ಶುಕ್ರವಾರ, ಮಾರ್ಚ್ 9, 2018

ಕನ್ನಡ ಸಾಂಸ್ಕøತಿಕ ಲೋಕದ ದಿಗ್ಗಜ ಡಿ.ವಿ.ಗುಂಡಪ್ಪನವರ ನೆನಪುಗಳು




ಕನ್ನಡ ಸಾಹಿತ್ಯ, ಸಂಸ್ಕøತಿ ಅಥವಾ ಸಂಗೀತ ಇವುಗಳಲ್ಲದೆ ಸ್ವಾತಂತ್ರ್ಯ ಪೂರ್ವದ ಭಾರತ ಮತ್ತು ಕರ್ನಾಟಕದ ವಿದ್ಯಾಮಾನಗಳ ಕುರಿತಂತೆ ಅವಲೋಕಿಸಲು ಮಾಹಿತಿಗಾಗಿ  ಡಿ.ವಿ.ಜಿ. ಎಂದು ಪ್ರಸಿದ್ಧರಾದ ಡಿ.ವಿ.ಗುಂಡಪ್ಪನವರ ಸಾಹಿತ್ಯ ಕೃತಿಯ ಸಂಪುಟಗಳನ್ನು ಒಮ್ಮೆ ಗಮನಿಸಿದರೆ ಸಾಕುಎಲ್ಲಾ ರೀತಿಯ ವಿವರವಾದ ಮಾಹಿತಿಗಳು ಲಭ್ಯವಾಗುತ್ತವೆ. ಡಿ.ವಿ.ಜಿ. ಯವರ ನೆನಪಿಗಾಗಿ ಕರ್ನಾಟಕ ಸರ್ಕಾರವು 1999 ರಲ್ಲಿ ಡಾ.ಹಾ.ಮಾ.ನಾ. ಸಂಪಾದಕತ್ವದಲ್ಲಿ ಹೊರತಂದಿರುವ  ಡಿ.ವಿ.ಜಿ.ಕೃತಿ ಶ್ರೇಣಿ ಸಂಪುಟಗಳನ್ನು ಗಮನಿಸಿದಾಗಅವರ ಅಗಾಧವಾದ ಜ್ಞಾನದ ಸಂಪತ್ತು ನಮ್ಮಲ್ಲಿ ವಿಸ್ಮಯವನ್ನುಂಟು ಮಾಡುತ್ತದೆ
ಒಬ್ಬ ವ್ಯಕ್ತಿ ಕನ್ನಡದಲ್ಲಿ ಇಷ್ಟೊಂದು ಅಗಾಧ ಬರೆವಣಿಗೆ ಮಾಡಲು ಸಾಧ್ಯವೆ? ಎಂದು ಅಚ್ಚರಿಯಾಗುವಷ್ಟು ಶ್ರೇಷ್ಠ ಸಾಹಿತ್ಯವನ್ನು ಸೃಷ್ಟಿಸಿರುವ ಡಿ.ವಿ.ಜಿ.ಯವರು ಒಂದು ವಿಶ್ವ ವಿದ್ಯಾಲಯ ಮಾಡಬಹುದಾದ ಕೆಲಸವನ್ನು ಒಬ್ಬ ವ್ಯಕ್ತಿಯಾಗಿ, ಒಬ್ಬ ಪತ್ರಕರ್ತರಾಗಿ, ಸಂಸ್ಕø ಮತ್ತು ಇಂಗ್ಲೀಷ್ ಭಾಷೆಯ ವಿದ್ವಾಂಸರಾಗಿ ಮಾಡಿದ್ದಾರೆ. ಅವರ ಒಟ್ಟು ಬರೆವಣಿಗೆಯು ಹತ್ತು ಸಾವಿರ ಪುಟಗಳನ್ನು ಮೀರುತ್ತದೆ ಎಂದರೆ, ಅವರ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಎಂತಹದ್ದು ನಮಗೆ ಅರಿವಾಗುತ್ತದೆ.
