ಭಾನುವಾರ, ನವೆಂಬರ್ 17, 2013

ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿಯ ಸಾಧ್ಯತೆಗಳು-ಎರಡು


ರಾಜ್ಯ ಸರಕಾರದ ಅನೇಕ ಸಾಧನೆಗಳ ನಡುವೆ ಅರಿಯಬೇಕಾದ ವಾಸ್ತವ ಸಂಗತಿಯೊಂದಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಬಂದೆರಗುವ ಬರಗಾಲವನ್ನು ಎದುರಿಸಲಾರದೆ ಉತ್ತರ ಕರ್ನಾಟಕದ ಬಿಜಾಪುರ, ರಾಯಚೂರು, ಗುಲ್ಬರ್ಗ, ಕೊಪ್ಪಳ ಜಿಲ್ಲೆಗಳಿಂದ ಲಕ್ಷಾಂತರ ಕುಟುಂಬಗಳು ಉದ್ಯೋಗ ಅರಸಿ ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇವುಗಳಲ್ಲಿ ಶೇ.90 ರಷ್ಟು ಕೃಷಿ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳೇ ಆಗಿವೆ. ಪ್ರದೇಶದ  ಜನತೆಗೆ ಈವರೆಗೆ ನಮ್ಮನ್ನಾಳಿದ, ಆಳುತ್ತಿರುವ ಸರಕಾರಗಳು ಉದ್ಯೋಗ ಸೃಷ್ಟಿಸುವಲ್ಲಿ ಏಕೆ ವಿಫಲವಾಗಿವೆ? ರಾಜ್ಯದ ಅಭಿವೃದ್ಧಿಯಲ್ಲಿ ಪ್ರದೇಶಗಳ ಕೊಡುಗೆ ಏನು? ವಿಫಲತೆಗೆ ಕಾರಣವೇನು? ಎಲ್ಲ ಪ್ರಶ್ನೆಗಳಿಗೆ ನಾವಿನ್ನೂ ಉತ್ತರ ಕಂಡುಕೊಂಡಿಲ್ಲ.
ಉತ್ತರ ಕರ್ನಾಟಕದ ಜನತೆ ನೆರೆಯ ರಾಜ್ಯಗಳಲ್ಲಿ ಕಟ್ಟಡದ ಕಾರ್ಮಿಕರಾಗಿ, ರಸ್ತೆ ಕಾಮಗಾರಿಯಲ್ಲಿ ತೊಡಗಿಕೊಳ್ಳುತ್ತ ,3ನೇ ದರ್ಜೆಯ ನಾಗರೀಕರಾಗಿ ಬೀದಿ ಬದಿಯಲ್ಲಿ ಕುಟುಂಬ ಸಮೇತರಾಗಿ ಬದುಕುತ್ತಿರುವ ಶ್ರಮಜೀವಿಗಳಿಗೆ ಶಾಶ್ವತ ಪರಿಹಾರವನ್ನು ಏಕೆ ಕಂಡುಕೊಂಡಿಲ್ಲ? ನತದೃಷ್ಟರ ಬದುಕು ರಾಜ್ಯದ ಜನತೆಗೆ ಅಪಮಾನ ಎಂದು ನಾವೇಕೆ ಪರಿಭಾವಿಸಿಲ್ಲ? ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.
ವರ್ಷದ 6 ತಿಂಗಳು ಹೊರರಾಜ್ಯಗಳಲ್ಲಿ ಬದುಕುವ ಕುಟುಂಬಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಯಾವುದೇ ಸವಲತ್ತುಗಳು ತಲುಪುವುದು ಕನಸಿನ ಮಾತೇ ಸರಿ. ಹಿಂದುಳಿದ ಪ್ರದೇಶಗಳಲ್ಲಿ ಅಸಂಖ್ಯಾತ ಉದ್ಯೋಗ ಸೃಷ್ಟಿಸುವ ಕೃಷಿಗೆ ಒತ್ತು ನೀಡಿ, ನೀರಾವರಿ ಯೋಜನೆ, ಕೈತೋಟ ಅಭಿವೃದ್ಧಿ, ಹೈನುಗಾರಿಕೆ, ಕೋಳಿಸಾಕಾಣಿಕೆ ಮುಂತಾದ ಉಪ ಕಸುಬುಗಳ ಮೂಲಕ ಜೀವನಕ್ಕೆ ಆಧಾರವಾಗಿ ನಿಲ್ಲುವುದರ ಜೊತೆಗೆ ಪರಿಣಾಮಕಾರಿಯಾದ ಸಾರ್ವಜನಿಕ ಪಡಿತರ ವ್ಯವಸ್ಥೆ, ಕೈಗೆಟುಕುವ ದರದಲ್ಲಿ ರೈತರಿಗೆ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಉಚಿತವಾಗಿ ಸಿಗುವ ಆರೋಗ್ಯ ಮತ್ತು ಶಿಕ್ಷಣ ಇವುಗಳನ್ನು ಒದಗಿಸಿ ನಿರುದ್ಯೋಗಿಗಳಿಗೆ ತಾಂತ್ರಿಕ ಶಿಕ್ಷಣ ವ್ಯವಸ್ಥೆ ಮಾಡುವ ಮೂಲಕ ಗಡಿ ಪ್ರದೇಶದ ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಆಯಾ ಜಿಲ್ಲೆ ಮತ್ತು ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳಬಹುದಾದ ಬೆಳೆಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಉಪಕಸುಬುಗಳ ಬಗ್ಗೆ ಒಲವು ಮೂಡುವಂತೆ ಮಾಡಬೇಕಾದ ಅಗತ್ಯತೆ ಇದೆ. ನೆರೆಯ ಆಂದ್ರ ಪ್ರದೇಶ ಮತ್ತು ತಮಿಳುನಾಡಿನ ಕೃಷಿ ವಿ.ವಿ.ಗಳು ನಿಟ್ಟಿನಲ್ಲಿ ರೂಪಿಸಿರುವ ಕಾರ್ಯಕ್ರಮಗಳು ಅಭಿವೃದ್ಧಿಗೆ ನೆರವಾಗಬಲ್ಲವು. ಆಂದ್ರಪ್ರದೇಶದ ಸಂಗಾರೆಡ್ಡಿ, ಮೆಡಕ್, ಅದಿಲಾಬಾದ್ ಜಿಲ್ಲೆಗಳು, ತಮಿಳುನಾಡಿನ ದಿಂಡಿಗಲ್, ನಾಗರಕೋಯಿಲ್, ತಿರುನ್ವಾವೇಲಿ, ರಾಮನಾಥಪುರ ಜಿಲ್ಲೆಗಳಲ್ಲಿ ಕಡಿಮೆ ನೀರಿನಲ್ಲಿ ಹಾಗೂ ಮಳೆಯಾಶ್ರಯದಲ್ಲಿ ಬೆಳೆಯಬಹುದಾದ ಅನೇಕ ಬಗೆಯ ಆಹಾರ ಧಾನ್ಯಗಳ ತಳಿಗಳನ್ನು ಹಾಗೂ ಬಿಸಿಲು ಮತ್ತು ಉಷ್ಣವನ್ನು ಸಹಿಸಿಕೊಳ್ಳಬಲ್ಲ ಮೇಕೆ, ಕುರಿ ಹಾಗೂ ಗೋವುಗಳು ಮುಂತಾದ ತಳಿಗಳನ್ನು ಅಭಿವೃದ್ಧಿ ಪಡಿಸಿ  ಜನತೆಗೆ ಪರಿಚಯಿಸಲಾಗಿದೆ. ಇದರಿಂದಾಗಿ ಅನೇಕ ಬಡಕುಟುಂಬಗಳು ಬದುಕುವ ದಾರಿ ಕಂಡುಕೊಂಡಿವೆ. ಇಂತಹದ್ದೇ ಯೋಜನೆಗಳನ್ನು ರಾಜ್ಯ ಸರಕಾರ ಗಡಿನಾಡಿನ ಹಿಂದುಳಿದ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗಿದೆ.


ಕರ್ನಾಟಕ ಸರಕಾರದ ಮುಂದಿರುವ ಅತ್ಯಂತ ದೊಡ್ಡ ಸವಾಲೆಂದರೆ ಸ್ಥಳೀಯವಾಗಿ ದೊರಕುವ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದೇ ಆಗಿದೆ. ರಾಜ್ಯದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ಕೆಲವು ಸ್ಥಳಗಳಲ್ಲಿ ಬಹುತೇಕ ಕೈಗಾರಿಕೆಗಳು ಕೇಂದ್ರೀಕೃತವಾಗಿದ್ದು, ಇದು ಸಮಾನ ಉದ್ಯೋಗ ಸೃಷ್ಟಿಗೆ ತೊಡಕಾಗಿದೆ. ಇದಕ್ಕೆ ಪೂರಕವಾಗಿ ಬಂಡವಾಳ ಹೂಡಿಕೆದಾರರಿಗೆ ಅವರು ಕೇಳಿದ ಸ್ಥಳಗಳಲ್ಲೇ ಕೈಗಾರಿಕೆ ಸ್ಥಾಪಿಸಲು ಸರಕಾರ ಅನುವು ಮಾಡಿಕೊಡುತ್ತಿರುವುದು ಪ್ರಾದೇಶಿಕ ಅಸಮಾನತೆಗೆ ಮಾತ್ರವಲ್ಲ, ಉದ್ಯೋಗ ಸೃಷ್ಟಿಯ ವಿಫಲತೆಗೂ ಕಾರಣವಾಗತೊಡಗಿದೆ. ಬೆಂಗಳೂರು, ಮೈಸೂರಿನಂತಹ ನಗರಗಳು ಮೆಟ್ರೊಪಾಲಿಟನ್ ಸಂಸ್ಕøತಿಗೆ ಒಳಗಾಗಿದ್ದು ಇಂತಹ ಸ್ಥಳಗಳಲ್ಲಿ ಸೃಷ್ಟಿಯಾಗುವ ಉದ್ಯೋಗದ ಅವಕಾಶಗಳು ನೆರೆ ರಾಜ್ಯಗಳ ಅನ್ಯ ಭಾಷಿಗರ ಪಾಲಾಗುತ್ತಿವೆ. ಇಂತಹ ಸ್ಥಳಗಳಿಗೆ ಬದಲಾಗಿ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಭೂಮಿ, ನೀರು, ವಿದ್ಯುತ್ ಒದಗಿಸುವುದರ ಮೂಲಕ ಕೈಗಾರಿಕೆಗಳ ಸ್ಥಾಪನೆಗೆ ರಾಜ್ಯ ಸರಕಾರ ಮುಂದಾಗ ಬೇಕಾಗಿದೆ. ನಿಟ್ಟಿನಲ್ಲಿ ಗಡಿ ನಾಡ ಪ್ರದೇಶಗಳಲ್ಲಿ ಲಭ್ಯವಾಗುವ ನೈಸರ್ಗಿಕ ಹಾಗೂ ಮಾಸಸನವ ಸಂಪನ್ಮೂಲಗಳ ಬಗ್ಗೆ ಅಧ್ಯಯನ ಅತ್ಯವಶ್ಯಕ.

