ಶುಕ್ರವಾರ, ನವೆಂಬರ್ 8, 2013

ಮೂಡನಂಬಿಕೆಗಳ ಮಸೂದೆ ಮತ್ತು ಅಸಹನೀಯ ಕರ್ನಾಟಕ


ಕಳೆದ ಎರಡು ಮೂರು ದಿನಗಳಿಂದ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಲಲ್ಲಿ  ಮೂಡನಂಬಿಕೆ ಆಚರಣೆಗಳ ಕುರಿತು ಕರ್ನಾಟಕ ಸರ್ಕಾರ ತರಲು ಉದ್ದೇಶಿಸುವ ಮಸೂದೆ ಕುರಿತು, ಚರ್ಚೆಯಾಗುತ್ತಿದೆ.ತಜ್ಙರ ತಂಡ ನೀಡಿರುವ ಶಿಫಾರಸ್ಸಿನ ವರದಿ ಕುರಿತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ಬಗೆಯನ್ನು ಗಮನಿಸಿದರೆ, ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಬಿಕ್ಕಟ್ಟಿನ ದಿನಗಳು ಇವು ಎಂದು ನನಗೆ ಗೋಚರಿಸತೊಡಗಿದೆ.
ಕರಡು ಮಸೂದೆ ಮತ್ತು ಶಿಫಾರಸ್ಸುಗಳ ನಡುವಿನ ವೆತ್ಯಾಸ ತಿಳಿಯದೆ ಈಗಾಗಲೇ ಜಾರಿಗೆ ಬಂದ ಕಠಿಣ ಮಸೂದೆಯೇನೋ ಎಂಬಂತೆ ಕೆಲವರು ಪತ್ರಿಕೆಗಳಲ್ಲಿ ಅವ್ಯಾಚ್ಯ ಶಬ್ಧಗಳ ಕತ್ತಿ ಜಳಪಿಸುತ್ತಿದ್ದಾರೆ.
ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಆಚರಣೆ, ನಂಬಿಕೆ, ಶ್ರದ್ಧೆ ಇವುಗಳನ್ನು ಬಂಡವಾಳ ಮಾಡಿಕೊಂಡು, ಜನರ ಭಾವನೆ ಕೆರಳಿಸುವುದು ಅತಿ ಸುಲಭ ಎಂಬುದು ಈಗಾಗಲೇ ಇತಿಹಾಸದಲ್ಲಿ ದಾಖಲಾಗಿದೆ. ರಾಮನ ಹೆಸರಿನಲ್ಲಿ, ಇಟ್ಟಿಗೆ ಹೆಸರಿನಲ್ಲಿ ಮಣ್ಣು ಹೊತ್ತವರ ಚರಿತ್ರೆ, ಮತ್ತು ಅವರಿಗೆ ಕೊಂಬು, ಕಹಳೆ, ತುತ್ತೂರಿಯಾಗಿ ಕಾರ್ಯ ನಿರ್ವಹಿಸಿದ ಪತ್ರಿಕೆ ಹಾಗೂ ಪತ್ರಕರ್ತರನ್ನು ಗುರುತಿಸಲಾರದಷ್ಟು ಸೂಕ್ಷ್ಮತೆಯನ್ನು ಕರ್ನಾಟಕದ ಜನಸಾಮಾನ್ಯ ಇನ್ನೂ ಕಳೆದುಕೊಂಡಿಲ್ಲ.
ಒಂದು ಕಾನೂನು ಮಸೂದೆಯಾಗಿ ರಾತ್ರೋ ರಾತ್ರಿ ಜನ್ಮ ತಾಳುವುದಿಲ್ಲ. ಅದರಂತೆ ಸರ್ಕಾರ ನೇಮಿಸಿದ ತಜ್ಙರ ತಂಡ ನೀಡಿದ ಶಿಫಾರಸ್ಸು ಸರ್ಕಾರಕ್ಕೆ ಅಂತಿಮವೇನಲ್ಲ. ಅದು ಶಾಸಕಾಂಗ ಸಭೆಯಲ್ಲಿ ಚರ್ಚೆಯಾಗಿ, ಸಾರ್ವಜನಿಕ ಚರ್ಚೆಯಾಗಿ, ಮಾನವ ಹಕ್ಕು ಮತ್ತು ನಾಗರೀಕ ಹಕ್ಕುಗಳಿಗೆ ಹಾಗೂ ಜನರ ಧಾರ್ಮಿಕ ಹಕ್ಕು ಮತ್ತು ಆಚರಣೆಗಳಿಗೆ ಧಕ್ಕೆಯಾಗದಂತೆ ಸಂವಿಧಾನ ತಜ್ಙರ ಸಲಹೆ ಸೂಚನೆಗಳೊಂದಿಗೆ ಮಸೂದೆಯ ರೂಪದಲ್ಲಿ  ಹಲವು ಹಂತಗಳನ್ನು ದಾಟಿ ಅಸ್ತಿತ್ವಕ್ಕೆ ಬರುತ್ತದೆ.
