ಭಾನುವಾರ, ಜೂನ್ 28, 2015

ಗಾಂಧೀಜಿ ಮತ್ತು ಚಾರ್ಲಿ ಚಾಪ್ಲಿನ್ ಐತಿಹಾಸಿಕ ಬೇಟಿಯ ನೆನಪುಗಳು



ಚಾರ್ಲಿ ಚಾಪ್ಲಿನ್ ಜಾಗತಿಕ ಸಿನಿಮಾ ಲೋಕ ಕಂಡ ಒಂದು ಅದ್ಭುತ ಪ್ರತಿಭೆ. ಕಿತ್ತು ತಿನ್ನುವ ಬಡತನ ಮತ್ತು ಹಸಿವುಗಳ ನಡುವೆ ತನ್ನೊಳಗಿನ ಒಡಲ ಸಂಕಟ ಮತ್ತು ನೋವುಗಳನ್ನು ಅಭಿನಯದ ಮೂಲಕ ಅಭಿವ್ಯಕ್ತಿಗೊಳಿಸಿ ಜಾಗತಿಕ ಮನ್ನಣೆ ಗಳಿಸಿದ ಅಭಿಜಾತ ಪ್ರತಿಭೆ. ದೊಗಳೆ ಪ್ಯಾಂಟು, ಹರಿದ ಕೋಟು, ಬೋಗುಣಿ ಆಕಾರದ ಹ್ಯಾಟ್, ಪಾದರಸದಂತೆ ಹಿಂದೆ ಮುಂದಕ್ಕೆ ಚಲಿಸುವ ಕಾಲುಗಳು, ಹಿಟ್ಲರ್ ಮೀಸೆ ಹಾಗೂ ವಾಕಿಂಗ್ ಸ್ಟಿಕ್ ಇವುಗಳು ಚಾರ್ಲಿ ಚಾಪ್ಲಿನ್ ರವರ ಮ್ಯಾನರಿಸಂ ಎಂಬಂತೆ ಮನ್ನಣೆ ಗಳಿಸಿದವುಯಾವೊಂದು ತಂತ್ರಜ್ಞಾನವಿಲ್ಲದ ಹಾಗೂ ಧ್ವನಿ ಮುದ್ರಣಕ್ಕೆ ವ್ಯವಸ್ಥೆಯಿಲ್ಲದ ಕಾಲದ ಮೂಕಿ ಚಿತ್ರಗಳಲ್ಲಿ ಅನಭಿಷಕ್ತ ದೊರೆಯಂತೆ ಮರೆದವರು ಚಾರ್ಲಿ ಚಾಪ್ಲಿನ್. ಹಾಸ್ಯ ಪಾತ್ರಗಳೆಂದರೆ ವಿದೂಷಕನ ಪಾತ್ರಗಳು ಎಂಬ ನಂಬಿಕೆ ಅಸ್ತಿತ್ವದಲ್ಲಿದ್ದ ಕಾಲಘಟ್ಟದಲ್ಲಿ ಮುಗ್ಧತೆಯ ಪ್ರತಿಬಿಂಬದಂತೆ ಕಾಣಿಸಿಕೊಂಡು ಅದಕ್ಕೊಂದು ಘನತೆಯನ್ನು ತಂದು ಕೊಟ್ಟವರಲ್ಲಿ ಚಾಪ್ಲಿನ್ ಪ್ರಮುಖರು. ತಾನು ಸಾಕ್ಷಿಯಾದ  ಕಾಲಘಟ್ಟದ ಎಲ್ಲಾ  ತವಕ, ತಲ್ಲಣಗಳಿಗೆ ಹಾಸ್ಯದ ಲೇಪನವನ್ನು ನೀಡುತ್ತಾ ಪ್ರೇಕ್ಷಕರನ್ನು ಚಿಂತಿಸುವಂತೆ ಮಾಡಿದವರು. ಚಾರ್ಲಿ ಚಾಪ್ಲಿನ್  ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿ ಇಲ್ಲಿಗೆ ಒಂದು ಶತಮಾನ ತುಂಬಿತು.  1915 ರಲ್ಲಿ ಮೂಕಿ ಚಿತ್ರಗಳ ಮೂಲಕ  ಕಾಲಿಟ್ಟ ಚಾಪ್ಲಿನ್, 1930 ದಶಕದ ವೇಳೆಗೆ ಚಾರ್ಲಿ ಚಾಪ್ಲಿನ್ ತನ್ನ ಭಾವಪೂರ್ಣ ಅಭಿನಯದ ಮುಖಾಂತರ  ಜಗತ್ ಪ್ರಸಿದ್ಧಿ ಪಡೆದಿದ್ದರು. ಇದೇ ವೇಳೆಗೆ ಸರಿಯಾಗಿ ಇತ್ತ ಭಾರತದಲ್ಲಿ ಬ್ರಿಟೀಷರ ವಿರುದ್ಧ ಸಮರ ಸಾರಿದ್ದ ಮಹಾತ್ಮ ಗಾಂಧಿಯವರು ಅಹಿಂಸೆ ಎಂಬ ಅಸ್ತ್ರದ ಮೂಲಕ ಜಗತ್ತಿನ ಗಮನ ಸೆಳದಿದ್ದರು. ಗಾಂಧೀಜಿಯವರ ಹೋರಾಟ, ಅವರ ಚಳುವಳಿ, ಉಪವಾಸ ಸತ್ಯಾಗ್ರಹ ಮತ್ತು ಚರಕದ ಪರಿಕಲ್ಪನೆ ಇವುಗಳ ಬಗ್ಗೆ ಕೇಳಿ ತಿಳಿದಿದ್ದ ಚಾರ್ಲಿ ಚಾಪ್ಲಿನ್ಗೆ ಗಾಂಧಿಯವರನ್ನು ಒಮ್ಮೆ ಭೇಟಿ ಮಾಡಬೇಕೆಂಬ ಆಸೆಯಿತ್ತು. ಕೊನೆಗೊಮ್ಮೆ ಅದು ನೆರವೇರಿತು.   