ಬುಧವಾರ, ನವೆಂಬರ್ 25, 2015

ಅಹಿಷ್ಣುತೆ ಮತ್ತು ಅಮೀರ್ ಖಾನ್ ನ ಅಹಿತಕರ ಹೇಳಿಕೆ



ಇದು ಭಾರತದ  ಬಹುಮುಖಿ ಸಂಸ್ಕøತಿ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟೂ ಹೌದು, ದುರಂತವೂ ಹೌದು. ಪರಧರ್ಮ ಸಹಿಷ್ಣುತೆಗೆ ಹೆಸರಾದ ಭಾರತದ ನೆಲದಲ್ಲಿ ನಿಜಕ್ಕೂ ಸಾಂಸ್ಕøತಿಕ ಬಿಕ್ಕಟ್ಟು ತಲೆದೂರಿದೆಯಾಅಥವಾ ಧರ್ಮ ಧರ್ಮಗಳ ನಡುವೆ ಕಂದಕ ಏರ್ಪಟ್ಟಿದೆಯಾ? ಮಾಧ್ಯಮಗಳಲ್ಲಿ, ಬುದ್ದಿವಂತರ ಚಾವಡಿಗಳಲ್ಲಿ ದಿನನಿತ್ಯದ ಸರಕಾಗಿ ಎಲೆ ಅಡಿಕೆಯಂತೆ ಅಗಿಯಲ್ಪಡುತ್ತಿರುವ ಅಹಿಷ್ಣುತೆಯ ಪ್ರಶ್ನೆಯನ್ನಿಟ್ಟುಕೊಂಡು ನೀವು ದೇಶದಲ್ಲಿ ಬಡವರು ವಾಸಿಸುವ  ಯಾವುದೇ ಕೊಳಗೇರಿಗೆ ಹೋಗಿ ಅಥವಾ ಹಳ್ಳಿಗಳಿಗೆ ಹೋಗಿ ಬನ್ನಿಅಹಿಷ್ಣುತೆ ಎಂದರೇನು? ಎಂಬ ಪ್ರಶ್ನೆ ನಮಗೆ  ಎದುರಾಗುತ್ತದೆ. ಏಕೆಂದರೆ, ನೆಲದ ಸಕಲೆಂಟು ಜೀವರಾಶಿಗಳಿಗೆ ಎರವಾಗದಂತೆ ಬದುಕುವುದೇ ಜೀವನ ಎಂದು ನಂಬಿಕೊಂಡಿರುವ ಜನರ ನಂಬಿಕೆಗೂ, ದೇಶದ ಕೆಲವೆಡೆ ಕಿಡಿಗೇಡಿಗಳು ನಡೆಸಿದ ದುಷ್ಕøತ್ಯವನ್ನು ದೇಶದ ಅಹಿಷ್ಣುತೆ ಎಂಬ ಆರೋಪವನ್ನು ಆವಾಹಿಸಿಕೊಂಡು ಎಲ್ಲೆಡೆ ಅದನ್ನು ಜಾರಿಯಲ್ಲಿಟ್ಟಿರುವ ಉಳ್ಳವರ ನಡುವಳಿಕೆಗಳಿಗೆ ತಾಳೆ ಹಾಕಿ ನೋಡಿದಾಗ  ಮನಸ್ಸಿನಲ್ಲಿ ಜಿಗುಪ್ಸೆ ಮೂಡುತ್ತದೆ.
ಭಾರತದ ಪ್ರತಿಭಾವಂತ ಹಾಗೂ ಸೂಕ್ಷ್ಮ ಸಂವೇದನೆಯ ನಟರಲ್ಲಿ ಒಬ್ಬರಾಗಿರುವ ಅಮೀರ್ ಖಾನ್ ಕಳೆದ ಸೋಮವಾರ ನವದೆಹಲಿಯಲ್ಲಿ ನಡೆದ ಗೋಯಂಕಾ ಪ್ರತಿಷ್ಠಾನದ ಪ್ರಶಸ್ತಿ ಸಮಾರಂಭದಲ್ಲಿ ಆಡಿದರು ಎನ್ನಲಾದನನ್ನ ಪತ್ನಿಯು ಮಕ್ಕಳ ಭವಿಷ್ಯಕ್ಕಾಗಿ ದೇಶ ಬಿಟ್ಟು ಹೊರಟು ಹೋಗೋಣ ಎಂದು ನನ್ನ ಬಳಿ ಆತಂಕ ವ್ಯಕ್ತಪಡಿಸಿದಳುಎಂಬ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಯಾವ ಕಾರಣಕ್ಕೆ ಅಮೀರ್ ಖಾನ್ ರವರಿಂದ ಮಾತು ಹೊರಬಂತು? ಇದಕ್ಕೆ ಪ್ರೇರಣೆ ಎಲ್ಲಿಂದ ದೊರೆಯಿತು? ಎಂಬುದರ ಕುರಿತು ನಾವ್ಯಾರೂ ಯೋಚಿಸಲಿಲ್ಲ. ಜೊತೆಗೆ ಇಡೀ ದೇಶ ಅಪನಂಬಿಕೆಯ ದಳ್ಳುರಿಯಲ್ಲಿ ಬೇಯುತ್ತಿರುವಾಗ, ತಾನು ಮತ್ತು ತನ್ನ ಪತ್ನಿ ಕಿರಣ್ ನಡೆಸಿದ ಖಾಸಾಗಿ ಚರ್ಚೆಯನ್ನು ಅಮೀರ್ ಖಾನ್ ಸಂದರ್ಭದಲ್ಲಿ ಹೊರಹಾಕುವ ಅವಶ್ಯಕತೆಯೂ ಇರಲಿಲ್ಲ. ದೇಶದ ಒಬ್ಬ ಕಲಾವಿದ ಅಥವಾ ಬರಹಗಾರ, ಸಂಗೀತಗಾರ ಇವರುಗಳು ಯಾವುದೇ ನಿರ್ಧಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಜನರ ಪ್ರೀತಿ ಮತ್ತು ಸಹಾನುಭೂತಿ  ಫಲವಾಗಿ ಮೇಲೆದ್ದು ಬಂದವರಾಗಿರುತ್ತಾರೆ. ಹಾಗಾಗಿ ಅತಿ ಸೂಕ್ಷ್ಮ ವಿಚಾರಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಾಗ ಇಂತಹವರು ಎಚ್ಚರದಿಂದರಬೇಕು. ಇಂತಹ ವ್ಯಕ್ತಿಗಳು ಹಾಡುವ ಪ್ರತಿ ಮಾತನ್ನು ದೇಶದ ಜನ ಮತ್ತು ಮಾಧ್ಯಮಗಳು ಕಣ್ಣಲ್ಲಿ ಕಣ್ಣಿಟ್ಟು, ಮೈಯೆಲ್ಲಾ ಕಿವಿಯಾಗಿಸಿಕೊಂಡು ಕಾಯುತ್ತಿರುತ್ತಾರೆ/ವೆ.
ಭಾರತದ ಸಾಮರಸ್ಯದ ಬದುಕನ್ನು ಹಾಗೂ ದೇಶ ಎದುರಿಸುತ್ತಿರುವ ಹಲವಾರು ಜ್ವಲಂತ ಸಮಸ್ಯೆಗಳನ್ನು ದೃಶ್ಯ ಮಾಧ್ಯಮದ ಕಾರ್ಯಕ್ರಮಗಳ  ಮೂಲಕ ವಿಶ್ಲೇಷಿಸಿ, ಎಲ್ಲಾ ಭಾರತೀಯರ ಪ್ರೀತಿಗೆ ಪಾತ್ರರಾಗಿದ್ದ ಅಮೀರ್ ಖಾನ್ಗೆ ಸೂಕ್ಷ್ಮತೆ ಏಕೆ ಅರ್ಥವಾಗಲಿಲ್ಲಅಮೀರ್ ಖಾನ್ರವರ ಮಾತಿಗೆ ಪ್ರತಿಯಾಗಿ ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರೀನ್  ಟ್ವಿಟರ್ನಲ್ಲಿ ಹೇಳಿರುವ  “ ಅಮೀರ್ ಖಾನ್ ನೀವು ಹಿಂದೂ ದೇವರುಗಳನ್ನು ಲೇವಡಿ ಮಾಡಿ ಪಿ.ಕೆ. ಸಿನಿಮಾ ಮಾಡಿ ಮುನ್ನೂರು ಕೋಟಿ ರೂಪಾಯಿ ಗಳಿಸಿದಿರಿ. ಇದೇ ಚಿತ್ರವನ್ನು ನೀವು ಪಾಕಿಸ್ತಾನ ಇಲ್ಲವೆ, ಅಫ್ಘಾನಿಸ್ತಾನ ಅಥವಾ ಬಾಂಗ್ಲಾ ದೇಶದಲ್ಲಿ ನಿರ್ಮಾಣ ಮಾಡಿದ್ದರೆ, ನಿಮ್ಮನ್ನೂ ಒಳಗೊಂಡಂತೆ ನಿಮ್ಮ ನಿರ್ಮಾಪಕ ಮತ್ತು ನಿರ್ದೇಶಕನನ್ನು ಸಾರ್ವಜನಿಕವಾಗಿ ಅಲ್ಲಿನ ಸರ್ಕಾರಗಳು ಗಲ್ಲಿಗೇರಿಸುತ್ತಿದ್ದವುಎಂಬ ಮಾತುಗಳು ನಮಗೆ  ದ್ವೇಷ ಪೂರಿತವಾದ ಮಾತುಗಳಂತೆ  ಕಾಣಿಸುವುದಿಲ್ಲ ಬದಲಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತನ್ನ ಕೃತಿಗಳ ಮೂಲಕ ಪ್ರತಿಪಾದಿಸಿದ ತಪ್ಪಿಗಾಗಿ ಜೀವ ಭಯದಿಂದ ದೇಶ ಬಿಟ್ಟು, ಭಾರತದಲ್ಲಿ ಬದುಕುತ್ತಿರುವ ಒಬ್ಬ ಹೆಣ್ಣು ಮಗಳ ಒಡಲಾಳದ ಸಂಕಟದ ನುಡಿಗಳಾಗಿ ನಮಗೆ ಕಾಣುತ್ತವೆ. ಏಕೆಂದರೆ, ಭಾರತದಲ್ಲಿರುವ  ಧರ್ಮ ಸಹಿಷ್ಣುತೆಯ ಪರಿಸ್ಥಿತಿಯು ನೆರೆಯ ದೇಶಗಳಷ್ಟು ಹದಗೆಟ್ಟಿಲ್ಲ.

ತನ್ನ ಅಭಿನಯ ಮತ್ತು ಪ್ರತಿಭೆಯಿಂದಾಗಿ ಜಾತಿ, ಧರ್ಮಗಳ ಹಂಗಿಲ್ಲದೆ ಭಾರತದ  ಕೋಟ್ಯಾಂತರ ಜನರ ಮನ ಗೆದ್ದ ಅಮೀರ್ ಖಾನ್ ಕುಟುಂಬಕ್ಕೆ ಇಂದು ಕೀರ್ತಿ, ಹಣ, ಶ್ರೀಮಂತಿಕೆ ಎಲ್ಲವೂ ದಕ್ಕಿದೆ ಜಗತ್ತಿನ ಯಾವುದೇ ಪ್ರದೇಶಕ್ಕೆ ಹೋಗಿ ಬದುಕಲು ಅವರು ಸರ್ವ ಸ್ವತಂತ್ರರು ಇದರ ಬಗ್ಗೆ ಎರಡು ಮಾತಿಲ್ಲ. ಆದರೆ, ಇಂತಹ ಆಲೋಚನೆಗಳ ಕುರಿತು ಯೋಚಿಸುವ ಮುನ್ನ ಅಮೀರ್ ಖಾನ್ ದಂಪತಿಗಳು ತಾವು ವಾಸಿಸುತ್ತಿರುವ ಮುಂಬೈ ನಗರದಲ್ಲಿ ಕೂಗಳತೆಯಲ್ಲಿರುವ ಧಾರಾವಿ ಎಂಬ ಕೊಳಗೇರಿಗೆ ಒಮ್ಮೆ ನೀಡುವುದು ಒಳಿತು. ದೇಶದ ವಿವಿಧ ಮೂಲೆಗಳಿಂದ ಬಂದು ಒಂದು ಹಿಡಿ ಅನ್ನಕ್ಕೆ ಮತ್ತು ಒಂದು ಮಾರು ಅಗಲದ ಸೂರಿಗಾಗಿ ಮುಂಬೈ ನಗರಕ್ಕೆ ಜಮೆಯಾಗಿರುವ ಬಡ ಜನತೆ ಧರ್ಮ ಮತ್ತು ಜಾತಿಯ ಎಲ್ಲೆಗಳನ್ನು ಮೀರಿ  ಹೇಗೆ ಬದುಕುತ್ತಿದ್ದಾರೆ ಎಂಬುದು ಅರ್ಥವಾಗುತ್ತದೆ. ನೆರೆಮನೆಯ ಮುಸ್ಲಿಂ ಕುಟುಂಬದ ಒಲೆಯ ಕೆಂಡವು ಹಿಂದೂ ಕುಟುಂಬವೊಂದರ ಒಲೆಗೆ ಬೆಂಕಿಯಾಗುವ ಪರಿಯಿಂದ ಹಿಡಿದು, ಉತ್ತರ ಭಾರತದ ಕುಟುಂಬದ ರೊಟ್ಟಿ, ದಕ್ಷಿಣ ಭಾರತದ ಅನ್ನ ಹೇಗೆ ಕುಟುಂಬಗಳ ನಡುವೆ ವಿನಿಮಯವಾಗುತ್ತವೆ ಎಂಬುದು ಮನದಟ್ಟಾಗುತ್ತದೆಸತ್ತ ಮುಸ್ಲಿಂ ನಾಗರೀಕನ ಶವ ಯಾತ್ರೆಯಲ್ಲಿ ಹೆಗಲು ಕೊಡುವ ಹಿಂದೂ ವ್ಯಕ್ತಿಯ ಹೃದಯದಲ್ಲಿ ಕೋಮು ಭಾವನೆಗಳಿಲ್ಲ ಎಂಬ ನಿಜ ಬದುಕಿನ ಘಟನೆಗಳು ಸಹ ನಮಗೆ ಗೋಚರವಾಗುತ್ತವೆ. ನಾನು ಹುಟ್ಟಿ ಬೆಳೆದ ಗ್ರಾಮೀಣ ಬದುಕಿನ ಸಂಸ್ಕøತಿಯಲ್ಲಿ ಹಳೆಯ ಬೈಸಿಕಲ್ ಗೆ ಗೋಣಿ ಚೀಲ ಕಟ್ಟಿಕೊಂಡು, ಹಳ್ಳಿ ಹಳ್ಳಿ ತಿರುಗಿ ಹುಣಸೆ ಬೀಜ, ಬೇವು ಮತ್ತು ಹೊಂಗೆ ಬೀಜ ಸಂಗ್ರಹಿಸುತ್ತಿದ್ದ  ಬಡ ಹುಸೇನಣ್ಣ, ಖಾದೀರಣ್ಣ, ಫತಾವುಲ್ಲಾ ಷರೀಪಣ್ಣ ಮುಂತಾದವರ  ಹೆಣ್ಣು ಮಕ್ಕಳ ವಿವಾಹಕ್ಕೆ ಇಡೀ ಊರಿನ ಜನ ಅಕ್ಕಿ, ಬೆಲ್ಲ, ತೆಂಗಿನ ಕಾಯಿ, ತರಕಾರಿ, ಮೇಕೆ, ಕುರಿಹೀಗೆ ತರಾವರಿ ವಸ್ತುಗಳನ್ನು ಕೊಟ್ಟು ಮುಸ್ಲಿಂ ಹೆಣ್ಣು ಮಗಳ ವಿವಾಹವನ್ನು ತಮ್ಮ ಮನೆ ಮಗಳ ವಿವಾಹವೆಂಬಂತೆ ಸಂಭ್ರಮಿಸಿದ ಘಟನೆಗೆ ಸ್ವತಃ ನಾನು ಸಾಕ್ಷಿಯಾಗಿದ್ದಿನಿಇಂತಹ ಅಪರೂಪದ ಒಳನೋಟ ಹಾಗೂ ಮಾನವೀಯ ನೆಲೆಯುಳ್ಳ ಗ್ರಾಮೀಣ ಸಂಸ್ಕತಿಯ ಕುರಿತು ಲಗಾನ್ ನಂತಹ ಚಿತ್ರ ನಿರ್ಮಾಣ ಮಾಡಿದ ಅಮೀನ್ ಖಾನ್ ಗೆ ಸಂಸ್ಕತಿ ನೆನಪಾಗುತ್ತಿಲ್ಲವೇಕೆ?

 ನಾವು ಬದುಕುತ್ತಿರುವ ವರ್ತಮಾನದ ಭಾರತದಲ್ಲಿ ಪರಿಸ್ಥಿತಿ ಮೊದಲಿನಂತೆ ಇಲ್ಲ ನಿಜ. ಧರ್ಮ ಮತ್ತು ಜಾತಿಗಳನ್ನು ಮತ ಬ್ಯಾಂಕ್ ರಾಜಕಾರಣ ಮಾಡಿಕೊಂಡಿರುವ ರಾಜಕೀಯ ಪಕ್ಷಗಳಲ್ಲಿ ಮೊದಲಿನ ಪಾರದರ್ಶಕತೆ, ಪ್ರಾಮಾಣಿಕತೆ ಉಳಿದಿಲ್ಲ. ಹಾಗಾಗಿ  ಪುಷ್ಪಾ ಭಾರ್ಗವರಂತಹ ವಿಜ್ಞಾನಿ ಮತ್ತು ದೇವನೂರು ಮಹಾದೇವ ರಂತಹ ಸೂಕ್ಷ್ಮ ಮನಸ್ಸಿನ ಬರºಗಾರರು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುವ ಸಂದರ್ಭಗಳಲ್ಲಿ ಆಡಿರುವ  ಎದೆಯಾಳದ ಮಾತುಗಳು  ಎಲ್ಲರ ಎದೆಗೆ ತಾಕಿವೆಇದರಿಂದಾಗಿ ಮೋದಿ ನೇತೃತ್ವದ ಸರ್ಕಾರಕ್ಕೆ ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಮುಜುಗರವಾಗಿದೆ. ಇಂತಹ ಅಹಿತಕರ ಘಟನೆಗಳಿಗೆ ಇತಿಶ್ರೀ ಹಾಡಬೇಕಾದವರು ಭಾರತೀಯ ನೆಲದ ಕಲಾವಿದರು, ಸಂಗೀತಗಾರರು ಮತ್ತು ಬರಹಗಾರರು ಮಾತ್ರ. ಸಮುದಾಯಗಳ ನಡುವೆ ಬಾಂಧವ್ಯದ ಬೆಸುಗೆಯಾಗಬಲ್ಲ, ಸಂಪರ್ಕ ಮತ್ತು ಸಂವಹನದ ಸೇತುವೆಯಾಗಬಲ್ಲ ತಾಕತ್ತು ಇವರಿಗಿದೆ. ಸಮಾಜದ ಎಲ್ಲಾ ವಿಕಾರಗಳಿಗೆ, ಕಾಯಿಲೆಗಳಿಗೆ  ಮದ್ದು ಮತ್ತು ವೈದ್ಯರಾಗಬೇಕಾದ ಅಮೀರ್ಖಾನ್, ಶಾರುಕ್ಖಾನ್ ರಂತಹ ಕಲಾವಿದರು ತಾವೇ ರೋಗಿಗಳಾದರೆ, ನೆಲದ ಸಂಸ್ಕøತಿಯ ಭವಿಷ್ಯವೇನು? ಒಲೆ ಹತ್ತಿ ಉರಿದೊಡೆ ನಿಲಬಹುದು, ಧರೆ ಹೊತ್ತಿ ಉರಿದೊಡೆ ನಿಲಬಹುದೆ

ಮಂಗಳವಾರ, ನವೆಂಬರ್ 24, 2015

ರಾಣಿ ಶಿವ ಶಂಕರ ಶರ್ಮರ " ಕೊನೆಯ ಬ್ರಾಹ್ಮಣ" ಕೃತಿ ಕುರಿತು...


