸದ ಕಟ್ಟು ಕಥೆ ದಾಖಲಿಸಿದವರು ಮಲ್ಲಿಕಾಫರ್ ಓರ್ವ ಹಿಂದೂ ಧರ್ಮದ  ವ್ಯಕ್ತಿ ಎಂಬುದನ್ನು ಮಾತ್ರ ಮರೆ ಮಾಚುತ್ತಾರೆ. ಅಲ್ಲಾವುದ್ದೀನ್ ಖಿಲ್ಜಿಯ ಇ್ರತಿಹಾಸದ ವಿವರಗಳನ್ನು ಗಮನಿಸಿದಾಗ ಆತನ ಬಲಗೈ ಭಂಟ ಮಲ್ಲಿಕಾಫರ್ ವಿವರಗಳು ನಮ್ಮೆದುರು ತೆರೆದುಕೊಳ್ಳುತ್ತವೆ.

ದೆಹಲಿಯನ್ನು 1295 ರಿಂದ 1016 ರವರೆಗೆ ಆಳಿದ ಅಲ್ಲಾವುದ್ದೀನ್ ಖಿಲ್ಜಿ ಬಲಿಷ್ಟ ಹಾಗು ಅನ್ಯ ಧರ್ಮಗಳ ಕುರಿತು ಅಸಹನೆ ಬೆಳೆಸಿಕೊಂಡಿದ್ದ ಕ್ರೂರ ದೊರೆಗಳಲ್ಲಿ ಒಬ್ಬನಾಗಿದ್ದ. ಗುಜರಾತಿನ ಮೇಲೆ ದಂಡೆತ್ತಿ ಹೋದಾಗ ಸೆರೆಸಿಕ್ಕ ಗುಲಾಮರಲ್ಲಿ ಸ್ವುರದ್ರೂಪಿ ಯುವಕನಾಗಿದ್ದ ಮಲ್ಲಿಕಾಫರ್ ಕೂಡ ಒಬ್ಬ. ಸಲಿಂಗಕಾಮಿಯಾಗಿದ್ದ ಖಿಲ್ಜಿ ಹಿಂದೂ ಯುವಕನನ್ನು ಇಸ್ಲಾಂ ದರ್ಮಕ್ಕೆ ಮತಾಂತರಗೊಳಿಸಿ  ಆತನಿಗೆ ಮಲ್ಲಿಕಾಫರ್ ಎಂದು ಹೆಸರಿಟ್ಟು, ತನ್ನೊಡನೆ ಇರಿಸಿಕೊಂಡಿದ್ದ.(ಆಕರ್ಷಕವಾಗಿರುವ ಯುವಕರನ್ನು ನಪುಂಸಕರನ್ನಾಗಿ ಮಾಡಿ ರಾಣಿಯ ಅಂತಃಪುರದಲ್ಲಿ ನೇಮಕ ಮಾಡಿಕೊಳ್ಳುವ ಪದ್ದತಿಯೂ ಸಹ ಅಂದಿನ ಸುಲ್ತಾನರ ಆಳ್ವಿಕೆಯಲ್ಲಿ ಚಾಲ್ತಿಯಲ್ಲಿತ್ತು) ದೊರೆಯ ಖಾಸಾ ಸಂಗಾತಿಯಾದ ಮಲ್ಲಿಕಾಫರ್ ಕೆಲವೇ ವರ್ಷಗಳಲ್ಲಿ ದಂಡನಾಯಕನ ಪಟ್ಟಕ್ಕೇರಿದ. ನಂತರ ಅಲ್ಲಾವುದ್ದೀನ್ ಖಿಲ್ಜಿಯು ತನ್ನ ಬದುಕಿನ ಕೊನೆಯ ದಿನಗಳಲ್ಲಿ ನೆನಪಿನ ಶಕ್ತಿ ಕಳೆದುಕೊಂಡು ಅಸಹಾಯಕನಾದಾಗ ಮಲ್ಲಿಕಾಫರ್ ಉಪ ಸುಲ್ತಾನನಂತೆ ಆಡಳಿತ ನಡೆಸಿದಆದರೆ, 1016 ರಲ್ಲಿ ದೆಹಲಿ ಸಿಂಹಾಸನದ ಮೇಲಿನ ಆಸೆಯಿಂದ ದೊರೆ ಅಲ್ಲಾವುದ್ದೀನ್ ಖಿಲ್ಜಿಗೆ ವಿಷಪ್ರಾಶನ ಮಾಡಿಸಿ, ಆತನ  ಇಬ್ಬರು ವಯಸ್ಕ ಮಕ್ಕಳ ಕಣ್ಣು ಕೀಳಿಸಿದ ಮಲ್ಲಿಕಾಫರ್ ನಂತರ  ಮೂರು ವರ್ಷದ ಖಿಲ್ಜಿಯ ಕಿರಿಯ ಪುತ್ರನಿಗೆ ಪಟ್ಟ ಕಟ್ಟುವುದರ ಮೂಲಕ ದೆಹಲಿಯ ಖಿಲ್ಜಿ ಸಾಮ್ರಾಜ್ಯದ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡಿದ್ದ. ಆದರೆ ಮಲ್ಲಿಕಾಫರ್ ಕೇವಲ 35 ದಿನಗಳ ಅವಧಿಯ   ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದ ಅರಮನೆಯ ಅಂಗರಕ್ಷಕರು ಕೊನೆಗೆ  ಆತನನ್ನ ಕೊಂದು ಹಾಕಿದರು. ಇದಾದ ನಾಲ್ಕು ವರ್ಷಗಳಲ್ಲಿ (1320) ದೆಹಲಿಯ ಖಿಲ್ಜಿ ಸಾಮ್ರಾಜ್ಯ ಪತನಗೊಂಡಿತು.
ಮಲ್ಲಿ ಕಾಫರ್ 1311 ರಲ್ಲಿ ಖಿಲ್ಜಿ ದಂಡನಾಯಕನಾಗಿ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದು ಶ್ರೀರಂಗಂ ನಿಂದ ಲೂಟಿ ಮಾಡಿದ್ದ ಶ್ರೀರಂಗನಾಥನ ಉತ್ಸವ ಮೂರ್ತಿಯಾದ ಶ್ರೀ ರಂಗನಾಥನ  ಕಂಚಿನ ಸುಂದರ ಪ್ರತಿಮೆಯನ್ನು ಕರಗಿಸದೆ ಉಳಿಸಿದ್ದ ಪರಿಣಾಮವಾಗಿ   ಪ್ರತಿಮೆಯು ದೆಹಲಿಯ ಸುಲ್ತಾನನ ಮಗಳ ಅಂತಃಪುರದಲ್ಲಿತ್ತು. ಇದ್ದುದನ್ನು ಖಾತರಿಪಡಿಸಿಕೊಂಡ  ಶ್ರೀ ರಂಗಂ  ದೇವಾಲಯದ ನೃತ್ಯ ಮತ್ತು ಸಂಗೀತ ತಂಡದ ಸದಸ್ಯರು ದೆಹಲಿಗೆ ತೆರಳಿ ಅಲ್ಲಾವುದ್ದೀನ್ ಖಿಲ್ಜಿಯನ್ನು ದೆಹಲಿಯ ಆತನ ಒಡ್ಡೋಲಗದಲ್ಲಿ ಸಂಗೀತ ಮತ್ತು ನೃತ್ಯದ ಮೂಲಕ ಸಂತೃಪ್ತಗೊಳಿಸಿದರು.. ಅಲ್ಲಾವುದ್ದೀನ್ ಖಿಲ್ಜಿಯು ಸಂಗೀತಗಾರರಿಗೆ ಉಡುಗೊರೆಗಳನ್ನು ನೀಡಲು ಬಂದಾಗ, ಆತನಲ್ಲಿ ಕಾಣಿಕೆ ಬದಲಾಗಿ ರಂಗನಾಥನ ಪ್ರತಿಮೆಗೆ ವಿನಂತಿಸಿಕೊಳ್ಳುವುದರ ಮೂಲಕ  ದೊರೆಯಿಂದ ರಂಗನಾಥನ ಉತ್ಸವದ ಮೂರ್ತಿಯನ್ನು ಉಡುಗೊರೆಯಾಗಿ ಪಡೆದುಕೊಂಡು   ಶ್ರೀರಂಗಂ ನತ್ತ ಸಂಗೀತ ನೃತ್ಯದ ತಂಡದ ಸದಸ್ಯರು  ಪ್ರಯಾಣ ಬೆಳಸಿದರು. ಅತ್ತ ತಾನು ಅಂತಃಪುರದಲ್ಲಿ ಇಲ್ಲದ ವೇಳೆಯಲ್ಲಿ ತನ್ನ ತಂದೆಯು ಪ್ರತಿಮೆಯನ್ನು ಉಡುಗೊರೆ ಕೊಟ್ಟ ಸಂಗತಿ ತಿಳಿದ ಸುಲ್ತಾನಳ ಮಗಳು ಪ್ರತಿಮೆಯನ್ನು ಅರಸುತ್ತಾ ಕುದುರೆ ಸಾರೋಟಿನಲ್ಲಿ ಶ್ರೀರಂಗಂ ಪಟ್ಟಣಕ್ಕೆ ಬಂದಿಳಿದಳು. ಆದರೆ ಸಂಗೀತ ತಂಡದ ಸದ್ಸಸ್ಯರು ಶ್ರೀರಂಗಂ ಹಾದಿಯಲ್ಲಿ ಮಾರ್ಗ ಮಧ್ಯ ತಿರುಪತಿಯಲ್ಲಿ ಬೀಡು ಬಿಟ್ಟಿದ್ದರು. ಸುಲ್ತಾನನ ಮಗಳು ದೇವಸ್ಥಾನದಲ್ಲಿ ತಾನು ಪ್ರೀತಿಸುತ್ತಿದ್ದ ಶ್ರೀ ರಂಗನಾಥನ ಪ್ರತಿಮೆ ಇಲ್ಲದ್ದನ್ನುಕಂಡು ದೇಗುಲದ ಆವರಣದಲ್ಲಿ ಹೃದಯಾಘಾತದಿಂದ ಪ್ರಾಣ ಬಿಟ್ಟಳು ಎಂಬ ಕಥೆ ಐತಿಹ್ಯದಂತೆ ದಾಖಲಾಗಿದೆ. ಕಾರಣಕ್ಕಾಗಿ ರಂಗನಾಥನ ಗರ್ಭ ಗುಡಿಯ ಪಕ್ಕದ ಚಿಕ್ಕ ಗುಡಿಯೊಂದರಲ್ಲಿ ಆಕೆಯ ಬಣ್ಣದ ಚಿತ್ರವೊಂದನ್ನು ಬರೆದು, ಚಿತ್ರವನ್ನು ಮುತ್ತು ರತ್ನಗಳೊಂದಿಗೆ ಶೃಂಗರಿಸಿ, ಅವಳನ್ನು ಹಿಂದೂ ದೇವತೆಯಂತೆ ಚಿತ್ರಿಸಿ, ಪೂಜಿಸಲಾಗುತ್ತದೆ. ಮತ್ತು ವರ್ಷಕ್ಕೆ ಎರಡು ಬಾರಿ ವಯ್ಯಾರ ನಡೈ ಮತ್ತು ಕಲ್ಯಾಣೋತ್ಸವ ಎಂಬ ಎರಡು ಉತ್ಸವಗಳನ್ನು ನಡೆಸಲಾಗುತ್ತದೆ. ಆಕೆಯನ್ನು ಶ್ರೀರಂಗನಾಥನ ಪತ್ನಿ ಎಂದು ಭಾವಿಸಿ ಪೂಜೆ ಮಾಡಲಾಗುತ್ತಿದೆ. ಸುಲ್ತಾನನ ಮಗಳನ್ನು ತಮಿಳು ಭಾಷೆಯಲ್ಲಿ ತುಳಕ್ಕರ್ ನಾಚ್ಚಿಯಾರ್ ಎಂದು ಕರೆಯಲಾಗುತ್ತದೆ. (ತುಳಕ್ಕರ್ ಎಂಬುದು ತುರಕರು ಎಂಬ ಶಬ್ಧದ ಅರ್ಥ. ಟರ್ಕ್ ಮೂಲದಿಂದ ಬಂದರ ಮುಸ್ಲಿಮರನ್ನು ಟರ್ಕರು ಎಂದು ಕರೆಯಲಾಗುತ್ತಿತ್ತು. ನಂತರದ ದಿನಗಳಲ್ಲಿ ಶಬ್ದ ಆಡು ಭಾಷೆಯಲ್ಲಿ ಅದು ತುರಕರು ಎಂದಾಯಿತು.)





ತನ್ನ ಪುತ್ರಿಯು ಶ್ರೀರಂಗಂ ದೇವಸ್ಥಾನದಲ್ಲಿ  ಪ್ರಾಣಬಿಟ್ಟ ವಿಷಯ ತಿಳಿದ ದೊರೆ ಅಲ್ಲಾವುದ್ದೀನ್ ಖಿಲ್ಜಿಯು ದೇವಾಲಯವನ್ನು ನಾಶಪಡಿಸಲು ಆದೇಶ ನೀಡಿ  ತನ್ನ ಸೇನೆಯನ್ನು ಶ್ರೀರಂಗಂಗೆ ಕಳುಹಿಸುತ್ತಾನೆ. (ಕ್ರಿ.. 1316 ರಲ್ಲಿ) ಕೌಸರ್ಖಾನ್ ಎಂಬುವನ ನೇತೃತ್ವದ ಸೇನೆ ಶ್ರೀ ರಂಗಂ ಪಟ್ಟಣಕ್ಕೆ ದಾಳಿಯಿಟ್ಟಾಗ   ರಂಗನಾಯಕಿ ಎಂಬ ಹೆಣ್ಣು ಮಗಳು ಮೊದಲ ಮೂರು ದಿನಗಳ ಕಾಲ ವೈಷ್ಣವ ಅನುಯಾಯಿಗಳ ಮೂಲಕ ತಡೆಯೊಡ್ಡುತ್ತಾಳೆಆದರೆ,ಅಂತಿಮವಾಗಿ  ಶ್ರೀ ರಂಗನಾಥನ ರಕ್ಷಣೆಗೆ ನಿಂತ ರಂಗನಾಯಕಿಯೂ ಸೇರಿದಂತೆ 13 ಸಾವಿರ ಭಕ್ತರು ಸೇನೆಯ ದಾಳಿಯಲ್ಲಿ ಮರಣ ಹೊಂದುತ್ತಾರೆ ಸಂದರ್ಭದಲ್ಲಿ ದೇವಾಲಯದಲ್ಲಿ ಶ್ರೀ ರಂಗನಾಥನಿಗೆ ನರ್ತನ ಸೇವೆ ಮಾಡುತ್ತಿದ್ದ ಅನಾಮಿಕ ದೇವದಾಸಿಯೊಬ್ಬಳು ಸೇನಾಧಿಕಾರಿ ಕೌಸರ್ ಖಾನ್ ನನ್ನು ಪ್ರೀತಿಸುವ ನಾಟಕವಾಗಿ ದೇಗುಲದ ಗೋಪುರದ ನಾಲ್ಕಂತಸ್ತಿನ ಕಟ್ಟಡಕ್ಕೆ ಕರೆದೊಯ್ದು ಆತನನ್ನು ಕೆಳಕ್ಕೆ ದೂಡುವುದರ ಮೂಲಕ ಕೊಂದು ಹಾಕಿ, ತಾನು ಗೋಪುರದಿಂದ ಕೆಳಕ್ಕೆ ನೆಗೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶ್ರೀ ರಂಗನಾಥನ ದೇವಾಲಯವನ್ನು ದೆಹಲಿ ಸುಲ್ತಾನನ ಸೇನೆಯಿಂದ ರಕ್ಷಿಸಿ  ಹುತಾತ್ಮಳಾದ ಅನಾಮಿಕ ದೇವದಾಸಿಯ ಮಾಹಿತಿ ತಮಿಳುನಾಡಿನ  ದೇವಾಲಯಗಳ ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ, ತಮಿಳುನಾಡು ಇತಿಹಾಸದಲ್ಲಿ ಮಲ್ಲಿಕಾಫರ್ ನನ್ನು ದೆಹಲಿಯ ದೊರೆ  ಎಂದು ದಾಖಲಿಸಲಾಗಿದೆ. ದೆಹಲಿ  ಸುಲ್ತಾನರ ಚರಿತ್ರೆಯಲ್ಲಿ ಮಲ್ಲಿಕಾಫರ್ ವಿವಾಹವಾದ ಬಗ್ಗೆಯಾಗಲಿ, ಆತನ ಪುತ್ರಿ ಕುರಿತ ವಿವರವಾಗಲಿ ಇಲ್ಲ. ಅಲ್ಲಾವುದ್ದೀನ್ ಖಿಲ್ಜಿಯ ಕೊನೆಯ ಐದು ವರ್ಷಗಳ ಆಳ್ವಿಕೆಯನ್ನು ಮತ್ತು ದಕ್ಷಿಣ ಭಾರತದ ಮೇಲೆ ಮೂರು ಬಾರಿ ದಂಡೆತ್ತಿ ಬಂದ ವಿವರಗಳನ್ನು ಜೈಉದ್ದೀನ್ ಬರಾನಿ ದಾಖಲಿಸಿದ್ದು, ಇದರಲ್ಲಿಯೂ ಸಹ ಮಲ್ಲಿಕಾಫರ್ ಕುಟುಂಬದ ಬಗ್ಗೆ ಮಾಹಿತಿ ಇಲ್ಲ.

