ಸೋಮವಾರ, ನವೆಂಬರ್ 21, 2022

ಯುದ್ಧವೆಂಬ ಮನುಕುಲದ ಕ್ರೌರ್ಯ ಮತ್ತು ಜಾಗತಿಕ ಸಂಘಟನೆಗಳ ನಿಷ್ಕಿçಯತೆ

 



ಯುದ್ಧ ಅಥವಾ ಹಿಂಸೆ ಎನ್ನುವುದು ಮನುಕುಲಕ್ಕೆ ತಟ್ಟಿದ ಶಾಪ ಮತ್ತು ಕ್ರೌರ್ಯ ಎಂದು ಎರಡು ಸಾವಿರ ವರ್ಷಗಳ ಹಿಂದೆಯೇ ಗೌತಮ ಬುದ್ಧ. ಈಜಗತ್ತಿಗೆ ಸಾರಿದವನು. ಶಾಖ್ಯ ಬುಡಕಟ್ಟು ಜನಾಂಗದ ಯುವ ರಾಜಕುಮಾರÀನಾಗಿದ್ದ ಸಿದ್ಧಾರ್ಥ ತನ್ನ ಸಮುದಾಯದ ಪದ್ಧತಿಯ ಅನುಸಾರ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಶಾಖ್ಯ ಬುಡಕಟ್ಟು ಸಂಘದ ಸದಸ್ಯನಾಗಿದ್ದನು. ರೋಹಿಣಿ ನದಿ ನೀರಿನ ಬಳಕೆಯ ವಿಚಾರದಲ್ಲಿ ನೆರೆಯ ಮತ್ತೊಂದು ಬುಡಕಟ್ಟು ಕೋಲಿಯರು ಮತ್ತು ಶಾಖ್ಯರ  ನಡುವಿನ ಸಂಘರ್ಷ ತಾರಕ್ಕೇರಿತು  ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ಶಾಖ್ಯ ಬುಡಕಟ್ಟಿನ ಮುಖಂಡರು ಸಂಘದ ಸಭೆ ಕರೆದು ಕೋಲಿಯರ  ಮೇಲೆ ಯುದ್ಧ ಮಾಡಲು ನಿಧ್ರಿಸಿದರು.