ಗಾಂಧೀಜಿಯವರು ಬ್ರಿಟೀಷ್ ಸರ್ಕಾರದ ಜೊತೆಗಿನ ಮಾತುಕತೆಗಾಗಿ 1931 ಸೆಪ್ಟಂಬರ್ ತಿಂಗಳಿನಲ್ಲಿ ಲಂಡನ್ ನಗರಕ್ಕೆ ಹೋದಾಗ, ಅವರಿಬ್ಬರೂ ಪರಸ್ಪರ ಭೇಟಿಯಾದರು. ಪೂರ್ವ ಮತ್ತು ಪಶ್ಚಿಮದ ಎರಡು ದೈತ್ಯ ಪ್ರತಿಭೆಗಳು ಮುಖಾ ಮುಖಿಯಾಗುವುದರ ಮೂಲಕ  ತಮ್ಮೊಳಗಿನ ಹಲವು ಸಂದೇಹಗಳಿಗೆ ಪರಿಹಾರ ಕಂಡುಕೊಂಡರುಆಶ್ಚರ್ಯಕರ ಸಂಗತಿಯೆಂದರೆ, ಗಾಂಧೀಜಿಯವರಿಗೆ ಚಾಪ್ಲಿನ್ ಹೆಸರು ಮಾತ್ರ ಕೇಳಿ ತಿಳಿದಿತ್ತು. ಅವರೊಬ್ಬ ಕೇವಲ ಹಾಸ್ಯ ಕಲಾವಿದ ಎಂದು ಭಾವಿಸಿದ್ದರು. ಆದರೆ ದುಡಿಯುವ ವರ್ಗದ ಪರವಾಗಿ ಸದಾ ತುಡಿಯುತ್ತಿದ್ದ ಚಾಪ್ಲಿನ್ ಅವರ ಚಿಂತನೆಗಳು ಮತ್ತು ಮಾನವೀಯ ಗುಣಗಳು ಅಂದು ಗಾಂಧಿಯೆದುರು ಅನಾವರಣಗೊಂಡಿದ್ದವು. ಗಾಂಧೀಜಿಯವರನ್ನು ಭೇಟಿ ಮಾಡಿದ ಕ್ಷಣಗಳನ್ನು ಚಾರ್ಲಿ ಚಾಪ್ಲಿನ್ 1964 ರಲ್ಲಿ ಬರೆದ ತನ್ನ ಆತ್ಮ ಕಥೆಯಲ್ಲಿ ಹೀಗೆ ದಾಖಲಿಸಿದ್ದಾರೆ.
ನಾನು ಇಂಗ್ಲೇಂಡ್ ಪ್ರಧಾನಿ ಚರ್ಚಿಲ್ ರವರ ಅತಿಥಿಯಾಗಿ ಲಂಡನ್ ನಗರದಲ್ಲಿ ಉಳಿದುಕೊಂಡಿದ್ದ ಸಮಯದಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡುವ ಅವಕಾಶ ದೊರೆಯಿತು. ನನಗೆ ಮಹಾತ್ಮ ಗಾಂಧಿಯವರ ರಾಜಕೀಯ ಚತುರತೆಯ ನಡೆಗಳು ಮತ್ತು  ವಜ್ರಕ್ಕಿಂತಲೂ ಕಠಿಣವಾದ ಅವರ ಆತ್ಮಶಕ್ತಿ  ಇವೆಲ್ಲವುಗಳಿಂದ ನಾನು ಪ್ರಭಾವಿತನಾಗಿದ್ದೆ ಜೊತೆಗೆ ಅವರನ್ನು ಆರಾಧಿಸುತ್ತಿದ್ದೆ. ಆದರೆ, ಅವರು ಲಂಡನ್ಗೆ ಭೇಟಿ ನೀಡಿದ ವಿಷಯದಲ್ಲಿ ನನಗೆ ತೃಪ್ತಿಯಿರಲಿಲ್ಲ. ಅವರ ಕುರಿತಂತೆ  ಜಾಗತಿಕ ಮಟ್ಟದಲ್ಲಿದ್ದ ಜನರ ನಂಬಿಕೆಗಳು ಮತ್ತು ಗೌರವಗಳಿಗೆ ಕುಂದುಂಟಾಗಬಹುದೆಂಬ ಆತಂಕ ನನ್ನನ್ನು ಕಾಡುತ್ತಿತ್ತು. ಸನಾತನ ಹಿಂದೂ ಧರ್ಮದ ಪ್ರತಿನಿಧಿಯಂತೆ ಕಾಣುತ್ತಿದ್ದ ಅವರು, ಇಂಗ್ಲೆಂಡಿನ ಕೊರೆಯುವ ಚಳಿಯಲ್ಲಿ ಅರೆ ನಗ್ನರಾಗಿದ್ದರು. ಮೈ ಮೇಲೆ ಇದ್ದ ಖಾದಿ ವಸ್ತ್ರವನ್ನು ಮೈ ತುಂಬಾ ಹೊದ್ದುಕೊಂಡು ಚಳಿಯಿಂದ ರಕ್ಷಣೆ ಪಡೆದಿದ್ದರು. ದಿನಗಳಲ್ಲಿ ಗಾಂಧಿಯವರ ವೇಷ ಭೂಷಣ ನಮಗೆ ಅಸಂಬದ್ಧವಾಗಿ ತೋರುತ್ತಿತ್ತು. ಇದು ಲಂಡನ್ ನಗರದ ಪತ್ರಿಕೆಯ ಛಾಯಚಿತ್ರಗಾರರಿಗೆ, ವ್ಯಂಗ್ಯ ಚಿತ್ರಕಾರರಿಗೆ ಆಹಾರವಾಗಬಹುದೆಂದು ನಾನು ಊಹಿಸಿದ್ದೆ. ಒಂದು ದಿನ ಅವರನ್ನು ಭೇಟಿ ಮಾಡುವ ನನ್ನ ಅಪೇಕ್ಷೆಯನ್ನು ಇಂಗ್ಲೆಂಡ್ ಪ್ರವಾಸದ ಉಸ್ತುವಾರಿ ಹೊತ್ತಿದ್ದ ಭಾರತೀಯ ಮಹಿಳೆಯೊಬ್ಬರಿಗೆ (ಸರೋಜಿನಿ ನಾಯ್ಡು) ತಿಳಿಸಿದ್ದೆ. ಅದೃಷ್ಟವೆಂಬಂತೆ  ಕ್ಷಣಾರ್ಧದಲ್ಲಿ ನನಗೆ ಗಾಂಧೀಜಿಯವರ  ಭೇಟಿಗೆ ಅನುಮತಿ ದೊರೆಯಿತು.