ಮೇಲಿನ ಘಟನೆಗೂ ಮತ್ತು ಇದಕ್ಕೂ ಮುನ್ನ ಸರಿ ಸುಮಾರು 200 ವರ್ಷಗಳ ಹಿಂದೆ ಅಂದರೆ ಹನ್ನೊಂದನೆಯ ನೆಯ ಶತಮಾನದಲ್ಲಿ ನಡೆದ ಕರ್ನಾಟಕದ ಮೇಲುಕೋಟೆಯ ಚಲುವನಾರಾಯಣ ಸ್ವಾಮಿ  ಘಟನೆಗೂ ಹೋಲಿಕೆ ಇರುವುದು ಕುತೂಹಲಕರ ಸಂಗತಿಯಾಗಿದೆ. ಹನ್ನೊಂದನೆಯ ಶತಮಾನದ ದೆಹಲಿಯ ಮಹಮ್ಮದ್ ಘೋರಿ ಆಳ್ವಿಕೆಂಕಾಲದಲ್ಲಿ ನಡೆದಿರಬಹುದಾದ  ಘಟನೆಯ ಪ್ರಮುಖರು ಎಂದರೆ, ಶ್ರೀ ರಾಮಾನುಜಾ ಚಾರ್ಯರು, ಮೇಲುಕೋಟೆಯ ಚಲುವ ನಾರಾಯಣಸ್ವಾಮಿ ಮತ್ತು ದೆಹಲಿ ಸುಲ್ತಾನಳ ಮಗಳು ಬೀಬಿ ನಾಚ್ಚಿಯಾರ್.






ರಾಮಾನುಜಾಚಾರ್ಯರಿಗೆ ಸಂಬಂಧಿಸಿದ ಘಟನೆಯಲ್ಲಿ ಇತಿಹಾಸದ ಕೆಲವು ತೊಡಕುಗಳಿವೆ. ಸುಮಾರು 120 ವರ್ಷ ಬದುಕಿದ್ದರು ಎಂದು ಹೇಳಲಾಗುವ ರಾಮಾನುಜರ ಬದುಕಿನ ಕಾಲಘಟ್ಟದಲ್ಲಿ ಅಂದರೆ ಕ್ರಿ.. 1017 ರಿಂದ 1037   ಹನ್ನೊಂದು ಮತ್ತ ಹನ್ನೆರೆಡನೆಯ ಶತಮಾನದಲ್ಲಿ ರಾಮಾನುಜ ಚಾರ್ಯರುರು ದೆಹಲಿಗೆ ಹೋಗಿದ್ದ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೆಹಲಿಯ ಸುಲ್ತಾನನ ಮಗಳು ಆಟದ ಬೊಂಬೆಯಾಗಿಸಿಕೊಂಡಿದ್ದ ಚಲುವನಾರಾಯಣನ ಮೂರ್ತಿಯನ್ನು ರಾಮಾನುಜಾಚಾರ್ಯರು ಮೇಲುಕೋಟೆಗೆ ವಾಪಸ್ ತಂದರು ಎಂದು ಹೇಳಲಾಗುವ ಕಥೆಯಲ್ಲಿ ಕೆಲವು ತೊಡಕುಗಳಿವೆ. ಏಕೆಂದರೆ ದೆಹಲಿಯಲ್ಲಿ ಸುಲ್ತಾನರ ಆಳ್ವಿಕೆ ಆರಂಭಗೊಂಡಿದ್ದು 1206 ರಲ್ಲಿ ಅಂದರೆ 13 ನೆಯ ಶತಮಾನದಲ್ಲಿ. ( 1206 ರಿಂದ 10 ರವರೆಗೆ ಕುತ್ಬುದ್ದೀನ್ ಐಬಕ್ ಹಾಗೂ 1210 ರಿಂದ 12 ರವರೆಗೆ ಅರಮ್ ಷಾ ಎಂಬುವರು ಆಳಿವಿಕೆ ನಡೆಸಿದ್ದಾರೆಇದಕ್ಕೂ ಮುನ್ನ ದೆಹಲಿಯನ್ನು ನಿಯಂತ್ರಣಕ್ಕೆ ತಂದಕೊಂಡಿದ್ದವರು ಎಂದು ಹೇಳಲಾಗುವ  ಮಹಮ್ಮದ್ ಘೋರಿ ಮತ್ತು ಅವನಿಗಿಂತ ಮುಂಚಿನ ಮಹವiದ್ ಘಜ್ನಿ ಪ್ರಮುಖರು. ರಾಮಾನುಜಾರವರ ಕಾಲಘಟ್ಟದಲ್ಲಿ ಮಹವiದ್ ಘೋರಿ  ದೆಹಲಿಯ ಆಳ್ವಿಕೆ ನಡೆಸಿರುವುದು ಕಂಡುಬರುತ್ತದೆ. ಆದರೆ, ಇತಿಹಾಸದ ಬಹುಮುಖ್ಯ ಗೊಂದಲಗಳೆಂದರೆ, ಮಹಮ್ಮದ್ ಘೋರಿಯಾಗಲಿ, ಮಹಮ್ಮದ್ ಘಜ್ನಿಯಾಗಲಿ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದವರಲ್ಲ. ಅವರು ಯಾವುದೇ ದೇವಾಲಯಗಳನ್ನು ಕೊಳ್ಳೆ ಹೊಡೆಯಲಿಲ್ಲ. ಇವರ ಆಳ್ವಿಕೆಯಲ್ಲಿ ಗುಜರಾತಿನ ಸೋಮನಾಥ ದೇವಾಲಯವೂ ಸೇರಿದಂತೆ ರಾಜಸ್ಥಾನ ಮತ್ತು ಉತ್ತರ ಭಾರತದಲ್ಲಿ ಮಥುರಾ ಸೇರಿದಂತೆ  ಅನೇಕ ಜೈನ ಹಾಗೂ ವೈಷ್ಣವ ದೇವಾಲಯಗಳು ನಾಶವಾದವು. ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಮೊದಲಿಗೆ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಂದವನು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಹಾಗಾದರೆ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿಯ ವಿಗ್ರಹವನ್ನು ದೆಹಲಿಗೆ ಕೊಂಡೊಯ್ದವರು ಯಾರು? ಕುರಿತು ಇತಿಹಾಸ ತಜ್ಞರು ಗಮನ ಹರಿಸಬೇಕಿದೆ.

ತಮಿಳುನಾಡಿನ ಶ್ರೀ ಪೆರಬಂದೂರಿನಲ್ಲಿ ಜನಿಸಿ, ಶ್ರೀರಂಗನಲ್ಲಿ ನೆಲೆ ನಿಂತು ವೈಷ್ಣವ ಪಂಥವನ್ನು ಬಲಪಡಿಸಿದವರಲ್ಲಿ ರಾಮಾನುಜಾಚಾರ್ಯರು ಮುಖ್ಯರು. ತಮ್ಮ ಗುರುಗಳು ಹಾಗೂ ಆಶ್ರಯದಾತ ಚೋಳರಾಜನೊಂದಿಗೆ ತತ್ವ ಸಿದ್ಧಾಂತಗಳ ಕುರಿತಂತೆ ಭಿನ್ನಾಬಿಪ್ರಾಯಗಳು ಸ್ಪೋಟಗೊಂಡಾಗ  ತಮಿಳುನಾಡನ್ನು ತೊರೆದು ಕಾವೇರಿ ನದಿಯ ಜಾಡು ಹಿಡಿದು ತನ್ನ ಕೆಲವು ಶಿಷ್ಯರೊಂದಿಗೆ ಕರ್ನಾಟಕಕ್ಕೆ ಬಂದವರು. ಹನ್ನೊಂದನೆಯ ಶತಮಾನದಲ್ಲಿ  ದಕ್ಷಿಣ ಕರ್ನಾಟಕವನ್ನು ಆಳುತ್ತಿದ್ದ  ಹೊಯ್ಸಳ ದೊರೆ ಬಿಟ್ಟಿದೇವನಿಗೆ ವೈಷ್ಣವ ಧರ್ಮವನ್ನು ಸ್ವೀಕರಿಸುವಂತೆ ಮಾಡಿ ಆತನಿಗೆ  ವಿಷ್ಣವರ್ಧನ ಎಂದು ನೂತನ ಹೆಸರಿನಿಂದ ಕರೆದವರುಹೊಯ್ಸಳ ದೊರೆ ವಿಷ್ಣು ವರ್ಧನನ ಆಳ್ವಿಕೆಯಲ್ಲಿ ಕರ್ನಾಟಕದ ಅನೇಕ ಸಮುದಾಯಗಳು ವಿಶೇóಷವಾಗಿ ತಳ ಸಮುದಾಯದಿಂದ ಬಂದ ಅಸ್ಪøಶ್ಯರು ರಾಮಾನುಜಾಚಾರ್ಯರಿಂದ ವೈಷ್ಣವ ಧರ್ಮದ ದೀಕ್ಷೆ ಸ್ವೀಕರಿಸಿದ್ದು ವಿಶೇಷವಾಗಿತ್ತು. ಮೇಲುಕೋಟೆಯಲ್ಲಿ ಕೇವಲ ಹನ್ನೆರೆಡು Àರ್ಷ ವಾಸವಾಗಿದ್ದ ರಾಮಾನುಜರು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಕಾಶಿ ಯಾತ್ರೆ ಕೈಗೊಂಡಿದ್ದಾಗ, ದೆಹಲಿಗೆ ತೆರಳಿ ಚಲುವನಾರಾಯಣ ಮೂರ್ತಿಯನ್ನು ದೆಹಲಿಯ ಸುಲ್ತಾನರಿಂದ ವಾಪಸ್ ಪಡೆದು ತಂದರು ಎಂದು ಹೇಳಲಾಗಿದೆ. ರಾಮಾನುಜರ ಯಾತ್ರೆ ಕುರಿತಂತೆ ಪ್ರಥಮವಾಗಿ 15 ನೇ ಶತಮಾನದಲ್ಲಿ ಆಂಧ್ರಪ್ರದೇಶದ ತಾಲಪಾಕ ಅನ್ನಯ್ಯ ಎಂಬುವರುಚಲ್ಲಪಿಲ್ಲುರಾಯ ಚರಿತ್ರಮುಎಂಬ ಯಕ್ಷಗಾನ ಮಾದರಿಯ ಕೃತಿಯನ್ನು ರಚಿಸಿದ್ದಾರೆ. ( ಕೃತಿಯನ್ನು ಇತ್ತೀಚೆಗೆ ಅಂದರೆ 1982 ರಲ್ಲಿ ಗುಂತಕಲ್ಲಿನ ಪ್ರಕಾಶ್ ರಾವ್ ಎಂಬುವರು ಸಂಪಾದಿಸಿ ಮರು ಪ್ರಕಟಿಸಿದ್ದಾರೆ) ಇದನ್ನು ಹೊರತು ಪಡಿಸಿದರೆ, ದೆಹಲಿಯ ಸುಲ್ತಾನನು ದಕ್ಷಿಣ ಭಾರತದ ಹಿಂದೂ ಪಂಡಿತನನ್ನು ಆಸ್ಥಾನಕ್ಕೆ ಆಹ್ವಾನಿಸಿ ಗೌರವಿಸಿದ್ದನ್ನು ದೆಹಲಿಯ ಮುಸ್ಲಿಂ ಧರ್ಮಗುರುಗಳು ಖಂಡಿಸಿರುವ ಸಂಗತಿಯೊಂದು ಇತಿಹಾಸದ ಪುಟದಲ್ಲಿ ದಾಖಲಾಗಿದೆ.
ದೆಹಲಿಯ ಸುಲ್ತಾನನ ಮಗಳು ಚಲುವ ನಾರಾಯಣ ಪ್ರತಿಮೆಯೊಂದಿಗೆ ಮೇನಕೆಯಲ್ಲಿ ಕುಳಿತು ರಾಮಾನುಜಾ ಚಾರ್ಯರ ಜೊತೆ ಮೇಲುಕೋಟೆಗೆ ಬಂದಳು ಎಂಬುವುದರಿಂದ ಹಿಡಿದು, ಅವರು ಬರುವ ದಾರಿಯಲ್ಲಿ ರಾಜಪರಿವಾರ ಎಂದು ತಿಳಿದು ಡಕಾಯಿತರು ಮಾರ್ಗ ಮಧ್ಯೆ ದಾಳಿ ಮಾಡಿದಾಗ ಸ್ಥಳಿಯ ಬುಡಕಟ್ಟು ಜನ (ತಳ ಸಮುದಾಯದ ಜನ) ಅವರಿಬ್ಬರನ್ನು ರಕ್ಷಿಸಿದರು ಎಂದು ಆಂಧ್ರದ ತೆಲುಗು ಸಾಹಿತ್ಯದಲ್ಲಿ ದಾಖಲಾಗಿದೆ. (ರಾಮಾನುಜಾ ಚಾರ್ಯರು ಮಂಡ್ಯ ಜಿಲ್ಲೆಯಲ್ಲಿ ಹರಿಜನರಿಗೆ ವೈಷ್ಣವ ದೀಕ್ಷೆ ಕೊಡಲು ಘಟನೆ ಪ್ರೇರೇಪಣೆಯಾಗಿರಬಹುದೆ ಕುರಿತು ಹೆಚ್ಚಿನ ಅದ್ಯಯನದ ಅಗತ್ಯವಿದೆ.)  ಇದಕ್ಕೆ ಪೂರಕವೆಂಬಂತೆ ಸುಲ್ತಾನನ ಮಗಳು ಮೇಲುಕೋಟೆಯ ಚಲುವನಾರಾಯಣ ದೇಗುಲದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವ ಸಂದರ್ಭದಲ್ಲಿ ಹಾಜರಿದ್ದು, ವೈಷ್ಣವ ಭಕ್ತರಿಗೆ ಚಲುವನಾರಾಯಣನ ಮೇಲಿರುವ ಪ್ರೀತಿ ಕಂಡು ಅಚ್ಚರಿ ಪಟ್ಟಳು. ಆನಂತರ ಆಕೆ ದೆಹಲಿಗೆ ಹಿಂತಿರುಗದೆ ಮೇಲುಕೋಟೆಯಲ್ಲಿ ನೆಲೆ ನಿಂತಳು ಎಂಬ ಕಥೆ  ಈಗಲೂ ಮೇಲುಕೋಟೆಯಲ್ಲಿ ಜನಜನಿತವಾಗಿದೆ. ಈಕೆಗೆ ಸ್ಥಳಿಯ ಹರಿಜನರು ಆಶ್ರಯ ನೀಡಿದ್ದರು ಎಂದು ಸಹ ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ಬೇಬಿ ಎಂಬ ಗ್ರಾಮವಿದ್ದು ನಾಗಮಂಗಲ ತಾಲ್ಲುಕು ಬಸರಾಳು ಹೋಬಳಿಗೆ ಸೇರಿರುವ  ಊರಿನಲ್ಲಿ ಶೇಕಡ ತೊಂಬತ್ತರಷ್ಟು ಜನ ಹರಿಜನರಿದ್ದಾರೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ಬೇಬಿ ಜಾತ್ರೆ ಎಂಬ ಉತ್ಸವ ಊರಿನಲ್ಲಿ ನಡೆಯುತ್ತಿದೆ. ದಿನ ಸ್ಥಳಿಯ ಹರಿಜನರು ಬೀಬಿನಾಚ್ಚಿಯಾರ್ ಮತ್ತು ಚಲುವನಾರಾಯಣ ಪ್ರೇಮ ಕಥೆ ಕುರಿತಂತೆ ಇಡೀ ರಾತ್ರಿ ಜನಪದ ಹಾಡುಗಳನ್ನು ಹಾಡುತ್ತಾರೆ. ಬೀಬಿ ನಾಚ್ಚಿಯಾರ್ ವಾಸವಾಗಿದ್ದಳು ಎಂಬ ಮಂಟಪ, ಗುಹೆ ಈಗಲೂ ಅಸ್ತಿತ್ವದಲ್ಲಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಶೆಲ್ವಪಿಳ್ಳೈ ಎಂದು ವೈಷ್ಣವರು ಪ್ರೀತಿಯಿಂದ ಕರೆಯುವ ಚಲುವನಾರಾಯಣ ಸ್ವಾಮಿಯ ದೇಗುಲದಲ್ಲಿ ಚಲುವನಾರಾಯಣನ ಪ್ರತಿಮೆಯ ಕಾಲಿನ ಬಳಿ ಬೇಬಿ ನಾಚ್ಚಿಯಾರ್  ಪುಟ್ಟದೊಂದು ಪ್ರತಿಮೆಯಿದೆ. ಪ್ರತಿಮೆಗೆ ಪ್ರತಿದಿನ ಚಲುವನಾರಾಯಣನ ಜೊತೆಗೆ ಪೂಜೆ ಸಲ್ಲಿಸಲಾಗುತ್ತಿದೆ. ಇವೆಲ್ಲಕ್ಕಿಂತ ಬಹು ಮುಖ್ಯ ಸಂಗತಿಯೆಂದರೆ, ಮೇಲುಕೋಟೆಗೆ ಅಥವಾ ಕನ್ನಡ ನಾಡಿಗೆ  ಏನೇನೂ ಸಂಬಂಧ ಪಡದ ದೂರದ ಆಂಧ್ರಪ್ರದೇಶದಲ್ಲಿ ಘಟನೆ ಕುರಿತಂತೆ ತೆಲುಗು ಭಾಷೆಯಲ್ಲಿ ನಾಲ್ಕು ಕೃತಿಗಳು ರಚಿತವಾಗಿದ್ದು, ಎಲ್ಲವೂ ಯಕ್ಷಗಾನ ಮಾದರಿಯ ನಾಟಕ ಮತ್ತು ಕಾವ್ಯದ ರೂಪದಲ್ಲಿವೆ. ಈಗಾಗಲೇ ಹೇಳಿದಂತೆ ತಾಳಪಾಕ ಅನ್ನಯ್ಯನ ಕೃತಿಯಲ್ಲದೆ, 1880 ರಲ್ಲಿ ಕತ್ರಂಬಕ ಕೇಶವಚಾರ್ಯ ಎಂಬಾತನಿಂದ ಮತ್ತೊಂದು ಕೃತಿ ರಚಿತವಾಗಿದ್ದು ಕೃತಿಯನ್ನು ರಾಮಾನುಜಾಚಾರ್ಯರು ಜನಿಸಿದ  ತಮಿಳು ನಾಡಿನ ಶ್ರೀ ಪೆರಬಂದೂರಿನ ಬೂತ ಪುರೀಶ್ವರ ಎಂಬ ದೇವರಿಗೆ ಅರ್ಪಿಸಲಾಗಿದ್ದು, ಭುವನಗಿರಿ ರಂಗಯ್ಯ ಶೆಟ್ಟಿ ಎಂಬುವರಿಂದ ಕೃತಿ ಪ್ರಕಟಗೊಂಡಿದೆ.
ಮತ್ತೊಂದು ಕೃತಿಯು ಅಲಮೇಲ್ ಮಂಗ ತಾಯಮ್ಮ ಎಂಬ ಮಹಿಳೆಯಿಂದ ರಚಿತಗೊಂಡು ಕೃತಿಯು ವಿಜಯವಾಡ ಸಮೀಪದ ಬೇಜವಾಡ ಎಂಬ ಊರಿನಲ್ಲಿ ವಾಣಿ ಮುದ್ರಾಕ್ಷರ ಶಾಲಾ ಎಂಬ ಮುದ್ರಾಣಾಲಯದಿಂದ 1910 ರಲ್ಲಿ ಪ್ರಕಟವಾಗಿದೆ. ನಾಲ್ಕನೆಯ ಕೃತಿಯ ಹೆಸರು ಸುರತನಿ ಕಲ್ಯಾಣ ಎಂಬುದಾಗಿದೆ. (ಸುರತನಿ ಎಂದರೆ, ಸುಲ್ತಾನಿ ಅರ್ಥಾತ್ ಸುಲ್ತಾನನ ಮಗಳು ಎಂದರ್ಥ) ಪುಸ್ತಕದಲ್ಲಿ ಲೇಖಕರ ಹೆಸರು ದಾಖಲಾಗಿಲ್ಲ. ಆದರೆ, 1925 ರಲ್ಲಿ ರಾಜಮಂಡ್ರಿ ಪಟ್ಟಣದ  ಕಗ್ರಿ ಆಚಾರ್ಯ ಅಂಡ್ ಸನ್ಸ್ ಎಂಬ ಸಂಸ್ಥೆಯಿಂದ ಕೃತಿ ಪ್ರಕಟವಾಗಿದೆ.

