ಶುಕ್ರವಾರ, ಡಿಸೆಂಬರ್ 29, 2017

ಬೆತ್ತಲಾಗುತ್ತಿರುವ ಬಿ.ಜಿ.ಪಿ. ನಾಯಕರು


ವೈಚಾರಿಕತೆ ಮತ್ತು ತತ್ವ ಸಿದ್ಧಾಂತಗಳ ಕುರಿತಂತೆ ನಮ್ಮ ಭಿನ್ನಾಭಿಪ್ರಾಯಗಳು ಏನೇ ಇರಲಿ, ಕಳೆದ ಮೂರೂವರೆ ದಶಕಗಳಿಂದ ಜನಸಂಘವಾಗಿದ್ದ ರಾಷ್ಟ್ರೀಯ ಪಕ್ಷವೊಂದು ಭಾರತೀಯ ಜನತಾ ಪಕ್ಷವಾಗಿ ಪರಿವರ್ತನೆಗೊಂಡ ನಂತರ ನಾವು ಗೌರವಿಸುವ ಹಲವಾರು ನಾಯಕರು ಪಕ್ಷದಲ್ಲಿದ್ದರು. ಹಿಂದೂ ಧರ್ಮ ಮತ್ತು ಸಂಸ್ಸøತಿಯನ್ನು ಪಕ್ಷದ ಮುಖ್ಯ ಪ್ರಣಾಳಿಕೆಯನ್ನಾಗಿಟ್ಟುಕೊಂಡು ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ಪಕ್ಷದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅದ್ವಾನಿಯಂತಹ ನಾಯಕರು ಸಾರ್ವಜನಿಕ ಬದುಕಿನಲ್ಲಿ ಒಬ್ಬ ನಾಯಕನಿಗೆ ಇರಬೇಕಾz ಸಭ್ಯತೆ ಮತ್ತು ಸಂಸ್ಕತಿಯನ್ನು ಮೈಗೂಡಿಸಿಕೊಂಡಿದ್ದರುಎಂದಿಗೂ ತುಟಿ ಮೀರಿದ ಅಸಂಸ್ಕತ ಭಾಷೆಯನ್ನಾಡದೆ ತಮ್ಮ ವಿರೋಧಿಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಬೆನ್ನುಮೂಳೆಗಳಿಲ್ಲದ  ಹರಕು ಬಾಯಿ ದಾಸರಂತಿರುವ ಹಾಗೂ ಕೂಗುಮಾರಿ ಸಂಸ್ಕತಿಯ ವಾರಸುದಾರರಂತಿರುವ ಅನಂತಕುಮಾರ ಹೆಗ್ಡೆ, ಪ್ರತಾಪಸಿಂಹ, ಶೋಭಾ ಕರಂದ್ಲಾಜೆ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮಾಜಿಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಮುಂತಾದ ಮೂರನೆ ದರ್ಜೆಯ ಹಾಗೂ ಕೀಳು ಸಂಸ್ಕತಿಯ ನಾಯಕರಿಂದ ಭಾರತೀಯ ಜನತಾ ಪಕ್ಷವು ತುಂಬಿ ತುಳುಕಾಡುತ್ತಿದೆ. ಇವರ ಬೌದ್ಧಿಕ ದಿವಾಳಿತನ ಯಾವ ಹಂತ ತಲುಪಿದೆ ಎಂದರೆ, ಕಳೆದ ವಾರ ಹುಬ್ಬಳ್ಳಿ ನಗರಕ್ಕೆ ಯೋಗಿ ಆದಿತ್ಯನಾಥ ಸಮಾವೇಶವೊಂದರಲ್ಲಿ ಪಾಲ್ಗೊಳ್ಳುವ ಮುನ್ನಪೈರ್ ಬ್ರಾಂಡ್ ಆದಿತ್ಯನಾಥರಿಗೆ ಸ್ವಾಗತಎಂಬ ಪ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ತಮ್ಮ ಬಾಯಿಯನ್ನು ಗಟಾರಿನಂತೆ ಹೊಲಸು ಮಾಡಿಕೊಂಡು ಮಾತನಾಡುವ ಅನಂತಕುಮಾರ ಹೆಗ್ಡೆ, ಆದಿತ್ಯನಾಥ ಯೋಗಿಯಂತಹ ಬೇಜವಬ್ದಾರಿಯ ವ್ಯಕ್ತಿಗಳು ಈಗಿನ ಬಿ.ಜಿ.ಪಿ. ಪಾಲಿಗೆ ಪೈರ್ ಬ್ರಾಂಡ್ ನಾಯಕರಾಗಿದ್ದಾರೆ. ಇದು ಒಂದು ರಾಷ್ಟ್ರೀಯ ಪಕ್ಷವೊಂದರ ದುರಂತವಲ್ಲದೆ ಬೇರೇನೂ ಅಲ್ಲಹಿಂದೂ ಧರ್ಮದ ಬಗ್ಗೆ ಹಾಗೂ ಭಾರತೀಯ ಸಂಸ್ಕತಿಯ ಕುರಿತಾಗಿ ಮಾತನಾಡುವ ನಾಯಕ ಮಣಿಗಳಿಗೆ ಯಾವುದು ಸಂಸ್ಕೃತಿಯಾವುದು ಅಸಂಸ್ಕತಿ? ಎಂಬುದನ್ನು ತೋರಿಸಕೊಡಬೇಕಾದ ನೈತಿಕ ಜವಾಬ್ದಾರಿ  ಪ್ರಜ್ಞಾವಂತ ನಾಗರೀಕರ ಮೇಲಿದೆ.
ಕರ್ನಾಟಕ ರಾಜ್ಯದ ಬಿ.ಜೆ.ಪಿ.ಘಟಕದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳು ಸಂಪೂರ್ಣ ಅಯೋಮಯವಾಗಿವೆ. ಐದು ವರ್ಷದ ಹಿಂದ ಬಿ.ಜೆ.ಪಿ. ಯಿಂದ ಸಿಡಿದು, ತನ್ನದೇ ಆದ ಕೆ.ಜೆ.ಪಿ. ಪಕ್ಷವನ್ನು ಸ್ಥಾಪಿಸುವುದರ ಮೂಲಕ ಕಳೆದ ಚುನಾವಣೆಯಲ್ಲಿ ತಾನೂ ಮಣ್ಣು ಮುಕ್ಕುವುದರ ಜೊತೆಗೆ ಬಿ.ಜೆ.ಪಿ. ಪಕ್ಷಕ್ಕೂ ಮಣ್ಣು ಮುಕ್ಕಿಸಿದ ಯಡಿಯೂರಪ್ಪನವರಿಗೆ ಮತ್ತೆ  ಮಣೆ ಹಾಕಲಾಗಿದೆ. ಪಕ್ಷದಲ್ಲಿ ಜಾತಿಯ ಏಕೈಕ ಕಾರಣಕ್ಕಾಗಿ ಅಂದರೆಉತ್ತರ ಕರ್ನಾಟಕದ ಲಿಂಗಾಯಿತರ ಮತಗಳ ಮೇಲೆ ಕಣ್ಣಿಟ್ಟಿರುವ ರಾಷ್ಟ್ರ ಬಿ.ಜೆ.ಪಿ. ನಾಯಕರ ತೀರ್ಮಾನವು ರಾಜ್ಯದ ಹಲವು ಬಿ.ಜೆ.ಪಿ. ನಾಯಕರ ತೀವ್ರ ಅಸಮಾಧಾನಕ್ಕೆ  ಕಾರಣವಾಗಿದೆ.   ಒಬ್ಬ ತಿಕ್ಕಲು ದೊರೆಯ ಪ್ರತಿರೂಪದಂತಿರುವ, ಮಧುಮೇಹ, ರಕ್ತದೊತ್ತಡ, ಹೀಗೆ ಎಲ್ಲಾ ಬಗೆಯ ಕಾಯಿಲೆಗಳನ್ನು ದೇಹದಲ್ಲಿ ಹೊತ್ತುಕೊಂಡು, ಮೂಗಿನ ತುದಿಯಲ್ಲಿ ಕೋಪವಿರಿಸಿಕೊಂಡು ಮತ್ತೇ ಮುಖ್ಯಮಂತ್ರಿಯಾಗಬೇಕೆಂದು ಕನಸು ಕಾಣುತ್ತಾ, ಮೈಯಲ್ಲಾ ಬಾಯಾಗಿರಿಸಿಕೊಂಡಿರುವ  ಶೋಭಾ ಕರಂದ್ಲಾಜೆ ಎಂಬ ಹೆಂಗಸನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗುತ್ತಿರುವ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ತಿರುಕನ  ಕನಸುರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷ ಅಮಿತ್ ಷಾ ಅವರು ಯಡಿಯೂರಪ್ಪನವರನ್ನು  “ ಕರ್ನಾಟಕದ ಮುಂದಿನ ಮುಖ್ಯಮಂತ್ರಿಎಂದು ಘೋಷಿಸಿದಾಗಲೇ ಹಲವಾರು ಬಿ.ಜೆ.ಪಿ. ನಾಯಕರು ಕರ್ನಾಟಕದಲ್ಲಿ ಬಿ.ಜೆ.ಪಿ.ಪಕ್ಷವನ್ನು ಅಧಿಕಾರಕ್ಕೆ ತರುವ ಯತ್ನಕ್ಕೆ ಎಳ್ಳು ನೀರು ಬಿಟ್ಟರು. ನಾನು ವೈಯಕ್ತಿಕವಾಗಿ ಬಲ್ಲ ಮೂರು ನಾಲ್ಕು ಮಂದಿ ನಾಯಕರು ಖಾಸಾಗಿಯಾಗಿ ನನ್ನ ಜೊತೆ ಮಾತನಾಡುತ್ತಾನಮಗೆ ಇನ್ನೂ ಐದು ವರ್ಷ ಅಧಿಕಾರ ಇಲ್ಲದಿದ್ದರೂ ಚಿಂತೆಯಿಲ್ಲ, ಯಡಿಯೂರಪ್ಪನಂತಹ ಹುಂಬ  ಮಾತ್ರ ಮುಖ್ಯಮಂತ್ರಿಯಾಗುವುದು ಬೇಡಎಂಬ ಮಾತನ್ನಾಡಿದ್ದರು. ಏಕೆಂದರೆ, ಅವರಿಗೆಲ್ಲಾ ಯಡಿಯೂರಪ್ಪನವರಿಗಿಂತ ಅವರ ಹಿಂದಿರುವ ಶೋಭಾ ಕರಂದ್ಲಾಜೆಯ ಭಯ ಆವರಿಸಿಕೊಂಡಂತೆ ಕಾಣುತ್ತಿದೆ. ಅವರುಗಳ ಭಯಕ್ಕೂ ಒಂದು ಅರ್ಥವಿದೆ. ಏಕೆಂದರೆಭಾರತದ ರಾಜಕಾರಣದಲ್ಲಿ ಅಂದರೆ, ತಮಿಳುನಾಡಿನಲ್ಲಿ ಎಂ.ಜಿ.ರಾಮಚಂದ್ರನ್ ಮೂಲಕ ಮುಖ್ಯಮಂತ್ರಿಯಾದ ಜಯಲಲಿತಾ, ಕಾನ್ಸಿರಾಮ್ ಮೂಲಕ ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದ ಮಾಯಾವತಿ ಹಾಗೂ ಆಂಧ್ರಪ್ರದೇಶದಲ್ಲಿ ಎನ್.ಟಿ.ಆರ್. ಮೂಲಕ ಮುಖ್ಯ ಮಂತ್ರಿ ಪದವಿಗೇರಲು ಪ್ರಯತ್ನಿಸಿದ್ದ  ಲಕ್ಷ್ಮಿ-ಶಿವಪಾರ್ವತಿ ಎಂಬಾಕೆ ಹೀಗೆ ಅನೇಕ ಮಹಿಳೆಯರ ಇತಿಹಾಸ ನಮ್ಮ ಕಣ್ಣ ಮುಂದೆ ಇರುವಾಗ ಕರ್ನಾಟಕದಲ್ಲಿ ಯಾವ ಬಿ.ಜೆ.ಪಿ. ನಾಯಕ ತಾನೆ ಯಡಿಯೂರಪ್ಪನವರನ್ನು ಬೆಂಬಲಿಸಲು ಸಾಧ್ಯ? ಅವರೆಲ್ಲರಿಗೂ ಯಡಿಯೂರಪ್ಪನವರ ಭಯಕ್ಕಿಂತ ಹೆಚ್ಚಾಗಿ ಇನ್ನೊಬ್ಬ ಜಯಲಲಿತಾ ಆಗುವ ಸಾಧ್ಯತೆಗಳಿರುವ ಶೋಭ  ಬಗ್ಗೆ ಆತಂಕವಿರುವುದು ಸುಳ್ಳಲ್ಲ. ಕಾರಣಕ್ಕಾಗಿ ಯಡಿಯೂರಪ್ಪನವರದು ಒಂದು ರೀತಿಯಲ್ಲಿ ಒನ್ ಮ್ಯಾನ್ ಆರ್ಮಿ ಎಂಬಂತಾಗಿದೆ. ಹೇಗಾದರೂ ಸರಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ನಿರ್ಧರಿಸಿರುವ ಯಡಿಯೂಪ್ಪನವರು ಈಗ ಮಹಾದಾಯಿ ನದಿ ನೀರು ವಿವಾದದಲ್ಲಿ ಎಡವಟ್ಟು ಮಾಡಿಕೊಳ್ಳುವುದರ ಮೂಲಕ ಕರ್ನಾಟಕದ ಜನತೆಯೆದುರು ಬೆತ್ತಲಾಗಿದ್ದಾರೆ.

ಕುಡಿಯುವ ನೀರಿಗಾಗಿ ಕರ್ನಾಟಕ ಸರ್ಕಾರವು ಕಳೆದ ಇಪ್ಪತ್ತೈದು ವರ್ಷಗಳಿಂದ ಮಹದಾಯಿ ನದಿ ವಿಚಾರವಾಗಿ ನೆರೆಯ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆ ಕಾನೂನು ಹೋರಾಟ ಮಾಡುತ್ತಿರುವುದು ಹೊಸ ವಿಷಯವೇನಲ್ಲ. ವಿವಾದ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಅಂತರಾಜ್ಯ ಜಲವಿವಾದ ಕುರಿತಂತೆ ತೀರ್ಪು ನೀಡಬೇಕಾದ ನ್ಯಾಯಮಂಡಳಿಯು ವರ್ಷದ ಆರಂಭದಲ್ಲಿ ನ್ಯಾಯಾಲಯದ ಹೊರಗೆ ಇದನ್ನು ಬಗೆ ಹರಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿತ್ತು. ಅನಾವಶ್ಯಕವಾಗಿ  ಸಮುದ್ರಕ್ಕೆ ಮಹಾದಾಯಿ ನದಿ ನೀರು ಹರಿದು ಹೋಗುತ್ತಿದ್ದರೂ ಸಹ ಹಠ ಹಿಡಿದಿರುವ ಗೋವಾ ರಾಜ್ಯ ಈವರೆಗೆ  ವಿಷಯದಲ್ಲಿ ಯಾವುದೇ ಸಹಾನುಭೂತಿ ತೋರಿಸಿಲ್ಲ. ಕೇಂದ್ರದಲ್ಲಿ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರಗಳು ಅಧಿಕಾರದಲ್ಲಿ ಇರುವುದರಿಂದ ಇದು ಮಾತುಕತೆಯ ಮೂಲಕ ಬಗೆಹರಿಸವುದು ಕಷ್ಟಕರ ಸಂಗತಿಯೇನಲ್ಲ. ನಿಜಕ್ಕೂ ಬಿ.ಜೆ.ಪಿ. ಪಕ್ಷಕ್ಕೆ ಕರ್ನಾಟಕದ ಬಗ್ಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮೂರು ದಿನಗಳಲ್ಲಿ ಬಗೆ ಹರಿಸಬಹುದಾದ ಸಮಸ್ಯೆ ಇದಾಗಿದೆ. ಆದರೆ, ಕಳೆದ ಎರಡೂವರೆ ವರ್ಷದಿಂದ ನಿರಂತರವಾಗಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿರುವ ಉತ್ತರ ಕರ್ನಾಟಕ ರೈತಾಪಿ ಜನತೆಯನ್ನು ವಂಚಿಸುವ ಸಲುವಾಗಿ ಗೋವಾ ಮುಖ್ಯಮಂತ್ರಿಯಿಂದ ಖಾಸಾಗಿ ಪತ್ರವನ್ನು ಬರೆಯಿಸಿಕೊಂಡು ಬಂದ ಯಡಿಯೂರಪ್ಪನವರು  ಹುಬ್ಬಳ್ಳಿ ನಗರದ ಬಿ.ಜೆ.ಪಿಸಮಾವೇಶದಲ್ಲಿ ಅದನ್ನು ಪ್ರಕಟಿಸಿವುದರ ಮೂಲಕ ಇತ್ಯರ್ಥಕ್ಕೆ ಗೋವಾ ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಸುಳ್ಳು ಹೇಳಿದ್ದು ಅಕ್ಷಮ್ಯ ಅಪರಾಧವಾಗಿದೆ. ಇಂತಹ ವ್ಯವಸ್ಥಿತ ಸಂಚಿಗೆ ಕೈ ಜೋಡಿಸಿದ ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷರಾದ ಅಮಿತಾ ಷಾ ಅವರು ಕೂಡ ಇದರ ನೈತಿಕ ಹೊಣೆ ಹೊರಬೇಕಿದೆ. ನದಿ ನೀರಿನ ವಿವಾದ ಇರುವುದು ಗೋವಾ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ನಡುವೆ ಮಾತ್ರ. ಒಂದು ವೇಳೆ ಗೋವಾ ಮುಖ್ಯ ಮಂತ್ರಿ ಇತ್ಯರ್ಥಕ್ಕೆ ಒಪ್ಪಿಗೆ ಸೂಚಿಸುವುದಿದ್ದರೆ ಅದನ್ನು ಕರ್ನಾಟಕದ ಮುಖ್ಯಮಂತ್ರಿಗೆ ಇಲ್ಲವೆ, ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ಅಥವಾ ತಮ್ಮ ವಕೀಲರ ಮೂಲಕ ನ್ಯಾಯಾಧಿಕರಣಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕಿತ್ತು. ಇಂತಹ ಸೂಕ್ಷ್ಮತೆಗಳ ಅರಿವಿಲ್ಲದ ಅವಿವೇಕಿಗಳಂತೆ ವರ್ತಿಸಿದ ರಾಜ್ಯ ಬಿ.ಜೆ.ಪಿ. ನಾಯಕರು ಈಗ ರಾಜ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ವಿರುದ್ಧ ಸಿಡಿದೆದ್ದಿರುವ ಮಹಾದಾಯಿ ನದಿ ನೀರಿನ ಹೋರಾಟಗಾರರ ಹಿಂದೆ ಕಾಂಗ್ರೇಸ್ ಪಕ್ಷದ ಕೈವಾಡವಿದೆ ಎಂಬ ಅಪ್ರಬದ್ಧ ಹೇಳಿಕೆ ನೀಡುವುದರ ಮೂಲಕ ರಾಜ್ಯದ ಜನತೆ ಎದುರು ಬೆತ್ತಲಾಗುತ್ತಿದ್ದಾರೆ.
ಯಾವ ಕಾರಣಕ್ಕೂ ಕರ್ನಾಟಕ ರಾಜ್ಯಕ್ಕೆ  ಒಂದು ಹನಿ ನೀರು ಬಿಡುವುದಿಲ್ಲ, ವಿವಾದ ನ್ಯಾಯಮಂಡಳಿಯ ತೀರ್ಪಿನ ಮುಖಾಂತರ ನಿರ್ಧಾರವಾಗಲಿ ಎಂದು ಗೋವಾ ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲ ಆತ್ಮರಾವ್ ನಾಡಕರ್ಣಿ ಎಂಬುವರು ದೆಹಲಿಯಲ್ಲಿ ಹೇಳಿಕೆ ನೀಡುವುದರ ಮೂಲಕ ರಾಜ್ಯ ಬಿ.ಜೆ.ಪಿ. ನಾಯಕರ ಕಪಟ ನಾಟಕವನ್ನು ಕರ್ನಾಟಕದ ಜನತೆಯೆದುರು ಅನಾವರಣಗೊಳಿಸಿದರು. ಇದೂ ಸಾಲದೆಂಬಂತೆ  ಗೋವಾದ ಜಲಸಂಪನ್ಮೂಲ ಸಚಿವರಾದ ವಿನೋದ್ ಪಾಲಿಯೆಂಕರ್ ಎಂಬುವರು ದಿನಾಂಕ 27 -12-17 ರಂದು ಪಣಜಿಯಲ್ಲಿ ಹೇಳಿಕೆ ನೀಡಿ, ನಮ್ಮ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಯಡಿಯೂರಪ್ಪನವರಿಗೆ ಕಾಗದ ಬರೆದಿರುವುದು ಕೇವಲರಾಜಕೀಯ ಸ್ಟಂಟ್ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಆಗಸ್ಟ್ ವೇಳೆಗೆ ನ್ಯಾಯಮಂಡಳಿಯಿಂದ ತೀರ್ಪು ಹೊರ ಬೀೀಳುವುದರಿಂದ ನಾವು ಕರ್ನಾಟಕ ರಾಜ್ಯದ ಜೊತೆ ಮಹದಾಯಿ ನದಿ ನೀರಿನ ಕುರಿತಂತೆ ಯಾವುದೇ ಸಂಧಾನದ ಮಾತುಕತೆಗೆ ಸಿದ್ಧರಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಮುಂದಿನ ಮೇ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಧಾನ ಸಭೆಯ ಚುನಾವಣೆ ನಡೆಯಲಿದ್ದು ಶತಾಯ ಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಹೋರಾಡುತ್ತಿದ್ದ ಬಿ.ಜೆ.ಪಿ. ನಾಯಕರಿಗೆ  ಉತ್ತರ ಕರ್ನಾಟಕದ  ಜಿಲ್ಲೆಗಳಿಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಅನಂತಕುಮಾರ ಹೆಗ್ಡೆ ಎಂಬ ಅವಿವೇಕಿ ಕೇಂದ್ರ ಸಚಿವನೊಬ್ಬ ಸಂವಿಧಾನವನ್ನು ನಾವು ಬದಲಾಯಿಸುತ್ತೇವೆ ಎಂಬ ದುರಹಂಕಾರದ ಮಾತುಗಳನ್ನಾಡಿ ಕರ್ನಾಟಕ ಮಾತ್ರವಲ್ಲದೆ, ಭಾರತದ ಹಿಂದುಳಿದ ವರ್ಗ, ಹಿಂದುಳಿದ ಜಾತಿ ಹಾಗೂ ಇತರೆ ಜನರು ಬಿ.ಜೆ.ಪಿ. ಯಿಂದ ದೂರ ಸರಿಯುವಂತೆ ಮಾಡಿದ್ದಾನೆ. ಸಂಸತ್ತಿನ ಎರಡು ಸದನಗಳಲ್ಲಿ ವಿರೋಧ ಪಕ್ಷಗಳು ಆಡಳಿತಾರೂಡ ಬಿ.ಜೆ.ಪಿ. ಸರ್ಕಾರವನ್ನು ತರಟೆಗೆ ತೆಗೆದುಕೊಂಡಾಗ ಕ್ಷಮೆ ಯಾಚಿಸುವುದರ  ಮೂಲಕ ಈತ, ತನ್ನ ಕಾಲಿನ ಹೆಬ್ಬೆಟ್ಟನ್ನು ಬಾಯಿಗೆ ಹಾಕಿಕೊಂಡು ಕೂರಬೇಕಾಯಿತು. ಇಂತಹ ಕಳಂಕಿತ ಹಾಗೂ ಸಾರ್ವಜನಿಕವಾಗಿ  ಜನಪ್ರತಿನಿಧಿಗೆ ಇರಬೇಕಾದ ಕನಿಷ್ಠ ಪ್ರಜ್ಞೆಯಿಲ್ಲ ವ್ಯಕ್ತಿಗಳಿಂದಾಗಿ ಕನಾಟಕದಲ್ಲಿ ಬಿ.ಜೆ.ಪಿ. ಪಕ್ಷವು ತನ್ನ ಸಮಾಧಿಯನ್ನು ತಾನೇ ಮುಂಚಿತವಾಗಿ ಸಿದ್ಧಪಡಿಸಿಕೊಂಡಿದೆ.
(ಕರಾವಳಿ ಮುಂಜಾವು ದಿನಪತ್ರಿಕೆಗೆ ಬರೆದ “ ಜಗದಗಲ” ಅಂಕಣ ಬರಹ)



ಗುರುವಾರ, ಡಿಸೆಂಬರ್ 14, 2017

ತತ್ವ ಸಿದ್ಧಾಂತಗಳ ಮಸಣವಾದ ರಾಜಕೀಯ ರಂಗ


1992 ರ  ಡಿಸಂಬರ್ ಆರನೇ ದಿನಾಂಕದಂದು ಅಯೋಧ್ಯೆಯ ಬಾಬರಿ ಮಸೀದಿ ಪತನಗೊಂಡ ಘಟನೆ ಮತ್ತೆ ನೆನಪಾಯಿತು. ಏಕೆಂದರೆ, ಅಲ್ಲಿನ ಪ್ರಾರ್ಥನಾ ಮಂದಿರದ ಗೋಡೆಗಳು ಉರುಳಿ ಇಪ್ಪತ್ತೈದು ವರ್ಷಗಳಾದವು. ಅಲ್ಲಿ ಕೇವಲ ಮಂದಿರದ ಗೋಡೆಗಳು ಮಾತ್ರ ನೆಲಕ್ಕೆ ಉರುಳಲಿಲ್ಲ, ಅದರ ಜೊತೆಗೆ ಭಾರತದಂತಹ ಬಹುಸಂಸ್ಕತಿಯ ನೆಲದಲ್ಲಿ ಮನುಷ್ಯ-ಮನುಷ್ಯರ ನಡುವೆ ಅನೇಕ ಶತಮಾನಗಳಿಂದ ಬೆಳದಿದ್ದ ನಂಬಿಕೆಯ ಮತ್ತು  ಸೌರ್ಹದತೆಯ ಗೋಡೆಗಳೂ ಸಹ ಉರುಳಿಬಿದ್ದವು.
ಕಳೆದವಾರ ದೆಹಲಿಯ ಪ್ರೆಸ್ ಆಫ್ ಇಂಡಿಯಾ ಸಂಸ್ಥೆಯ ಆವರಣದಲ್ಲಿ ಬಾಬರಿ ಮಸೀದಿ ಧ್ವಂಸದ ಘಟನೆಗೆ ಸಾಕ್ಷಿಯಾಗಿದ್ದ ದೇಶದ ಹಿರಿಯ ಪತ್ರಕರ್ತರು ಒಟ್ಟಾಗಿ ಆ ದಿನ ಘಟನೆಯಲ್ಲಿ ಮಾಧ್ಯಮದ ಈ ತಲೆಮಾರಿನ ಪತ್ರಕರ್ತರಿಗೆ ವಿವರಿಸುತ್ತಿದ್ದರು. ಈ ಘಟನೆಯನ್ನು ಪ್ರಥಮಬಾರಿಗೆ ಬಿತ್ತರಿಸುವುದರ ಮೂಲಕ ಅಂದಿನ ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಮತ್ತು ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿ.ಜೆ.ಪಿ.ನೇತೃತ್ವದ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಇವರ ಮುಖವಾಡವನ್ನು ಕಳಚಿಹಾಕಿದ್ದ ಬಿ.ಬಿ.ಸಿ. ಸಂಸ್ಥೆಯ ಭಾರತದ ಮುಖ್ಯ ವರದಿಗಾರ ಮಾರ್ಕ್‍ಟುಲಿ ಕೂಡ ಇದ್ದರು.
ಅಯೋಧ್ಯೆಯಲ್ಲಿ ಮಂದಿರ ಧ್ವಂಸವಾದ ದಿನದಂದು ವೈಯಕ್ತಿಕವಾಗಿ  ನಾನು ಅನುಭವಿಸಿದ ತಳಮಳ ಹಾಗೂ ಮನಸ್ಸಿನೊಳಗೆ ನನ್ನಷ್ಟಕ್ಕೆ  ನಾನು ಮಾತನಾಡಿಕೊಂಡ ಮಾತುಗಳು ಇನ್ನೂ ಹಸಿ ಹಸಿಯಾಗಿವೆ. “ಇನ್ನೆಂದೂ ಈ ದೇಶದಲ್ಲಿ ಹಿಂದು-ಮುಸ್ಲಿಂ ಧರ್ಮಗಳ ನಡುವೆ ಸಾಮರಸ್ಯ ಅಥವಾ ಸೌಹಾರ್ಧತೆ ಸಾಧ್ಯವಿಲ್ಲ” ಎಂದುಕೊಂಡಿದ್ದೆ. ದುರಂತವೆಂದರೆ, ಅದು ನನ್ನ ಪಾಲಿಗೆ ನಿಜವಾಗುತ್ತಾ ಬಂದಿತು. ಕರ್ನಾಟಕ ಪ್ರಜ್ಞಾವಂತರ ಜಿಲ್ಲೆಗಳೆಂದು ಪರುಗಣಿಸಲ್ಪಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಘಟನೆಗಳನ್ನು ನೋಡುತ್ತಿರುವಾಗ ನಾವು ದ್ವೇಷವನ್ನು ಬಿತ್ತಿ ದ್ವೇಷದ ಫಸಲನ್ನು ತೆಗೆಯುತ್ತಿದ್ದೆವೆ ಎನಿಸಿತು. ವಿದ್ಯಾವಂತರ ಹಾಗೂ  ಪ್ರಜ್ಞಾವಂತ ನಾಗರೀಕರ ಇಂದಿನ ಭಾರತಕ್ಕಿಂತ ಅಂದಿನ ಅಶಿಕ್ಷಿತ ಮುಗ್ದಸಮಾಜದ ಭಾರತವು ಎಷ್ಟೋ ಉತ್ತಮವಾಗಿತ್ತು ಎಂದು  ಇತ್ತೀಚೆಗೆ ಅನಿಸತೊಡಗಿದೆ.
1992 ರಲ್ಲಿ ನಾನು ಪತ್ರಿಕೋದ್ಯಮ ತೊರೆದು ಊರಿನಲ್ಲಿ ವಾಸವಾಗಿದ್ದೆ. ಅದಕ್ಕೊಂದು ಪ್ರಭಲವಾದ ಕಾರಣವೂ ಇತ್ತು. ನಮ್ಮದು ಅವಿಭಕ್ತ ಬೇಸಾಯ ಕುಟುಂಬವಾದ್ದರಿಂದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಪತ್ನಿ ಆಗರ್ಭ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಾಗಿ, ನನ್ನನ್ನು ಇಷ್ಟಪಟ್ಟು  ಹದಿನಾಲ್ಕು ವರ್ಷಗಳ ಕಾಲ ಹೋರಾಟ ಮಾಡಡುವುದರೊಂದಿಗೆ ತನ್ನ ಕುಟುಂಬದವರನ್ನು ಒಪ್ಪಿಸಿ, 1989ರಲ್ಲಿ  ಕುವೆಂಪು ಮಂತ್ರ ಮಾಂಗಲ್ಯದ ಮೂಲಕ ನನ್ನನ್ನು ಕೈ ಹಿಡಿದು ನನ್ನ ಮನೆಯ ಹೊಸ್ತಿಲು ತುಳಿದಿದ್ದಳು. ನಮ್ಮ ಸಾಮಾನ್ಯ ರೈತ ಕುಟುಂಬದಲ್ಲಿ ಸೊಸೆಗೆ ತೊಂದರೆಯಾಗಬಾರದೆಂದು ತೀರ್ಮಾನಿಸಿದ್ದ ನನ್ನಪ್ಪ ನನಗೆ ಬೇರೆ ಮನೆ ಮಾಡಿಕೊಟ್ಟಿದ್ದರು. ನನ್ನ ಮನೆಯಲ್ಲಿ ಸ್ಥಿರ ದೂರವಾಣಿ, ಬಿ.ಪಿ.ಎಲ್, ಸ್ಯಾನ್ಯೊ ಎಂಬ ಟೇಪ್ ರೆಕಾರ್ಡರ್ ಹಾಗೂ ಆಗ ತಾನೆ ನನ್ನೂರಿಗೆ ಕೇವಲ್ ಜಾಲದ ಕಾಲಿಟ್ಟಿದ್ದ ಟಿ.ವಿ. ಸಂಪರ್ಕದಿಂದಾಗಿ ಕಪ್ಪು ಬಿಳುಪಿನ ಫಿಲಿಪ್ಸ್ ಕಂಪನಿಯ ಪುಟ್ಟದಾದ ಟಿ.ವಿ. ಹಾಗೂ ಪುಸ್ತಕ ಭಂಡಾರವನ್ನು ಇಟ್ಟುಕೊಂಡಿದ್ದೆ. ಕೇಬಲ್ ನಲ್ಲಿ ಹೆಚ್ಚು ಛಾನಲ್ ಗಳು ಇರದಿದ್ದ ಕಾರಣ ದೂರದರ್ಶನ, ಕಾರ್ಟೂನ್ ನೆಟ್‍ವರ್ಕ್, ನ್ಯಾಷನಲ್ ಜಿಯಾಗ್ರಪಿ, ಡಿಸ್ಕವರಿ ಮತ್ತು ಬಿ.ಬಿ.ಸಿ ಛಾನಲ್‍ಗಳು ಮಾತ್ರ ದೊರೆಯುತ್ತಿದ್ದವು.

