ವಾರ್ಲಿ
ಆದಿವಾಸಿಗಳ ಅಕ್ಕ
ಗೋದಾವರಿ
ಅಮ್ಮನವರ ನೆನಪುಗಳು
ಬಲಪಂಥೀಯರೆ
ಎ ಬ ಮಾನಸಿಕ ಅಸ್ವಸ್ಥರು ಹಾಗೂ ಕಾಮಾಲೆ ಕಣ್ಣಿನ ಲೇಖಕರು ಮತ್ತು ವಿದ್ವಾಂಸರಿಗೆ ಭಾರತದ ಎಡಪಂಥಿಯ ಚಳುವಳಿಗಳ ನಾಯಕರು ಎಂದರೆ ಒಂದು ರೀತಿಯಲ್ಲಿ ವಾಸಿಯಾದ ಪಾರಂಪರಿಕ ಕಾಯಿಲೆ . ಅವರನ್ನು ದ್ವೇಷಿಸುವುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಭಾವಿಸಿರುವ ಈ ಮಹಾನುಭಾವರು ಒಮ್ಮೆ ಎಡಪಂಥೀಯ ಚಳುವಳಿಯಲ್ಲಿ ಗುರುತಿಸಿಕೊಂಡಿದೆ ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ ಸಮುದಾಯದಿಂದ ಬಂದವರು ಮತ್ತು ಜಾತಿ , ಧರ್ಮಗಳ ಗಡಿಗಳನ್ನು ಮೀರಿ ಅಪ್ಪಟ ಮನುಷ್ಯರಂತೆ ಬದುಕಿದವರು ಅರಿಯಲಿಲ್ಲ .ನಮ್ಮ ದಕ್ಷಿಣ ಭಾರತದಲ್ಲಿ ಕೇರಳದ ನಂಬೂದರಿ ಪಾಡ್ ಅಥವಾ ಕರ್ನಾಟಕದಲ್ಲಿ ನಮ್ಮ ನಡುವೆ ಗುರುವಿನ ಸ್ಥಾನದಲ್ಲಿರುವ ಡಾ . ಜಿ . ರಾಮಕೃಷ್ಣ ಅವರು ಹಾಗೂ ಅವರ ಬದ್ಧತೆಯ ಬದುಕು ಮತ್ತು ಸಿದ್ಧಾಂತವನ್ನು ಒಮ್ಮೆ ತೆರೆದ ಮನಸ್ಸಿನಿಂದ ಎಲ್ಲರೂ ಗಮನಿಸುವುದು ಒಳಿತು .
ಕಳೆದ
ಏಪ್ರಿಲ್ ತಿಂಗಳಿನಲ್ಲಿ ಭಾರತದ ಬುಡಕಟ್ಟು ಜನಾಂಗದ ಬವಣೆ ಮತ್ತು ಹೋರಾಟದ ಕುರಿತು ಅಧ್ಯಯನ ಮಾಡುವ ಪಶ್ಚಿಮ ಬಂಗಾಳದ ಉತ್ತರಭಾಗ ಡಾರ್ಜಿಲಿಂಗ್ ಜಿಲ್ಲೆಯ ಸಿಲುಗುರಿ , ನಕ್ಸಲ್ ಬಾರಿ ಹಾಗೂ ನ್ಯೂ ಜಲಪಗುರಿ ಜಿಲ್ಲೆ ಕ್ಷೇತ್ರ ಕಾರ್ಯ ಕೈಗೊಂಡಿದ್ದೆ . ಸಿಲಿಗುರಿಯಲ್ಲಿರುವ ಉತ್ತರ ಬಂಗಾಳದ ವಿಶ್ವ ವಿದ್ಯಾನಿಲಯದ ಇತಿಹಾಸದ ಪ್ರಾಧ್ಯಾಪಕ ನನ್ನೆದುರು ಭಾರತದ ಬುಡಕಟ್ಟು ಜನಾಂಗದ ಹೋರಾಟ ಇತಿಹಾಸವನ್ನು ತೆರೆದಿಟ್ಟಾಗ ನಿಜಕ್ಕೂ ನಾನು ಆಶ್ಚರ್ಯಚಕಿತನಾದೆ . ಕಳೆದ ನಾಲ್ಕರಿಂದ ನಾನು ಹತ್ತಿರದಿಂದ ಬಲ್ಲಂತೆ ಬಂಗಾಳಿಗಳು ಯಾವುದೇ ವಿಷಯವನ್ನು ಗ್ರಹಿಸಿದರೆ , ಅತ್ಯಂತ ಆಳವಾಗಿ ಎಲ್ಲಾ ಆಯಾಮಗಳಲ್ಲಿ ಗ್ರಹಿಸಿ ಅದನ್ನು ದಾಖಲಿಸುವುದು ಅವರ ವಿಶಿಷ್ಣ ಲಕ್ಷಣವಾಗಿದೆ . ಆ ಪ್ರೊಫೆಸರ್ ನನ್ನೆದೆರು ಮಹಾರಾಷ್ಟ ç ದ ವಾರ್ಲಿ ಎಂಬ ಸ್ವಾತಂತ್ರ ö ಯ ಪೂರ್ವದ ಬುಡಕಟ್ಟು ಜನಾಂಗದ ಬವಣೆ ಮತ್ತು ಅವರ ಹೋರಾಟಕ್ಕೆ ಅಸ್ತಿಭಾರವಾಗಿ ನಿಂತ ಗೋದಾವರಿ ಪರುಳೇಕರ್ ಎಂಬ ಹೆಣ್ಣು ಮಗಳ ಕಥನವನ್ನು ನನ್ನೆದುರು ಬಿಚ್ಚಿಟ್ಟು , ಸಂಪೂರ್ಣ ಮಾಹಿತಿ ಒದಗಿಸಿದರು .