ತಿರುಚ್ಚರಾಪಳ್ಳಿ ಸಮೀಪದ ಶ್ರೀರಂಗ ದೇವಾಲಯದ ತುಳಕ್ಕ ನಾಚ್ಚಿಯಾರ್ ಮತ್ತು ಮೇಲುಕೋಟೆಯ ಬೀಬಿ ನಾಚ್ಚಿಯಾರ್   ಕುರಿತ ಇತಿಹಾಸದ ಗೊಂದಲಗಳು ಮತ್ತು ಐತಿಹ್ಯದ ಸಂದೇಹಗಳು ಏನೇ ಇರಲಿ, ದಿನಗಳಲ್ಲಿಯೂ ಸಹ ಹಿಂದೂ ದೇವಾಸ್ಥಾನಗಳಲ್ಲಿ ಇಬ್ಬರು ಮುಸ್ಲಿಂ ಹೆಣ್ಣುಮಕ್ಕಳು ದೇವತೆಗಳಾಗಿ ಪೂಜಿಸ್ಪಡುತ್ತಿರುವುದನ್ನು ಹಾಗೂ ಇದಕ್ಕೆ ಕಾರಣವಾದ ಹಿಂದೂ ಧರ್ಮದ ಉಧಾರ ಮನೋಭಾವದ ಆಚರಣೆ ಮತ್ತು ಸಂಸ್ಕøತಿಯನ್ನು ನಾವು ತಳ್ಳಿ ಹಾಕಲು ಸಾಧ್ಯವೆ?


ತಲೆಮಾರಿನ ಹದಿ ಹರೆಯದ ಯುವಕರ ಎದೆಯೊಳಗೆ ಧರ್ಮದ ಹೆಸರಿನಲ್ಲಿ ವಿಷ ಬೀಜವನ್ನು ಬಿತ್ತುವಷ್ಟು ಸುಲಭವಾಗಿ ಭಾರತದ ಬಹುಸಂಸ್ಕøತಿಯ ಒಡಲೊಳಗೆ ಹಬ್ಬಿಕೊಂಡಿರುವ ಬಾಂಧವ್ಯದ ಬಳ್ಳಿಯ ಬೇರುಗಳನ್ನು ಅಷ್ಟೊಂದು ಸುಲಭವಾಗಿ ಕತ್ತರಿಸಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ನಡುವಿನ ಹಿಂದೂ ಧರ್ಮದ ಪರಮ ಪ್ರತಿಪಾದಕರು ಅರ್ಥ ಮಾಡಿಕೊಳ್ಳಬೇಕಾಗಿದೆ.

ಭಾನುವಾರ, ಮಾರ್ಚ್ 20, 2016

ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿಯ ಆತ್ಮಕಥೆ


ಮಾವೋವಾದಿ ನಕ್ಸಲ್ ಸಂಘಟನೆಯ ನಾಯಕನಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿ ಆಳುವ ಸರ್ಕಾರಗಳಿಗೆ ದುಸ್ವಪ್ನದಂತೆ ಬದುಕಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿ ಕೋಟೇಶ್ವರಮ್ಮನವರ ಆತ್ಮ ಕಥೆ “ ದ ಶಾರ್ಪ್ ನೀಪ್ ಆಫ್ ಮೆಮೋರಿ” ಕೃತಿಯನ್ನು ಓದುತ್ತಿದ್ದೆ. 1920 ರ ದಶಕದಲ್ಲಿ ಕೃಷ್ಣ ಜಿಲ್ಲೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿ, ನಾಲ್ಕನೆಯ ವಯಸ್ಸಿಗೆ ಬಾಲ್ಯ ವಿವಾಹವಾಗಿ ಆರನೇ ವಯಸ್ಸಿಗೆ ವಿಧವೆಯಾಗಿ ವಿದ್ಯಾಭ್ಯಾಸ ಮುಂದುವರಿಸಿದ ಕೋಟೇಶ್ವರಮ್ಮ 1930 ರಲ್ಲಿ ಉತ್ತರ ಆಂಧ್ರದ ಗೋದಾವರಿ ಪ್ರದೇಶಕ್ಕೆ ಗಾಂಧೀಜಿ ಬೇಟಿ ನೀಡಿದಾಗ ಮೈ ಮೇಲಿದ್ದ ಒಡವೆಗಳನ್ನು ಗಾಂಧೀಜಿಯವರ ಹರಿಜನ ನಿಧಿಗೆ ನೀಡಿ, ಚರಕವನ್ನು ಕೈಗೆತ್ತಿಕೊಂಡವರು.ಆ ನಂತರ ಪ್ರಗತಿ ಪರ ಬರಹಗಾರಗಾರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನದಿಂದಾಗಿ ತಮ್ಮ ಹರೆಯದ ದಿನಗಳಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಕೈ ಹಿಡಿದು, ಆದಿವಾಸಿಗಳು, ಹರಿಜನರು, ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳಿಗೆ ಹೋರಾಡುತ್ತಾ, ಸೀತಾರಾಮಯ್ಯನವರ ಜೊತೆಯಲ್ಲಿ ಕಾಡು ಮೇಡು ಅಲೆಯುತ್ತಾ, ಪೊಲೀಸರ ಕಣ್ಣು ತಪ್ಪಿಸಲು ವೇಷ ಮರೆಸಿಕೊಂಡು ಹಲವು ರಾಜ್ಯಗಳನ್ನು ಸುತ್ತಾಡಿದರು. ಮಕ್ಕಳಾದ ನಂತರ ಸೀತಾರಾಮಯ್ಯನವರಿಂದ ಪರಿತ್ಯಕ್ತರಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಾ ಮಕ್ಕಳು ಸಾಕಿ ಬೆಳಸಿದರು. 2012 ರಲ್ಲಿ ತಮ್ಮ 92 ನೆಯ ವಯಸ್ಸಿನಲ್ಲಿ ತೆಲುಗು ಭಾಷೆಯಲ್ಲಿ “ ನಿರ್ಜನ ವಾರಧಿ” ಹೆಸರಿನಲ್ಲಿ ಪ್ರಕಟವಾಗಿದ್ದ  ಈ ಕೃತಿ 2015 ರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದೆ. 

ಅವರ ತಮ್ಮ ಮೊದಲ ಅಧ್ಯಾಯಕ್ಕೆ “ಶಿಥಿಲಗೊಂಡ ಸೇತುವೆ” ಎಂಬ ಹೆಸರಿಟ್ಟು, ಆರಂಭದಲ್ಲಿ ಒಂದು ಕವಿತೆಯನ್ನು ದಾಖಲಿಸಿದ್ದಾರೆ. ಆ ಕವಿತೆ ಕನ್ನಡ ಅನುವಾದ  ಹೀಗಿದೆ.

ನೆನಪುಗಳು
ಕೆಲವು ನೆನಪುಗಳೇ ಹಾಗೆ
ಮೊಗ್ಗಿನಂತೆ ಅರಳುತ್ತವೆ
ಸುವಾಸೆನೆಗಳ ಮೂಲಕ
ಹೃದಯವನ್ನು ಆವರಿಸುತ್ತವೆ
ಸಂತೋಷದ ಕಣ್ಣಿರಲ್ಲಿ ತೋಯಿಸುತ್ತವೆ
ಅಂಗೈನಲ್ಲಿರುವ ಮುತ್ತಿನ ಹಾಗೆ
ಪಳ ಪಳ ಹೊಳೆಯುತ್ತವೆ.

ಕೆಲವು ನೆನಪುಗಳು
ಮುಳ್ಳಿನಂತೆ ಚುಚ್ಚುತ್ತವೆ
ವಿಷಾಧ ಮತ್ತು ದುಃಖಗಳೊಡನೆ
ಮನದೊಳಗೆ ಮನೆ ಮಾಡುತ್ತವೆ
ನಮ್ಮನ್ನು ಉಸಿರುಗಟ್ಟಿಸುತ್ತವೆ
ಎದೆಗೆ ನಾಟಿದ ಚೂಪುಗತ್ತಿಯ
ಕೊನೆಯಿರದ ನೋವಿನ ಹಾಗೆ.

ಕನಸು ಮತ್ತು ಆಕಾಂಕ್ಷೆಗಳು ಅಳಿಸಿ ಹೋಗಿವೆ
ಬೇಡದ ಸಂಗತಿಗಳು ಮೈ ಮೇಲೆ ಬಿದ್ದು
ಬದುಕು ಛಿದ್ರಗೊಂಡಿದೆ. ಮನಸು ಮಾತ್ರ
ನೆನಪುಗಳ ಶಿಕಾರಿಗೆ ಹೊರಟಿದೆ
ನನ್ನ ಹೃದಯವೆಂಬುದು ಒಡೆದ ಕನ್ನಡಿ ಚೂರು.
ನೆನಪುಗಳು ಪುಡಿ ಪುಡಿಯಾದ ಹೆಂಚುಗಳ ರಾಶಿ,

