ಶುಕ್ರವಾರ, ನವೆಂಬರ್ 3, 2017

ವೀಣಾ ಧನಮ್ಮಾಳ್ ಎಂಬ ಕರ್ನಾಟಕ ಸಂಗೀತದ ಮೇರು ಶಿಖರ



ಇದು 1904 ರಲ್ಲಿ ನಡೆದ  ನಡೆದ ಒಂದು ಅವಿಷ್ಮರಣೀಯ ಘಟನೆ. ಅಂದಿನ ಮಲಬಾರಿನ ಅಥವಾ ಈಗಿನ ಕೇರಳದ  ಪಾಲಕ್ಕಡ್ ಜಿಲ್ಲೆಯಲ್ಲಿರುವ ಕೊಳ್ಳೆಂಗೋಡ್ ಸಂಸ್ಥಾನದÀ ದೊರೆ  ವಸುದೇವರಾಜ ಎಂಬಾತನು ತನ್ನ ಪುತ್ರಿಯ ವಿವಾಹದ ಸಂದರ್ಭದಲ್ಲಿ   ತನ್ನ ಅರಮನೆಯಲ್ಲಿ ಏಳುದಿನಗಳ ಕಾಲ ಬೆಳಿಗ್ಗೆ ಮತ್ತು ಸಂಜೆ ಕಾಲದ ದಕ್ಷಿಣ ಭಾರತದ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಛೇರಿಯನ್ನು ಏರ್ಪಡಿಸಿದ್ದನು. ಇಡೀ ಕಾರ್ಯಕ್ರಮದ ಜವಾಬ್ದಾರಿಯನ್ನು ಪ್ರಸಿದ್ಧ ಹಿರಿಯ ಕಲಾವಿದರಾಗಿದ್ದ ಅನಂತರಾಮ ಭಾಗವತರ್ ಎಂಬುವರು ವಹಿಸಿಕೊಂಡಿದ್ದರು. ವಿವಾಹದ ಪ್ರಯುಕ್ತ ನಡೆಸಲಾದ ಸಂಗೀತ ಕಛೇರಿಗೆ ಆಹ್ವಾನಿಸಿದ ಕಲಾವಿದರ ಪೈಕಿ ಏಕೈಕ ಮಹಿಳಾ ಕಲಾವಿದೆಯಾಗಿ ವೀಣಾ ಧನಮ್ಮಾಳ್ ಇದ್ದರು. ವೀಣಾ ಧನಮ್ಮಾಳ್ ಅವರ ವೀಣಾ ಕಾರ್ಯಕ್ರಮ ಇದ್ದ ದಿನದಂದು ದೊರೆಯ ಬಳಿ ತೆರಳಿದ ಅನಂತರಾಮ ಭಾಗವತರ್, ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಎಲ್ಲಾ ಕಲಾವಿದರು ತಪ್ಪದೆ ಭಾಗವಹಿಸಬೇಕೆಂದು ತಾವು ಕರೆ ನೀಡಬೇಕೆಂದು ಪ್ರಾರ್ಥಿಸಿಕೊಂಡರು. ಅದರಂತೆ ದಿನ ಸಂಜೆ ರಾಜಕುಂಟುಂಬದ ಪರಿವಾರದ ಸದಸ್ಯರೂ ಸೇರಿದಂತೆ, ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ಕಲಾವಿದರು ಮತ್ತು ವಿದ್ವಾಂಸರು ವೀಣಾ ಧನಮ್ಮಾಳ್ ಅವರ ಸಂಗೀತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಶುದ್ಧ ಶಾಸ್ತ್ರೀಯವಾಗಿ, ಮಂದ್ರಗತಿಯ ಶೈಲಿಯಲ್ಲಿ ಅವರು ವೀಣೆಯಲ್ಲಿ ನುಡಿಸಿದ ರಾಗಗಳು, ಕೀರ್ತನೆಗಳು, ಪದಂ ಮತ್ತು ಜಾವಳಿ ಇವುಗಳನ್ನು ಕೇಳಿ ಸಂತೋಷಗೊಂಡ ದೊರೆಯು; ನೆರೆದಿದ್ದ ವಿದ್ವಾಂಸರ ನಡುವೆ ವೀಣಾ ಧನಮ್ಮಾಳ್ ಅವರಿಗೆ ಅಗ್ರ ತಾಂಬೂಲ ಹಾಗೂ ಚಿನ್ನದ ಪದಕ ನೀಡಿ ಗೌರವಿಸಿದನು. ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಇಂತಹ ಅತ್ಯುನ್ನತ ಗೌರವಕ್ಕೆ ಪಾತ್ರರಾದ ಕಲಾವಿದೆಯರಲ್ಲಿ ವೀಣಾ ಧನಮ್ಮಾಳ್ ಅತಿ ಮುಖ್ಯರು.