ಭಾರತೀಯ
ಜನಾಂಗದ ಇತಿಹಾಸದಲ್ಲಿ ಮಹತ್ವದ ಘಟನೆಯಾದ ವಾರ್ಲಿ ಆದಿವಾಸಿ ದಂಗೆಯು - ೧೯೪೫ ರ ಅವಧಿಯಲ್ಲಿ ೧೯೩೮ ರಲ್ಲಿ ಜಿಲ್ಲೆಯಲ್ಲಿ ಥಾಣೆ ಸಂಭವಿಸಿತು . ಆ ಪ್ರದೇಶದ ಸ್ಥಳೀಯ ಜನಸಂಖ್ಯೆಯಲ್ಲಿ ಶೇಕಡಾ ಐವತ್ತೆ öÊ ದರಷ್ಟು ಇದ್ದ ವಾರ್ಲಿ ಬುಡಕಟ್ಟು ಸಮುದಾಯದ ಜನರು ಅಮಾಯಕರು ಮತ್ತು ಅನಕ್ಷರಸ್ಥ . ಈ ಜನರು ಭೂಮಾಲೀಕರು ಮತ್ತು ಲೇವಾದೇವಿದಾರರಿಂದ ವ್ಯಾಪಕವಾದ ಶೋಷಣೆಯಿಂದ ಬಳಲುತ್ತಿದ್ದಾಗ ,
ಈ ದಂಗೆಯು ಹುಟ್ಟಿಕೊಂಡಿತು , ಸುಮಾರು ಐದು ಸಾವಿರ ಮಂದಿ ಬುಡಕಟ್ಟು ಜನಾಂಗದವರು ದಿನವೊಂದಕ್ಕೆ ಹನ್ನೆರೆಡು ಆಣೆಗಳ ರೂಪದಲ್ಲಿ ( ಎಪ್ಪತ್ತೈದು ಪೈಸೆ ) ದೈನಿಕ ವೇತನವನ್ನು ಪಡೆಯುವವರೆಗೆ ಕೃಷಿ ಕೂಲಿ ಕೆಲಸ ಮಾಡಲು ನಿರಾಕರಿಸಿದರು . ಈ ಪ್ರತಿರೋಧದ ಕ್ರಿಯೆಯು ಸ್ಥಳೀಯ ಸಮುದಾಯಕ್ಕೆ ಒಂದು ಮಹತ್ವದ ತಿರುವು ನೀಡಿತು , ಭವಿಷ್ಯದ ಹಕ್ಕು ಆಧಾರಿತ ಚಳುವಳಿಗಳಿಗೆ ಭದ್ರ ಅಡಿಪಾಯ ಹಾಕಿದು . ಬುಡಕಟ್ಟು ಜನಾಂಗವನ್ನು ಶೋಷಿಸಿದ ಭೂಮಾಲೀಕರು ಮತ್ತು ಲೇವಾದೇವಿದಾರರ ದಬ್ಬಾಳಿಕೆಯ ವರ್ತನೆಗಳಿಂದ ವಾರ್ಲಿ ದಂಗೆಗೆ ಉತ್ತೇಜನ ದೊರಕಿತು . ಆರಂಭಿಕ ಪ್ರತಿರೋಧವು ತಲಸರಿ ತಾಲೂಕಿನ ಜರಿ ಎಂಬ ಗ್ರಾಮದಲ್ಲಿ ಪ್ರಾರಂಭವಾಯಿತು .