ಶುಕ್ರವಾರ, ಮಾರ್ಚ್ 4, 2016

ಭಾರತೀಯ ಸಂಸ್ಕೃತಿಯ ಅಂತಃಶಕ್ತಿಯ ಅನಾವರಣ- ನವಜೀವನ ಕೃತಿ


ಇದೇ ಅಲ್ಲವಾ? ಒಂದು ಕೃತಿ ಅಥವಾ ಒಂದು ಅಧ್ಯಯನ ನಮ್ಮ ಮುಂದೆ ಒಡ್ಡ ಬಲ್ಲ ಸವಾಲುಗಳು ಎನ್ನುವುದು? ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿನ ಬಹುಮುಖಿ ಸಂಸ್ಕತಿ ಕುರಿತಂತೆ ಅಧಿಕೃತವಾಗಿ ಮಾತನಾಡಬಲ್ಲೆವು ಮತ್ತು ಇಲ್ಲಿನ ಜಾತಿ, ಧರ್ಮ, ಕುಲ ಕಸುಬುಗಳನ್ನು ವಿಮರ್ಶೆಯ ಒರೆಗಲ್ಲಿಗೆ ಒಡ್ಡಬಲ್ಲೆವು ಎಂದು ಬೀಗುತ್ತಿರುವ ನಾವು ದೇಶಭಕ್ತ ಯಾರು? ದೇಶದ್ರೋಹಿ ಯಾರು ಎಂದು ಪ್ರಶ್ನಿಸಿಕೊಳ್ಳುತ್ತಾ, ಕೂಗುಮಾರಿ ಸಂಸ್ಕತಿಗೆ ಬಲಿಯಾಗಿದ್ದೆವೆ. ಇಂತಹ ಗೊಂದಲದ ಗೂಡಿನ ನಡುವೆ ನಿಮ್ಮ ಧರ್ಮ, ಜಾತಿ, ದೇಶಭಕ್ತಿ ಅಥವಾ ವೈಚಾರಿಕತೆಗಿಂತ ಮಿಗಿಲಾಗಿ ಭಾರತೀಯ ಸಂಸ್ಕತಿಯ ಒಡಲೊಳಗೆ ಗುಪ್ತ ನದಿಯಂತೆ ಹರಿಯುತ್ತಿರುವ ಮತ್ತೊಂದು ಪ್ರತಿ ಸಂಸ್ಕøತಿ ಅಥವಾ ಪರ್ಯರ್ಯವಾದ ಅಲೌಕಿಕ ಸಂಸ್ಕತಿಯೊಂದು ಇದೆ ಎಂಬುದನ್ನ ಸ್ಕಾಟ್ಲೆಂಡ್ ಮೂಲದ  ಲೇಖಕ ವಿಲಿಯಂ ಡಾಲ್ರಿಂಪೆಲ್ ನಮ್ಮೆದುರು ಅನಾವರಣಗೊಳಿಸಿದ್ದಾನೆ.
ಕಳೆದ ಮುವತ್ತು ವರ್ಷಗಳಿಂದ ಒಬ್ಬ ಪತ್ರಕರ್ತನಾಗಿ, ಲೇಖಕನಾಗಿ, ಇತಿಹಾಸಕಾರನಾಗಿ ಭಾರತದ ಉದ್ದಗಲಕ್ಕೂ ಓಡಾಡುತ್ತಾ, ಇಲ್ಲಿನ ವಿವಿಧ ಸಂಸ್ಸøತಿ, ಧರ್ಮ, ಜಾತಿಯ ಜನರೊಡನೆ ಒಡಾಡುತ್ತಾ, ತನ್ನ ಅನುಭವವನ್ನು ಇಂಗ್ಲೀಷ್ ಭಾಷೆಯಲ್ಲಿ ನೈನ್ ಲಿವ್ಸ್ ಎಂಬ ಹೆಸರಿನಲ್ಲಿ ಡಾಲಿಂಪ್ರೆಲ್  2009 ರಲ್ಲಿ ಬರೆದಿದ್ದ ಕೃತಿಯು ಇದೀಗ ವಸುಧೇಂದ್ರ ಛಂದ ಪ್ರಕಾಶನದ ಮೂಲಕನವ ಜೀವಗಳುಶೀರ್ಷಿಕೆಯಡಿ ಪ್ರಕಟವಾಗಿದೆ. ಇಂತಹದೊಂದು ಅಪರೂಪದ ಹಾಗೂ ಅನನ್ಯವಾದ ಕೃತಿಯನ್ನು ಕನ್ನಡಕ್ಕೆ ತರಲು ಆಯ್ದುಕೊಂಡ ಕಥೆಗಾರ ವಸುಧೇಂದ್ರರ ಅಭಿರುಚಿ ಮತ್ತು ಸಮರ್ಥವಾಗಿ ಅನುವಾದಿಸಿರುವ ನವೀನ್ಗಂಗೋತ್ರಿ ಅವರನ್ನು ಕನ್ನಡದ ಓದುಗರಾದ ನಾವು  ಅಭಿನಂದಿಸಲೇಬೇಕು.
ದೇಶಕ್ಕೆ ಪತ್ರಕರ್ತರಾಗಿ ಕಾಲಿಟ್ಟ ಬಹುತೇಕ ವಿದೇಶಿ ಪತ್ರಕರ್ತರು ಇಲ್ಲಿನ ಜನರನ್ನು, ಇಲ್ಲಿನ ಬಹುಮುಖಿ ಸಂಸ್ಕøತಿಯನ್ನು ಹಾಗೂ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಬಗೆಯ ಹೋರಾಟ ಹಾಗೂ ಪರ-ವಿರೋಧಗಳ ನಡುವಿನ ಅತಿರೇಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ತಮಗರಿವಿಲ್ಲದಂತೆ ಇಲ್ಲಿನ ಬದುಕಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಬಿ.ಬಿ.ಸಿ. ಛಾನಲ್ ಗೆ ವರದಿಗಾರನಾಗಿ ಬಂದು ಭಾರತವನ್ನು ಕುರಿತಂತೆ ನೊ ಪುಲ್ ಸ್ಟಾಪ್ ಇನ್ ಇಂಡಿಯ, ಇಂಡಿಯಾ ಇನ್ ಸ್ಲೊ ಮೋಷನ್, ಹಾರ್ಟ್ ಆಫ್ ಇಂಡಿಯಾ, ಇಂಡಿಯಾ ಅನ್ಎಂಡಿಂಗ್ ಜರ್ನಿ ಮುಂತಾದ  ಕೃತಿಗಳನ್ನು ಬರೆದು, ಇದೀಗ ಭಾರತೀಯ ನಾಗರೀಕನಾಗಿ ಕೊಲ್ಕತ್ತ ನಗರದಲ್ಲಿ ವಾಸಿಸುತ್ತಿರುವ ಮಾರ್ಕ್ ಟುಲಿಪ್ರಾನ್ಸ್ ಮೂಲದ ಲೇಖಕನಾಗಿದ್ದುಕೊಂಡು, ಭಾರತ ಸ್ವಾತಂತ್ರ್ಯ ಹೋರಾಟದ ಬಗ್ಗೆಫ್ರೀಡಂ ಅಟ್ ಮಿಡ್ ನೈಟ್ಮತ್ತು ಐತಿಹಾಸಿಕ ಕೊಲ್ಕತ್ತ ನಗರ ಕುರಿತುಸಿಟಿ ಆಫ್ ಜಾಯ್ಎನ್ನುವಂತಹ ಪ್ರಸಿದ್ಧ ಕೃತಿಗಳನ್ನು ಬರೆದು ನಮ್ಮವನೇ ಎಂಬಂತಿರುವ ಡಾಮಿನಿಕ್ಯೂ ಲೆಪಿಯರ್ರೆ ಇಂತಹವರ ಸಾಲಿಗೆ ಸೇರುವ ಲೇಖಕರಲ್ಲಿ ವಿಲಿಯಂ ಡಾಲ್ರಿಂಪೆಲ್ ಕೂಡ ಮುಖ್ಯನಾದವನು. ಲೇಖಕನಿಗೆ ಇರುವ ಒಳನೋಟ, ಒಂದು ವಿಷಯವನ್ನು ಬೆನ್ನತ್ತಿ ಅದನ್ನು ಸಮಗ್ರವಾಗಿ ಪರಿಶೀಲಿಸಿ, ಅಧ್ಯಯನ ಮಾಡುವ ಪರಿ ಹಾಗೂ ಆತನ ಚಿತ್ರಣ ಶಕ್ತಿ ನಿಜಕ್ಕೂ ಬೆರಗು ಮೂಡಿಸುತ್ತದೆ. ಒಂದು ವಿಷಯದ ಅಧ್ಯಯನದಲ್ಲಿ ಯಾವುದೇ ಪೂರ್ವಾಗ್ರಹಪೀಡಿತ ಮನಸ್ಸನ್ನು ಇಟ್ಟುಕೊಳ್ಳದೆ ಅದನ್ನು ಬದಿಗಿಟ್ಟು ನಿರ್ಲಿಪ್ತತೆ ಮತ್ತು ಧ್ಯಾನಸ್ಥ ಮನಸ್ಸಿನಿಂದ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಭಾರತೀಯ ಲೇಖಕರಿಗೆ ಡಾಲ್ರಿಂಪೆಲ್ ಮಾದರಿಯಾಗಿದ್ದಾನೆ. ಕಾರಣಕ್ಕೆ ಭಾರತದ ಇತಿಹಾಸ ಮತ್ತು ವರ್ತಮಾನ ಭಾರತದ ತಲ್ಲಣಗಳನ್ನು ದಾಖಲಿಸುವುದರಲ್ಲಿ ವಿಲಿಯಂ ಡಾಲ್ರಿಂಪೆಲ್ ನಮ್ಮವರೇ ಆದ ಹಾಗೂ ರುಯಿನ್ಸ್ ಆಫ್ ಎಂಪೈರ್ ಮತ್ತು ಎಂಡ್ ಆಫ್ ಸಫರಿಂಗ್ ಕೃತಿಗಳನ್ನು  ಬರೆದ ಪಂಕಜ್ ಮಿಶ್ರಾ ಅವರ ಸಾಲಿನಲ್ಲಿ ನಿಲ್ಲುತ್ತಾನೆ. ವಿಲಿಯಂ ಡಾಲ್ರಿಂಪೆಲ್ ಬರೆದ  ಮೊಗಲ್ ಸಾಮ್ರಾಜ್ಯದ ಇತಿಹಾಸ ಕುರಿತಾದ ವೈಟ್ ಮೊಗಲ್ಸ್, ಲಾಸ್ಟ್ ಮೊಗಲ್ ಹಾಗೂ  ಸಿಟಿ ಆಫ್ ಜಿನ್ನ್ಸ್, ಫ್ರಂ ಹೊಲಿ ಮೌಂಟೆನ್  ಕೃತಿಗಳ ಮೂಲಕ ಭಾರತದ ಇತಿಹಾಸ ಕುರಿತು  ಅಧಿಕೃತವಾಗಿ ಮಾತನಾಡುವ ಮತ್ತು ಬರೆಯಬಲ್ಲ ಲೇಖಕ ಎಂದು  ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾನೆ.
 “ನವ ಜೀವಗಳುಕೃತಿಯಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ( ಇದರಲ್ಲಿ ಒಂದು ಲೇಖನ ಪಾಕಿಸ್ತಾನ್ ಸಿಂಧ್ ಪ್ರಾಂತ್ಯದ ಸೂಫಿ ಸಂತರ ದರ್ಗಾ ಹಾಗೂ ಸೂಫಿಗಳ ಕುರಿತಂತೆ ಇರುವುದು ವಿಶೇಷ) ಇಂದಿಗೂ ಜೀವಂತವಿರುವ ವಿವಿಧ ಕಸುಬುಗಳು ಸೇರಿದಂತೆ, ಹಾಡು, ನೃತ್ಯ, ಪ್ರತಿಮೆಗಳ ತಯಾರಿ, ದೇವದಾಸಿಯರ ವೇಶ್ಯಾವಾಟಿಕೆ ವೃತ್ತಿ, ಅಲೆಮಾರಿ ಗಾಯಕರು, ಜೈನ ಧರ್ಮ ಹಾಗೂ ಬೌದ್ಧ ಧರ್ಮದ ಅನುಯಾಯಿಗಳ ಬದುಕು, ಅವರ ಪೂರ್ವಾಶ್ರಮದ ವಿವರಗಳು ಹಾಗೂ ಅಂತರಂಗದ ತಾಕಲಾಟ ಇವುಗಳನ್ನು ಲೇಖಕ ಪರಿಣಾಮಕಾರಿಯಾಗಿ ಕೃತಿಯುದ್ದಕ್ಕೂ ಕಟ್ಟಿಕೊಟ್ಟಿದ್ದಾನೆಆಯಾ ಕಥೆಗಳಲ್ಲಿ ಅಲ್ಲಿನ ಪ್ರಾದೇಶಿಕ ಬದುಕು ಮತ್ತು  ಭೌಗೂಳಿಕ ಪರಿಸರವನ್ನು ಗ್ರಹಿಸಿ ಅವುಗಳನ್ನು ಬಣ್ಣಿಸುವ ಲೇಖಕನ ಬರೆವಣಿಗೆಯ ಸಾಮಥ್ರ್ಯ ಆಶ್ಚರ್ಯ ಪಡುವಂತಹದ್ದು.


ಕೃತಿಗೆ ಪ್ರಸ್ತಾವನೆಯ ರೂಪದಲ್ಲಿ ವಿಲಿಯಂ ಡಾಲಿಂಪ್ರೆಲ್ ಬರೆದಿರುವ ಮಾತುಗಳು, ಲೇಖಕನ ಗ್ರಹಿಕೆಯ ನೆಲೆಗಳು ಎಷ್ಟು ಸ್ಪಷ್ಟವಾಗಿವೆ ಮತ್ತು ಗಟ್ಟಿಯಾಗಿವೆ ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ. “ ಭಾರತ ಉಪ ಖಂಡವು ಜಾಗತಿಕ ಮಾರುಕಟ್ಟೆಯ ಹೃದಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ತನಗಿದ್ದ ಸ್ಥಾನವನ್ನು ಮರು ಗಳಿಸಿಕೊಳ್ಳುವತ್ತ ಧಾವಿಸುತ್ತಿರುವ ಬಗ್ಗೆ ಸಾಕಷ್ಟನ್ನು ಈಗಾಗಲೇ ಬರೆದದ್ದಾಗಿದೆ. ಆದರೆ ಮಹಾ ಭೂಕಂಪಗಳು ದಕ್ಷಿಣ ಏಷ್ಯಾದ ವಿವಿಧ ಧಾರ್ಮಿಕ ಸಂಪ್ರದಾಯಗಳನ್ನು ಕಲಕಿದ ಬಗೆಯನ್ನು ಕುರಿತು ಈವರೆಗೆ ಹೇಳಲಾಗಿದ್ದು ತುಂಬಾ ಕಡಿಮೆ.
ಸುತ್ತ ಸುಳಿಯುತ್ತಿರುವ ಸುಳಿಗಾಳಿಯ ಮಧ್ಯೆಯೂ ತಮ್ಮದೇ ಶಾಂತ ನೆಲೆಯನ್ನು ಕಂಡುಕೊಂಡು ಶ್ರೀಮಂತವಾದ ಪರಂಪರೆಯೊಂದಿಗೆ ಬದುಕುತ್ತಿರುವವರ ಬಗ್ಗೆ ತುಂಬಾ ಕಡಿಮೆಯೆಂಬಷ್ಟನ್ನು ಮಾತ್ರ ಅನ್ವೇಷಣೆ ಮಾಡಲಾಗಿದೆ. ನಾವು ಪಾಶ್ಚಿಮಾತ್ಯರು ಪೂರ್ವದ ರಿಲಿಜಿನ್ ಗಳ ಬಗ್ಗೆ ಅಂದುಕೊಂಡಂತೆ ಆಳವಾದ ಪ್ರಾಚೀನ ಬಾವಿಗಳಂತೆ. ಬದಲಾಗದ ಜ್ಞಾನದ ಖನಿಗಳಿದ್ದಂತೆ ವಾಸ್ತವದೆಲ್ಲೇನೂ ಇಲ್ಲ. ನಿಜವೆಂದರೆ ಭಾರತದ ಹೆಚ್ಚಿನ ಧಾರ್ಮಿಕ ಗುರುತುಗಳೆಲ್ಲ ನಿರ್ಧಿಷ್ಟವಾದ ಸಾಮಾಜಿಕ ವೃಂದಗಳೊಂದಿಗೆ, ಜಾತೀಯ ಆಚರಣೆಗಳೊಂದಿಗೆ ಮತ್ತು ಅಪ್ಪನಿಂದ ಮಗನಿಗೆ ಹರಿದು ಬಂದಂತಹ ಪರಂಪರೆಗೆ ಸಂಬಂದ್ಧವಾಗಿವೆ; ಮತ್ತು ಭಾರತದ ಸಮಾಜವು ವೇಗವಾಗಿ ಬದಲಾಗುತ್ತಿರುವಂತೆ ಇವೆಲ್ಲವೂ ಅಷ್ಟೇ ಮಹಾವೇಗದಿಂದ ಬದಲಾಗುತ್ತಿವೆ.
ಇವೆಲ್ಲವೂ ಬಲು ಆಸಕ್ತಿದಾಯಕವಾದ ಹಲವಾರು ಪ್ರಶ್ನೆಗಳನ್ನೆತ್ತುತ್ತವೆ. ನಿಜಕ್ಕೂ ಪುಣ್ಯ ಪುರುಷನಾಗಿರುವುದು ಮತ್ತು ಜೈನ ಸನ್ಯಾಸಿನಿಯಾಗಿರುವುದು ಅಂದರೆ ಏನು? ಜ್ಞಾನಿಯಾಗಿರುವುದು ಮತ್ತು ಟಾಟಾ ಕಂಪನಿಯಿಂದ ತಯಾರಾದ ಲಾರಿಗಳು ಭರದಿಂದ ಶಬ್ದ ಮಾಡುತ್ತಾ ಹೋಗುವ ಭವ್ಯ ಭಾರತದ ರಸ್ತೆಗಳಲ್ಲಿ ತಾಂತ್ರಿಕನೊಬ್ಬ ಮೋಕ್ಷದ ಅನ್ವೇóಣೆಗೆ ತೊಡಗುವುದಂದರೇನು? ವ್ಯಕ್ತಿಯೊಬ್ಬ ದಿವ್ಯವೇ ತನ್ನನ್ನು ಕರೆದು ಕೆಲಸಕ್ಕೆ ಹಚ್ಚಿದಂತೆ ಆಯುಧಗಳನ್ನೆತ್ತಿಕೊಂಡು ರಕ್ಷಣೆಯ ಯುದ್ಧಕ್ಕೆ ನಿಂತಿರುವುದೇಕೆ? ಮತ್ತು ಅದೇ ಹೊತ್ತಿಗೆ ಇನ್ನೊಬ್ಬ ಪರಮ ಅಹಿಂಸೆಯನ್ನೇ ಆಚರಿಸುತ್ತಿರುವುದೇಕೆ? ಓರ್ವನು ತಾನು ದೇವರನ್ನು ನಿರ್ಮಿಸಬಲ್ಲೆ ಅಂತ ಚಿಂತಿಸುವುದಾಗಲಿ, ಇನ್ನೊಬ್ಬ ತಾನು ದೇವರಿಗೆ ತನ್ನೊಳಗೆ ನೆಲೆ ಕೊಡಬಲ್ಲೆ ಅಂದುಕೊಳ್ಳುವುದಾಗಲೀ ಏತಕ್ಕೆ? ಪ್ರತಿಯೊಂದು ಧಾರ್ಮಿಕ ಪಂಥವು ಭಾರೀ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಭಾರತದ ವಾತಾವರಣದಲ್ಲಿ ತನ್ನ ಉಳಿಯುವಿಕೆಯನ್ನು ಅದು ಹೇಗೆ ಕಂಡುಕೊಳ್ಳುತ್ತಿದೆ? ಬದಲಾಗುವುದು ಯಾವುದು? ಬದಲಾಗದೆ ಇರುವುದು ಯಾವುದು? ಆಧುನಿಕ ಭೌತವಾದಕ್ಕೆ ಭಾರತವು ನಿಜಕ್ಕೂ ಪರ್ಯಾಯವಾದ ನೈಜ ಅಧ್ಯಾತ್ಮವನ್ನು ಇವತ್ತಿಗೂ ಕೊಡಬಲ್ಲದೆ?” ಇಂತಹ ಪ್ರಶ್ನೆಗಳನ್ನಿಟ್ಟುಕೊಂಡು ಭಾರತ ಸಂಸ್ಕøತಿಯ ಅಸ್ಮಿತೆಯ ಹುಡುಕಾಟದ ಸಂದರ್ಭದಲ್ಲಿ ತಾನು ಕಂಡು ಕೊಂಡ ಅನುಭವವನ್ನು ವಿಲಿಯಂ ಡಾಲಿಂಪ್ರೆಲ್ ಮನೋಜ್ಞವಾಗಿ ಕೃತಿಯಲ್ಲಿ ದಾಖಲಿಸಿದ್ದಾನೆ.