ಬೆಂಗಳೂರು ನಗರದಲ್ಲಿ 4 ಸಾವಿರ ಸಿದ್ಧ ಉಡುಪುಗಳ ಕಾರ್ಖಾನೆಗಳು ಇದ್ದು, ಇವುಗಳಲ್ಲಿ 16 ಲಕ್ಷ ಮಹಿಳಾ ಕಾರ್ಮಿಕರು ಅಸಂಘಟಿತವಾಗಿ ದುಡಿಯುತ್ತಿದ್ದಾರೆ.(ಸರಕಾರದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಮಹಿಳಾ ಕಾರ್ಮಿಕರ ಸಂಖ್ಯೆ 6 ಲಕ್ಷ). ಬೆಂಗಳೂರು ನಗರದಿಂದ 98 ಕಿ.ಮೀ. ದೂರದ ಮಂಡ್ಯ, 80 ಕಿ.ಮೀ. ದೂರದ ಮದ್ದೂರು, 60 ಕಿ.ಮೀ. ದೂರದ ಚನ್ನಪಟ್ಟಣ, 50 ಕಿ.ಮೀ. ದೂರದ ರಾಮನಗರ ಪಟ್ಟಣ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಂದ 5 ಸಾವಿರ ಮಹಿಳಾ ಕಾರ್ಮಿಕರು ದುಡಿಯುತ್ತಿರುವುದನ್ನು ಮನಗಂಡ ಪ್ರದೇಶಗಳ ಜನ ಪ್ರತಿನಿಧಿಗಳು ಮುಖ್ಯಮಂತ್ರಿಯಾಗಿದ್ದ ಎಚ್,ಡಿ.ಕುಮಾರಸ್ವಾಮಿಯವರ ಗಮನಕ್ಕೆ ತಂದರು. ಇದರ ಪರಿಣಾಮವಾಗಿ ಅಂದು ಮುಖ್ಯಮಂತ್ರಿಯಾಗದ್ದ ಕುಮಾರಸ್ವಾಮಿ ಸಿದ್ದ ಉಡುಪು ಕಾರ್ಖಾನೆಗಳ ಮಾಲೀಕರ ಮನವೊಲಿಸಿದ ಪರಿಣಾಮ ಇಂದು ರಾಮನಗರ, ಚನ್ನಪಟ್ಟಣ, ಮದ್ದೂರಿನಲ್ಲಿ 30 ಕ್ಕೂ ಹೆಚ್ಚು  ಸಿದ್ಧ ಉಡುಪು ಕಾರ್ಖಾನೆಗಳು ತಲೆ ಎತ್ತಿವೆ. ಬೆಂಗಳೂರು ನಗರದಲ್ಲಿ ನೀಡುತ್ತಿದ್ದ ವೇತನಕ್ಕಿಂತ ಕಡಿಮೆ ವೇತನಕ್ಕೆ ದುಡಿಯುವ ಮಹಿಳಾ ಕಾರ್ಮಿಕರು ಲಭ್ಯವಾಗಿದ್ದು, ಸ್ಥಳೀಯ ಹೆಣ್ಣು ಮಕ್ಕಳಿಗೆ ತಾವಿರುವ ಮನೆಯ ಸಮೀಪವೆ ಉದ್ಯೋಗ ಸೃಷ್ಟಿಯಾದಂತಾಗಿದೆ. ಮಹಿಳಾ ಕಾರ್ಮಿಕರಲ್ಲಿ ಬಹುತೇಕ ಮಂದಿ ಹಿಂದುಳಿದ ವರ್ಗಗಳಿಂದ ಬಂದಿರುವುದು ವಿಶೇಷ. ಕೈಗಾರಿಕೋದ್ಯಮಿಗಳಿಗೆ ಕಡಿಮೆ ದರದಲ್ಲಿ ದೊರಕುತ್ತಿರುವ ಕಟ್ಟಡ, ಭೂಮಿ ಹಾಗೂ ಮಾನವ ಸಂಪನ್ಮೂಲ ಸೇರಿದಂತೆ ಇತರೆ ಸೌಲಭ್ಯಗಳು ದೊರಕುತ್ತಿರುವುದು ಸಿದ್ದ ಉಡುಪು ಕಾರ್ಖಾನೆ ಸ್ಥಾಪನೆಗೆ ಹೆಚ್ಚು ಉತ್ಸಾಹ ಬಂದಂತಾಗಿದೆ. ಇಂತಹ ಕ್ರಿಯಾಶೀಲ ಯೋಜನೆಗಳನ್ನು ರಾಜ್ಯದ ಎಲ್ಲೆಡೆ ವಿಸ್ತರಿಸುವ ಅಗತ್ಯವಿದೆ. ಗಡಿ ಭಾಗದ ಬೆಳಗಾವಿ ಜಿಲ್ಲೆಯಲ್ಲಿ ಮೋಟಾರು ವಾಹನಗಳ ಬಿಡಿ ಭಾಗಗಳು, ಸಿದ್ದಪಡಿಸಿದ ಆಹಾರ ವಸ್ತುಗಳು, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹತ್ತಿ, ಜೋಳ, ಮೆಣಸಿನಕಾಯಿ ಆಧಾರಿತ ಗುಡಿ ಕೈಗಾರಿಕೆಗಳಿಗೆ ಒಳ್ಳೆಯ ಅವಕಾಶವಿದೆ. ಅದೇ ರೀತಿ ಬಿಜಾಪುರ ಜಿಲ್ಲೆಯಲ್ಲಿ ತೋಟಗಾರಿಕೆ, ಹಣ್ಣು ಹಂಪಲುಗಳು ಮತ್ತು ಆಹಾರ ಸಂಸ್ಕರಣೆ, ಬೀದರ್ ಜಿಲ್ಲೆಯಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಸ್ಥಾಪನೆಗೆ ಉತ್ತಮ ಅವಕಾಶವಿದೆ.


ಹತ್ತು ವರ್ಷಗಳ ಹಿಂದೆ ಬೆಂಗಳೂರು ಸುತ್ತ ಮುತ್ತ ಎಕರೆಗೆ ತಲಾ 10 ಲಕ್ಷ ರೂನಂತೆ ಸರಕಾರ ಭೂಮಿ ನೀಡುತ್ತಿದ್ದ ಸಂದರ್ಭದಲ್ಲಿ ಆಂದ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬುನಾಯ್ಡು ಹೈದರಾಬಾದ್-ಬೀದರ್ ನಡುವಿನ ಸಂಗಾರೆಡ್ಡಿ ಜಿಲ್ಲೆಯಲ್ಲಿ ಎಕರೆಗೆ 1 ಲಕ್ಷ ರೂನಂತೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿಗೆ ಕೃಷಿಗೆ ಯೋಗ್ಯವಲ್ಲದ ಭೂಮಿ ನೀಡುವುದರ ಮೂಲಕ ಜಗತ್ತಿನ ದೈತ್ಯ ಸಂಸ್ಥೆಗಳನ್ನೆಲ್ಲಾ ತನ್ನೆಡೆಗೆ ಸೆಳೆದು ಕರ್ನಾಟಕಕ್ಕೆ ಸಡ್ಡು ಹೊಡೆದದ್ದನ್ನು ನಾವು ಗಮನಿಸಬೇಕು. ಈಗ ಬೆಂಗಳೂರು ಸುತ್ತ ಮುತ್ತ ಭೂಮಿಯ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಬೆಂಗಳೂರಿನಿಂದ ಕೇವಲ 42 ಕಿ.ಮೀ. ದೂರದ ಹೊಸೂರು ತಾಲೂಕಿನಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ, ಅತ್ತಿಬೆಲೆ ಪಟ್ಟಣಗಳ ಸರಹದ್ದಿನಲ್ಲಿ ತಮಿಳುನಾಡು ಸರಕಾರ 4.5 ಸಾವಿರ ಎಕರೆ ಭೂಮಿಯನ್ನು .ಟಿ. ಪಾರ್ಕ್ ಆಗಿ ಪರಿವರ್ತಿಸಿ ಕರ್ನಾಟಕದ ಮಾಹಿತಿ ತಂತ್ರಜ್ಞಾನದ ಕಂಪನಿಗಳನ್ನು ತನ್ನತ್ತ ಸೆಳೆಯುತ್ತಿದೆ. ಕರ್ನಾಟಕ ಸರಕಾರವೂ ಕೂಡ ಗಡಿ ಭಾಗದ ಮಾಲೂರು, ಮಾಸ್ತಿ, ಚಿಂತಾಮಣಿ, ಕೋಲಾರ ಪ್ರದೇಶಗಳಲ್ಲಿ .ಟಿ. ಪಾರ್ಕ್ಗಳನ್ನು ಸೃಷ್ಟಿಸುವ ಅಗತ್ಯವಿದೆ. ಕರ್ನಾಟಕ ಸರಕಾರ ಕಾಸರಗೋಡು ಸಮೀಪ ಕೇರಳ ಸರಕಾರ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶವನ್ನು ಎಚ್ಚರಿಕೆಯಿಂದ ಗಮನಿಸುವ ಅಗತ್ಯವಿದೆ. ಇಲ್ಲದಿದ್ದರೆ ಉದ್ಯೋಗ ಸೃಷ್ಟಿಗೆ ಅವಕಾಶದ ಬಾಗಿಲುಗಳು ಮುಚ್ಚಿ ಹೋಗುವುದನ್ನು ನಾವು ಕಾಣಬೇಕಾಗುತ್ತದೆ.