ಮಹಿಳೆಯರು
ಈ ದಂಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ತಮ್ಮ ಸಮುದಾಯದ ಪುರುಷರನ್ನು ಬೆಂಬಲಿಸುತ್ತಾರೆ ಒಂದು ದಿಗೆ ನ್ಯಾಯಕ್ಕಾಗಿ ಹೋರಾಟ ಸಕ್ರಿಯವಾಗಿ ಭಾಗವಹಿಸಿದರು . ಆದಿವಾಸಿಗಳಿಂದ ಗೋದುತೈ ಎಂದರೆ ,
ಸ್ಥಳೀಯ ಭಾಷೆಯಲ್ಲಿ ಹಿರಿಯ ಅಕ್ಕ ಎಂದು ಕರೆಸಿಕೊಂಡ ಶ್ರೀಮತಿ ಗೋದಾವರಿ ನೈತಿಕವಾಗಿ ಬೆಂಬಲ ನಿಂತರು . ಮಹಾರಾಷ್ಟ ç ದ ಪ್ರಥಮ ಕಾನೂನು ಪದವೀಧರೆ ಹಾಗೂ ಮೇಲ್ವರ್ಗದ ಬ್ರಾಹ್ಮಣ ಸಮುದಾಯದಿಂದ ಬಂದಿದ್ದ ಗೋದಾವರಿಯವರು ಆದಿವಾಸಿಗಳಿಗೆ ಆತ್ಮಸ್ಥರ್ಯವನ್ನು ತುಂಬಿ ಭಾರತೀಯ ಕಿಸಾನ್ ಸಭಾ ಸಂಘಟನೆಯ ಮೂಲಕ ಆಧಾರ ಸ್ಥಂಭವಾಗಿ ನಿಂತರು . ಗೋದಾವರಿಯವರು ಆದಿವಾಸಿ ಮಹಿಳೆಯರನ್ನು ಈ ಚಳುವಳಿಗೆ ಸೇರಿಸಲು ಪ್ರೋತ್ಸಾಹಿಸಿದರು , ಮತ್ತು ಅವರು ಶ್ರೀಮಂತ ಭೂಮಾಲೀಕರ ದೌರ್ಜನ್ಯಕ್ಕೆ ಹೆದರಿ ಭೂಗತರಾದ ಆದಿವಾಸಿಗಳನ್ನು ರಕ್ಷಿಸುವುದರಿಂದ ಹಿಡಿದು , ಅವರು ಎದುರಿಸಿದ ದಬ್ಬಾಳಿಕೆಯ ಬಗ್ಗೆ ಸಭೆಗಳಲ್ಲಿ ಮಾತನಾಡುವವರೆಗೆ ವಿವಿಧ ಪಾತ್ರಗಳನ್ನು ವಹಿಸಿಕೊಂಡರು . ಪೊಲೀಸ್ ದೌರ್ಜನ್ಯ ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಎದುರಿಸಿ ನಿಂತ ವಾರ್ಲಿ ಆದಿವಾಸಿ ಮಹಿಳೆಯರಿಗೆ ನೀಡಿದ ಧೈರ್ಯ ಮತ್ತು ಸ್ಥಿತಿಸ್ಥಾಪಕತ್ವವು ಚಳುವಳಿಯ ಯಶಸ್ಸಿಗೆ ಪ್ರಮುಖ ಕಾರಣವಾಯಿತು .
ಗೋದಾವರಿಯವರು
ಮಹಾರಾಷ್ಟ ç ದ ಪುಣೆಯ ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ
೧೯೦೭ ರ ಆಗಸ್ಟ್ ೧೪ ರಂದು ಜನಿಸಿದರು .ಇವರ ತಂದೆ ಲಕ್ಷ ö ್ಮಣರಾವ್ ಗೋಖಲೆಯವರು ಮಹಾರಾಷ್ಟ ç ದ ಪ್ರಸಿದ್ಧ ವಕೀಲರು .
ಬ್ರಿಟಿಷ್ ಆಡಳಿತದ ಅನೇಕ ದಾವೆಗಳನ್ನು ನಿರ್ವಹಿಸಿ ಹೇರಳವಾದ ಸಂಪತ್ತನ್ನು ಗಳಿಸಿದ್ದರು . ಜೊತೆಗೆ ಅವರ ಖ್ಯಾತ ಸಮಾಜ ಸುಧಾರಕ ಗೋಪಾಲಲಕೃಷ್ಣ ಗೋಖಲೆಯವರ ಸೋದರ ಸಂಬ ಎ ಧಿಯಾಗಿದ್ದರು . ಈ ಕಾರಣದಿಂದ ತಮ್ಮ ಪುತ್ರಿಯನ್ನು ವಕೀಲಿ ವೃತ್ತಿಯಲ್ಲಿ ತಮ್ಮ ಉತ್ತರಾಧಿಯನ್ನಾಗಿ ಮಾಡುವ ಉದ್ದೇಶದಿಂದ ಅವರನ್ನು ಪುಣೆಯ ಪರ್ಗುಸನ್ ಶಾಲೆಯಲ್ಲಿ ಓದಿಸಿ ಪದವಿ ಮತ್ತು ಕಾನೂನು ಪದವಿ ಪಡೆಯುವಂತೆ ಮಾಡಿದರು . ಆದರೆ , ಗೋದಾವರಿಯವರು ಕಾಲೇಜಿನಲ್ಲಿ ಓದುತ್ತಿದ್ದಾಗಲೇ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿದ ವಿದ್ಯಾರ್ಥಿ ಸಂಘಟನೆಯ ದಿಗೆ ಸೆರೆಮನೆ ವಾಸ ಅನುಭವಿಸಿದರು . ವಸಾಹತುಶಾಹಿಯ ವಿರುದ್ಧದ ಹೋರಾಟ ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು .
ಬಲಪ ಎ ಥೀಯ ಚಿಂತನೆಗಳಿ ಎ ದ ಪ್ರಭಾವಿತರಾದ ಅವರ ತಂದೆ
ಲಕ್ಷಣರಾವ್ರವರು ತಮ್ಮ ಪುತ್ರಿಯನ್ನು ಮನೆಯಿಂದ ಹೊರ ಹಾಕಿ , ಪುತ್ರಿಗೆ ಮಾಸಿಕ ದುಮೆ öÊ ದುರುಪಾಯಿಗಳನ್ನು ಜೀವನ ನಿರ್ವಹಣೆಗೆ ನೀಡಲಾಯಿತು .ಬ್ರಿಟಿಷ್ ಸರ್ಕಾರ z ಆಡಳಿತದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಲಕ್ಷ ö ್ಮಣರಾಯರಿಗೆ ತಮ್ಮ ಪುತ್ರಿಯ ಸ್ವಾತಂತ್ರ ö ಯದ ಹೋರಾಟ ಮತ್ತು ಸಾಮಾಜಿಕ ಕಳವಳ ಇವೆಲ್ಲವೂ ಇರಿಸು ಮುರುಸು ಉಂಟು ಮಾಡಿತು . ಮನೆ ತೊರೆದ ಗೋದಾವರಿಯವರು ಮುಂಬೈ ನಗರಕ್ಕೆ ಹೋಗಿ ' ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ' ಎಂಬ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರಾದರು . ಅವರು ಈ ಸಂಸ್ಥೆಗೆ ಸದಸ್ಯರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು . ೧೯೩೭ ರಲ್ಲಿ ಮುಂಬೈನಲ್ಲಿ ಸಾಕ್ಷರತಾ ಅಭಿಯಾನವನ್ನು ಪ್ರಾರಂಭಿಸಿದ ಗೋದಾವರಿ , ೧೯೩೮ ರಲ್ಲಿ ಸ್ಥಳೀಯ ಮನೆಗಳ ಬಡ ಅನಕ್ಷರಸ್ಥ ಮಹಿಳೆಯರ ಕಾರ್ಮಿಕರು ವರ್ಗದ ಭಾಗವಾಗುವಂತೆ ಮಾಡುವಲ್ಲಿ ಯಶಸ್ವಿಯಾದರು . ಇದೇ ಸಂದರ್ಭದಲ್ಲಿ ಬಿ . ಆರ್ . ಅಂಬೇಡ್ಕರ್ ರವರು ಸ್ಥಾಪಿಸಿದ್ದ ಸ್ವತಂತ್ರ ಕಾರ್ಮಿಕ ಪಕ್ಷ ಸಂಘಟನೆಯ ಕಾರ್ಯದರ್ಶಿ ಶಾಮರಾವ್ ಪರುಳೇಕರ್ವರ ಪರಿಚಯ ಅವರನ್ನು ೧೯೩೯ ರಲ್ಲಿ ವಿವಾಹವಾದರು . ಪರುಳೇಕರ್ ಮಾರ್ಕ್ಸ್ವಾದಿ ಚಿಂತನೆಗಳಿ ಎ ದ ಪ್ರಭಾವಿತವಾಗಿದೆ . ಇಂತಹ ದಂಪತಿಗಳು ಮುಂದಿನ ದಿನಗಳಲ್ಲಿ ತಮ್ಮ ಇಡೀ ಬದುಕನ್ನು ಕಾರ್ಮಿಕರು , ರೈತರು ಮತ್ತು ಕೃಷಿಕಾರ್ಮಿಕರ ಪರವಾಗಿ ಹೋರಾಡುತ್ತಾ ಅವರ ಬದುಕನ್ನು ಹಸನುಗೊಳಿಸುವ ಕಾರ್ಯಪ್ರವೃತ್ತರಾದರು .ಈ
ಈ ಸಂದರ್ಭದಲ್ಲಿ ಜಿಲ್ಲೆಯ
ಜಿಲ್ಲೆಯ ವಾರ್ಲಿ ಎಂಬ ಬುಡಕಟ್ಟು ಜನಾಂಗದ ಆದಿವಾಸಿಗಳು ಶೋಚನೀಯ ಬದುಕು ಅವರ ಕಣ್ಣಿಗೆ ಬಿದ್ದಿತು .