ದಕ್ಷಿಣ ಭಾರತದಲ್ಲಿ ನೃತ್ಯ ಮತ್ತು ಸಂಗೀತ ಕುರಿತು ಮಾತನಾಡುವಾಗ ಅಥವಾ ಬರೆಯುವಾಗ ವೀಣಾ ಧನಮ್ಮಾಳ್ ಅವರ ಕುಟುಂಬದ ಸುಮಾರು ಏಳು ತಲೆಮಾರಿನ ಸದಸ್ಯರು  ವಂಶ ಪಾರಂಪರ್ಯವಾಗಿ ಕಳೆದ ನಾಲ್ಕು ಶತಮಾನಗಳಿಂದ ಕರ್ನಾಟಕ ಸಂಗೀತ  ಮತ್ತು ನೃತ್ಯಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ವೀಣಾಧನಮ್ಮಾಳ್ ಅವರ ಮುತ್ತಜ್ಜಿ ಪಾಪಮ್ಮಾಳ್ ಎಂಬುವರು ತಂಜಾವೂರಿನ ಮರಾಠ ದೊರೆಗಳ ಆಸ್ಥಾನದಲ್ಲಿ ಸಂಗೀತ ವಿದುಷಿ ಹಾಗೂ ರಾಜ ನರ್ತಕಿಯಾಗಿ ಸೇವೆ ಸಲ್ಲಿಸಿದ್ದರು. ಅವರ ಪುತ್ರಿ ಕಾಮಾಕ್ಷಿ ಅಮ್ಮಾಳ್ ಅವರು ಕರ್ನಾಟಕ ಸಂಗೀತದ ತ್ರೀಮೂರ್ತಿ ವಾಗ್ಗೇಯಕಾರರಲ್ಲಿ ಒಬ್ಬರಾದ ಶ್ಯಾಮಾಶಾಸ್ತ್ರಿಗಳ ಶಿಷ್ಯರಲ್ಲಿ ಒಬ್ಬರಾಗಿ ಸಂಗೀತವನ್ನು ಅಭ್ಯಾಸ ಮಾಡಿದ್ದರು. ಕಾಮಾಕ್ಷಿ ಅಮ್ಮಾಳ್ ಅವರ ಪುತ್ರಿ ಅಂದರೆ, ಧನಮ್ಮಾಳ್ ಅವರ ತಾಯಿ ಸುಂದರಮ್ಮಾಳ್ ಸಹ ಶ್ಯಾಮಾಶಾಸ್ತ್ರಿಯವರ ಪುತ್ರ ಸುಬ್ಬರಾಯಶಾಸ್ತ್ರಿಯವರ ಶಿಷ್ಯೆಯಾಗಿ ಸಂಗೀತವನ್ನು ಮುಂದುವರಿಸಿ, ತಂಜಾವೂರು ಶೈಲಿಯ ಸಂಗೀತ ಮತ್ತು ನೃತ್ಯವನ್ನು ತಮ್ಮ ಮನೆತನದ ಅಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿದ್ದರು. ಇಂತಹ ಪರಿಣಿತ ಕಲಾವಿದರ ಕುಟುಂಬದಲ್ಲಿ 1868 ರಲ್ಲಿ ವೀಣಾಧನಮ್ಮಾಳ್ ಅಂದಿನ ಮದ್ರಾಸ್ ನಗರದ ಜಾರ್ಜ್ಟೌನ್ ಪ್ರದೇಶದಲ್ಲಿ ಜನಿಸಿದರು. ಧನಮ್ಮಾಳ್ ಜನನಕ್ಕೆ ಮುನ್ನವೇ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಪೋಷಕರನ್ನು ಅರಸಿಕೊಂಡು ಮದ್ರಾಸ್ ನಗರಕ್ಕೆ ವಲಸೆ ಬಂದಿದ್ದರು.
ದೇವಾಲಯಗಳಲ್ಲಿ ಹಾಗೂ ರಾಜರ ಆಸ್ಥಾನಗಳಲ್ಲಿ ನೃತ್ಯ ಮತ್ತು ಸಂಗೀತವನ್ನು ವೃತ್ತಿ ಮಾಡಿಕೊಂಡಿದ್ದ ಅನೇಕ ದೇವದಾಸಿ ಕುಟುಂಬಗಳಿಗೆ ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಮಿಳುನಾಡಿನಲ್ಲಿ ಸಂಭವಿಸಿದ ಸಾಂಸ್ಕøತಿಕ ಹಾಗೂ ಸಾಮಾಜಿಕ ಪಲ್ಲಟಗಳು ನಗರದತ್ತ ವಲಸೆ ಹೋಗಲು ಪರೋಕ್ಷವಾಗಿ ಕಾರಣವಾದವು. ದೇವಾಲಯಗಳಿಗೆ ದೇವದಾಸಿ ಕುಟುಂಬದ ಹೆಣ್ಣು ಮಕ್ಕಳನ್ನು ದತ್ತು ನೀಡುವುದು ಹಾಗೂ ದೇವಾಲಯಗಳಲ್ಲಿ ಆಚರಣೆಯಲ್ಲಿದ್ದ ದೇವದಾಸಿಯರ ನೃತ್ಯ ಪದ್ಧತಿ ಇವುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆದವು. ಬ್ರಿಟೀಷರು ಹಾಗೂ ಮಿಷನರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳಿಂದ ವಿಚಾರವಂತರಾದ ಜನತೆ ಸಾಮಾಜಿಕ ಸುಧಾರಣೆಯತ್ತ ಗಮನ ಹರಿಸಿದರು. ಇದರ ಜೊತೆಗೆ ಈಸ್ಟ್ ಇಂಡಿಯಾ ಕಂಪನಿಯು ದೇಶದ ಅನೇಕ ಸಂಸ್ಥಾನಗಳನ್ನು ಕೈವಶಮಾಡಿಕೊಂಡು, ರಾಜರುಗಳಿಗೆ ವಾರ್ಷಿಕವಾಗಿ ಪರಿಹಾರ ನೀಡಲು ಆರಂಭಿಸಿದಾಗ, ಸಂಗೀತ ಮತ್ತು ನೃತ್ಯ ಕಲಾವಿದರಿಗೆ ಇದ್ದ ಆಶ್ರಯ ತಪ್ಪಿಹೋಯಿತು. ಇಂತಹ ಅತಂತ್ರ ಸ್ಥಿತಿಯಲ್ಲಿ ಧನಮಾಳ್ ಅವರ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಸೇರಿದಂತೆ, ನೂರಾರು ದೇವದಾಸಿ ಕುಟುಂಬಗಳು ತಂಜಾವೂರು, ಮಧುರೈ, ಆಂಧ್ರಪ್ರದೇಶದ ವಿವಿಧ ಸಂಸ್ಥಾನಗಳಿಂದ ಮದ್ರಾಸ್ ನಗರಕ್ಕೆ ವಲಸೆ ಬಂದವು. ಇಂತಹ ಕಲಾವಿದೆಯರಿಗೆ ನೃತ್ಯ ಮತ್ತು ಸಂಗೀತದ ಶಿಕ್ಷಣ ನೀಡುತ್ತಿದ್ದ ವಿದ್ವಾಂಸರೂ ಸಹ ಕಲಾವಿದರ ಜೊತೆ ನಗರಕ್ಕೆ ಆಗಮಿಸಿದರು. ರಾಜಾಶ್ರಯದಲ್ಲಿ ಬೆಳೆದ ತಂಜಾವೂರು ಶೈಲಿಯ ನೃತ್ಯ ಮತ್ತು ಸಂಗೀತ ಹಾಗೂ ಕರ್ನಾಟಕ ಸಂಗೀತದ  ವಾಗ್ಗೇಯಕಾರರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳ ಸಂಗೀತ ಕೃತಿಗಳಲ್ಲಿ ಪರಿಣಿತರಾಗಿದ್ದ ಧನಮ್ಮಾಳ್ ಅವರ ಕುಟುಂಬಕ್ಕೆ ಮದ್ರಾಸ್ ನಗರದಲ್ಲಿ ವಿಶೇಷ ಗೌರವಿತ್ತು. ಕಾಮಾಕ್ಷಿ ಅಮ್ಮಾಳ್ ಅವರಿಗೆ ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ಎಂಬುವರು ಪೋಷಕರಾದರು. ಧನಮ್ಮಾಳ್ ಮತ್ತು ಅವರ ಸಹೋದರಿ ರೂಪವತಿ ಇಬ್ಬರಿಗೂ ತಾಯಿ ಸುಂದರಮ್ಮಾಳ್ ಹಾಗೂ ಅಜ್ಜಿ ಕಾಮಾಕ್ಷಿ ಅಮ್ಮಾಳ್ ಅವರು ಮನೆಯಲ್ಲಿಯೇ ಸಂಗೀತದಲ್ಲಿ ಶಿಕ್ಷಣ ಕೊಡಿಸಿದರುಅತಿ ಶೀಘ್ರದಲ್ಲಿ ಧನಮ್ಮಾಳ್ ಅವರ ಧ್ವನಿ ಗಾಯನಕ್ಕೆ ಸೂಕ್ತವಲ್ಲ, ಅದು ವೀಣಾ ವಾದನಕ್ಕೆ ಸೂಕ್ತ ಎಂಬುದನ್ನು ಅರಿತ ಅವರು ವೀಣೆಯ ತರಬೇತಿ ಕೊಡಿಸಿದರು. ಆರಂಭದ ದಿನಗಳಲ್ಲಿ ವೀಣಾ ಗಾಯನ ಕುರಿತಂತೆ ಒಲವು ತೋರಿಸದ ಧನಮ್ಮಾಳ್; ಒಮ್ಮೆ ಕಲ್ಯಾಣ ಕೃಷ್ಣ ಭಾಗವತರ ಕಚೇರಿಯನ್ನು ನೋಡಿ, ವೀಣೆಯತ್ತ ಒಲಿದರು. ನಂತರ ಅವರು ಅಳಗ ಸಿಂಗ್ರಚಾರ್ ಬಳಿ ಅಭ್ಯಾಸ ಮಾಡುವುದರ ಜೊತೆಗೆ ಸಾತ್ತನೂರ್ ಪಂಚನದಯ್ಯರ ಬಳಿ ತಾನವನ್ನು ಕಲಿತರುಅವರ ತಾಯಿ ಮತ್ತು ಅಜ್ಜಿ ಕರ್ನಾಟಕ ಸಂಗೀತದ ರಾಗಗಳು ಮತ್ತು ಅವುಗಳ P್ಪ್ಷಣಗಳು ಹಾಗೂ  ಸಂಗೀತ ಕೃತಿಗಳನ್ನು ಧಾರೆಯೆರೆದರು. ಇದರಿಂದಾಗಿ  ವರ್ಣಗಳಲ್ಲಿ ಧನಮ್ಮಾಳ್ ಅವರು ಅಪ್ರತಿಮ ಸಾಧನೆಗೈದರು. ಜೊತೆಗೆ ಪ್ರಸಿದ್ಧ ವೈಣಿಕರಾಗಿದ್ದ ಬಾಲದಾಸ್ ಮತ್ತು ಪೊನ್ನುಸ್ವಾಮಿಯವರಿಂದ ಪದಂ ಮತ್ತು ಜಾವಳಿ ಹಾಗೂ ನೈನಾಪಿಳ್ಳೆ ಹಾಗೂ ಅರಿಯಕುಡಿ ರಮಾನುಜಾ ಅಯ್ಯಮಗಾರ್ ರವರಿಂದ ಕೆಲವು ಪ್ರಸಿದ್ಧ ಕೃತಿಗಳಲ್ಲಿ ಪರಿಣತಿ ಗಳಿಸಿದರು. ಇಂತಹ ಭವ್ಯವಾದ ಹಿನ್ನಲೆಯಿಂದಾಗಿ ಕಾಲಘÀಟ್ಟದಲ್ಲಿ ಧನಮ್ಮಾಳ್ ಪುರುಷ ಸಾಮ್ರಾಜ್ಯದ ಸ್ವತ್ತಾಗಿದ್ದ ವೀಣೆಯ ವಾದನದಲ್ಲಿ ಎಲ್ಲರಿಗೂ ಸರಿಸಮಾನಾಗಿ ಬೆಳೆದು ನಿಂತರು.