ಅಸಹನೆಯ ಕರ್ನಾಟಕದ ಪ್ರತೀಕವೆಂಬಂತೆ, ಶಿಫಾರಸ್ಸಿನ ಅಂಶಗಳನ್ನು ಕೂಲಂಕುಶವಾಗಿ ಗಮನಿಸಿದೆ, ತಜ್ಙರ ತಂಡವನ್ನು ಗುರಿಯಾಗಿಸಿಕೊಂಡು ಕೆಲವು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದನ್ನು ಗಮನಿಸಿದರೆ, ಇವರಿಗೆ ನಾಗರೀಕ ಸಮಾಜವೊಂದು ನಿರ್ಮಾಣವಾಗುವುದು ಬೇಕಿಲ್ಲ ಎಂಬುದು ಅವರು ಬಳಸಿರುವ ಭಾಷೆಯಲ್ಲಿ ಖಾತರಿಯಾಗುತ್ತದೆ. ಪತ್ರಕರ್ತ ಅಥವಾ ಮಾಧ್ಯಮದ ಕೆಲಸವೆಂದರೆ,ತಮ್ಮ ಮುಂದಿರುವ  ವಸ್ತು ಸ್ಥಿತಿಯನ್ನು ಜನತೆಯ ಮುಂದಿಟ್ಟು ಜನಾಭಿಪ್ರಾಯ ರೂಪಿಸುವುದೇ ಹೊರತು , ತಮ್ಮ ವ್ಯಯಕ್ತಿಕ ಅಭಿಪ್ರಾಯಗಳನ್ನು ಸಮಾಜದ ಮೇಲೆ ಹೇರಿ, ಸಮುದಾಯದ ದಿಕ್ಕು ತಪ್ಪಿಸುವುದಲ್ಲ.


ಒಬ್ಬ ಲೇಖಕ ಅಥವಾ ಒಬ್ಬ ಪತ್ರಕರ್ತನಿಗೆ ಪ್ರವಾದಿಯಂತೆ ಮಾತನಾಡುವುದು ಅಥವಾ ಉಪದೇಶ ನೀಡುವುದು ಅತಿ ಸುಲಭ. ಆದರೆ, ನಾವು ಆಡುವ ಮಾತಿಗೂ, ಬರೆಯುವ ಪ್ರತಿ ಅಕ್ಷರಕ್ಕೂ ಬದುಕಿನ  ನಡುವಳಿಕೆಗಳ ಬದ್ದತೆ ಅಥವಾ ನೈತಿಕತೆ ಇಲ್ಲದಿದ್ದರೆ, ಅದು ಆತ್ಮವಂಚನೆಯ ಕ್ರಿಯೆಯಾಗುತ್ತದೆ. ಸಮಾಜವನ್ನು ಮಾತಿನಿಂದ ಮತ್ತು ಬರೆವಣಿಗೆಯಿಂದ ನಂಬಿಸುವಷ್ಟು ಸುಲಭವಾಗಿ ನಮ್ಮೊಳಗಿನ ಆತ್ಮಸಾಕ್ಷಿಯನ್ನು ನಂಬಿಸಲು ಸಾದ್ಯವಿಲ್ಲ.
ಇಂದು ನಮ್ಮ ಕಣ್ಣೆದುರು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಭವಿಷ್ಯ, ವಾಸ್ತು ಕುರಿತ ಜಾಹಿರಾತು, ಹನುಮಾನ್ ತಾಯುತ, ಬಣ್ಣದ ಹರಳಿನ ಉಂಗುರ ಇವುಗಳನ್ನು ಅನ್ನ ತಿನ್ನುವ ಯಾವ ಮನುಷ್ಯನೂ ಸಮರ್ಥಿಸಲಾರ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ನಂಬಿಕೆ ಮತ್ತು ಆಚರಣೆಯ ನೆಪದಲ್ಲಿ ಮಡೆಸ್ನಾನ, ಅಡ್ಡಪಲ್ಲಕಿಯಂತಹ ಅಮಾನವೀಯ ನಡುವಳಿಕೆಗಳನ್ನು ಹೇಗೆ ತಾನೆ ಸಮರ್ಥಿಸಲು ಸಾಧ್ಯ?