ಮಹಾರಾಷ್ಟ ç ದ ಥಾಣೆ ಜಿಲ್ಲೆಯ
ಉಂಬರ್ಗಾಂವ್ , ದಹನು , ಪಾಲ್ಘರ್ ಮತ್ತು ಜವಹರ್ ತಾಲೂಕುಗಳಲ್ಲಿ ಅಲ್ಲಲ್ಲಿ ಚದುರಿದಂತೆ ವಾಸಿಸುತ್ತಿದ್ದ ಬುಡಕಟ್ಟು ರೈತರಲ್ಲಿ ಬಹುಪಾಲು ಮಂದಿ ವಾರ್ಲಿ ಎಂಬ ಆದಿವಾಸಿ ಸಮುದಾಯದ ನಿವಾಸಿಗಳಾಗಿದ್ದರು . ಶ್ರೀಮಂತ ಭೂಮಾಲೀಕರು ಮತ್ತು ಲೇವಾದೇವಿಯವರು ಬೇಸಾಯ ಮತ್ತು ಬೇಟೆಯನ್ನು ಕುಲಕಸುಬಿನಂತೆ ಪಾಲಿಸಿಕೊಂಡು ಬಂದಿದ್ದ ಈ ಆದಿವಾಸಿಗಳಿಗೆ ನೀಡಿದ ಸಾಲದ ಹಣಕ್ಕೆ ಅಧಿಕ ಬಡ್ಡಿಯನ್ನು ವಿಧಿಸುವುದರ ಮೂಲಕ ಅವರ ಮೊತ್ತಕ್ಕೆ ಭೂಮಿಯನ್ನು ಖರೀದಿಸಿದರು ಮತ್ತು ವಾರ್ಲಿ ಆದಿವಾಸಿಗಳ ಕೃಷಿ ಜೊತೆಗೆ ಕೆಲವರಿಗೆ ಭೂಮಿಯಲ್ಲಿ ಬಾಡಿಗೆಗೆ ನೀಡಿದ್ದರು .ಕೃಷಿ ಉತ್ಪನ್ನದ ಅರ್ಧದಷ್ಟು ಪಾಲನ್ನು ಬಾಡಿಗೆಯ ರೂಪದಲ್ಲಿ ಈ ರೈತರು ಪಡೆಯಲು ಬಯಸಿದ್ದರು .
ಅಷ್ಟು ಇದೆ , ಭೂಮಾಲೀಕರ ಭೂಮಿಯಲ್ಲಿ ಯಾವುದೇ ಕೂಲಿ ಇಲ್ಲದೆ ಕೆಲಸ ಮಾಡಬೇಕಾಗಿತ್ತು . ಈ ರೀತಿಯಲ್ಲಿ ಅವರು ಜೀತದಾಳುಗಳಾಗಿದ್ದಾರೆ ಜೀವನವಾಗಿದ್ದಾರೆ .ಕೆಲವು ಭೂಮಾಲೀಕರು ವಿಸ್ತಾರವಾದ ಹುಲ್ಲುಗಾವಲುಗಳನ್ನು ಹೊಂದಿದ್ದರು ಮತ್ತು ಅರಣ್ಯ ಗುತ್ತಿಗೆದಾರರಾಗಿ ಬ್ರಿಟಿಷ್ ಸರ್ಕಾರದ ಕಾರ್ಯ ನಿರ್ವಹಿಸಿದ . ಬುಡಕಟ್ಟು ರೈತರನ್ನು ಅತ್ಯಲ್ಪ ವೇತನಕ್ಕೆ ಕಾರ್ಮಿಕರಾಗಿ ನೇಮಿಸಲಾಯಿತು ಇದು ವೆಟ್ ಅಥವಾ ಬಲವಂತದ ಕಾರ್ಮಿಕ ಪದ್ಧತಿ ಆ ಪ್ರದೇಶದಲ್ಲಿ ವ್ಯಾಪಕವಾಗಿತ್ತು .
ಮಳೆಗಾಲದಲ್ಲಿ ಬುಡಕಟ್ಟು ರೈತರು ಭತ್ತದ ಕೃಷಿಗಾಗಿ ಲೇವಾದೇವಿಗಾರರಿಂದ ಸಾಲ ಮಾಡುತ್ತಿದ್ದರು . ಅದಕ್ಕಾಗಿ ಅವರು ಐವತ್ತರಿಂದ ನೂರರಷ್ಟು ಬಡ್ಡಿಯನ್ನು ಪಡೆಯಬೇಕಾಗಿತ್ತು .