 ಲಂಡನ್ ನಗರದ ಕೊಳಚೆ ಪ್ರದೇಶವಾಗಿದ್ದ ಈಸ್ಟ್ ಇಂಡಿಯ ಡಾಕ್ ರಸ್ತೆಯಲ್ಲಿನ ಭಾರತದ ಮೂಲದ ವೈದ್ಯರ ಗೃಹವೊಂದರÀಲ್ಲಿ ಅವರು ತಂಗಿದ್ದಾಗ ನಾನು ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದೆ. ಕಟ್ಟಡದ ಒಳಗೆ ಮತ್ತು ಹೊರಗೆ ಪತ್ರಕರ್ತರು ಮತ್ತು ಛಾಯಚಿತ್ರಕಾರರು ತುಂಬಿ ಹೋಗಿದ್ದರುಮನೆಯ ಮುಂಭಾಗದ ರಸ್ತೆಯಲ್ಲಿ  ಅವರ ಅಸಂಖ್ಯಾತ ಅನುಯಾಯಿಗಳು ಮತ್ತು ಅವರನ್ನು ಕುತೂಹಲದಿಂದ ನೋಡಲು ಬಂದ ಇಂಗ್ಲೇಂಡಿನ ನಾಗರೀಕರು ಗುಂಪು ಗುಂಪಾಗಿ ನಿಂತು ಗಾಂಧಿಯವರ ದರ್ಶನಕ್ಕಾಗಿ ಕಾಯುತ್ತಿದ್ದರು.
ನಮ್ಮಿಬ್ಬರ ಮುಖಾ ಮುಖಿ ಭೇಟಿಯು ಕಟ್ಟಡದ ಮೊದಲ ಮಹಡಿಯಲ್ಲಿದ್ದ ಸುಮಾರು ಹನ್ನೆರೆಡು ಚದುರ ಅಡಿ ವಿಸ್ತಾರದ ಕೊಠಡಿಯಲ್ಲಿ ಜರುಗಿತು. ನಾನು ಕೊಠಡಿಯನ್ನು ಪ್ರವೇಶಿಸಿದಾಗ ಅವರಿನ್ನೂ ಆಗಮಿಸರಿರಲಿಲ್ಲಅವರಿಗಾಗಿ ಕಾಯುತ್ತಾ, ಅವರ ಜೊತೆ ಯಾವ ವಿಷಯದಿಂದ ಮಾತು ಆರಂಭಿಸಬೇಕು ಎಂದು ಯೋಚಿಸುತ್ತಿದ್ದೆ. ಅವರು ಭಾರತದಲ್ಲಿ ಅನುಭವಿಸಿದ ಸೆರಮನೆವಾಸನಡೆಸಿದ ಉಪವಾಸ ಸತ್ಯಾಗ್ರಹಗಳು ಮತ್ತು ಭಾರತದ ಬಿಡುಗಡೆಗಾಗಿ ಅವರು ಹಮ್ಮಿಕೊಂಡಿದ್ದ ಅವಿರತ ಹೋರಾಟ ಇವೆಲ್ಲವೂ ನನ್ನ ಕಣ್ಣ ಮುಂದೆ ಇದ್ದವು. ಜೊತೆಗೆ ಅವರು ಯಂತ್ರ ನಾಗರೀಕತೆಯ ಕಡು ವಿರೋದಿಯಾಗಿದ್ದರುü ಎಂಬುದು ಸಹ ನನಗೆ ತಿಳಿದಿತ್ತು.ಹೀಗೆ ನಾನು ಯೋಚಿಸುತ್ತಿದ್ದ ವೇಳೆಗೆ ಸರಿಯಾಗಿ ಅವರ ಆಗಮನವಾಯಿತು. ಟ್ಯಾಕ್ಸಿಯೊಂದರಲ್ಲಿ ಬಂದಿಳಿದ ಗಾಂಧೀಜಿಯವರು ಎಂದಿನಂತೆ ಅರೆನಗ್ನಾವಸ್ಥೆಯಲ್ಲಿದ್ದರು. ಟ್ಯಾಕ್ಸಿಯಿಂದ ಇಳಿದ ಕೂಡಲೆ ತಮ್ಮ ಕೈಯಲ್ಲಿದ್ದ ಕೋಲಿನ ಜೊತೆ ತಮ್ಮೆರೆಡು ಕೈಗಳನ್ನು ಜೋಡಿಸಿ, ರಸ್ತೆಯಲ್ಲಿ ಕಾಯುತ್ತಿದ್ದ ಜನರಿಗೆ ನಮಸ್ಕರಿಸಿದರು. ನಂತರ ನಿಧಾನವಾಗಿ ಮೆಟ್ಟಿಲೇರುತ್ತಾ ನಾನಿದ್ದ ಕೊಠಡಿಗೆ ಆಗಮಿಸಿದರು. ಕಿಟಕಿಯ ಪಕ್ಕ ಹಾಕಲಾಗಿದ್ದ ಸೋಪಾದ ಮೇಲೆ ಅವರು ಕುಳಿತರು. ಅವರ ಎಡಭಾಗದಲ್ಲಿ ನಾನು ಆಸೀನನಾದೆ.