    


ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಿಧೇಯಕ ಈಗಾಗಲೇ ವಿಧಾನ ಸಭೆಯಲ್ಲಿ ಅನುಮೋದನೆಗೊಂಡಿರುವುದರಿಂದ ಪ್ರಾಧಿಕಾರಕ್ಕೆ ವಿಶೇಷ ಸ್ವಾಯತ್ತತೆ ದೊರಕಿದೆ. ಅವಕಾಶವನ್ನು ಬಳಸಿಕೊಂಡು ರಾಜ್ಯದ ಗಡಿ ಪ್ರದೇಶಗಳಲ್ಲಿ, ಎಲ್ಲಾ ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿ ಕೊಳ್ಳುವುದರ ಮೂಲಕ ಗಡಿ ಪ್ರದೇಶಗಳಲ್ಲಿ ನಾಡು ನುಡಿ, ಸಾಂಸ್ಕøತಿಕ ಪೋಷಣೆಗೆ ಮುಂದಾಗಬೇಕಾಗಿದೆ. ಪ್ರಾಧಿಕಾರದ ಸದಸ್ಯರಲ್ಲಿ ಸರಕಾರದ ವಿವಿಧ ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಇರುವುದರಿಂದ ಅದರಲ್ಲೂ ವಿಶೇಷವಾಗಿ ಶಿಕ್ಷಣ ಇಲಾಖೆ, ಗ್ರಾಮಪಂಚಾಯತಿ ಇಲಾಖೆ, ಕಂದಾಯ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆಯ ಕಾರ್ಯದರ್ಶಿಗಳಿರುವುದರಿಂದ ಗಡಿ ಪ್ರದೇಶದ ಕುಂದು ಕೊರತೆಗಳನ್ನು ಅವರ ಗಮನಕ್ಕೆ ತಂದು ತಕ್ಷಣದಲ್ಲೇ ನಿವಾರಿಸುವ ಅವಕಾಶ ಪ್ರಾಧಿಕಾರಕ್ಕೆ ದೊರಕಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಸರ್ವತೋಮುಖ ಏಳಿಗೆಗೆ ಶ್ರಮಿಸುವುದರ ಜೊತೆಗೆ ರಾಜ್ಯದ ಬೆಳವಣಿಗೆಗೆ ಪೂರಕವಾಗುವಂತೆ ಸರಕಾರಕ್ಕೆ ಸಲಹೆ ಸೂಚನೆ ನೀಡುವ ಅಪರೂಪದ ಅವಕಾಶ ಪ್ರಾಧಿಕಾರಕ್ಕೆ ದೊರಕಿದೆ. ನಿಟ್ಟಿನಲ್ಲಿ ಗಡಿ ಜಿಲ್ಲೆಗಳ ಕುಂದು ಕೊರತೆಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಸಮೀಕ್ಷೆ ಅವಶ್ಯಕವಾಗಿದೆ.
ಗಡಿ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗ ಜಿಲ್ಲೆಗಳಲ್ಲಿರುವ ಐತಿಹಾಸಿಕ ಸ್ಮಾರಕಗಳಿಂದಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಅದೇ ರೀತಿ ಚಾಮರಾಜನಗರ, ಕೊಡಗು, ಬೆಳಗಾಂ ಜಿಲ್ಲೆಯ ಖಾನಾಪುರದ ಪರಿಸರ ಮತ್ತು ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆಗಳಿವೆ.

ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆ ನಷ್ಟದಿಂದ ಕಂಗೆಟ್ಟಿದ್ದ ಅಲ್ಲಿನ ಬೆಳೆಗಾರರು ತಮ್ಮ ಎಸ್ಟೇಟ್ಗಳಲ್ಲಿ ಹೋಂ ಸ್ಟೇ ಹೆಸರಿನಲ್ಲಿ ಅತಿಥಿಗೃಹಗಳನ್ನು ಸ್ಥಾಪಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಇದಲ್ಲದೆ ಕೋಲಾರ ಜಿಲ್ಲೆಯ ಗಡಿ ಭಾಗದ ಚಿಂತಾಮಣಿ ಸಮೀಪ ಮದನಪಲ್ಲಿ ಬಳಿ ಇರುವ ಹಾರ್ಸ್ಲಿ ಹಿಲ್ಸ್ ಗಿರಿಧಾಮವನ್ನು ಆಂದ್ರ ಪ್ರದೇಶದ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿ, ನೂರಾರು ಕಾಟೇಜ್ಗಳನ್ನು ನಿರ್ಮಿಸಿ ಕರ್ನಾಟಕದ ಪ್ರವಾಸಿಗರನ್ನೂ ಸೆಳೆಯುತ್ತಿವೆ. ಇಲ್ಲಿ ಯಾವುದೇ ಖಾಸಗಿ ವಸತಿ ನಿರ್ಮಾಣಕ್ಕೆ ಆಂದ್ರ ಸರಕಾರ ಅವಕಾಶ ನೀಡದಿರುವುದು ವಿಶೇಷ. ಇದೇ ಮಾದರಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರವು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿಬೆಟ್ಟ, ಕ್ಯಾತದೇವರಗುಡಿ ಅರಣ್ಯಪ್ರದೇಶ, ಬೆಳಗಾಂ ಜಿಲ್ಲೆಯ ಖಾನಾಪುರ, ..ಜಿಲ್ಲೆಯ ಜೋಯಿಡಾ ಅರಣ್ಯಪ್ರದೇಶ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮ ಇವುಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಿದರೆ ಸ್ಥಳೀಯವಾಗಿ ಹಲವಾರು ಉದ್ಯೋಗಗಳ ಸೃಷ್ಟಿಗೆ ಸಹಾಯವಾಗುತ್ತದೆ.
ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಜಿಲ್ಲೆಗಳ ರೈತರ ಬದುಕನ್ನು ಹಸನುಗೊಳಿಸಲು ಹೆಚ್ಚಿನ ರೀತಿಯಲ್ಲಿ ಶ್ರಮಿಸಬೇಕಾಗಿದೆ. ಸ್ಥಳೀಯ ಗುಡಿ ಕೈಗಾರಿಕೆಗಳ ಕೊರತೆಯಿಂದಾಗಿ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಬೆಳೆಯುವ ಹತ್ತಿ ಜಿನ್ನಿಂಗ್ ಮತ್ತು ನೂಲು ತಯಾರಿಕೆಗಾಗಿ ದೂರದ ಕೊಯಮತ್ತೂರಿಗೆ ಹೋಗುತ್ತಿದ್ದರೆ, ಮೆಣಸಿನಕಾಯಿ ಗುಜರಾತ್ ಮತ್ತು ಆಂದ್ರ ರಾಜ್ಯಗಳಿಗೆ ರಫ್ತಾಗುತ್ತಿದೆ. ಅದೇ ರೀತಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯುವ ಉತ್ತಮ ಗುಣ ಮಟ್ಟದ ಅರಿಶಿಣ ಮಾರುಕಟ್ಟೆಯ ಕೊರತೆಯಿಂದಾಗಿ ತಮಿಳುನಾಡಿನ ಈರೋಡ್ಗೆ ಸಾಗಿಸಲ್ಪಡುತ್ತಿದೆ. ಇಂತಹ ಅಂಶಗಳನ್ನು ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ.
ರಾಜ್ಯದ ಗಡಿಗೆ ಹೊಂದಿಕೊಂಡಂತಿರುವ ನೆರೆ ರಾಜ್ಯಗಳ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ದೊರಕುತ್ತಿರುವ ಸರಕಾರದ ಅನುಕೂಲತೆಗಳನ್ನು ತೌಲನಿಕವಾಗಿ ಗಮನಿಸುವ ಅಗತ್ಯವಿದೆ. ಉದಾಹರಣೆಗೆ ಕರ್ನಾಟಕದ ರೈತರಿಗೆ ಹೋಲಿಸಿದರೆ ಆಂದ್ರ ಸರಕಾರ ಅಲ್ಲಿನ ರೈತರಿಗೆ ವಿದ್ಯುತ್, ಬೀಜ, ಗೊಬ್ಬರ ಇತ್ಯಾದಿ ವಿಷಯಗಳಲ್ಲಿ ನೀಡುತ್ತಿರುವ ರಿಯಾಯ್ತಿ, ಗಡಿ ಭಾಗದ ಕನ್ನಡಿಗರಿಗೆ ರಾಜ್ಯ ಸರಕಾರದ ಬಗ್ಗೆ ನಿರಾಶೆ ಮೂಡಿಸುವಂತಿದೆ. ಬೆಳಗಾಂ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವ ಕನ್ನಡ ಸರಕಾರಿ ಪ್ರಾಥಮಿಕ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ. ತಾಲೂಕಿನಲ್ಲಿ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದು, ಇಲ್ಲಿನ ಕನ್ನಡಿಗರು ತಮ್ಮ ಮಕ್ಕಳನ್ನು ಅತ್ಯುತ್ತಮ ವ್ಯವಸ್ಥೆಯಿಂದ ಕೂಡಿರುವ ಮರಾಠಿ ಶಾಲೆಗಳಿಗೆ ಕಳಿÀಸುತ್ತಿದ್ದಾರೆ. ಇದನ್ನು ಸರಕಾರ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರ ಗಂಭಿರವಾಗಿ ಪರಿಗಣಿಸಬೇಕಾಗಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲಿ ಒಂದಾದ ಬೆಳಗಾಂ 10 ತಾಲೂಕುಗಳಲ್ಲಿ
1278 ಗ್ರಾಮಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 3210 ಪ್ರೈಮರಿ ಶಾಲೆಗಳು, 628 ಪ್ರೌಢಶಾಲೆ ಹಾಗೂ ಪಿ.ಯು.ಸಿ. ಕಾಲೇಜುಗಳಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಸಾಕ್ಷರತೆಯ ಮಟ್ಟ ಶೋಚನೀಯ ಸ್ಥಿತಿಯಲ್ಲಿದೆ.