  ಕೃತಿಯಲ್ಲಿನ ಮೊದಲ ಲೇಖನಸನ್ಯಾಸಿನಿಯೊಬ್ಬಳ ಕಥೆಒಬ್ಬ ಜೈನ ಸನ್ಯಾಸಿನಿಯ ಅಂತರಂಗದ ತಾಕಲಾಟಗಳನ್ನು ತೆರೆದಿಟ್ಟರೆ, ಎರಡನೆಯ ಲೇಖನಕಣ್ಣೂರಿನ ಕುಣಿತದವನುಕೇರಳದ ತೆಯ್ಯಮ್ ನೃತ್ಯವನ್ನು ವೃತ್ತಿಯಾಗಿಸಿಕೊಂಡು ಅದರಲ್ಲಿ ತೃಪ್ತಿ ಕಾಣುವ ದಲಿತ ಕಲಾವಿದ ಹರಿದಾಸನ ಬದುಕನ್ನು ತೆರೆದಿಡುತ್ತದೆ. ವರ್ಷದ ಹತ್ತು ತಿಂಗಳು ಬಾವಿ ತೋಡುವುದರಲ್ಲಿ ಮತ್ತು ಸೆರೆಮನೆಯ ಕೂಲಿಕಾರನಾಗಿ ಬದುಕು ಸೆವೆಸುವ ಹರಿದಾಸ ಉಳಿದ ಎರಡು ತಿಂಗಳಿನಲ್ಲಿ ಕೇರಳದ ಕಣ್ಣೂರು ಪ್ರಾಂತ್ಯದಲ್ಲಿ ಆಚರಣೆಯಲ್ಲಿರುವ ತೆಯ್ಯಮ್ ನೃತ್ಯದಲ್ಲಿ ದೇವರಾಗಿ ಖುಷಿ ಪಡುವ ಸಂಗತಿಯನ್ನು ಆತ್ಮೀಯವಾಗಿ ಕಟ್ಟಿಕೊಡಲಾಗಿದೆ. ಜೊತೆಗೆ ಕೀಳರಿಮೆಬಡತನ ಹಾಗೂ ಶೋಷಣೆಗಳ ನಡುವೆ ಬದುಕುತ್ತಿರುವ ಭಾರತದ ತಳ ಸಮುದಾಯಕ್ಕೆ ಇಲ್ಲಿನ ಸಂಸ್ಕøತಿಯು ಮೇಲ್ಜಾತಿಯ ಜನರನ್ನು ದೇವರಾಗಿ ಆಶೀರ್ವಚನ ನೀಡುವುದಕ್ಕೆ ಕಲ್ಪಿಸಿರುವ ಅವಕಾಶ ಹಾಗೂ ಬೇರೆ ದಿನಗಳಲ್ಲಿ ಮುಟ್ಟಿಸಿಕೊಳ್ಳುವುದು ಇರಲಿ, ನೀರು ಕೊಡಲು ಹಿಂದೇಟು ಹಾಕುವ ಬ್ರಾಹ್ಮಣರು ದೇವರನ್ನು ಆವಾಹಿಸಿಕೊಂಡಿರುವ ದಲಿತನೊಬ್ಬನ ಕಾಲು ಮುಟ್ಟಿ ನಮಸ್ಕರಿಸುವ ಬಗೆಯನ್ನು ಲೇಖಕ ತುಂಬಾ ಅರ್ಥಪೂರ್ಣವಾಗಿ ವಿವೇಚಿಸಿದ್ದಾನೆ.
ಕೃತಿಯಲ್ಲಿನಕಾವ್ಯ ಗಾಯಕಕಥನದಲ್ಲಿ ರಾಜಸ್ಥಾನದ ಸ್ಥಳಿಯ ಜನಪದ ನಾಯಕನಾದ  ಪ್ರಭುಜಿ ಕುರಿತಾದ ಮೌಖಿಕ ಕಾವ್ಯದ ಬಗ್ಗೆ ದಟ್ಟವಾದ ವಿವರಗಳಿವೆ ಕಾವ್ಯವನ್ನು ಹಾಡುವ ಗಾಯಕರು ಹಾಗೂ ಅಲ್ಲಿನ ಪಾಡ್ ಎಂಬ ಬೃಹತ್ತಾದ ಕಥನದ ಭಿತ್ತಿ ಚಿತ್ರಗಳುಳ್ಳ ಪರೆದೆ ಇವುಗಳನ್ನು ಹಿನ್ನಲೆಯಾಗಿ ಇಟ್ಟುಕೊಂಡು, ವಿಲಿಯಂ ಡಾಲಿಂಪ್ರೆಲ್ ಜಗತ್ತಿನ ಬಹುತೇಕ ಮೌಖಿಕ ಕಾವ್ಯಗಳನ್ನು ವಿಸ್ತ್ರುತವಾಗಿ ಚರ್ಚೆ ಮಾಡಿದ್ದಾನೆ. ಅವನ  ಆಳವಾದ ಅಧ್ಯಯನದಲ್ಲಿ ನಮ್ಮ ಮಹಾಭಾರತ, ರಾಮಾಯಣವನ್ನೂ ಒಳಗೊಂಡು, ಪ್ರಾಚೀನ ನಾಗರೀಕತೆಯ ಇಲಿಯಡ್, ಒಡಿಸ್ಸಿ ಹಾಗೂ ಇಸ್ಲಾಂ ಧರ್ಮದದಸ್ತನ್ ಅಮಿರ್ ಹಮ್ಜಾಕಾವ್ಯದ ಬಗ್ಗೆ ಹೀಗೆ ಜಗತ್ತಿನ ಅಲಿಖಿತ ಪಠ್ಯಗಳ ಕುರಿತು ಲೇಖಕ ನೀಡುವ ವಿವರಣೆಯು ಆತನ ವಿದ್ವತ್ ಗೆ ಸಾಕ್ಷಿಯಾಗಿದೆ. ಅದೇ ರೀತಿ ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಸೂಫಿ ದರ್ಗಾ ಮತ್ತು ಸೂಫಿಗಳ ಕುರಿತು ಬರೆಯುವಾಗ ಸೂಫಿ ತತ್ವ ಅದರೊಳಗೆ ಅಡಗಿದ್ದ ಪರಧರ್ಮ ಸಹಿಷ್ಣುತೆಗಳನ್ನು ಗುರುತಿಸುತ್ತಾ ಇಸ್ಲಾಂ ಧರ್ಮದ ಉದಾರ ತತ್ವಗಳ ಪಲ್ಲಟಗಳನ್ನು ವಿವರಿಸಿದ್ದಾನೆಅರಬ್ ರಾಷ್ಟ್ರಗಳಿಂದ ಆಮದಾದ ಆಧುನಿಕ ಇಸ್ಲಾಂ ಧರ್ಮದ ನಂಬಿಕೆಗಳು ಪ್ರಾಚೀನ ಇಸ್ಲಾಂ ಧರ್ಮವನ್ನು ಅಸಹಿಷ್ಣುತೆಯತ್ತ ದೂಡಿದ್ದನ್ನು ವಿಲಿಯಂ ಡಾಲಿಂಪ್ರೆಲ್ ನಿಖರವಾಗಿ ಗುರುತಿಸಿದ್ದಾನೆ,

ಇವುಗಳಲ್ಲದೆ, ಕೃತಿಯಲ್ಲಿರುವ ಸವದತ್ತಿ ಎಲ್ಲಮ್ಮನ ಹೆಣ್ಣು ಮಕ್ಕಳ ದುರಂತ ಕಥೆ, ಪಶ್ಚಿಮ ಬಂಗಾಳದ ಬೌವ್ಲ್ ಗಾಯಕರ ಕಥೆ ಕೂಡ ಓದುಗರನ್ನು ಗಾಡವಾಗಿ ತಟ್ಟುತ್ತವೆ. ದೇವರ ಕಂಚಿನ ಪ್ರತಿಮೆಯನ್ನು ತಯಾರಿಸುವುದರಲ್ಲಿ ಏಳು ಶತಮಾನಗಳ ಇತಿಹಾಸದ ಪರಂಪರೆಯುಳ್ಳ ತಮಿಳುನಾಡಿನ ತಂಜಾವೂರು ಜಿಲ್ಲೆಯ ಸ್ವಾಮಿಮಲೈ ( ಊರು ಮುರುಗ ಎಂದು ಕರೆಸಿಕೊಳ್ಳುವ ಸುಬ್ರಮಣ್ಯ ಸ್ವಾಮಿ ದೇಗುಲವಿರುವ ಜಾಗ) ಎಂಬ ಊರಿನ ಶ್ರೀಕಂಠ ಸ್ಥಪತಿ ಎಂಬ ವ್ಯಕ್ತಿಯ ಕಥನ ಹಾಗೂ ದೇವರು ಮತ್ತು ಮನುಷ್ಯನ ನಡುವೆ ಇರಬಹುದಾದ ಅಗೋಚರ ಹಾಗೂ ಅಘೋಷಿತ ಸಂಬಂಧಗಳನ್ನು ಹುಡುಕಾಟ ನಡೆಸುತ್ತದೆ. ಜೊತೆಗೆ ಓದುಗರ ಮನದಲ್ಲಿ ಶ್ರೀಕಂಠ ಸ್ಥಪತಿಯ ಮಾತುಗಳು ಬಹುಕಾಲ ನಿಲ್ಲುತ್ತವೆ. ಒಂದು ವೃತ್ತಿ ಅಥವಾ ಕಸುಬು  ದೇವರ ಜೊತೆ ನಡೆಸುವ ಇಲ್ಲವೆ ನಡೆಸಬಹುದಾದ ಅನುಸಂಧಾನದ ಪ್ರಕ್ರಿಯೆ ಎಂಬಂತೆ ಇಲ್ಲಿನ ಕಥನಗಳು ನಮಗೆ ಕಾಣುತ್ತವೆತನ್ನಲ್ಲದ ನೆಲದ ಹಾಗೂ ಸಂಸ್ಕತಿಯ ವಿದೇಶಿ ಮೂಲದ ಲೇಖಕನೊಬ್ಬ ನಮ್ಮ ಭಾರತೀಯ ಸಂಸ್ಕತಿಯ ಅಂತಃಸತ್ವಗಳನ್ನು ಹೀಗೂ ಅನಾವರಣಗೊಳಿಸಲು ಸಾದ್ಯವೆ? ಎಂಬ ವಿಸ್ಮಯ ಕೃತಿಯನ್ನು ಓದಿದ ನಂತರವೂ ಓದುಗನನ್ನು ಕಾಡುತ್ತದೆ. ಜೊತೆಗೆ ಭಾರತದ ವಿಭಿನ್ನ ಸಂಸ್ಕøತಿಯೊಳಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಬದುಕುತ್ತಾ, ಆಯ್ದುಕೊಂಡ ಮಾರ್ಗದಲ್ಲಿ ಸಂತೃಪ್ತಿ ಕಾಣುವ ಇಲ್ಲಿನ ಅನಾಮಿಕ ಜೀವಗಳ ಬಗ್ಗೆ ಮನದಲ್ಲಿ ಗೌರವ ಭಾವನೆ ಮೂಡುತ್ತದೆ.
ಇನ್ನು ಕೊನೆಯದಾಗಿ  ಕೃತಿಯಲ್ಲಿ ಕ್ಲಿಷ್ಟ ಎನ್ನಬಹುದಾದ ಭಾಗಗಳನ್ನು ಅದ್ಭುತವಾಗಿ ಅನುವಾದಿಸಿರುವ ನವೀನ್ ಗಂಗೋತ್ರಿಯವರು ಕೆಲವೆಡೆ ತೀರಾ ಸರಳ ಶಬ್ದಗಳನ್ನು ಕನ್ನಡಕ್ಕೆ ತರುವಲ್ಲಿ ಅಲ್ಲಲ್ಲಿ ಎಡವಿದ್ದಾರೆ. ಉದಾಹರಣೆಗೆ ಮೊದಲ ಕಥೆ ಸನ್ಯಾಸಿನಿಯೊಬ್ಬಳ ಕಥೆಯ ಮೊದಲ ಪುಟದಲ್ಲಿ ಶ್ರವಣಬೆಳಗೂಳ ಯಾತ್ರ ಸ್ಥಳವನ್ನು ಬಣ್ಣಿಸುವಾಗ ರಸ್ತೆಗಳೆಲ್ಲಾ ಆಯತಾಕಾರದ ಟ್ಯಾಂಕ್ ಬಳಿಯಲ್ಲಿ ಒಂದಾಗುತ್ತವೆಎಂದಿದ್ದಾರೆ. ಟ್ಯಾಂಕ್ ಶಬ್ದಕ್ಕೆ ಪರ್ಯಾಯವಾಗಿ ಕೊಳ ಅಥವಾ ಸರೋವರ ಶಬ್ದ ಸೂಕ್ತವಾಗಿತ್ತು. ಅದೇ ರೀತಿ ಕೆಂಬಣ್ಣದ ಯಕ್ಷಿ ಕಥೆಯ ಪುಟ 179 ರಲ್ಲಿ ಕಥಾನಾಯಕಿ ಲಾಲ್ ಪೇರಿ ತಾನು  ಬಂಗ್ಲಾ ದೇಶದಿಂದ ಪಶ್ಚಿಮ ಭಾಗದ ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ವಲಸೆ ಬಂದ ಬಗೆಯನ್ನು ವಿವರಿಸುವಾಗಮೀನು ಮತ್ತು ಅಕ್ಕಿ ನಮ್ಮ ಆಹಾರವಾಗಿತ್ತು, ಇಲ್ಲಿಗೆ ಬಂದ ಮೇಲೆ ರೊಟ್ಟಿ ಮತ್ತು ಮಾಂಸಕ್ಕೆ ಒಗ್ಗಿಕೊಳ್ಳಬೇಕಾಯಿತುಎಂಬ ಮಾತಿದೆ. ಇಲ್ಲಿ  ಫಿಶ್ ಅಂಡ್ ರೈಸ್ ಎಂಬ ಶಬ್ದ ಮೀನು ಮತ್ತು ಅನ್ನವಾಗಬೇಕಿತ್ತು. ರೈಸ್ ಎಂಬ ಶಬ್ದ  ಅಕ್ಕಿಯೂ ಆಗುತ್ತದೆ, ಅನ್ನವೂ ಆಗುತ್ತದೆ. ಇಂತಹ  ತೀರಾ ಸಣ್ಣ ಕೊರತೆಗಳನ್ನು ಹೊರತು ಪಡಿಸಿದರೆ, “ನವಜೀವಗಳುಕೃತಿಯು ಕನ್ನಡಕ್ಕೆ ಬಂದಿರುವ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ನಿಲ್ಲುವಂತಹದ್ದು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ.


-*-*-

ಗುರುವಾರ, ಜನವರಿ 14, 2016

ಪದವನರ್ಪಿಸಬಹುದಲ್ಲದೆ, ಪದಾರ್ಥವನ್ನರ್ಪಿಸಬಾರದು





ಎಲ್ಲಾ ಓದುಗ ಮಿತ್ರರಿಗೆ ಸಂಕ್ರಾಂತಿಯ ಶುಭಾಷಯಗಳು. ಇಂದಿನಿಂದ ಭೂಮಿಗೀತ ಬ್ಲಾಗ್ ಅಂರ್ತಾಜಾಲ ಪತ್ರಿಕೆಯಾಗಿ ಭೂಮಿಗೀತ ಡಾಟ್ ಕಾಂ ಹೆಸರಿನಲ್ಲಿ ಪ್ರತಿ ಹದಿನೈದು ದಿನಕ್ಕೊಮ್ಮೆ ನಿಮ್ಮದೆರು ತೆರೆದು ಕೊಳ್ಳುತ್ತದೆ. ಇದನ್ನು ರೂಪಿಸುವಾಗ ನಾನಾಗಲಿ, ನನ್ನ ಸಮಾನ ಮನಸ್ಕ ಮಿತ್ರರಾಗಲಿ ವಾಸ್ತವ ಸತ್ಯದಿಂದ ದೂರ ಸರಿಯದೆ, ನಾವು ಬದುಕುತ್ತಿರುವ ಈ ಇಪ್ಪತ್ತೊಂದನೇ ನರಕ ಸದೃಶ್ಯ ಬದುಕಿನ ವಿವಿಧ ಮಜಲುಗಳನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇವೆ.  ಇದರ ಹಿಂದೆ ಸತತ ಎರಡೂವರೆ ವರ್ಷಗಳ ಪ್ರಯೋಗದ ಅನುಭವವಿದೆ. 2013 ಏಪ್ರಿಲ್ 10 ರಂದು  ನಾನು ಆರಂಭಿಸಿದ ಭೂಮಿಗೀತ ಬ್ಲಾಗ್ ತಾಣಕ್ಕೆ ಕಳೆದ ಡಿಸಂಬರ್ ಅಂತ್ಯದ ಒಳಗೆ 3 ಲಕ್ಷದ 75 ಸಾವಿರ ಮಂದಿ ಬೇಟಿ ನೀಡಿದ್ದರೆ, 28.ಸಾವಿದ 700 ಮಂದಿ ಅಲ್ಲಿನ 186 ಲೇಖನಗಳನ್ನು ಓದಿದ್ದಾರೆ. ಯಾವುದೇ ವ್ಯಯಕ್ತಿಕ ವ್ಯಸನಗಳಿಗೆ ಬಲಿ ಬೀಳದೆ ಈ ನಾಡಿನ ಜ್ವಲಂತ ಸಮಸ್ಯೆಗಳನ್ನು ಕುರಿತು ಒಬ್ಬನೇ ನಿರಂತರವಾಗಿ ಲೇಖನಗಳನ್ನು ಬರೆದೆ. ಪ್ರತಿ ದಿನದ ನನ್ನ ದಿನಚರಿಯ ನಡುವೆ  ವ್ಯಯಿಸಿದ ಕೇವಲ ಒಂದು ಗಂಟೆಯ ಸಮಯದಿಂದಾಗಿ ಇದು ಸಾಧ್ಯವಾಯಿತು. ಇಲ್ಲಿನ ಲೇಖನಗಳು ಇಂದಿಗೂ ನಾಡಿನ ಹಲವು ದಿನಪತ್ರಿಕೆಗಳು, ಪಾಕ್ಷಿಕ ಪತ್ರಿಕೆಗಳು ಮತ್ತು ಮೂರು ಮಾಸ ಪತ್ರಿಕೆಗಳಲ್ಲಿ ಮರು ಮುದ್ರಣಗೊಳ್ಳುತ್ತಿವೆ.
ಓದುಗ ಪ್ರೀತಿ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ಕನ್ನಡದ ಜಗತ್ತಿಗೆ  ವಿಭಿನ್ನ ಪ್ರಯೋಗ ಎನ್ನಬಹುದಾದ ಹಾಗೂ ಕೃಷಿ, ಪರಿಸರ ಮತ್ತು ಅಭಿವೃದ್ಧಿಗೆ ಮೀಸಲಾದ ಈ ಹೊಸ  ತಾಣವನ್ನು ಇಂದು ಗೆಳೆಯರ ಸಹಕಾರದಿಂದ ನಿಮ್ಮೆದುರು ಅನಾವರಣಗೊಳಿಸುತ್ತಿದ್ದೀನಿ. ಈ ಮೊದಲ ಸಂಚಿಕೆಯಲ್ಲಿ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತಿರುವ ಹಾಗೂ ಪರಿಸರ ಪ್ರಜ್ಞೆಯ ಬೀಜವನ್ನು ನಮ್ಮಂತಹವರ ಎದೆಯೊಳಗೆ ಬಿತ್ತಿ ನಮ್ಮನ್ನೆಲ್ಲಾ ಸೂಜಿಗಲ್ಲಿನಂತೆ ಸೆಳೆದ ನಾಗೇಶ್ ಹೆಗೆಡೆಯವರ ಸಂದರ್ಶನವಿದೆ. ನಾಗೇಶ್ ಹೆಗೆಡೆ ಕನ್ನಡದ ಜಗತ್ತಿಗೆ ಮಾತ್ರವಲ್ಲ, ಈ ದೇಶದಲ್ಲಿ  ಕಳೆದ ಮೂರೂವರೆ ದಶಕದಲ್ಲಿ ಪರಿಸರ ಪ್ರಜ್ಞೆಯನ್ನು ಪ್ರಸರಿಸಿದ  ಅನಿಲ್ ಅಗರವಾಲ್, ವಂದನಾಶಿವ ಮುಂತಾದವರೊಡನೆ ಉತ್ತರ ಭಾರತದಲ್ಲಿ ಒಡನಾಡಿದವರು. ಅವರು ನಡೆದ ಬಂದ ದಾರಿಯ ಕುರಿತಾಗಿ ನಾನು ಕೇಳಿದ ಪ್ರಶ್ನೆಗಳಿಗೆ ನೀಡಿರುವ ಉತ್ತರದಲ್ಲಿ ಅವರ ಪ್ರಖರ ಪ್ರತಿಭೆಯ ದರ್ಶನವಾಗುತ್ತದೆ.  ಅವರು ಆತ್ಮ ಚರಿತ್ರೆ ಬರೆದರೆ ಖಂಡಿತಾವಾಗಿ ಈ ತಲೆ ಮಾರಿಗೆ ಅಪರೂಪದ ಮಾರ್ಗದರ್ಶನದ ಕೃತಿಯಾಗಬಲ್ಲದು. ನಾಗೇಶ್ ಹೆಗಡೆಯವರಿಂದ ಆತ್ಮ ಚರಿತ್ರೆಯನ್ನು  ಬರೆಯಿಸುವ ಹಾಗೂ ಅದನ್ನ ಇದೇ ತಾಣದಲ್ಲಿ ಪ್ರಕಟಿಸುವ ಇರಾದೆ ನನ್ನೆಲ್ಲಾ ಗೆಳಯರದು.