ಗಾಂಧಿಯವರು ಮತ್ತು ನಾನು ಅಕ್ಕ ಪಕ್ಕ ಕುಳಿತ ಕೂಡಲೆ  ನೂರಾರು ಕ್ಯಾಮರಾಗಳ ಪ್ಲಾಷ್ ಲೈಟುಗಳು ಬೆಳಗತೊಡಗಿದವು. ನಮ್ಮಿಬ್ಬರ ಐತಿಹಾಸಿಕ ಸಮಾಗಮದ ಚಿತ್ರವನ್ನು ಸೆರೆ ಹಿಡಿಯಲು ಛಾಯಾಗ್ರಾಹಕರು ಮುಗಿಬಿದ್ದರು. ಅವರ ಬಲಭಾಗದಲ್ಲಿ ಕುಳಿತಿದ್ದ ನಾನು ಮಹಾತ್ಮನೊಡನೆ ಗಂಭೀರವಾದ ವಿಷಯದೊಂದಿಗೆ ಮಾತು ಆರಂಭಿಸಬೇಕಿತ್ತು. ಅಷ್ಟರೊಳಗೆ ಕೊಠಡಿಯಲ್ಲಿದ್ದ ಮತ್ತೊಬ್ಬ ಇಂಗ್ಲೆಂಡಿನ ಮಹಿಳೆಯು ಅವರನ್ನು ಮಾತಿಗೆಳೆದಳು. ಅವರಿಬ್ಬರ ಚರ್ಚೆ ಸಾಗುತ್ತಿದ್ದಾಗ, ಪ್ರವಾಸದ ಉಸ್ತುವಾರಿ ಹೊತ್ತಿದ್ದ ಮಹಿಳೆಯು ನನಗೆ ಗಾಂಧೀಜಿಯವರ ಹೋರಾಟದ ಅನೇಕ ಮಜಲುಗಳನ್ನು ಮನವರಿಕೆ ಮಾಡಿಕೊಡುತ್ತಿದ್ದಳು. ನಾನು ಆಕೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಾ, ಅವರ ಜೊತೆ ಮಾತನ್ನು ಹೇಗೆ ಆರಂಭಿಸಬೇಕೆಂಬ  ಗೊಂದಲದಲ್ಲಿ ಮುಳುಗಿ ಹೋಗಿದ್ದೆ. ನನ್ನ ಸಿನಿಮಾಗಳ ಕುರಿತು ಮಾತು ಪ್ರಸ್ತಾಪಿಸೋಣವೆಂದರೆ, ಅವರು ಸಿನಿಮಾ ನೋಡಿರುವ ಸಾಧ್ಯತೆ ಕಡಿಮೆಯಿತ್ತು. ಇದೇ ವೇಳೆಗೆ ಸರಿಯಾಗಿ ಗಾಂಧಿಯವರ ü ಜೊತೆ ಚರ್ಚೆಗಿಳಿದಿದ್ದ  ಇಂಗ್ಲೆಂಡ್ ಮಹಿಳೆಯ ಮಾತುಗಳಿಗೆ ತಡೆಯೊಡ್ಡಿದ್ದ ಉಸ್ತುವಾರಿ ಹೊತ್ತಿದ್ದ ಹೆಣ್ಣು ಮಗಳು ಅಧಿಕಾರಯುತ ಧ್ವನಿಯಲ್ಲಿಬೇಗ ನಿಮ್ಮ ಮಾತುಗಳನ್ನು ಮುಗಿಸಿ, ಚಾಪ್ಲಿನ್ರವರು ಬಾಪು ಸಂದರ್ಶನಕ್ಕೆ ಕಾಯುತ್ತಿದ್ದಾರೆಎಂದು ಎಚ್ಚರಿಸಿದಳು. ಅಲ್ಲಿಗೆ ಅವರ ಸಂಭಾಷಣೆ ಮುಕ್ತಾಯವಾಯಿತು.





ಮಹಾತ್ಮರು  ನನ್ನತ್ತ ತಿರುಗಿದಾಗ, ಇಡೀ ಕೋಠಡಿಯಲ್ಲಿ ನಿಶ್ಯಬ್ಧ ಆವರಿಸಿತು. ನಮ್ಮಿಬ್ಬರ ಮಾತುಕತೆಗಾಗಿ ಮಾಧ್ಯಮಗಳು ಮಾತ್ರವಲ್ಲ, ಭಾರತ ಉಪಖಂಡದ ಜನರೂ ಸಹ ಎದುರು ನೋಡುತ್ತಿದ್ದರು. ನಾನು ಗಂಟಲು ಸರಿಪಡಿಸಿಕೊಂಡು ಮಹಾತ್ಮರ ಜೊತೆ ಮಾತಿಗಾರಂಭಿಸಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ನೀವು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಹಾನುಭೂತಿಯಿದೆ. ಆದರೆ, ನೀವು  ಯಂತ್ರಗಳನ್ನು ಧಿಕ್ಕರಿಸುವ ಕುರಿತು ಆಡುತ್ತಿರುವ ಮಾತುಗಳ ಬಗ್ಗೆ ನನಗೆ ಗೊಂದಲವಿದೆಎಂದೆ. ಮಹಾತ್ಮ ಕ್ಷಣದಲ್ಲಿ ಮುಗಳ್ನಕ್ಕು ಮಾತು ಮುಂದುವರಿಸುವಂತೆ ಸೂಚಿಸಿದರು. “ಯಂತ್ರಗಳು ಪರೋಪಕಾರ ನೆಲೆಗಟ್ಟಿನಲ್ಲಿ ಒಳಿತಲ್ಲವೆ? ಅವುಗಳು ಮನುಷ್ಯನ ಶ್ರಮವನ್ನು ಕಡಿತಗೊಳಿಸುವುದರ ಜೊತೆಗೆ ಅವನನ್ನು ದುಡಿಮೆಯ ಜೀತಗಾರಿಕೆಯಿಂದ ವಿಮೋಚನಗೊಳಿಸಬಲ್ಲ ಸಾಧನಗಳು ಎಂದು ನನಗೆ ಅನಿಸುತ್ತಿದೆ. ಜೊತೆಗೆ ಆತನಲ್ಲಿ ಒಂದಿಷ್ಟು ಖುಷಿ ಮತ್ತು ನೆಮ್ಮದಿಯನ್ನು ತರಬಲ್ಲವುಎಂದೆ.