ಕನ್ನಡದ ಸಾಹಿತ್ಯ ಮತ್ತು ಸಾಂಸ್ಕತಿಕ ಜಗತ್ತು ನಾಲ್ವರು ಮಹನೀಯರಿಗೆ ಚಿರಕಾಲ ಖುಣಿಯಾಗಿರಬೇಕಾಗಿದೆ. ಆಡು ಮುಟ್ಟಿದ ಸೊಪ್ಪಿಲ್ಲ ಎಂಬ ಗಾದೆಯಂತೆ ರಾಷ್ಟ್ರಕವಿ ಗೋವಿಂದ ಪೈ, ಶಿವರಾಮಕಾರಂತರು, ಡಿ.ವಿ.ಜಿ ಹಾಗೂ ನಿರಂಜನ ಇವರುಗಳು ಸೃಷ್ಟಿ ಮಾಡಿರುವ ವೈವಿಧ್ಯಮಯ ಸಾಹಿತ್ಯವನ್ನು ಗಮನಿಸಿದರೆ ಸಾಕು ಆಶ್ಚರ್ಯವಾಗುತ್ತದೆ. ಜೊತೆಗೆ ಇವರೆಲ್ಲರೂ ಯಾವುದೇ ವಿಶ್ವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಾಗಿ ನೆಮ್ಮದಿಯ ಬದುಕು ಕಟ್ಟಿಕೊಂಡವರಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಿರಂತರ ತಿರುಗಾಟ ನಡೆಸುತ್ತಾ, ಅನುಭವಕ್ಕೆ ದಕ್ಕಿದ ಸಂಗತಿಗಳೆಲ್ಲವನ್ನು ದಾಖಲಿಸಿದರು. ಜಗತ್ತಿನಲ್ಲಿರುವ ಜ್ಞಾನವೆಲ್ಲಾ ಕನ್ನಡ ಭಾಷೆಯಲ್ಲಿಯೂ ಇರಲಿ ಎಂದು ಹಗಲಿರುಳು ಹಂಬಲಿಸಿದರು. ಹಾಗಾಗಿ ಕಥೆ, ಕಾದಂಬರಿ, ಕಾವ್ಯ, ಸಂಶೋಧನೆ, ನಾಟಕ, ಅನುವಾದ, ವಿಜ್ಞಾನ ಸಾಹಿತ್ಯ, ಮಕ್ಕಳ ಸಾಹಿತ್ಯ, ಅನುವಾದ ಹೀಗೆ ಅನೇಕ ಪ್ರಕಾರಗಳು ಕನ್ನಡ ಓದುಗರಿಗೆ ದೊರಕುವಂತಾದವು. ನಾಲ್ವರು ಮಹನೀಯರು ಸೃಷ್ಟಿ ಮಾಡಿದ ಸಾಹಿತ್ಯ ಪ್ರಕಾರಗಳನ್ನು  ಗಮನಿಸಿದರೆ ಹೆಮ್ಮೆಯಾಗುತ್ತದೆ. ಇಂತಹ ಪ್ರತಿಭಾವಂತರನ್ನು ಪಡೆದ ನಾವು ಕನ್ನಡಿಗರು ಪುಣ್ಯವಂತರು ಎಂಬ ನೆಮ್ಮದಿಯ ಭಾವ ಮನದಲ್ಲಿ ಮೂಡುತ್ತದೆ.
ಡಿ.ವಿ.ಜಿಯವರ ಪೂರ್ವಿಕರು ಮೂಲತಃ ತಮಿಳುನಾಡಿನ ತಿರುಚರಾಪಳ್ಳಿವರು.  ಅವರ ಮುತ್ತಾತ ಶೇಕದಾರ ಗುಂಡಪ್ಪ ಎಂಬುವರು ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ಬಂದು ನೆಲೆಸಿದವರು. ಸಾಧಾರಣ ಬ್ರಾಹ್ಮಣ ಕುಟುಂಬವಾಗಿದ್ದ ವೆಂಕಟರಮಣಯ್ಯ ಎಂಬುವರ ಪುತ್ರನಾಗಿ ಜನಿಸಿದ ಗುಂಡಪ್ಪನವರ ಪೂರ್ಣ ನಾಮಧೇಯ ದೇವನಹಳ್ಳಿ ವೆಂಕಟರÀಮಣಯ್ಯ ಗುಂಡಪ್ಪ ಎಂಬುದಾಗಿದೆ. ತಮ್ಮ ಕುಟುಂಬದ ವಿವರ ಹಾಗೂ ಬಾಲ್ಯದ ಪಡಿಪಾಟಲಿನ ಬದುಕನ್ನು ಡಿ.