ಮಲೆನಾಡಿನ ಸಾಂಸ್ಕೃತಿಕ ಪಲ್ಲಟಗಳಿಗೆ ಮೌನ ಸಾಕ್ಷಿಯಾಗಿದ್ದುಕೊಂಡು, ಅವುಗಳನ್ನು ತಮ್ಮ ಕಥೆಗಳು ಮತ್ತು ಲೇಖನಗಳ ಮೂಲಕ ಪ್ರತಿಬಿಂಬಿಸುತ್ತಾ ಬಂದಿದ್ದ ಲೇಖಕಿ ಡಾ.ಎಲ್. ಸಿ. ಸುಮಿತ್ರಾ ರವರು “ ಮರಳಿ ಮಣ್ಣಿಗೆ” ಎಂಬ ಲೇಖನದ ಮೂಲಕ ವರ್ತಮಾನದ ಬದುಕಿನ ಬಿಕ್ಕಟ್ಟುಗಳನ್ನು ನಮ್ಮೆದುರು ತೆರದಿಟ್ಟಿದ್ದಾರೆ. ಪರಿಸರ, ಅರಣ್ಯ, ನೀರು ಕುರಿತಾದ ಅದ್ಯಯನಕ್ಕಾಗಿ ತಮ್ಮ ಬದುಕನ್ನು ಮಿಸಲಿಟ್ಟಿರುವ ಶಿರಸಿಯ ಶಿವಾನಂದ ಕಳವೆಯವರ ನೀರು ಕುರಿತಾದ ಸರಣಿ ಲೇಖನಗಳು ಈ ತಾಣಲ್ಲಿ ಪ್ರಕಟವಾಗಲಿದ್ದು, ಅದರ ಮೊದಲ ಕಂತು ಇಲ್ಲಿದೆ. ಅದೇ ರೀತಿ ಕೃಷಿಯ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಪ್ರಜಾವಾಣಿಯ ಹಿರಿಯ ವರದಿಗಾರ ಆನಂದ ಪ್ಯಾಟಿ ತೀರ್ಥರವರ ಇಸ್ರೇಲ್ ಪ್ರವಾಸದಲ್ಲಿ ಕಂಡ ಅಲ್ಲಿನ ಕೃಷಿ ಅನುಭವ ಇದೀಗ ಕೃತಿಯಾಗಿ ಹೊರಬಂದಿದೆ. ಕೃತಿಯ ಪರಿಚಯದೊಂದಿಗೆ ಅವರ ಒಂದು ಲೇಖನವನ್ನು ಸಹ ಇಲ್ಲಿ ಬಳಸಿಕೊಳ್ಳಲಾಗಿದೆ. ಇವುಗಳ ಜೊತೆಗೆ ಭಾರತದಲ್ಲಿ ಅಪೌಷ್ಟಿಕತೆಯಿಂದ ಸಾವನ್ನಪ್ಪುತ್ತಿರುವ ಮಕ್ಕಳ ಸಾವಿನ ಕುರಿತಾದ ಲೇಖನ, ಕೈಗಾರಿಕೆ ಮತ್ತು ಇನ್ನಿತರೆ ಉದ್ದೇಶಗಳಿಗೆ ಬಲಿಯಾಗುತ್ತಿರುವ ಭಾರತದ ಫಲವತ್ತಾದ ಕೃಷಿ ಭೂಮಿ ಕುರಿತಾದ ಲೇಖನ, ಶೂನ್ಯ ಬಂಡವಾಳದ ಕೃಷಿಯಲ್ಲಿ ಸಂತೃಪ್ತಿಯ ಬದುಕನ್ನು ಕಟ್ಟಿಕೊಂಡ ರೈತನೊಬ್ಬನ ಯಶೋಗಾಥೆ, ಕಮರಾಕ್ಷಿ ಎಂಬ ಹುಳಿ ಹಣ್ಣು ಕುರಿತಾದ ಲೇಖನಗಳು ಸೇರಿದಂತೆ ಭಾರತದ ಅರಣ್ಯ ಪಿತಾ ಮಹಾ ಎನ್ನಬಹುದಾದ ಜರ್ಮನಿ ಮೂಲದ ಬ್ರಾಂಡಿಸ್ ಎಂಬ ಸಸ್ಯ ಶಾಸ್ತ್ರಜ್ಞನ ಪರಿಚಯ ಲೇಖನವೂ ಸಹ ಈ ಸಂಚಿಕೆಯಲ್ಲಿದೆ.
ಬಹಳ ಮುಖ್ಯವಾಗಿ  ಅಂದರೆ, 1972 ರ ನಂತರ ಕರ್ನಾಟಕ ಕಳೆದ ಎರಡು ವರ್ಷಗಳಿಂದ ಬರಗಾಲದಿಂದ ತತ್ತರಿಸಿದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದ ಜನರ ಬದುಕು ತೀರಾ ಶೋಚನೀಯವಾಗಿದೆ. ಈ ಸಂದರ್ಭದಲ್ಲಿ ಗುಲ್ಬರ್ಗಾ ಮತ್ತು ಬೀದರ್ ಜಿಲ್ಲೆಯ ರೈತರಿಗೆ ಆಶ್ರಯದಾತರಾಗಿರುವ ಬಸವರಾಜು ದಿಗ್ಗಾವಿ ಕುಟುಂಬದ ಮಾನವೀಯ ಮುಖ ಮತ್ತು ರೈತರ ಬವಣೆಗಳನ್ನು ತೆರದಿಡುವ ವಿಶೇಷ ಲೇಖನ ಕೂಡ ಇಲ್ಲಿದೆ. ಬಿ.ಟಿ. ಹತ್ತಿಯಲ್ಲಿ ಕೈ ಸುಟ್ಟಿಕೊಂಡ ರೈತರ ವರದಿಯೂ ಸಹ ಈ ಸಂಚಿಕೆಯ ವಿಶೇಷ.  ಮುಂದಿನ ಹದಿನೈದು ದಿನಗಳ ವರೆಗೆ ನಿಮ್ಮನ್ನು ಚಿಂತನೆಗೆ ಹಚ್ಚ ಬಲ್ಲ ಲೇಖನಗಳನ್ನು ಈ ಮೊದಲ ಸಂಚಿಕೆಯು ಒಳಗೊಂಡಿದೆ ಎಂಬುದು ನನ್ನ ನಮ್ರ ಭಾವನೆ. ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ವೈವಿಧ್ಯಮಯ ಲೇಖನಗಳಿರುತ್ತವೆ. ನಾನಾಗಲಿ ಅಥವಾ ನನ್ನ ಸಮಾನ ಮನಸ್ಕರಾಗಲಿ ನಿಮಗೆ ಶುದ್ಧ ಗಾಳಿ ಅಥವಾ ಶುದ್ಧ ನೀರನ್ನು ಕೊಡಲಾರೆವು ಆದರೆ, ನಿಸರ್ಗದ ಕೊಡುಗೆಗಳನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬಲ್ಲ ಆಲೋಚನೆಗಳನ್ನು ಮಾತ್ರ ನೀಡಬಲ್ಲವು.


ನನಗಿನ್ನು ನೆನಪಿದೆ. ಬರೋಬ್ಬರಿ ಐವತ್ತು ವರ್ಷಗಳ ಹಿಂದೆ ಅಂದರೆ, 1966 ರಲ್ಲಿ ನನಗಾಗ ಹತ್ತು ವರ್ಷ. ಮೊದಲ ಮುಂಗಾರು ಮಳೆ ಬಿದ್ದ ಮಾರನೆಯ ದಿನ ನನ್ನಪ್ಪ ನೇಗಿಲನ್ನು ಹೆಗಲ ಮೇಲೆ ಹೊತ್ತುಕೊಂಡು ಎತ್ತುಗಳೊಂದಿಗೆ ಹೊಲಕ್ಕೆ ತೆರಳುತ್ತಿದ್ದ. ನಾನು ಕೈ ಚೀಲದಲ್ಲಿ ಅರಿಶಿನ, ಕುಂಕುಮ, ಗಂಧದಕಡ್ಡಿ, ಕರ್ಪೂರ ಹಾಗೂ ಬೆಂಕಿಪೊಟ್ಟಣ ಇವುಗಳನ್ನು ಹಾಕಿಕೊಂಡು, ಒಂದು ಸಣ್ಣ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಅಪ್ಪನನ್ನು ಹಿಂಬಾಲಿಸುತ್ತಿದ್ದೆ. ಅಪ್ಪ ಹೊಲದಲ್ಲಿ ಎತ್ತುಗಳಿಗೆ ನೇಗಿಲು ಕಟ್ಟಿ ಹೊಲ ಉಳುವ ಮುನ್ನ, ಮೂರು ಕಲ್ಲುಗಳನ್ನು ಆಯ್ದು ತಂದು, ಅವುಗಳನ್ನು ತೊಳೆದು ಅರಿಶಿನ ಕುಂಕಮ ಬಳಿಯುತ್ತಿದ್ದ. ನಂತರ ಅವುಗಳಿಗೆ ಪೂಜೆ ಸಲ್ಲಿಸಿ ಉಳುಮೆ ಆರಂಭಿಸುತ್ತಿದ್ದ. ಹರಿಯುವ ನೀರಿಗೆ ಗಂಗೆಯೆಂದು ಪೂಜಿಸಿ ಕೈಯೆತ್ತಿ ಮುಗಿದವರ ಮತ್ತು ಪ್ರಕೃತಿಯಲ್ಲಿ ದೇವರನ್ನು ಸೃಷ್ಟಿಸಿಕೊಳ್ಳುತ್ತಿದ್ದ ಆ ಹಿರಿಯರ ಜ್ಞಾನ ಶಿಸ್ತು ಇವೊತ್ತಿಗೂ ನನ್ನಲ್ಲಿ ಬೆರಗು ಮೂಡಿಸಿದೆ. ನಾವು ಅಂತಹ ಲೋಕವನ್ನು ಈಗ ಸೃಷ್ಟಿಸಲು ಸಾಧ್ಯವಾಗದಿದ್ದರೂ ಕನಿಷ್ಟ ಅಂತಹ ಮನಸ್ಸುಗಳನ್ನು ಸೃಷ್ಟಿಸಬಹುದು. ಹಾಗಾಗಿ ಪ್ರತಿ ಆರು ತಿಂಗಳಿಗೆ ಮೊಬೈಲ್, ಪ್ರತಿ ಒಂದು ವರ್ಷಕ್ಕೆ ನಮ್ಮ ಮನೆಯ ಟಿ.ವಿ. ಪ್ರಿಜ್, ವಾಹನಗಳನ್ನು ಬದಲಾಯಿಸುವ ಮನಸ್ಸುಗಳನ್ನು ನಾವೇಕೆ ಬದಲಾಯಿಸಬಾರದು? ಆಧುನಿಕ ಬದುಕಿನ ಲೋಲುಪತೆ ಮತ್ತು ಭೋಗಸಂಸ್ಕೃತಿಯ ಮನಸ್ಸುಗಳನ್ನು ಪರಿಸರಕ್ಕೆ ಎರವಾಗದಂತೆ ಸರಳವಾಗಿ ಬದುಕುವ ದಾರಿ ತೋರುವ ಹಂಬಲ ನಮ್ಮದು. ಈ ಕಾರಣಕ್ಕಾಗಿ  ನಮಗೆ ಅಲ್ಲಮನ  ಪ್ರಭುವಿನ “ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು”  ಎಂಬ ವಚನದ ಸಾಲುಗಳು ನೆನಪಾದವು. ಈ ಸಂಚಿಕೆಯ ಲೇಖನ ಗಳ ಕುರಿತು ನಿಮ್ಮ ಅಭಿಪ್ರಾಯ, ಹಾಗೂ ಈ ತಾಣ ಕುರಿತಂತೆ ಸಲಹೆ ,ಸೂಚನೆಗಳಿಗೆ ಮುಕ್ತವಾದ ಸ್ವಾಗತವಿದೆ. ದಯವಿಟ್ಟು ಬರೆಯಿರಿ.
ಭೂಮಿಗೀತ ತಾಣಕ್ಕೆ ಬೇಟಿ ನೀಡಲು ಈ ವಿಳಾಸವನ್ನು ಟೈಪ್ ಮಾಡಿ- www. bhoomigeetha.com

ಇಂತಿ ನಿಮ್ಮ
ಡಾ. ಎನ್. ಜಗದೀಶ್ ಕೊಪ್ಪ

(ಸಂಪಾದಕ)