ಇಂತಹ
ಸಂದರ್ಭದಲ್ಲಿ ಗೋದಾವರಿಯವರು ತಮ್ಮ ಪತಿಯ ಜೊತೆಗೂಡಿ ಜಿಲ್ಲೆಗೆ ಪ್ರವೇಶಿಸಿ ಅಲ್ಲಿಯೇ ನೆಲೆಸಿದರು .ಗೋದಾವರಿಯವರು ಪ್ರತಿದಿನ ಕಾಲ್ನಡಿಗೆಯಲ್ಲಿ ಎಂಟತ್ತು ಗ್ರಾಮಗಳಿಗೆ ಭೇಟಿ ನೀಡಿ , ಅಲ್ಲಿನ ಆದಿವಾಸಿಗಳ ಗುಡಿಸಲಿನಲ್ಲಿ ಕುಳಿತು ಅವರ ಕಷ್ಟ ಕೋಟಲೆಗಳನ್ನು ಕಣ್ಣಾರೆ ನೋಡಿದರು . ಶ್ರೀಮಂತ ಜಮೀನ್ದಾರರು ಆದಿವಾಸಿ ಸಮುದಾಯದ ಮಹಿಳೆಯರನ್ನು ತಮ್ಮ ದಾಹಕ್ಕೆ ಬಳಸಿಕೊಳ್ಳುತ್ತಾರೆ .ಆ ಶೋಷಣೆಗೆ ಒಪ್ಪದ ಮಹಿಳೆಯರನ್ನು ಮಾಟಮಂತ್ರ ಮಾಡುವ ಹೆಂಗಸು ಎಂದು ಆರೋಪ ಹೊರಿಸಿ ತಮ್ಮ ಸೇವಕರಿಂದ ಹತ್ಯೆ ಮಾಡಿಸುತ್ತಿದ್ದರು . ಅವರ ಜಮೀನಿನಲ್ಲಿ ದುಡಿಯುತ್ತಿದ್ದ ರೈತರ ಜಾನುವಾರುಗಳು ಅಸ್ಮಾತ್ ಸತ್ತು ಹೋದರೆ , ಅವರ ಪತ್ನಿಯರನ್ನು ನೊಗಕ್ಕೆ ಕಟ್ಟಿ ಭೂಮಿಯ ಉಳುಮೆ ಮಾಡಿಸುವಂತೆ . ಇಡೀ ಪ್ರದೇಶಕ್ಕೆ ಶ್ರೀಮಂತ ಭೂ ಕಾನೂನು ಮತ್ತು ನ್ಯಾಯಾಲಯ ಎಲ್ಲವೂ ಆಗಿದ್ದರು .ಯಾವುದೇ ಗ್ರಾಮದಲ್ಲಿ ಯಾವುದೇ ಘಟನೆ ನಡೆದರೂ ಸ್ಥಳೀಯ ಜಮೀನ್ದಾರರು ನ್ಯಾಯಾಧೀಶರಾಗಿ ತೀರ್ಪು ನೀಡಿದ್ದಾರೆ .ಅವರ ದಬ್ಬಾಳಿಕೆ ಮತ್ತು ಶೋಷಣೆಗೆ ಅವರೇ ನ್ಯಾಯಧೀಶರಾಗಿದ್ದಾರೆ .
ಇಂತಹ
ದುಸ್ಥಿತಿಯಲ್ಲಿ ಬದುಕುತ್ತಿದ್ದ ವಾರ್ಲಿ ಆದಿವಾಸಿಗಳ ಕತ್ತಲೆಯ ಬದುಕಿಗೆ ಗೋದಾವರಿಯವರು ಸೂರ್ಯನಂತೆ ಅಲ್ಲಿಗೆ ಆಗಮಿಸಿದರು .ಅಧಿಕಾರಿಗಳು , ಅಧಿಕಾರಿಗಳು ಭೂಮಾಕರ ಗುಲಾಮರಂತೆ ಅವರು ನೀಡುತ್ತಿದ್ದ ಪುಕ್ಕಟೆ ಕಿವುಡರು ಮತ್ತು ಕುರುಡರು .ಅತ್ಯುತ್ತಮ ಇಂಗ್ಲಿಷ್ ಭಾಷೆ , ಅಗಾಧವಾದ ಜ್ಞಾನ ಹಾಗೂ ಮಹಾರಾಷ್ಟ à ದ ಪ್ರಥಮ ಕಾನೂನು ಪದವೀಧರೆ ಎಂಬ ಕೀರ್ತಿಗೆ ಪಾತ್ರರಾದ ಗೋದಾವರಿ ಅಮ್ಮನವರ ನೈತಿಕವಾಗಿ ಎದುರಿಸುವ ಶಕ್ತಿಯು ಬ್ರಿಟಿಷ್ ಅಧಿಕಾರಿಗಳು , ಜಮೀನ್ದಾರರಿಗೆ ಮತ್ತು ಲೇವಾದೇವಿಗಾರರಿಗೆ ಇಲ್ಲ . ಅಧಿಕವಾಗಿ ವಿಸ್ತಾರವಾದ ಹುಲ್ಲುಗಾವಲು ಪ್ರದೇಶಗಳನ್ನು ಹೊಂದಿದ್ದ ಭೂ ಹಸಿರು ಕೃಷಿ ಕಾರ್ಮಿಕರಿಗೆ ಒಂದು ಟನ್ ಹುಲ್ಲು ಕತ್ತರಿಸಲು ಕೇವಲ ಎರಡು ರೂಪಾಯಿ ಕೂಲಿಯನ್ನು ನಿಗದಿ ಪಡಿಸಿದ್ದರು . ಕೂಲಿಕಾರರಾದ ಪತಿ ಮತ್ತು ಪತ್ನಿ ಎರಡು ಮೂರು ದಿನಗಳ ಕಾಲ ಕತ್ತರಿಸಿದರೂ ಕೂಡ ಒಂದು ಟನ್ ಹುಲ್ಲು ಸಂಗ್ರಹವಾಗಿದ್ದಾರೆ .ಈ ಹಸಿರು ಹುಲ್ಲನ್ನು ಭೂ ಮುಂಬೈನಗರದ ಹಸು , ಸಾಕಾಣಿಕೆದಾರರಿಗೆ ಮಾರಾಟ ಮಾಡಿ ಅಪಾರ ಹಣವನ್ನು ಗಳಿಸಿ .