ವಿ.ಜಿಯವರು ತಮ್ಮ ಜಾÐಪಕ ಚಿತ್ರ ಶಾಲೆ ಕೃತಿಯಲ್ಲಿ ಗುಂಡಪ್ಪನವರು ಸ್ವಾರಸ್ಯವಾಗಿ ಬಣ್ಣಿಸಿದ್ದಾರೆ. ಅವರ ಬರೆವಣಿಗೆಯು ಎಷ್ಟೊಂದು ವೈವಿಧ್ಯಮಯವಾಗಿರುವ ಹಾಗೆ ಅವರ ಬದುಕು ಬದುಕು ಸಹ ಹೋರಾಟದಿಂದ ಕೂಡಿದ್ದು ವರ್ಣರಂಜಿತವಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಅಷ್ಟೆಲ್ಲಾ ಕಡು ಕಷ್ಟದ ಬದುಕನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಅವರು ಸ್ವೀಕರಿಸಿ ಬದುಕಿದರು. ಎಲ್ಲಿಯೂ ನೋವನ್ನಾಗಲಿ, ಅಸಮಾಧಾನವನ್ನಾಗಲಿ ಅವರು ಹೊರಹಾಕಲಿಲ್ಲ. ಇಂತಹ ಉದಾತ್ತ ಹಾಗೂ ಸಂತನ ಗುಣವಿದ್ದುದರಿಂದಲೇ, ಡಿ.ವಿ.ಜಿ. ಅವರು ಉತ್ಕøಷ್ಟವಾದವನಸುಮಎಂಬ ಕವಿತೆಯನ್ನು ಹಾಗೂ ಮಂಕುತಿಮ್ಮನ ಕಗ್ಗ ಕಾವ್ಯದಲ್ಲಿಬದುಕು ಜಂಟಕಾ ಬಂಡಿ/ ವಿಧಿ ಅದರ ಸಾಹೇಬ/ ಕುದುರೆ ನೀನ್ ಅವನು ಪೇಳ್ವಂತೆ ಪಯಣಿಗನು/ ಮದುವೆಗೋ, ಮಸಣಕೋ ಹೋಗೆಂದ ಕಡೆ ಹೋಗು/ ಪದಕುಸಿಯೇ ನೆಲವಿಹುದು ಮಂಕುತಿಮ್ಮ. ಎಂಬ ಜೀವನ ದರ್ಶನವನ್ನು ನೀಡಲು ಅವರಿಗೆ ಸಾಧ್ಯವಾಯಿತು.
ಮುಳಬಾಗಿಲು ಪಟ್ಟಣದಲ್ಲಿ ಲೋಯರ್ ಸೆಕಂಡರಿ ಶಿಕ್ಷಣವನ್ನು ಮುಗಿಸಿದ ಅವರು, ಪ್ರೌಡಶಾಲಾ ಶಿಕ್ಷಣಕ್ಕಾಗಿ ಮೈಸೂರಿಗೆ ಹೋಗಿ ವಾರಾನ್ನದ ಮೂಲಕ ಮಹಾರಾಜ ಹೈಸ್ಕೂಲ್ ಗೆ ಸೇರಿದರು. ಆದರೆ, ತಮ್ಮ ಕುಟುಂಬದ ತೊಂದರೆಯ ಮೈಸೂರು ತೊರೆದು ಕೋಲಾರ ಶಾಲೆಗೆ ಸೇರಿ ಬಡತನ ಮತ್ತು ಹೋರಾಟದ ನಡುವೆ ಶಿಕ್ಷಣ ಮುಗಿಸಿದರು. ವೇಳೆಗಾಗಲೇ ಕನ್ನಡ, ಸಂಸ್ಕø, ಇಂಗ್ಲೀಷ್ ಭಾಷೆಯಲ್ಲಿ ಅವರು ಪ್ರೌಡಿಮೆಯನ್ನು ಸಾಧಿಸಿದ್ದರು.