ಕೇವಲ ಬೆರಳಿಕೆಯಷ್ಟು ಜನರ ತಂಡ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ದೂರುತ್ತಿರುವ ಮಂದಿ, ಈ ಶಿಫಾರಸ್ಸಿನ ಟಿಪ್ಪಣಿ ಸಿದ್ಧವಾಗುವ ಮುನ್ನ  ತಜ್ಙರ ಸಮಿತಿ ಎಷ್ಟು ಜನರ ವಿಶೇಷವಾಗಿ, ವಿವಿಧ ರಂಗದ ತಜ್ಙರ ಸಲಹೆ ಕೇಳಿದೆ ಎಂಬುದನ್ನು ಮನಗಂಡಿದ್ದಾರಾ? ಅಥವಾ ಸಮಿತಿ ಯಾರ ಬಳಿ ಸಲಹೆ ಕೇಳಿದ್ದಾರೆ ಎಂಬುದನ್ನು ಧೃಡಪಡಿಸಿಕೊಂಡಿದ್ದಾರಾ? ಅದೂ ಇಲ್ಲ.
ಜನರನ್ನು ಉದ್ರೇಕಿಸುವ ಹಾಗೆ ನಾವು ಮನೆಯಲ್ಲಿ ಪೂಜೆ ಮಾಡುವಂತಿಲ್ಲ, ಮನೆ ಮುಂದೆ ರಂಗೊಲಿ ಬಿಡುವಂತಿಲ್ಲ ಎಂಬಂತಹ  ಟಿಪ್ಪಣಿಯಲ್ಲಿ ಇಲ್ಲದ ಅಂಶಗಳನ್ನು ಎತ್ತಿಕೊಂಡು ಜನರ ದಿಕ್ಕು ತಪ್ಪಿಸುವುದನ್ನು ಮಾದ್ಯಮದ ವೃತ್ತಿ  ಎಂದು ಯಾವೊಬ್ಬ ನಾಗರೀಕ ಕರೆಯುವುದಿಲ್ಲ.

ಮಾಧ್ಯಮಗಳ ಭಾಷೆ ಬದಲಾಗದಿದ್ದರೆ, ಪತ್ರಕರ್ತರಿಗೂ ಮತ್ತು ರಾಜಕಾರಣಿಗಳ ಭಾಷೆಗಳ ನಡುವೆ  ಇರುವ ಗಡಿರೇಖೆ ಅಳಿಸಿಹೋಗುತ್ತದೆ. ಈ ಎಚ್ಚರದ ಪ್ರಜ್ಙೆ ಪತ್ರಕರ್ತನಿಗೆ ಕಾಡದಿದ್ದರೆ, ಅವನನ್ನು ಸಮಾಜ ಪತ್ರಕರ್ತ ಎಂದು ಗುರುತಿಸುವುದಿಲ್ಲ, ಬದಲಾಗಿ. ಒಂದು ರಾಜಕೀಯ ಪಕ್ಷದ ಅಥವಾ ಒಂದು ಧಾರ್ಮಿಕ ಸಮುದಾಯದ ಭಟ್ಟಂಗಿ ಎಂದು ಗುರುತಿಸುತ್ತದೆ. ಓರ್ವ ಪತ್ರಕರ್ತನಾಗಿ, ಲೇಖಕನಾಗಿ ನನ್ನ ಪಾಲಿಗೆ ಇಂತಹ ಅಪವಾದ ಹೊರುವ ಬದಲು, ಹುಟ್ಟಿದೂರಿಗೆ ಹೋಗಿ ನೇಗಿಲು, ಗುದ್ದಲಿ ಹಿಡಿಯುವುದು ವಾಸಿ ಎನಿಸಿದೆ.

ಈ ಕೆಳಗೆ ತಜ್ಙರ ತಂಡದ ಶೀಫಾರಸ್ಸಿನ ಅಂಶಗಳನ್ನು ನೀಡಲಾಗಿದೆ. ಈ ಮಾಹಿತಿ ನೀಡಿದ ಕಿರಿಯ ಮಿತ್ರ ಹರ್ಷಕುಮಾರ್ ಖುಗ್ವೆಗೆ ನಾನು ಅಭಾರಿಯಾಗಿದ್ದೇನೆ.