1992 ರ ಡಿಸಂಬರ್ ನಾಲ್ಕರಂದು ಭಾರತೀಯ ಜನತಾ ಪಕ್ಷದ ನಾಯಕರಾದ ಎಲ್.ಕೆ.ಅಧ್ವಾನಿ, ಮುರಳಿಮನೋಹರ ಜೋಷಿ, ಉಮಾ ಭಾರತಿ ನೇತೃತ್ವದಲ್ಲಿ ನೆರೆಯ ರಾಜ್ಯಗಳಿಂದ ಅಯೋಧ್ಯೆಗೆ ಆಗಮಿಸಿದ್ದ ಸಾವಿರಾರು ಕರಸೇವಕರಿಂದ ಮಸೀದಿ ಧ್ವಂಸವಾಗುವ ಎಲ್ಲಾ ಸೂಚನೆಗಳು ದೊರೆತಿದ್ದವು. ಆಗಿನ ಕಾಂಗ್ರೇಸ್ ನಾಯಕರಾದ ಅರ್ಜುನ್ ಸಿಂಗ್ ಕೂಡ ಇದೇ ಸಂಶಯವನ್ನು ವ್ಯಕ್ತ ಪಡಿಸಿದ್ದರು. ( ಅವರು ಕೇಂದ್ರ ಗೃಹ ಸಚಿವರಾಗಿದ್ದರೆಂದು ನೆನಪು) ಆದರೆ, ಮಹಾ ಮೌನಕ್ಕೆ ಹೆಸರಾಗಿದ್ದ ಪ್ರಧಾನಿ ಪಿ.ವಿ.ನರಸಿಂಹರಾವ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಣ್ ಅವರ ಮಾತನ್ನು ನಂಬಿ ಮೌನಕ್ಕೆ ಶರಣಾದರು. ಅವರ ನಡುವಳಿಕೆ ಮಸೀದಿ ಧ್ವಂಸಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತಿತ್ತು. ಕೇಂದ್ರ ಸರ್ಕಾರವು  ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ನಿಷ್ಕ್ರಿಯಗೊಂಡಿದ್ದ ಕಾರಣದಿಂದ ಡಿಸಂಬರ್ 6 ರಂದು ಬಿ.ಜೆ.ಪಿ. ನಾಯಕರ ಕಣ್ಣೆದುರು ಪ್ರಾರ್ಥನಾ ಮಂದಿರದ ಸುತ್ತ ಹಾಕಲಾಗಿದ್ದ ರಕ್ಷಣಾ ಬೇಲಿಯನ್ನು ಕಿತ್ತು ಹಾಕಿದ ಕರಸೇವಕರು ಮಧ್ಯಾಹ್ನದ ವೇಳೆಗೆ ಮಸೀದಿಯ ಕಟ್ಟಡವನ್ನು ಸುತ್ತುವರಿದು ಸಂಜೆ ನಾಲ್ಕು ಗಂಟೆಯೊಳಗೆ ದ್ವಂಸಗೊಳಿಸಿದರು. ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಛಾಯಾಗ್ರಾಹಕರನ್ನು ಮತ್ತು ಪತ್ರಕರ್ತರನ್ನು ಪುರುಷ-ಮಹಿಳೆ ಎಂಬ ಬೇಧ ಭಾವವಿಲ್ಲದೆ ಮನ ಬಂದಂತೆ ಥಳಿಸಿದರು. ಅಯೋಧ್ಯೆಯಲ್ಲಿ ಏನೋ ದುರಂತ ಘಟನೆ ಸಂಭವಿಸುತ್ತಿದೆ ಎಂದು ಭಾರತದ ನಾಗರೀಕರಿಗೆ ಸುಳಿವು ದೊರೆತಿದ್ದರೂ ಸಹ ಕೇಂದ್ರ ಸರ್ಕಾರದ ಸ್ವಾಮ್ಯದ ಆಕಾಶವಾಣಿ ಮತ್ತು ದೂರದರ್ಶನಗಳು ವಿಷಯವನ್ನು ಮುಚ್ಚಿಟ್ಟು ಕಥೆ ಹೇಳತೊಡಗಿದ್ದವು. ಆದರೆ ಸಂಜೆ 5 ಗಂಟೆ ವೇಳೆಗೆ ಬಿ.ಬಿ.ಸಿ. ಛಾನಲ್ ಮಸೀದಿ ಧ್ವಂಸವಾಗುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿ ಭಾರತದ ದುರಂತದ ಕಥೆಯನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಆ ಘಟನೆಯ ಕುರಿತು ಬಿ.ಬಿ.ಸಿ.ಛಾನಲ್ ಗೆ ವರದಿ ನೀಡುತ್ತಿದ್ದ ಮುಖ್ಯವರದಿಗಾರರಾಗಿದ್ದ ಮಾರ್ಕ್‍ಟುಲಿಯವರು “ ಈ ದಿನ ಉತ್ತರ ಪ್ರದೇಶದ ಅಯೋಧ್ಯೆ ಎಂಬ ಧಾರ್ಮಿಕ ಸ್ಥಳದಲ್ಲಿ ಬಾಬರಿ ಮಸೀದಿ ಧ್ವಂಸಗೊಳ್ಳುವುದರ ಜೊತೆಗೆ ಬಹುಮುಖಿ ಭಾರತದ ಆತ್ಮವು ಸಹ ಕುಸಿದು ಬಿದ್ದಿತು” ಎಂದು ಆಡಿದ ಮಾತುಗಳು ಈಗಲೂ ನನ್ನ ಕಿವಿಯೊಳಗೆ ಅನುರಣಿಸುತ್ತಿವೆ.
ಮಸೀದಿ ಧ್ವಂಸದ ದೃಶ್ಯಗಳನ್ನು ನೋಡಿ ದಿಗ್ಭ್ರಾಂತನಾದ ನಾನು ನನ್ನ ಎರಡೂವರೆ ವರ್ಷದ ಮಗನನ್ನು ಎತ್ತಿಕೊಂಡು ಬಂದು ಮನೆಯ ಮುಂಬಾಗಿಲಿನ ಮೆಟ್ಟಿನ ಮೇಲೆ ತೊಡೆಯ ಮೇಲೆ ಕೂರಿಸಿಕೊಂಡು  ಕುಳಿತಿದ್ದೆ. ಆಗ ಸಂಜೆ ಆರೂವರೆ ಸಮಯ. ಅದು ಡಿಸಂಬರಿನ ಚಳಿಗಾಲವಾದ್ದರಿಂದ ಬೇಗನೆ ಕತ್ತಲು ಆವರಿಸಿಕೊಳ್ಳುತ್ತಿತ್ತು.  ಆಗತಾನೆ ಗದ್ದೆಯ ಕೂಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬರುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣ ಗುದ್ದಲಿಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ನಿಧಾನವಾಗಿ ಕಾಲೆಳೆಯುತ್ತಾ ಬರುತ್ತಿದ್ದ. ಮನೆ ಬಾಗಿಲ ಬಂದವನು ನನ್ನನ್ನು ಉದ್ದೇಶಿಸಿ “ ಜಗಣ್ಣಾ ಸಂತೆ ಮೈದಾನದಲ್ಲಿ ಜನ ಗುಂಪು ಸೇರಿ ಏನೇನೊ ಮಾತನಾಡ್ತಾ ಅವ್ರೆ, ಮಸೀದಿ ಬಿದ್ದೋಯ್ತುಂತೆ ಅಂತಾ ನಿಜವಾ?” ಎಂದು ಕೇಳಿದ. ಅವನಿಗೆ ಅವನಿಗೆ ಅಯೋಧ್ಯೆಯ ಹಳೆಯ ಮಸೀದಿಯೊಂದನ್ನು ಕೆಡವಿ ಹಾಕಿದ ವಿಷಯ ತಿಳಿಸಿದೆ. “ ಬುಡಣ್ಣಾ, ದೇವರು ಇರುವ ನಮ್ಮೂರು ಮಸೀದಿಗೆ ನಾನು ಒಂದು ದಿನಾನೂ ಹೋಗ್ಲಿಲ್ಲ, ಇನ್ನು ದೇವರಿಲ್ಲದ ಮಸೀದಿ ಕೆಡವಿದ್ರೆ ನಾನ್ಯಾಕೆ ತಲೆ ಕೆಡಿಸಿಕೊಳ್ಳಬೇಕು?” ಎನ್ನುತ್ತಾ ಸಂತನೊಬ್ಬ ಆಡುವಂತಹ ಮಾತನ್ನು ನನ್ನ ಮುಂದೆ ಬಿಸಾಡಿ, ಏನೂ ಆಗದವನಂತೆ ನಡೆದು ಹೋದ. ನಾನು ಬೆಳೆದು ಬುದ್ದಿ ಕಂಡ ದಿನಗಳಿಂದಲೂ ಕೂಲಿ ಮಾಡಿ ಬದುಕುತ್ತಿದ್ದ ನನ್ನೂರಿನ ಅನಕ್ಷರಸ್ತ ವಜೀರಣ್ಣನಿಗೆ ( ವಜೀರ್ ಸಾಬ್) ಇದ್ದ ಪ್ರಜ್ಞೆ ನಮ್ಮ ಹಿಂದೂ ದೇಶ ಭಕ್ತರಿಗೆ ಇದ್ದಿದ್ದರೆ, ಈ ದೇಶ ಮತ್ತು ಈ ಜಗತ್ತು ಇಂದು ಭಯೋತ್ಪಾದನೆಯ ಹೆಸರಿನ ರಕ್ತದೋಕುಳಿಯಲ್ಲಿ ಮೀಯಬೇಕಾದ ಪ್ರಸಂಗ ಉದ್ಭವವಾಗುತ್ತಿರಲಿಲ್ಲ ಎಂದು ಆ ಕ್ಷಣದಲ್ಲಿ ಅನಿಸತೊಡಗಿತು.

ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಜನರನ್ನು ಉನ್ಮಾದಗೊಳಿಸುವುದು ಸುಲಭ. ಆದರೆ, ಅದೇ ಉನ್ಮಾದವನ್ನು ಅಥವಾ ಆವೇಶವನ್ನು ಸದಾ ಕಾಯಿಟ್ಟುಕೊಳ್ಳುವುದು ಕಷ್ಟ. ಜನರ ತಲೆಗೇರಿಸಿದ ಅಮಲು ಇಳಿಯದಂತೆ ಸದಾ ಸುಳ್ಳಿನ ಸರಮಾಲೆಯನ್ನು ಹೆಣೆಯಬೇಕಾಗುತ್ತದೆ. ಈಗ ಐವತ್ತಾರು ಇಂಚು ಎದೆಯಳತೆಯ ಪ್ರಧಾನಿ ನರೇಂದ್ರಮೋದಿಯವರು ಮಾಡುತ್ತಿರುವುದು  ಇದೇ ಕೆಲಸವಲ್ಲದೆ ಬೇರೇನಲ್ಲ. ಅವರ ಸಚಿವ ಸಂಪುಟದ ಸಹೋದ್ಯೋಗಿ ಅನಂತ ಕುಮಾರ ಹೆಗ್ಡೆ ಎಂಬ ಕೇಂದ್ರ ಸಚಿವ ಕೂಡ ತನ್ನ ನಾಲಿಗೆ ಮೇಲಿನ ಹಿಡಿತ ಕಳೆದುಕೊಂಡಿದ್ದಾರೆ. ಒಬ್ಬ ಅವಿವೇಕಿ ಮನುಷ್ಯನಂತೆ ಬೆಂಕಿಯುಗುಳುವುದರ ಮೂಲಕ ತಾನು ಹೋದ ಕಡೆ ಬೆಂಕಿ ಹಚ್ಚುವ ಕೆಲಸದಲ್ಲಿ ನಿರತನಾಗಿದ್ದಾರೆ. ಒಬ್ಬ ಜನಪ್ರತಿನಿಧಿಯ ಸಾರ್ವಜನಿಕ ಬದುಕಿಗೆ ಇರಬೇಕಾದ  ಸಂಯಮವಾಗಲಿ, ಲಜ್ಜೆಯಾಗಲಿ ಇದ್ದಂತಿಲ್ಲ. ಇಂತಹ ವ್ಯಕ್ತಿಯನ್ನು  ಜಾತಿ ಅಥವಾ ಧರ್ಮದ ಕಾರಣಕ್ಕಾಗಿ ನಿರಂತರವಾಗಿ ಸಂಸದನಾಗಿ ಆಯ್ಕೆ ಮಾಡಿಕೊಳಿಸುತ್ತಿರುವ ಕೆನರಾ ಕ್ಷೇತ್ರದ ಮತದಾರರು ಒಮ್ಮೆ ತಮ್ಮ ಆತ್ಮಸಾಕ್ಷಿಯನ್ನು ಪರೀಕ್ಷಿಸಿಕೊಳ್ಳುವುದು ಒಳಿತು.
ಇದು ಕೇವಲ ಅನಂತಕುಮಾರ ಹೆಗ್ಡೆ ಗೆ ಮಾತ್ರ ಸೀಮಿತವಾದ ಮಾತಲ್ಲ, ಬಿ.ಜೆ.ಪಿ. ಯಡಿಯೂರಪ್ಪ, ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ, ಕಾಂಗ್ರೆಸ್ ಪಕ್ಷದ ವಿ.ಎಸ್.ಉಗ್ರಪ್ಪ, ಹೆಚ್.ಆಂಜನೇಯ, ಮಾಲಿಕಯ್ಯ ಗುತ್ತೆದಾರ್,  ಜಿ.ಡಿ.ಎಸ್. ಪಕ್ಷದ ಹೆಚ್.ಡಿ.ಕುಮಾರಸ್ವಾಮಿ, ಮಾಗಡಿ ಕ್ಷೇತ್ರದ ಶಾಸಕ ಬಾಲಕೃಷ್ಣ , ಜಮೀರ್ ಅಹಮ್ಮದ್ ಇವರಿಗೂ ಸಹ ಅನ್ವಯವಾಗುತ್ತದೆ.
ತತ್ವ ಸಿದ್ಧಾಂತಗಳ ನೆಲೆಯಿಲ್ಲದ ಅಧಿಕಾರವು ಮಂಜಿನ ಅರಮನೆ ಎಂಬುದನ್ನು  ರಾಜಕೀಯ ಪಕ್ಷಗಳು ಮತ್ತು ಅವುಗಳ ನೇತಾರರು  ಅರಿಯಬೇಕು. ಖಾಲಿಯಾದ ಕೊಡಗಳು ಹೆಚ್ಚು ಸದ್ದು ಮಾಡುತ್ತವೆ ಎನ್ನುವ ಹಾಗೆ ಇವರಾಡುವ ಮಾತುಗಳು ಇವರೊಳಗಿನ ಖಾಲಿತನವನ್ನು ತೋರುತ್ತಿವೆ. ಇಂತಹವರನ್ನು ನಿಯಂತ್ರಣದಲ್ಲಿಡಬೇಕಾದ ಮಾಧ್ಯಮಗಳು ನಿಶ್ಯಕ್ತಗೊಂಡಿದ್ದರೆ, ಕಿವಿ ಹಿಂಡಿ ಬುದ್ದಿ ಹೇಳಬೇಕಾದ ಲೇಖಕರು, ಚಿಂತಕರು ಮತ್ತು ಬುದ್ದಿಜೀವಿಗಳು ಎಂದು ಸಾರ್ವಜನಿಕವಾಗಿ ಆರೋಪ ಹೊತ್ತವರು ಆಳುವವರ ಆಸ್ಥಾನದಲ್ಲಿ ನಿದ್ದೆ ಹೋಗಿದ್ದಾರೆ. ಇಂದು ಮಂಗಳೂರು, ಹೊನ್ನಾವರ, ಕುಮಟಾ, ಶಿರಸಿ ನಗರಕ್ಕೆ ಬೆಚ್ಚಿ ಹಚ್ಚಲಾಗಿದೆ. ನಾಳೆ ಯಾವ ಊರಿಗೆ? ಯಾವ ಪಟ್ಟಣಕ್ಕೆ?  ಯಾರಿಗೂ ಗೊತ್ತಿಲ್ಲ.  ತತ್ವ ಮತ್ತು ಸಿದ್ಧಾಂತಗಳಿಲ್ಲದ ರಾಜಕೀಯ ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಲ್ಲದು? ಎಂಬುದನ್ನು ನೆನದರೆ ಭಯವಾಗುತ್ತದೆ.


ಗುರುವಾರ, ನವೆಂಬರ್ 30, 2017

ದೇಶ ಭಕ್ತರ ದಶಾವತಾರಗಳು ಮತ್ತು ಸಾಧು ಸಂತರ ಸೋಗಲಾಡಿತನಗಳು




ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆ
ಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದು
ಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಅಂಗಡಿ ಮುಂಗಟ್ಟಿನೂಡಿ ವ್ಯಂಗ್ಯ ಮಾತುಗಳನ್ನಾಡಿ
ಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.
ಸನ್ಯಾಸಿ, ಜಂಗಮ, ಜೋಗಿ, ಜಟ್ಟಿ, ಮೊಂಡಭೈರಾಗಿಯ
ನಾನಾ ವೇಷಗಳೆಲ್ಲಾ ಹೊಟ್ಟೆಗಾಗಿ  ಗೇಣು ಬಟ್ಟೆಗಾಗಿ
                -ಕನಕದಾಸರು
ಕಳೆದ ನಾಲ್ಕು ದಶಕಗಳ ನನ್ನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೇಳರಿಯದ ಮಾತುಗಳನ್ನು ಕಳೆದ ಒಂದು ತಿಂಗಳಿನಿಂದ ದೇಶದಲ್ಲಿ ಕೇಳುತ್ತಿರುವ ಹಿನ್ನಲೆಯಲ್ಲಿ ಹಾಗೂ ಅವರ ಆವೇಶ ಭರಿತ ಮಾತುಗಳು ಮತ್ತು ವರ್ತನೆಯನ್ನು ನೋಡುತ್ತಿರುವಾಗ ನನಗೆ ಕನಕದಾಸರ ಮೇಲಿನ ಕೀರ್ತನೆಯೊಂದು ನೆನಪಾಯಿತು. ಹಿಂದೂ ಧರ್ಮದ ಗುತ್ತಿಗೆ ಹಿಡಿದಂತೆ ಮಾತನಾಡುವ ದೇಶಭಕ್ತರೆಂಬ ಸಾಂಸ್ಕøತಿಕ ಗೂಂಡಗಳು, ರಾಜಕೀಯ ಮುಖವಾಡ ತೊಟ್ಟ ರೌಡಿಗಳು, ಖಾವಿ ತೊಟ್ಟು ಕೊಲ್ಲುವ, ಕಡಿಯುವ ಮಾತನಾಡುತ್ತಿರುವ ನೀಚರು ಇತ್ತೀಚೆಗೆ ದೇಶದ ಸಂವಿಧಾನವನ್ನು ಪುನರ್ರಚನೆ ಮಾಡುವ ಕುರಿತು ಆಲೋಚಿಸುತ್ತಿದ್ದಾರೆಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ್ಯದರಿಂದ ಹಿಡಿದು; ದೇಶದ ಧರ್ಮ ಮತ್ತು ಸಂಸ್ಕøತಿ ಕುರಿತು ಮಾತನಾಡತೊಡಗಿದ್ದಾರೆ. ಬಹುತ್ವದ ಭಾರತದ ಮೂಲಗುಣವಾದದಯವೇ ಧರ್ಮದ ಮೂಲವಯ್ಯಎಂಬುದಾಗಿದೆ. ಇದು ಅಲಿಖಿತ ಕಾನೂನಿನಂತೆ ಎಲ್ಲರ ಎದೆಯೊಳಗೆ ಗುಪ್ತಗಾಮಿಯಾಗಿ ಹರಿದ ಮಾನವಧರ್ಮದ ಜೀವನದಿಯಾಗಿರುವುದನ್ನು ಅವಿವೇಕಿಗಳು ಮರೆತಿದ್ದಾರೆ. ಜೊತೆಗೆ ದೇಶಕ್ಕೊಂದು ಸಂವಿಧಾನ, ಸರ್ವೋಚ್ಛ ನ್ಯಾಯಾಲಯವಿದ್ದು ಇವೆಲ್ಲವೆನ್ನು ಮೀರಿದ ಅತೀತರಂತೆ ಇವರು ವರ್ತಿಸತೊಡಗಿದ್ದಾರೆ. ಮಂದಿರ ವಿವಾದ ಸುಪ್ರೀಕೋರ್ಟ್ ಅಂಗಳದಲ್ಲಿರುವಾಗ, ರಾಮಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ ಎನ್ನುವ ಇವರ ಮಾತುಗಳು ದೇಶವನ್ನು ಎತ್ತ ಕೊಂಡೊಯ್ಯುತ್ತಿವೆ ಎಂಬುದರ ಕುರಿತು ನಾವೀಗ ಯೋಚಿಸಬೇಕಿದೆ.
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಖಾವಿ ಮತ್ತು ಖಾದಿಗಳ ನಡುವೆ ಇದ್ದ ಗಡಿರೇಖೆ ಈಗ ಸಂಪೂರ್ಣ ಅಳಿಸಿಹೋಗಿದೆ. ಖಾವಿ ತೊಟ್ಟವರು ದೇಶವನ್ನಾಳುವ ಮಾತುಗಳನ್ನಾಡುತ್ತಿದ್ದಾರೆ, ಖಾದಿಯ ವೇಷ ತೊಟ್ಟವರು ಧರ್ಮವನ್ನಾಳುವ ಮಾತನಾಡುತ್ತಿದ್ದಾರೆ. ದೇವರು, ಧರ್ಮ, ಜಾತಿ ಇವುಗಳ ನೆಲೆಗಳಾಚೆ ಭಾರತದಲ್ಲಿ ಬಹುದೊಡ್ಡ ಆಧ್ಯಾತ್ಮ, ಅನುಭಾವದ ಜಗತ್ತೊಂದು ಅಸ್ತಿತ್ವದಲ್ಲಿದ್ದು ಅದು ಈಗಲೂ ಇಲ್ಲಿನ ಸಮುದಾಯಗಳನ್ನು ಮಾನವ ಧರ್ಮದ ಪರಿಕಲ್ಪನೆಯಡಿ ಮುನ್ನಡೆಸಿಕೊಂಡು ಹೋಗುತ್ತಿದೆ ಎಂಬುದನ್ನು ಅಜ್ಞಾನಿಗಳು ಮರೆತಿದ್ದಾರೆ. ಉದ್ಧತಟನದ ಮಾತನ್ನಾಡುತ್ತಿರುವ ಇಂತಹವರನ್ನು ಪ್ರಶ್ನಿಸಿದೆ, ಇವರಾಡುವ ಮಾತುಗಳನ್ನು ನಮ್ಮ ಮಾಧ್ಯಮಗಳು ಗಿಳಿಪಾಠದಂತೆ ಒಪ್ಪಿಸುತ್ತಿವೆ.
ಸಂದರ್ಭದಲ್ಲಿ ನಾಡಿನ ಹಿರಿಯ ಕಾದಂಬರಿಗಾರರಲ್ಲಿ ಒಬ್ಬರಾಗಿರುವ ರಾಘವೇಂದ್ರಪಾಟೀಲರುಸಮಾಹಿತಎಂಬ ಸಾಹಿತ್ಯ ದ್ವೈಮಾಸಿಕ ಪತ್ರಿಕೆಯಲ್ಲಿ ಸಂಪಾದಕೀಯ ಮಾತುಗಳ ರೂಪದಲ್ಲಿ ಬಹಳ ತೂಕದ ಮಾತುಗಳನ್ನು ಬರೆದಿದ್ದಾರೆ. ಅವುಗಳು ನೆಲದ ಎಲ್ಲರ ಅಂತರಂಗಕ್ಕೆ ತಟ್ಟುವಂತಿವೆ ಜೊತೆಗೆ ನಮ್ಮ ಆತ್ಮಸಾಕ್ಷಿಯನ್ನು ಕೆಣಕುವಂತಿವೆ. ರಾಘವೇಂದ್ರ ಪಾಟೀಲು ಹೀಗೆ ಬರೆಯುತ್ತಾರೆ. “ ಸಮಾಜವನ್ನು ಮಾನುಷ ಧರ್ಮದ- ಲೌಕಿಕ ಅಧ್ಯಾತ್ಮಗಳು ಒಂದನ್ನೊಂದು ಕಳೆದುಕೊಳ್ಳದಂತಹ ದಾರಿಯಲ್ಲಿ ಮುನ್ನೆಡೆಸಬೇಕಾದ  ಮಠಗಳೆಂಬ ಧಾರ್ಮಿಕ ಸಂಸ್ಥೆಗಳು ಇಂದು ರಕ್ತಪಾತದ ಮಾತುಗಳನ್ನಾಡುತ್ತಿವೆ. ಮತ್ತೊಂದು ನಂಬಿಕೆಯ ಬಗೆಗೆ ಆಡಬಾರದ ಅಸಾಂಸ್ಕತಿಕ ಮಾತುಗಳನ್ನು ಉಗ್ಗಡಿಸುತ್ತಿವೆ. ನಮ್ಮ ವಾದಗಳನ್ನು ಪ್ರತಿಪಾದಿಸಲು ನಾವು ಬಳಸುವ ಭಾಷೆ ಮತ್ತು ತರ್ಕ ಇತ್ಯಾತ್ಮಕತೆಗಳನ್ನು ಆಧರಿಸುವ ಬದಲು ನ್ಭೆತ್ಯಾತ್ಮಕತೆಯನ್ನೇ ನಂಬಿಕೊಳ್ಳುತ್ತಿರುವುದು ಅತ್ಯಂತ ಅಘಾತಕಾರಿಯಾದ ಸಂಗತಿಯಾಗಿದೆ. ನಮ್ಮ ನಂಬಿಕೆಯ ಹಿನ್ನಲೆಯಲ್ಲಿ ಇಂತಿಂತಹ ವಾಸ್ತವಗಳಿವೆ ಎಂದು ಹೇಳುವುದು ಉಚಿತವಾದ ಸಂಗತಿಯಾಗಿದೆ. ಬಗೆಗಿನ ಕುರಿತು  ತಮ್ಮ ಸಂದೇಹ, ಸಂಶಯಗಳನ್ನು ಹೇಳಲಿ, ಚರ್ಚೆ ನಡೆಯಬೇಕಾದ್ದು ರೀತಿಯಲ್ಲಿ. ಭಾರತೀಯ ಆಧುನಿಕ ಸಮಾಜವು ಧರ್ಮ ಎಂಬ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿಕೃತಗೊಳಿಸಿಬಿಟ್ಟಿದೆ. ಭಾರತೀಯ ನಂಬಿಕೆಯಂತೆ ಧರ್ಮ ಎನ್ನುವುದು ಅತ್ಯನ್ನತ ಆದರ್ಶದ ನೆಲೆಯಲ್ಲಿ, ಮಾನಸ ಲೋಕದ, ಅಂತಃಕರಣದ ಸ್ಥಿತಿ.ಬಿದ್ದವರನ್ನು ಎತ್ತಿನಿಲ್ಲಿಸುವ, ನಡೆಯ ಕಲಿಸುವ ಎಲ್ಲರನ್ನೂ ಅಪ್ಪಿಕೊಳ್ಳುವ ಮಾನಸಿಕ ಸ್ಥಿತಿಯ ನಿರೂಪಣೆ ಅದು.’

ರಾಘವೇಂದ್ರ ಪಾಟೀಲರ ಮೇಲಿನ ಮಾತುಗಳನ್ನು ಆಧಾರವಾಗಿ ಇಟ್ಟುಕೊಂಡು, ಚಿತ್ರ ನಟಿಯೊಬ್ಬಳ ಮೂಗು ಕತ್ತರಿಸಿದವರಿಗೆ ಅಥವಾ ನಿರ್ದೇಶಕನ ತಲೆ ಕಡಿದವರಿಗೆ ಕೋಟಿ ಗಟ್ಟಲೆ ಬಹುಮಾನ ಘೋಷಿಸುವ ಹರ್ಯಾಣದ ಬಿ.ಜೆ.ಪಿ. ಮುಖ್ಯಸ್ಥನ ಮಾತುಗಳಾಗಲಿ, ನರೇಂದ್ರ ಮೋದಿಯವರ ವಿರುದ್ಧ ಮಾತನಾಡಿದವರಿಗೆ ಅಥವಾ ಕೈ ಎತ್ತಿದವರಿಗೆ ಕೈ ಕತ್ತರಿಸುತ್ತೇವೆ ಎನ್ನುವ ಮಾತುಗಳಾಗಲಿ ಹಾಗೂ ನನ್ನ ತಂದೆಯ ಜೀವಕ್ಕೆ ಅಪಾಯವಾದರೆ ನರೇಂದ್ರ  ಮೋದಿಯವರ ಚರ್ಮ ಸುಲಿಯುತ್ತೇನೆ ಎನ್ನುವ ಲಾಲು ಪ್ರಸಾದ್ ಯಾದವ್ ಪುತ್ರನ ಆಕ್ರೋಶಭರಿತ ಅವಿವೇಕದ ಮಾತುಗಳನ್ನು ಯಾವ ನೆಲೆಯಲ್ಲಿ ನಾವು ಗ್ರಹಿಸಬೇಕುಭಾರತದ ಹಿಂದೂ ಧರ್ಮ ಮತ್ತು ಸಂಸ್ಸøತಿಯ ರಕ್ಷಣೆಗೆ ಕಟಿಬದ್ಧರಾಗಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಅಥವಾ ಅವುಗಳ ನೇತಾರರಿಗೆ ಇವುಗಳು ಶೋಭೆ ತರುವಂತಹ ಮಾತುಗಳಲ್ಲ. ಇನ್ನು ಖಾವಿ ತೊಟ್ಟು ಅನ್ಯಧರ್ಮಗಳ ಮೇಲೆ ಕತ್ತಿ ಜಳಪಿಸುವ, ತಲೆಕಡಿಯುವ ಅಸಂಸ್ಕø ಮಾತಗಳನ್ನಾಡುವ ಸಾಧು- ಸಂತರೆಂಬ ಮತಿಹೀನರು ಧರ್ಮ ಸಂಸದ್ ಎಂಬ ತುಂಬಿದ ಸಭೆಯಲ್ಲಿ ಮಾತನಾಡುವಾಗ ಅಂತಹವರ ಕಿವಿ ಹಿಂಡಲಾರದೆ, ತಮ್ಮ ನವರಂದ್ರಗಳನ್ನು ಮುಚ್ಚಿಕೊಂಡು, ಕಿವುಡರಂತೆ, ಕುರುಡರಂತೆ ಕುಳಿತು ಸಾಕ್ಷಿಯಾದ ನಮ್ಮ ಧರ್ಮಧಿಕಾರಿಗಳು ಹಾಗೂ  ಮಠ-ಮಾನ್ಯಗಳ ಮುಖ್ಯಸ್ಥರು ಮತ್ತು ಮಠಾಧೀಶರು ಒಮ್ಮೆ ತಮ್ಮ ಅಂತರಂಗವನ್ನು ತೆರೆದುಕೊಂಡು ತಮ್ಮೊಳಗೆ ಮನೆ ಮಾಡಿರುವುದು  ದೆವ್ವವೊ? ಅಥವಾ ದೇವರೊ? ಎಂದು ಪರೀಕ್ಷಿಸಿಕೊಳ್ಳುವುದು ಒಳಿತು. ಇಂತಹ ಎಡಬಿಡಂಗಿಯ, ಆತ್ಮವಂಚನೆಯ ಧಾರ್ಮಿಕ ಮುಖಂಡರಿಗೋಸ್ಕರ ನನ್ನ ಮಿತ್ರ ನಟರಾಜ ಬೂದಾಳರು ಸಂಪಾದಿಸಿರುವ ತತ್ವ ಪದಕಾರರ ಕೃತಿಗಳಲ್ಲಿ ಒಬ್ಬ ಅಜ್ಞಾತ ತತ್ವ ಪದಕಾರ ಹಾಡಿರುವ ಕೆಳಗಿನ ಪದವನ್ನು ನಾವೆಲ್ಲರೂ ಸೇರಿ ಮಠಾಧೀಶರಿಗೆ  ತಲುಪಿಸಬೇಕಿದೆ.
ಬಲ್ಲರೆ ಯೋಗಿಯಾಗಿ; ಇನಿ
ತಿಲ್ಲದಿದ್ದರೆ ಭೋಗಿಯಾಗಿರಯ್ಯ.
ಎವೆಯಲುಗದೆ ಲಿಂಗವ ನೋಡಿ; ನೋಡದಿರೆ
ನವಯವ್ವನೆಯ ಭಾವವಿರಲಿ ತವೆಯದೆ.
ಶಿವ ಮಂತ್ರವ ಕೇಳಿ; ಕೇಳದಿರೆ
ನವರಸ ಲಲ್ಲೆದೈನ್ಯವ ಕೇಳಿರಯ್ಯ.
ಅಲಸದೆ ಲಿಂಗಪೂಜೆಯ ಮಾಡಿ; ಇಲ್ಲದಿದ್ದರೆ
ಮೊಲೆಯ ಮೇಲಣ ಕೈಯ ತೆಗೆಯದಿರಿ.
ಒಲಿದೊಲಿದು ಲಿಂಗ ಪ್ರಸಾದವ ಕೊಳ್ಳಿ; ಕೊಳ್ಳದಿರೆ
ಚೆಲ್ವೆ ಚೆಂದುಟಿಯಾಮೃತ್ವವನ್ನುಣ್ಣಿರಯ್ಯಾ.
ತತ್ವ ಪದವು ಇಂದಿನ ಭಾರತದ ನೀತಿಗೆಟ್ಟ ದೇಶ ಭಕ್ತರಿಗೆ ಮತ್ತು ಸೋಗಲಾಡಿತನದ ಸಾದು-ಸಂತರು ಹಾಗೂ ಮಠಾಧಿಶರಿಗಾಗಿ ಬರೆದ ನಾಡಗೀತೆಯಂತಿದೆ.

( ಕರಾವಳಿ ಮುಂಜಾವು ಪತ್ರಿಕೆಯ “ ಜಗದಗಲಅಂಕಣ ಬರಹ)