ಗುಂಡಪ್ಪನವರು ಪ್ರೌಡಶಾಲೆ ಶಿಕ್ಷಣ ಮುಗಿಸುವ ವೇಳೆಗೆ ಅವರಿಗೆ ವಿವಾಹವಾಗಿತ್ತು. ಅವರು ಸರ್ಕಾರಿ ಹುದ್ದೆ ಹಿಡಿಯಲಿ ಎಂಬುದು ಕುಟುಂಬದ ಆಕಾಂಕ್ಷೆ. ಆದರೆ, ಸ್ವತಂತ್ರವಾಗಿ ಬದುಕಬೇಕೆಂಬುದು ಅವರ ಗುರಿ. ಹಾಗಾಗಿ ಅವರು ಜೀವನ ನಿರ್ವಹಣೆಗೆ ಮಾಡಿದ ಕೆಲಸಗಳಿಗೆ ಲೆಕ್ಕ ಇಟ್ಟವರಿಲ್ಲ. ಕೋಲಾರದಲ್ಲಿ ಹೈಸ್ಕೂಲ್ ಓದುವಾಗಲೇ  ಕ್ರೈಸ್ತ ಧರ್ಮದ ವಿಚಾರಗಳನ್ನು ಅನುವಾದ ಕೆಲಸ ಮಾಡುತ್ತಾ ಅದರಿಂದ ಸಿಗುತ್ತಿದ್ದ ಐದು ರೂಪಾಯಿ ಸಂಭಾವನೆಯಲ್ಲಿ ಶಿಕ್ಷಣ ಮುಗಿಸಿದರು. ಕೋಲಾರದ ಬಳಿಯ ಕೆ.ಜಿ.ಎಫ್. ಸೋಡಾ ಪ್ಯಾಕ್ಟರಿಯಿಂದ ಹಿಡಿದು, ಬೆಂಗಳೂರು ನಗರಕ್ಕೆ ಬಂದು ಜಟಕಾ ಬಂಡಿಗಳಿಗೆ ಬಣ್ಣ ಹೊಡೆಯುವ ಕೆಲಸವನ್ನೂ ಸಹ ಅವರು ನಿರ್ವಹಿಸಿದರು. ಅಂತಿಮವಾಗಿ ಅವರು ಪತ್ರಿಕಾ ರಂಗದಲ್ಲಿ ಬದುಕು ಕಟ್ಟಿಕೊಂಡರು. ಪತ್ರಿಕೋದ್ಯಮವನ್ನು ಅವರು ಬಯಸಿ ಆಯ್ಕೆ ಮಾಡಿಕೊಳ್ಳಲಿಲ್ಲ. ಜೀವನೋಪಾಯಕ್ಕಾಗಿ ಅದು ಅವರಿಗೆ ಅನಿವಾರ್ಯವಾಯಿತು. ನಂತರ ದಿನಗಳಲ್ಲಿ ಜೀವನ ಪೂರ್ತಿ  ಅವರ ವೃತ್ತಿಯಾಯಿತು.
ಆರಂಭದಲ್ಲಿ ಅವರು ಸೂರ್ಯೋದಯ ಪ್ರಕಾಶಿಕೆ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಎರಡು ವರ್ಷಗಳ ನಂತರ ಪತ್ರಿಕೆ ನಿಂತು ಹೋದ ಪರಿಣಾಮ, ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಿಂದ ಹೊರಡುತ್ತಿದ್ದಈವಿನಿಂಗ್ ಮೈಲ್ಎಂಬ ಪತ್ರಿಕೆಗೆ ಲೇಖನ ಬರೆಯುತ್ತಿದ್ದರು. ಇದಕ್ಕಾಗಿ ತಿಂಗಳಿಗೆ ಎರಡು ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅವರು, ಭಾರತಿ, ಮೈಸೂರು ಸ್ಯಾಂಡರ್ಡ್ ಹಾಗೂ ನಡೆಗನ್ನಡ ಎಂಬ ಪತ್ರಿಕೆಗಳಿಗೂ ಸಹ ಲೇಖನ ಬರೆದು ಜೀವನ ನಿರ್ವಹಣೆ ಮಾಡುತ್ತಿದ್ದರು. ಹೀಗೆ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಡಿ.ವಿ.ಜಿ. ಅವರು ಮದ್ರಾಸ್ ನಗರಕ್ಕೆ ತೆರಳಿ ಅಲ್ಲಿನ ಪ್ರಸಿದ್ಧ  ಹಿಂದೂ ಹಾಗೂ ಇಚಿಡಿಯನ್ ಪೇಟ್ರಿಯಟ್ ಹಾಗೂ ಇಂಡಿಯನ್ ರಿವ್ಯೂ ಪತ್ರಿಕೆಗಳಿಗೆ ಲೇಖನ ಬರೆಯುತ್ತಾ ಪ್ರಸಿದ್ಧ ಲೇಖಕ ಹಾಗೂ ಪತ್ರಕರ್ತರಾಗಿ ಮುಂಚೂಣಿಗೆ ಬಂದರು.