ಸಿದ್ಧಾರ್ಥನ ತಂದೆ  ಶುದ್ದೋಧನ ಶಾಖ್ಯರ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿದ್ದ ಸರದಿಯ ನಿಯಮಾನುಸಾರ ದೊರೆಯಾಗಿದ್ದನು ಕಾರಣದಿಂದಾಗಿ ಸಿದ್ಧಾರ್ಥನು ಯುವರಾಜನ ಗೌರವ ಮತ್ತು ಸ್ಥಾನಮಾನ ಹೊಂದಿದ್ದನು. ಕೇವಲ ಕುಡಿಯುವ ನೀರಿಗಾಗಿ ನಮ್ಮ ಸಹೋದರರಂತೆ ಇರುವ ಕೋಲಿಯರ ಜೊತೆ ಯುದ್ಧ ಮಾಡುವುದು ಬೇಡ ಎಂಬುದು ಸಿದ್ಧಾರ್ಥನ ನಿರ್ಧಾರಗಿತ್ತು.  ಕುರಿತು ಸಮಘದ ಸರ್ವ ಸದಸ್ಯರ ಸಭೆ ಕರೆದು ವಿಷಯವನ್ನು ಚರ್ಚೆಗೆ ಒಳಪಡಿಸಿದಾಗ ಸಿದ್ಧಾರ್ಥನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಯುದ್ಧಕ್ಕೆ ಸಮ್ಮತಿ ಸೂಚಿಸಿದರು. ಸಂಘದ ನಿಯಮದ ಪ್ರಕಾರ  ಬಹುಮತ ಇರುವ ವಿಷಯಕ್ಕೆ ವಿರೊಧ ವ್ಯಕ್ತಪಡಿಸಿದ ಸದಸ್ಯ ಮರಣದಂಡನೆ ಅಥವಾ ಗಡಿಪಾರು ಶಿಕ್ಷೆಗೆ ಒಳಗಾಗಬೇಕು ಇಲ್ಲವೆ ನಿಯಮವನ್ನು ಕಡ್ಡಾಯವಾಗಿ ಒಪ್ಪಿಕೊಳ್ಳಬೇಕಿತ್ತು. ಯುದ್ಧವನ್ನು ಸ್ಪಷ್ಟವಾಗಿ ನಿರಾಕರಿಸಿದ ಸಿದ್ಧಾರ್ಥನು ಮರಣದಂಡನೆಯ ಬದಲಾಗಿ ಗಡಿಪಾರು ಶಿಕ್ಷೆಯನ್ನು ಆಯ್ಕೆ ಮಾಡಿಕೊಂಡನು.  ಸಂಘದ ಸಭೆಯಿಂದ ತನ್ನ ಅರಮನೆಗೆ ಹಿಂತಿರುಗಿ ಬಂದು ತಂದೆ ತಾಯಿಗಳಿಗೆ ತನ್ನ ನಿರ್ಧಾರವನ್ನು ತಿಳಿಸಿದನು. ನಂತರ ಪತ್ನಿ ಯಶೋಧರೆಯ ಒಪ್ಪಿಗೆ ಪಡೆದು  ಬ್ರಾಹ್ಮಣ ಗುರು ಭಾರದ್ವಾಜ ಎಂಬಾತನಿA  ಸನ್ಯಾಸಿಯ ದೀಕ್ಷೆ ಪಡೆದು ತನ್ನ ಯುವರಾಜನ ಉಡುಪು ಕಳಚಿ ತಲೆ ಬೋಳಿಸಿಕೊಂಡು ಖಾವಿ ವಸ್ತçತೊಟ್ಟು ಭಿಕ್ಷಾಪಾತ್ರೆಯನ್ನು ಹಿಡಿದು ಕಪಿಲ ವಸ್ತು ನಗರವನ್ನು ತ್ಯೆಜಿಸಿದನು. ಕಾಲ್ನಡಿಗೆಯಲ್ಲಿ ಸಾಗುತ್ತಾ ಗಂಗಾನದಿಯನ್ನು ದಾಟಿ ಸುಮಾರು ಆರನೂರು ಕಿಲೊಮೀಟರ್ ದೂರವಿರುವ ಬಿಹಾರದ  ರಾಜಗೃಹ ( ಈಗಿನ ರಾಜಗೀರ್ ಪಟ್ಟಣ. ಬುದ್ಧ ಗಯಾ ದಿಂದ ೪೫ ಕಿ.ಮಿ ದೂರದಲ್ಲಿದೆ) ಪಟ್ಟಣಕ್ಕೆ ಬಂದು ಸ್ಥಳಿಯ ಗುಡ್ಡವೊಂದರ ಗುಹೆಯಲ್ಲಿ ವಾಸಿಸಯೊಡಗಿದನು.  ಸನ್ಯಾಸಿಯಾಗಿ ಬದುಕುತ್ತಾ ತಾನು ಬದುಕಿದ್ದ ಕಾಲಘಟ್ಟದ ಧರ್ಮಗಳು ಮತ್ತು ನಂಬಿಕೆಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ ಧ್ಯಾನಸ್ಥನಾಗಿ ಜ್ಞಾನ ಸಂಪಾದಸಿದ ಸಿದ್ಧಾರ್ಥನು ಬುದ್ಧನಾಗಿ ಪರಿವರ್ತನೆ ಹೊಂದಿದನು. ಇಷ್ಟು ಮಾತ್ರವಲ್ಲದೆ ತಾನು ಕಂಡುಕೊA ಸತ್ಯಗಳನ್ನು ಆಧರಿಸಿ ಬೌದ್ಧ ಧರ್ಮದ ಉದಯಕ್ಕೆ ಕಾರಣನಾದ ತಥಾಗತನು ತನ್ನ ಜೀವಿತಾವಧಿಯಲ್ಲಿ ಎಂದಿಗೂ ಯುದ್ಧದ ಬಗ್ಗೆಯಾಗಿ ಹಿಂಸೆಯ ಕುರಿತಾಗಲಿ ಮಾತನಾಡಲಿಲ್ಲ ಮತ್ತು ಪ್ರೋತ್ಸಾಹಿಸಲಿಲ್ಲ. ಇದು ಡಾ. ಬಿ.ಆರ್. ಅಂಬೇಡ್ಕರ್ ರವರು ನಮಗೆ ನೀಡಿದ ಬುದ್ಧನ ನೈಜ ಚರಿತ್ರೆ.