ವೀಣೆಯ ನುಡಿಸಾಣಿಕೆಯಲ್ಲಿ ತಂಜಾವೂರು ಶೈಲಿಯಲ್ಲಿ ಕಾರೈಕುಡಿ ಸಹೋದರರು ( ಸಾಂಬಶಿವ ಮತ್ತು ಸುಬ್ಬರಾಯ ಅಯ್ಯರ್) ವೀಣಾ ಧನಮ್ಮಳ್, ಮೈಸೂರು ಶೈಲಿಯಲ್ಲಿ ವೀಣೆ ಶೇಷಣ್ಣ ಮತ್ತು ಸುಬ್ಬಣ್ಣ ಹಾಗೂ ಆಂಧ್ರಶೈಲಿಯಲ್ಲಿ ನುಡಿಸುತ್ತಿದ್ದ ವೆಂಕಟರಮಣ ದಾಸರು ಇಂತಹ ಶ್ರೇಷ್ಠ  ವೈಣಿಕರ ಹಾಗೆ  ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ವಿವಿಧ ಆಸ್ಥಾನಗಳಲ್ಲಿ ಕಾರ್ಯಕ್ರಮ ನೀಡಿ ಹೆಸರು ವಾಸಿಯಾದರು. ವೀಣೆಯಿಂದ ಹೊರಹೊಮ್ಮುವ ನಾದವು ಮನುಷ್ಯನ ಕಂಠದಿಂದ ಹೊರಹೊಮ್ಮುವ ನಾದಕ್ಕೆ ತಿರಾ ಹತ್ತಿರವಾದುದು ನಿಜ, ಆದರೆಸಂಗೀತದ ಕೃತಿಗಳನ್ನು ಹಲವು ರಾಗಗಳಲ್ಲಿ ಪ್ರಸ್ತುತ ಪಡಿಸುವಾಗ ನೈಪ್ಮಣ್ಯತೆಯ ಜೊತೆಗೆ ಧ್ಯಾನಸ್ಥ ಮನಸ್ಸು ವೈಣಿಕರಿಗೆ ಇರಬೇಕಾಗುತ್ತದೆ. ವಿಷಯದಲ್ಲಿ ಧನಮ್ಮಾಳ್ ಅಗ್ರಗಣ್ಯರಾಗಿದ್ದರು. ಧನಮ್ಮಾಳ್ ವಾಗ್ಗೇಯಕಾರರ ಕೃತಿಗಳನ್ನು ನುಡಿಸುವಾಗ ಕಲ್ಪನಾಸ್ವರಕ್ಕೆ ಅಥವಾ ನೆರವಲ್ ಗೆ ಹೆಚ್ಚಿನ ಆಧ್ಯತೆಯನ್ನು ನಿಡುತ್ತಿರಲಿಲ್ಲ. ರಾಗಾಲಾಪನೆಗಳಲ್ಲಿ ಮಾತ್ರ ಅವರು ತಮ್ಮ ಮನೋಧರ್ಮವನ್ನು ಅಭಿವ್ಯಕ್ತಿಗೊಳಿಸುತ್ತಿದ್ದರು. ಅವರು ಶುದ್ಧ ಶಾಸ್ತ್ರೀಯವಾಗಿ ರಾಗವನ್ನು ನಿರ್ಧಿಷ್ಟ ಮಿತಿಯಲ್ಲಿ ಮಾತ್ರ ವಿಸ್ತರಿಸುತ್ತಿದ್ದರು. ಅವರ ಆಲಾಪನೆಗಳು ಕೃತಿಗೆ ತಕ್ಕಂತೆ ಇರುತ್ತಿದ್ದವು. ಅತ್ಯಂತ ವ್ಯವಸ್ಥಿತವಾಗಿ ವಿಳಂಬ ಕಾಲದಲ್ಲಿ ನುಡಿಸುವುದು ಅವರ ಶೈಲಿಯಾಗಿತ್ತು. ಎಂದಿಗೂ ಅವರು ದ್ರುತಗತಿಯ ಸಂಗೀತ ಪ್ರಸ್ತುತಿಯನ್ನು ಇಷ್ಟ ಪಡುತ್ತಿರಲಿಲ್ಲಅವರು ವೀಣಾ ವಾದನದಲ್ಲಿ ತಂಬೂರಿಯ ಸಣ್ಣನೆಯ ಶೃತಿಯನ್ನು ಹೊರತು ಪಡಿಸಿದರೆ, ಮೃದಂಗವನ್ನು ಪಕ್ಕವಾದ್ಯವಾಗಿ ಬಳಸುವುದಕ್ಕೆ ಇಷ್ಟಪಡುತ್ತಿರಲಿಲ್ಲ. ಮೆಲುದನಿಯಲ್ಲಿ ಗುನುಗುತ್ತಾ ವೀಣೆಯನ್ನು ನುಡಿಸುವುದು ಅವರ ಹವ್ಯಾಸವಾಗಿತ್ತು.
ಪ್ರತಿ ಶುಕ್ರವಾರ ಸಂಜೆ ಅವರ ಮನೆಯಲ್ಲಿ ಸರಸ್ವತಿ ಪೂಜೆಯ ನಂತರ ಬಾಯಿಗೆ ತಾಂಬೂಲ ಹಾಕಿಕೊಂಡು, ಮಲ್ಲಿಗೆ ಮತ್ತು ಅಗರಬತ್ತಿಯ ಸುವಾಸನೆಯ ನಡುವೆ  ಧ್ಯಾನಸ್ಥ ಸ್ಥಿತಿಯಲ್ಲಿ ಅವರು ನುಡಿಸುತ್ತಿದ್ದ ವೀಣಾ ವಾದನವನ್ನು ಕೇಳಲು ಮದ್ರಾಸ್ ನಗರದ ಪ್ರತಿಷ್ಠಿತ ವ್ಯಕ್ತಿಗಳು ಅವರ ಮನೆಯಲ್ಲಿ ನೆರೆಯುತ್ತಿದ್ದರು. ಇಡೀ ಮನೆ ಮತ್ತು ಅಂಗಳ ಮಾತ್ರವಲ್ಲದೆ, ರಸ್ತೆಯಲ್ಲಿಯೂ ಸಹ ನಿಶ್ಯಬ್ದ ಮನೆ ಮಾಡಿರುತ್ತಿತ್ತುಹಿಂದೂ ಪತ್ರಿಕೆಯ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್, ಟಿ.ಟಿ.ಕೃಷ್ಣಮಾಚಾರಿಯಂತಹ ಪ್ರಸಿದ್ಧರು ಸೇರಿದಂತೆ ತಮಿಳುನಾಡಿನ ಸಂಗೀತಲೋಕದ ದಿಗ್ಗಜರು ಅವರ ವೀಣೆಯ ಮಾಧುರ್ಯವನ್ನು ಸವಿಯಲು ಮನೆಯಲ್ಲಿ ನೆರೆಯುತ್ತಿದ್ದರು. ಎಂದಿಗೂ ಹಣಕ್ಕಾಗಿ, ಕೀರ್ತಿಗಾಗಿ ಸಂಗೀತ ಕಾರ್ಯಕ್ರಮ ನೀಡಲು ಒಪ್ಪದ ಧನಮ್ಮಾಳ್ ಸಂಗೀತದ ಶುದ್ಧತೆ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿದ್ದರು. ಹಿಂದೂಸ್ಥಾನಿ ಸಂಗೀತದ ದಿಗ್ಗಜರಲ್ಲಿ ಒಬ್ಬರಾದ ಪಂಡಿತ್ ಅಬ್ದುಲ್ ಕರೀಂ ಖಾನ್ ಹಾಗೂ ಕರ್ನಾಟಕ ಸಂಗೀತದ ಮೈಸೂರಿನ ಟೈಗರ್ ವರದಾಚಾರ್ ಅವರ ಆತ್ಮೀಯ ಬಳಗದ ಸದಸ್ಯರಲ್ಲಿ ಮುಖ್ಯರಾಗಿದ್ದರು. ಇಂತಹ ಕರ್ನಾಟಕದ ಸಂಗೀತದ ಮಹಾನ್ ಮೇರು ಪ್ರತಿಭೆ 1938 ರಲ್ಲಿ ನಿಧನರಾದರು. ವೀಣಾ ಧನಮ್ಮಾಳ್ ತೆರವುಗೊಳಿಸಿದ ಸ್ಥಾನವನ್ನು ಈವರೆಗೆ ಯಾವೊಬ್ಬ ಮಹಿಳಾ ಕಲಾವಿದೆಯು ತುಂಬಲು ಸಾಧ್ಯವಾಗಿಲ್ಲ ಎಂದರೆ, ಇದು  ಅವರ ಅಪ್ರತಿಮ ಪ್ರತಿಭೆ ಮತ್ತು ಸಾಧನೆಗೆ ಸಾಕ್ಷಿ ಎಂದರ್ಥ.