ಹದಿನೈದು ವರ್ಷಗಳ ಹಿಂದೆ ತೆಲುಗು ಭಾಷೆಯಲ್ಲಿ ಪ್ರಕಟವಾದ “ ಕೊನೆಯ ಬ್ರಾಹ್ಮಣ’ ಎಂಬ ಹೆಸರಿನ ಈ ಆತ್ಮಕಥೆ ಈ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ  ಮನೋಭಾವದ ಲೇಖಕರಿಗೂ ಹಾಗೂ ಬ್ರಾಹ್ಮಣರಿಗೂ ಜೀರ್ಣಿಸಿಕೊಳ್ಳುವುದು  ಇಂದಿಗೂ ಕಷ್ಟವಾಗಿದೆ ನಿಜ. ಏಕೆಂದರೆ,  ಇದು ಸಾಹಿತ್ಯ ಕೃತಿಯಾಗಿರದೆ,. ರಾಣಿ ಶಿವಶಂಕರ ಶರ್ಮ ಎಂಬ ಬ್ರಾಹ್ಮಣ ಕುಟುಂಬದಿಂದ ಲೇಖಕನೊಬ್ಬ ಅತ್ಯಂತ ನಿರ್ಭಾವುಕತೆಯಿಂದ  ತನ್ನ ಕುಟುಂಬದ ಸದಸ್ಯರುಗಳ ಕುರಿತಂತೆ  ಬರೆದ ಆತ್ಮಕಥೆಯಾಗಿದೆ. ಉತ್ತರ ಆಂದ್ರ ಪ್ರದೇಶದ ಗೋದಾವರಿ ಪ್ರಾಂತ್ಯದ ಕೊನಸೀಮ ಎಂಬ ಪ್ರದೇಶದಲ್ಲಿ ಅತ್ಯಂತ ಪ್ರಸಿದ್ಧಿಯಾಗಿದ್ದ ಹಾಗೂ ವೇದಗಳ ಪಠಣ ಮತ್ತು ಯಜ್ಞ ಯಾಗದಿಯಲ್ಲಿ ಹೆಸರುವಾಸಿಯಾಗಿದ್ದ ಬ್ರಾಹ್ಮಣ ಕುಟುಂಬದಿಂದ ಬಂದವರಾದ ರಾಣಿ ಶಿವಶಂಕರ ಶರ್ಮರವರು   ತನ್ನ ತಂದೆಯವರ ಬ್ರಾಹ್ಮಣ್ಯ ಕುರಿತಾದ ನಂಬಿಕೆಗಳನ್ನು ಈ ಆತ್ಮಚರಿತ್ರೆಯ ನೆಪದಲ್ಲಿ ದಾಖಲಿಸಿದ್ದಾರೆ. ಜೊತೆಗೆ, ಭಾರತದ ಸನಾತನ ಬ್ರಾಹ್ಮಣ ಧರ್ಮದ ಆಚರಣೆಗಳು ಹಾಗೂ ಸಂಸ್ಕೃತಿಗಳನ್ನಲ್ಲದೆ,  ಬ್ರಾಹ್ಮಣ ಜಾತಿ ಮತ್ತು ಬ್ರಾಹ್ಮಣ್ಯದ ಪದ್ಧತಿಯಗಳನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿದ್ದಾರೆ. ಜೊತೆಗೆ  ಭಾರತದ ಹಿಂದೂ, ಇಸ್ಲಾಂ, ಹಾಗೂ ಕ್ರೈಸ್ತ ದರ್ಮಗಳಲ್ಲಾದ  ಪಲ್ಲಟಗಳನ್ನೂ ಸಹ ನಮ್ಮ ಮುಂದೆ ಇತಿಹಾಸದ ದಾಖಲೆಗಳ ಸಮೇತ ಮುಂದಿಡುತ್ತಾರೆ.

ರಾಣಿ ಶಿವ ಶಂಕರ ಶರ್ಮ ಇದೀಗ ಗುಂಟೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲೆಯೊಂದರಲ್ಲಿ ತೆಲುಗು ಭಾಷೆಯ ಶಿಕ್ಷಕರಾಗಿದ್ದು, ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯವನ್ನು ಪಡೆದವರಾಗಿದ್ದಾರೆ. ಎಡಪಂಥೀಯ ಚಿಂತನೆಗಳನ್ನು ಮೈಗುಡಿಸಿಕೊಂಡಿರುವ ಶರ್ಮರವರು ತೆಲುಗು ಭಾಷೆಯಲ್ಲಿ ನಕ್ಸಲ್ ಚಳುವಳಿಯ ಕಥೆಯನ್ನು ಒಳಗೊಂಡಿರುವ ಗುಹಾಂತರ್ ವಾಸಿ: ಎಂಬ ಕಾದಂಬರಿಯನ್ನು ಸಹ ರಚಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಂಗ್ಲೀಷ್ ಭಾಷೆಯಲ್ಲಿ ಬಂದ ಅವರ ಈ ಕೃತಿಯನ್ನು ಓದಿ, ನನ್ನ ಮಿತ್ರ, ಕಲಾವಿದ ಬರಹಗಾರ ಸೃಜನ್ ಮೂಲಕ ಅವರನ್ನು ಸಂಪರ್ಕಿಸಿ ಅಭಿನಂದಿಸಿದ್ದೆ. ಅಂದಿನಿಂದ ಆತ್ಮೀಯ ಮಿತ್ರರಾಗಿರುವ  ಶರ್ಮಾ ಜೊತೆ ಮೂರು ದಿನಗಳ ಹಿಂದೆ  ದೂರವಾಣಿಯಲ್ಲಿ ಮಾತನಾಡುತ್ತಾ,  “ಅತ್ಯಂತ ಮೆದು ಮಾತಿನ, ತಣ್ಣನೆಯ ಮನಸ್ಸು ಹಾಗೂ ವ್ಯೆಕ್ತಿತ್ವದ ನಿಮ್ಮೊಳಗೆ ಇಂತಹ ಕ್ರಾಂತಿಕಾರಿ ಹೇಗೆ ಹುಟ್ಟಿಕೊಂಡ? “ ಎಂದು ನಾನು ಪ್ರಶ್ನಿಸಿದಾಗ,  ಅವರು ಬಾಯ್ತಂಬಾ ನಕ್ಕರು. ಕೊನೆಯ ಬ್ರಾಹ್ಮಣ ಕೃತಿ ನನಗೆ ತೆಲುಗು ಭಾಷೆಗಿಂತ ಇಂಗ್ಲೀಷ್ ಭಾಷೆಯಲ್ಲಿ ಒಳ್ಳೆಯ ಹೆಸರನ್ನು ತಂದು ಕೊಟ್ಟಿತು ಎಂದರು.  ಜೊತೆಗೆ ನಿಮ್ಮಂತಹ ಅನೇಕ ಗೆಳೆಯರನ್ನು ಸಂಪಾದಿಸಿಕೊಟ್ಟಿತು ಎನ್ನುವ ಶರ್ಮರವರು ಈ ಕೃತಿಯು ಪ್ರಸಿದ್ಧ ಸಮಾಜ ವಿಜ್ಞಾನಿ ಹಾಗೂ ಚಿಂತಕ ಆಶೀಷ್ ನಂದಿಯವರಿಂದ ಹಿಡಿದು ಅನೇಕ ಭಾರತೀಯ ಲೇಖಕರ ಮೆಚ್ಚುಗೆ ಪಡೆದಿದೆ ಅದು ನನ್ನ ಪಾಲಿಗೆ ವಿಶೇಷವಾದ ಪ್ರಶಸ್ತಿ ಎಂದರು.
ಸಂಪ್ರಾದಾಯ ನಿಷ್ಟ ಬ್ರಾಹ್ಮಣ ಕುಟುಂಬದಿಂದ ಬಂದ  ಲೇಖಕರ ತಂದೆ, ರಾಣಿ ನರಸಿಂಹ ಶಾಸ್ತ್ರಿಗಳು ತಮ್ಮ ಸಾವಿನ ಕೊನೆಯ ದಿನಗಳಲ್ಲಿ ಎದುರಿಸಿದ ಬಿಕ್ಕಟ್ಟು, ಬ್ರಾಹ್ಮಣ್ಯದ  ಬಗೆಗಿನ ಅಚಲ ನಿಷ್ಠೆ,  ಜಿಜ್ಞಾಸೆ ಮತ್ತು ಬ್ರಾಹ್ಮಣ ದರ್ಶನ ಕುರಿತಂತೆ ಅವರಿಗೆ ಇರುವ ಒಳನೋಟ  ಎಲ್ಲವೂ ಈ ಕೃತಿಯಲ್ಲಿ ಸಂವಾದದ ರೂಪದಲ್ಲಿ ದಾಖಲಾಗಿವೆ.   ತಮ್ಮ ಇಬ್ಬರೂ ಪುತ್ರರು ಧರ್ಮ ಭ್ರಷ್ಟರು ಮತ್ತು ಜಾತಿ ಭ್ರಷ್ಟರಾದ ಕಾರಣ ತಮ್ಮ ಅಂತಿಮ ಸಂಸ್ಕಾರವನ್ನು ಅವರು ಮಾಡಬಾರದು ಎಂಬ ಕಠೋರ ನಿಲುವ ತಾಳುವ  ರಾಣಿ ನರಸಿಂಹ ಶಾಸ್ತ್ರಿಗಳು ಪುತ್ರರಿಂದ ಅಂತ್ಯ ಸಂಸ್ಕಾರ ಮತ್ತು ಶಾದ್ಧದಂತಹ ಕ್ರಿಯೆಗಳು ನೆರವೇರದಿದ್ದರೆ ತನಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ ಎಂಬ ಚಿಂತೆಯೆಂಬ ಚಿತೆಗೆ ಬೀಳುತ್ತಾರೆ. ಶಾಸ್ತ್ರಿಗಳ ಹಿರಿಯ ಪುತ್ರ ತತ್ವಶಾಸ್ತ್ರಕ್ಕೆ ಮಾರು ಹೋಗಿ ಚೆನ್ನೈ ನಗರದ ಮಠವೊಂದರಲ್ಲಿ ದೀಕ್ಷೆ ಪಡೆದು ಸ್ವಾಮೀಜಿಯಾಗಿ ಪರಿವರ್ತನೆ ಹೊಂದಿರುತ್ತಾರೆ. ಎರಡನೇಯ ಪುತ್ರ ( ಈ ಕೃತಿಯ ಲೇಖಕ) ಎಡಪಂಥೀಯ ಚಿಂತನೆಗಳಿಂದ ಪ್ರಭಾವಿತಗೊಂಡು ದೇವರು, ಧರ್ಮಗಳನ್ನು ನಂಬದ ನಿರೀಶ್ವರವಾದಿಯಾಗಿದ್ದಾರೆ. ಇಂತಹ ಸಂಕಟಗಳ ನಡುವೆ ಸಾವಿನ ಹೊಸ್ತಿಲಲ್ಲಿ ತಲೆ ಇಟ್ಟು ಮಲಗಿರುವ ಶಾಸ್ತ್ರಗಳ ಮನಸ್ಸಿನೊಳಗಿನ ನಡೆಯುವ  ತಾಕಲಾಟ ಈ ಕೃತಿಯಲ್ಲಿ ನಮಗೆ ಬ್ರಾಹ್ಮಣ ದರ್ಶನದ ಅನೇಕ ಮಗ್ಗಲುಗಳನ್ನು ಪರಿಚಯಿಸುತ್ತದೆ. ಬ್ರಾಹ್ಮಣ ಮತ್ತು ಬ್ರಾಹ್ಮಣ್ಯ ಎಲ್ಲವೂ ಒಂದೇ ಎಂದು ನಂಬಿಕೊಂಡಿದ್ದ ನನ್ನಂತಹ ಅನೇಕ ಬ್ರಾಹ್ಮಣೇತರರಿಗೆ ಹಲವು ಅಚ್ಚರಿಯ ಸಂಗತಿಗಳು ಈ ಕೃತಿಯಲ್ಲಿ ತೆರೆದು ಕೊಳ್ಳುತ್ತವೆ. ಗುಡಿ ಕಟ್ಟುವುದು ಅಥವಾ ಪೂಜೆ ಮಾಡುವುದು ಬ್ರಾಹ್ಮಣರ ಕರ್ತವ್ಯವಲ್ಲ ಎಂದು ಪ್ರತಿ ಪಾದಿಸುವ ಶಾಸ್ತ್ರಿಗಳು ಎಂದೂ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಹಾಗೂ ತೆಂಗಿನ ಕಾಯಿ ಹೊಡೆಯದ ವಿವರಗಳನ್ನು ಅವರ ಪುತ್ರ ಶರ್ಮ ಇಲ್ಲಿ  ದಾಖಲಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಗುಡಿ ಗೋಪುರಗಳು ಹದಿನೇಳನೆಯ ಶತಮಾನದ ಬ್ರಿಟೀಷರ ಆಳ್ವಿಕೆಯಲ್ಲಿ ಹೇಗೆ ಶೂದ್ರರ ಕೈಯಿಂದ ಜಾರಿ ಬ್ರಾಹ್ಮಣ ಸಮುದಾಯದ ಪಾಲಾದವು ಎಂಬುದನ್ನು ಸಾಕ್ಷಾಧಾರಗಳ ಸಮೇತ ವಿವರಿಸಿದ್ದಾರೆ. ಇನ್ನೊಂದು ಆಸಕ್ತಕರ ಸಂಗತಿಯೆಂದರೆ, ತಮಿಳುನಾಡಿನ ಶೈವ ಬ್ರಾಹ್ಮಣರು ಭಗವದ್ಗೀತೆಯನ್ನು ಓದುವುದನ್ನು ನಿರಾಕರಿಸಿದ ಘಟನಾವಳಿಗಳನ್ನು ಸಹ ದಾಖಲಿಸಿದ್ದಾರೆ.