ಬುದ್ಧನಿಂದ ಯುದ್ಧ ಕುರಿತಾಗಿ ಎರಡು ಸಾವಿರ ವರ್ಷಗಳ ಹಿಂದೆ ಹೊರಬಿದ್ದ ಸಂದೇ± ನಂತರದ ಶತಮಾನಗಳಲ್ಲಿ ಹಲವು ರೂಪಗಳಲ್ಲಿ ಬಸವಣ್ಣ ಮತ್ತು ಗಾಂಧೀಜಿ ಮುಂತಾದವರವರ ಮೂಲಕ ಜಗತ್ತಿನ ಎಲ್ಲೆಡೆ ಪ್ರಸರಿಸಿತು. ಆದರೆ  ಅಧಿಕಾರದ ಗದ್ದುಗೆ ಏರುವುದರ ಮೂಲಕ  ಆಡಳಿತದ ಚುಕ್ಕಾಣಿ ಹಿಡಿದ ನಾಯಕರೆಂಬ ಶಿಖಾಮಣಿಗಳ ಎದೆಗೆ ಮನುಕುಲದ ಉದಾತ್ತ ಸಂದೇಶ ತಟ್ಟಲಿಲ್ಲ. ಇದರ ಫಲಿತಾಂಶವೆಂಬಂತೆ ಒಂದನೇ ಮಹಾಯುದ್ಧ ಮತ್ತು ಎರಡನೆಯ ಮಹಾಯುದ್ಧಕ್ಕೆ ಬಲಿಯಾದ ಜಗತ್ತು ಮೌನದಿಂದ ನರಳಿತು. ತಮ್ಮದಲ್ಲದ ತಪ್ಪಿಗೆ  ಯುದ್ಧದ ನೆಪದಲ್ಲಿ ಅಮಾಯಕ ಜನತೆ ಬಲಿಪಶುಗಳಾದರು.   ಜಗತ್ತಿನ ಮನುಷ್ಯ ದೇಹದ ಬೆವರು ಮತ್ತು ನೆತ್ತರಿಗೆ ಬೇರೆ ಬೇರೆ ಬಣ್ಣಗಳಿಲ್ಲ ಮತ್ತು  ರುಚಿಗಳಿಲ್ಲ. ಆದರೆ ಜಗತ್ತಿನ ನಾಯಕರ ಸ್ವಾರ್ಥಕ್ಕೆ ಸೃಷ್ಟಿಯಾದ ಯುದ್ಧಗಳಿಂದ ನರಳಿದ ತಾಯಂದಿರು ಮತ್ತು ಹಸುಗೂಸಗಳ ಲೆಕ್ಕವಿಟ್ಟವರಿಲ್ಲ. ಕ್ರೌರ್ಯದ ಪರಂಪರೆ  ಇಪ್ಪತ್ತೊಂದನೆಯ ಶತಮಾನದ ಆಧುನಿಕ ಜಗತ್ತಿನಲ್ಲಿ ಇಂದಿಗೂ ಜರುಗುತ್ತಿದೆ. ಜಗತ್ತಿನಾದ್ಯಂತ ಮುಗ್ಧ ಜನತೆ ನೆಲೆ ಕಳೆದುಕೊಂಡು ಅತಂತ್ರರಾಗುತ್ತಿದ್ದಾರೆ. ಸಿರಿಯಾ ಯುಧ್ಧ, ಇರಾಕ್ ಮೇಲಿನ ಯುದ್ಧ, ಇಸ್ರೇಲ್- ಪ್ಯಾಲೆಸ್ತೇನ್ ನಡುವಿನ ಸಂಘರ್ಷ,  ಆಫ್ಘಾನಿಸ್ತಾನದ ಮೇಲಿನ ತಾಲಿಬಾನ್ ದಾಳಿ ಹೀಗೆ ಸಾಲು ಸಾಲು ದುರಂತಗಳು ಯುದ್ಧದ ಹೆಸರಿನಲ್ಲಿ ಸಂಭವಿಸುತ್ತಿವೆ. ಈಗ ಕಳೆದ ಪೆಬ್ರವರಿ ತಿಂಗಳಿನಿಂದ ರಷ್ಯಾ-ಉಕ್ರೇನ್ ರಾಷ್ಟçಗಳನಡುವೆ  ನಡೆಯುತ್ತಿರುವ ಯುದ್ಧ ಇಡೀ ಜಗತ್ತಿನ ನಾಗರೀಕ ಸಮಾಜದ ಪ್ರಜ್ಞಾವಂತರ ನಿದ್ದೆಗೆಡಿಸಿದೆ.

