ಭಾನುವಾರ, ಡಿಸೆಂಬರ್ 13, 2015

ಯಸ್. ತಿರುಪತಿ ತಿಮ್ಮಪ್ಪ ಹೀಜ್ ಅವರ್ ಕೊಲ್ಲಾಪುರ ಮಹಾಲಕ್ಷ್ಮಿ ಅಮ್ಮಾಸ್ ಹಜ್ ಬೆಂಡ್.




ಕಳೆದ ತಿಂಗಳು ನನ್ನ ಭೂಮಿಗೀತ ಭ್ಲಾಗ್ ನಲ್ಲಿ  “ಇಬ್ಬರ `ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ; ಎಂಬ ಶೀರ್ಷಿಕೆಯಡಿ ತಮಿಳು ನಾಡಿನ ನಾಚ್ಚಿಯಾರ್ ಎಂಬ ದೇವತೆ ಕುರಿತು  ಲೇಖನ ಬರೆದಿದ್ದೆ. ಈ ಸಂದರ್ಭದಲ್ಲಿ ಪಲ್ಲವಿ ಇದೂರ್ ಎಂಬ ಹೆಣ್ಣು ಮಗಳು “ ಹಾಗಾದರೆ, ತಿಮ್ಮಪ್ಪನಿಗೆ ಎಷ್ಟು ಜನ ಹೆಂಡತಿಯರು? “ ಎಂಬ ಪ್ರಶ್ನೆ ಕೇಳಿದ್ದರು. ನನಗೆ ಉತ್ತರ ಗೊತ್ತಿಲ್ಲದ ಕಾರಣ  ನಕ್ಕು ಸುಮ್ಮನಾಗಿದ್ದೆ. ಆ ರೀತಿ ಮೌನ ವಹಿಸುದ್ದು ಒಳ್ಳೆಯದಾಯಿತು. ಏಕೆಂದರೆ, ತಿಮ್ಮಪ್ಪನ ಪ್ರಣಯ ಪ್ರಸಂಗ ಕೇವಲ ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅದು ನಮ್ಮ ನೆರೆಯ ಮಹಾರಾಷ್ಟ್ರದವರೆಗೂ ಹಬ್ಬಿದೆ. ಹೌದು ಇದನ್ನು ನೀವು ನಂಬಲೇಬೇಕು. ಅದಕ್ಕೆ ಪುರಾವೆಗಳಿವೆ. ಕೊಲ್ಲಾಪುರದ ಮಹಾಲಕ್ಷ್ಮಿ ಕೂಡ ತಿಮ್ಮಪ್ಪನ ಪತ್ನಿ ಎಂಬ ವಿಷಯ  ನಿನ್ನೆ ಶನಿವಾರ  ನನಗೆ ತಿಳಿಯಿತು.