ಅತ್ಯಂತ ಶಾಂತ ಚಿತ್ತದಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡ ಮಹಾತ್ಮ ತಣ್ಣನೆಯ ಧ್ವನಿಯಲ್ಲಿ ತಮ್ಮ ಮಾತುಗಳನ್ನು ಆರಂಭಿಸಿದರು. “ನಿಮ್ಮ ಕಾಳಜಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ, ಭಾರತವು ಇಂಗ್ಲೆಂಡಿನ ಕಪಿಮುಷ್ಟಿಯಿಂದ ಪಾರಾಗಬೇಕೆಂದರೆ, ನಮಗಿರುವ ಏಕೈಕ ಮಾರ್ಗ ಯಂತ್ರ ನಾಗರೀಕತೆಯನ್ನು ನಾವು ವಿರೋಧಿಸಲೇಬೇಕು ಯಂತ್ರಗಳು  ನಮ್ಮನ್ನು ಎಲ್ಲಾ ವಿಷಯಗಳಲ್ಲೂ ಬ್ರಿಟೀಷರ ಮೇಲೆ ಅವಲಂಬಿತರಾಗುವಂತೆ ಮಾಡಿವೆ. ನಾವು ಬೆಳೆದ ಹತ್ತಿಯು ಹಡಗಿನ ಮೂಲಕ ಇಲ್ಲಿನ  ಲಂಕಾóಷೈರ್ ನಗರವನ್ನು ತಲುಪಿ ದೈತ್ಯ ಯಂತ್ರಗಳ ಮೂಲಕ ವಸ್ತ್ರವಾಗಿ ಮತ್ತೇ ಭಾರತವನ್ನು ತಲುಪುತ್ತದೆ. ಕಾರಣಕ್ಕಾಗಿ ನಾನು ಸ್ವಾತಂತ್ರ್ಯದ ಸಂಕೇತವಾಗಿ ಚರಕವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಖಾದಿ ಮತ್ತು ಚರಕ ಇವೆರೆಡು ಕೇವಲ ಕಾಯಕದ ಸಂಕೇತಗಳು ಮಾತ್ರವಲ್ಲ, ಸ್ವಾಭಿಮಾನದ ಹಾಗೂ ರಾಷ್ಟ್ರಪ್ರೇಮದ ಸಂಕೇತಗಳು ಕೂಡ ಹೌದು. ಪ್ರತಿಯೊಬ್ಬರೂ ಚರಕದಿಂದ ಹತ್ತಿಯ ನೂಲನ್ನು ತೆಗೆದು, ಅದರಿಂದ ಕೈ ಮಗ್ಗದಲ್ಲಿ ತಯಾರಾದ ವಸ್ತ್ರಗಳನ್ನು ತೊಡಬೇಕು. ಇದು ಜಗತ್ತಿನ ಬಲಿಷ್ಟ ರಾಷ್ಟ್ರವಾದ ಇಂಗ್ಲೆಂಡನ್ನು ಮಣಿಸಲು ನಮಗಿರುವ ಏಕೈಕ ದಾರಿ. ಇದರ ಜೊತೆಗೆ ಇನ್ನು ಅನೇಕ ಸಾಂಸ್ಕøತಿಕ, ಸಾಮಾಜಿಕ ಹಾಗೂ ಭೌಗೋಳಿಕ ವಿಭಿನ್ನತೆಗಳು ಮತ್ತು ಕಾರಣಗಳೂ ಸಹ ಇವೆ. ನಮ್ಮ ಹವ್ಯಾಸಗಳು ಮತ್ತು ಅಭಿರುಚಿಗಳು ವಿಭಿನ್ನವಾಗಿವೆ. ಕಡಿಮೆ ಜನಸಂಖ್ಯೆಯ ಇಂಗ್ಲೆಂಡಿನಂತಹ ಚಳಿ ಪ್ರದೇಶಗಳಲ್ಲಿ ಯಂತ್ರಗಳು ಅವಶ್ಯಕ ನಿಜ. ಆದರೆ, ಅಪಾರ ಜನಸಂಖ್ಯೆಯ ಹಾಗೂ ಉಷ್ಣವಲಯದ ಭಾರತದಂತಹ ದೇಶದಲ್ಲಿ ದುಡಿಯುವ ಕೈಗಳಿಗೆ ಕೈ ತುಂಬಾ ಕೆಲಸ ನೀಡಲು ನಾವು ಯಂತ್ರ ನಾಗರೀಕತೆಯನ್ನು ವಿರೋಧಿಸುವುದು ಅನಿವಾರ್ಯ. ನಿಮಗೆ ಆಹಾರ ಸೇವಿಸಲು, ಯಂತ್ರಗಳಿಂದ ತಯರಾದ ಫೋರ್ಕು, ಚಮಚೆಗಳು ಬೇಕು. ನಮಗೆ ಭಾರತೀಯರಿಗೆ ಕೈನಲ್ಲಿರುವ ಐದು ಬೆರಳುಗಳು ಸಾಕು. ಎಂದು ಹೇಳಿದರು. ಅವರು ಮಂಡಿಸುತ್ತಿದ್ದ ವಿಚಾರಗಳಲ್ಲಿ ಸ್ಪಷ್ಟತೆ ಇತ್ತು. ಅವರ ಭಾವನೆಗಳಲ್ಲಿ ಪಾರದರ್ಶಕತೆಯಿತ್ತು.   ಮಾತು ಮುಂದುವರಿಸಿದ ಗಾಂಧೀಜಿಯವರು ತಮ್ಮ ಮುಂದಿರುವ ಕನಸು ಮತ್ತು ಗುರಿಗಳನ್ನು ಆತ್ಮೀಯ ಭಾವದಲ್ಲಿ ಹೀಗೆ ಹಂಚಿಕೊಂಡರು.

ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ನಾನು ನಿರಂತರವಾಗಿ ಹಲವಾರು ಪ್ರಯೋಗಗಳನ್ನು ಕೈಗೊಂಡು ಅನುಭವ ಗಳಿಸಿದ್ದೀನಿ. ಭಾರತದ ಪ್ರತಿಯೊಬ್ಬ ಪ್ರಜೆಯ ಸ್ವಾತಂತ್ರ್ಯದ ಕನಸು ಕೇವಲ ಭ್ರಮೆಯಲ್ಲ, ಅದು ಕಠಿಣವಾದ ಹಾಗೂ ಅಹಿಂಸೆಯ ಮಾರ್ಗದಲ್ಲಿ ದಕ್ಕಿಸಿಕೊಳ್ಳಬೇಕಾದ ವಾಸ್ತವ ಎಂಬುದು ನನಗೆ ಮನದಟ್ಟಾಗಿದೆ. ಪರಮಾಧಿಕಾರವೆನ್ನುವುದು, ಸರ್ವಾಧಿಕಾರದ ಮತ್ತೊಂದು ಮುಖ. ಇದು ಮನುಷ್ಯನ ಎದೆಯೊಳಗೆ ವಿಕಾರ ಮತ್ತು ವಿಕೃತಿಗಳನ್ನು ಸೃಷ್ಟಿಸಬಲ್ಲದು. ಜಗತ್ತಿನಲ್ಲಿ ಹಿಂಸೆ ಕೊನೆಗೊಳ್ಳಬೇಕಾದರೆ, ಅಧಿಕಾರ ಎಲ್ಲಿಯೂ ಕೇಂದ್ರೀಕೃತಗೊಳ್ಳದೆ ಎಲ್ಲರಲ್ಲೂ ವಿಕೇಂದ್ರೀಕರಣಗೊಳ್ಳಬೇಕು. ಇದು ನನ್ನ ಸ್ಪಷ್ಟ ನಿಲುವು ಎಂದು ಮಾತು  ಮುಗಿಸಿದರು.
ನಮ್ಮಿಬ್ಬರ ಮಾತುಕತೆ ಮುಗಿಯುತ್ತಿದ್ದಂತೆ ಕೊಠಡಿಯಲ್ಲಿದ್ದ ಎಲ್ಲರೂ ಹೊರನಡೆದರು. “ದಯವಿಟ್ಟು ಪ್ರಾರ್ಥನೆಯಲ್ಲಿ ನೀವೂ ಪಾಲ್ಗೊಳ್ಳಿಎಂದು ಗಾಂಧೀಜಿ ನನ್ನಲ್ಲಿ ವಿನಂತಿಸಿಕೊಂಡರು. ನಾನು ಸಮ್ಮತಿಸುತ್ತಿದ್ದಂತೆ ಅವರು ಸೋಫಾದಿಂದ ಎದ್ದು, ನೆಲದ ಮೇಲೆ ಕಾಲು ಮಡಚಿ ಧ್ಯಾನಸ್ಥ ಮನಸ್ಸಿನೊಂದಿಗೆ ಕುಳಿತುಕೊಂಡು ತಮ್ಮ ನಾಲ್ವರು ಅನುಯಾಯಿಗಳೊಂದಿಗೆ   ಪ್ರಾರ್ಥನೆಯಲ್ಲಿ ನಿರತರಾದರು. ನೆಲದ ಮೇಲೆ ಕುಳಿತ ಅವರ ಭಂಗಿಯಲ್ಲಿ ಕಾಲು ಮಡಚಿ ಕುಳಿತುಕೊಳ್ಳಲು ಸಾಧ್ಯವಾಗದ ನಾನು, ಅದೇ ಸೋಫಾದಲ್ಲಿ ಕುಳಿತು ಅವರನ್ನು ತದೇಕಚಿತ್ತದಿಂದ ಗಮನಿಸಿತೊಡಗಿದೆ. ಮನುಷ್ಯನಿಗೆ ಧ್ಯಾನ ಮತ್ತು ಪ್ರಾರ್ಥ£ಗಳು ಅಪಾರವಾದ ಆತ್ಮವಿಶ್ವಾಸವನ್ನು ತಂದುಕೊಡಬಲ್ಲವು ಎಂಬುದನ್ನು ದಿನ ನಾನು ಮಹಾತ್ಮನ ಸನ್ನಿದಿಯಲ್ಲಿ ಅರಿತುಕೊಂಡೆ. ಕಣ್ಮಚ್ಚಿ ಕುಳಿತು ಧ್ಯಾನಿಸುತ್ತಿದ್ದ ಮಹಾತ್ಮ ಗಾಂಧಿಯವರಲ್ಲಿ, ವಾಸ್ತವಿಕ ನೆಲೆಯಲ್ಲಿ ಯೋಚಿಸಬಲ್ಲ ಒಬ್ಬ ಜನನಾಯಕ, ಕಾನೂನಿನ ಪ್ರಜ್ಞೆಯುಳ್ಳ ಒಬ್ಬ ಪ್ರಜ್ಞಾವಂತ ನಾಗರೀಕ ಹಾಗೂ ಪರರನ್ನು ಜಾತಿ ಧರ್ಮದ ಗಡಿಗಳನ್ನು ಮೀರಿ  ಮಕ್ಕಳಂತೆ ಪ್ರೀತಿಸುವ ಮಾತೃಹೃದಯ ಇವೆಲ್ಲವುಗಳನ್ನು ಅವರು ಉಚ್ಛರಿಸುತ್ತಿದ್ದ ಪ್ರಾರ್ಥನಾ ಗೀತೆಗಳಿಂದ ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು.