ಗುಲ್ಬರ್ಗ ಜಿಲ್ಲೆಯಲ್ಲಿ 48 ಹೋಬಳಿ ಕೇಂದ್ರಗಳು, 337 ಗ್ರಾಮ ಪಂಚಾಯತಿಗಳಿದ್ದು 1360 ಗ್ರಾಮಗಳಿವೆ. ಇವುಗಳಲ್ಲಿ 642 ಗ್ರಾಮಗಳಿಗೆ (ಲಂಬಾಣಿ ತಾಂಡಗಳೂ ಸೇರಿ) ವಿದ್ಯುತ್ಛಕ್ತಿ ಸೌಲಭ್ಯ ಈವರೆಗೆ ದೊರೆತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ 3 ತಾಲೂಕುಗಳಿದ್ದು 27 ಹೋಬಳಿ ಕೇಂದ್ರಗಳು, 542 ಗ್ರಾಮಗಳನ್ನು ಒಳಗೊಂಡಿದ್ದು ಶೇ.70 ರಷ್ಟು ಜನತೆ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಜಿಲ್ಲೆಯ ಗಡಿ ಭಾಗದ ಹಳ್ಳಿಗಳೂ ಕೂಡ ಶೋಚನೀಯ ಸ್ಥಿತಿಯಲ್ಲಿವೆ.
ಬೀದರ್ ಜಿಲ್ಲೆಯ ಬಾಲ್ಕಿ, ಔರಾದ್, ಬಸವಕಲ್ಯಾಣ, ಹಮನಾಬಾದ್, ಬೀದರ್, ಬಿಜಾಪುರ ಜಿಲ್ಲೆಯ ಬಿಜಾಪುರ , ಇಂಡಿ ತಾಲೂಕು, ಬೆಳಗಾಂ ಜಿಲ್ಲೆಯಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಚಿಕ್ಕೋಡಿ, ಅಥಣಿ, ಗುಲ್ಬರ್ಗ ಜಿಲ್ಲೆಯ ಅಫ್ಜಲ್ಪುರ, ಆಳಂದ, ಚಿಂಚೋಳಿ, ಸೇಡಂ, ಯಾದಗಿರಿ ತಾಲೂಕು, ರಾಯಚೂರು ಜಿಲ್ಲೆಯ ರಾಯಚೂರು, ಮಾನ್ವಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ, ಸಂಡೂರು, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು, ತುಮಕೂರು ಜಿಲ್ಲೆಯ ಶಿರಾ, ಮಧುಗಿರಿ, ಪಾವಗಡ, ಕೋಲಾರ ಜಿಲ್ಲೆಯ ಮುಳಬಾಗಿಲು, ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ, ಬೆಂಗಳೂರು ನಗರ ಜಿಲ್ಲೆಯ ಆನೇಕಲ್, ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ರಾಮನಗರ ಜಿಲ್ಲೆಯ ಕನಕಪುರ, ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ, .. ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, .. ಜಿಲ್ಲೆಯ ಕಾರವಾರ, ಜೋಯಿಡಾ ತಾಲೂಕುಗಳಲ್ಲಿ ಸಮಗ್ರವಾದ ಅಧ್ಯಯನವನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.


ಎರಡು ಹಂತಗಳಲ್ಲಿ ಅಧ್ಯಯನವನ್ನು ಕೈಗೊಳ್ಳಬೇಕಾಗಿದ್ದು, ಗಡಿ ಜಿಲ್ಲೆಗಳನ್ನು ಉತ್ತರ ಮತ್ತು ದಕ್ಷಿಣ ಭಾಗವಾಗಿ ವಿಂಗಡಿಸಿಕೊಂಡು, ಗಡಿ ಪ್ರದೇಶಗಳಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕøತಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಧ್ಯಯನ ಮಾಡಬೇಕಾಗಿದೆ. ಜೊತೆಗೆ ಹೊರ ರಾಜ್ಯಗಳಲ್ಲಿರುವ ಕನ್ನಡ ಪ್ರದೇಶಗಳಾದ ಜತ್ತ, ಮಂಗಲವೇಡ್, ಅಕ್ಕಲಕೋಟೆ, ಸೊಲ್ಲಾಪುರ, ಉಮರಗ, ವಾಸ್ಕೊ, ಅಧೋನಿ, ಹಿಂದೂಪುರ, ಹೊಸೂರು, ಡೆಂಕಣಿಕೋಟೆ, ಕುಪ್ಪಂ, ಗೋಪಿನಾಥಂ, ಮಾನಂತವಾಡಿ, ಸುಲ್ತಾನ್ಬತೇರಿ, ಕಾಸರಗೋಡು ಪ್ರದೇಶಗಳಲ್ಲಿ ಕನ್ನಡಿಗರ ಸ್ಥಿತಿ ಗತಿ ಹಾಗೂ ಕನ್ನಡದ ನಾಡು ನುಡಿ ಭಾಷೆಗೆ ಸಂಬಂಧಿಸಿದಂತೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ.

ಯಾವುದೇ ಅಭಿವೃದ್ಧಿಯ ಕಾರ್ಯ ಚಟುವಟಿಕೆಗಳಿಗೆ ಪ್ರತಿಫಲ ಸಿಗಬೇಕಾದರೆ ಮೊದಲು ಅಲ್ಲಿನ ಜನರ ಬದುಕು ಹಸನಾಗಬೇಕು. ಗಡಿ ಭಾಗದ ಕನ್ನಡಿಗರ ಜೀವನ ಸುಧಾರಿಸದೆ ನಾಡು ನುಡಿಯ ಬೆಳವಣಿಗೆ ಸಾಧ್ಯವಿಲ್ಲ. ಸಂದರ್ಭದಲ್ಲಿ 1985ರಲ್ಲಿ ಬೀದರ್ನಲ್ಲಿ ಜರುಗಿದ 57ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ.ಹಾ..ನಾಯಕ್ ಹೇಳಿದನಾವು ದೊಡ್ಡವರಾಗದೇ ನಮ್ಮ ನಾಡು ನುಡಿಗಳು ದೊಡ್ಡವಾಗುವುದಿಲ್ಲಎಂಬ ಮಾತು ನೆನಪಿಗೆ ಬರುತ್ತದೆ. ದಿಶೆಯಲ್ಲಿ ಕರ್ನಾಟಕ sಸರ್ಕಾರ ದೊಡ್ಡಣ್ಣನ ಸ್ಥಾನದಲ್ಲಿ ನಿಂತು ಕನ್ನಡ ನಾಡನ್ನು ಮುನ್ನಡೆಸುವುದರ ಮೂಲಕ ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗಬೇಕಿದೆ.
                                                                                               
    

ಶುಕ್ರವಾರ, ನವೆಂಬರ್ 15, 2013

ಕರ್ನಾಟಕ ಗಡಿ ಪ್ರದೇಶಗಳ ಅಭಿವೃದ್ಧಿಯ ಸಾಧ್ಯತೆಗಳು-ಒಂದು


ಕರ್ನಾಟಕ ಭಾರತದ ಮುಂದುವರೆದ ರಾಜ್ಯಗಳಲ್ಲಿ ಒಂದಾಗಿದ್ದು ಅತಿ ದೊಡ್ಡ ರಾಜ್ಯಗಳ ಪೈಕಿ ಎಂಟನೇ ಸ್ಥಾನ ಪಡೆದಿದೆ. ಕೃಷಿ ಇಲ್ಲಿನ ಜನರ ಮೂಲ ಕಸುಬಾಗಿದ್ದು, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಶಿಕ್ಷಣ ಆರೋಗ್ಯ, ವ್ಯಾಪಾರ, ಆಹಾರ ಸಂಸ್ಕರಣೆ ಮುಂತಾದ ವಲಯಗಳಲ್ಲಿ ಗಮನಾರ್ಹ ಅಭಿವೃದ್ಧಿ ಸಾಧಿಸಿ ಜಗತ್ತಿನ ಗಮನ ಸೆಳೆದಿದೆ.
2001 ಜನಗಣತಿಯ ಪ್ರಕಾರ ರಾಜ್ಯದ ಜನಸಂಖ್ಯೆ 5 ಕೋಟಿ 28 ಲಕ್ಷ 50 ಸಾವಿರದ 662 ಇದ್ದದ್ದು ಈಗ 6 ಕೋಟಿ ಗಡಿಯನ್ನು ದಾಟಿದೆ. ಸಾಕ್ಷರತೆಯಲ್ಲಿ ಶೇ.66.6ರಷ್ಟು ಪ್ರಗತಿ ಸಾಧಿಸಿರುವ ಕರ್ನಾಟಕ ರಾಜ್ಯ ಭೌಗೋಳಿಕವಾಗಿ 74 ಸಾವಿರದ 120 .ಕೀ.ಮೀ. ವಿಸ್ತರವಾಗಿದೆ. ಹೊಸದಾಗಿ ಅಸ್ತಿತ್ವಕ್ಕೆ ಬಂದ ಯಾದಗೀರ್ ಜಿಲ್ಲೆಯೂ ಸೇರಿದಂತೆ 30 ಜಿಲ್ಲೆಗಳನ್ನು ಹೊಂದಿರುವ ಕರ್ನಾಟಕ ಪಶ್ಚಿಮ ಮತ್ತು ವಾಯುವ್ಯದಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ಈಶಾನ್ಯ ಭಾಗದಲ್ಲಿ ಆಂದ್ರ ಮತ್ತು ತಮಿಳುನಾಡು, ಉತ್ತರದಲ್ಲಿ ಮಹಾರಾಷ್ಟ್ರ, ದಕ್ಷಿಣದ ನೈರುತ್ಯದಲ್ಲಿ ಕೇರಳ ಹಾಗೂ ಆಗ್ನೇಯದಲ್ಲಿ ತಮಿಳುನಾಡು ಭಾಗಗಳನ್ನು ಹೊಂದಿದೆ.

ಕರ್ನಾಟಕದ ಸುಮಾರು 8 ಜಿಲ್ಲೆಗಳು ಸುತ್ತ ಮುತ್ತಲಿನ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು ಅನೇಕ ತಾಲೂಕು ಕೇಂದ್ರಗಳು ಹಾಗೂ ಗ್ರಾಮಗಳ ಜನತೆ ಗಡಿ ರಾಜ್ಯಗಳ ಜೊತೆ ತಮ್ಮ ಭೂಮಿ, ಶಿಕ್ಷಣ, ಕೃಷಿ, ವ್ಯಾಪಾರವ್ಯವಹಾರ ಕುರಿತಂತೆ ಸಂಬಂಧ ಹೊಂದಿದ್ದಾರೆ. ಅಲ್ಲದೇ ನೆರೆ ರಾಜ್ಯಗಳ ಅನೇಕ ಪಟ್ಟಣಗಳಲ್ಲಿ ಬಹುಸಂಖ್ಯಾತ ಕನ್ನಡಿಗರಿರು ವುದೂ ವಿಶೇಷ. ಮಹಾರಾಷ್ಟ್ರದಲ್ಲಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಕೇರಳದಲ್ಲಿ ಕಾಸಗೋಡು, ಆಂದ್ರದ ಹಿಂದೂಪುರ, ಅಧೋನಿ, ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಗೋಪಿನಾಥಂ ಮುಂತಾದ ಊರುಗಳಲ್ಲಿ ಕನ್ನಡಿಗರಿದ್ದು, ಕನ್ನಡ ಭಾಷೆ ಮತ್ತು ಸಂಸ್ಕøತಿ ಇಂದಿಗೂ ಜೀವಂತವಾಗಿವೆ.