ಮಂಗಳವಾರ, ಜನವರಿ 5, 2016

ಮರಾಠಿಯಿಂದ ಕನ್ನಡ ರಂಗಭೂಮಿಗೆ ಬಂದ ತಮಾಶ ನೃತ್ಯ ನಾಟಕ



ಇದೇ ಜನವರಿ ಮೂರರಂದು ಭಾನುವಾರ ಕನ್ನಡ ರಂಗಭೂಮಿಯ ಪಾಲಿಗೆ ಅವಿಸ್ಮರಣೀಯ ದಿನವಾಯಿತು. ಮರಾಠಿಯ ಭಾಷೆಯ ತಮಾಶ ನೃತ್ಯ ನಾಟಕಕ್ಕೆ ಕನ್ನಡದ ಗಮಲು ಸೇರಿಕೊಂಡಿತು. ಮಹಾರಾಷ್ಟ್ರದ ಜಾನಪದ ಕಲೆಗಳಿಗೆ ವಿಶೇಷವಾಗಿ ನೃತ್ಯ ಮತ್ತು ಸಂಗೀತಕ್ಕೆ ತಾಯಿ ಬೇರು ಎನಿಸಿಕೊಂಡ ಹಾಗೂ ಮರಾಠ ಜನರ ಬದುಕಿನೊಳಗೆ ಅವಿಭಾಜ್ಯ ಅಂಗದಂತೆ ಬೆರೆತು ಹೋಗಿರುವ ಹಾಗೂ ಅಲ್ಲಿನ ಸಂಸ್ಕೃತಿ ಸೊಗಡಿನ ತಮಾಶ ನೃತ್ಯ ನಾಟಕ ಪ್ರಥಮಬಾರಿಗೆ  ಧಾರವಾಡದಲ್ಲಿ ಕನ್ನಡ ಭಾಷೆಯಲ್ಲಿ ಪ್ರದರ್ಶನಗೊಳ್ಳುವುದರ ಮೂಲಕ ಎರಡು ಭಾಷೆಗಳ  ಮೈತ್ರಿಗೆ ನಾಂದಿಯಾಯಿತು.
ಇಂತಹ ಅಪರೂಪದ ಪ್ರಯೋಗಕ್ಕೆ ಮುಂದಾದ ಧಾರವಾಡ ರಂಗಾಯಣದ ನಿರ್ದೇಶಕ ಪ್ರಕಾಶ್ ಗರುಡ ಮತ್ತು ಆಡಳಿತಾಧಿಕಾರಿ ಕೆ,ಹೆಚ್, ಚನ್ನೂರ ಹಾಗೂ ಮರಾಠಿ ರೂಪವನ್ನು ಕನ್ನಡದ ಭಾಷೆಗೆ ತಂದಿರುವ ನಮ್ಮ ನಡುವಿನ ದೈತ್ಯ ಪ್ರತಿಭೆ ಡಿ.ಎಸ್. ಚೌಗಲೆ ಇವರನ್ನು ನಾವು ಅಭಿನಂದಿಸಬೇಕು.
ಮೊನ್ನೆ ಭಾನುವಾರ ಕಛೇರಿ ಕೆಲಸ ಮಗಿಸಿ, ಸಂಜೆ  ಮನೆಗೆ ಬಂದ ತಕ್ಷಣ ನನ್ನ ಕಿರಿಯ ಸಹೋದರನಂತಿರುವ ಡಿ.ಎಸ್. ಚೌಗುಲೆಗೆ ಫೋನ್ ಮಾಡಿದೆ. “ ಅಣ್ಣಾ ನೀನು ಒಂದು ಗಂಟೆ ಮುಂಚಿತವಾಗಿ ಬಾ, ಬಾಂಬೆ ವಿಶ್ವ ವಿದ್ಯಾನಿಲಯದ ಜಾನಪದ ಕಲೆಗಳ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಗಣೇಶ್ ಚಂದನ ಶಿವ ಮತ್ತು ಕೊಲ್ಲಾಪುರದ ಶಿವಾಜಿ ವಿ.ವಿ.ಯ ಜಾನಪದ ವಿಭಾಗದ ಪ್ರೊಫೆಸರ್ ಶಿಂಧೆ ಬಂದಿದ್ದಾರೆ. ಅವರ ಜೊತೆ ಮಾತನಾಡುವುದಿದೆ” ಎಂದು  ಆಹ್ವಾನ ಹೇಳಿದಾಗ  ಮರು ಮಾತನಾಡದೆ ಧಾರವಾಡ ರಂಗಾಯಣ ಕಛೇರಿಯತ್ತ ಹೊರಟೆ. ಅಲ್ಲಿನ ವಿ.ವಿ.ಗಳ ಜಾನಪದ ವಿಭಾಗಗಳಲ್ಲಿ  ಜಾನಪದ ಪಠ್ಯಕ್ಕಿಂತ ಕಲೆಗಳ ಪ್ರದರ್ಶನ ಮತ್ತು ತರಬೇತಿಗೆ ಒತ್ತು ನೀಡಿರುವುದನ್ನು ಚಂದನ ಶಿವ ಮತ್ತು ಶಿಂಧೆ ನಮಗೆ ವಿವರಿಸಿದರು. ಪ್ರತಿ ವರ್ಷ ಐನೂರು ಮಂದಿ ವಿದ್ಯಾರ್ಥಿಗಳು ಜಾನಪದ ಕಲೆಗಳಲ್ಲಿ ಪದವೀಧರರಾಗಿ ಹೊರಬರುವುದರ ಜೊತೆಗೆ ಕಲಾವಿದರಾಗಿ ಹೊರ ಹೊಮ್ಮುವ ಬಗೆಯನ್ನು ವಿವರಿಸಿದರು. ನಮ್ಮ ವಿ.ವಿ.ಗಳು ಜಾನಪದ ವಿಷಯ ಕುರಿತಂತೆ ಕೃತಿಗಳನ್ನು ಮುದ್ರಣ ಮಾಡಿಸುವುದಷ್ಟೇ ಜಾನಪದ ಕಲೆಗಳ ಉದ್ಧಾರಕ್ಕೆ ಇರುವ ಏಕೈಕ ಮಾರ್ಗ ಎಂದು ತಿಳಿದುಕೊಂಡಿರುವ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರದ ಬೆಳವಣಿಗೆಗಳು ನಮಗೆ ಅಚ್ಚರಿ ಮೂಡಿಸಿದವು.

ಬೆಳಗಾಗಿ ಜಿಲ್ಲೆಯ ಗಡಿಭಾಗದ ಹಳ್ಳಿಯಲ್ಲಿ ಜನಿಸಿ, ಕನ್ನಡ ಮತ್ತು ಮರಾಠಿ ಭಾಷೆ ಮತ್ತು ಸಂಸ್ಕೃತಿಯ ಪರಂಪರೆಯಲ್ಲಿ ಬೆಳದಿರುವ ಡಿ.ಎಸ್.ಚೌಗಲೆ ಬೆಳಗಾವಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದಾರೆ.  ಕಳೆದ ಎರಡು ದಶಕಗಳಿಂದ ಕನ್ನಡ ಮತ್ತು ಮರಾಠಿ ಸಂಸ್ಕೃತಿಗಳ ಕೊಂಡಿಯಂತೆ ಕೆಲಸ ಮಾಡುತ್ತಿರುವ ಅಪರೂಪದ ಹಾಗೂ ಬಹುಮುಖ ಪ್ರತಿಭೆಯ ವ್ಯಕ್ತಿ. ರಂಗಭೂಮಿ ಕುರಿತಂತೆ ಡಾಕ್ಟರೇಟ್ ಪದವಿಗಳಿಸಿರುವ ಚೌಗಲೆ ಕನ್ನಡದ ಪ್ರತಿಭಾವಂತ ಕಥೆಗಾರ. ವರ್ಣ ಚಿತ್ರ ಕಲಾವಿದ, ನಾಟಕಕಾರ, ಅನುವಾದಕ ಹೀಗೆ ಸಕಲ ಕಲಾವಲ್ಲಭನಂತೆ ಗೋಚರಿಸುವ ಒಬ್ಬ ಅಪರೂಪದ ಮಿತ್ರ. ಗಾಂಧಿ v/s ಗಾಂಧಿ ಯಂತಹ ಮರಾಠಿ ನಾಟಕವನ್ನು ಕನ್ನಡಕ್ಕೆ ಹೊಸ ಸಂಚಲನವನ್ನುಂಟು ಮಾಡಿರುವ ಡಿ.ಎಸ್. ಚೌಗಲೆ ಈಗ ಮರಾಠಿಯ ಪ್ರಸಿದ್ಧ ನೃತ್ಯ ನಾಟಕ ಪ್ರಕಾರವನ್ನು ಕನ್ನಡಕ್ಕೆ ತರುವುದರ ಮೂಲಕ ಹೊಸ ದಾಖಲೆ ಬರೆದಿರುವುದು ವಿಶೇಷ.
 ತಮಾಶ ಅಂದರೆ ತಮಸ್ (ಕತ್ತಲು) ಮತ್ತು ಆಶಾ (ಬೆಳಕು) ಎಂದು ಕರೆಯಬಹುದಾದ ಒಂದು ಪರಿಭಾಷೆ. ವಿಠಲ ಅಥವಾ ವಿಠೋಭ, ಸಂತ ತುಕಾರಾಂ ಮುಂತಾದವರ ಪ್ರಭಾವದಿಂದ ಭಕ್ತಿ ಪರಂಪರೆಯ ನೆಲವಾಗಿರುವ  ಮಹಾರಾಷ್ಟ್ರದಲ್ಲಿ ತಮಾಶಾ ಎಂಬ ನೃತ್ಯ ಪ್ರಕಾರಕ್ಕೆ ಮೂರು ಶತಮಾನಗಳ ಇತಿಹಾಸವಿದೆ. ಆರಂಭದ ದಿನಗಳಲ್ಲಿ ಇಡೀ ರಾತ್ರಿ ಲಾವಣಿ ರೂಪದಲ್ಲಿ ಗ್ರಾಮೀಣ ಜನರೆದುರು ಪ್ರಸ್ತುತ ಪಡಿಸುತ್ತಿದ್ದ ಈ ಕಲೆಗೆ ಸಂಭಾಷಣೆ ರೂಪದ ನಾಟಕ ಮತ್ತು ನೃತ್ಯವನ್ನು ನಂತರದ ದಿನಗಳಲ್ಲಿ ಜೋಡಿಸಲಾಯಿತು. ಆಯಾ ಕಾಲಕ್ಕೆ ತಕ್ಕಂತೆ ಅನೇಕ ಪರಿವರ್ತನೆಗಳಾದವು. ದೇವರನ್ನು ಛೇಡಿಸುವುದಕ್ಕೆ ಹುಟ್ಟಿಕೊಂಡ ಮಾತುಗಳು ದ್ವಂದಾರ್ಥದ ಸಂಭಾಷಣೆಗಳಾಗಿ ಪರಿವರ್ತನೆ ಹೊಂದಿದವು. ಭಕ್ತಿ ರಸದ ಕಾವ್ಯವು ಶೃಂಗಾರ ಕಾವ್ಯವಾಗಿ ರೂಪುಗೊಂಡಿತು. ಬಂಗಾಳಿ ಕವಿ ಜಯದೇವ ಕವಿಯ ಗೀತ ಗೋವಿಂದ ಕಾವ್ಯ ಮರಾಠಿ ಮತ್ತು ತೆಲುಗು ಭಾಷೆಯ ಮೇಲೆ ಪ್ರಭಾವ ಬೀರಿದ ಪರಿಣಾಮ ಹಾಗೂ ವೈಷ್ಣವ ಪಂಥ ಉತ್ತುಂಗದಲ್ಲಿದ್ದ ಕಾರಣ,  ಭಕ್ತಿ ಕಾವ್ಯವೆಲ್ಲವೂ ಆರಾಧನೆಯ ನೆಪದಲ್ಲಿ ಶೃಂಗಾರ ಕಾವ್ಯವಾಗಿ ಮರು ಹುಟ್ಟು ಪಡೆಯಿತು. ದೇವರಿದ್ದ ಜಾಗದಲ್ಲಿ ದೊರೆಗಳನ್ನು ಇರಿಸಲಾಯಿತು., ಶೃಂಗಾರ ಕಾವ್ಯದಲ್ಲಿ ಅವರನ್ನು ಭಜಿಸತೊಡಗಿದರು.  ಇಂತಹ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಲ್ಲಟಗಳಿಗೆ ತಮಾಶವೂ ಸಹ ಒಳಗಾಯಿತು. ಅದು ಅಂತಿಮವಾಗಿ ಎಲ್ಲಿಗೆ ತಲುಪಿತೆಂದರೆ, ಸಭ್ಯರು ಮತ್ತು ಮಹಿಳೆಯರು ಕುಳಿತು ನೋಡುವ ಪ್ರಕಾರ ಇದಲ್ಲ ಎನ್ನುವ ಮಟ್ಟಕ್ಕೆ ಬೆಳೆದು ನಿಂತಿತು. ನಮ್ಮ ಉತ್ತರ ಕರ್ನಾಟಕದ ನಾಟಕ ಕಂಪನಿಗಳು ದ್ವಂದಾರ್ಥ ಮತ್ತು ಅಶ್ಲೀಲ ದ ಸಂಭಾಷಣೆಗೆ ಜೋತು ಬಿದ್ದಂತೆ ತಮಾಶ ಕಲಾವಿದರೂ ಸಹ ಜೋತು ಬಿದ್ದರು. ರಾತ್ರಿ ಹನ್ನೊಂದು ಗಂಟೆಗೆ ಆರಂಭವಾಗುವ ಈ ಪ್ರದರ್ಶನ ಬೆಳಗಿನ ಜಾವದವರೆಗೆ ಮುಂದುವರಿಯುತ್ತಿತ್ತು. 1996 ರಲ್ಲಿ ಮಹಾರಾಷ್ಟ್ರದ ಲಾತೂರಿನಲ್ಲಿ ಗೆಳೆಯನ ಜೊತೆ ತಮಾಶ ಪ್ರದರ್ಶನಕ್ಕೆ ಹೋಗಿ ಇಪ್ಪತ್ತು ರುಪಾಯಿ ನೀಡಿ ಅಂಗೈ ಮೇಲೆ ಸೀಲು ಮುದ್ರೆ ಒತ್ತಿಸಿಕೊಂಡು ( ಸಿಕ್ಕ) ಅದನ್ನು ಗೇಟ್ ನಲ್ಲಿ ಟಿಕೇಟ್ ನಂತೆ ಅದನ್ನು ತೋರಿಸಿ ಥಿಯಟರ್ ಒಳಗೆ ಹೋಗಿ ಕುಳಿತು ನೃತ್ಯ ನೋಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ಇತ್ತೀಚೆಗೆ ಇದನ್ನು ಪರಿಷ್ಕರಿಸಿ ಅಶ್ಲೀಲ ಸಂಭಾಷಣೆಗಳನ್ನು ತೆಗೆದು ಹಾಕಿ, ವರ್ತಮಾನದ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು  ಜನರತ್ತ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ.