                           ( ಮಾಹಿತಿ ಸೌಜನ್ಯ- ಥಾಮಸ್ ವೆಬರ್ ರವರಗಾಂಧಿ ಅಟ್ ಫಸ್ಟ್ ಸೈಟ್ಕೃತಿಯಿಂದ)


ಗುರುವಾರ, ಜೂನ್ 25, 2015

ಬಡತನ-ಹಸಿವು ಮತ್ತು ಕ್ರೌರ್ಯ




ಇದು ಸುಮಾರು ಏಳೆಂಟು ವರ್ಷಗಳ ಹಿಂದಿನ ಘಟನೆ. ಎಸ್.ಎಂ. ಕೃಷ್ಣ ರವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಮುಂಬೈ ರಾಜಭವನದಲ್ಲಿ ಏಕಾಂಗಿಯಾಗಿದ್ದ ಅವರ ಪಾಲಿಗೆ ರಾಜಕೀಯ ಮತ್ತು ಸಾರ್ವಜನಿಕ ಚಟುವಟಿಕೆಯಿಂದ ದೂರವಿರುವುದು ಅಸಹನೀಯವಾಗಿತ್ತು. ಬಾಲ್ಯದಿಂದಲೂ ನನ್ನನ್ನು ಬಲ್ಲ ಅವರಿಗೆ ನಾನು ಪುಸ್ತಕದ ಹುಳು ಎಂಬುದು ಸಹ ಗೊತ್ತಿತ್ತು. ಹಾಗಾಗಿ ಪ್ರತಿ ಹದಿನೈದು ದಿನಕ್ಕೆ ಮುಂಬೈ ಗೆ ಹೋಗಿ ಅವರಿಗೆ ನಾನು ಓದಿದ ಹೊಸ ಇಂಗ್ಲೀಷ್ ಕೃತಿಗಳನ್ನು ಕೊಟ್ಟು ಓದಿಸಿ ಬರುತ್ತಿದ್ದೆ. ರಾಜಭವನದಲ್ಲಿ ಆರಾಮವಾಗಿ ಅವರೊಂದಿಗೆ ಹರಟಬಹುದಾಗಿತ್ತು. ಒಮ್ಮೆ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಲೆಗಳಲ್ಲಿ ಪರಿಚಯಿಸಿದ ಬಿಸಿಯೂಟದ ಬಗ್ಗೆ ಕೇಳಿದ್ದೆ. ಅವರು ನೀಡಿದ್ದ ಉತ್ತರ ಹೀಗಿತ್ತು
" ಒಮ್ಮೆ ನಾನು ರಾಯಚೂರಿನಲ್ಲಿ ಕಾರ್ಯಕ್ರಮ ಮುಗಿಸಿ, ಯಾದಗಿರಿ ಮೂಲಕ ಗುಲ್ಬರ್ಗಾಕ್ಕೆ ಹಿಂತಿರುಗುತ್ತಿದ್ದೆ. ಅದು ಸಂಜೆ ಐದರ ಸಮಯ. ಹಳ್ಳಿಯ ಮಕ್ಕಳು ಬರಿಗಾಲಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದರು. ನನ್ನ ಕಾರಿನಲ್ಲಿ ಕುಳಿತಿದ್ದ ಜಿಲ್ಲಾಧಿಕಾರಿಯನ್ನು ಮಕ್ಕಳು ಮಧ್ಯಾಹ್ನ ಊಟ ಹೇಗೆ ಮಾಡ್ತಾರೆ? ಎಂದು ಕೇಳಿದೆ. ಅದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿದ. "ಇಲ್ಲಾ ಸಾರ್, ಇವರೆಲ್ಲಾ ಬೆಳಿಗ್ಗೆ ಮನೆಯಿಂದ ಊಟ ಮಾಡಿ ಬಂದರೆ, ಮತ್ತೆ ಸಂಜೆ ಮನೆಗೆ ಹೋಗಿ ಊಟ ಮಾಡುವುದು". ನನಗೆ ಸಂಕಟವಾಯಿತು. ಎಂದೂ ನಾನು ಬಾಲ್ಯದಲ್ಲಿ ಬಡತನವನ್ನಾಗಲಿ, ಹಸಿವನ್ನಾಗಲಿ ಅನುಭವಿಸಿದವನಲ್ಲ. ಆದರೆ, ದಿನ ಮಕ್ಕಳು ನನಗೆ ಹಸಿವನ ವಿರಾಟ್ ದರ್ಶನವನ್ನು ಮನವರಿಕೆ ಮಾಡಿಕೊಟ್ಟರು. ಇದರಿಂದ ಪ್ರೇರಿತನಾಗಿ ಏನೇ ಬರಲಿ, ಎಷ್ಟೇ ಖರ್ಚು ಬರಲಿ, ಶಾಲೆಗಳಲ್ಲಿ ಮಕ್ಕಳಿಗೆ ಊಟ ಸಿಗಬೇಕೆಂದು ನಿರ್ಧರಿಸಿ, ಬಿಸಿಯೂಟ ಯೋಜನೆ ಆರಂಭಿಸಿದೆ" ಎಂದರು.