ರಾಜ್ಯದ ಸಾರ್ವಭೌಮ ಹಾಗೂ ಮಾತೃಭಾಷೆಯಾದ ಕನ್ನಡ ಶೇ.64.75ರಷ್ಟು ಜನತೆಯ ಭಾಷೆಯಾಗಿದ್ದು,(ಮಂಡ್ಯ ಜಿಲ್ಲೆಯಲ್ಲಿ ಶೇ.97ರಷ್ಟು ಮಂದಿಯ ಮಾತೃಭಾಷೆ ಕನ್ನಡವಾಗಿರುವುದು ವಿಶೇಷ). ನಂತರ ಶೇ.9.7ರಷ್ಟು ಮಂದಿ ಉರ್ದು ಭಾಷೆಯನ್ನು, ಶೇ.8.34ರಷ್ಟು ಮಂದಿ ತೆಲುಗು ಭಾಷೆಯನ್ನು, ಶೇ.5.46ರಷ್ಟು ಮಂದಿ ತಮಿಳು ಭಾಷೆಯನ್ನು ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಶೇ.3.93ರಷ್ಟು ಮಂದಿ ಮರಾಠಿ, ಶೇ.3.38ರಷ್ಟು ಮಂದಿಗೆ ತುಳುಭಾಷೆ ಕರ್ನಾಟಕದಲ್ಲಿ ಮಾತೃಭಾಷೆಯಾಗಿದೆ.

ಕರ್ನಾಟಕ ರಾಜ್ಯ ಮೇಲುನೋಟಕ್ಕೆ ಮುಂದುವರೆದ ರಾಜ್ಯ ಎಂಬಂತೆ ಕಂಡುಬಂದರೂ ಆಂತರಿಕವಾಗಿ ಹಲವಾರು ವೈಪರೀತ್ಯ ಗುಣಗಳಿಂದ ಬಳಲುತ್ತಿದೆ. ಭೌಗೋಳಿಕ ಹವಾಮಾನ, ಜನತೆಯ ನಂಬಿಕೆ ಮತ್ತು ಸಂಸ್ಕøತಿ ಹೀಗೆ ಹಲವು ಕಾರಣಗಳಿದ್ದರೂ ಇಲ್ಲಿನ ಬಹುತೇಕ ಪ್ರದೇಶಗಳು ಪ್ರಾದೇಶಿಕ ಅಸಮಾನತೆಯಿಂದ ಬಳಲುತ್ತಿರುವುದು ನಿತ್ಯ ವಾಸ್ತವ ಸಂಗತಿ. ಸ್ವತಂತ್ರ ಪೂರ್ವದಿಂದಲೂ ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಭಾಗಗಳು ಅನೇಕ ದೊರೆಗಳ, ನವಾಬರ, ಜಹಗೀರುದಾರರ ಆದಿಪತ್ಯಕ್ಕೆ ಒಳಪಟ್ಟು ಅಭಿವೃದ್ಧಿಯಿಂದ ವಂಚಿತವಾಗಿ ಶೋಷಣೆಗೆ ಒಳಪಟ್ಟಿದ್ದು ಈಗ ಇತಿಹಾಸ. ಇಲ್ಲಿನ ಜನತೆ ಅನಕ್ಷರತೆ, ಮುಗ್ಧತೆ, ಅಜ್ಷಾನ, ಬಡತನ ಮತ್ತು ಶೋಷಣೆಗಳಿಗೆ ಒಳಪಟ್ಟಿದ್ದು ಒಂದು ಕಾರಣವಾದರೆ, ಪ್ರದೇಶಗಳಲ್ಲಿ ಪದೇ ಪದೇ ಬಂದೆರಗಿದ ಬರಗಾಲ, ಕ್ಷಾಮ, ಸಾಂಕ್ರಾಮಿಕ ರೋಗ ರುಜಿನಗಳು ಮತ್ತೊಂದು ರೀತಿಯಲ್ಲಿ ಕಾರಣವಾದವು.
ಸ್ವತಂತ್ರ ಪೂರ್ವದಿಂದಲೂ ದಕ್ಷಿಣ ಕರ್ನಾಟಕದ ಜನತೆ ಮೈಸೂರು ದೊರೆಗಳ ಆದಿಪತ್ಯಕ್ಕೆ ಒಳಪಟ್ಟು ಅನೇಕ ಅಭಿವೃದ್ಧಿಯ ಫಲಗಳನ್ನು ಅನುಭವಿಸುತ್ತಾ ಬಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ರಗತಿ ಪರ ಆಲೋಚನೆಗಳ ನಿಧಿಯಂತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಮುಂದಾಲೋಚನೆಯ ಫಲವಾಗಿ ಉತ್ತರ ಕರ್ನಾಟಕದ ಜನತೆಯ ಬದುಕಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಜನತೆ ನೆಮ್ಮದಿಯ ಬದುಕನ್ನು ಕಂಡುಕೊಂಡಿರುವುದು ಸತ್ಯ ಸಂಗತಿ. ಸ್ವತಂತ್ರ ಪೂರ್ವ ಹಾಗೂ ನಂತರದ ದಿನಗಳಲ್ಲೂ ದಕ್ಷಿಣ ಕರ್ನಾಟಕ ಭಾಗಕ್ಕೆ ಸಿಕ್ಕ ರೈಲು ಹಾಗೂ ರಸ್ತೆ ಸಾರಿಗೆ ಸುವ್ಯವಸ್ಥೆ, ನೀರಾವರಿ, ಶಿಕ್ಷಣ, ಆರೋಗ್ಯ ಇವೆಲ್ಲ ಅಂಶಗಳು ಕಾರಣವಾಗಿವೆ. ಆದರೆ ಇವುಗಳಿಂದ ಉತ್ತರ ಕರ್ನಾಟಕದ ಜನತೆ ವಂಚಿತರಾದದ್ದು ಕಟು ವಾಸ್ತವಿಕ ಸತ್ಯಗಳಲ್ಲಿ ಒಂದು.
        
                       

ಅಸಮಾನತೆ 1956ರಲ್ಲಿ ಏಕೀಕರಣಗೊಂಡು ಉದ್ಭವವಾದ ಕರ್ನಾಟಕ ರಾಜ್ಯ (ಮೈಸೂರು) ದಲ್ಲಿ ನಂತರವೂ ಮುಂದುವರೆದಿದ್ದು ದುರಂತವೇ ಸರಿ. ಆಡಳಿತವೆಲ್ಲವೂ ಉತ್ತರ ಕರ್ನಟಕದಿಂದ 500 ಕಿ.ಮೀ. ದೂರದ ರಾಜಧಾನಿ ದಕ್ಷಿಣದ ಬೆಂಗಳೂರಿನಲ್ಲಿ ಕೇಂದ್ರೀಕೃತಗೊಂಡದ್ದು ಅಸಮಾನತೆಯ ಮೂಲ ಕಾರಣವಾದರೆ, ಉತ್ತರ ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ಪ್ರತಿನಿಧಿಸುತ್ತಾ ಬಂದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯೂ ಸಹ ಮತ್ತೊಂದು ಪ್ರಭಲ ಕಾರಣವಾಗಿದೆ.
90 ದಶಕದಲ್ಲಿ ಕೊಪ್ಪಳ ಜಿಲ್ಲೆ ರಚನೆಯಾಗುವ ಮುನ್ನ ತಾಲ್ಲೂಕುಕೇಂದ್ರವಾಗಿ ರಾಯಚೂರು ಜಿಲ್ಲೆಯ ಭಾಗವಾಗಿತ್ತು. ಇಲ್ಲಿನ ರೈತನೊಬ್ಬ ತನ್ನ ಭೂಮಿಯ ದಾಖಲೆಗೆ ಅಥವಾ ನ್ಯಾಯಾಲಯದ ವ್ಯವಹಾರಕ್ಕೆ 175 ಕಿ.ಮೀ. ದೂರದ ಜಿಲ್ಲಾ ಕೇಂದ್ರವಾದ ರಾಯಚೂರಿಗೆ ಹೋಗಬೇಕಾದ ಪರಿಸ್ಥಿತಿ ಇತ್ತೆಂದರೆ, ಇಂತಹ ಸ್ಥಿತಿಯಲ್ಲಿ ಯಾವ ಅಭಿವೃದ್ಧಿ ತಾನೆ ಸಾಧ್ಯವಾಗಬಲ್ಲದು? ಸಧ್ಯದ ಸ್ಥಿತಿಯಲ್ಲಿ ಅನೇಕ ಜಿಲ್ಲೆಗಳು ಉದ್ಭವವಾಗಿ ಆಡಳಿತ ವಿಕೇಂದ್ರಿತಗೊಂಡು ಅಭಿವೃದ್ಧಿ ಕೆಲಸಗಳು ಸಾಗುತ್ತಿದ್ದರೂ ಕೂಡ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ, ನೀರಾವರಿ, ಕೈಗಾರಿಕೆ, ಉದ್ಯೋಗ ಸೃಷ್ಟಿ ಇವುಗಳಲ್ಲಿ ತೃಪ್ತಿಕರವಾದ ವಾತಾವರಣ ಕಂಡುಬಂದಿಲ್ಲ. ಅಲ್ಲದೇ ಕರ್ನಾಟಕ ಸರಕಾರ ನೇಮಿಸಿದ್ದ ಆರ್ಥಿಕ ತಜ್ಞ ಡಾ.ಎಂ.ನಂಜುಂಡಪ್ಪ ನೇತೃತ್ವದÀ ಸಮಿತಿ ಕರ್ನಾಟಕದಲ್ಲಿ ತಾಂಡವವಾಡುತ್ತಿರುವ ಅಸಮತೋಲನ ನಿವಾರಣೆಗೆ ನೀಡಿದ ವರದಿಯನ್ನು ರಾಜ್ಯ ಸರಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ.