ಪತ್ರಕರ್ತ ಮಿತ್ರ ಹರ್ಷಕುಮಾರ್ ಕುಗ್ವೆ  ನೀಡಿರುವ ಕರಡು ವಿಧೇಯಕದ ಶಿಫಾರಸ್ಸುಗಳ ಟಿಪ್ಪಣಿಯನ್ನು ಇಲ್ಲಿ ನೀಡಲಾಗಿದೆ.

ಈ ವಿಧೆಯಕದಲ್ಲಿ ಕಾಯ್ದೆಯ ಕರಡು ಮತ್ತು ಪರಿಕಲ್ಪನಾ ಟಿಪ್ಪಣಿಗಳಿವೆ. ಕಾಯ್ದೆಯ ಕರಡನ್ನು ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ಕಾನೂನು ತಜ್ಞರು ರಚಿಸಿದ್ದರೆ ಪರಿಕಲ್ಪನಾ ಟಿಪ್ಪಣಿಯನ್ನು ಈ ಸಂಸ್ಥೆಯ ಉಪಕ್ರಮದಲ್ಲಿ ರಚಿಸಲಾದ, ರಾಜ್ಯದ ಹಿರಿಯ ಚಿಂತಕರು, ಸಾಹಿತಿಗಳು, ನ್ಯಾಯವಾದಿಗಳು, ಜಾನಪದ ತಜ್ಞರು, ವಿಚಾರವಾದಿಗಳನ್ನೊಳಗೊಂಡ ಸಮಿತಿಯಿಂದ ರೂಪಿಸಲಾಗಿದೆ. ಅಲ್ಲದೆ ನಾಡಿನ ವಿವಿಧೆಡೆಗಳಿಂದ ಬಂದ ಸಲಹೆ, ಅಭಿಪ್ರಾಯಗಳನ್ನು ಒಳಗೊಂಡಿದೆ. 
·                                                                                                                                                                                                                                                                                                                     - ವಿಧೇಯಕದ ಪ್ರಕಾರ ಮೂಢನಂಬಿಕೆ ಆಚರಣೆ ಎಂದರೆ, ಇನ್ನೊಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ತಿಳಿಸಿ ಅಥವಾ ಪ್ರತಿಕೂಲ ಪರಿಣಾಮ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ ಅವರಿಗೆ- ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟು ಮಾಡುವ ಅಥವಾ (ಬಿ) ಹಣಕಾಸಿನ ಅಥವಾ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ (ಸಿ) ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ;
-
ಮೂಢನಂಬಿಕೆ ಆಚರಣೆಯನ್ನು ಉತ್ತೇಜಿಸುವ, ಪ್ರಸಾರ ಮಾಡುವ ಅಥವಾ ನಡೆಸುವ ಯಾರೇ ವ್ಯಕ್ತಿಯು ಒಂದು ವರ್ಷಕ್ಕೆ ಕಡಿಮೆಯಲ್ಲದ ಅವಧಿಯ ಆದರೆ ೫ ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾವಾಸದಿಂದ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲದ ಆದರೆ ಐವತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ಅಥವಾ
ಇವೆರಡರಿಂದಲೂ ದಂಡಿತನಾಗತಕ್ಕದ್ದು.
-
ಬಲಿಯಾದ ವ್ಯಕ್ತಿಯ ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆಯಾಗತಕ್ಕದ್ದಲ್ಲ.
-
ಬಲಿಯಾದ ವ್ಯಕ್ತಿ ಎಂದರೆ ಮೂಢನಂಬಿಕೆ ಆಚರಣೆಯನ್ನು ಮಾಡಿದುದರಿಂದಾಗಿ ಯಾವ ವ್ಯಕ್ತಿಗೆ ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟಾಗಿದೆಯೋ, ಯಾರು ಆರ್ಥಿಕವಾಗಿ ಅಥವಾ ಲೈಂಗಿಕವಾಗಿ ಶೋಷಣೆಗೆ ಒಳಗಾಗಿರುವನೋ ಅಥವಾ ಯಾರ ಘನತೆಗೆ ಧಕ್ಕೆಯುಂಟಾಗಿದೆಯೋ ಅಂಥ ವ್ಯಕ್ತಿ;

ವಿಧೇಯಕವು ಕೆಳಕಂಡ ಕೃತ್ಯಗಳನ್ನು ಅಪರಾಧಗಳೆಂದು ಹೆಸರಿಸಿದೆ.