ಒಂದು ಕಾಲದಲ್ಲಿ ಸೋವಿಯತ್ ರಷ್ಯ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ರಾಷ್ಟç ಮೇಲೆ ಈಗಿನ ರಷ್ಯಾ ಅಧ್ಯಕ್ಷ ಹಾಗೂ ಜರ್ಮನಿಯ  ಸರ್ವಾಧಿಕಾರಿ ಹಿಟ್ಲರ್ ಉತ್ತಾಧಿಕಾರಿಯಂತೆ ಕಾಣುವ  ವ್ಲಾದಿಮೀರ್ ಪುಟಿನ್  ಎಂಬ ದುರಂಕಾರಿ ಯಾವುದೇ ನಿಖರವಾದ ಮಾಹಿತಿ ಅಥವಾ ಕಾರಣ ನೀಡದೆ ಯುದ್ಧ ಘೋಷಿಸಿರುವುದು ಆಧುನಿಕ ಜಗತ್ತು ಸಾಗುತ್ತಿರುವ ಅಧಃಪತನದ ಮಾರ್ಗಕ್ಕೆ ಸೂಚನೆ ಎಂಬAತಿದೆ. ೨0೧೪ ರಲ್ಲಿ ಉಕ್ರೇನಿನ ಒಂದು ಭಾವನ್ನು ಆಕ್ರಮಿಸಿಕೊಂಡು ಯುದ್ಧಕ್ಕೆ ಸನ್ನದ್ಧನಾಗಿ ನಿಂತಾಗ ವಿಶ್ವಸಂಸ್ಥೆ ಸೇರಿದಂತೆ ಇಡೀ ಜಗತ್ತು ಮೌನವಾಗಿತ್ತು. ಈಗ ಜಗತ್ತಿನ  ಅತ್ಯಂತ ಪ್ರಬಲ ಶಕ್ತಿ ರಾಷ್ಟçಗಳಾದ ಅಮೇರಿಕಾ ಮತ್ತು ರಷ್ಯಾ ರಾಷ್ಟçಗಳ ವೈಯಕ್ತಿಕ ಪ್ರತಿಷ್ಟೆ ಇಂದಿನ ಬಹುತೇಕ ಜಾಗತಿಕ ಮಟ್ಟದ ಯುದ್ಧಗಳಿಗೆ ಕಾರಣವಾಗಿದೆ. ಐರೋಪ್ಯ ಒಕ್ಕೂಟವನ್ನು ತನ್ನ ಮಡಿಲಿಗೆ ಕಟ್ಟಿಕೊಂಡು ತಾನು ಜಗತ್ತಿನ ಶಕ್ತಿ ರಾಷ್ಟç ಎಂದು ಅಮೇರಿಕಾ ಪರೋಕ್ಷವಾಗಿ ಘೋಷಣೆ ಮಾಡಿಕೊಂಡಿದೆ. ಇಲ್ಲಿ ಉಕ್ರೇನ್ ಐರೋಪ್ಯ ರಾಷಟ್ರಗಳ ಒಕ್ಕೂಟಕ್ಕೆ ಸೇರಲು ಇಚ್ಚಿಸಿದ್ದು ಪುಟ್ಟ ರಾಷ್ಟçಕ್ಕೆ ಅಮೇರಿಕಾ ಮತ್ತು ಇಂಗ್ಲೇAಡ್ ಬೆಂಬಲವಾಗಿ ನಿಂತಿರುವುದು ರಷ್ಯಾವನ್ನು ಕೆರಳಿಸಿದೆ. ಜಾಗತಿಕ ನಾಯಕರ ವೈಯಕ್ತಿಕ ಪ್ರತಿಷ್ಟೆಗೆ ಉಕ್ರೇನ್ ರಾಷ್ಟç ಅಮಾಯಕ ಜನತೆ ಬಲಿಯಾಗುತ್ತಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಯುದ್ದದಿಂದ ಬಸವಳಿದ ಉಕ್ರೇನ್ ಚೇತರಿಸಿಕೊಳ್ಳಲು ಕನಿಷ್ಟ ಐವತ್ತು ವರ್ಷಗಳು ಬೇಕು. ಹಾಗಾದರೆ ಯುದ್ಧದಿಂದ ಜಗತ್ತು ಸಾಧಿಸುತ್ತಿರುವುದಾದರು ಏನು?

ಎರಡನೆಯ ಮಹಾಯುದ್ಧದ ಸಮಯದಲ್ಲಿ ಜಗತ್ತಿನಲ್ಲಿ ಶಾಶ್ವತ ಶಾಂತಿ ನೆಲೆಸಬೇಕೆಂಬ ದೃಷ್ಟಿಕೋನದಿಂದ ೧೯೪೨ ಲ್ಲಿ ಅಮೇರಿಕಾ. ರಷ್ಯಾ. ಇಂಗ್ಲೇAಡ್ ಮತ್ತು ಪ್ರಾನ್ಸ್ ಹಾಗೂ ಚೀನಾ ರಾಷ್ಟçಗಳು ಒಪ್ಪಂಧಕ್ಕೆ  ಬಂದ ಫಲವಾಗಿ ರಾಷ್ಟçಗಳ ನಡುವಿನ ಕಲಹ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ೧೯೪೩ ಡಿಸಂಬರ್ ತಿಂಗಳಿನಲ್ಲಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಮತ್ತು ಅಮೇರಿಕಾ ಅಧ್ಯಕ್ಷ ಪ್ರಾಂಕ್ಲಿನ್ ರೂಸ್ ವೆಲ್ಟ್ ಇರಾನಿನ ರಾಜಧಾನಿ ಟೆಹರಾನ್ ನಗರದಲ್ಲಿ ಪರಸ್ಪರ ಭೇಟಿಯಾಗಿ ಸಹಿ ಹಾಕಿದರು. ಇದರ ಫಲವೆಂಬAತೆ ೧೯೪೫ರ ಅಕ್ಟೋಬರ್ ತಿಂಗಳಿನಲ್ಲಿ ಐವತ್ತು ರಾಷ್ಟçಗಳ ಸದಸ್ಯತ್ವದೊಂದಿಗೆ ಅಮೇರಿಕಾದಲ್ಲಿ ವಿಶ್ವಸಂಸ್ಥೆ ಆರಂಭಗೊAಡಿತು. ಸಹಜವಾಗಿ ಭದ್ರತಾಮಂಡಳಿಯ ಸದಸ್ಯ ರಾಷ್ಟçಗಳಾಗಿ ಐದು ಶಕ್ತಿ ರಾಷ್ಟçಗಳಾದ ಅಮೇರಿಕಾ, ರಷ್ಯಾ, ಇಂಗ್ಲೇAಡ್, ಪ್ರಾನ್ಸ್ ಮತ್ತು ಚೀನಾ ಆಯ್ಕೆಯಾದವು. ಈಗ ವಿಶ್ವಸಂಸ್ಥೆಯಲ್ಲಿ ೧೯೩ ಸದಸ್ಯರಾಷ್ಟçಗಳಿದ್ದರೂ ಸಹ ಎಲ್ಲಾ ಅಂತಿಮ ತೀರ್ಮಾನ ಐದು ರಾಷ್ಟçಗಳ ನಿರ್ಧಾರವನ್ನು ಅವಲಂಬಿಸಿದೆ. ವಿಶ್ವಸಂಸ್ಥಾಪನೆಯ ಉದ್ದೇಶಗಳಿಗೂ ಅದರ ಕಾರ್ಯಾಚರಣೆಗೂ ಯಾವುದೇ ಸಂಬAಧವಿಲ್ಲ.  ಇಡೀ ಜಗತ್ತಿನಲ್ಲಿ ಯುದ್ಧ ಶಸ್ತಾçಸ್ರಗಳನ್ನು ಐದು ರಾಷ್ಟçಗಳು ಉತ್ಪಾದಿಸುತ್ತಿದ್ದು. ಇತರೆ ದೇಶಗಳಿಗೆ ಮಾರಾಟ ಮಾಡುವುದು ಇವುಗಳ ಮುಖ್ಯ ಗುರಿಯಾಗಿದೆ. ಹಾಗಾಗಿ ಯಾವ ರಾಷ್ಟçಗಳು ನೆಮ್ಮದಿಯಿಂದ ಇರುವುದು ಅಥವಾ ಜನತೆಯ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ರಾಷ್ಟçಗಳಿಗೆ ಬೇಕಾಗಿಲ್ಲ. ಕಾರಣದಿಂದಾಗಿ ಇವುಗಳ ಕನಸಿನ ಕೂಸುಗಳಾದ ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಸೇರಿದಂತೆ ಬಹುತೇಕ ಜಾಗತಿಕ ಸಂಸ್ಥೆಗಳು ಅಮೇರಿಕಾ ಸೇರಿದಂತೆ ಪ್ರಬಲ ರಾಷ್ಟçಗಳ ಕಣ್ಣಳತೆಯಲ್ಲಿ ಕಾರ್ಯ ನಿರ್ವಹಿಸುವ ಗುಲಾಮಗಿರಿ ಸಂಸ್ಥೆಗಳಾಗಿವೆ.