ಡಾ.ನಂಜುಂಡಪ್ಪನವರ ವರದಿಯಲ್ಲಿ ರಾಜ್ಯದ 178 ತಾಲೂಕು ಕೇಂದ್ರಗಳ ವಸ್ತು ಸ್ಥಿತಿಯ ಬಗ್ಗೆ ಚರ್ಚಿಸಲಾಗಿದ್ದು 75 ಕ್ಕೂ ಹೆಚ್ಚು ತಾಲೂಕುಗಳನ್ನು ಅತಿ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿದೆ. ಇವುಗಳೆಲ್ಲವೂ ರಾಜ್ಯದ ಗಡಿ ಜಿಲ್ಲೆಗಳಾದ ಬಿಜಾಪುರ, ಬೀದರ್, ಗುಲ್ಬರ್ಗ, ರಾಯಚೂರು ಜಿಲ್ಲೆಗಳಲ್ಲಿರುವುದು ವಿಶೇಷ. ಡಾ.ನಂಜುಂಡಪ್ಪನವರ ವರದಿ ಔಚಿತ್ಯ ಪೂರ್ಣವಾದ ಮಹಿತಿಗಳನ್ನು ಒಳಗೊಂಡಿದ್ದು, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಸರಕಾರ ಕೈಗೊಳ್ಳ ಬೇಕಾದ ಅನೇಕ ಮಾರ್ಗದರ್ಶಿ ಸೂತ್ರಗಳಿವೆ. ಇವುಗಳನ್ನು ಸರಕಾರ ಕಟ್ಟು ನಿಟ್ಟಾಗಿ ಜಾರಿಗೆ ತರುವಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹೊಣೆಗಾರಿಕೆ ಕೂಡ ಹೆಚ್ಚಿನದಾಗಿದೆ. ಏಕೆಂದರೆ ಪ್ರಾಧಿಕಾರದ ವ್ಯಾಪ್ತಿಗೆ ಬರುವ ರಾಜ್ಯದ 18 ಜಿಲ್ಲೆಗಳ 52 ತಾಲೂಕುಗಳಲ್ಲಿ ಡಾ.ನಂಜುಂಡಪ್ಪ ಗುರುತಿಸಿರುವ 42 ತಾಲೂಕುಗಳು ಸೇರಿರುವುದು ಗಮನಾರ್ಹ.
ಡಾ.ನಂಜುಂಡಪ್ಪನವರು ತಮ್ಮ ವರದಿಯಲ್ಲಿ ಪ್ರಾದೇಶಿಕ ಅಸಮತೋಲನೆಯ ನಿವಾರಣೆಗಾಗಿ ಸರಕಾರ ಹಿಂದುಳಿದ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಔದ್ಯೋಗಿಕ ತರಬೇತಿ ಸಂಸ್ಥೆಗಳ ಸ್ಥಾಪನೆ, ಆರೋಗ್ಯ, ವಸತಿ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕೃಷಿ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳ ವಿಸ್ತರಣೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇವುಗಳಿಗೆ ಆದ್ಯತೆ ನೀಡಬೇಕೆಂದು ಪ್ರಸ್ತಾಪಿಸಿದ್ದಾರೆ. ಅಸಮತೋಲನೆ ನಿವಾರಣೆಗಾಗಿ 31 ಸಾವಿರ ಕೋಟಿ ಬಂಡವಾಳ ತೊಡಗಿಸಬೇಕಾಗಿದ್ದು ಇದರಲ್ಲಿ ಒಂದೇ ಬಾರಿಗೆ 15 ಸಾವಿರ ಕೋಟಿ ವಿನಿಯೋಗಿಸಿ, ಉಳಿದ 16 ಸಾವಿರ ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ 2 ಸಾವಿರ ಕೋಟಿಯಂತೆ ಪ್ರತಿ ಬಜೆಟ್ನಲ್ಲಿ ಮೀಸಲಾಗಿರಿಸ ಬೇಕೆಂದು ಸೂಚಿಸಲಾಗಿತ್ತು. ಇದೀಗ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ದೊರೆತಿದ್ದು, ಅಭಿವೃದ್ಧಿಯ ಬಗ್ಗೆ ಕನಸುಗಳು ಚಿಗುರೊಡೆದಿವೆ.
ಪ್ರಸ್ತುತ ರಾಜ್ಯ ಸರಕಾರ ಬಗ್ಗೆ ಗಮನ ಹರಿಸಿರುವುದು ಸಮಾಧಾನಕರ ಸಂಗತಿಯಾದರೂ, ಡಾ.ನಂಜುಂಡಪ್ಪ ಸಮಿತಿ ಸೂಚಿಸಿದಷ್ಟು ರೀತಿಯಲ್ಲಿ ಬಂಡವಾಳ ವಿನಿಯೋಗ ಸಾಧ್ಯವಾಗಿಲ್ಲ. ಈಗಾಗಲೇ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರೂ ಬೆಳೆಯುತ್ತಿರುವ ಜನಸಂಖ್ಯೆ, ಶಿಕ್ಷಣ ಮತ್ತು ಆರೋಗ್ಯ ವಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇವೆಲ್ಲವೂ ಅಸಮತೋಲನೆ ನಿವಾರಣೆಗೆ ಅಡ್ಡಿಯಾಗಿರುವುದು ಗಮನಿಸ ಬೇಕಾದ ಸಂಗತಿ. ಇವುಗಳ ಜೊತೆಗೆ ಅನಿರೀಕ್ಷಿತವಾಗಿ ಬಂದೆರಗುತ್ತಿರುವ ನೈಸರ್ಗಿಕ ವಿಕೋಪ ಹಾಗೂ ಆಳುವ ಸರಕಾರಗಳನ್ನು ಕಾಡುವ ಅಸ್ತಿರತೆ ಪರೋಕ್ಷವಾಗಿ ಅಭಿವೃದ್ಧಿಗೆ ಅಡ್ಡಿಯಾಗಿರುವುದನ್ನು ನಾವು ಮನಗಾಣಬೇಕಾಗಿದೆ.



ಇಪ್ಪತ್ತೊಂದನೇ ಶತಮಾನದ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ವಿಪರ್ಯಾಸವೆಂದರೆ ಪಕ್ಷ ಬೇಧ ಮರೆತು ನಮ್ಮನ್ನಾಳುತ್ತಿರುವ ಎಲ್ಲಾ ಸರಕಾರಗಳು ಅಭಿವೃದ್ಧಿ ಕುರಿತಂತೆ ತಪ್ಪಾಗಿ ವ್ಯಾಖ್ಯಾನಿಸುತ್ತಿರುವುದು. ಪ್ರಗತಿ ಸಾಧಿಸಿದ ಒಂದೆರಡು ವಲಯಗಳಿಂದ ಗಳಿಸಿದ ವರಮಾನವನ್ನು ಇಡೀ ಸಮಗ್ರ ಅಭಿವೃದ್ಧಿ ಬೆಳವಣಿಗೆಯ ದರಕ್ಕೆ ತಳಕು ಹಾಕಿ ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ಸರಕಾರಗಳು ನಿರತವಾಗಿವೆ. ಕಾರಣಕ್ಕಾಗಿಯೇ ಪ್ರಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್ ಪ್ರಶಸ್ತಿ ವಿಜೇತ ಅಮಾತ್ರ್ಯಸೇನ್, “ಬಡತನವೆಂದರೆ ವ್ಯಕ್ತಿಯೊಬ್ಬನ ಭೌತಿಕ ಸ್ಥಿತಿ ಅಲ್ಲ. ಇದು ಬಡತನಕ್ಕೆ ಮಾನದಂಡವಾಗಲಾರದು. ನಾಗರಿಕನೊಬ್ಬನ ವರಮಾನ ಹೆಚ್ಚಿದ್ದರೂ ಕೂಡ ಆತ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಸೇವೆಗಳಿಂದ ವಂಚಿತನಾಗಿದ್ದರೆ, ಬಡತನದ ರೇಖೆಯಿಂದ ಮೇಲೆದ್ದು ಬಂದ ಬಡವಎಂದು ವ್ಯಾಖ್ಯಾನಿಸಿದ್ದಾರೆ

ವ್ಯಕ್ತಿಯೊಬ್ಬ ತನ್ನ ಧಾರಣ ಸಾಮಥ್ರ್ಯವನ್ನು ಕೇವಲ ವರಮಾನದಿಂದ ಅಥವಾ ಸರಕಾರ ಜನಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಬಂಡವಾಳದಿಂದ ದಕ್ಕಿಸಿಕೊಳ್ಳುವುದಿಲ್ಲ. ಸಮಾಜದ ಕೆಳಸ್ತರದ ಮನುಷ್ಯ ಅಥವಾ ಮಹಿಳೆ ಸಮಾಜದಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಂಡು ದಕ್ಕಿಸಿಕೊಳ್ಳುತ್ತಾರೆ ಎಂಬುದರ ಮೇಲೆ ಅವರ ಧಾರಣಾ ಸಾಮಥ್ರ್ಯ ನಿರ್ಧಾರವಾಗುತ್ತದೆ. ಜಾತಿ, ಧರ್ಮ ಅಥವಾ ಪ್ರಾದೇಶಿಕ ಭಿನ್ನತೆ ಕಾರಣದಿಂದಾಗಿ ಅನೇಕ ಸಮುದಾಯಗಳು ಇಂತಹ ಅವಕಾಶದಿಂದ ವಂಚಿತವಾಗಿರಬಹುದು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸುವ ಹಾಗೂ ಕುಂದು ಕೊರತೆಗಳನ್ನು ಅಧ್ಯಯನ ಮಾಡಿ ನಿವಾರಿಸುವ ನೈತಿಕ ಹೊಣೆ ಸರಕಾರಗಳ ಮೇಲಿರುತ್ತದೆ. ಅಮಾಥ್ರ್ಯಸೇನ್ ಕುರಿತಂತೆಜನತೆ ಅನೇಕ ಬಗೆಯ ಸ್ವಾತಂತ್ರ್ಯಗಳಿಂದ ಮತ್ತು ಅವಕಾಶಗಳಿಂದ ವಂಚಿತರಾಗಿ ತಾವು ಬದುಕುವ ಕತ್ತಲೆಯ ಕೂಪದಿಂದ ಪಡೆಯುವ ಬಿಡುಗಡೆಯಡೆಯೇ ಅಭಿವೃದ್ಧಿಎಂದು ನಿರ್ವಚಿಸಿದ್ದಾರೆ. ವಾಸ್ತವವಾಗಿ ರಾಜ್ಯದ ಅಭಿವೃದ್ಧಿ ಬೆಳವಣಿಗೆಯ ದರ ಶೋಚನೀಯವಲ್ಲ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆ ರಾಜ್ಯದ ಸಮಗ್ರ ಅಭಿವೃದ್ಧಿಯ ಸಂಕೇತವೇನಲ್ಲ. ರಾಜ್ಯದ ಒಟ್ಟು ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಷಾನದ ಕೊಡುಗೆ ಎರಡಂಕಿ ದಾಟುವುದಿಲ್ಲ. ಇದನ್ನು ಸರಕಾರ ಹಾಗೂ ಪ್ರತಿನಿಧಿಗಳು ಮನಗಾಣಬೇಕು.
                                     (ಮುಂದುವರಿಯುವುದು)

ಮಂಗಳವಾರ, ನವೆಂಬರ್ 12, 2013

ಕನ್ನಡದ ಕಷ್ಟದ ದಿನಗಳು














ಪ್ರತಿ ನವಂಬರ್ ತಿಂಗಳು ಬಂತೆಂದರೆ, ಎಲ್ಲರಲ್ಲೂ ಕನ್ನಡದ ಪ್ರಜ್ಙೆ ಆವರಿಸಿಕೊಳ್ಳತ್ತದೆ. ಇಡೀ ತಿಂಗಳು ಕನ್ನಡದ ಅಸ್ಮಿತೆ ಕುರಿತ ಚಿಂತನೆಗಳು ಆರಂಭಗೊಳ್ಳುತ್ತವೆ. ಇಂತಹ ಉತ್ಸಾಹ ಮತ್ತು ಸಂಭ್ರಮಗಳ ನಡುವೆ ಕನ್ನಡ ಭಾಷೆ ಮತ್ತು ಪ್ರಜ್ಙೆ ನಮ್ಮ ಅರಿವಿಗೆ ಬಾರದಂತೆ ಸೆವೆಯುತ್ತಿದೆ. ಅದರ ಬೇರುಗಳು ಒಳಗೊಳಗೆ ಒಣಗುತ್ತಿವೆ. ಇಂತಹ ವಾಸ್ತವ ಸಂಗತಿಗಳನ್ನು ನಾವು ಮರೆ ಮಾಚುತ್ತಾ, ಆವೇಶ ಮತ್ತು ಘೋಷಣೆಗಳ ಮೂಲಕ ಕನ್ನಡತನವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದೆವೆ.
ನನ್ನ ಆತ್ಮೀಯ ಗೆಳೆಯರಾದ ಹಾಗೂ ಕಥೆಗಾರರೂ, ಪ್ರಬಂಧಕಾರರಾದ ವೆಂಕಟೇಶ ಮಾಚಕನೂರು ಎಂಬುವರು ಹಿರಿಯ ಕೆ.ಎ.ಎಸ್ ಅಧಿಕಾರಿಯಾಗಿ, ಹಲವು ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ  ನಂತರ, ನಾಲ್ಕು ವರ್ಷಗಳ ಕಾಲ ಉತ್ತರ ಕರ್ನಾಟಕದ ಶಿಕ್ಷಣ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಕಳೆದ ಮೇ ತಿಂಗಳಿನಲ್ಲಿ ನಿವೃತ್ತರಾದರು. ಓರ್ವ ಕನ್ನಡ ಪ್ರೇಮಿಯಾಗಿ, ನಿಷ್ಟಾವಂತ ಅಧಿಕಾರಿಯಾಗಿ ಅವರು ಉತ್ತರ ಕರ್ನಾಟಕದ ಹನ್ನೊಂದು ಜಿಲ್ಲೆಗಳನ್ನು ತಿರುಗುತ್ತಾ, ಸರ್ಕಾರಿ ಶಾಲೆಗಳಲ್ಲಿ ಕನ್ನಡವನ್ನು ಜೀವಂತವಾಗಿಡಲು ಶ್ರಮಿಸಿದ ರೀತಿ ನಿಜಕ್ಕೂ ಅಚ್ಚರಿಯಾಗುತ್ತದೆ. ಪ್ರತಿವಾರ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಸಭೆ ಏರ್ಪಡಿಸಿ, ಧಾರವಾಡದಿಂದ ಲೇಖಕರನ್ನು ಕರೆದೊಯ್ದು ಅವರಿಂದ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಉಪನ್ಯಾಸ ಏರ್ಪಡಿಸಿದರು. ನಂತರ ಪ್ರತಿ ಬೇಸಿಗೆ ರಜೆಯಲ್ಲಿ ಪ್ರತಿ ಶಿಕ್ಷಕ ಕನಿಷ್ಟ ನಾಲ್ಕು ಕನ್ನಡದ ಪುಸ್ತಕಗಳನ್ನು ಓದಿಕೊಂಡು ಬಂದು ಅವುಗಳ ಕುರಿತು ಸಭೆಯಲ್ಲಿ ಮಾತನಾಡುವಂತೆ ನಿಯಮ ಜಾರಿಗೆ ತಂದರು. ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಶಾಲೆಗಳ ಎದುರು ಕನ್ನಡ ಸರ್ಕಾರಿ ಶಾಲೆಗಳು ಸೊರಗುತ್ತಿರುವುದಕ್ಕೆ, ಮತ್ತು ಕನ್ನಡದ ಮಕ್ಕಳು ಮೂಲ ಸೌಲಭ್ಯಗಳ ಕೊರತೆ( ಶಿಕ್ಷಕರು, ಕಟ್ಟಡ ಇತ್ಯಾದಿ) ಯಿಂದ ಮರಾಠಿ ಶಾಲೆಗೆ ದಾಖಲಾಗುತ್ತಿರುವುದನ್ನು ಕಂಡು ನೊಂದುಕೊಂಡರು.
ಕಳೆದ ಮೂರು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಪ್ರಾಥಮಿಕ ಶಿಕ್ಷಣ ಯಾವ ಭಾಷೆಯಲ್ಲಿ ಇರಬೇಕು ಎಂಬುದರ ಬಗ್ಗೆ ಕಾರಣ ಕೇಳಿ ಪ್ರತಿ ರಾಜ್ಯ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದಾಗ, ಸರ್ಕಾರ ನಿದ್ರೆಯಲ್ಲಿರುವಾಗ, ತಾವೇ ಸ್ವತಃ ಓಡಾಡಿ ಮಾನಸಿಕ ತಜ್ಙರು ಮತ್ತು ಮಕ್ಕಳ ತಜ್ಙರ ಸಲಹೆಗಳ ಆಧಾರದ ಮೇಲೆ ಮಾತೃಭಾಷೆಯಲ್ಲಿ ಶಿಕ್ಷಣ ಇರಬೇಕು ಎಂಬ ಪತ್ರವನ್ನು ಸಿದ್ಧ ಪಡಿಸಿ, ಅದನ್ನು ನಾಡಿನ ಎಲ್ಲಾ ಹಿರಿಯ ಚೇತನಗಳಿಗೆ ಕಳುಹಿಸಿ ಅವರ ಅಭಿಪ್ರಾಯ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಕಳೆದ ತಿಂಗಳು ಚೆನ್ನೈ ನಗರದಲ್ಲಿ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆಯಲ್ಲಿ ಡಾ. ಕಲ್ಬುರ್ಗಿ ಮತ್ತು ಡಾ. ಕಂಬಾರ ಅವರ ಮೂಲಕ ಮಂಡಿಸಿ, ಭಾರತೀಯ ಇತರೆ ಭಾಷೆಯ ಲೇಖಕರಿಂದ ಗೊತ್ತುವಳಿ ಪಾಸು ಮಾಡುವಲ್ಲಿ ಯಶಸ್ವಿಯಾದರು.
ಒಬ್ಬ ನಿವೃತ್ತ ಅಧಿಕಾರಿ ಕನ್ನಡದ ಏಳಿಗೆ ಮತ್ತು ಅದರ ಭವಿಷ್ಯದ ಬಗ್ಗೆ ಏಕಾಂಗಿಯಾಗಿ ಹೋರಾಡುತ್ತಿರುವ ವೈಖರಿ ಹಾಗೂ  ಕಳೆದ ನಾಲ್ಕೈದು ಧಶಕದಿಂದ ಕನ್ನಡವನ್ನು ಗುತ್ತಿಗೆ ತೆಗೆದುಕೊಂಡು ಗಾಳಿಯಲ್ಲಿ ಕತ್ತಿ ಝಳಪಿಸುತ್ತಿರುವವರನ್ನು ಒಟ್ಟಿಗೆ ಇಟ್ಟು ತುಲನೆ ಮಾಡಿದಾಗ ಕನ್ನಡದ ಪರ ಹೋರಾಟ ಎಂಬುದು  ಹಲವರ ಪಾಲಿಗೆ ವ್ಯಸನ, ವೃತ್ತಿ ಅಥವಾ ದಂಧೆಯಾಗಿದೆ ಅನಿಸುತ್ತದೆ. ಕುವೆಂಪು ಅವರ ಕನ್ನಡ ನಾಡಗೀತೆಯಲ್ಲಿ ರಾಜ್ಯದ ಎಲ್ಲಾ ಅರಸ ಮನೆತನಗಳ ಹೆಸರಿಲ್ಲ ಆದ್ದರಿಂದ ಅದನ್ನು ತೆಗೆದು ಹಾಕಬೇಕು ಎಂದು ಒತ್ತಾಯಿಸಿ ನಿರಂತರ ಹೇಳಿಕೆ ನೀಡಿದರೆ ಕನ್ನಡ ಉದ್ಧಾರವಾಗುತ್ತದೆ ಪಾಟೀಲಪುಟ್ಟಪ್ಪ ನಂಬಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕತ್ತೆ, ಕೋಣ, ಕುರಿ, ಮೇಕೆ ಇವುಗಳನ್ನು ಕರೆ ತಂದು ತಮಟೆ ಬಾರಿಸಿ, ತನ್ನ ತೋರು ಬೆರಳನ್ನು ಸುದ್ಧಿ ಛಾನಲ್ ಗಳ ಎದುರು  ಮಂತ್ರ ಹಾಕುವವನಂತೆ ಒದರಿ ಬಿಟ್ಟರೆ ಕನ್ನಡಕ್ಕೆ ಅಪಾಯವಿಲ್ಲ ಎಂದು ವಾಟಾಳ್ ನಾಗರಾಜ್ ನಂಬಿದ್ದಾರೆ. ಇನ್ನೂ ಹೆಗಲ ಮೇಲೆ ಕನ್ನಡದ ಒಂದು ಪಟ್ಟಿಯೊಂದನ್ನು ಹಾಕಿಕೊಂಡು ಪ್ರತಿಭಟನೆ ನಡೆಸಿದರೆ, ಕನ್ನಡ ಭಾಷೆ ಸಂಸ್ಕೃತಿ ನಮ್ಮ ಸುಪರ್ಧಿಯಲ್ಲಿ ಸುರಕ್ಷಿತವಾಗಿದೆ ಎಂದು ನಂಬಿಕೊಂಡಿರುವ ಅನೇಕ ಕನ್ನಡ ಪರ ಸಂಘಟನೆಗಳಿವೆ. ವಾಸ್ತವವಾಗಿ ಇದು ಬೇರು ಸತ್ತು ಹೋದ ಗಿಡದ ಕಾಂಡಕ್ಕೆ ಹಾರೈಕೆ ಮಾಡಿದಂತೆ. ಇದರಾಚೆಗೆ ನಾವು ಯೋಚಿಸಬೇಕಾದ ಸುಡುವ ಕೆಂಡದಂತಹ
ಕಟು ಸತ್ಯಗಳಿವೆ.
ಬೆಂಗಳೂರಿನ ನವಕರ್ನಾಟಕ ಪ್ರಕಾಶನದ ಶ್ರೀ ಉಡುಪ, ಮತ್ತು ಶಿವಮೊಗ್ಗದ ಅಹರ್ನಿಶಿ ಪ್ರಕಾಶನದ ಶ್ರೀಮತಿ ಅಕ್ಷತಾ ಹುಂಚದಕಟ್ಟೆ ಇವರಿಬ್ಬರೂ ಕನ್ನಡ ಪುಸ್ತಕಗಳ ಮಾರಾಟ ಕುರಿತಂತೆ ವ್ಯಕ್ತ ಪಡಿಸಿರುವ ಅನುಭವಗಳು ಕನ್ನಡದ ಭವಿಷ್ಯಕ್ಕೆ ಕನ್ನಡಿ ಹಿಡಿದಂತಿವೆ. ಕನ್ನಡ ಪುಸ್ತಕ ಕೊಂಡು ಓದುವವರು  ವಯಸ್ಸು ಸರಾ ಸರಿ 40 ಆಸು ಪಾಸಿನದು. ಎಂಬ ಇವರ ಅನಿಸಿಕೆಯನ್ನು ಇಟ್ಟುಕೊಂಡು ಯೋಚಿಸಿದಾಗ, ಇದು  ಕಳೆದ  ಎರಡು ಮೂರು ದಶಕಗಳಿಂದ ಹಳ್ಳಿಗಳಿಂದ ಹಿಡಿದು ನಗರದವರೆಗೆ ನಾಯಿಕೊಡೆಯಂತೆ ಹುಟ್ಟಿಕೊಂಡ ಇಂಗ್ಲೀಷ್ ಮಾಧ್ಯಮ ಶಾಲೆಗಳ ಪ್ರಭಾವ ಎಂದು ಖಚಿತವಾಗಿ ಹೇಳಬಹುದು.