ವಾರ್ಲಿ
ಆದಿವಾಸಿಗಳ ಸಾಮೂಹಿಕ ದಂಗೆಗೆ ಅವರ ಅಸಹ್ಯಕರ ಪರಿಸ್ಥಿತಿ ಮತ್ತು ಭೂಮಾಲೀಕರಿಂದ ನಡೆದ ಕ್ರೂರವಾದ ದಮನಕಾರಿ ನೀತಿಯು ಪ್ರಮುಖ ಕಾರಣವಾಗಿತ್ತು . ಅವರು ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ಪರಿಸ್ಥಿತಿಯಲ್ಲಿ ಕೊಳೆತು ಹೋಗಿದ್ದರು . ಅವರು ಸಂಪೂರ್ಣವಾಗಿ ಹೊಂದಿಕೊಳ್ಳಲಾಗದೆ ಹಾಗೂ ದ್ವೇಷಿಸುತ್ತಿದ್ದ ಪರಿಸ್ಥಿತಿಯಿತ್ತು . ಆದರೆ ಭಯ ಮತ್ತು ಅಸಹಾಯಕತೆಯು ಅವರ ಎದೆಯೊಳಗೆ ಉರಿಯುತ್ತಿರುವ ಜ್ವಾಲೆಯನ್ನು ನಿಗ್ರಹಿಸಿತ್ತು . ಅವರು ಹತಾಶೆಯಿಂದ ಜೀವಿಸುತ್ತಾ , ತಮ್ಮ ಗುಲಾಮಗಿರಿಯನ್ನು ಕೊನೆಗೊಳಿಸಲು ಉತ್ಸುಕರಾಗಿದ್ದಾರೆ , ಆದರೆ ಅದನ್ನು ಹೇಗೆ ಮಾಡಬೇಕೆಂದು ತಿಳಿದಿರಲಿಲ್ಲ . ಇಂತಹ ದಯನೀಯ ಸ್ಥಿತಿಯಲ್ಲಿ ಅವರಿಗೆ ದೋದಾವರಿ ಮತ್ತು ಅವರ ಪತಿ ಶಾಮರಾವ್ ಪರುಳೇಕರ್ ಮಹಾರಾಷ್ಟ ç ದಲ್ಲಿ ಸ್ಥಾಪಿಸಿದ ಕಮ್ಯುನಿಸ್ಟರ ನೇತೃತ್ವದ ಭಾರತೀಯ ಕಿಸಾನ್ ಸಭಾದ ಪ್ರವೇಶವು ಆತ್ಮಸ್ಥರ್ಯವನ್ನು ತುಂಬಿತು .
ನಿರ ಎ ತರ ಏಳುವರ್ಷಗಳ ಕಾಲ
ವಾರ್ಲಿ ಆದಿವಾಸಿಗಳ ಪರವಾಗಿ ಹೋರಾಡಿದ ಗೋದಾವರಿ ಮತ್ತು ಅವರ ಪತಿ ಪರುಳೇಕರ್ ಹಲವಾರು ಬಾರಿ ಜೈಲುವಾಸ ಅನುಭವಿಸಿದರು . ೧೯೬೧ ರಲ್ಲಿ ಆದಿವಾಸಿಗಳ ಪ್ರಗತಿ ಮಂಡಳಿ ಎಂಬ ಸಂಘಟನೆಯನ್ನು ಸ್ಥಾಪಿಸಿದರು . ೧೯೭೦ ರಲ್ಲಿ ಅವರು ತಮ್ಮ ಹೋರಾಟದ ಬದುಕನ್ನು ಮರಾಠಿ ಭಾಷೆಯಲ್ಲಿ '' ಜೆನ್ಹಾ ಮನುಸ್ ಜಗ ಹೋದೋ '' ಹೆಸರಿನಲ್ಲಿ
( ಮನುಷ್ಯ ಜಾಗೃತೆ ) ಬರೆದು ಪ್ರಕಟಿಸಿದರು . ಈ ಕೃತಿಗೆ ೧೯೭೨
ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಜವಹರಲಾಲ್ ನೆಹರು ಮತ್ತು ಸೋವಿಯತ್ ಲ್ಯಾಂಡ್ ಪ್ರಶಸ್ತಿ ದೊರೆಯಿತು . ಈ ಕೃತಿಯು ಇಂಗ್ಲೀಷ್ ,
ಜಪಾನ್ ಮತ್ತು ಕನ್ನಡ ಭಾಷೆಗೆ ಅನುವಾದಗೊಂಡಿದೆ . ಪುಣೆಯಲ್ಲಿ ನೆಲೆಸಿದ್ದ ಧಾರವಾಡದ ಹೆಣ್ಣುಮಗಳೊಬ್ಬರು ಈ ಕೃತಿಯನ್ನು ಮಾನವ
ಎಚ್ಚೆತ್ತಾಗ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದು , ಬೆಂಗಳೂರಿನ ಕ್ರಿಯಾ ಪ್ರಕಾಶನದಿಂದ ಪ್ರಕಟವಾಗಿದೆ . ಗೋದಾವರಿ ಅಮ್ಮನವರು ತಳ ಸಮುದಾಯಕ್ಕೆ ಸಲ್ಲಿಸಿದ
ಅನುಪಮ ಸೇವೆಗಾಗಿ ಅವರಿಗೆ ಮಹಾರಾಷ್ಟ ç ದಲ್ಲಿ ಲೋಕಮಾನ್ಯ ತಿಲಕ್ ಹಾಗೂ ಸಾವಿತ್ರಿಬಾಯಿ ಪುಲೆ ಸ್ಮಾರಕ ಪ್ರತಿಷ್ಠಿತ ಪ್ರಶಸ್ತಿಗಳು ಅವರ ಮುಡಿಗೇರಿದವು .
೧೯೯೬
ರಲ್ಲಿ ಅವರು ನಿಧನರಾಗುವವರೆಗೂ ರೈತರು ಮತ್ತು ಕೃಷಿಕಾರ್ಮಿಕರ ಘನತೆಯ ಬದುಕಿಗೆ ಹೋರಾಡಿದರು . ಗೋದಾವರಿಯವರು ಭಾರತೀಯ ಕಿಸಾನ್ ಸಭಾ ಸಂಘಟನೆಯ ಅಧ್ಯಕ್ಷರಾಗಿಯೂ ಸಹ ಕಾರ್ಯ ನಿರ್ವಹಿಸಿದರು .
ಕಮ್ಯೂನಿಸ್ಟ್ ಕಾರ್ಯರ್ತರನ್ನು ಉಳಿದವರಿಗೆ ಅಪರಿಚಿತರಾಗಿ ಉಳಿದು ಹೋದ ಇಂತಹ ಮಹಾನ್ ವ್ಯಕ್ತಿತ್ವದ ಜೀವನಗಾಥೆಯನ್ನು ಹೊರಜಗತ್ತಿಗೆ ನಾವು ತಲುಪಿಸಬೇಕಾಗಿದೆ . ಆದರೆ , ಇಂದಿನ ಕೇಂದ್ರ ಸರ್ಕಾರದ ಬಲಪಂಥೀಯ ಶಿಕ್ಷಣದಿಂದ ಶಾಲಾ , ಕಾಲೇಜುಗಳ ಪಠ್ಯ ಪುಸ್ತಕಗಳಲ್ಲಿ ಇಂತಹ ಅಮೂಲ್ಯ ಜೀವಗಳಿಗೆ ಸ್ಥಾನ ಇಲ್ಲವಾಗಿದೆ . ನಾವು ನಮ್ಮ ಭವಿಷ್ಯದ ತಲೆಮಾರನ್ನು ಶಿಕ್ಷಣದ ಮೂಲಕ ರೂಪಿಸುತ್ತಿರುವ ಬಗೆಯನ್ನು ನೆನಪಿಸಿಕೊಂಡರೆ , ಭಯವಾಗುತ್ತದೆ
(ಜುಲೈ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ಬಹುಸಂಸ್ಕೃತಿ ಅಂಕಣ ಬರಹ)
ಡಾ .
ಎನ್ . ಜಗದೀಶ್ ಕೊಪ್ಪ