(ವಾರ್ತಾ ಭಾರತಿ ದಿನಪತ್ರಿಕೆಯ “ ಸ್ವರ ಸನ್ನಿಧಿ” ಅಂಕಣ ಬರಹ)




ಶುಕ್ರವಾರ, ಅಕ್ಟೋಬರ್ 27, 2017

ಮೋದಿಯವರ ಮುಂದಿರುವ ಉದ್ಯೋಗ ಸೃಷ್ಟಿಯ ಸವಾಲುಗಳು

ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದು ಸಂಕಷ್ಟದ ಕಾಲ ಮಾತ್ರವಲ್ಲ, ಸಂದಿಗ್ಧ ಮತ್ತು ಸವಾಲಿನ ಕಾಲವೂ ಹೌದು. ಅವರು ತಮ್ಮ ರಾಜಕೀಯ ಜೀವನದಲ್ಲಿ ಇಂತಹ ಸವಾಲುಗಳನ್ನು ನಿರೀಕ್ಷಿಸಿರಲಿಲ್ಲ. “ ಮಾತು ಬೆಳ್ಳಿ, ಮೌನ ಬಂಗಾರಎಂಬ ನಾಣ್ಣುಡಿಯನ್ನು ಮೋದಿಯವರು ಈಗಲಾದರೂ ತಮ್ಮ ಬದುಕಿಗೆ ಅಳವಡಿಸಿಕೊಳ್ಳುವುದು ಸೂಕ್ತ. 2014 ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾಗೂ ಪ್ರಧಾನಿಯಾದ ನಂತರ ನೋಟುಗಳ ಮೇಲೆ ನಿಷೇಧ ಹೇರಿದ ಸಂದರ್ಭದಲ್ಲಿ ಆಡಿದ ಮಾತುಗಳನ್ನು ದೇಶದ ಜನತೆ ಮರೆತಿರಬಹುದು. ಆದರೆ, ಅರ್ಥಶಾಸ್ತ್ರದ ವಿದ್ಯಾರ್ಥಿ ಹಾಗೂ ಸಂಶೋಧಕನಾಗಿರುವ ನಾನು ಮರೆಯಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ಮೋದಿಯವರ ಕುರಿತು ಯಾವುದೇ ರಾಗ ದ್ವೇಷವಿಲ್ಲದೆ ಅವರ ಮೂರು ವರ್ಷದ ಆಡಳಿತ ಅವಧಿಯ ಆರ್ಥಿಕ ಬೆಳವಣಿಗೆಯನ್ನು  ವಿಮರ್ಶೆಯ ಒರೆಗಲ್ಲಿಗೆ ಒಡ್ಡಿದ್ದೀನಿ.
ಭಾರತದ ಆರ್ಥಿಕ ದುಸ್ಥಿತಿಗೆ ಕಾಂಗ್ರೇಸ್ ನೇತೃತ್ವದ ಯು.ಪಿ.. ಸರ್ಕಾರ ನೇರ ಜವಬ್ದಾರಿ ಎಂದು ಆರೋಪ ಹೊರಿಸಿದ್ದ ನರೇಂದ್ರ ಮೋದಿಯವರು, ದೇಶದ ಒಳಿತಿಗಾಗಿ ನಾನು ವಿಷ ಕುಡಿಯಲು ಸಿದ್ಧ ಎಂದು ಘೋಷಿಸಿದ್ದರು. ವಾಸ್ತವವಾಗಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಮೊದಲ ಅವಧಿಯಲ್ಲಿ ಇಡೀ ಜಗತ್ತು ತಿರುಗಿ ನೋಡುವಂತೆ ಭಾರತವು ಆರ್ಥಿಕವಾಗಿ ಅಭಿವೃದ್ಧಿಚಿುನ್ನು ಹೊಂದಿತ್ತು. ಆದರೆ, ಎರಡನೆಯ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಯನ್ನು ಮತ್ತು ಪಾರದರ್ಶಕವಾದ ಆಡಳಿತವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲಕಲ್ಲಿದ್ದಲು ಹಗರಣ, ದೂರ ಸಂಪರ್ಕ ಇಲಾಖೆಯ ಸ್ಪೆಕ್ಟ್ರಂ ಹಗರಣ, ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ವಾದ್ರಾನ ಭೂ ಹಗರಣ ಹೀಗೆ ಅನೇಕ ಭ್ರಷ್ಟಾಚಾರದಲ್ಲಿ ಯು.ಪಿ.. ಸರ್ಕಾರ ಮುಳುಗಿರುವಾಗ; ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಮೌನಕ್ಕೆ ಶರಣಾಗುವುದರ ಮೂಲಕ  ದೇಶವನ್ನು ಅಧಃಪತನದತ್ತ ದೂಡಿದರುಭಾರತದ ಇಬ್ಬರು ಪ್ರಧಾನಿಗಳ ನಡುವೆ ಹೇಳಿಕೊಳ್ಳುವಂತಹ ವೆತ್ಯಾಸವೇನಿಲ್ಲ; ಅಂದಿನ ಪ್ರಧಾನಿ ಮನಮೋಹನ್ ಸಿಂಗ್  ಏನನ್ನೂ ಮಾತನಾಡದೆ ಕೆಟ್ಟರು, ಈಗಿನ ಪ್ರಧಾನಿ ಮಾತನಾಡುತ್ತಾ ಕೆಟ್ಟರು. ಎರಡೂ ಪರಿಣಾಮಗಳಿಂದ ಭಾರತದ ಜನತೆ ಮಾತ್ರ ಅತಂತ್ರರಾದರು. ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದೆಂದು  ತಮ್ಮ ಎದೆಯನ್ನು 56 ಇಂಚಿಗೆ ಉಬ್ಬಿಸಿ  ನರೇಂದ್ರ ಮೋದಿಯವರು ಹೇಳಿದ್ದರು. ಆದರೆ, ಈಗ ಭಾರತದಲ್ಲಿ ಪ್ರತಿ ತಿಂಗಳು ಹತ್ತು ಲಕ್ಷ ಮಂದಿ ಯುವಕರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಅವರಲ್ಲಿ ಕೇವಲ ಎರಡು ಲಕ್ಷ ಮಂದಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ ಎಂದು ಅವರದೇ ನೃತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯ ವರದಿ ಹೇಳುತ್ತಿದೆ. ಶೇಕಡ 97 ರಷ್ಟು ಇಂಜಿನಿಯರ್ ಪದವೀಧರರು ನಿರುದ್ಯೋಗಿಗಳಾಗಿರುವುದು ಆತಂಕದ ಸಂಗತಿಯಾಗಿದೆ. ತಮ್ಮ ಆಡಳಿತದ ಅವಧಿಯಲ್ಲಿ ಸಾವಿರ ಮತ್ತು ಐನೂರು ಮುಖಬೆಲೆಯ  ನೋಟುಗಳನ್ನು ನಿಷೇಧಿಸಿ, ಕಪ್ಪಹಣವನ್ನು ನಿಯಂತ್ರಿಸುತ್ತೀನಿ ಎಂದು ಹೇಳಿ ಹೊರಟ ಮೋದಿಯವರ  ಯೋಜನೆಯು ಜಾಗತಿಕ ಮಟ್ಟದಲ್ಲಿ ನೆಗೆಪಾಟಲಿಗೆ ಈಡಾಯಿತು. ಜೊತೆಗೆ ಭಾರತದ ಆರ್ಥಿಕ ಬೆಳೆವಣಿಗೆಯನ್ನು ಹತ್ತು ವರ್ಷದ ಹಿಂದಕ್ಕೆ ಕೊಂಡೊಯ್ಯಿತು. ಯೋಜನೆ ವಿಫಲವಾದರೆ, ನನ್ನನ್ನು ಸುಟ್ಟು ಬಿಡಿ ಎಂದು ಆವೇಶದಿಂದ ಮಾತನಾಡಿದ್ದ ಇದೇ ಪ್ರಧಾನಿ ಮೋದಿಯವರು ಇತ್ತೀಚೆಗೆ ತಮ್ಮ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡುತ್ತಾ, ಆಡಳಿತದಲ್ಲಿನ ಕೆಲವು ಗುಂಪು ನಮ್ಮನ್ನು ಶಕ್ತಿ ಹೀನರನ್ನಾಗಿ ಮಾಡುತ್ತಿವೆ ಎಂಬ ಮಾತನ್ನಾಡುವುದರ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ. ಅವರು ಘೋಷಿಸಿದ್ದ ಮೇಕಿಂಗ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ಸಿಟಿ, ನಮಾಮಿಗಂಗಾ, ಸ್ವಚ್ಛ ಭಾರತ್  ಎಲ್ಲಾ ಯೋಜನೆಗಳು ಆಕರ್ಷಕವಾಗಿ ಕಂಡರೂ ಸಹ  ಎಲ್ಲವೂ ಫಲ ನೀಡುವಲ್ಲಿ ವಿಫಲವಾಗಿವೆ. ಕಾರಣಕ್ಕಾಗಿ ಆರ್ಥಿಕ ತಜ್ಞ ಪ್ರವೀಣ್ ಚಕ್ರವರ್ತಿ ಎಂಬುವರುಭಾರತದ ಆರ್ಥಿಕತೆ ಸಂಪೂರ್ಣವಾಗಿ ನೆಲ ಕಚ್ಚಿದೆಎಂದು ಬಿ.ಬಿ.ಸಿ. ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ನೋಟು ನಿಷೇಧ ಮತ್ತು ಜಿ.ಎಸ್.ಟಿ. ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆಗೆ  ಹಿನ್ನಡೆಯಾಗಿದೆ ಎಂದು ಸ್ವತಃ ಅರ್ಥಸಚಿವ ಅರುಣ್ ಜೇಟ್ಲಿ ಒಪ್ಪಿಕೊಂಡಿದ್ದಾರೆ.
ಭಾರತದ ಆರ್ಥಿಕ ಅಭಿವೃದ್ಧಿ ಎನ್ನುವುದು ಸರ್ದಾರ್ ವಲ್ಲಬಾಯ್ ಪಟೇಲ್  ಪ್ರತಿಮೆ, ಶ್ರೀರಾಮನ ಪ್ರತಿಮೆ ಅಥವಾ ಮಂದಿರ ನಿರ್ಮಾಣದ ಆಮೀಷ ತೋರಿಸಿ, ಗಾಳಿಯಲ್ಲಿ ಗೋಪುರ ನಿರ್ಮಿಸುವ ಯೋಜನೆಗಳಲ್ಲ ಎಂಬ ವಾಸ್ತವ ವನ್ನು ನರೇಂದ್ರಮೋದಿಯವರು ಈಗಲಾದರೂ ಅರಿಯಬೇಕಿದೆ. ಜೊತೆಗೆ ಒಳ್ಳೆಯ ರಾಜಕೀಯ ಮತ್ತು ಆರ್ಥಿಕ ತಜ್ಞರನ್ನು ತನ್ನ ಸುತ್ತ ಮುತ್ತ ಇರಿಸಿಕೊಂಡು ವಾಸ್ತವಿಕ ನೆಲೆಗಟ್ಟಿನಿಂದ ಕೂಡಿದ ಸಲಹೆಗಳನ್ನು ಮತ್ತು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಯೋಜನೆಗಳನ್ನು ಮಾತ್ರ ಅನುಷ್ಠಾನಕ್ಕೆ ತರಲು ಗಂಭೀರವಾಗಿ ಯೋಚಿಸಬೇಕಿದೆ. ಹಿಂದಿನ ರಿಸರ್ವ್  ಬ್ಯಾಂಕಿನ ಗವರ್ನರ್ ರಘರಾಂ ರಾಜನ್ ರವರ ಸಲಹೆಗಳನ್ನು ಕೇಳಿದ್ದರೆ ಅಥವಾ ಮೋದಿಯವರು ಅವರನ್ನು ಹುದ್ದೆಯಲ್ಲಿ ಇನ್ನೊಂದು ಅವಧಿಗೆ ಮುಂದುವರಿಸಿದ್ದರೆ, ಇಂತಹ ಮುಜುಗರದ ಸಂಗತಿಗಳನ್ನು ಎದುರಿಸಬೇಕಾಗಿರಲಿಲ್ಲರಘುರಾಂ ರಾಜನ್ ರವರು ತಮ್ಮ ಇತ್ತೀಚೆಗಿನ ಡು, ವಾಟ್ ಡುಎಂಬ ಕೃತಿಯಲ್ಲಿ ಭಾರತದ ಆರ್ಥಿಕ ರಂಗದ ತಪ್ಪು ಹೆಜ್ಜೆಗಳನ್ನು ಗುರುತಿಸಿ ವ್ಯಾಖ್ಯಾನಿಸಿದ್ದಾರೆ.
2020 ನೇ ವರ್ಷಕ್ಕೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ( ಜಿಡಿಪಿಯಲ್ಲಿ) ಉತ್ಪಾದನಾ ವಲಯದಿಂದ ಶೇಕಡ 25 ರಷ್ಟು ಪಾಲು ಇರಬೇಕೆಂದು ಮೋದಿ ನೇತೃತ್ವದ ಸರ್ಕಾರ ಗುರಿಹಾಕಿಕೊಂಡಿತ್ತು. ಆದರೆ, ಈಗಿನ ಉತ್ಪಾದನಾ ವಲಯದ ಬೆಳವಣಿಗೆ ಕೇವಲ 1.6 ರಷ್ಟು ಮಾತ್ರ ಇದೆ.  (2014 ರಿಂದ 17 ರವರೆಗೆ ಶೇಕಡ 15 ರಷ್ಟು ಗುರಿ ಸಾಧಿಸಬೇಕೆಂದು ನಿರ್ಧರಿಸಲಾಗಿತ್ತು. ಇತ್ತೀಚೆಗೆ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆಯ ನಿಯಮದಿಂದ ಉತ್ಪಾದನಾ ವಲಯದ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ವಿಶೇಷವಾಗಿ ಗುಡಿ ಕೈಗಾರಿಕೆಗಳ ಉತ್ಪನ್ನಗಳು, ನೇಕಾರಿಕೆ ಹಾಗೂ ಕಟ್ಟಡ ನಿರ್ಮಾಣ ಹಾಗೂ ಕೃಷಿ ಉತ್ಪನ್ನ ವಲಯಗಳಲ್ಲಿ ಯಾವುದೇ ರೀತಿಯ ಆಸಕ್ತಿದಾಯಕ ಬೆಳವಣಿಗೆಗಳು ಕಂಡು ಬರುತ್ತಿಲ್ಲ. ಕರಕುಶಲ ವಸ್ತುಗಳ ಮೇಲೆ ಶೇಕಡ 5 ರಷ್ಟು ಮಾತ್ರ ತೆರಿಗೆ ವಿಧಿಸಲಾಗಿದ್ದರೂ ಸಹ, ಅವುಗಳನ್ನು ತಯರಿಸುವ ಯಂತ್ರಗಳು ಅಂದರೆ, ಕೈ ಮಗ್ಗದ ಬಿಡಿಭಾಗಗಳ ಮೇಲೆ ಶೇಕಡ 12 ರಿಂದ 18 ರಷ್ಟು ತೆರಿಗೆ ವಿಧಿಸಿರುವುದರಿಂದ ಭಾರತದಲ್ಲಿ ಕೈ ಮಗ್ಗದ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ ಮತ್ತು ಬನಾರಸ್ ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾಗಿದ್ದ ವಾರಣಾಸಿ ಹೀಗೆ ಅನೇಕ ರಾಜ್ಯಗಳಲ್ಲಿ ನೇಕಾರರು ಬೀದಿಗೆ ಬಿದ್ದಿದ್ದಾರೆ.
ಭಾರತದಲ್ಲಿ ಈಗ ಕೇವಲ ವಿದ್ಯಾವಂತ ನಿರುದ್ಯೋಗಿಗಳ ಸಮಸ್ಯೆ ಮಾತ್ರವಲ್ಲ, ಕರಕುಶಲಕರ್ಮಿಗಳು ಸಹ ಆರ್ಥಿಕ ಬೆಳವಣಿಗೆಯ ಹಿಂಜರಿತದಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಜಮ್ಮು, ಕಾಶ್ಮೀರ ಅತ್ಯಂತ ಹೆಚ್ಚು ನಿರುದ್ಯೋಗಿಗಳ ರಾಜ್ಯವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಉದ್ಯೋಗದಲ್ಲಿ ಮಹಿಳೆಯರ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರ ಕುಂಠಿತಗೊಂಡಿದೆ. ದೇಶದ ಅತಿದೊಡ್ಡ ವಿಶ್ವ ವಿದ್ಯಾನಿಲಯವೆಂದು ಪ್ರಸಿದ್ಧಿ ಪಡೆದಿದ್ದ ದೆಹಲಿಯ ಜವಹರಲಾಲ್ ವಿ.ವಿ. ಪ್ರಾಧ್ಯಾಪಕರ ಮೇಲೆ ಕೆಲವು ನಿಯಮಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ವರ್ಷವೊಂದಕ್ಕೆ ಒಂದು ಸಾವಿರ ವಿದ್ಯಾರ್ಥಿಗಳು ವಿವಿಧ ವಿಷಯದ ಮೇಲೆ ಪಿ.ಹೆಚ್.ಡಿ. ಅಧ್ಯಯನ ಮಾಡುತ್ತಿದ್ದರು. ಈಗ ಅಭ್ಯರ್ಥಿಗಳ ಸಂಖ್ಯೆ ಕೇವಲ 194 ಕ್ಕೆ ಕುಸಿದಿದೆ.
ಭಾರತದ ಅಭಿವೃದ್ಧಿಯ ತಳಪಾಯ ಅಥವಾ ಬೆನ್ನೆಲಬು ಎಂದು ಕರೆಯಲಾಗುತ್ತಿದ್ದ ಕೃಷಿ ವಯಲಯದ ಬಿಕ್ಕಟ್ಟಿಗೆ ಯಾವುದೇ ಪರಿಹಾರವಿಲ್ಲದಂತಾಗಿದೆ. ದೇಶದಲ್ಲಿ ಶೇಕಡ 60 ರಿಂದ 70 ರವರೆಗೆ ಪ್ರತ್ಯೇಕ್ಷವಾಗಿ ಅಥವಾ ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದ ಕೃಷಿರಂಗ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸ್ಮಶಾನ ಸದೃಶ್ಯ ರೂಪದಲ್ಲಿದೆ. ಸಧ್ಯಕ್ಕೆ ಶೋಚನೀಯ ಸ್ಥಿತಿಯಲ್ಲಿರುವ ಕೃಷಿರಂಗವನ್ನು ಸದೃಢಗೊಳಿಸಿ, ರೈತರ ಆದಾಯವನ್ನು ಇಮ್ಮುಡಿಗೊಳಿಸಬೇಕಾದರೆ, ಮುಂದಿನ ಐದು ವರ್ಷಗಳ ಅವಧಿಯಲ್ಲಿ 4 ಲಕ್ಷ 63 ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಬೇಕೆಂದು ತಜ್ಞರು ಅಂದಾಜಿಸಿದ್ದಾರೆ. ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಹಾಗೂ ಕೈಗೆಟುಕುವ ಬೆಲೆಯಲ್ಲಿ ಬಿತ್ತನೆ ಬೀಜ, ಗೊಬ್ಬರ ಇವುಗಳು ದೊರೆಯುವಂತೆ ಮಾಡುವುದರ ಜೊತೆಗೆ ಸೂಕ್ತ ಮಾರುಕಟ್ಟೆಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಆದರೆ, ವೇಗದ ರೈಲು, ಕಾರಿಡಾರ್ ರಸ್ತೆಗಳು ಮತ್ತು ಮೇಲ್ಸೇತುವೆ ಇವುಗಳಿಗೆ ನೀಡಿರುವ ಆದ್ಯತೆಯನ್ನು ಪ್ರದಾನಿಯವರು ಭಾರತದ ಗ್ರಾಮೀಣ ಭಾಗಕ್ಕೂ ನೀಡುವುದರ ಮೂಲಕ ಪಟ್ಟಣ ಮತ್ತು ನಗರಗಳತ್ತ ವಲಸೆ ಹೋಗುತ್ತಿರುವ ಜನತೆಯನ್ನು ತಡೆಯಬೇಕಿದೆ. ಇಂದಿನ ಭಾರತದ ನಗರಗಳು ಎದುರಿಸುತ್ತಿರುವ ಕಸವಿಲೆವಾರಿ, ಸಂಚಾರದ ಅವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಅವಲೋಕಿಸಿದರೆ, ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವುದರ ಬದಲಾಗಿ ನಗರಕ್ಕೆ ಬರುವವರ ವಲಸೆಯನ್ನು ತಡೆಯುವುದಕ್ಕೆ ಆದ್ಯತೆ ನೀಡಬೇಕು. ಕೇವಲ, ಮಾಹಿತಿ ತಂತ್ರಜ್ಞಾನ ಕ್ರೇತ್ರ, ಸೇವಾ ವಲಯ ಅಥವಾ ಉತ್ಪಾದನಾ ವಲಯಗಳಿಂದ ಮಾತ್ರ ಉದ್ಯೋಗ ಸಮಸ್ಯೆ ನಿವಾರಣೆಯಾಗುವುದಿಲ್ಲ. ಇವುಗಳಿಗೆ ನೀಡುತ್ತಿರುವ ಆದ್ಯತೆಯನ್ನು ಕೃಷಿ ಮತ್ತು ಗುಡಿ ಕೈಗಾರಿಕಾ ಕ್ರೇತ್ರಕ್ಕೆ ನೀಡಿದಾಗ ಮಾತ್ರ ನಿರುದ್ಯೋಗ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರಕಬಹುದು. ಇದು ಈಗ ಕೇವಲ ಭಾರತದ ಸಮಸ್ಯೆಯಾಗಿ ಉಳಿದಿಲ್ಲ, ಜಾಗತೀಕರಣ ಮತ್ತು ಮುಕ್ತ ಮಾರುಕಟ್ಟೆಯ ವ್ಯವಸ್ಥೆಯ ಫಲವಾಗಿ ಮರೆಮಾಚಿದ ಬಂಡವಾಳಶಾಹಿ ವ್ಯವಸ್ಥೆ ಮುಂಚೂಣಿಗೆ ಬಂದ ಫಲವಾಗಿ ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದ್ದೆ. ಸಮಸ್ಯೆಯಲ್ಲಿ ಗ್ರೀಸ್ ರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ಐದನೆಯ ಸ್ಥಾನದಲ್ಲಿದೆ. ಮುಂದಿನ ವರ್ಷ ಚುನಾವಣೆ ಎದುರಿಸಬೇಕಾಗಿರುವ ಮೋದಿಯವರು ಭಾರತವನ್ನು ಯಾವ ದಿಕ್ಕಿನತ್ತ ಕೊಂಡೊಯ್ಯಬಲ್ಲರು? ಎಂಬುದಕ್ಕೆ ಯಾವುದೇ ಆಶಾದಾಯಕ ಬೆಳವಣಿಗೆಗಳು ಕಾಣುತ್ತಿಲ್ಲ.

( ಕರಾವಳಿ ಮುಂಜಾವು ದಿನಪತ್ರಿಕೆಯ “ ಜಗದಗಲ” ಅಂಕಣ ಬರಹ)