ನನಗೆ ಕ್ಷಣಕ್ಕೆ ತಮಿಳು ನಾಡಿನ ಕಾಮರಾಜ್ ನೆನಪಾದರು. ಅವರ ಸಾಹಸಗಾಥೆಯನ್ನು ಅವರಿಗೆ ವಿವರಿಸಿದೆ. ಒಮ್ಮೆ ಕಾಮರಾಜ್ ತಿರುನಾನ್ವೇಲಿ ಎಂಬ ಹಿಂದುಳಿದ ಜಿಲ್ಲೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮಕ್ಕಳು ತಂದೆ ತಾಯಿಯರೊಂದಿಗೆ ಕೂಲಿ ಮಾಡುವುದನ್ನು ಕಂಡು ಆಶ್ಚರ್ಯ ಪಟ್ಟರು. ಶಾಲೆಗೆ ಏಕೆ ಕಳಿಸಿಲ್ಲ ಎಂದು ಫೋಷಕರನ್ನು ಕೇಳಿದಾಗ ಬಡತನದ ಅರಿವು ಅವರಿಗಾಯಿತು. ತಕ್ಷಣ ಇಡಿ ತಮಿಳುನಾದ್ಯಂತ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಶಿಕ್ಷಣ, ಪಠ್ಯ ಮತ್ತು ಸಮವಸ್ತ್ರ ಯೋಜನೆಯನ್ನು ಜಾರಿಗೆ ತಂದರು. ಇದಕ್ಕಾಗಿ ಬ್ರಹ್ಮಚಾರಿಯಾಗಿದ್ದ ಅವರು ತಮ್ಮ ನಿವಾಸದಲ್ಲಿದ್ದ ಅಡುಗೆ ಭಟ್ಟನಿಗೆ ಇನ್ನು ಮುಂದೆ ನನಗೆ ಅಥವಾ ಅತಿಥಿಗಳಿಗೆ ಊಟದಲ್ಲಿ ಮೊಟ್ಟೆ ಇರಕೂಡದು. ಅದರ ಖರ್ಚಿನ ಹಣವನ್ನು ವಿದ್ಯಾ ಇಲಾಖೆಗೆ ರವಾನಿಸು ಎಂದು ಆದೇಶ ನೀಡಿದ್ದರು. ಹಾಗಾಗಿ ಇಂದು ತಮಿಳುನಾಡಿನಾದ್ಯಂತ ಮಕ್ಕಳ ಹೆಗಲ ಮೇಲೆ ಕೈ ಇಟ್ಟ ಕಾಮರಾಜರ ಪ್ರತಿಮೆಯನ್ನು ಕಾಣಬಹುದಾಗಿದೆ
ಒಂದು ಉದಾತ್ತ ಚಿಂತನೆಯೊಂದು ಹೇಗೆ ಎದೆಯಿಂದ ಎದೆಗೆ ಹರಿಯಬಲ್ಲದು ಎಂಬುದಕ್ಕೆ ಮೇಲಿನ ಎರಡು ಘಟನೆಗಳು ಸಾಕ್ಷಿಯಾಗಿವೆ. ಇಂದು ಅನ್ನ ಭಾಗ್ಯದ ಯೋಜನೆಯ ಕುರಿತು ತಮ್ಮ ನವರಂಧ್ರಗಳನ್ನು ತೆರದು ಬಡಿದುಕೊಳ್ಳುತ್ತಿರುವ ಪ್ರಕಾರ ಪಂಡಿತರು ಮತ್ತು ಪುರುಷೋತ್ತಮರಿಗೆ ನನ್ನ ಪ್ರಶ್ನೆ ಇಷ್ಟೇ.


ಹೌದು, ಅನ್ನ ಭಾಗ್ಯ ಆರ್ಥಿಕವಾಗಿ ಹೊರೆ ನಿಜ. ಆದರೆ, ನಮ್ಮ ದೇಶದದ ಸಂಸತ್ತನ್ನು ಪ್ರತಿನಿಧಿಸುತ್ತಿರುವ ಸಂಸದರು ಸದ್ದಿಲ್ಲದೆ ತಮ್ಮ ವೇತನವನ್ನು 50 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಏರಿಸಿಕೊಂಡರಲ್ಲ ಅದು ಹೊರೆಯಲ್ಲವೆ? ಜನಪ್ರತಿನಿಧಿಗಳು ವೇತನ ಮತ್ತು ಇತರೆ ಭತ್ಯೆಗಳು ಸೇರಿ ಮಾಸಿಕ ಎರಡು ಲಕ್ಷ ರೂಪಾಯಿ ಪಡೆಯುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದುಂಟೆ? 35 ವರ್ಷ ಸರ್ಕಾರದಲ್ಲಿ ಸೇವೆ ಸಲ್ಲಿಸಿ, ನಿವೃತ್ತನಾಗುವ ನೌಕರಿಗೆ 2006 ರಿಂದ ನಿವೃತ್ತಿ ವೇತನವನ್ನು ನಿಲ್ಲಿಸಿದ ನಮ್ಮನ್ನು ಆಳುವ ಸರ್ಕಾರಗಳು, ಕೇವಲ ಐದು ವರ್ಷಗಳ ಕಾಲ ಸಂಸದರಾಗಿ, ಶಾಸಕರಾಗಿ ಮಣ್ಣು ಹೊರುವ ಜನಪ್ರತಿನಿಧಿಗಳಿಗೆ ಜೀವನಪೂರ್ತಿ 50 ಸಾವಿರ ಮತ್ತು 25 ಸಾವಿರ (ಶಾಸಕರಿಗೆ) ನಿವೃತ್ತಿ ವೇತನ, ಆರೋಗ್ಯ ಭಾಗ್ಯ ಕರುಣಿಸಿದೆಯಲ್ಲಾ, ಇದು ದೇಶಕ್ಕೆ ಆರ್ಥಿಕ ಹೊರೆಯಲ್ಲವೆ? ದೇಶದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಅನುತ್ಪಾದಾನಾ ಆಸ್ತಿ ಅಂದರೆ ವಸೂಲಿಯಾಗದ ಸಾಲದ ಮೊತ್ತ ಎಷ್ಟು ನಿಮಗೆ ಗೊತ್ತೆ? ಸಾಲ ಪಡೆದ ವಿಜಯ ಮಲ್ಯ ನಂತಹ ಬಡವನ ಕುರಿತು ನಿಮಗೆ ಅನುಕಂಪವೆ? ಬಡತನ, ಹಸಿವು ಎಂಬ ಕ್ರೌರ್ಯಕ್ಕಿಂತ ನಿಮ್ಮ ವಿಕೃತಿಯ ಮನೋಭಾವ ನನಗೆ ಅತ್ಯಂತ ಕ್ರೌರ್ಯದಂತೆ ತೋರುತ್ತಿದೆ.