ಶನಿವಾರ ವಾರದ ರಜೆ ಇದ್ದ ಕಾರಣ ನಾನು ಮತ್ತು ನನ್ನ ಲೇಖಕ ಮಿತ್ರರಾದ ವೆಂಕಟೇಶ ಮಾಚಕನೂರು ಧಾರವಾಡದಿಂದ 200 ಕಿಲೋಮಿಟರ್ ದೂರವಿರುವ ಕೊಲ್ಲಾಪುರ ನಗರದ ವೀಕ್ಷಣೆಗೆ ಹೊರಟಿದ್ದವು. ವೀಕ್ಷಣೆಯ ಜೊತೆಗೆ ಅಲ್ಲಿನ ಶಿವಾಜಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ರೈತರ ಕಾರ್ಯಾಗಾರದಲ್ಲಿ ಮಾಹಿತಿ ಕಲೆ ಹಾಕುವುದು ನನಗೆ ಮುಖ್ಯವಾಗಿತ್ತು. ಮೀರಜ್, ಸಾಂಗ್ಲಿ, ಕೊಲ್ಲಾಪುರ, ಸತಾರ ಜಿಲ್ಲೆಗಳ ಸುತ್ತ ಮುತ್ತ 43 ಸಕ್ಕರೆ ಕಾರ್ಖಾನೆಗಳು ಮತ್ತು ಒಂದು ಸಾವಿರದ ನೂರ ಹತ್ತು ಬೆಲ್ಲ ತಯಾರಿಸುವ ಆಲೆ ಮನೆಗಳಿವೆ ಎಂಬ ಮಾಹಿತಿ ಶಿವಾಜಿ ವಿ.ವಿ. ವಾಣಿಜ್ಯ ವಿಭಾಗದ ಡಾ. ಅಪ್ಪರಾವ್ ಸಾಹೇಬ್ ಗುರುವ ಎಂಬುವರಿಂದ ನನಗೆ ಸಿಕ್ಕಿತ್ತು.  ಹಾಗಾಗಿ ಅಲ್ಲಿನ ಅತಿಥಿ ಗೃಹದಲ್ಲಿ ಉಳಿದುಕೊಂಡು,  ಅವರಿಂದ ಮಾಹಿತಿ ಸಂಗ್ರಹಿಸಿದೆ. ನಂತರ ಛತ್ರಪತಿ ಸಾಹು ಮಹಾರಾಜ್ ಅರಮನೆ ನೋಡಿಕೊಂಡು, ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋದಾಗ ನಮಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದ ಆಡಳಿತಾಧಿಕಾರಿಯವ ಕಛೇರಿಯಲ್ಲಿ ಕುಳಿತಿದ್ದೆ. ಅವರ ಕುರ್ಚಿಯ ಹಿಂಭಾಗ ಗೋಡೆಯಲ್ಲಿ ಮಹಾಲಕ್ಷ್ಮಿ ಮತ್ತು ವೆಂಕಟೇಶ್ವರ ಪ್ರತಿಮೆಗಳನ್ನು ಇಡಲಾಗಿತ್ತು. ನಾನು ಈ ಬಗ್ಗೆ ಅವರನ್ನು ಕೇಳಿದೆ. ಅವರು ಮರಾಠಿ ಮಿಶ್ರಿತ ಇಂಗ್ಲೀಷ್ ಭಾಷೆಯಲ್ಲಿ “ ಹಿ ಹೀಜ್ ಅವರ್ ಮಹಾಲಕ್ಷ್ಮಿ ಅಮ್ಮಾಸ್  ಹಜ್ ಬೆಂಡ್” ಎಂದರು. ನನಗೆ ತಲೆ ತಿರುಗಿ ಕುಳಿತಿದ್ದ ಕುರ್ಚಿಯಿಂದ ಕೆಳಕ್ಕೆ ಬೀಳುವಂತಾಯಿತು. ನಂತರ ಅವರು ಕಥೆ ಹೇಳಿದರು.
ಪ್ರತಿ ವರ್ಷ ತಿರುಪತಿ ವೇಂಕಟೇಶ್ವರ ದೇವಸ್ಥಾನದಿಂದ ಒಂದು ಲಕ್ಷ ರೂಪಾಯಿಗೂ ಅಧಿಕ ಬೆಲೆ ಬಾಳುವ ರೇಷ್ಮೆ ಸೀರೆಯನ್ನು ತಿರುಪತಿ ದೇವಸ್ಥಾನದ ಪ್ರತಿನಿಧಿಯೊಬ್ಬರು  ಕೊಲ್ಲಾಪುರಕ್ಕೆ ಬಂದು ನೀಡಿ ಹೂಗುವ ವಿಚಾರವನ್ನು ತಿಳಿಸಿದರು. ಜೊತೆಗೆ ಮಹಾರಾಷ್ಟ್ರದಿಂದ ವೆಂಕಟೇಶ್ವರನ ದರ್ಶನಕ್ಕೆ ಹೂಗುವ ಭಕ್ತರು ಅಲ್ಲಿಂದ ನೇರವಾಗಿ ಕೊಲ್ಲಾಪುರಕ್ಕೆ ಬಂದು ಮಹಾಲಕ್ಷ್ಮಿ ಅಮ್ಮನ ದರ್ಶನ ಪಡೆದು ಮನೆಗೆ ಹೋಗುತ್ತಾರೆ ಎಂಬ ಕುತೂಹಲಕಾರಿ ಸಂಗತಿಯನ್ನು ಹೇಳಿದರು. ಈ ಕಾರಣಕ್ಕಾಗಿ ಕೊಲ್ಲಾಪುರದಿಂದ ತಿರುಪತಿಗೆ ಪ್ರತಿ ದಿನ ಹರಿಪ್ರಿಯ ಎಕ್ಸ್ ಪ್ರಸ್ ರೈಲು ಸಂಚರಿಸುತ್ತದೆ.

ದೇವಾಸ್ಥಾನದ ಗರ್ಭಗುಡಿಗೆ ಕರೆದು ಕೊಂಡು ಹೋಗುವ ಮುನ್ನ ಮಹಾಲಕ್ಷ್ಮಿ ದೇವಾಲದ ಕಟ್ಟಡಕ್ಕೆ ಹೊಂದಿಕೊಂಡತೆ ವೆಂಕಟೇಶ್ವರನ ಪುಟ್ಟ ದೇವಾಲಯವಿದೆ. ಭಕ್ತರು ಗರ್ಭಗುಡಿ ಪ್ರವೇಶಿಸುವ ಮುನ್ನ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಆಡಳಿತಾದಿಕಾರಿಗೆ ನಾನು ತಮಿಳುನಾಡಿನ ಕಥೆಯನ್ನು ವಿವರಿಸಿದೆ. ಅವರು “ಎಸ್.ಎಸ್. ಹೀ ಹೀಜ್ ಗ್ರೇಟೆಸ್ಟ್ ಮಜನೂ ಆಫ್ ಅವರ್ ಇಂಡಿಯಾ” ಎಂದು ಹೇಳಿ ನಕ್ಕರು.
ಈಗ ತಿರುಪತಿಗೆ ಹೋಗಿ ನಿಮ್ಮ ದೇವಸ್ಥಾನದಿಂದ ಯಾವ್ಯಾವ ಊರುಗಳಿಗೆ ಪ್ರತಿ ವರ್ಷ ರೇಷ್ಮೆ ಸೀರೆ ಉಡುಗೊರೆಯಾಗಿ ಹೋಗುತ್ತೆ ಎಂಬ ಪ್ರಶ್ನೆಯನ್ನು ಕೇಳಿ ,  ಆ ಮೂಲಕ ದಕ್ಷಿಣ ಭಾರತದ ಊರುಗಳಲ್ಲಿರುವ ತಿಮ್ಮಪ್ಪನ ಪ್ರೇಯಸಿಯರನ್ನು ಲೆಕ್ಕ ಹಾಕಬೇಕು ಎಂದು ನಿರ್ಧರಿಸಿದ್ದೀ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