ಈ ಮುಂದಿನ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿರತಕ್ಕದ್ದು:
-
ಲಾಭಕ್ಕಾಗಿ ಅಥವಾ ದೈವವನ್ನು ಸಂಪ್ರೀತಗೊಳಿಸುವುದಕ್ಕಾಗಿ ನರಬಲಿ ಕೊಡುವುದು;
-
ನರಬಲಿಯಲ್ಲಿನ ನಂಬಿಕೆಯನ್ನು ಹರಡುವುದು ಅಥವಾ ನರಬಲಿ ಕೊಡುವಂತೆ
ಇತರರನ್ನು ಪ್ರೇರೇಪಿಸುವುದು.
-
ಕಾಯಿಲೆಯನ್ನು ಗುಣಪಡಿಸಲು ಪ್ರಯತ್ನಿಸುವುದು ಅಥವಾ ಹಿಂಸಾತ್ಮಕ ರೀತಿಯಿಂದ
ಭೂತೋಚ್ಚಾಟನೆಯನ್ನು ನಡೆಸುವುದು.
-
ಭಾರತ ದಂಡ ಸಂಹಿತೆ, ೧೮೬೦ರ ೨೯೭ನೇ ಪ್ರಕರಣದ ಉಲ್ಲಂಘನೆಯಲ್ಲಿ ಅಘೋರಿ,
ಸಿದ್ದುಭುಕ್ತಿ ಅಥವಾ ಸದೃಶ ಆಚರಣೆಯನ್ನು ನೆರವೇರಿಸುವುದು;
-
ಅಂಥ ಆಚರಣೆಗಳಲ್ಲಿ ತೊಡಗುವಂತೆ ಇತರರನ್ನು ಒತ್ತಾಯಿಸುವುದು; ಅಥವಾ
-
ಅಂಥ ಆಚರಣೆಗಳಿಂದ ಪಡೆಯಲಾಗಿದೆಯೆನ್ನಲಾದ ಶಕ್ತಿಯ ಭಯವನ್ನು ಉಪಯೋಗಿಸಿಕೊಂಡು
ಆರ್ಥಿಕವಾಗಿ ಮತ್ತು ಲೈಂಗಿಕವಾಗಿ ವ್ಯಕ್ತಿಗಳ ಶೋಷಣೆ ಮಾಡುವುದು;
-
ದೈವಿಕ ಅಥವಾ ಅಧ್ಯಾತ್ಮಿಕ ಶಕ್ತಿ ಸ್ವಾಧೀನವಾಗಿದೆಯೆಂದು ಘೋಷಿಸುವುದು ಮತ್ತು ಅಂಥ
ಘೋ?ಣೆಯನ್ನು ಬಳಸಿಕೊಂಡು,
-
ಹಣವನ್ನು ಪಡೆದು ಪರಿಹಾರಗಳ ಅಥವಾ ಲಾಭಗಳ ಭರವಸೆಯನ್ನು ಕೊಡುವುದು;
-
ಅಥವಾ ವೈಯಕ್ತಿಕ ಲಾಭಕ್ಕಾಗಿ ದೈವದ ಕೋಪದ ಅಥವಾ ಆತ್ಮದ ಖಂಡನೆಯ ಭಯವನ್ನು
ಹುಟ್ಟಿಸುವುದು;
-
ಹಣಕ್ಕಾಗಿ ಅಥವಾ ಇಲ್ಲವೇ ಉಚಿತವಾಗಿ ವಾಮಾಚಾರವನ್ನು (ಬ್ಲ್ಯಾಕ್ ಮ್ಯಾಜಿಕ್) ಅಥವಾ
ಮಾಟವನ್ನು ಇತರ ವ್ಯಕ್ತಿಗಳಿಗೆ ತೊಂದರೆಯುಂಟು ಮಾಡುವ ಉದ್ದೇಶದಿಂದ ಮತ್ತು ಅವರಿಗೆ