ತಮಾಶಾ ನೃತ್ಯ ನಾಟಕ ಪ್ರಕಾರದಿಂದ ಟಿಸಿಲೊಡೆದ ಶ್ರೀ ಕೃಷ್ಣ ಪಾರಿಜಾತ ಎಂಬ ಸಣ್ಣಾಟ ನಾಟಕದ ಪ್ರಕಾರ ಮರಾಠಿ ಮಾತೃ ಭಾಷೆಯನ್ನಾಡುವ ಗೌಳಿಗರಿಂದ ಕನ್ನಡಕ್ಕೂ ಬಂದಿರುವುದು ವಿಶೇಷವಾಗಿದೆ.. ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರು ಶ್ರೀ ಕೃಷ್ಣ ಪಾರಿಜಾತ ನಾಟಕದಲ್ಲಿ ಶ್ರೀ ಕೃಷ್ಣ ನ ಪಾತ್ರದಲ್ಲಿ ಅನೇಕ ಮುಸ್ಲಿಂ ಸಮುದಾಯದ ನಟರು ಮತ್ತು ನಾಟಕಕಾರರು ಹೆಸರುವಾಸಿಯಾಗಿದ್ದಾರೆ. ಇಂತಹವರಲ್ಲಿ ಅಪ್ಪಾಲಾಲ್ ಪ್ರಮುಖರು.  ತಮಾಶಾ ಕನ್ನಡಕ್ಕೆ ಶ್ರೀ ಕೃಷ್ಣ ಪಾರಿಜಾತ, ರಾಧಾನಾಟ ಮುಂತಾದ ನಾಟಕ ಪ್ರಕಾರಗಳನ್ನು ನೀಡಿದರೆ, ತಮಿಳುನಾಡಿನಲ್ಲಿ ಸಾದಿರ್ ಹೆಸರಿನಲ್ಲಿ ಪ್ರಚಲಿತದಲ್ಲಿದ್ದ ಪ್ರಾಚೀನ ಭರತನಾಟ್ಯ ನೃತ್ಯ ಪ್ರಕಾರಕ್ಕೆ  ಕೊರವಂಜಿ ನೃತ್ಯವನ್ನು ಹಾಗೂ ವಿಶೇಷವಾಗಿ  ಪಾದಗಳ ಚಲನೆಗೆ ತ್ವರಿತಗತಿಯನ್ನು ತಂದುಕೊಟ್ಟಿತು. ತಮಿಳುನಾಡಿ ನ ದೇವಸ್ಥಾನಗಳಲ್ಲಿ ಆಗಮಶಾಸ್ತ್ರಗಳ ಹಿನ್ನಲೆಯಲ್ಲಿ ಸೃಷ್ಟಿಯಾಗಿದ್ದ ದೇವದಾಸಿಯ ನೃತ್ಯಗಳು ಆಚರಣೆಯಲ್ಲಿದ್ದರೆ, ಭರತ ಮುನಿಯ ಅಭಿನಯ ಶಾಸ್ತ್ರ ದ ನವರಸಗಳನ್ನು ಒಳಗೊಂಡ ಸಾದಿರ್ ನೃತ್ಯವು ದೊರೆಗಳ ಅರಮನೆಯಲ್ಲಿ ರಾಜದಾಸಿಯರಿಂದ ನೆರವೇರುತ್ತಿತ್ತು. 17 ನೇ ಶತಮಾನದಲ್ಲಿ ವಿಜಯನಗರದದ ಅರಸ ರ ಮೂಲಕ ಕ್ರೇತ್ರಜ್ಞ ನ ಪದಾಲು ಹೆಸರಿನ ಶೃಂಗಾರ ಕಾವ್ಯಗಳು ತಮಿಳುನಾಡಿಗೆ ಪದಂ ಹೆಸರಿನಲ್ಲಿ ನೃತ್ಯ ಮತ್ತು ಸಂಗೀತಕ್ಕೆ ಪ್ರವೇಶ ಮಾಡಿದವು. ಆನಂತರ 18 ನೇ ಶತಮಾನದಲ್ಲಿ ತಂಜಾವೂರನ್ನು ಆಕ್ರಮಿಸಿಕೊಂಡು ಆಳ್ವಿಕೆ ಆರಂಭಿಸಿದ ಮರಾಠಿ ಮೂಲದ ಶರ್ಪೋಜಿಯ ಕಾಲದಲ್ಲಿ ತಮಿಳುನಾಡಿನ ಆಸ್ಥಾನಕ್ಕೆ ತಮಾಶ ನೃತ್ಯ ಪ್ರವೇಶ ಪಡೆಯಿತು. ( ಶರ್ಪೋಜಿಯು ಶಿವಾಜಿಯ ಮಲತಾಯಿಯ ಪುತ್ರ) ತೆಲುಗಿನ ಪದಾಲು ( ಪದಗಳು) ಮತ್ತು ಮರಾಠಿಯ ತಮಾಶ ನೃತ್ಯ ಮತ್ತು ಭರತಮುನಿಯ ಅಭಿನಯ ಶಾಸ್ತ್ರ ಇವುಗಳ ಸಂಕರದಿಂದಾಗಿ ಸಾದಿರ್ ನೃತ್ಯ  ಹದಿನೆಂಟನೆಯ ಶತಮಾನದಲ್ಲಿ ಹೊಸ ರೂಪ ಪಡೆಯಿತು. ಮರಾಠಿ ದೊರೆಗಳ ಆಳ್ವಿಕೆಯ ಕಾಲದಲ್ಲಿ ತಂಜಾವೂರು ಮತ್ತು ಮಧುರೈ ಸಂಸ್ಥಾನಗಳಲ್ಲಿ ನೃತ್ಯ ಮತ್ತು ಸಂಗೀತ ಈ ಎರಡೂ ಪ್ರಕಾರಗಳು ಉಚ್ಛ್ರಾಯ ಸ್ಥಿತಿ ತಲುಪಿದವು. ವಿಜಯ ನಗರ ಸಾಮ್ರಾಜ್ಯದ ಮಾಂಡಲೀಕರು ಮತ್ತು  ಮರಾಠಿ ದೊರೆಗಳ ಅಭಿರುಚಿಗೆ ಸಾಕ್ಷಿಯಾಗಿ ತಂಜಾವೂರಿನಲ್ಲಿರುವ ಸರಸ್ವತಿ ಮಹಲ್, ತಿರುವಯ್ಯೂರಿನ ಕಾವೇರಿ ನದಿ ತೀರದಲ್ಲಿರುವ ಸಂಗೀತ ಮಹಲ್, ಮತ್ತು ಮಧುರೈ ನಗರದಲ್ಲಿರುವ ನಾಯಕರ್ ಪ್ಯಾಲೆಸ್ ಎಂಬ  ಅರಮನೆಯೊಳಗೆ ಇರುವ ಬೃಹತ್ ನೃತ್ಯ ಸಭಾಂಗಣ ಇವೆಲ್ಲವೂ ಈಗಲೂ ಸಹ ಅಸ್ತಿತ್ವದಲ್ಲಿವೆ.
ಮಹಾರಾಷ್ಟ್ರದಲ್ಲಿ ಲೋಕನೃತ್ಯ ಎಂದು ಕರೆಯುವ ಈ ತಮಾಶ ಪ್ರಯೋಗಕ್ಕೆ ಅಧ್ಯಾತ್ಮಿಕ , ರಾಜಕೀಯ, ಸಾಮಾಜಿಕ ವಿಡಮಂಬನೆ ಲಾವಣಿ ಮತ್ತು ಕಾವ್ಯವನ್ನು ಕಟ್ಟಿ ಹಾಡುವುದರ ಮೂಲಕ ಜನಪ್ರಿಯಗೊಳಿಸಿದ
ಅನೇಕ ಮಹನೀಯರಲ್ಲಿ ಶಾಹಿರ ರಾಮಜೋಷಿ, ಶಾಹಿರ ಪ್ರಭಾಕರ, ಪ್ರಮುಖರು. ಪಠೆ ಬಾಪುರಾವ್ ಬರೆದ ಲಾವಣಿಗಳು ಇಂದಿಗೂ ಸಹ ಜನಪ್ರಿಯವಾಗಿವೆ. ಯಾವುದೇ ಕಲೆಯ ಪ್ರಕಾರಕ್ಕೆ ಮನರಂಜನೆಯ ಅಥವಾ ಶೃಂಗಾರದ ಹೆಸರಿನಲ್ಲಿ ಒಂದಿಷ್ಟು ಅಶ್ಲೀಲವೆನಿಸುವ ಆಶು ರಚನೆಗಳು ಸೇರಿಕೊಳ್ಳುವುದು ಸಹಜ. ಇಂತಹದ್ದೇ ಸಂಗತಿಗಳು ಮರಾಠ ದೊರೆಗಳ ಆಳ್ವಿಕೆಯಲ್ಲಿ ತಮಿಳುನಾಡಿನಲ್ಲಿ ಕರ್ನಾಟಕ ಸಂಗೀತ ಮತ್ತು ಭರತ ನಾಟ್ಯ ಪ್ರಕಾರಗಳಲ್ಲೂ ಇದ್ದವು. ಉದಾಹರಣೆಗೆ ಕ್ಷೇತ್ರಯ್ಯನ ಪದಾಲು ಎನ್ನುವ ಈ ಕೆಳಗಿನ ಶೃಂಗಾರ ಕಾವ್ಯವನ್ನು ಸಂಗೀತ ಕಛೇರಿಯ ಕೊನೆಯ ಭಾಗದಲ್ಲಿ ಪದಂ ಮತ್ತು ಜಾವಳಿಗಳನ್ನು ಪ್ರಸ್ತುತ ಪಡಿಸುವಾಗ ಹಾಡಲಾಗುತ್ತಿತ್ತು. ಜೊತೆಗೆ ಭರತನಾಟ್ಯ ( ಸಾದಿರ್ ನೃತ್ಯ)ದಲ್ಲಿಯೂ ನೃತ್ಯ ರೂಪಕವಾಗಿ ಬಳಸಲಾಗುತ್ತಿತ್ತು.
ಉದಾಹರಣೆಗೆ ನಾವು ಕ್ಷೇತ್ರಯ್ಯನ ಈ ಶೃಂಗಾರ ಭರಿತವಾದ ಪದವನ್ನು ಗಮನಿಸಬಹುದು.
ಅಮ್ಮಾ, ಇಟುವಂಟಿವಾನಿಕೇಮಿ ಸೇಯುದೇನೇ/ ಕೊಮ್ಮ ಮೂವಗೋಪಾಲುನಿ ಗುಣಮು ಜೆಪ್ಪದ ವಿನಿವಮ್ಮ/ ಪೈಯ್ಯದ ಜೇ ಬಟ್ಟುಕೊನಿ ಬಾಯಜಾಲ ನನಿವಾಡ/ ಸಯ್ಯಾಟಲಾಡುಚುನ್ನು ಚಾಲ ವಲಪಿಂಚುನಮ್ಮ/ ದಬ್ಬುನ ಪಡಕಿಂಟಿಲೋ ದಾಗಿಯುಂಡಿ ಕೊನಿನಾದು/ ಗಬ್ಬಿ ಗುಬ್ಬಲನು ಬಟ್ಟಿ ಕನ್ನುಲನೊತ್ತುಕೊನುನಮ್ಮ/ ಸಮ್ಮತಿಂಚಕನೇನುಂಟೇ ಸಾರೆಕುನದಲಿಂಚಿಚೂ/ ಕಮ್ಮವೊಲ್ತು ಕೇಳಿಲೋನ ಕೌಗಲಿಂಚಿ ಕುಡುನಮ್ಮ/
ಇದನ್ನು ಕನ್ನಡದಲ್ಲಿ ಹೀಗೆ ಹೇಳಬಹುದು.
ಇಂತಹವನಿಗೆ ಏನು ಮಾಡಲಮ್ಮಾ/ ಸಖೀ ಮುವ್ವ ಗೋಪಾಲನ ಕಥೆ ಹೇಳುವೆ ಕೇಳೆ/ ಸೆರಗು ಹಿಡಿದು ನಿನ್ನ ಬಿಡಲಾರನೆಂದು ಸರಸವಾಡುತ್ತಾನೆ/ ನನ್ನನ್ನು ತುಂಬಾ ಪ್ರೀತಿಸುತ್ತಾನೆ/ ಮಲಗುವ ಕೋಣೆಯಲ್ಲಿ ಅವಿತುಕೊಂಡು ನನ್ನ ಗಟ್ಟಿ ಮೊಲೆಗಳನ್ನು ಕಣ್ಣಿಗೆ ಒತ್ತುಕೊಳ್ಳುತ್ತಾನಮ್ಮ/ ಮತ್ತೆ ಮತ್ತೆ ಹೆದುರಿಸಿ ಆಲಂಗಿಸಿಕೊಂಡು/ ಮನ್ಮಥ ಕೇಳಿಯಲ್ಲಿ ತೊಡಗುತ್ತಾನಮ್ಮ/
(ಇದನ್ನು ಕರ್ನಾಟಕ ಸಂಗೀತದಲ್ಲಿ ಕಲ್ಯಾಣಿ ರಾಗದಲ್ಲಿ ಹಾಡಲಾಗುತ್ತಿತ್ತು)


1930 ರ ದಶಕದಲ್ಲಿ ಕರ್ನಾಟಕ ಸಂಗೀತವನ್ನು ಪರಿಷ್ಕರಿಸಿ, ಮೂರು ಗಂಟೆಗಳ ಅವಧಿಯ ಸಂಗೀತ ಕಛೇರಿಯಲ್ಲಿ ಏನೇನು ಹಾಡಬೇಕೆಂದು ನಿರ್ಧರಿಸಿದವರು, ಅರಿಯಕುಡಿ ರಾಮಾನುಜಾ ಅಯ್ಯಂಗಾರ್ ರವರು. ಪದಂ ಮತ್ತು ಜಾವಳಿ ಸ್ಥಾನದಲ್ಲಿ ತಮಿಳು ತಿರುಪ್ಪಾವಯ್ ( ದೇವರ ನಾಮ) ಮತ್ತು ಪುರಂದರ ದಾಸರ ಕಿರ್ತನೆಗಳನ್ನು ಸೇರ್ಪಡಿಸುವುದರ ಮೂಲಕ ಅವರು ಸಂಗೀತದಲ್ಲಿ ಹೊಸ ಪ್ರಯೋಗ ಮಾಡಿದರು. ಶ್ರೀಮತಿ ರುಕ್ಮಿಣಿ ಅರುಂಡಾಳ್ ರವರು ಸಾದಿರ್ ನೃತ್ಯವನ್ನು ಪರಿಷ್ಕರಿಸಿ, ಕೊರವಂಜಿ ನೃತ್ಯ ಮತ್ತು ಶೃಂಗಾರ ರಸ ಗಳು ಇದ್ದ ಭಾಗದಲ್ಲಿ ಮಹಾಭಾರತ ಮತ್ತು ರಾಮಾಯಣದ ಕೆಲವು ಭಾಗಗಳನ್ನು ಕಾವ್ಯ ಮತ್ತು ನೃತ್ಯ ರೂಪದಲ್ಲಿ ಅಳವಡಿಸುವುದರ ಮೂಲಕ ಅದಕ್ಕೆ ಭರತನಾಟ್ಯ ಎಂದು ನಾಮಕರಣ ಮಾಡಿದರು. ಪ್ರತಿಯೊಂದು ಕಲೆಯೂ ಆಯಾ ಕಾಲಘಟ್ಟದ ಸಮುದಾಯದ ಅಭಿರುಚಿಗೆ ತಕ್ಕಂತೆ ಮರು ಹುಟ್ಟು ಪಡೆಯುತ್ತದೆ ಎಂಬುದಕ್ಕೆ ತಮಾಶ, ಕರ್ನಾಟಕ ಸಂಗೀತ, ಭರತನಾಟ್ಯ ಮುಂತಾದ ಕಲೆಗಳ ಇತಿಹಾಸ ನಮ್ಮೆದುರು ಸಾಕ್ಷಿಯಾಗಿದೆ.
ತಮಾಶ ಕಲಾ ಪ್ರಕಾರದಲ್ಲಿ ಎರಡು ಭಾಗಗಳಿದ್ದು, ಒಂದು ಪೂರ್ವ ರಂಗ ಮತ್ತು ಇನ್ನೊಂದನ್ನು ಉತ್ತರ ರಂಗ ಎಂದು ಕರೆಯಲಾಗುತ್ತದೆ. ಪೂರ್ವರಂಗದಲ್ಲಿ ಸಾಂಪ್ರದಾಯಿಕವಾಗಿ ಬಂದ ನೃತ್ಯ ಮತ್ತು ಹಾಡುಗಳು ಇರುತ್ತವೆ. ಡೋಲಕಿ , ಗೆಜ್ಜೆಯ ನೀನಾದ, ಹಾರ್ಮೋನಿಯಂ, ಮುಂತಾದವುಗಳು ತಮಾಶ ನೃತ್ಯದ ಜೀವಾಳ ಎಂದರೆ, ತಪ್ಪಾಗಲಾರದು. ಎರಡನೆಯ ಭಾಗದಲ್ಲಿ ಆಧುನಿಕ ಬದುಕಿನ ಅನುಭವಗಳನ್ನು ವಿಡಂಬನೆಯ ಮೂಲಕ ಹೇಳುವುದು ಇಲ್ಲಿನ ವಿಶೇಷ.

ಧಾರವಾಡ ರಂಗಾಯಣಕ್ಕೆ  ಕಲಾವಿದರೆಲ್ಲರೂ ಕೇವಲ ಆರೇಳು ತಿಂಗಳ ಹಿಂದೆ ಸೇರ್ಪಡೆಯಾದವರು. ಬಹುತೇಕ ಎಲ್ಲಾ ನಟ ನಟಿಯರು ಇಪ್ಪತ್ತೈದು ವರ್ಷದ ಒಳಗಿನವರು. ಈ ಯುವ ಕಲಾ ಪ್ರತಿಭೆಗಳು ಕೇವಲ ಇಪ್ಪತ್ತೈದು ದಿನಗಳ ಅವಧಿಯಲ್ಲಿ ತರಬೇತಿ ಪಡೆದು ಕಠಿಣವಾದ ಈ ನೃತ್ಯ ಪ್ರಕಾರವನ್ನು ಕನ್ನಡದಲ್ಲಿ ಸಾದರಪಡಿಸಿದ್ದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಅಭಿನಯದಲ್ಲಿ ಒಬ್ಬರೊನ್ನಬ್ಬರು ಮೀರಿಸುವ ಪ್ರತಿಬೆ ಹೊಂದಿದ್ದಾರೆ.. ಈ ಪ್ರಯೋಗದಲ್ಲಿ ಮರಾಠಿ ಸಂಸ್ಕೃತಿಯ ಛಾಯೆ  ಸಹಜವಾಗಿ ಎದ್ದು ಕಾಣುತ್ತದೆ ನಿಜ, ಅಲ್ಲಿನ ಲಾವಣಿಗಳನ್ನು ಕನಡಕ್ಕೆ ಅನುವಾದಿಸ ಬಹುದು ಆದರೆ, ಲಾವಣಿಯ ರಾಗದ ಮಟ್ಟುಗಳನ್ನು ಕನ್ನಡಕ್ಕೆ ತರುವುದು ಸುಲಭದ ಮಾತಲ್ಲ. ಹಾಗಾಗಿ ಅದೇ ರಾಗಗಳನ್ನು ಇಲ್ಲಿ ಉಳಿಸಿಕೊಳ್ಳಲಾಗಿದೆ. ಗಣೇಶ ಚಂದನ ಶಿವ ಅವರ ನಿರ್ದೇಶನ ಮತ್ತು ರಚನೆಯಲ್ಲಿ ಮೂಡಿ ಬಂದ  ಈ ನಾಟಕದಲ್ಲಿ ಪುಣೆಯ ಹೆಸರಾಂತ ತಮಾಶಾ ನೃತ್ಯಗಾತಿ ರೇಷ್ಮಾ ಮುಸಳೆಯವರ ವಸ್ತ್ರ ವಿನ್ಯಾಸ, ಔರಂಗಾಬಾದಿನ ಸಾಗರ್ ಜೊಷಿಯವರ ಡೋಲಕಿ ( ಡೋಲು ವಾದನ) ಮನ ಸೆಳೆಯುತ್ತವೆ. ಈ ವಿನೂತನ ಪ್ರಯೋಗ ಮುಂದಿನ ದಿನಗಳಲ್ಲಿ ರಂಗಭೂಮಿಗೆ ಹೊಸ ದಾರಿಯನ್ನು ನಿರ್ಮಿಸಿದರೆ, ಆಶ್ಚರ್ಯವಿಲ್ಲ.
ಕೊನೆಯ ಮಾತು- ಧಾರವಾಡದ ರಂಗಾಯಣದ ಈ ತಮಾಶಾ ಪ್ರಯೋಗವು ಇದೇ ಜನವರಿ 16 ರಂದು ಮೈಸೂರಿನ ರಂಗಾಯಣದ ಆಶ್ರಯದಲ್ಲಿ ನಡೆಯುವ ಬಹುರೂಪಿ ಉತ್ಸವದಲ್ಲಿ ಪ್ರದರ್ಶನವಾಗಲಿದೆ. ಆಸಕ್ತರು ಈ ನೃತ್ಯ ನಾಟಕವನ್ನು ಮೈಸೂರು ಕಲಾ ಮಂದಿರದಲ್ಲಿ ವೀಕ್ಷಿಸಬಹುದು.