ಕನ್ನಡ ಪತ್ರಿಕೋದ್ಯಮದ ಪಿತಾಮಹಾರಲ್ಲಿ ಒಬ್ಬರೆಂದು ಪರಿಗಣಿಸಬಹುದಾದ ಡಿ.ವಿ.ಜಿ.ಯವರು ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕುತ್ತಾ, ಬರೆಯುತ್ತಾ, ಎಲ್ಲಾ ಜಾತಿ, ಧರ್ಮ ಹಾಗೂ ಪಂಥಗಳನ್ನು ಮೀರಿ ನಿಂತವರು. ಕನ್ನಡದ ಸಾಹಿತ್ಯ ಹಾಗೂ ಪತ್ರಿಕಾ ರಂಗದಲ್ಲಿ ಯಾರೋಬ್ಬರೂ ದಾಖಲಿಸಲಾಗದಂತಹ ಅಮರೂಪದ ಮಾಹಿತಿಗಳನ್ನು ತಮ್ಮ ಜ್ಞಾಪಕ ಚಿತ್ರ ಶಾಲೆಯಲ್ಲಿ ದಾಖಲಿಸಿದವರು. ಸ್ವಾತಂತ್ರ್ಯಪೂರ್ವದ ಯಾವುದೇ ಮಹಾನ್ ಕಲಾವಿದರು, ಸಂಗೀತಗಾರರು, ವಿದ್ವಾಂಸರು ಹೀಗೆ ಅನೇಕ ರಂಗಗಳ ಪ್ರತಿಭೆಗಳನ್ನು ಯಾವುದೇ ಜಾತಿಯ ಸೋಂಕಿಲ್ಲದೆ, ತಾರತಮ್ಯವಿಲ್ಲದೆ ಮುಕ್ತ ಮನಸ್ಸಿನಿಂದ ದಾಖಲಿಸಿದ ಹೃದಯವಂತರಾದ ಡಿ.ವಿ.ಜಿ. ಅವರು ಇಂದಿಗೂ ಕನ್ನಡ ಪತ್ರಿಕೋದ್ಯಮಕ್ಕೆ ಮಾದರಿಯಾಗಿದ್ದಾರೆ.

ಬದುಕಿನ ಅಭದ್ರತೆಯ ನಡುವೆ ತಮ್ಮ ಸೃಜನಶೀಲತೆಯನ್ನು ಕಾಪಾಡಿಕೊಂಡು ಬಂದಿದ್ದ ಅವರ ಅಧ್ಯಯನ ಮತ್ತು ಆಸಕ್ತಿ ನಿಜಕ್ಕೂ ಆಶ್ಚರ್ಯ ಪಡುವಂತಹದ್ದು. ಇತಿಹಾಸ, ಸಂಗೀತ, ಕಾವ್ಯಮೀಮಾಂಸೆ, ಕನ್ನಡ ವ್ಯಾಕರಣ, ಸಂಸ್ಕತ ಗ್ರಂಥಗಳು ಮತ್ತು ಧರ್ಮಗ್ರಂಥಗಳ ವ್ಯಾಖ್ಯಾನ, ಅನುವಾದ ಹೀಗೆ ಎಲ್ಲಾ ರಂಗಗಳಲ್ಲಿ ತಮ್ಮ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳುತ್ತಾ, ಅವುಗಳ ಮೂಲಕ ದಕ್ಕಿದ ಅನುಭವವನ್ನು ಕನ್ನಡಿಗರಿಗೆ ಉಣಬಡಿಸುತ್ತಾ ಹೋದರು. ಉಮರನ ಒಸಗೆ,  ಮಂಕು ತಿಮ್ಮನ ಕಗ್ಗ, ಶ್ರೀ ರಾಮ ಪರೀಕ್ಷಾಣಂ, ಶ್ರೀಕೃಷ್ಣ ಪರೀಕ್ಷಣಂ,  ರನ್ನ, ಗಾಂಧೀಜಿ, ಗೋಖಲೆ, ದಾದಾಬಾಯಿ ನವರೋಜಿ ಕುರಿತ ಬಿಡಿಲೇಖನಗಳು, ಕಲೆ, ಸಂಸ್ಕತಿ, ಸಂಗೀತ ಹಾಗೂ ತೆಲುಗಿನ ಕ್ರೇತ್ರಜ್ಞ ( ತೆಲುಗು ಭಾಷೆಯ ಶೃಂಗಾರ ಕಾವ್ಯ ಬರೆದ ಕವಿ) ಕುರಿತ ಅಧ್ಯಯನಗಳು ಇವೆಲ್ಲವನ್ನೂ ಗಮನಿಸಿದರೆ ಡಿ.ವಿ.ಜಿ. ಆಸಕ್ತಿ ನಮ್ಮಲ್ಲಿ ಬೆರಗು ಮೂಡಿಸುತ್ತವೆ.