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ, ಹನ್ನೊಂದನೆಯ ಶತಮಾನದ ಕಾಶ್ಮೀರದಲ್ಲಿ ಹಿಂದೂ ದೇವಾಲಯಗಳ ವಿಗ್ರಹಗಳ ಅಡಿಯಲ್ಲಿ ಶೇಖರಿಸಿ ಇಡಲಾಗುತ್ತಿದ್ದ ಸಂಪತ್ತುಗಳನ್ನು ಕೊಳ್ಳೆ ಹೊಡೆಯಲು ಅನೇಕ ಹಿಂದು ಮಹಾರಾಜ, ರಾಜ ಹರ್ಷ ಎಂಬುವನು ದೇವೊತ್ಪತ ಎಂಬ ಹುದ್ದೆಯನ್ನು ಸೃಷ್ಟಿಸಿ, ಅದಕ್ಕೆ ಒಬ್ಬ ಸೈನಾಧಿಕಾರಿಯನ್ನು ನೇಮಕ ಮಾಡಿದ್ದ ವಿವರವೂ ಸಹ ಈ ಕೃತಿಯಲ್ಲಿದೆ. ಬ್ರಾಹ್ಮಣ ಸ್ತ್ರೀಯರನ್ನು ಶೂದ್ರರಂತೆ ನಡೆಸಿಕೊಳ್ಳಲು ಇರುವ ಕಾರಣಗಳಿಂದ ಹಿಡಿದು, ಲೇಖಕರ ಭಾವ ಪೂಜೆಯ ನೆಪದಲ್ಲಿ ಮದ್ಯ ಮತ್ತು ಮಾಂಸವನ್ನು ಸೇವನೆ ಮಾಡುತ್ತಿದ್ದ ಘಟನೆಯನ್ನು ಹಾಗೂ ಅದನ್ನು ಶಾಸ್ತ್ರಗಳ ಮೂಲಕ ಸಮರ್ಥಿಸಿಕೊಳ್ಳುವ ಬಗೆಯನ್ನು  ಲೇಖಕರು ಯಾವುದೇ ಮುಚ್ಚು ಮರೆಯಿಲ್ಲದೆ ಬರೆದುಕೊಂಡಿದ್ದಾರೆ.
ರಾಜಮಂಡ್ರಿ ನಗರದಲ್ಲಿ ವಿದ್ಯೆಯ ಸಂದರ್ಭದಲ್ಲಿ ತಲೆಯ ಮೇಲೆ ಜುಟ್ಟು ಬಿಟ್ಟುಕೊಂಡು ಬ್ರಾಹ್ಮಣ ಬಾಲಕನಾಗಿ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ವಿಶೇಷವಾಗಿ ಹರೆಯದ ದಿನಗಳ ತಾಕಲಾಟ ಇವುಗಳನ್ನು ಅತ್ಯಂತ ನಿರ್ಭಾವುಕರಾಗಿ ದಾಖಲಿಸುವ ಲೇಖಕರಿಗೆ, ಆದುನಿಕ ಹಾಗೂ ವರ್ತಮಾನದ ಜಗತ್ತು ನನ್ನದಲ್ಲ ಎಂದು ಭಾವಿಸುವ ಅವರ ತಂದೆ ಕೊನೆಯ ಬ್ರಾಹ್ಮಣ ಎಂದು ಕರೆದಿರುವುದು ಸೂಕ್ತವಾಗಿದೆ.
 ತಾವು ನಂಬಿದ ತತ್ವ ಮತ್ತು ಸಿದ್ಧಾಂತಗಳಿಗೆ ತಿಲಾಂಜಲಿ ನೀಡಲು ನಿರಾಕರಿಸುವ ಲೇಖಕರು ಕೊನೆಗೂ ಅವರ ತಂದೆ ರಾಣಿ ನರಸಿಂಹ ಶಾಸ್ತ್ರಿಗಳ ಅಂತ್ಯ ಕ್ರಿಯೆಯನ್ನು ಸಂಪ್ರದಾಯದಂತೆ ನಡೆಸಲು ನಿರಾಕರಿಸುತ್ತಾರೆ. ಅವರ ತಂದೆಯ ವ್ಯೆಕ್ತಿತ್ವ ನಮಗೆ ಅನಂತ ಮೂರ್ತಿಯವರ ಸಂಸ್ಕಾರದ ಪ್ರಾಣೇಶಚಾರ್ಯರನ್ನು ನೆನಪಿಸುತ್ತದೆ. ಮಂಚದ ಮೇಲೆ ಮಲಗಿದ್ದ ಶಾಸ್ತ್ರಿಯವರು ತಮ್ಮ ಪತ್ನಿಯನ್ನು ಕರೆದು ಕೊನೆಯ ಕ್ಷಣಗಳಲ್ಲಿ ನೆಲದ ಮೇಲೆ ಮಲಗಿ ಪ್ರಾಣ ಬಿಡುತ್ತಾರೆ. ಏಕೆಂದರೆ, ಅವರ ದೃಷ್ಟಿಯಲ್ಲಿ  ನಿಜವಾದ ಬ್ರಾಹ್ಮಣನಿಗೆ ಮಂಚದ ಮೇಲೆ ಸಾವು ನಿಷಿದ್ಧ. ತಾವು ಸಾಯುವ ಮುನ್ನ ತಮ್ಮ ಪತ್ನಿಗೆ  ನೀನು ಕೇಶ ಮುಂಡನ ಮಾಡಿಸಿಕೊಳ್ಳಬೇಕೆಂದು ವಾಗ್ದಾನ ಪಡೆದು ಶಾಸ್ತ್ರಿಯವರು ಪ್ರಾಣ ಬಿಡುತ್ತಾರೆ.
ರಾಣಿ ಶಿವಶಂಕರ ಶರ್ಮ ತಮ್ಮ ಈ ಕೃತಿಯ ಕೊನೆಯ ಸಾಲುಗಳನ್ನು ಈ ರೀತಿ ದಾಖಲಿಸಿದ್ದಾರೆ.
“ನಮ್ಮ ದೊಡ್ಡಪ್ಪನವರ ಜೇಷ್ಠ ಪುತ್ರ ರಾಣಿ ಅಣ್ಣಯ್ಯ ನಮ್ಮ ತಂದೆಯವರ ಕರ್ಮಗಳನ್ನು ಮಾಡಿದ. ಅವನು ಸನಾತನ ಧರ್ಮವನ್ನು ತಪ್ಪದ ಅನಕ್ಷರಸ್ತ.
ಹೈದರಾಬಾದಿನಲ್ಲಿ ಕೆಮಿಸ್ಟ್ ಆಗಿ ಕೆಲಸಮಾಡುತ್ತಿರುವ ನಮ್ಮ ಬಾಬಯ್ಯನವರ ಮಗ ಕೊಂಡ, ನಮ್ಮಣ್ಣ ತತ್ವವಿದಾನಂದ ಸರಸ್ವತಿ ಸ್ವಾಮಿಗಳ ಕಡೆಯಿಂದ ಸಂದೇಶ ತೆಗೆದುಕೊಂಡು ಬಂದ. ಪಿತೃ ಕರ್ಮಗಳನ್ನು ನಿರ್ವಹಿಸುವಂತೆ ನನಗೆ ಮತ್ತು ಕೂದಲು ತೆಗೆಸಿಕೊಳ್ಳಬೇಡವೆಂದು ನಮ್ಮಮ್ಮನಿಗೆ ನಮ್ಮಣ್ಣ ಸಂದೇಶವಿತ್ತಿದ್ದ.
ಕೂದಲು ತೆಗೆಸಿಕೊಳ್ಳಬೇಡವೆಂದ ಅಣ್ಣನ ಮಾತನ್ನು ನಾನು ಅಮ್ಮನಿಗೆ ಹೇಳಿದೆ. ವೇದ ಪಂಡಿತರು ಅಬ್ಬಾಯಿ ದೊಡ್ಡಪ್ಪ ಹೋದಾಗ ದೊಡ್ಡಮ್ಮ ಮುಂಡನ ಮಾಡಿಸಿಕೊಂಡಿರಲಿಲ್ಲವೆಂದು ನೆನಪು ಮಾಡಿದೆ.ಅಮ್ಮ ಒಪ್ಪಲಿಲ್ಲ. “ ಅವರು (ಅಪ್ಪ) ಇಡೀ ದೇಶಕ್ಕೆ ದೊಡ್ಡ  ಮಹಾ ಪಂಡಿತರು; ಆದ್ದರಿಂದ ನಾನು ಧರ್ಮ ತಪ್ಪುವುದು ಸರಿಯಲ್ಲ ಎಂದಳು,”


ಈ ಅಪರೂಪದ ಕೃತಿ ಇದೀಗ ಅಭಿನವ ಪ್ರಕಾಶನದಿಂದ ಕನ್ನಡದಲ್ಲಿ ಪ್ರಕಟವಾಗಿದ್ದು, ಯುವ ಪ್ರತಿಭಾವಂತ ಕವಿ ಹಾಗೂ ಲೇಖಕ ಆನಂದ ಲಕ್ಕೂರ್ ನೇರ ತೆಲುಗು ಭಾಷೆಯಿಂದ ಕನ್ನಕ್ಕೆ ಅತ್ಯಂತ ಪ್ರಭುದ್ಧ ಭಾಷೆಯಲ್ಲಿ ಸಮರ್ಥವಾಗಿ ಅನುವಾದ ಮಾಡಿದ್ದಾರೆ. ಇತ್ತೀಚೆಗೆ ತೆಲುಗು ಭಾಷೆಯಿಂದ ಕನ್ನಡಕ್ಕೆ ಬಂದ ಎರಡು ಅತ್ಯುತ್ತಮ ಆತ್ಮ ಕಥೆಗಳೆಂದರೆ, ಒಂದು ಕೊನೆಯ ಬ್ರಾಹ್ಮಣ ಮತ್ತು ಇನ್ನೊಂದು ಸೃಜನ್ ಅನುವಾದ ಮಾಡಿರುವ “ ಕರಿ ಮೆಣಸಿನ ಗಿಡ” ಎಂಬ ದಲಿತ ಆತ್ಮ ಕಥನ.ಈ ಇಬ್ಬರು ಯುವ ಲೇಖಕರಿಂದ ನಾವು ಇನ್ನಷ್ಟು ತೆಲುಗು ಭಾಷೆಯ ಸಮೃದ್ಧವಾದ ಸಾಹಿತ್ಯವನ್ನು ನಿರೀಕ್ಷಿಸಬಹುದು.

ಬುಧವಾರ, ನವೆಂಬರ್ 18, 2015

ಗಾಂಧಿ ಮತ್ತು ಶ್ರೀ ಗಂಧದ ಕಟ್ಟಿಗೆ

ಹಾತ್ಮ ಗಾಂಧೀಜಿಯವರ ಬದುಕಿನಲ್ಲಿ ಸೆರೆಮನೆಗಳ ವಾಸ ಎಂಬುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. 1915 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ತಾವು ಅನುಭವಿಸಿದ ಸೆರೆಮನೆಯ ವಾಸವನ್ನು ಲೆಕ್ಕವಿಟ್ಟಿರಲಿಲ್ಲ.. 1930 ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹ ಚಳುವಳಿಯನ್ನು ತನ್ನ ಪರಿಣಾಮಕಾರಿ ವರದಿಯ ಮೂಲಕ ಜಗತ್ತಿಗೆ ತಲುಪಿಸಿದ್ದ ಅಮೇರಿಕಾದ ಪತ್ರಕರ್ತ ವೆಬ್ ಮಿಲ್ಲರ್ 1931 ರಲ್ಲಿ ಲಂಡನ್ ನಗರದಲ್ಲಿ ಗಾಂಧೀಜಿಯವರನ್ನು ಸಂದರ್ಶನ ಮಾಡುವಾಗ, " ಎಷ್ಟು ವರ್ಷಗಳ ಕಾಲ ನೀವು ಜೈಲಿನಲ್ಲಿದ್ದರಿ? ಅಲ್ಲಿನ ವಾಸ ಹೇಗಿತ್ತು? " ಎಂಬ ಪ್ರಶ್ನೆಗೆ ಗಾಂಧೀಜಿಯವರು " ನಾನು ಎಷ್ಟು ಬಾರಿ ಜೈಲಿಗೆ ಎಂಬುದರ ಬಗ್ಗೆಯಾಗಲಿ, ದಿನಗಳ ಬಗ್ಗೆಯಾಗಲಿ ಲೆಕ್ಕವಿಟ್ಟವನಲ್ಲ. ಆದರೆ, ಜೈಲು ವಾಸವು ನನಗೆ ಆತ್ಮಾವಲೋಕನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ಜೊತೆಗೆ ಅನೇಕ ಕೃತಿಗಳನ್ನು ಮತ್ತು ಲೇಖನಗಳನ್ನು ಬರೆಯಲು ಸಹಕಾರಿಯಾಯಿತು. ನಾನು ಜೈಲಿನಲ್ಲಿ ಇದ್ದಷ್ಟು ದಿನಗಳ ಕಾಲ ಬ್ರಿಟೀಷ್ ಅಧಿಕಾರಿಗಳು ನನ್ನನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ ನಡೆಸಿಕೊಂಡರು" ಎಂದು ಉತ್ತರಿಸಿದ್ದರು. 1942 ರಲ್ಲಿ ನಡೆದ ಚಲೆಜಾವ್ ಅಥವಾ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಂಬೆ ನಗರದಲ್ಲಿ  1942 ರ ಪೆಬ್ರವರಿ 9 ರಂದು ಬಂಧನಕ್ಕೆ ಒಳಗಾದ ಗಾಂಧಿ, ಕಸ್ತೂರಬಾ. ಮಹಾದೇವ ದೇಸಾಯಿ, ಮೀರಾ ಬೆಹನ್, ಸರೋಜಿನಿ ನಾಯ್ಡು  ಹಾಗೂ ಇನ್ನಿತರೆ ಕಾರ್ಯಕರ್ತರನ್ನು ಬ್ರಿಟೀಷ್ ಸರ್ಕಾರ ಪುಣೆ ನಗರಕ್ಕೆ ಸ್ಥಳಾಂತರಿಸಿ, ಯರವಾಡ ಜೈಲಿನ ಸಮೀಪವಿದ್ದ ಆಗಾ ಖಾನ್ ಅರಮನೆಯಲ್ಲಿ ಗೃಹ ಬಂಧನದಲ್ಲಿರಿಸಿತು.


ಆಗಖಾನ್ ಅರಮನೆಯ ಗೃಹಬಂಧನ ಗಾಂಧೀಜಿಯವರ ಪಾಲಿಗೆ ಮರೆಯಲಾರದ ಅನುಭವವಾಯಿತು. ಏಕೆಂದರೇ, ಅದೇ ಅರಮನೆಯಲ್ಲಿ ಗಾಂಧೀಜಿ ಪಾಲಿಗೆ ಆಪ್ತ ಕಾರ್ಯದರ್ಶಿಯಾಗಿದ್ದುಕೊಂಡು,ಅವರ ಆತ್ಮದಂತಿದ್ದ ಮಹಾದೇವ ದೇಸಾಯಿ 1942 ರ ಆಗಸ್ಟ್  15 ರಂದು ಹೃದಯಾಘಾತದಿಂದ ನಿಧನ ಹೊಂದಿದರು. “ ಶಿಷ್ಯನ ರೂಪದಲ್ಲಿದ್ದ ನನ್ನ ಗುರು” ಎಂದು ಬಣ್ಣಿಸಿದ ಗಾಂಧೀಜಿಯವರು, ಮಹಾದೇವ ದೇಸಾಯಿಯವರ ಅಂತ್ಯ ಕ್ರಿಯೆಯನ್ನು ಅರಮನೆಯ ಹಿಂಭಾಗ ನೆರವೇರಿಸಿ, ಅವರ ನೆನಪಿಗಾಗಿ ಸಮಾಧಿಯನ್ನು ನಿರ್ಮಿಸಿ, ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಹೋಗಿ ಅಲ್ಲಿ ಗೌರವ ಸಲ್ಲಿಸಿ ಬರುತ್ತಿದ್ದರು.
ಅದೇ ಅರಮನೆಯಲ್ಲಿ 1944 ಪೆಬ್ರವರಿ 22 ರಂದು ಗಾಂಧೀಜಿಯವರ ಅರ್ಧಾಂಗಿ ಕಸ್ತೂರ ಬಾ ರವರು ಅದೇ ಅರಮನೆಯ ಕೊಠಡಿಯಲ್ಲಿ ಗಾಂಧೀಜಿಯವರ ಜೊತೆ ಗೃಹಬಂಧನದಲ್ಲಿದ್ದಾಗ  ನಿಧನ ಹೊಂದಿದರು.  ತಮ್ಮ ತೊಡೆಯ ಮೇಲೆ ಕಸ್ತೂರಬಾ ಅವರ ತಲೆಯನ್ನಿಟ್ಟುಕೊಂಡು ಇಡೀ ರಾತ್ರಿ ರೋಧಿಸಿದ ಗಾಂಧೀಜಿಯವರು, ಬ್ರಿಟೀಷ್  ಅಧಿಕಾರಿಗಳ ಮನವಿಯ ಮೇರೆಗೆ  ಬೆಳಗಿನ ಜಾವ ಅರಮನೆಯ ಮುಂದೆ ನೆರದಿದ್ದ ಜನಸ್ತೋಮವನ್ನು ನಿಯಂತ್ರಿಸಲು ಕೊಠಡಿಯಿಂದ ಹೊರಬಂದರು.
ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂದು ಬ್ರಿಟಿಷ್ ಜೈಲು ಅಧಿಕಾರಿಗಳು ಗಾಂಧೀಜಿಯವರ ಸಲಹೆ ಕೇಳಿದಾಗ, ಗಾಂಧೀಜಿಯವರು ಅತ್ಯಂತ ಸರಳವಾಗಿ ಅರಮನೆಯ ಹಿಂಭಾಗ ನೆರವೇರಿಸೋಣ ಎಂದು ಸಲಹೆ ನೀಡಿದರು. ಜೊತೆಗೆ ಪುಣೆ ನಗರದಿಂದ ಸಾಧಾರಣ ಕಟ್ಟಿಗೆಯನ್ನು ತರಲು ಸೂಚಿಸಿದರು. ಈ ಸಂದರ್ಭದಲ್ಲಿ ಜೈಲು ಅಧಿಕಾರಿಯೊಬ್ಬ, “ ಬಾಪೂಜಿ ನೀವು ಅನುಮತಿ ನೀಡಿದರೆ ಗಂಧದ ಕಟ್ಟಿಗೆಯಲ್ಲಿ ಕಸ್ತೂರಬಾ ರವರ ಅಂತ್ಯ ಸಂಸ್ಕಾರ ನೆರವೇರಿಸಬಹುದು” ಎಂಬ ಸಲಹೆ ಕೊಟ್ಟ. ಈಗ ಗಂಧದ ಕಟ್ಟಿಗೆ ಎಲ್ಲಿಂದ ತರುತ್ತೀರಿ? ಗಾಂಧೀಜಿ ಪ್ರಶ್ನಿಸಿದಾಗ, ಜೈಲು ಅಧಿಕಾರಿ ತೀರಾ ಸಂಕೋಚದಿಂದ ಹಾಗೂ ತಣ್ಣನೆಯ ಧ್ವನಿಯಲ್ಲಿ “ ಬಾಪು ನೀವು ಪೂನಾ ಒಪ್ಪಂಧ ಕುರಿತಂತೆ ಉಪವಾಸ ಸತ್ಯಾಗ್ರಹ ಕುಳಿತಾಗ, ನೀವು ಬದುಕುವುದು ಖಾತ್ರಿಯಿಲ್ಲ ಎಂದು ನಿರ್ಧರಿಸಿ, ಸರ್ಕಾರ ನಿಮ್ಮ ಅಂತ್ಯಕ್ರಿಯೆಗಾಗಿ 1800 ಕೆ.ಜಿ. ಗಂಧದ ಕಟ್ಟಿಗೆಯನ್ನು ಶೇಖರಿಸಿ ಇಡಲಾಗಿತ್ತು.  ಈಗ  ಅದು ಪುಣೆಯ ಯರವಾಡ ಜೈಲಿನಲ್ಲಿದೆ” ಎಂದು ಉತ್ತರಿಸಿದ.
ಗಾಂಧೀಜಿಯ ಮುಖದ ಮೇಲೆ ಸಣ್ಣನೆಯ ನಗುವೊಂದು ಮೋಡದಂತೆ ಕ್ಷಣಾರ್ಧದಲ್ಲಿ ತೇಲಿ ಹೋಯಿತು. “ ಓ ಹಾಗಾದ್ರೆ ಅದು ನನ್ನ ಆಸ್ತಿ. ನನ್ನ ಮಡದಿಯ ಅಂತ್ಯ ಸಂಸ್ಕಾರಕ್ಕೆ ಬಳಸಬಹುದು” ಎಂದರು. ಅವರ ಅನುಮತಿಯಂತೆ ಅರಮನೆಯ ಹಿಂಭಾಗ ನೆರವೇರಿದ ಅಂತ್ಯಕ್ರಿಯೆಯಲ್ಲಿ ಕಿರಿಯ ಪುತ್ರ ದೇವದಾಸ್ ಗಾಂಧಿ ಚಿತೆಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ, ಸನೀಹದಲ್ಲಿ ನಿಂತಿದ್ದ ಗಾಂಧೀಯವರು ಏಳುತ್ತಿದ್ದ ಬೆಂಕಿಯ ಜ್ವಾಲೆಯನ್ನು ನೋಡುತ್ತಾ, “ಈ ದಿನ ನನ್ನ ದೇಹದ  ಅರ್ಧ ಭಾಗ ಸುಟ್ಟಿ ಹೋಯಿತು” ಎಂದು ಸ್ವಗತದ ಧ್ವನಿಯಲ್ಲಿ ಮಾತನಾಡಿಕೊಂಡರು.

ತನ್ನದೊಂದು ಮನೆ, ತನ್ನದೊಂದು ಊರು, ತನ್ನ ಕುಟುಂಬ ಎಂಬ ಮಮಕಾರವಿಲ್ಲದೆ, ಇಡೀ ದೇಶವನ್ನು ಕುಟುಂಬ ಮಾಡಿಕೊಂಡು ಭಾರತವನ್ನು ಸುತ್ತಿದ ಗಾಂಧೀಜಿಯವರಿಗೆ ನಿಂತ ನೆಲವೇ ಮನೆಯಾಯಿತು. ಊರಾಯಿತು.ಇಪ್ಪತ್ತನೆಯ ಶತಮಾನದ ಭಾರತದ ರಾಜಕೀಯ ನಾಯಕ ಯಾರೆಂದು ನೀವು ಕೇಳಿದರೆ, ನನ್ನಲ್ಲಿ ಉತ್ತರವಿಲ್ಲ. ಆದರೆ, ದುರಂತ ನಾಯಕ ಯಾರೆಂದು ಕೇಳಿದರೆ, ನನ್ನ ಉತ್ತರ ಗಾಂಧೀಜಿ ಎಂಬುದಾಗಿರುತ್ತದೆ.
ಗಾಂಧೀಜಿಯವರ ಪರಮಾಪ್ತ ಹಾಗೂ ಪ್ರಖರ ವೈಚಾರಿಕತೆಯ ಶಿಷ್ಯ ಜೆ.ಬಿ. ಕೃಪಾಲನಿಯವರು ತಮ್ಮ ಮಹತ್ವದ ಕೃತಿಯಾದ “ Gandhi – His Life and Thougt” ಪುಸ್ತಕದಲ್ಲಿ ಅವರೊಂದಿಗಿನ ಒಡನಾಟದಲ್ಲಿ ತಾವು ಕಂಡುಕೊಂಡ ಗಾಂಧಿ ವ್ಯೆಕ್ತಿತ್ವವನ್ನು ಹೀಗೆ ದಾಖಲಿಸಿದ್ದಾರೆ.
“ ನನ್ನ ಬದುಕಿನಲ್ಲಿ ಆ ಮಹಾತ್ಮನ ಒಡನಾಟದ ದಿನಗಳು ಹಾಗೂ ನನ್ನ ಮೇಲಾದ ಪ್ರಭಾವಗಳು ಸದಾ ಹಸಿರಾಗಿವೆ. ಗಾಂಧಿಯೆಂದರೆ, ಕೇವಲ ಒಂದು ವ್ಯೆಕ್ತಿ ಅಥವಾ ವ್ಯೆಕ್ತಿತ್ವ ಮಾತ್ರವಲ್ಲ, ಅದೊಂದು ಅತೀತವಾದ ಶಕ್ತಿ. ಯಾವ ಕ್ಷಣದಲ್ಲಾರೂ ಅನ್ಯಾಯ ಮತ್ತು ಅಸತ್ಯಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ. ಸದಾ ಸತ್ಯ ಮತ್ತು ಪ್ರಾಮಾಣಿಕತೆಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡ ಬಹು ದೊಡ್ಡ ವ್ಯೆಕ್ತಿತ್ವ ಅವರದು. ತನ್ನನ್ನು ನಂಬಿದವರ ಅಥವಾ ಅನ್ಯಾಯಕ್ಕೆ ಒಳಗಾದವರ ರಕ್ಷಣೆಗೆ ಎಂದೂ ಹಿಂಜರಿಯದ ವ್ಯೆಕ್ತಿತ್ವ ಅವರದಾಗಿತ್ತು. ಅವರು ಪ್ರತಿಪಾದಿಸುತ್ತಿದ್ದ ವಿಷಯಗಳನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂಬ ಹಠಮಾರಿತನವಾಗಲಿ, ಜಿಗುಟುತನದ ಗುಣಗಳಾಗಲಿ ಅವರಲ್ಲಿ ಇರಲಿಲ್ಲ. ಅವರು ನಂಬಿದ್ದ ಅಹಿಂಸಾ ತತ್ವ ನನ್ನ ದೃಷ್ಟಿಯಲ್ಲಿ ನಕರಾತ್ಮಕ ಧೋರಣೆ ಎನಿಸಲಿಲ್ಲ. ಅವರು ಬಡವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ಗೌರವಿಸುತ್ತಿದ್ದರು, ಅವರಂತೆ ಸರಳವಾಗಿ ಬದುಕಲು ಇಚ್ಛಿಸುತಿದ್ದರು. ಅವರ ಈ ನಡುವಳಿಕೆಯಲ್ಲಿ ಬಡವರನ್ನು ಬಡವರಾಗಿ ಉಳಿಸುವ ಆಲೋಚನೆಗಳಿಗಿಂತ ಅವರೊಳಗೆ ಆತ್ಮವಿಶ್ವಾಸ ತುಂಬುವ ಕಾರ್ಯವಿಧಾನ ಎದ್ದು ಕಾಣುತ್ತಿತ್ತು”
ಇದಕ್ಕಿಂತ ಪರಿಣಾಮಕಾರಿಯಾಗಿ ಗಾಂಧೀಯವರನ್ನು ಬಣ್ನಿಸಲು ನನ್ನಲ್ಲಿ ಶಬ್ಧಗಳಿಲ್ಲ. ಕ್ಷಮಿಸಿ.


ಸೋಮವಾರ, ನವೆಂಬರ್ 16, 2015

ಇಬ್ಬರ ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ


 ವರ್ಷದ ಆಗಸ್ಟ್ ತಿಂಗಳಿನ ಮೊದಲ ವಾರ ನಡೆದ ಘಟನೆ ಇದು. ತಮಿಳುನಾಡಿನ ಕುಂಭಕೋಣಂ ನಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ  ಕಳೆದ ಮೂರು ವರ್ಷಗಳಲ್ಲಿ ನಾಲ್ಕನೆಯ ಬಾರಿ ಭೇಟಿ ನೀಡುತ್ತಿದ್ದೆ. ಆ ಊರಿನಲ್ಲಿ ಸುಮಾರು ಮುವತ್ತು ಎಕರೆ ಪ್ರದೇಶದಲ್ಲಿ ಎದ್ದು ನಿಂತಿರುವ ತ್ಯಾಗೇಶ ಅಥವಾ ತ್ಯಾಗರಾಜರ್ ಎನ್ನುವ ಬೃಹತ್ ದೇಗುಲ ಹಾಗೂ ಆರು ಎಕರೆ ವಿಸ್ತೀರ್ಣದಲ್ಲಿರುವ ಪುಷ್ಕರಣಿಗೆ ತಮಿಳು ನಾಡಿನಲ್ಲಿ ವಿಶಿಷ್ಠ ಸ್ಥಾನವಿದೆ. ತಮಿಳುನಾಡಿನ ಪ್ರಾಚೀನ ಸಂಗೀತ ಮತ್ತು ನೃತ್ಯದ ಅನೇಕ ಪ್ರಕಾರಗಳ ಇತಿಹಾಸವನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ ಈ ದೇವಸ್ಥಾನವು, ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಕರೆಯುವ ಶ್ಯಾಮಾಶಾಸ್ತ್ರಿ, ಮುತ್ತುಸ್ವಾಮಿ ದೀಕ್ಷಿತರು ಹಾಗೂ ತ್ಯಾಗರಾಜರ ಪೂರ್ವಿಕರ ನೆಲೆಯೂ ಹೌದು. ಇಲ್ಲಿ ಪ್ರತಿ ಹನ್ನೆರೆಡು ವರ್ಷಕ್ಕೆ ಒಮ್ಮೆ ನಡೆಯುವ ನೂರು ಅಡಿ ಎತ್ತರ ಹಾಗೂ ನಲವತ್ತು ನಾಲ್ಕು ಟನ್ ತೂಕದ ಬೃಹತ್ ರಥೋತ್ಸವ ಕೂಡ ಹೆಸರುವಾಸಿಯಾದುದು. ಒಂಬತ್ತನೇ ಶತಮಾನದಲ್ಲಿ ಚೋಳರಿಂದ ನಿರ್ಮಿತವಾದ ಈ ದೇಗುಲ ನಂತರ ಹದಿನೈದು ಮತ್ತು ಹದಿನಾರನೇ ಶತಮಾನದಲ್ಲಿ ವಿಜಯನಗರದ ಅರಸರಿಂದ ಪುನರ್ ನಿರ್ಮಾಣಗೊಂಡಿದೆ. ಆಗಮ ಶಾಸ್ತ್ರದ ರೀತಿಯಲ್ಲಿ ಬೆಳಿಗ್ಗೆ 5-30 ರಿಂದ ಸಂಜೆ 7 ಗಂಟೆಯವರೆಗೆ ಆರು ವಿವಿಧ ಬಗೆಯ  ಪೂಜೆಗಳು ನಡೆಯುತ್ತವೆ. ಇಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಕೂಡ ಆಗಮ ಶಾಸ್ತ್ರದ ಹಿನ್ನಲೆಯಲ್ಲಿ ರೂಪುಗೊಂಡಿದ್ದು ಎಂಬುದು ನನ್ನ ಅಧ್ಯಯನಕ್ಕೆ ವಿಶೇಷ ಕಾರಣವಾಗಿತ್ತು. ವಾಸ್ತು ಪ್ರಕಾರ ಇರುವ ದೇಗುಲದ ಅಷ್ಟ ದಿಕ್ಕುಗಳನ್ನು ಸೇರಿಸಿ, ಗರ್ಭ ಗುಡಿ ಇರುವ ಸ್ಥಳವನ್ನು ಬ್ರಹ್ಮ ಸ್ಥಳ ಎಂದು ಗುರುತಿಸಿ, ಇವುಗಳನ್ನು ನವ ಕೊಂಡಿಗಳು ಎಂದು ಇಲ್ಲಿ ಗುರುತಿಸಲಾಗಿದೆ. (ಕೊಂಡಿ ಎಂದರೆ, ಒಂದೊಂದು ದಿಕ್ಕನ್ನು ತೋರಿಸುವ ನಿರ್ಧಿಷ್ಟ ಸ್ಥಳ.) ಈ ಒಂಬತ್ತು ಸ್ಥಳಗಳಲ್ಲಿ ನಿಂತು ದೇವದಾಸಿಯರು ನೃತ್ಯ ಮಾಡಬೇಕಿತ್ತು. ಒಂದೊಂದು ಸ್ಥಳದಲ್ಲಿ ನೃತ್ಯದ ಪ್ರಕಾರ ಬದಲಾಗುತ್ತಿತ್ತು. ಅಂತಿಮವಾಗಿ ಬ್ರಹ್ಮ ಸ್ಥಳದ ನೃತ್ಯ ಉಯ್ಯಾಲೆ ರೂಪದ ನೃತ್ಯವಾಗಿರುತ್ತಿತ್ತು. ದೇವರನ್ನು ತೂಗಿ ಮಲಗಿಸುವ ನೃತ್ಯ ಇದಾಗಿತ್ತು ( ಈ ಕುರಿತು ಸವಿವರವಾಗಿ ನನ್ನ ಅಧ್ಯಯನ ಕೃತಿಯಾದ “ಪದಗಳಿವೆ ಎದೆಯಲ್ಲಿ” ಎಂಬ ದಕ್ಷಿಣ ಭಾರತ ದೇವದಾಸಿಯರ ಇತಿಹಾಸ ಕುರಿತ ಪುಸ್ತಕದಲ್ಲಿ ದಾಖಲಿಸುತ್ತಿದ್ದೀನಿ) ಇಂತಹ ಅಪರೂಪದ ವಿವರಗಳನ್ನು ತಮಿಳುನಾಡು ಸರ್ಕಾರವು ತಮಿಳು ಭಾಷೆಗೆ ಶಾಸ್ತ್ರೀಯ ಅಥವಾ ಅಭಿಜಾತ ಭಾಷೆ ಎಂಬ ಮಾನ್ಯತೆ ಸಿಕ್ಕಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಅನುದಾನವನ್ನು ಬಳಸಿಕೊಂಡು ಅನೇಕ ಪ್ರಾಚೀನ ಕೃತಿಗಳನ್ನು ಪ್ರಕಟ ಮಾಡುತ್ತಿದೆ. ತಂಜಾವೂರನ್ನು ಆಳಿದ ಮರಾಠ ದೊರೆ ಶರ್ಪೋಜಿ ಕಾಲದ ಸಂಗೀತದ ಇತಿಹಾಸವನ್ನು ಆಧುನಿಕ ತಮಿಳು ಭಾಷೆಗೆ ಅನುವಾದಿಸಿದ ನಂತರ ನನಗೆ ತಿಳಿಯಿತು. (2015 ರ ಜನವರಿಯಲ್ಲಿ ತಂಜಾವೂರಿನ ತಮಿಳು ವಿಶ್ವ ವಿದ್ಯಾನಿಲಯವು ಅಲ್ಲಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಮೂರು ಸಂಪುಟಗಳನ್ನು ಮೋಡಿ ತಮಿಳು ಭಾಷೆಯಿಂದ ಆಧುನಿಕ ತಮಿಳು ಭಾಷೆಗೆ ಅನುವಾದಿಸಿ ಪ್ರಕಟಿಸಿದೆ)


                                             ( ತಿರುವರೂರು ತ್ಯಾಗರಾಜರ ದೇಗುಲ ಮತ್ತು ರಥ)

ಈ ಮೇಲ್ಕಂಡ ಕಾರಣಗಳಿಂದ ನಾನು ಕುಂಭಕೋಣಂ ನಗರದಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ ಹೋಗುವಾಗ, ದಾರಿ ಮಧ್ಯೆ ಸುಮಾರು ಹತ್ತು ಕಿಲೋಮಿಟರ್ ದೂರದಲ್ಲಿ ತಿರುಮಲಪುರಂ ಹಾಗೂ ಕೃಷ್ಣರಾಜಪುರಂ ಎಂಬ ತೆಲುಗು ಹೆಸರಿನ ಪ್ರಭಾವದ ಊರುಗಳು ನನ್ನ ಗಮನ  ಸೆಳದಿದ್ದವು. ಜೊತೆಗೆ ಇವೆರೆಡಕ್ಕಿಂತ ಮುಖ್ಯವಾಗಿ “ ನಾಚ್ಛಿಯಾರ್ ಕೋಯಿಲ್ ಅಂದರೆ ನಾಚ್ಛಿಯಾರ್ ದೇವಸ್ಥಾನ ಎಂಬ ಒಬ್ಬ ಹೆಣ್ಣು ಮಗಳ ದೇವಸ್ಥಾನದ ಹೆಸರಿನಲ್ಲಿರುವ ಊರು ನನ್ನ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಈ ಬಗ್ಗೆ ತಂಜಾವೂರಿನ ಸಂಗೀತ ಮಹಲ್ ಗ್ರಂಥಾಲಯದಲ್ಲಿದ್ದ ಕೆಲವು ಅಧಿಕಾರಿಗಳನ್ನು ವಿಚಾರಿಸಿದ್ದೆ. ಅವರಿಗೆ ಸಂಪೂರ್ಣವಾಗಿ ಇತಿಹಾಸ ಗೊತ್ತಿಲ್ಲದಿದ್ದರೂ ಸಹ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರನು ಆ ಊರಿನ ಹೆಣ್ಣು ಮಗಳನ್ನು ವಿವಾಹವಾದ ಕಾರಣ ಈ ಹೆಸರು ಬಂದಿದೆ ಎಂಬ ಸುಳಿವು ಕೊಟ್ಟಿದ್ದರು. ಹಾಗಾಗಿ ತಿರುವರೂರಿಗೆ ಹೋಗುವ ಮುನ್ನ ನಾಚ್ಚಿಯಾರ್ ಕೋಯಿಲ್ ಗೆ ಭೇಟಿ ನೀಡಿ ಮಂದೆ ತಿರುವರೂರಿಗೆ ಹೋಗೋಣವೆಂದು ನಿರ್ಧರಿಸಿ ಬಸ್ ಹತ್ತಿದೆ. ಆ ಊರಿನ ಬಸ್ ನಿಲ್ದಾಣದಲ್ಲಿ ನಾನು ಇಳಿದ ನಂತರ ಸ್ಥಳಿಯ ಚಹಾ ಅಂಗಡಿಯವನ ಬಳಿ ತಮಿಳು ಭಾಷೆಯಲ್ಲಿ ಇಲ್ಲಿ ಅಮ್ಮನವರ ದೇವಸ್ಥಾನ ಎಲ್ಲಿದೆ? ಎಂದು ಕೇಳಿದೆ. ಆತ  ಮುಖ್ಯ ರಸ್ತೆಯೊಂದರ ದಕ್ಷಿಣ ದಿಕ್ಕಿಗೆ ಕೈ ತೋರಿಸಿ, “ರಸ್ತೆಯ ಕೊನೆಯಲ್ಲಿ ಒಂದು ಹಳ್ಳ ಹರಿಯುತ್ತಿದೆ ಅಲ್ಲಿದೆ ಹೋಗಿ, ಅಲ್ಲಿ ದೇವಸ್ಥಾನವಿದೆ” ಎಂದ. ನಾನು ಸುಮಾರು ಒಂದು ಕಿಲೋಮೀಟರ್ ನಡೆದು ದೇವಸ್ಥಾನ ತಲುಪಿದಾಗ ನನಗೆ ಅಚ್ಚರಿಯಾಯಿತು. ಸುಮಾರು ಅರವತ್ತು ಅಡಿ ಉದ್ದ ಮತ್ತು ನಲವತ್ತು ಅಡಿ ಜಾಗದಲ್ಲಿ ಹಾಕಲಾಗಿದ್ದ ತೆಂಗಿನ ಗರಿಗಳ ಚಪ್ಪರದ ಕೆಳಗೆ ಮಧ್ಯಭಾಗದಲ್ಲಿ ಸುಮಾರು ಮೂರು ಅಡಿ ಕಟ್ಟೆಯೊಂದರ ಮೇಲೆ ಅತ್ಯಂತ ಸಣ್ಣದೊಂದು ಗುಡಿ ಇತ್ತು. ಚಪ್ಪರದ ಮೂಲೆಯೊಂದರಲ್ಲಿ ಇದ್ದ ಪುಟ್ಟ ಗುಡಿಸಿಲಿನ ಮುಂದೆ ಹಾಕಲಾಗಿದ್ದ ಮರದ ಬೆಂಚ್ ಮೇಲೆ ಸೊಂಟಕ್ಕೆ ಬಿಳಿಯ ಪಂಚೆಯನ್ನು ಸುತ್ತಿಕೊಂಡು ಬರಿ ಮೈಯಲ್ಲಿ ಕುಳಿತ್ತಿದ್ದ ಹಿರಿಯ ವೃದ್ಧನೊಬ್ಬ ಎದ್ದು ಬಂದು ದೇವರಿಗೆ ಮಂಗಳಾರತಿ ಮಾಡಿ ನನ್ನ ಬಳಿ ಬಂದ. ಆರತಿ ತಟ್ಟೆಗೆ ಹತ್ತು ರೂಪಾಯಿ ದಕ್ಷಿಣೆ ಹಾಕುತ್ತಿದ್ದಂತೆ ತಟ್ಟೆಯಲ್ಲಿದ್ದ ವಿಭೋತಿ ತೆಗೆದು ನನ್ನ ಹಣೆಗೆ ಹಚ್ಚಿದ. ನಾನು ದಿಕ್ಕು ತಪ್ಪಿ ಬೇರೆ ದೇವಸ್ಥಾನಕ್ಕೆ ಬಂದಿದ್ದೀನಿ ಎಂಬುವುದು ಖಚಿತವಾಯಿತು. ಅದು ಸುಮಾರು ಬೆಳಿಗ್ಗೆ ಹನ್ನೊಂದು ಗಂಟೆ ಸಮಯ. ನಾನು ಆ ವ್ಯಕ್ತಿಯ ಬಳಿ ನನ್ನ ಪರಿಚಯ ಹೇಳಿಕೊಂಡು “ ನಾನು ನಾಚ್ಛಿಯಾರಮ್ಮನ ದೇವಸ್ಥಾನ ಹುಡುಕಿಕೊಂಡು ಬಂದಿದ್ದೀನಿ ಎಂದು ಹೇಳಿ ಇದು ಯಾವ ಅಮ್ಮನ ದೇವಸ್ಥಾನ ಎಂದು ಕೇಳಿದೆ. “ ಇದು ಆಗಸ ಮಾರಿಯಮ್ಮನ್ ಕೋಯಿಲ್ ಎಂದ. . ( ಆಕಾಶ ಮಾರಿಯಮ್ಮನ ದೇವಸ್ಥಾನ)  ಹಾಗಾದರೆ, ನಾಚ್ಛಿಯಾರ್ ಅಮ್ಮನ್ ಕೋಯಿಲ್ ಎಲ್ಲಿದೆ ಎಂದು ಕೇಳಿದೆ. “ಈ ಊರಿನಲ್ಲಿರುವುದು ನಾಚ್ಛಿಯಾರಮ್ಮ್ನನ ದೇವಸ್ಥಾನವಲ್ಲ, ಅದು ಪೆರುಮಾಳ್ ಕೋಯಿಲ್ ಅಂದರೆ, ವೆಂಕಟೇಶ್ವರನ ದೇವಸ್ಥಾನ. ಇಲ್ಲಿ ಪ್ರಥಮ ಪೂಜೆ ಯಾವಾಗಲೂ ನಾಚ್ಚಿಯಾರ್ ಅಮ್ಮನಿಗೆ ಸಲ್ಲುತ್ತದೆ ನಂತರ ವೆಂಕಟೇಶ್ವರನಿಗೆ ಸಲ್ಲುತ್ತದೆ ಎಂಬ ಕುತೂಹಲಕಾರಿ ಸಂಗತಿಯೊಂದನ್ನು ನನ್ನೆದುರು ಬಿಚ್ಚಿಟ್ಟ. ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟರು ಎಂಬಂತೆ ನನಗೆ ಅಷ್ಟು ಸಾಕಾಯಿತು. ಕೂಡಲೇ  ಅಲ್ಲಿದ್ದ ಬಾಲಕನನ್ನು ಕರೆದು ಪಕ್ಕದ ಹೋಟೆಲ್ ನಿಂದ ಮೂರು ಚಹಾ ತರಲು ಹೇಳಿ ಬೆಂಚಿನ ಮೇಲೆ ಕುಳಿತುಕೊಂಡು  ಆ ಹಿರಿಯ ಜೀವದ ಬಾಯಲ್ಲಿ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗದ ಕಥೆ ಕೇಳಲು ಕುಳಿತೆ.
ಮಾರಿಯಮ್ಮನ ದೇಗುಲದ ಅರ್ಚಕ ಹಾಗೂ ಹಿರಿಯ ಜೀವ ಜಾನಪದ ಶೈಲಿಯಲ್ಲಿ ನಾಚ್ಛಿಯಾರ್ ಅಮ್ಮನ ಕಥೆಯನ್ನು ಆರಂಭಿಸಿತು. “ ಈ ಊರಿನ ಗುಡ್ಡದ ಪಕ್ಕದಲ್ಲಿ ಒಂದು ಕೊಳವಿತ್ತು. ( ಅದು ಈಗಲೂ ದೇವಸ್ಥಾನದ ಬಳಿ ಇದೆ) ಮಕ್ಕಳಿಲ್ಲದ ಬ್ರಾಹ್ಮಣ  ಗೃಹಿಣಿಯೊಬ್ಬಳು ಒಂದು ದಿನ ಸ್ನಾನ ಮಾಡಲು ಕೊಳದ ಬಳಿ ತೆರಳಿದಾಗ,  ಕೊಳದ ಸೋಪಾನದ ಬಳಿ ಆಗ ತಾನೆ ಜನಿಸಿದ ಹೆಣ್ಣು ಮಗವೊಂದನ್ನು ಯಾರೋ ಒಬ್ಬ ತಾಯಿ ಬಿಟ್ಟು ಹೋಗಿದ್ದಳು. ಮುದ್ದಾದ  ಆ ಮಗುವನ್ನು ನೋಡಿದ  ಗೃಹಿಣಿ ಅದನ್ನು ತಂದು ಸಾಕಿ ಬೆಳಸಿದಳು. ಮುಂದೆ ಆ ಮಗು ಬೆಳೆದು ನಾಚ್ಚಿಯಾರ್ ಹೆಸರಿನಲ್ಲಿ ಯುವತಿಯಾದಳು. ಒಂದು ದಿನ ಆಕಾಶದಲ್ಲಿ ವಾಯು ವಿಹಾರ ಹೊರಟಿದ್ದ ತಿರುಪತಿ ವೆಂಕಟೇಶ್ವರನು ಈ ಯುವತಿಯ ಸೌಂದರ್ಯಕ್ಕೆ ಮರುಳಾಗಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ. ಆಗ ಯುವತಿಯು “ನೀನು ನನ್ನ ಅಮ್ಮನ ಅಪ್ಪಣೆ ಪಡೆಯಬೇಕೆಂದು” ಷರತ್ತು ವಿಧಿಸಿದಳು. ಅದರಂತೆ ವೆಂಕಟೇಶ್ವರಸ್ವಾಮಿಯು ಆಕೆಯ ಅಮ್ಮನ ಬಳಿ ಹೋಗಿ ವಿನಂತಿಸಿಕೊಂಡ. ಆಗ ನಾಚ್ಛಿಯಾರ್ ಅಮ್ಮನ ಸಾಕುತಾಯಿ ಇಕ್ಕಟ್ಟಿಗೆ ಸಿಲುಕಿದಳು. ವೆಂಕಟೇಶ್ವರನಿಗೆ ಈಗಾಗಲೇ ವಿವಾಹವಾಗಿದೆ. ಆದರೂ ನನ್ನ ಮಗಳನ್ನು ಬಯಸುತ್ತಿದ್ದಾನೆ. ವಿವಾಹ ಮಾಡಿಕೊಟ್ಟರೆ, ತಿರುಪತಿಯಲ್ಲಿ ನನ್ನ ಮಗಳು ಸುಖವಾಗಿ ಇರಲಾರಳು. ಆದರೂ ಮಗಳನ್ನು ಕೇಳುತ್ತಿರುವವನು ವೆಂಕಟೇಶ್ವರ ಇಲ್ಲವೆನ್ನಲು ಸಾದ್ಯವಾಗುತ್ತಿಲ್ಲ. ಏನು ಮಾಡಲಿ? ಎಂದು ಯೋಚಿಸಿದಳು. ಕೊನೆಗೆ ಉಪಾಯವೊಂದು ಹೊಳೆದಂತಾಗಿ ಆತನಿಗೆ ಕೆಲವು ಷರತ್ತುಗಳನ್ನು ವಿಧಿಸಿದಳು. “ ವೆಂಕಟೇಶ್ವರಾ, ನಿನಗೆ ನನ್ನ ಮಗಳನ್ನು ಕೊಟ್ಟು ವಿವಾಹ ಮಾಡಿ ಕೊಡುತ್ತೀನಿ. ಆದರೆ, ಆಕೆಯನ್ನು ತಿರುಪತಿಗೆ ಕಳಿಸಿಕೊಡುವುದಿಲ್ಲ. ಮಕ್ಕಳಿಲ್ಲದ ನನಗೆ ಆಕೆ ಸರ್ವಸ್ವ. ಹಾಗಾಗಿ ಆಕೆ ಇಲ್ಲಿಯೇ ಇರಬೇಕು. ಜೊತೆಗೆ ಈ ಊರಿಗೆ ಅವಳ ಹೆಸರನ್ನು ಇಡಬೇಕು” ಎಂದಳು. ನಾಚ್ಛಿಯಾರಮ್ಮನನ್ನು ವಿವಾಹವಾಗಲು ತುದಿಗಾಲಲ್ಲಿ ನಿಂತಿದ್ದ ವೆಂಕಟೇಶ್ವರ ತಕ್ಷಣವೇ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡ. ಅದರಂತೆ ಈ ಊರಿಗೆ ನಾಚ್ಚಿಯಾರಮ್ಮನ ಹೆಸರು ಬಂದಿತು. ಜೊತೆಗೆ ಇಲ್ಲಿ ನಿರ್ಮಾಣವಾಗಿರುವ ಪೆರುಮಾಳ್ ದೇವಸ್ಥಾನದಲ್ಲಿ ಪ್ರಥಮ ಪೂಜೆ ನಾಚ್ಛಿಯಾರ್ ಅಮ್ಮನಿಗೆ ಸಲ್ಲುತ್ತದೆ. ನಂತರ ಅಮ್ಮಾವ್ರ ಗಂಡನಿಗೆ ಸಲ್ಲುತ್ತದೆ’ ಎಂಬ ರೋಚಕವಾದ ಕಥೆಯನ್ನು ಹೇಳಿ ಮುಗಿಸಿದ.

                                             ( ಪೆರುಮಾಳ್ ದೇವಸ್ಥಾನ)

“ ಕಥೈ ಎಪ್ಪಡಿ ಇರುಕ್ಕು ವಾದ್ಯಾರ್?” ( ಕಥೆ ಹೇಗಿದೆ ಗುರುಗಳೆ) ಎಂದು ಎಲೆ ಅಡಿಕೆ ತೆಗೆದು ಬಾಯಲ್ಲಿ ಹಾಕಿಕೊಂಡ ಆ ಹಿರಿಯ ಜೀವ ನನ್ನ ಉತ್ತರಕ್ಕಾಗಿ ಎದುರು ನೋಡಿತು. “ಪೆರಿಯಾರ್ ( ಹಿರಿಯವರೇ) ಕಥೆಯೇನೊ ಚೆನ್ನಾಗಿದೆ. ಆದರೆ ಒಂದು ಪ್ರಶ್ನೆ, ವೆಂಕಟೇಶ್ವರ ಕಪ್ಪು ಬಣ್ಣದ ವ್ಯೆಕ್ತಿ ಅವನನ್ನು ನಿಮ್ಮೂರಿನ ಬ್ರಾಹ್ಮಣ ಸುಂದರಿ ಹೇಗೆ ಒಪ್ಪಿಕೊಂಡಳು? ಜೊತೆಗೆ ದೇವರುಗಳಲ್ಲಿ ತಿರುಪತಿ ತಿಮ್ಮಪ್ಪ ಸೂಪರ್ ಸ್ಠಾರ್ ರಜನಿ ಕಾಂತ್ ಇದ್ದಂಗೆ. ಅವನು ಹೇಗೆ ಪ್ರಥಮ ಪೂಜೆಯನ್ನು ಆಕೆಗೆ ಬಿಟ್ಟುಕೊಟ್ಟು, ಎರಡನೆಯ ಪೂಜೆಗೆ ಒಪ್ಪಿಕೊಂಡ? ಎಂಬ ಪ್ರಶ್ನೆಯನ್ನು ಆ ಹಿರಿಯ ಜೀವದ ಮುಂದಿಟ್ಟೆ.  “ವಾದ್ಯಾರ್, ನಿಮಗೆ ನಮ್ಮ ಹೆಣ್ಣು ಮಕ್ಕಳ ದೌರ್ಬಲ್ಯ ತಿಳಿದಿಲ್ಲ. “ ಸುಂದರಿ, ಜೀವನ ಪೂರ್ತಿ ನಿನ್ನ ಅಂಡನ್ನು ನಾನೇ ತೊಳಿತಿನಿ ಕಣೆ” ಅಂತಾ ಹೇಳಿಬಿಟ್ಟರೆ   ಸಾಕು ಮನಸ್ಸನ್ನು ಕರಗಿಸಿಕೊಂಡು ತಕ್ಷಣ ಒಪ್ಪಿಕೊಂಡು ಬಿಡುತ್ತಾರೆ” ಎಂದು ಬಾಯಲ್ಲಿರುವ ಎಲೆ ಅಡಿಕೆ ರಸ ಗಲ್ಲದ ಮೇಲೆ ಹರಿಯುವಂತೆ ಜೋರಾಗಿ  ನಗೆಯಾಡಿದ. ನಂತರ ತೀರಾ ಗಾಂಭಿರ್ಯದಿಂದ “ ನಿಮಗೊಂದು ಸತ್ಯ ಹೇಳಲಾ? ನಾವು ಗಂಡಸರು ಇದ್ದೀವಿಯಲ್ಲಾ, ಇದು ಹುಟ್ಟು ಹಲಾಲು ಕೋರರ ಸಂತತಿ. ಅಂಡು ತೊಳೆಯುತ್ತೇವೆ ಎಂದು ಅವರನ್ನು ನಂಬಿಸಿ, ವಂಚಿಸಿ ನಾವು ಮದುವೆಯಾಗುತ್ತೀವಿ.  ಆದರೇ,  ನಮ್ಮ ವೃದ್ಧಾಪ್ಯದ ದಿನಗಳಲ್ಲಿ ನಮಗೆ ಹೆಂಡತಿಯರಾಗಿ ಬಂದ ಆ ತಾಯಂದಿರು ನಮ್ಮ ತಿಕ ಮಕ ಎರಡನ್ನೂ ತೊಳೆದು ನಮ್ಮ ಪಾಲಿನ ಅಮ್ಮಂದಿರಾಗಿ ಬಿಡುತ್ತಾರೆ ಎನ್ನುತ್ತಾ ಮೌನಕ್ಕೆ ಜಾರಿತು. ಒಬ್ಬ ಅನಕ್ಷರಸ್ತ ಹಾಗೂ ಅಪಾರ ಜೀವನಾನುಭದ  ವ್ಯೆಕ್ತಿಯೊಬ್ಬನ  ಬಾಯಲ್ಲಿ  ಅನುಭವದ ಮಾತುಗಳು ಅನುಭಾವದ ಮಾತುಗಳಾಗಿ ಮಾರ್ಪಾಡಾಗುವ  ಬಗೆಯನ್ನು ಕಂಡು ನನಗೆ ಆಶ್ಚರ್ಯವಾಯಿತು. “ವಾದ್ಯಾರ್,  ಪೆರುಮಾಳ್ ದೇವಸ್ಥಾನದಲ್ಲಿ ಒಂದು ಗಂಟೆಗೆ ಬಾಗಿಲು ಹಾಕ್ ಬಿಡ್ತಾರೆ. ಮತ್ತೇ ನೀವು ಐದು ಗಂಟೆಯವರೆಗೆ ಕಾಯಬೇಕು ನಡೀರಿ ಬಿಟ್ಟು ಬರ್ತೀನಿ ಎನ್ನುತ್ತಾ ಎದ್ದು ನಿಂತ ಆ ವೃದ್ಧ  ತನ್ನ  ಪಂಚೆ ಬಿಗಿ ಮಾಡಿಕೊಳ್ಳುತ್ತಾ. ನಮ್ಮ ಮಾರಿಯಮ್ಮನೂ, ನಾಚ್ಛಿಯಾರಮ್ಮನೂ ಅಕ್ಕ ತಂಗಿಯರು” ಎಂದಾಗ ನನಗೆ ಆಶ್ಚರ್ಯವಾಯಿತು. ಅದೇಗೆ ಸಾಧ್ಯ? ನಮ್ಮ ಮಾರಿಯಮ್ಮ ಶೂದ್ರ ದೇವತೆ, ನಾಚ್ಛಿಯಾರಮ್ಮ ಬ್ರಾಹ್ಮಣ ದೇವತೆ ಅಲ್ಲವೆ? ಎಂದು ಪ್ರಶ್ನಿಸಿದೆ. ಅದಕ್ಕೂ ಆ ಹಿರಿಯ ಜೀವದ ಎದೆಯೊಳಗೆ  ಉತ್ತರವಿತ್ತು. ವಾದ್ಯಾರ್, ದೇವರಿಗೆ ಜಾತಿ ಎಲ್ಲಿದೆ? ನಾವು ಎಂದಾದರೂ ದೇವರುಗಳ ಜಾತಿ ಧರ್ಮ ನೋಡಿಕೊಂಡು ಕೈ ಮುಗಿತಿವಾ? ಕಣ್ಣಿಗೆ ಕಂಡ ಗುಡಿ ಗೋಪುರಗಳಿಗೆ ಕೈ ಮುಗಿಯುವ ನಮ್ಮೊಳಗೆ ಇಂತಹ ಭೇದ ಭಾವ ಇರಬಾರದು” ಎಂದು ಹೇಳುತ್ತಿದ್ದಂತೆ ನಮ್ಮ ಗ್ರಾಮೀಣ ಜನಪದರ ಜಗತ್ತು ಮತ್ತು ಅವರ ನಂಬಿಕೆಗಳು ಎಷ್ಟೊಂದು ವಿಶಾಲವಾಗಿವೆ ಅನಿಸಿತು. ಆ ಕ್ಷಣಕ್ಕೆ  ನಾವು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯುವುದಕ್ಕಿಂತ ಹೆಚ್ಚಾಗಿ ಇಂತಹ ಮಹಾನುಭಾವರ ಬಳಿ ಕಲಿಯುವುದು ಬಹಳಷ್ಟಿದೆ ಎನಿಸಿತು.


ಸುಮಾರು ಮಧ್ಯಾಹ್ನ 12-40 ರ ಸಮಯಕ್ಕೆ ಮಾರಿಯಮ್ಮನ ದೇವಸ್ಥಾನದಿಂದ ಒಂದು ಕಿಲೊಮೀಟರ್ ದೂರವಿದ್ದ ಪೆರುಮಾಳ್ ದೇವಸ್ಥಾನವನ್ನು ತಲುಪಿದೆ. ಕಡಿದಾದ ಕಲ್ಲಿನ ಗುಡ್ಡವನ್ನು ಹಂತ ಹಂತವಾಗಿ ಕಡಿದು ಸುಮಾರು ಅರವತ್ತು ಅಡಿ ಎತ್ತರದಲ್ಲಿ ನಿರ್ಮಿಸಿರುವ ಗರ್ಭ ಗುಡಿ ಹಾಗೂ ಬೃಹತ್ ದೇವಸ್ಥಾನದ ನಿರ್ಮಾಣ ಅಚ್ಚರಿ ಮೂಡಿಸುತ್ತದೆ. ಈ ದೇಗುಲವು ವಿಜಯ ನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿದೆ. ಕೋಟೆಯ ಹೆಬ್ಬಾಗಿಲಿನಂತಹ ಮುಖ್ಯ ದ್ವಾರದ ಬಳಿ ಸುಮಾರು 90 ವರ್ಷ ವಯಸ್ಸಿನ ಅಜಾನುಬಾಹು ಮುಖ್ಯ ಅರ್ಚಕರು ಕುರ್ಚಿಯಲ್ಲಿ ಕುಳಿತಿದ್ದರು. ಉತ್ತರ ಭಾರತದಿಂದ ಬಂದಿದ್ದ ಪ್ರವಾಸಿಗರ ತಂಡಕ್ಕೆ ದೇಗುಲದ ಒಳಗೆ ಅವರ  ಸುಮಾರು ನಲವತ್ತು ವಯಸ್ಸಿನ ಪುತ್ರ ಹಾಗೂ  ಅರ್ಚಕ  ಇಂಗ್ಲೀಷ್ ಭಾಷೆಯಲ್ಲಿ ದೇವಸ್ಥಾನ ಇತಿಹಾಸವನ್ನು ವಿವರಿಸುತ್ತಿದ್ದ. ನಾನು ಪರಿಚಯ ಮಾಡಿಕೊಂಡು ಬಂದ ಉದ್ದೇಶವನ್ನು  ವಿವರಿಸಿದೆ. ವೈಷ್ಣವ ಬ್ರಾಹ್ಮಣರಾದ ಹಿರಿಯ ಅರ್ಚಕರು ಹೇಳಿದ ಕಥೆಯಲ್ಲಿ ಅಂತಹ ವೆತ್ಯಾಸವಿರಲಿಲ್ಲ. “ಕೊಳದಲ್ಲಿ ಹೆಣ್ಣು ಮಗು ಸಿಗಲಿಲ್ಲ, ಹೆಣ್ಣು ಮಗು ರೂಪದ ಬೊಂಬೆಯೊಂದು ಸಿಕ್ಕಿತು. ನಂತರ ದೇವರ ಆರ್ಶೀವಾದದಿಂದ ಬೊಂಬೆ ಮಗುವಾಗಿ ಜೀವ ತಳೆದು ಮಕ್ಕಳಿಲ್ಲದ ತಾಯಿಯ ಮಡಿಲು ತುಂಬಿತು” ಎಂದರು. ಜಾನಪದ ಮತ್ತು ವೈಷ್ಣವ ಕಥೆಗೂ ಸ್ವಲ್ಪ ಮಾತ್ರ ವ್ಯೆತ್ಯಾಸವಿತ್ತು.
ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾ ದೇಗುಲದ ಒಳಗೆ ಕರೆದೊಯ್ದು ಅಲ್ಲಿನ ನಾಚ್ಛಿಯಾರಮ್ಮನ ವಿಗ್ರಹ, ವೆಂಕಟೇಶ್ವರ ಮತ್ತು ಪದ್ಮಾವತಿಯ ವಿಗ್ರಹಗಳನ್ನು ತೋರಿಸಿದರು. 


ಜೊತೆಗೆ ಅಪರೂಪದ ಐದು ಅಡಿ ಎತ್ತರದ ಗರುಡ ವಿಗ್ರಹವನ್ನು ಮತ್ತು ಉತ್ಸವ ಮೂರ್ತಿಯಾಗಿ ಬಳಕೆಯಾಗುವ ನಾಚ್ಛಿಯಾರಮ್ಮನ ಮೂರ್ತಿ ಹಾಗೂ ಮೂರ್ತಿಗೆ ಮಾಡುವ ಶೃಂಗಾರ ಇವುಗಳನ್ನು ವಿವರಿಸಿದರು.ನಾನು ಅವರಿಗೆ ನಮಸ್ಕರಿಸಿ ಹೊರಡುವ ವೇಳೆಗೆ ಮಧ್ಯಾಹ್ನ ಒಂದೂವರೆಯಾಗಿತ್ತು. “ ಅಷ್ಟು ದೂರದಿಂದ ಬಂದಿದ್ದೀರಿ ಪ್ರಸಾದ ಸ್ವೀಕರಿಸಿ” ಎನ್ನುತ್ತಾ ಒಂದು ದೊನ್ನೆ ಸಿಹಿ ಪೊಂಗಲ್ ಹಾಗೂ ಒಂದು ದೊನ್ನೆ ವಗ್ಗರಣೆ ಹಾಕಿದ ಮೊಸರನ್ನವನ್ನುನೀಡಿದರು. ಅವುಗಳನ್ನು ಸ್ವೀಕರಿಸಿ, ಆ ಕಾಲದ ದೇವದಾಸಿಯರ ಕುಂಭಾರತಿ ನೃತ್ಯಕ್ಕಾಗಿ ದೇಗುಲದ ಆವರಣದಲ್ಲಿ ನಿರ್ಮಿಸಲಾಗಿದ್ದ ಮಂಟಪದ ಕೆಳೆಗೆ ಕುಳಿತು ಅವುಗಳನ್ನು ತಿಂದು, ನೀರು ಕುಡಿದು, ಅನಿರೀಕ್ಷಿತವಾಗಿ ದಕ್ಕಿದ ಅನ್ನದ ಋಣಕ್ಕಾಗಿ ನಾಚ್ಛಿಯಾರಮ್ಮನಿಗೆ ಮತ್ತು ಅರ್ಚಕರಿಗೆ ನಮಸ್ಕರಿಸಿ, ತಿರುವರೂರಿನತ್ತ ಪ್ರಯಾಣ ಬೆಳಸಿದೆ.

( ವಿ.ಸೂ. ಕುಂಭಕೋಣಂ ನಗರದಿಂದ 11 ಕಿಲೋಮೀಟರ್ ದೂರವಿರುವ ಈ ಊರಿಗೆ ಪ್ರತಿ ಅರ್ಧ ಗಂಟೆಗೆ ಮಿನಿ ಬಸ್ ಗಳು ದೊರೆಯುತ್ತವೆ. ಜೊತೆಗೆ ತಿರುವರೂರಿಗೆ ಹೋಗುವ ಬಸ್ ಗಳಲ್ಲಿಯೂ ಸಹ ಹೋಗಬಹುದು) 

ಸೋಮವಾರ, ನವೆಂಬರ್ 9, 2015

ಟಿಪ್ಪು ಸುಲ್ತಾನ್- ಅಖಂಡ ಭಾರತದ ಕನಸುಗಾರ


ಟಿಪ್ಪು ಸುಲ್ತಾನ್ ಎಂಬುದು ಕೇವಲ ದೊರೆ ಅಥವಾ ಸಾಮಂತನೊಬ್ಬನ  ಹೆಸರು ಮಾತ್ರವಲ್ಲ, ಅದು ಅಖಂಡ ಭಾರತದ ಕನಸಿನ, ಶೌರ್ಯದ, ಧರ್ಮ ಸಹಿಷ್ಣುತೆಯ, ಮಾದರಿ ಆಡಳಿತದ ಹೀಗೆ ಹಲವು ಸಂಗಮಗಳ ಪ್ರತೀಕ. ಟಿಪ್ಪು ಸುಲ್ತಾನ್  ಸ್ವಾತಂತ್ರ್ಯ ಪೂರ್ವದ ಭಾರತ ದೇಶ ಕಂಡ ಒಬ್ಬ ಅಪ್ರತಿಮ ವೀರ ಸೇನಾನಿ ಹಾಗೂ ಶ್ರೀರಂಗಪಟ್ಟಣದ ದೊರೆ ಮಾತ್ರವಾಗಿರದೆಬ್ರಿಟೀಷ್ ಈಸ್ಟ್ ಇಂಡಿಯ ಕಂಪನಿಯಲ್ಲಿ ನಲುಗುತ್ತಿದ್ದ ಭಾರತವನ್ನು ಅವರ ಕಪಿಮುಷ್ಟಿಯಿಂದ ಬಿಡಿಸಲು ಕನಸು ಕಂಡು ನಿರಂತರ ಅವರೊಂದಿಗೆ ಸೆಣಸಿದ ಕನಸುಗಾರ. ಜೊತೆಗೆ ಹಗಲಿರುಳು ಬ್ರಿಟಿಷರನ್ನು ದುಃಸ್ವಪ್ನದಂತೆ ನಿರಂತರ ಕಾಡಿದ ಅಪ್ರತಿಮ ವೀರಸಾಮಾನ್ಯ ಸಿಪಾಯಿಯೊಬ್ಬನ ಪುತ್ರನಾಗಿ ಜನಿಸಿದ ಟಿಪ್ಪು ಸುಲ್ತಾನ್, ಒಬ್ಬ ದೊರೆಯಾಗಿದ್ದುಕೊಂಡು ಯುದ್ಧಭೂಮಿಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡುತ್ತಲೇ  ಮಡಿದು ಹುತಾತ್ಮನಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ  ಮಹಾ ಯೋಧ. ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಮೈಸೂರು ಸೇನೆಗೆ ತನ್ನ ಯುದ್ಧ ತಂತ್ರ, ಸಂಘಟನಾ ಚಾತುರ್ಯದಿಂದಾಗಿÀ ಹೈದರ್ ಆಲಿ ಮತ್ತು ಆತನ ಪುತ್ರ ಟಿಪ್ಪು ಸುಲ್ತಾನ್ ಇಬ್ಬರೂ ಜಾಗತಿಕ ಮನ್ನಣೆ ದೊರಕಿಸಿಕೊಟ್ಟರು. ಅಷ್ಟು ಮಾತ್ರವಲ್ಲದೆ, ಸಿರಿ ಸಂಪತ್ತು, ನೆಮ್ಮದಿ, ಸಹ ಬಾಳ್ವೆ, ಧರ್ಮ ಸಹಿಷ್ಣುತೆಯಲ್ಲಿ ಮೈಸೂರು ಸಂಸ್ಥಾನವನ್ನು ಭಾರತದಲ್ಲಿ ಉತ್ತುಂಗಕ್ಕೇರಿಸಿದ ಮಹಾನ್ ಮಾನವತಾವಾದಿಗಳು.
 ಟಿಪ್ಪು ಸುಲ್ತಾನ್ ಮಡಿದು ಎರಡು ಶತಮಾನ ಕಳೆದರೂ ಸಹ ಇಂದಿಗೂ ತನ್ನ ಹದಿನಾರು ವರ್ಷದ ಅರ್ಥಪೂರ್ಣ ಹಾಗೂ ಘನತೆಯ ಆಳ್ವಿಕೆ ಮತ್ತು  ಶೌರ್ಯ ಇವುಗಳ ಮೂಲಕ ಪ್ರಾತಃಸ್ಮರಣೀಯನಾಗಿದ್ದಾನೆ. ಇದಕ್ಕಿಂತ ಹೆಚ್ಚಾಗಿ ಬ್ರಿಟಿಷರೊಡನೆ ಕಾದಾಡುತ್ತಲೇ ಭಾರತದ ಇತರೆ ಸಂಸ್ಥಾನಗಳನ್ನು ಒಗ್ಗೂಡಿಸಲು ಶ್ರಮಿಸಿದ ಆತನ ಕಾಳಜಿ, ಭಾರತದ ಸಂಸ್ಖøತಿ ಕುರಿತಂತೆ ಆತನಿಗಿದ್ದ ಅತೀವ ಪ್ರೀತಿ ಮತ್ತು ಗೌರವಗಳಿಂದಾಗಿ ಟಿಪ್ಪು ಸುಲ್ತಾನ್ ಇವೊತ್ತಿಗೂ ಭಾರತದ ರಾಜಕಾರಣಕ್ಕೆ ಮಾದರಿಯಾಗಿದ್ದಾನೆ.
ದಕ್ಷಿಣ ಭಾರತದ ರಾಜಕೀಯ ಏಳು ಬೀಳುಗಳ ಇತಿಹಾಸದಲ್ಲಿ ಮೈಸೂರು ಸಂಸ್ಥಾನ ಅಥವಾ ಶ್ರೀರಂಗಪಟ್ಟಣದ ಹೈದರಾಲಿ ಹಾಗೂ ಆತನ ಪುತ್ರ ಟಿಪ್ಪು ಸುಲ್ತಾನ್ ಎರಡು ಹೆಸರುಗಳು ಅಜರಾಮರವಾಗಿ ಉಳಿದು ಹೋಗಿವೆ. ಹೈದರಾಲಿಯು ಯಾವುದೇ ರಾಜ ವಂಶಸ್ಥ ಕುಟುಂಬದಿಂದ ಬಂದವನಲ್ಲ. ಈಗಿನ ಬೆಂಗಳೂರು ಬಳಿಯ  ದೇವನ ಹಳ್ಳಿಯ ಬೂದಿಕೋಟೆಯಲ್ಲಿ 1721 ರಲ್ಲಿ ಸಾಮಾನ್ಯ ಮುಸ್ಲಿಂ ಕುಟುಂಬದಲ್ಲಿ ಜನಿಸಿದವನುಮನೆಯಲ್ಲಿನ  ಬಡತನವನ್ನು ತಾಳಲಾರದೆ, ಆತನ ತಾಯಿಯು ತನ್ನ ಸೋದರಳಿಯನಾದ ಹೈದರ್ ಸಾಬ್ ಮೂಲಕ ಮೈಸೂರು ಸೇನೆಗೆ ತನ್ನ ಇಬ್ಬರು ಮಕ್ಕಳಾದ ಷಹಬಾಚ್ ಮತ್ತು  ಹೈದರಾಲಿಯನ್ನು ಸೇನೆಗೆ ಸೇರಿಸಿದಳು. ಆರಂಭದ ದಿನಗಳಲ್ಲಿ ಮೈಸೂರು ಸೇನೆಯಲ್ಲಿ ಆನೆಯ ಮಾಹುತನಾಗಿ ಯುದ್ಧರಂಗದ ಮುಂಚೂಣಿಯಲ್ಲಿದ್ದು ಕೊಂಡು ಯುದ್ಧ ರಂಗದ ಕಲೆಗಳನ್ನು ಕರಗತ ಮಾಡಿಕೊಂಡ ಹೈದರಾಲಿ, 1749 ರಲ್ಲಿ ಮೈಸೂರು ಸೇನೆಯು ದೇವನಹಳ್ಳಿಗೆ ಮುತ್ತಿಗೆ ಹಾಕಿದಾಗ ತನ್ನ ಪರಾಕ್ರಮವನ್ನು ಅನಾವರಣಗೊಳಿಸುವುದರ ಮೂಲಕ ದೇವನಹಳ್ಳಿಯನ್ನು ಮೈಸೂರು ದೊರೆಗೆ ಗೆದ್ದು ಕೊಟ್ಟನು.
( ಹೈದರಾಲಿ)

1751 ರಲ್ಲಿ ಮೈಸೂರು ದೊರೆ ನಂಜರಾಜನು ತಿರುಚಿನಾಪಳ್ಳಿಗೆ ಮುತ್ತಿಗೆ ಹಾಕಿದಾಗ ಅಲ್ಲಿ ಬ್ರಿಟೀಷರ ಸೈನ್ಯದ ವಿರುದ್ಧ ಮೈಸೂರು ಸೇನೆಗೆ ಸೋಲುಂಟಾಯಿತು. ಆದರೆ, ಯುದ್ಧದಲ್ಲಿ ಹೈದರಾಲಿಗೆ ಯುರೋಪಿಯನ್ನರ ಯುದ್ಧ ತಂತ್ರ, ಕೌಶಲ್ಯ ಹಾಗೂ ಬಂದೂಕು, ಪಿರಂಗಿಗಳ ಬಳಕೆಯ ಪರಿಚಯವಾಯಿತು. ಬಡತನದ ಕಾರಣ ಅನಕ್ಷರಸ್ಥನಾಗಿದ್ದ ಹೈದರಾಲಿಯು ವಿಷಯಗಳನ್ನು ಗ್ರಹಿಸುವುದರಲ್ಲಿ ಸೂಕ್ಷ್ಮ ಹಾಗೂ ಚತುರಮತಿಯಾಗಿದ್ದನು. ಸೋಲಿನಿಂದಾಗಿ ಮೈಸೂರು ಸಂಸ್ಥಾನದಲ್ಲಿ ಅರಾಜಕತೆ ಉಂಟಾದ ಕಾರಣ, ವಂಶಪಾರಂಪರ್ಯವಾಗಿ ದಳವಾಯಿ ಹಾಗೂ ಮಂತ್ರಿ ಸ್ಥಾನ ಪಡೆಯುತ್ತಿದ್ದ ಕೆಲವು ವ್ಯೆಕ್ತಿಗಳ ಕೈಯಲ್ಲಿ ಅಧಿಕಾರದ ಕೇಂದ್ರೀಕೃತವಾಯಿತು, ಇದರಿಂದ ಬೇಸತ್ತ  ಹೈದರಾಲಿಯು 1761 ರಲ್ಲಿ  ಕ್ಷಿಪ್ರ ಕ್ರಾಂತಿಯಮೂಲಕ ಮೈಸೂರು ಅರಮನೆಯ ಆಡಳಿತ ಸೂತ್ರವನ್ನು ತನ್ನ ಕೈಗೆ ತೆಗೆದುಕೊಂಡನು. ವೇಳೆಗೆ ಸೇನೆಯ ದಂಡನಾಯಕನ ಸ್ಥಾನದಲ್ಲಿದ್ದ ಹೈದರಾಲಿ ತಾನು ಮೈಸೂರು ಸಂಸ್ಥಾನದ ದೊರೆ ಅಥವಾ ಒಡೆಯ ಎಂದು ಘೋಷಿಸಿಕೊಳ್ಳದೆ, ಯಾವುದೇ ರೀತಿಯ ರಾಜ ಪೋಷಾಕು ಧರಿಸದೆ, ಮೈಸೂರು ದೊರೆಯನ್ನು ಸಿಂಹಾಸನದ ಮೇಲೆ ಕೂರಿಸಿ, ತಾನು ರಾಜ ಕಾರ್ಯಕರ್ತ ಅಂದರೆ, ರಾಜನ ಪ್ರಧಾನ ಮಂತ್ರಿ ಮತ್ತು ಸೇನಾಧಿಪತಿ ಎಂದು ಬಹಿರಂಗವಾಗಿ ಘೋಷಿಸಿಕೊಂಡನು. ಪ್ರತಿ ವರ್ಷ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ದಸರಾ ಹಬ್ಬದ ಆಚರಣೆಗೆ ಸಕಲ ಪ್ರೊತ್ಸಾಹವನ್ನು ನೀಡಿ, ತಾನೂ ಸಹ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದನು. (ಮುಂದಿನ ದಿನಗಳಲ್ಲಿ ಅಂದರೆ ಹೈದರಾಲಿಯ ನಿಧನಾನಂತರ ತನ್ನ ತಂದೆಯ ನಿಲುವಿಗೆ ಭಿನ್ನವಾಗಿ ಚಿಂತಿಸಿದ ಟಿಪ್ಪು ಸುಲ್ತಾನ್ ತಾನು ಮೈಸೂರಿನ ಬಾದಶಹನೆಂದು ಘೋಷಿಸಿಕೊಂಡನು) ಮೈಸೂರಿನ ರಾಜಕೀಯ ಇತಿಹಾಸದಲ್ಲಿ ಹೈದರಾಲಿಯ ಆಡಳಿತಕ್ಕೆ ಮಹತ್ವದ ಸ್ಥಾನವಿದೆ. ನೆರೆಯ ಮರಾಠರು, ಹಾಗೂ ಅಕ್ಕ ಪಕ್ಕದ ಸಂಸ್ಥಾನಗಳ ದಾಳಿ, ಅನೀರಿಕ್ಷಿತವಾಗಿ ಎದುರಾಗುತ್ತಿದ್ದ ಬರ ಮತ್ತು ಅತೀವೃಷ್ಟಿಗಳ ನಡುವೆ ಮೈಸೂರು ಸಂಸ್ಥಾನವನ್ನು ಸುಸ್ಥಿಯಲ್ಲಿ ಇಟ್ಟಿದ್ದನು. ಹೈದರಾಲಿಯು ಮರಣ ಹೊಂದುವ ವೇಳೆಗೆ ಮೈಸೂರು ಸಂಸ್ಥಾನ ವಿಸ್ತಾರಗೊಂಡು ಸುರಕ್ಷಿತವಾಗಿತ್ತು. ಉತ್ತರ ಭಾಗದ ಕೃಷ್ಣಾ ಮತ್ತು ತುಂಗಾಭದ್ರ ವರೆಗೆ ದಕ್ಷಿಣದಲ್ಲಿ ಕೇರಳದ ಮಲಬಾರ್ ವರೆಗೆ, ಪೂರ್ವದಲ್ಲಿ ತಮಿಳುನಾಡಿನ ವೆಲ್ಲೂರು ಪಶ್ಚಿಮದಲ್ಲಿ  ಕೊಡಗು, ಮಂಗಳೂರು, ಭಟ್ಕಳ, ಹೊನ್ನಾವರದವರೆಗೆ ಸಾಮ್ರಾಜ್ಯ ವಿಸ್ತರಣೆಗೊಂಡಿತ್ತು. ಮೈಸೂರು ದೊರೆಗಳ ಆಳ್ವಿಕೆಯಲ್ಲಿ ವಾರ್ಷಿಕವಾಗಿ ನಲವತ್ತು ಲಕ್ಷ ರೂಪಾಯಿ ಆದಾಯವಿದ್ದುದು ಹೈದರಾಲಿ ಆಳ್ವಿಕೆಯಲ್ಲಿ ಒಂದು ಕೋಟಿ ಹತ್ತು ಲಕ್ಷರೂಪಾಯಿವರೆಗೆ ಏರಿತ್ತುಚಿತ್ತೂರಿನ ನರಸಿಂಗರಾಯನ ಪೇಟೆ ಬಳಿ ನಡೆದ ಯುದ್ದದಲ್ಲಿ ಹೈದರಾಲಿಯು 1782 ಡಿಸಂಬರ್ ನಲ್ಲಿ ಮೃತನಾದನು. ಮೊದಲು ಕೋಲಾರದ ಫತೇ ಮಹಮದ್ ಗೋರಿಯ ಬಳಿ ಸಮಾಧಿ ಮಾಡಲಾಗಿದ್ದ ಅವನ ಕಳೇಬರವನ್ನು  ಶ್ರೀರಂಗಪಟ್ಟಣಕ್ಕೆ ತಂದು  ಟಿಪ್ಪುಸುಲ್ತಾನ್ ನಿರ್ಮಿಸಿದ ಬೃಹತ್ ಗೋರಿಯಲ್ಲಿ ಹೂಳಲಾಯಿತು.
ಟಿಪ್ಪುಸುಲ್ತಾನ್ ಆಡಳಿತ ಅವಧಿಯಲ್ಲಿನ ಬಹುತೇಕ ಗುಣಾತ್ಮಕ ಅಂಶಗಳಲ್ಲಿ ಆತನ ತಂದೆ ಹೈದರಾಲಿಯ ಪ್ರಭಾವವಿದೆ. ಹೈದರಾಲಿಯು ಉತ್ತಮ ಯೋಧ, ಆಕ್ರಮಣಶಾಲಿ ಮನೋಭಾವದ ವ್ಯಕ್ತಿತ್ವ, ಉತ್ತಮ ಆಡಳಿತಗಾರ, ಇವೆಲ್ಲವೂ ಟಿಪ್ಪುಸುಲ್ತಾನ್ ಗೆ ತಂದೆಯಿಂದ ಬಳುವಳಿಯಾಗಿ ಬಂದಿದ್ದವು. ಕಾರಣಕ್ಕಾಗಿಹೈದರ್ ನಾಮಕೃತಿ ರಚಿಸಿರುವ ನಲ್ಲಪ್ಪ ಎಂಬ ಅರಮನೆಯ ಇತಿಹಾಸಕಾರ ಹೈದರಾಲಿಯನ್ನುದೈವ ಬ್ರಹ್ಮ, ದ್ವೇಷ ರಹಿತಅಂದರೆ, ಬ್ರಾಹ್ಮಣರ ಕುರಿತು ದ್ವೇಷವಿಲ್ಲದ ದೊರೆ ಎಂದು ಬಣ್ಣಿಸಿದ್ದಾನೆ. ಟಿಪ್ಪುಸುಲ್ತಾನ್ ಅನುಕರಿಸಿದ ರಾಜನೀತಿಯಲ್ಲಿ ಹೈದರಾಲಿಯ ರಾಜನೀತಿಯ ಲಕ್ಷಣಗಳನ್ನು ನಾವು ಕಾಣಬಹುದಾಗಿದೆ. ಹೈದರಾಲಿಯು ತನ್ನ ಪುತ್ರ ಟಿಪ್ಪು ಸುಲ್ತಾನ್ ಬರೆದ ನೀತಿ ಪಾಠದ ಪತ್ರವೊಂದು ಉತ್ತಮ ರಾಜ್ಯಾಡಳಿತಕ್ಕೆ ನೀಡಿದ ಸಂವಿಧಾನದಂತಿದೆ.
ಮಗನೇ ನಾನು ನನ್ನ ಪೂರ್ವಿಕರಿಂದ ಪಡೆಯದ ಒಂದು ಸಾಮ್ರಾಜ್ಯವನ್ನು ನಿನಗೆ ಬಿಡುತ್ತಿದ್ದೇನೆ. ಹಿಂಸೆಯಿಂದ ಗಳಿಸಿದ ರಾಜದಂಡವು ಯಾವಾಗಲೂ ನಶ್ವರವಾದುದು. ನೀನು ನಿನ್ನ ರಾಜ್ಯದ ಆಂತರೀಕ ವ್ಯವಹಾರದಲ್ಲಿ ಎಳ್ಳಷ್ಟೂ ಹೆದರಬೇಕಾಗಿಲ್ಲ. ಆದರೆ, ನಿನ್ನ ದೃಷ್ಟಿಯನ್ನು ಬಹು ದೂರದವರೆಗೆ ಒಯ್ಯುವುದು ಅತ್ಯಾವಶ್ಯಕ. ಮೊಗಲ್ ಸಾಮ್ರಾಜ್ಯವು ಔರಂಗಜೇಬನ ಪತನದಿಂದಾಗಿ ಭಾರತವು ಏಷ್ಯಾದ ಸಾಮ್ರಾಜ್ಯಗಳಲ್ಲಿ ತನ್ನ ಸ್ಥಾನಮಾನಗಳನ್ನು ಕಳೆದುಕೊಂಡಿದೆ. ಸುಂದರನಾಡು ಅಂತಃಕಲಹದಿಂದ ಹರಿದು ಹಂಚಿ ಹೋಗಿದೆ. ಜುನರು ನಾನಾ ಮತಗಳಿಗೆ ಹಂಚಿ ಹೋಗಿದ್ದಾರೆ. ಹಾಗಾಗಿ ದೇಶ ಪ್ರೇಮವನ್ನು ಕಳೆದುಕೊಂಡಿದ್ದಾರೆ. ಹಿಂದುಗಳು ಶಾಸ್ತ್ರಾನುಭವದಿಂದ ಪಡೆದ ಶಾಂತಿಸೂತ್ರದಿಂದ ಮೃದುವಾಗಿ ತಮ್ಮ ನಾಡನ್ನು ರಕ್ಷಿಸಿಕೊಳ್ಳಲು ಅಸಮರ್ಥರಾಗಿದ್ದಾರೆ. ಆದ್ದರಿಂದ ನಾಡು ಪರಕೀಯರಿಗೆ ತುತ್ತಾಗಿದೆ. ಮಗನೇ ನಿನ್ನ ಪ್ರಯತ್ನಗಳನ್ನೆಲ್ಲಾ ಒಗ್ಗೂಡಿಸಿ ಈಗ ಭಾರತದಲ್ಲಿ ಸರ್ವ ಶಕ್ತರಾಗಿರುವ ಇಂಗ್ಲೀಷರನ್ನು ಯುದ್ಧದ ಮೂಲಕ ದುರ್ಬಲಗೊಳಿಸುವುದು ಅತ್ಯಾವಶ್ಯಕ. ಯುರೋಪಿಯನ್ನರಿಗೆ ನಿಖರವಾದ ಚಾತುರ್ಯವಿದೆ ಅವರ ಮೇಲೆ ಯಾವಾಗಲೂ ಅವರ ಅಸ್ತ್ರವನ್ನೇ ಉಪಯೋಗಿಸು. ಪ್ರೆಂಚರ ಸಹಾಯದಿಂದ ಮಾತ್ರ ನೀನು ಅವರನ್ನು ಮಣಿಸಬಲ್ಲೆ. ಪರಾಕ್ರಮವು ನಮ್ಮನ್ನು ಸಿಂಹಾಸನಕ್ಕೆ ಏರಿಸಬಲ್ಲದು. ಆದರೆ, ಚಕ್ರಾಧಿಪತ್ಯ ಕಾಯ್ದುಕೊಳ್ಳಲು ಅದು ಸಾಲದು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಪುಕ್ಕಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು, ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ, ಗೌರಕ್ಕೆ ನಾವು ಒಪ್ಪಿಸದೇ ಹೋದಲ್ಲಿ ರಾಜ್ಯವು ನಮ್ಮ ಕೈ ಬಿಟ್ಟು ಹೋಗಬಹುದು

                                                    (ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಸಮಾಧಿಗಳು)
ಟಿಪ್ಪು ಸುಲ್ತಾನ್ ಗೆ ತನ್ನ ತಂದೆ ಹೈದರಾಲಿ ಹಾಕಿಕೊಟ್ಟ ಆಡಳಿತದ ಮಾರ್ಗದರ್ಶಿ ಸೂತ್ರಗಳು ಮೈಸೂರು ಸಂಸ್ಥಾನವನ್ನು ಸದಾ ಸುಸ್ಥಿಯಲ್ಲಿಡಲು ಕಾರಣವಾದವು. ತನ್ನ ಆಡಳಿತಾವಧಿಯಲ್ಲಿ ಬ್ರಿಟೀಷರು ಮಾತ್ರವಲ್ಲದೆ, ಪುಣೆಯ ಮರಾಠು, ಹೈದರಾಬಾದಿನ ನಿಜಾಮರು, ಕೇರಳದ ತಿರುವಾಂಕೂರಿನ ರಾಜ ಇವರ ಜೊತೆ ನಿರಂತರ ಕಾದಾಡುತ್ತಲೇ ಮೈಸೂರು ಸಂಸ್ಥಾನವನ್ನು ಭಾರತದ ಇತರೆ ಸಂಸ್ಥಾನಗಳಿಗಿಂತ ಎತ್ತರಕ್ಕೇರಿಸಿ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದ.
1799 ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿದ ನಂತರ ಆತನ ರಾಜ್ಯಾಡಳಿತ ಮತ್ತು ವ್ಯೆಕ್ತಿತ್ವ ಕುರಿತಂತೆ ಬ್ರಿಟೀಷ್ ವಸಾಹತು ಶಾಹಿ ಕಾಲದ ಬ್ರಿಟೀಷ್ ಇತಿಹಾಸಕಾರರಿಂದ ಚರಿತ್ರೆಯನ್ನು ಸೃಷ್ಟಿಸಲಾಗಿದ್ದು, ಬಹುತೇಕ ಕೃತಿಗಳಲ್ಲಿ ಟಿಪ್ಪು ಸುಲ್ತಾನ್ ನನ್ನು ಮತಾಂಧನೆಂದೂ, ಹಿಂದೂ ಧರ್ಮದ ದ್ವೇಷಿಯೆಂದು ಚಿತ್ರಿಸಲಾಗಿದೆ. ಇದು ಕೇವಲ ಒಂದು ಮಗ್ಗುಲಿನ ಚರಿತ್ರೆಯಾಗಿದೆ. ನಮ್ಮ ಮುಂದಿರುವ ಐತಿಹಾಸಿಕ ದಾಖಲೆಗಳು, ಅನೇಕ ಹಿಂದೂ ದೇವಾಲಯಗಳು, ಕ್ರೈಸ್ತ ಧರ್ಮದ ಪ್ರಾರ್ಥನಾ ಮಂದಿರಗಳು ಟಿಪ್ಪು ಮತ್ತು ಹೈದರಾಲಿಯ ಧರ್ಮ ಸಹಿಷ್ಣುತೆಗೆ ಸಾಕ್ಷಿಗಳಾಗಿವೆ. ಕೊಡಗಿನ ಕೊಡವ ಜನಾಂಗದ ಮೇಲೆ, ಕೇರಳ್ ಮಲಬಾರಿನ ನಾಯರ್ ಗಳ ಮೇಲೆ ಮತ್ತು ಮಂಗಳೂರಿನ ಕ್ಯಾಥೊಲಿಕ್ ಪಂಗಡದ ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ನಿರ್ಧಾಕ್ಷಿಣ್ಯವಾಗಿ ನಡೆದುಕೊಂಡಿರುವುದು ನಿಜವಾದರೂ, ಅದು ಯುದ್ಧ ನೀತಿಯ ಒಂದು ಅಂಗವಾಗಿದೆಯೆ ಹೊರತು, ಧರ್ಮದ ಹಿನ್ನಲೆಯಲ್ಲಿ ಅಲ್ಲ. ಕೇರಳದ ಕೊಚ್ಚಿನ್ ಬಂದರನ್ನು  ತಿರುವಾಂಕೂರು ದೊರೆ ಬ್ರಿಟೀಷರಿಗೆ ನೀಡಿದ್ದುಬ್ರಿಟೀಷ್ ಸೇನೆಯು ಮೈಸೂರಿನ ಮೇಲೆ ಮುತ್ತಿಗೆ ಹಾಕಲು  ಪಿರಿಯಾಪಟ್ಟಣ ಬಳಿ ಬೀಡು ಬಿಟ್ಟಿದ್ದ ಸಮಯದಲ್ಲಿ  ಕೊಡವರು ಅವರಿಗೆ ದಿನಸಿ, ಇನ್ನಿತರೆ ಅವಶ್ಯಕ ವಸ್ತುಗಳನ್ನು ನೀಡುವುದರ ಮೂಲಕ ನೆರವಾದ್ದು ಇವೆಲ್ಲವೂ ಟಿಪ್ಪು ಸುಲ್ತಾನ್ ಸಿಟ್ಟಿಗೆ ಕಾರಣವಾದ ಸಂಗತಿಗಳಾಗಿವೆ. ಕ್ರೈಸ್ತರ ಮೇಲಿನ ಸಿಟ್ಟಿಗೆ ಅವರು ಪರಂಗಿಯರು ಹಾಗೂ ಇಂಗ್ಲೇಂಡ್ ಮೂಲದವರು ಎಂಬುವುದು ಮುಖ್ಯವಾಗಿತ್ತು.


ಟಿಪ್ಪುಸುಲ್ತಾನ್ ತನ್ನ ಹದಿನಾರು ವರ್ಷಗಳ ಆಳ್ವಿಕೆಯಲ್ಲಿ ಮಾಡಿರುವ ಸಾಧನೆಯ ಹೆಜ್ಜೆ ಗುರುತುಗಳು ಇನ್ನೂ  ಹಸಿರಾಗಿ ಉಳಿದಿವೆ. ಅವುಗಳನ್ನು ಪಟ್ಟಿ ಮಾಡುತ್ತಾ ಹೋದರೆಹದಿನೆಂಟನೇ ಶತಮಾನದ ಕಾಲಘಟ್ಟದ ಟಿಪ್ಪು ಸುಲ್ತಾನನಿಗೆ ಇಂತಹ ಒಳನೋಟಗಳು ಇದ್ದವೆ? ಎಂದು ಆಶ್ಚರ್ಯವಾಗುತ್ತದೆ.. ಬಹುಮುಖಿ ಸಂಸ್ಸøತಿಯ ಆರಾಧಕ ಮತ್ತು ಪ್ರತಿನಿಧಿಯಾಗಿದ್ದ ಟಿಪ್ಪು ಸುಲ್ತಾನ್ ಜಾತಿ ಮತ್ತು ಧರ್ಮದಾಚೆಯ ನೆಲೆಯಲ್ಲಿ ನಿಂತು ನಾಡು ಮತ್ತು ನುಡಿಯನ್ನು ಪ್ರೀತಿಸಿದವನು. ಇದಕ್ಕೆ ಮುಖ್ಯ ಕಾರಣವೆಂದರೆ, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಇವರ ವಂಶಸ್ಥರು ಸೂಫಿ ಸಂತ ಚಿಸ್ತಿ ಬಂಡೆ ನವಾಜ್ ಪರಂಪರೆಯಿಂದ ಬಂದವರಾಗಿದ್ದರು. ಟಿಪ್ಪುವಿನ ಕೆಳಗಿನ ಕ್ರಾಂತಿಕಾರಿ ಆಲೋಚನೆಗಳು ಮತ್ತು ಕಾರ್ಯಗಳು ನಮಗೆ ಇಂದಿಗೂ ಮಾದರಿಯಾಗಿವೆ.




ತನ್ನ ಸಂಸ್ಥಾನದಲ್ಲಿ  ಕೃಷಿಗೆ ಆಧ್ಯತೆ ನೀಡಿ ಶ್ರೀರಂಗಪಟ್ಟಣದ ಬಳಿ ಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಮಾಡಿದನು. ಇದೇ ಜಾಗದಲ್ಲಿ 1924 ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್. ವಿಶ್ವೇಶ್ವರಯ್ಯನವರ ಮೂಲಕ ಕೃಷ್ಣರಾಜ ಸಾಗರ ಎಂಬ ನೂತನ ಅಣೆಕಟ್ಟು ನಿರ್ಮಾಣ ಮಾಡಿದರು. ಚೀನಾದಿಂದ ರೇಷ್ಮೆ ಆಮದಾಗುತ್ತಿದ್ದನನ್ನು ಕಂಡ ಟಿಪ್ಪು, ಮೊದಲ ಬಾರಿಗೆ ಕನ್ನಡದ ನೆಲದಲ್ಲಿ ರೇಷ್ಮೆ ಬೆಳೆಯನ್ನು ಪರಿಚಯಿಸಿದನು. ಜೊತೆಗೆ ತನ್ನ ತಂದೆಯ ಹೈದರಾಲಿಯ ಕನಸಿನಂತೆ ಬೆಂಗಳೂರು ನಗರದಲ್ಲಿ ಪ್ರಪಥಮ ಜೈವಿಕ ಉದ್ಯಾನವನವನ್ನು ಲಾಲ್ ಬಾಗ್ ಹೆಸರಿನಲ್ಲಿ ಅಭಿವೃದ್ಧಿಪಡಿಸಿದನು. ಟಿಪ್ಪು ಸುಲ್ತಾನ್ ಪರಿಚಯಿಸಿದ ಜಗತ್ತಿನ ವಿವಿಧ ಬಗೆಯ ಮಾವಿನ ಹಣ್ಣುಗಳ ತಳಿಯನ್ನು ಹಾಗೂ ಮಾವಿನ ತೋಟಗಳನ್ನು ನಾವು ಇಂದಿಗೂ ಸಹ ಟಿ.ನರಸಿಪುರ ಮತ್ತು ಮಳ್ಳವಳ್ಳಿ ತಾಲ್ಲೂಕಿನ ಗ್ರಾಮಗಳಲ್ಲಿ ಕಾಣಬಹುದಾಗಿದೆ. ಸದಾ ಹೊಸ ತಂತ್ರಜ್ಞಾನಕ್ಕೆ ತುಡಿಯುತ್ತಿದ್ದ ಅವನು ಭಾರತದಲ್ಲಿ ಮೊದಲ ಬಾರಿಗೆ ಸೇನೆಯಲ್ಲಿ ಪ್ರೆಂಚರ ಸಹಾಯದಿಂದ ಕ್ಷಿಪಣಿ ಮತ್ತು ರಾಕೇಟ್ ಗಳನ್ನು ಬಳಸುವುದರ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾದನು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಟಿಪ್ಪುವಿಗೆ ಎಷ್ಟೊಂದು ಆಸಕ್ತಿಯಿತ್ತು ಇತ್ತು ಎಂಬುದಕ್ಕೆ 1786 ಡಿಸಂಬರ್ 29 ರಂದು ಅವನು ಪರ್ಷಿಯನ್ ವಿದ್ವಾಂಸ  ಕಾಸ್ನಿ ಎಂಬಾತನಿಗೆ ಪತ್ರ ಬರೆಯುತ್ತಾಯುರೋಪಿನಿಂದ ಬರುತ್ತಿರುವ ಪುಸ್ತಕವೊಂದು ಶಾಖ ಮಾಪಕವನ್ನು ಕುರಿತ ವಿಷಯವನ್ನು ಒಳಗೊಂಡಿದೆ. ಅದನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿ ನನಗೆ ಕಳುಹಿಸಿಕೊಂಡುಎಂದು ಬರೆದಿರುವ ದಾಖಲೆ ಇಂದಿಗೂ ಪತ್ರಾಗಾರದಲ್ಲಿ ಇದೆ.
ಮದ್ಯಪಾನದ ಕಡು ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಇದರಿಂದ  ಜನರ ಆರೋಗ್ಯ ಮತ್ತು ನೈತಿಕತೆ ಕುಸಿಯುತ್ತದೆ ಎಂದು ಬಲವಾಗಿ ನಂಬಿದ್ದ ಕಾರಣಕ್ಕಾಗಿ ವಿದೇಶಿಯರನ್ನು ಹೊರತು ಪಡಿಸಿ, ಸ್ಥಳೀಯ ಜನರಿಗೆ ಮದ್ಯ ಮಾರಾಟವನ್ನು ನಿಷೇಧಿಸಿದ್ದ, ಕುರಿತು 1798 ಡಿಸಂಬರ್ 11 ರಂದು ರಾಲಿ ಎಂಬಾತನಿಗೆ ಟಿಪ್ಪು ಸುಲ್ತಾನ್ ಪತ್ರ ಬರೆದಿದ್ದಾನೆ. ನನ್ನ ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯ ಪಾನ ನಿಷೇಧವಾಗುವುದು ನನ್ನ ಹೃದಯಕ್ಕೆ ಸಂತೋಷವಾಗುವ ವಿಚಾರ ಎಂದು ಬಣ್ಣಿಸಿಕೊಂಡಿದ್ದಾನೆ. ಟಿಪ್ಪು ಸುಲ್ತಾನ್ ಸೆರೆ ಹಿಡಿದ ಖೈದಿಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ಇತಿಹಾಸದ ಪುಟಗಳಲ್ಲಿ ಆರೋಪಿಸಿಕೊಂಡು ಬರಲಾಗಿದೆ. ಆದರೆ, 1786 ರಲ್ಲಿ ಬ್ರಿಟನ್ ಸೇನೆಯ ಮುಖಂಡ ರಾಬ್ ಸನ್ ಎಂಬಾತ ದಾಖಲಿಸಿರುವ ಬರೆವಣಿಗೆ ರೀತಿ ಇದೆ. “ ಟಿಪ್ಪು ಸಾಹೇಬನು ಕರ್ನಲ್ ಬ್ರೈತ್ ವೈಟ್ ಮತ್ತು ಇತರೆ ಖೈದಿಗಳನ್ನು ತನ್ನ ಬಳಿ ಕರೆತರುವಂತೆ ಆಜ್ಞಾಪಿಸಿ ಅವರುಗಳ ಗಾಯವನ್ನು ಸ್ವತಃ ಪರೀಕ್ಷಿಸಿದನು. ನಂತರ ಗಾಯಾಳುಗಳಿಗೆ ಔಷಧೊಪಚಾರ ಮಾಡಲು ಪ್ರೆಂಚ್ ವೈದ್ಯರೊಡನೆ ಹಳ್ಳಿಗಳಿಗೆ ಕಳಿಸಿಕೊಟ್ಟನು. ಖೈದಿಗಳು ಧರಿಸಲು ನವಿರಾದ ಬೆಳ್ಳನೆಯ ಉಡುಪುಗಳನ್ನು ನೀಡಿದನು. ಗಾಯಗಳಿಗೆ ಪಟ್ಟಿ ಕಟ್ಟಲು ಒರಟು ಬಟ್ಟೆಗಳು ಮತ್ತು ಮುವತ್ತು ಪಗೋಡ ನಾಣ್ಯಗಳನ್ನು ನೀಡಿದನುಬ್ರಿಟೀಷ್ ಸೇನೆಯ ದಂಡನಾಯಕನನ್ನು ಟಿಪ್ಪು ಸುಲ್ತಾನ್ ಬಂಧಿಖಾನೆಯಲ್ಲಿ ಇಟ್ಟಿದ್ದನೇ  ಹೊರತು ನೆಲಮಾಳಿಗೆಯಲ್ಲಿ ಅಲ್ಲಇಂತಹ ಅನೇಕ ಅಮೂಲ್ಯ ದಾಖಲೆಗಳು ಟಿಪ್ಪು ಸುಲ್ತಾನನ ಮಾನವೀಯ ಮುಖಗಳ ಮೇಲೆ ಬೆಳಕು ಚಲ್ಲುತ್ತವೆ.




                                            (ಶೃಂಗೇರಿಯ ಶಾರದಾಂಬೆಯ ದೇಗುಲ ಮತ್ತು ವಿಗ್ರಹ)

ಟಿಪ್ಪು ಸುಲ್ತಾನ್ ಹಿಂದೂ ಧರ್ಮವನ್ನು ಮತ್ತು ಹಿಂದೂಗಳನ್ನು ಎಷ್ಟೊಂದು ಗೌರವ ಮತ್ತು ಭಕ್ತಿಯಿಂದ ಕಾಣುತ್ತಿದ್ದ ಎಂಬುದಕ್ಕೆ 1794 ರಲ್ಲಿ ರೊಡರಿಕ್ ಮೆಕನ್ಜಿ ಎಂಬಾತ ಬರೆದ ಬರೆವಣಿಗೆ ನಮ್ಮೆದುರು ಸಾಕ್ಷಿಯಾಗಿದೆ. ವರ್ಷವೊಂದಕ್ಕೆ ತಮಿಳುನಾಡು ಒಳಗೊಂಡಂತೆ ಮೈಸೂರು ಸಂಸ್ಥಾನದಲ್ಲಿ ಒಟ್ಟು 156 ದೇವಾಸ್ಥಾನಗಳಿಗೆ ಆರ್ಥಿಕ ನೆರವು ನಿಡುತ್ತಿದ್ದ ಸಂಗತಿಗಳು ದಾಖಲಾಗಿವೆ. ಕಾಂಚಿಪುರಂ ದೇವಸ್ಥಾನದ ನಿರ್ಮಾಣಕ್ಕೆ 10 ಸಾವಿರ ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ ಸಂಗತಿ, ಮೈಸೂರಿನ ಚಾಮುಂಡೇಶ್ವರಿ ಹಾಗೂ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಗಳಿಗೆ ಚಿನ್ನ ಹಾಗೂ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ನೀಡಿರುವ ವಿಷಯ, ಮೇಲುಕೋಟೆಯ ಚಲುವನಾರಾಯಣಸ್ವಾಮಿ ದೇವಸ್ಥಾನದ ಎರಡು ಪಂಗಡಗಳ ಆರ್ಚಕರ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ, ದೇಗುಲಕ್ಕೆ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿರುವ ಸಂಗತಿಗಳು ದಾಖಲಾಗಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮರಾಠರ ದಾಳಿಯಿಂದ ಅಂದರೆ, 1990-92 ನಡುವಿನ ಮೂರನೆಯ ಮೈಸೂರು ಯುದ್ಧದ ಸಮಯದಲ್ಲಿ ಸರ್ದಾರ್ ಪರುಶರಾಂ ಭಾವೂ ಮತ್ತು ಆತನ ಸೇನಾನಿ ಪಟವರ್ಧನ ಇವರುಗಳು ಬಿದನೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದಾಗ ಶೃಂಗೇರಿ ಶಾರದಾ ಪೀಠದ ಚಿನ್ನಾಭರಣಗಳು ಮತ್ತು ಅರವತ್ತು ಲಕ್ಷ ರೂಪಾಯಿಗಳನ್ನು ದೋಚಿ, ಶಾರದೆಯ ವಿಗ್ರಹವನ್ನು ಭಗ್ನಗೊಳಿಸಿದ್ದರು. ಹಾನಿಗೊಳಗಾದ ಹಾಗೂ ಜಗದ್ಗುರು ಶಂಕರಾಚಾಯ್ರು ಸ್ಥಾಪಿಸಿದ ಶೃಂಗೇರಿಯ ಶಾರದಾ ಪೀಠದ ಶಾರದೆಯ ವಿಗ್ರಹ ಮತ್ತು ದೇಗುಲ ಇವುಗಳ ದುರಸ್ತಿಗೆ ಅಪಾರವಾದ ನೆರವನ್ನು ನೀಡಿ ಶಾರದಾಂಬೆಯ ವಿಗ್ರಹದ ಪುನರ್ ಪ್ರತಿಷ್ಟಾಪನೆಗೆ ಟಿಪ್ಪು ನೆರವಾದನು. ಜೊತೆಗೆ ಶ್ರೀರಂಗಪಟ್ಟಣದಿಂದ ಎರಡು ನೂತನ ಪಲ್ಲಕ್ಕಿಗಳನ್ನು ಕಳುಹಿಸಿ, ಅವುಗಳಲ್ಲಿ ಒಂದನ್ನು ತಾಯಿ ಶಾರದಾಂಬೆಗೆ, ಮತ್ತೊಂದನ್ನು ಜಗದ್ಗುರುಗಳು ಬಳಸಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದನು. ಶೃಂಗೇರಿಯ ಸುತ್ತ ಮುತ್ತ ಇದ್ದ ಬ್ರಾಹ್ಮಣರ ಅಗ್ರಹಾರಗಳ ಅಭಿವೃದ್ಧಿಗೆ ಒತ್ತು ನೀಡುವುದರ ಜೊತೆಗೆ ಶೃಂಗೇರಿ ಮಠದಲ್ಲಿ ಪ್ರತಿನಿತ್ಯ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನ ದಾಸೋಹ ನಡೆಸುವಂತೆ ವಾರ್ಷಿಕ ಅನುದಾನವನ್ನು ಘೋಷಿಸಿದನು. 1793 ರಲ್ಲಿ ಶೃಂಗೇರಿಯ ಸ್ವಾಮೀಜಿ( ಶ್ರೀ ಸಚ್ಚಿದಾನಂದ ಭಾರತಿ) ಬರೆದಿರುವ ಪತ್ರದಲ್ಲಿ ಟಿಪ್ಪು ಸುಲ್ತಾನನುನೀವು ಜಗದ್ಗುರುಗಳು. ಲೋಕೋದ್ಧಾರಕ್ಕೂ, ಮಾನವ ಕಲ್ಯಾಣಕ್ಕೂ ನೀವು ಯಾವಾಗಲೂ ತಪಸ್ಸನ್ನು ಆಚರಿಸುತ್ತೀರಿ. ನಮ್ಮ ಏಳಿಗೆ ಮತ್ತು ಅಭಿವೃದ್ಧಿಗಾಗಿ ಪ್ರಾರ್ಥಿಸಿ. ನಿಮ್ಮಮತಹ ಪವಿತ್ರ ಜೀವಿಗಳು ಯಾವ ನಾಡಿನಲ್ಲೇ ವಾಸಿಸುತ್ತಿರಲಿ, ನಾಡು ಒಳ್ಳೆಯ ಮಳೆ ಬೆಳೆಗಳಿಂದ ವರ್ಧಿಸುತ್ತದೆಎಂದು ಪ್ರಾರ್ಥಿಸಿಕೊಂಡಿದ್ದಾನೆ. 1792 ರಿಂದ 1798 ರವರೆಗಿನ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಶೃಂಗೇರಿ ಮಠಕ್ಕೆ ಬರೆದಿರುವ ಪತ್ರಗಳು ಈಗಲೂ ಸಹ ಸುರಕ್ಷಿತವಾಗಿವೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ, ಮೈಸೂರು ನಗರದಲ್ಲಿ ಪ್ರಥಮವಾಗಿ ಕ್ರೈಸ್ತ ಧರ್ಮದ ಜನರ ಪ್ರಾರ್ಥನೆಗಾಗಿ ಟಿಪ್ಪು ಸುಲ್ತಾನ್ ಚರ್ಚ್ ಒಂದನ್ನು ನಿರ್ಮಾಣ ಮಾಡಿರುವುದನ್ನು ಪ್ರಸ್ತಾಪಿಸಿರುವ ಬಿ.. ಸಲಟೋರ್ ಎಂಬ ವಿದ್ವಾಂಸ ಟಿಪ್ಪು ಸುಲ್ತಾನ್ ನನ್ನುಹಿಂದೂ ಧರ್ಮದ ರಕ್ಷಕಎಂದು ಕರೆದಿದ್ದಾನೆ.
ಟಿಪ್ಪುವಿನ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿ ಬೆಂಗಳೂರು ನಗರದಲ್ಲಿ ಇರುವ ಬೇಸಿಗೆ ಅರಮನೆಗೆ ಹೊಂದಿಕೊಂಡಂತೆ ಇರುವ ಕೋಟೆ ಶ್ರೀ ವೆಂಕಟೇಶ್ವರ ದೇವಸ್ಥಾನ, ಅನತಿ ದೂರದಲ್ಲಿರುವ ಕೋಟೆ ಆಂಜನೇಯ ದೇವಸ್ಥಾನ ಹಾಗೂ ಶ್ರೀ ರಾಮ ಮಂದಿರ ಇವೆಲ್ಲವೂ ಟಿಪ್ಪುವಿನ ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿವೆ. ಅಷ್ಟೇ ಏಕೆ? 1799 ರಲ್ಲಿ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ಮಡಿದ ಸಂದರ್ಭದಲ್ಲಿ ಆತನ ಸಂಸ್ಥಾನದ ಮುಖ್ಯ ಮಂತ್ರಿಯಾಗಿದ್ದವರು ದಿವಾನ್ ಪೂರ್ಣಯ್ಯ, ಇವರು ಬ್ರಾಹ್ಮಣರು ಎಂಬುದನ್ನು ನಾವು ಮರೆಯಬಾರದು. ಟಿಪ್ಪು ಸುಲ್ತಾನ್ ಕೋಮುವಾದಿಯಾಗಿದ್ದರೆ, ಓರ್ವ ಬ್ರಾಹಣ ವ್ಯೆಕ್ತಿಗೆ ತನ್ನ ಅಸ್ಥಾನದಲ್ಲಿ ಅತ್ಯುನ್ನುತ ಹುದ್ದೆ ನೀಡಲು ಸಾಧ್ಯವಿತ್ತೆಭಾರತ ಹಾಗೂ ಕರ್ನಾಟಕ ನೆಲ ಕಂಡ ಇಂತಹ ಒಬ್ಬ ಧೀರೋತ್ತಮನನ್ನು ಮತ್ತು ಮಹಾನ್ ಮಾನವತಾವಾದಿಯನ್ನು ಸ್ಮರಣೆ ಮಾಡಿ ಗೌರವಿಸುವುದೆಂದರೆ, ಅದು ನಮ್ಮನ್ನು ನಾವು ಗೌರವಿಸಿಕೊಂಡಂತೆ.


(ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ಕೈ ಪಿಡಿಗೆ ಸಿದ್ಧಪಡಿಸಿದ ಲೇಖನ ಹಾಗೂ ವಾರ್ತಾ ಭಾರತಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)