ಇದೀಗ ಉಕ್ರೇನ್ ಮೇಲೆ ಮುಗಿ ಬಿದ್ದಿರುವ ರಷ್ಯಾ ನಿರ್ಧಾರವನ್ನು ಅಮೇರಿಕಾ, ಇಂಗ್ಲೇಂಡ್ ಪ್ರಬಲವಾಗಿ ಖಂಡಿಸಿದ್ದರೂ ಸಹ, ಏಷ್ಯಾದ ಅತಿದೊಡ್ಡ ರಾಷ್ಟçಗಳು ಎನಿಸಿರುವ ಚೀನಾ ಮತ್ತು ಭಾರತ ಎರಡೂ ರಾಷ್ಟçಗಳು ರಷ್ಯಾದ ಪರವಾಗಿ ನಿಂತಿರುವುದು ನಾಚಿಕೆಗೇಡಿನ ಸಂಗತಿ. ವಿಶ್ವಸಂಸ್ಥೆಯು ಸರ್ವಾಂಗಳನ್ನು ಕಳೆದುಕೊಂಡ ಅಂಗವಿಕಲ ಕೂಸಿನಂತಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯುದ್ಧ ನಡೆಯಲಿ ಅದರ ಪರಿಣಾಮವನ್ನು ಇಡೀ ಜಗತ್ತಿನ ಬಡರಾಷ್ಟಗಳು ಮತ್ತು ಅಬಿವೃದ್ಧಿಶೀಲ ರಾಷ್ಟçಗಳು ಅನುಭವಿಸಬೇಕಿದೆ. ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಏಷ್ಯಾ ರಾಷ್ಟçಗಳಲ್ಲಿ ಅಡುಗೆ ಎಣ್ಣೆಯ ಕೊರತೆಯುಂಟಾಗಿದೆ. ಈಗಾಗಲೇ ಸತತರ ಎರಡು ವರ್ಷಗಳ ಕೋವಿಡ್ ಅಲೆಯಿಂದ ನರಳಿರುವ ವಿಶ್ವಕ್ಕೆ ಇಂತಹ ಯುದ್ಧಗಳು ಬೇಕಾಗಿರಲಿಲ್ಲ.