ಇತ್ತೀಚೆಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಹುಟ್ಟು ಹಾಕುವುದನ್ನು ಉದ್ಯೋಗ ಮಾಡಿಕೊಂಡಿರುವ ಹಲವರು, ಕನ್ನಡಿಗರ ಎದೆಯಲ್ಲಿ ಬಣ್ಣ ಬಣ್ಣದ ಕನಸಿನ ಬೀಜಗಳನ್ನು ಬಿತ್ತಿ, ಹಣಸುಲಿಗೆ ಮಾಡುತ್ತಿದ್ದಾರೆ. ಕನ್ನಡದ ಮಾಧ್ಯಮದಲ್ಲಿ, ಅಥವಾ ಸರ್ಕಾರಿ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಓದಿಸುವುದು ಅಪಮಾನಕರ ಎಂಬ ಭಾವನೆ ಈಗಾಗಲೆ ಎಲ್ಲೆಡೆ ಹರಡಿದೆ. ನಮ್ಮ ಅರಿವಿಗೆ ಭಾರದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡ ಭಾಷೆಗೆ ಇದ್ದ ಮಾನ್ಯತೆಗಳು ಪಲ್ಲಟಗೊಳ್ಳತ್ತಿವೆ.. ಹತ್ತನೇ ತರಗತಿಯಲ್ಲಿ ಕೇವಲ ಐವತ್ತು  ಅಂಕಗಳಿಗೆ ಸೀಮಿತವಾಗಿದ್ದ ಹಿಂದಿ ಭಾಷೆಯ ಅಂಕಗಳನ್ನು ನೂರಕ್ಕೆ ಏರಿಸಲಾಗಿದೆ. ಹಲವು ವಿಶ್ವ ವಿದ್ಯಾಲಯಗಳಲ್ಲಿ ಬಿ.ಕಾಂ. ಪದವಿಗೆ ಇದ್ದ ಕನ್ನಡ ಭಾಷೆಯ ಪತ್ರಿಕೆಯನ್ನು ತೆಗೆದು ಹಾಕಲಾಗಿದೆ. ಇಂತಹ ಸಂಗತಿಗಳು ಹೊರಜಗತ್ತಿನ ಅರಿವಿಗೆ ಬಾರದಂತೆ ನಡೆಯುತ್ತಿರುವ ಕ್ರಿಯೆಗಳು.
ಕನ್ನಡ ಪ್ರಭ ದಿನಪತ್ರಿಕೆ ಕಳೆದ ನವಂಬರ್ ಒಂದರಿಂದ ಕರ್ನಾಟಕ ರಾಜ್ಯದ ಜಿಲ್ಲೆಗಳ ಕನ್ನಡ ಶಾಲೆಗಳ ಸ್ಥಿತಿ ಗತಿ ಕುರಿತು ಪ್ರತಿ ನಿತ್ಯ ಸಮೀಕ್ಷಾ ವರದಿಯನ್ನು ಪ್ರಕಟಿಸುತ್ತಿದೆ. ಹಲವು ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚಿರುವುದು ಧೃಡಪಟ್ಟಿದೆ. ಇನ್ನಿತರೆ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಪ್ರಾಥಮಿಕ ಶಾಲೆಗಳನ್ನು ಪಕ್ಕದೂರಿನ ಶಾಲೆಗಳ ಜೊತೆ ವಿಲೀನ ಗೊಳಿಸಲಾಗಿದೆ. ಉಳ್ಳವರಿಗಷ್ಟೇ ಶಿಕ್ಷಣ ಎಂಬಂತಿರುವ ಈ ದಿನಗಳಲ್ಲಿ ಬಡವರ ಮಕ್ಕಳ ಶಿಕ್ಷಣದ ಭವಿಷ್ಯವೇನು? ಇಂಗ್ಲೀಷ್ ಮಾಧ್ಯಮದ ಮೋಹದಲ್ಲಿ ನಮ್ಮ ಮಕ್ಕಳನ್ನು ಕನ್ನಡದ ಸಂಸ್ಕೃತಿಯಿಂದ ಹೊರದಬ್ಬುತ್ತಿರುವ ನಮ್ಮ ಫೋಷಕರಿಗೆ ಬುದ್ಧಿ ಹೇಳುವರು ಯಾರು?

ಹತ್ತನೇಯ ತರಗತಿಯವರೆಗೆ ವಿದ್ಯಾರ್ಥಿಯು ಯಾವುದೇ ಮಾಧ್ಯಮದಲ್ಲಿ ಓದಿದರೂ ಕೂಡ ಅವನಿಗೆ/ಳಿಗೆ ಕನಿಷ್ಟ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ಓದಲೇಬೇಕೆಂಬ ನಿಯಾಮವನ್ನು ಸರ್ಕಾರ ಕಡ್ಡಾಯಗೊಳಿಸಬೇಕು.  ಆದರೆ, ಈ ನಿಯಮವನ್ನು ಜಾರಿಗೆ ತರುವ ಇಚ್ಛಾಶಕ್ತಿ ಯಾರಿಗೂ ಇದ್ದಂತಿಲ್ಲ. ನ್ಯಾಯಾಲಯದ ಮುಂದಿರುವ ಯಾವುದೇ ಕನ್ನಡದ ನೆಲ-ಜಲ- ಭಾಷೆಯ ಸಮಸ್ಯೆಗಳನ್ನು ಕರ್ನಾಟಕದ ಇತಿಹಾಸದಲ್ಲಿ ನಮ್ಮನ್ನಾಳಿದ ಯಾವ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿದ ಉದಾಹರಣೆಗಳೂ ಸಹ ಇಲ್ಲ. ಬಹುತೇಕ ರಾಜ್ಯದ ಪ್ರಭಾವಿ ಶಿಕ್ಷಣ ಸಂಸ್ಥೆಗಳು ಎಲ್ಲಾ ಪಕ್ಷಗಳ ರಾಜಕಾರಣಿಗಳ ಹಿಡಿತಲ್ಲಿರುವುದರಿಂದ ನಾವು ಇವರಿಂದ ಕನ್ನಡದ ಭವಿಷ್ಯದ ಬಗ್ಗೆ  ಏನನ್ನೂ ತಾನೆ ನಿರೀಕ್ಷಿಸಲು ಸಾಧ್ಯ? ಕನ್ನಡದ ಭಾಷೆ ಮತ್ತು ಸಂಸ್ಕೃತಿಯ ಅಳಿವು-ಉಳಿವಿನ ಪ್ರಶ್ನೆ ನಾವು ಊಹಿಸಿರುವುದಕ್ಕಿಂತ ಗಂಭೀರವಾಗಿವೆ ಎಂಬುದನ್ನು ನಾವು ಮನಗಾಣಬೇಕಾದ ಕಷ್ಟದ ದಿನಗಳಿವು.