ತೀವ್ರವಾಗಿ ಭಯವುಂಟು ಮಾಡುವಂತೆ ಬಳಸುವುದು ಅಥವಾ ಮಾಡುವುದು;
-
ದೇಹದೊಳಗೆ ಚುಚ್ಚಿಕೊಳ್ಳುವ ಕೊಕ್ಕೆಯಿಂದ ನೇತಾಡುವಂತಹ (ಸಿಡಿ) ಅಥವಾ ದೇಹದೊಳಗೆ
ತೂರಿಸಿಕೊಂಡಿರುವ ಕೊಕ್ಕೆಯಿಂದ ರಥವನ್ನು ಎಳೆಯುವಂತಹ ಸ್ವ ದಂಡನೆಯಿಂದ
ಗಾಯಗೊಳ್ಳುವ ಮತಾಚರಣೆಗಳನ್ನು ಆಚರಿಸುವಂತೆ ಒತ್ತಾಯಿಸುವುದು, ಹರಡುವುದು
ಅಥವಾ ಅದಕ್ಕೆ ಅನುಕೂಲ ಕಲ್ಪಿಸುವುದು;
-
ಮಕ್ಕಳ ಕಾಯಿಲೆಯನ್ನು ವಾಸಿ ಮಾಡುವ ಹೆಸರಿನಲ್ಲಿ ಅವರನ್ನು ಮುಳ್ಳುಗಳ ಮೇಲೆ ಅಥವಾ
ಎತ್ತರದಿಂದ ಎಸೆಯುವ ಮೂಲಕ ಅವರನ್ನು ಹಾನಿಗೊಳಪಡಿಸುವಂತಹ ಆಚರಣೆಗಳನ್ನು
ಒತ್ತಾಯಿಸುವುದು, ಹರಡುವುದು ಮತ್ತು ಅಂತಹ ವಾತಾವರಣವನ್ನು ಕಲ್ಪಿಸುವುದು;
(-
ಮಹಿಳೆಯರ ವಿರುದ್ಧ ಮೂಢನಂಬಿಕೆ ಆಚರಣೆಗಳು;-
-
ಋತುಮತಿಯಾದ ಅಥವಾ ಗರ್ಭಿಣಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ
ಒಂಟಿಯಾಗಿರಿಸುವುದು, ಗ್ರಾಮದೊಳಗೆ ಬಾರದಂತೆ ನಿ?ಧಿಸುವುದು ಅಥವಾ ಬೇರೆ ಇರಿಸಲು
ಅನುಕೂಲ ಕಲ್ಪಿಸುವುದು.
-
ಸಮಾಜದ ದುರ್ಬಲ ವರ್ಗಗಳ ಮಹಿಳೆಯರ ಮೇಲೆ ಬಣ್ಣದ ನೀರನ್ನು ಎರಚುವ, ಓಕುಳಿ,
ಮೂಲಕ ಅವರನ್ನು ಅವಮಾನಗೊಳಿಸುವುದು ಅಥವಾ ಅವರ ಘನತೆಗೆ ಧಕ್ಕೆಯುಂಟು
ಮಾಡುವುದು.
-
ಪೂಜೆ ಅಥವಾ ಇತರ ಯಾವುದೇ ಹೆಸರಿನಲ್ಲಿ ಅವರನ್ನು ಬೆತ್ತಲೆಯಾಗಿ ಪ್ರದರ್ಶಿಸುವುದು,
ಉದಾಹರಣೆಗೆ ಬೆತ್ತಲೆ ಸೇವೆ ಅಂಥ ಅಮಾನವೀಯ ಮತ್ತು ಅವಮಾನಗೊಳಿಸುವ
ಆಚರಣೆಗಳಿಗೆ ಮಹಿಳೆಯರನ್ನು ಒಳಪಡಿಸುವುದು.