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಮತ್ತು ಜನಾಂಗ ದ್ವೇಷ:- ಜಾಗತಿಕ ಮಟ್ಟದಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಬಡತನ ಹಾಗೂ ಹಸಿವಿನಿಂದ ನರಳುತ್ತಿರುವ ರಾಷ್ಟçಗಳಿಗೆ ಎಲ್ಲಾ ರೀತಿಯಲ್ಲಿ ನೆರವಾಗುವುದು ವಿಶ್ವಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಮುಂದುವರೆದ ಶ್ರೀಮಂತ ರಾಷ್ಟçಗಳ ನೈತಿಕ ಕರ್ತವ್ಯ. ವರ್ತಮಾನ ಜಗತ್ತಿನಲ್ಲಿ  ಶ್ರೀಲಂಕಾ, ಮ್ಯಾನ್ಮರ್, ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನ ರಾಷ್ಟçಗಳು ಆರ್ಥಿಕ ಬಿಕ್ಕಟ್ಟಿನ ಜೊತೆಗೆ ಸುಸ್ಥಿರ ಸರ್ಕಾರಗಳ ಕೊರತೆ ಹಾಗೂ ಸರ್ವಾಧಿಕಾರದ ಆಡಳಿತದಿಂದ ನರಳುತ್ತಿವೆ. ಇವೆಲ್ಲವುಗಳ ಒಟ್ಟು ಪರಿಣಾಮದಿಂದ ಸಾಮಾನ್ಯ ಜನತೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೆ ಪರದಾಡುತ್ತಿದ್ದರೆ, ಮಕ್ಕಳು ಹಾಗೂ ಮಹಿಳೆಯರು ಅಪೌಷ್ಟಿಕತೆ ಮತ್ತು ಅನಾರೋಗ್ಯದಿಂದ ವಂಚಿvರಾಗಿ ಸಾವನ್ನಪ್ಪುತ್ತಿದ್ದಾರೆ. ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸಬೇಕಾಗಿದ್ದ ಜಾಗತಿಕ ಸಂಸ್ಥೆಗಳು ನಿಷ್ಕಿçಯವಾಗಿವೆ.

ಭಾರತದ ದಕ್ಷಿಣ ಭಾಗದ ಹಿಂದು ಮಹಾಸಾಗರದಲ್ಲಿರುವ ದ್ವೀಪರಾಷ್ಟç ತನ್ನ ಇತಿಹಾಸದಲ್ಲಿ ಕಂಡರಿಯದ ದುರಂತದಲ್ಲಿ ಮುಳುಗಿಹೋಗಿದೆ. ಸತತ ಮೂರು ದಶಕಗಳ ಕಾಲ ನಡೆದ ಅಂತರ್ಯುದ್ಧದಲ್ಲಿ ತಮಿಳು ಎಲ್.ಟಿ. ಟಿ. ಉಗ್ರರ ಜೊತೆ ಸೆಣೆಸಿ ಹೈರಾಣಾಗಿದ್ದ ಶ್ರೀಲಂಕಾ ಸರ್ಕಾರ ೨೦೦೯ ವೇಳೆಗೆ ಉಗ್ರ ಸಂಘಟನೆಗಳನ್ನು ಸದೆಬಡಿದು ಚೇತರಿಸಿಕೊಂಡಿತ್ತು. ಆಶ್ಚರ್ಯಕರ ರೀತಿಯಲ್ಲಿ ಪ್ರವಾಸೋದ್ಯಮವನ್ನು ಮುನ್ನಲೆಗೆ ತರುವುದರ ಜೊತೆಗೆ ಅಲ್ಲಿನ ಪ್ರಮುಖ ಕೃಷಿಯಾದ ಚಹಾ ಮತ್ತು ಮಸಾಲೆ ಪದಾರ್ಥಗಳ ಬೆಳೆಗೆ ಉತ್ತೇಜನ ನೀಡಿ ಬೆಳವಣಿಗೆಯತ್ತ ಸಾಗಿತ್ತು. ಆದರೆ, ಅಲ್ಲಿನ ಸಿಂಹಳಿಯರು ಬೋಡು ಬಾಲಾ ಸೇನಾ ಎಂಬ ಬೌದ್ಧ ಧರ್ಮದ ಕೋಮುವಾದಿ ಸಂಘಟನೆಯನ್ನು ಹುಟ್ಟುಹಾಕುವುದರ ಜೊತೆಗೆ  ಮುಸ್ಲಿಮರು ಹಾಗೂ ಕ್ರೆöÊಸ್ತರ ಮೇಲೆ ಜನಾಂಗ ದ್ವೇಷವನ್ನು ಸಾಧಿಸತೊಡಗಿದರು. ಇಷ್ಟು ಮಾತ್ರವಲ್ಲದೆ ಮಹಿಂದ ರಾಜಪಾಕ್ಷ ಮತ್ತು ಗೋಟುಬಯಾ ರಾಜಪಾಕ್ಷ ಎಂಬ ಸಹೋದರರನ್ನು ಪ್ರಧಾನಿ ಮತ್ತು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವುದರ ಜೊತೆಗೆ ಅವರ ಕುಟುಂಬದ ಎಂಟು ಮಂದಿ ಸದಸ್ಯರನ್ನು ಜನಪ್ರತಿನಿಧಿಗಳಾಗಿ ಆಯ್ಕೆ ಮಾಡಿತು.

ಶ್ರೀಲಂಕಾದಲ್ಲಿ ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ಸರ್ಕಾರವಿದ್ದರೂ ಸಹ ಇಡೀ ಅಧಿಕಾರ ಮಹಿಂದ ಮತ್ತು ಗೊಟುಬಯಾ ರಾಜಪಾಕ್ಷ ರವರ ಕುಟುಂಬದ ಕೈಯಲ್ಲಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನೆಪದಲ್ಲಿ ಚೀನಾದಿಂದ ಸಾವಿರಾರು ಕೋಟಿ ರೂಪಾಯಿಗಳ ಸಾಲ ತಂದು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ಅಲ್ಲಿನ ಸರ್ಕಾರ ಮುಳುಗಿತು. ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಅರ್ಧದಷ್ಟು ಭಾಗ ಕೊಡುಗೆ ನೀಡುತ್ತಿದ್ದ ಕೃಷಿಯನ್ನು ಸಾವಯವ ಪದ್ಧತಿಗೆ ಪರಿವರ್ತಿಸುವ ನಿಟ್ಟಿನಲ್ಲಿ ರಸಾಯನಿಕ ಗೊಬ್ಬರ ಬಳಕೆಗೆ ನಿಷೇದ ಹೇರಿದ ಪರಿಣಾಮ ಚಹಾ, ಭತ್ತ, ಮಸಾಲೆ ಪದಾರ್ಥಗಳ ಉತ್ಪಾದನೆ ನೆಲ ಕಚ್ಚಿತು. ಇದರ ಜೊತೆಗೆ ೨೦೧೮ ರಲ್ಲಿ ಈಸ್ಟರ್ ಹಬ್ಬದ ದಿನಾಚರಣೆಯ ಸಂದರ್ಭದಲ್ಲಿ ಆತ್ಮಾಹುತಿ ದಳದ ಬಾಂಬ್ ಸ್ಪೋಟಗೊಂಡು ಪ್ರವಾಸಿಗರು ಸೇರಿದಂತೆ ಒಟ್ಟು ೨೫೦ ಮಂದಿ ಮರಣ ಹೊಂದಿದರು. ಕೂಡಲೇ ಅಮೇರಿಕಾ, ಇಂಗ್ಲೇಂಡ್, ಆಸ್ಟ್ರೇಲಿಯಾ ಸೇರಿದಂತೆ ಬಹುತೇಕ ರಾಷ್ಟçಗಳು ತಮ್ಮ ನಾಗರೀಕರಿಗೆ ಶ್ರೀಲಂಕಾ ಪ್ರವಾಸ ಹೋಗದಂತೆ ಕಟ್ಟೆಚ್ಚರಿಕೆ ನೀಡಿದವು. ಇದರ ಜೊತೆಗೆ ೨೦೧೯ ರಲ್ಲಿ ಜಗತ್ತಿನಾದ್ಯಂತ ಹರಡಿದ ಕೋವಿಡ್ ಸಾಂಕ್ರಾಮಿಕ ರೋಗದಿಂದ ಶ್ರೀಲಂಕಾ ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತು.

ಪ್ರವಾಸೋದ್ಯಮವನ್ನು ನೆಚ್ಚಿಕೊಂಡಿದ್ದ ಶ್ರೀಲಂಕಾ ಸರ್ಕಾರವು ಚೀನಾ ರಾಷ್ಟçವು ನೀಡಿದ ಸಾಲಕ್ಕೆ ಋಣಿಯಾಗುವ ನಿಟ್ಟಿನಲ್ಲಿ ಚಿನಾದಿಂದ ಆಮದು ಮಾಡಿಕೊಂಡ ವಸ್ತುಗಳಿಗೆ ತೆರಿಗೆ ವಿನಾಯಿತಿ ಘೋಷಿಸಿತು. ಒಂದು ಕಡೆ ಕೃಷಿ ಮತ್ತು ಪ್ರವಾಸೋದ್ಯಮದ ಹೊಡೆತ ಮತ್ತೊಂದು ಕಡೆ ತೆರಿಗೆ ವಿನಾಯಿತಿ ಇಂತಹ ಅವಿವೇಕತನದ ನಿರ್ಧಾರಗಳಿಂದಾಗಿ ಶ್ರೀಲಂಕಾ ಸರ್ಕಾರದ ಬಳಿ ವಿದೇಶಗಳಿಂದ ಆಹಾರ, ಔಷಧ, ತೈಲ  ಮುಂತಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ವಿದೇಸಿ ವಿನಿಮಯದ ಹಣದ ಕೊರತೆಯುಂಟಾಗಿ ದಿವಾಳಿಯೆದ್ದಿತು. ಸಂಗ್ರಹವಾಗುತ್ತಿದ್ದ ತೆರಿಗೆ ಹಣ ಅಂತರಾಷ್ಟಿçà ಸಾಲಗಳಿಗೆ ಬಡ್ಡಿಕಟ್ಟುವುದಕ್ಕೆ ವಿನಿಯೋಗವಾಯಿತು. ಈಗ ಅಲ್ಲಿನ ಜನತೆ ದಿನಸಿ ವಸ್ತುಗಳು, ಅಡುಗೆ ಅನಿಲ, ವಾಹನಗಳ ಇಂಧನ, ವಿದ್ಯುತ್ ಹಾಗೂ ಔಷಧಿ ಕೊರತೆಯಿಂದ ಬಳಲುತ್ತಿದ್ದಾರೆ. ಆನಾಂಗೀಯ ದ್ವೇಷವನ್ನು ಉದ್ದೇಪಿಸುವ ಕೋಮುವಾದಿ ಸಂಘಟನೆಗೆ ಬೆಂಬಲ ನೀಡಿದುದಕ್ಕೆ ಶಿಕ್ಷೆ ಎಂಬಂತೆ ಅಲ್ಲಿನ ಜನತೆ ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ಸರ್ಕಾರ ನೀಡಿದ ಹನ್ನೊಂದು ಸಾವಿರ ಮೆಟ್ರಿಕ್ ಟನ್ ಅಕ್ಕಿ ಮತ್ತು ಔಷಧಗಳು ಸ್ವಲ್ಪ ಮಟ್ಟಿಗೆ ನೆರವಾಗಿದೆ. ತಮಿಳು ಸರ್ಕಾರ ಕೂಡ ಆಹಾರ ಮತ್ತು ಔಷಧ ಸರಬರಾಜು ಮಾಡಲು ಮುಂದಾಗಿದೆ.

ಅಂತರಾಷ್ಟ್ರೀಯ ಸಂಸ್ಥೆಗಳಿಗೆ ನೀಡಬೇಕಾದ ಐದು ಸಾವಿರದ ನೂರು ಕೋಟಿ ಸಾಲವನ್ನು ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ಘೋಷಿಸಿದೆ. ಆಡಳಿತಾರೂಢ ಸರ್ಕಾರಗಳ ತಪ್ಪು ನಿರ್ಧಾರ ಮತ್ತು ಕೋಮುವಾದಿ ಸಂಘಟನೆಗಳನ್ನು ಉತ್ತೇಜಿಸಿದರೆ ಜನತೆ ಎಂತಹ ಶಿಕ್ಷೆಯನ್ನು ಅನುಭವಿಸಬಹುದು ಎಂಬುದಕ್ಕೆ ಶ್ರೀಲಂಕಾ ನಮ್ಮೆದುರು ಸಾಕ್ಷಿಯಾಗಿದೆ. ಭಾರತಕ್ಕೆ ಇಂತಹ ದಿನಗಳು ದೂರವಿಲ್ಲ ಎಂದರೆ ಅದು ಅತಿಶಯದ ಮಾತಲ್ಲ. ನಮ್ಮ ಮತ್ತೊಂದು ನೆರೆಯ ರಾಷ್ಟç ಮ್ಯಾನ್ಮರ್ ನಲ್ಲಿ ಕಳೆದ ವರ್ಷ ಅಲ್ಲಿನ ಸೇನಾಡಳಿತ ಅಧಿಕಾರವನ್ನು ಕೈಗೆತ್ತಿಗೊಂಡ ನಂತರ ಮುವತ್ತು ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಜನತೆ ಒಂದು ಹೊತ್ತಿನ ಊಟದಲ್ಲಿ ಬದುಕುತ್ತಿದ್ದಾರೆ. ಅಲ್ಲಿನ ಜನರು ಸಹ ರೋಹಿಂಗ್ಯಾ ಮುಸ್ಲಿಮರ ಮೇಲೆ ದಾಳಿ ನಡೆಸಿ ಲಕ್ಷಾಂತರ ಮಂದಿ ದೇಶ ತೊರೆಯುವಂತೆ ಮಾಡಿದರು. ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶದಲ್ಲಿ ಆಚರಣೆಯಲ್ಲಿರುವುದು ಬುದ್ಧನ ಅನುಯಾಯಿಗಳು  ಸ್ಥಾಪಿಸಿದ ಬೌದ್ಧ ಧರ್ಮವೆ? ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತವೆ.

ಜತ್ತಿನ ಅನೇಕ ರಾಷ್ಟçಗಳಲ್ಲಿ ಅಲ್ಲಿನ ನಾಗರೀಕರು ಶೋಚನೀಯವಾಗಿ ಬದುಕುತ್ತಿರಬೇಕಾದರೆ, ಶ್ರೀಮಂತ ರಾಷ್ಟçಗಳು ಯುದ್ಧಕ್ಕೆ ಪರೋಕ್ಷ ಬೆಂಬಲ ನೀಡಿ ತಮ್ಮ ಶಸ್ತ್ರಾಸ್ರಗಳ ಮಾರಟದಲ್ಲಿ ನಿರತರಾಗಿವೆ. ಭಾರತ ಸರ್ಕಾರ ಪ್ರತಿವರ್ಷ ಐದು ಲಕ್ಷ ಕೋಟಿ ಹಣವನ್ನು ಮಿಲಿಟರಿ ವೆಚ್ಚವಾಗಿ ವಿನಿಯೋಗಿಸುತ್ತಿದೆ ಎಂದರೆ ಜಗತ್ತು ಯಾವ ಮಾರ್ಗದಲ್ಲಿ ಹೆಜ್ಜೆ ಇಡುತ್ತಿದೆ ಎಂಬುದನ್ನು ನಾವು ಸುಲಭವಾಗಿ ಊಹಿಸಬಹುದು.

ಜಗದೀಶ್ ಕೊಪ್ಪ

( 2022 ರ ಮೇ ತಿಂಗಳ ಹೊಸತು ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