ಕರ್ನಾಟಕದಲ್ಲಿ ಸುಮಾರು ಹದಿನೆಂಟು ವರ್ಷಗಳ ಕಾಲಕರ್ನಾಟಕಎಂಬ ಪತ್ರಿಕೆಯನ್ನು ನಡೆಸಿದ ಅವರು ನಂತರ ಅದನ್ನು ನಿಲ್ಲಿಸಿದರು. ಆನಂತರ ಸಂಪೂರ್ಣವಾಗಿ ಓದು, ಬರೆವಣಿಗೆ, ಹಾಗೂ ಸಾರ್ವಜನಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದ ಡಿ.ವಿ.ಜಿ. ಎಂದಿಗೂ ತಮ್ಮ ಸ್ಥಾನಮಾನವನ್ನು ದುರಪಯೋಗ ಪಡಿಸಿಕೊಂಡವರಲ್ಲ. ಅಂದಿನ ಮೈಸೂರು ಸಂಸ್ಥಾನದ ದಿವಾನರಾದ ಸರ್.ಎಂ.ವಿಶ್ವೇಶ್ವರಯ್ಯ, ಮಿರ್ಜಾಇಸ್ಮಾಯಿಲ್ ಸೇರಿದಂತೆ ಅನೇಕ ಗಣ್ಯರು ಡಿ.ವಿ.ಜಿ.ಯವರ ಸಲಹೆ ಪಡೆಯುತ್ತಿದ್ದರು. ತಾನು ಬದುಕಿರುವುದೇ ಸಾರ್ವಜನಿಕ ಸೇವೆಗಾಗಿ ಎಂಬಂತೆ ಬದುಕಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.   ಸದಾ ಎಲೆ ಮರೆಯ ಕಾಯಿಯಂತೆ ಬದುಕಿದ ಡಿ.ವಿ.ಜಿ. ಅವÀರಿಗೆ  ಮೈಸೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್, 1967 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಹಾಗೂ ಹದಿನೆಂಟನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅರಸಿಕೊಂಡು ಬಂದವು. ಅನೇಕ ಸಂಘ ಸಂಸ್ಥೆಗಳು ಮತ್ತು ಗಣ್ಯರು ನೀಡಿದ ಗೌರವ ಧನದ ಚೆಕ್ ಗಳನ್ನು ಎಂದಿಗೂ ನಗದಾಗಿ ಪಾವತಿಸಿಕೊಳ್ಳದ ಡಿ.ವಿ.ಜಿ. ಅವರು ಸರ್ಕಾರ ನೀಡಿದ ಐನೂರು ಮಾಸಾಶನವನ್ನು ಕೂಡ ನಯವಾಗಿ ತಿರಸ್ಕರಿಸಿದರು. ಅವರ ಇಳಿ ವಯಸ್ಸಿನಲ್ಲಿ ನಡೆದ ಸಾರ್ವಜನಿಕ ಸನ್ಮಾನ ಸಮಾರಂಭದಲ್ಲಿ ನೀಡಿದ ಒಂದು ಲಕ್ಷ ಗೌರವ ನಿಧಿಯನ್ನು ಗೋಖಲೆ ಸಾರ್ವಜನಿಕ ಸಂಸ್ಥೆಗೆ ಉಡುಗರೆಯಾಗಿ ನೀಡಿದರು.  ತಮ್ಮ ಇಪ್ಪತ್ತನಾಲ್ಕನೆ ವಯಸ್ಸಿಗೆ ಪತ್ನಿಯನ್ನು ಕಳೆದುಕೊಂಡಿದ್ದ ಡಿ.ವಿ.ಜಿ. ಬದುಕಿನುದ್ದಕ್ಕೂ ಒಬ್ಬ ಸಂತನಂತೆ, ಫಕೀರನಂತೆ ಬದುಕಿ, ಇಂದಿಗೂ ಸಹ ಪತ್ರಕರ್ತರಿಗೆ ಮತ್ತು ಲೇಖಕರಿಗೆ ಮಾದರಿಯಾಗಿದ್ದಾರೆ.