-
ಗರ್ಭಿಣಿಯರನ್ನಾಗಿಸುವುದೂ ಸೇರಿದಂತೆ ಸಾಮಾಜಿಕ ಅಥವಾ ವೈಯಕ್ತಿಯ ಲಾಭವನ್ನು
ಉಂಟು ಮಾಡುವ ಭರವಸೆಯೊಂದಿಗೆ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ
ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆಗೆ ಒಳಪಡಿಸುವುದು;
-
ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುವಂಥ, ಕತ್ತನ್ನು ಕಚ್ಚುವ ಮೂಲಕ
ಪ್ರಾಣಿಗಳನ್ನು ಕೊಲ್ಲುವ ಆಚರಣೆಗಳನ್ನು (ಗಾವು) ನೆರವೇರಿಸುವಂತೆ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಮಾನವ ಘನತೆಯನ್ನು ಉಲ್ಲಂಘಿಸುವಂತಹ ಮಡೆ ಸ್ನಾನ ಅಥವ ಸದೃಶ ಆಚರಣೆಗಳಿಗೆ
ಅನುಕೂಲ ಕಲ್ಪಸುವುದು;
-
ಮೂಢನಂಬಿಕೆಯ ಹೆಸರಿನಲ್ಲಿ ಜಾತಿ ಅಥವಾ ಲಿಂಗದ ಆಧಾರದ ಮೇಲೆ ತಾರತಮ್ಯ
ಕಲ್ಪಿಸುವುದು;
-
ಪಾದರಕ್ಷೆಗಳನ್ನು ಅವನ/ ಅವಳ ತಲೆಯ ಮೇಲೆ ಒಯ್ಯುವ ಅವಮಾನಕರ ಆಚರಣೆಗಳನ್ನು
ನೆರವೇರಿಸುವಂತೆ ಸಮಾಜದ ದುರ್ಬಲ ವರ್ಗಳಿಗೆ ಸೇರಿದ ಯಾರೇ ವ್ಯಕ್ತಿಯನ್ನು
ಒತ್ತಾಯಿಸುವುದು;
-
ಆಹಾರ ವಿತರಣೆ ಮಾಡುವಾಗ ಜಾತಿಯ ಆಧಾರದ ಮೇಲೆ ಪಂಕ್ತಿ ಬೇಧ ಮಾಡುವಂತಹ
ಆಚರಣೆಗಳನ್ನು ಮಾಡುವುದು;
೨. ಈ ಮುಂದಿನ ಅಪರಾಧಗಳು ಸಂಜ್ಷೇಯವಲ್ಲದ ಅಪರಾಧಗಳಾಗಿರತಕ್ಕದ್ದು,-
-
ಯಾರೇ ವ್ಯಕ್ತಿಯ ಜನನದ ಸಮಯ, ಸ್ಥಳದ ಆಧಾರದ ಮೇಲೆ ಅವನಿಗೆ ಕಳಂಕ
ಹಚ್ಚುವುದಕ್ಕೆ ಅಥವಾ ಅವನನ್ನು ತೆಗಳುವುದಕ್ಕೆ;
-
ಭವಿ?ವಾಣಿ ನಿಜವಾಗುತ್ತದೆಂದು ನಂಬಿಸಿ ಅವಮಾನಕರ ಆಚರಣೆಗಳನ್ನು ವ್ಯಕ್ತಿಗಳಿಂದ
ಮಾಡಿಸುವುದಕ್ಕೆ, ಅಥವಾ
-
ವ್ಯಕ್ತಿಗಳಿಗೆ ತೀವ್ರ ಹಣಕಾಸು ಷ್ಟ ಉಂಟಾಗುವುದಕ್ಕೆ
ಕಾರಣವಾಗುವ ಹಾನಿಕರ ಭವಿಷ್ಯ ನುಡಿಯುವುದು
-
ಜ್ವಾಲೆಯನ್ನು ಬರೀ ಕೈಗಳಿಂದ ಮುಟ್ಟುವಂತೆ ಒತ್ತಾಯಿಸುವ ರೀತಿಯ ದೈಹಿಕ ಅಥವಾ
ಮಾನಸಿಕ ಹಾನಿಗೆ ಒಳಪಡಿಸುವ ಮೂಲಕ ಮಾಡುವ ಯಾರೇ ವ್ಯಕ್ತಿಯ ಅಪರಾಧವನ್ನು
ಅಥವಾ ನಿರಪರಾಧಿತ್ವವನ್ನು ಘೋಷಿಸುವುದು;

ವಿಧೇಯಕವು ದೈವನಂಬಿಕೆ, ಆಚರಣೆ ಮತ್ತು ಮೂಢನಂಬಿಕೆಗಳನ್ನು ಕೆಳಕಂಡಂತೆ ಪ್ರತ್ಯೇಕಗೊಳಿಸುತ್ತದೆ.
ಮೂಢನಂಬಿಕೆಗಳನ್ನು ವಿರೋಧಿಸುವುದೆಂದರೆ, ಜನರ ಧಾರ್ಮಿಕ ನಂಬಿಕೆಗಳನ್ನು ಅಲ್ಲಗಳೆಯುವುದಲ್ಲ, ಹೀನಾಯಿಸುವುದಲ್ಲ. ಜನಸಾಮಾನ್ಯರು ತಮ್ಮ ಬದುಕಿನ ಅನುಭವಗಳಿಂದ, ಸುತ್ತಮುತ್ತಲ ಸಾಮಾಜಿಕ ಪ್ರೇರಣೆಗಳಿಂದ ಹಾಗೂ ಪ್ರಚೋದನೆಗಳಿಂದ ಹಲವಾರು ನಂಬಿಕೆಗಳನ್ನು ಬೆಳೆಸಿಕೊಂಡಿರುತ್ತಾರೆ. ನಂಬಿಕೆಗಳಿಂದ ಆಚರಣೆಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳು ಮೂಲ ಅಸ್ತಿತ್ವ ಕಳೆದುಕೊಂಡಾಗ ಮೂಢನಂಬಿಕೆಗಳಾಗುವುದು ಇನ್ನೊಂದು ಹಂತ. ಸಾಮಾಜಿಕ ಅಸಮಾನತೆ, ವೈಚಾರಿಕ ಜ್ಞಾನದ ಅಲಭ್ಯತೆ, ಜ್ಞಾನ ಸಂವಹನದ ಕೊರತೆ ಮುಂತಾದ ಹಲವಾರು ಕಾರಣಗಳಿಂದ ಕೆಲವು ಮೂಢಾಚಾರಗಳು ಕಾರ್ಯಕಾರಣ ಸಂಬಂಧವಿಲ್ಲದೆಯೇ ನಂಬುವಂತೆ ಮಾಡುತ್ತವೆ. ಇಂಥ ನಂಬಿಕೆಗಳ ಮೇಲೆ ರೂಢಿಗೆ ಬಂದ ಆಚರಣೆಗಳು ಅರ್ಥಹೀನವಾಗಿರುತ್ತವೆ. ಇವು ಅಜ್ಞಾನವನ್ನು, ಅಂಧಶ್ರದ್ಧೆಯನ್ನು ಹೇರುವ ಮತ್ತು ಪೋಷಿಸುವ ಶಕ್ತಿಗಳ ಕೈಯಲ್ಲಿ ದುರ್ಬಳಕೆಯಾಗುತ್ತವೆ.
ಮೂಢನಂಬಿಕೆ ಮತ್ತು ಧಾರ್ಮಿಕ ಶ್ರದ್ಧೆ ನಡುವಿನ ಅಂತರ ತೀರಾ ತೆಳುವಾದದ್ದಾದರೂ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸುವ ಕೆಲಸ ಅತ್ಯಂತ ಜರೂರಾಗಿ ಆಗಬೇಕಿದೆ. ಹೀಗೆ ಗರುತಿಸಲು ನಮಗೆ ಸಂವಿಧಾನಬದ್ಧವಾದ ಮೂಲಭೂತ ಕರ್ತವ್ಯಗಳು ಮತ್ತು ಮಾನವ ಹಕ್ಕುಗಳ ಪರಿಕಲ್ಪನೆಗಳು ಹಾಗೂ ನಮ್ಮ ಬಹುಮುಖಿ ಸಂಸ್ಕೃತಿಯ ನೆಲೆಗಳು ಒಂದು ವಿಶಾಲ ಭಿತ್ತಿಯನ್ನು ಒದಗಿಸಬಹುದು. ಯಾವ ಮೂಢನಂಬಿಕೆಯ ಆಚರಣೆಗಳು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಕಾರಣವಾಗುತ್ತವಯೋ, ಮಾನವನ ಸಾಮಾಜಿಕ ಘನತೆ-ಗೌರವಕ್ಕೆ ಧಕ್ಕೆಯನ್ನುಂಟುಮಾಡುತ್ತವೆಯೋ ಹಾಗೂ ಆರ್ಥಿಕವಾಗಿ ಸಹಮಾನವರನ್ನು ಶೋಷಿಸಲು ವಂಚಕ ಶಕ್ತಿಗಳಿಂದ ಬಳಕೆಯಾಗುತ್ತವೆಯೋ, ಅವುಗಳನ್ನು ಈ ವಿಧೇಯಕದ ವ್ಯಾಪ್ತಿಯೊಳಗೆ ತರಬಹುದು.

ಜ್ಯೋತಿಷಿಗಳು, ಮುಲ್ಲಾಗಳು, ಬಾಬಾಗಳು, ಪಾದ್ರಿಗಳು, ಪುರೋಹಿತರು ಹೀಗೆ ಪಂಚಾಂಗವನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸಿ ಭವಿಷ್ಯ ಹೇಳುತ್ತೇವೆಂದು ಜನರನ್ನು ಶೋಷಿಸುವ ಮತ್ತು ಮೌಢ್ಯದ ಬೀಜ ಬಿತ್ತುವ ಎಲ್ಲರನ್ನೂ ಈ ಕಾಯ್ದೆಯಡಿ ಅಪರಾಧಿಗಳೆಂದು ಘೋಷಿಸಬಹುದಾಗಿದೆ.

1 ಕಾಮೆಂಟ್‌: