ಶುಕ್ರವಾರ, ಡಿಸೆಂಬರ್ 26, 2014

ಗಾಂಧೀಜಿ ಚಿಂತನೆಗಳ ವಾರಸುದಾರ ಬಾಬಾ ಅಮ್ಟೆ ಒಂದು ನೆನಪು




ತಮ್ಮ ಚಿಂತನೆ, ತ್ಯಾಗ, ಬಲಿದಾನ ಮತ್ತು ದೂರದರ್ಶಿತ್ವ  ಮುಂತಾದದ ಒಳನೋಟಗಳಿಂದ ಭಾರತವನ್ನೂ ಒಳಗೊಂಡಂತೆ ಇಪ್ಪತ್ತನೆಯ ಶತಮಾನದ ಜಗತ್ತನ್ನು ಇನ್ನಿಲ್ಲದಂತೆ ಕಾಡಿದವರು ಮಹಾತ್ಮ ಗಾಂಧೀಜಿ. ಇಂದು ಗಾಂಧಿ ನಮ್ಮೊಡನೆ ಇಲ್ಲದಿದ್ದರೂ ಸಹ ಅವರ ಚಿಂತನೆಗಳಿಂದ ಪ್ರಭಾವಿತರಾಗಿ ಅವರು ಹೊತ್ತಿಸಿದ ಜ್ಞಾನದ ಕಿಡಿಯನ್ನು ಹಲವು ಬಗೆಯಲ್ಲಿ, ಹಲವು ರೂಪದಲ್ಲಿ ಜೀವಂತ ಹಲವು ಮಹನೀಯರು ನಮ್ಮೊಡನೆ ಇದ್ದರೆ, ಇನ್ನು ಕೆಲವು ತಮ್ಮ ಹೆಜ್ಜೆಯ ಗುರುತುಗಳನ್ನು ದಾಖಲಿಸಿ ಹೋಗಿದ್ದಾರೆ. ಅಂತಹವರಲ್ಲಿ ನಮ್ಮ ನೆರೆಯ ಮಹಾರಾಷ್ಟ್ರದ ಚಂದ್ರಪುರ್ ಜಿಲ್ಲೆಯ ಬಾಬಾ ಅಮ್ಟೆ ಒಬ್ಬರು. ಅವರು ಬದುಕಿದ್ದರೆ 26-12-14 ಕ್ಕೆ ಅವರಿಗೆ ನೂರು ವರ್ಷ ತುಂಬುತ್ತಿತ್ತು. ಅವರ  ಸಾಧನೆ ಮತ್ತು ಆಧರ್ಶೀನಿಯವಾದ ಬದುಕು  ಈಗ ಯಾರಿಗೂ ನೆನಪಾಗುತ್ತಿಲ್ಲ.


ಗಾಂಧಿಗಿರಿಯ ಫಸಲುಗಳು ಎಂದು ಕರೆಯಬಹುದಾದ ಶೂ ಮಾಕರ್, ಲೂಯಿಫಿಶರ್, ರೋನಾಲ್ಡ್ ಡಂಕನ್, ಜೆ.ಸಿ.ಕುಮಾರಪ್ಪ, ಮಹದೇವದೇಸಾಯಿ, ಮೆಡಲಿನ್ ಸ್ಲೆಡ್, (ಮೀರಾ ಬೆಹನ್) ಕರುಣಾಕರನ್, ರವೀಂದ್ರ ಶರ್ಮ, ಸಿ.ವಿ.ಶೇಷಾದ್ರಿ, ಸುರೇಂದ್ರಕೌಲಗಿ ಹೀಗೆ ಅನೇಕ ಸಾಧಕರ ನಡುವೆ ಬಾಬಾ ಅಮ್ಟೆ ಕೂಡ ಪ್ರಮುಖರು.
ಬಾಬಾ ರವರು 1914 ಡಿಸಂಬರ್ 26 ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಹಿಂಗನ್ ಘಾಟ್ ಎಂಬಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದರು. ( ಮೂಲ ಹೆಸರು ಮುರುಳಿದಾಸ್, ಬಾಬಾ ಎಂಬುದು ತಂದೆ ತಾಯಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ಇವರ ತಂದೆ ದೇವಿಲಾಲ್ ಸಿಂಗ್ ಬ್ರಿಟೀಷ್ ಸರ್ಕಾರದಲ್ಲಿ ಕಂದಾಯ ಅಧಿಕಾರಿಯಾಗಿದ್ದರು ( ತಾಯಿ ಶ್ರೀಮತಿ ಲಕ್ಷ್ಮಿ ಬಾಯಿ ಅಮ್ಟೆ)  ಬಾಬಾ ಅಮ್ಟೆ ನಾಗಪುರದಲ್ಲಿ ಕಾನೂನು ಪದವಿ ಮುಗಿಸಿ, ಒಂದಷ್ಟು ವರ್ಷಗಳ ಕಾಲ ವಕೀಲ ವೃತ್ತಿಯನ್ನು ಕೈಗೊಂಡಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬ್ರಿಟೀಷ್ ಸರ್ಕಾರದಿಂದ ಬಂಧಿತರಾಗುತ್ತಿದ್ದ ಹೋರಾಟಗಾರರ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು.  ಆನಂತರ 1942 ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರ ಸಂಪರ್ಕಕ್ಕೆ ಬಂದರು. ಆ ವೇಳೆಗಾಗಲೆ ಅವರೊಳಗಿನ ಆತ್ಮಸಾಕ್ಷಿಯ ಪ್ರಜ್ಞೆ ಜಾಗೃತವಾಗಿತ್ತು. ಒಂದೇ ಒಂದು ಗಿಡ ನೆಡದ ನಾನು, ಬಿಸಿಲಿನ ತಾಪ ತಾಳಲಾರದೆ ಮರದ ನೆರಳನ್ನು ಆಶ್ರಯಿಸಲು ಯಾವ ನೈತಿಕ ಹಕ್ಕಿದೆ? ನ್ಯಾಯಾಲಯದಲ್ಲಿ ಕೇವಲ ಹದಿನೈದು ನಿಮಿಷದ ವಾದಕ್ಕೆ ಐವತ್ತು ರೂಪಾಯಿ ಶುಲ್ಕ ಪಡೆಯುವ ನಾನು ಮತ್ತು  ಎರಡು ರೂಪಾಯಿ ಕೂಲಿಗೆ ದಿನವಿಡಿ ಬಿಸಿಲಿನಲ್ಲಿ ದುಡಿಯುವ ಕೂಲಿಗಾರ ಇವುಗಳ ನಡುವೆ ಇಷ್ಟೊಂದು ಅಂತರವೇಕೆ? ಇಂತಹ ಅನೇಕ ಪ್ರಶ್ನೆಗಳಿಗೆ ಅವರು ಗಾಂಧಿಯವರ ಚಿಂತನೆಗಳಲ್ಲಿ ಉತ್ತರ ಕಂಡುಕೊಂಡರು. ಗಾಂಧೀಜಿವರು ವಾರ್ಧ ಬಳಿ ಸೇವಾಗ್ರಾಮ ಆರಂಭಿಸಿದಾಗ  ವಕೀಲಿ ವೃತ್ತಿ ತ್ಯಜಿಸಿ ಸೇವಾಗ್ರಾಮ ಸೇರಿಕೊಂಡರು. ಒಮ್ಮೆ ಬ್ರಿಟೀಷ್ ಯೋಧನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಬಾಲಕಿಯನ್ನು ಅಮ್ಟೆಯವರು ರಕ್ಷಿಸಿದ್ದರು. ಈ ವಿಷಯ ತಿಳಿದ ಗಾಂಧೀಜಿಯವರು ಬಾಬಾ ಅಮ್ಟೆಯವರಿಗೆ “ ಅಭಯ್ ರಕ್ಷಕ್” ಎಂಬ ಬಿರುದು ನೀಡಿ, ಪ್ರೀತಿಯಿಂದ ಅವರನ್ನು ಅದೇ ಹೆಸರಿನಿಂದ ಕರೆಯುತ್ತಿದ್ದರು.

ಗಾಂಧೀಜಿಯವರ ಸನೀಹದಲ್ಲಿ ಗ್ರಾಮಭಾರತದ ಬಗ್ಗೆ ಮತ್ತು ದೀನ ದಲಿತರ ಬಗ್ಗೆ ಸೃಷ್ಟ ಆಲೋಚನೆಗಳನ್ನು ಕಂಡುಕೊಂಡ ಬಾಬಾ ಆಮ್ಟೆಯವರು, ಸ್ವಾತಂತ್ರ್ಯಾ ನಂತರ ಅಂದರೆ 1949 ರ ಆಗಸ್ಟ್ ಹದಿನೈದರಂದು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆನಂದವನ ಎಂಬ ಹೆಸರಿನಲ್ಲಿ ಆಶ್ರಮ ತೆರೆದು, ಕುಷ್ಟರೋಗಿಗಳ ಹಾರೈಕೆ, ಬಡವರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಗುಡಿಕೈಗಾರಿಕೆ ತರಬೇತಿ ಕೇಂದ್ರ ಸ್ಥಾಪಿಸಿದರು. ಆಶ್ರಮ ಸ್ಥಾಪನೆಗೆ ಪ್ರೇರಣೆಯಾದ ಸಂಗತಿಯೊಂದನ್ನು ಬಾಬಾ ಅಮ್ಟೆ ಈ ರೀತಿ ಹೇಳಿಕೊಂಡಿದ್ದಾರೆ. “ ಒಂದು ದಿನ ರಸ್ತೆ ಬದಿಯಲ್ಲಿ ಮುದುಡಿ ಬಿಸಾಡಿದ ಕಂಬಳಿಯೊಂದರಲ್ಲಿ ಜೀವವೊಂದು ಉಸಿರಾಡುತ್ತಿತ್ತು. ಹೋಗಿ ನೋಡಿದಾಗ, ಕುಷ್ಟ ರೋಗದಿಂದ ಕೈ ಕಾಲಿನ ಬೆರಳುಗಳನ್ನು ಕಳೆದುಕೊಂಡು, ಕೇವಲ ಮೂಗಿನ ಒಳ್ಳೆಗಳಷ್ಟೇ ಕಾಣುತ್ತಿದ್ದ ಪುರುಷ ಜೀವವೊಂದು ಬಿಸಿಲು-ಮಳೆ- ಚಳಿಯ ನಡುವೆ ಉಸಿರಾಡುತ್ತಿತ್ತು. ಆ ಜೀವ ಮಲಗಿದ್ದ ಜಾಗದಲ್ಲಿ ಬಿದಿರಿನ ಗಳಗಳನ್ನು ನೆಟ್ಟು ಹೊದಿಕೆ ಹೊದಿಸಿ ನೆರಳು ಕಲ್ಪಿಸಿಕೊಟ್ಟೆ. ತಿನ್ನಲು ಆಹಾರ, ಕುಡಿಯಲು ನೀರು ಕೊಟ್ಟು, ಆತನನ್ನು ಉಪಚರಿಸಲು ಪ್ರಯತ್ನಿಸಿದೆ. ಆದರೆ, ತುಳಸಿರಾಂ ಎನ್ನುವ ಆ ಜೀವ ನನ್ನ ತೋಳಿನಲ್ಲಿ ಪ್ರಾಣ ಬಿಟ್ಟಿತು. ಆತನ ಸಾವು ಹಲವು ತಿಂಗಳ ಕಾಲ ನನ್ನನ್ನು ಎಡಬಿಡದೆ ಕಾಡಿತು. ಅಂತಿಮವಾಗಿ ಕುಷ್ಟ ರೋಗಿಗಳ ಶುಶ್ರೂಷೆಗೆ ನನ್ನ ಬದುಕನ್ನು ಮುಡಿಪಾಗಿಟ್ಟೆ” ಬಾಬಾ ಅಮ್ಟೆಯವರ ಈ ಮಾತುಗಳು ನನಗೆ ಮನುಕುಲಕ್ಕೆ ಬರೆದ ಭಾಷ್ಯವೇನೋ ಎಂಬಂತೆ ತೋರುತ್ತವೆ.
ಇಂದು ಆನಂದ ವನ ಬೃಹತ್ ಸೇವಾ ಕೇಂದ್ರವಾಗಿ ಬೆಳೆದು ನಿಂತಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಡ, ಈ ಮೂರು ರಾಜ್ಯಗಳ ನಡುವಿನ ಗಡಿ ಪ್ರದೇಶದಲ್ಲಿರುವ ಆನಂದವನ, ಮಹಾರಾಷ್ಟರದ ಚಂದ್ರಾಪುರ, ಗೊಂಡಿಯ, ಭಂಡಾರ ಜಿಲ್ಲೆಗಳು, ಮಧ್ಯಪ್ರದೇಶದ ಬಾಳ್ ಗಾಟ್, ಛತ್ತೀಸ್ ಗಡದ ರಾಯ್ ಪುರ್, ಬಿಲಾಸ್ ಪುರ್ ಜಿಲ್ಲೆಗಳ ಅರಣ್ಯದಲ್ಲಿ ಬದುಕುತ್ತಿರುವ ಲಕ್ಷಾಂತರ ಅರಣ್ಯವಾಸಿಗಳ ಪಾಲಿಗೆ ಸಂಜೀವಿನಿಯಾಗಿದೆ. ಅವರ ಪತ್ನಿ ಸಾಧನಾ ಅಮ್ಟೆಯವರ ಬೆಂಬಲದಿಂದ ಬೃಹತ್ ಸಂಸ್ಥೆಯಾಗಿ ಬೆಳೆದ ಆನಂದವನ ಈಗ  ಅವರ ಮಕ್ಕಳಾದ ಡಾ.ವಿಕಾಸ್ ಮತ್ತು ಡಾ.ಪ್ರಕಾಶ್ ಅಮ್ಟೆ ಹಾಗೂ ಸೊಸೆಯಂದಿರಾದ ಡಾ. ಮಂದಾಕಿನಿ, ಡಾ.ಭಾರತಿ ಇವರ ತ್ಯಾಗಮಯ ಜೀವನದಿಂದ ದಂಡಕಾರಣ್ಯದಲ್ಲಿ ಬಡವರ ಮತ್ತು ಆದಿವಾಸಿಗಳ ಪಾಲಿಗೆ ಬದುಕಿನ ದಾರಿದೀಪವಾಗಿದೆ.


ಮೂರು ವರ್ಷದ ಹಿಂದೆ ನಕ್ಸಲ್ ಕಥನದ ಅಧ್ಯಯನಕ್ಕಾಗಿ ಈ ಪ್ರದೇಶದಲ್ಲಿ ಓಡಾಡುತ್ತಿದ್ದಾಗ, ನಾಗಪುರದ ಟೈಮ್ಸ್ ಆಫ್ ಇಂಡಿಯ ಪತ್ರಿಕೆಯ ವರದಿಗಾರ ಮಿತ್ರನ ಜೊತೆ ಆನಂದವನಕ್ಕೆ ಬೇಟಿ ನೀಡಿ ಗಾಂಧೀಜಿಯ ಚಿಂತನೆ ಜೀವಂತವಾಗಿರುವುದನ್ನು ಕಂಡು ಮೂಕನಾಗಿದ್ದೆ. ಒಬ್ಬ ವ್ಯಕ್ತಿಯಲ್ಲಿ ನಿರ್ಧಿಷ್ಟ ಗುರಿ ಮತ್ತು ಛಲಗಳಿದ್ದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಬಾಬಾ ಅಮ್ಟೆಯವರ ಸಾಧನೆಗಳನ್ನು ನಮ್ಮ ಮುಂದಿವೆ. ಈ ದೇಶದ ಭಾರತ ರತ್ನ ಪ್ರಶಸ್ತಿಯನ್ನು ಹೊರತು ಪಡಿಸಿ, ಬಹುತೇಕ ಪ್ರಶಸ್ತಿಗಳು, ಎಂಟು ವಿಶ್ವ ವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಪದವಿ, ರಾಮನ್ ಮ್ಯಾಗ್ಸಸೆ, ಹಾಗೂ ವಿಶ್ವಸಂಸ್ಥೆಯ ಪ್ರಶಸ್ತಿಗಳನ್ನು ಪಡೆದ ಬಾಬಾ ರವರು ತಮ್ಮ ಇಳಿವಯಸ್ಸಿನಲ್ಲಿ ಬೆನ್ನುಮೂಳೆ ಮುರಿತದಿಂದ  ಹಿನ್ನಡೆ ಅನುಭವಿಸಿದರು. ಆನಂದವನದಲ್ಲಿ ಸದಾ ಕೂಲಿಕಾರರ ಮಕ್ಕಳ ಜೊತೆ ಆಟವಾಡುವುದು, ಅರಣ್ಯದ ಪ್ರಾಣಿಗಳನ್ನು ಸಾಕಿ ಅವುಗಳ ಶುಶ್ರೂಷೆ ಮಾಡುವುದು ಅವರ ಮೆಚ್ಚಿನ ಹವ್ಯಾಸವಾಗಿತ್ತು. 2008 ರ ಪೆಬ್ರವರಿ 9 ರಂದು ಭಾಬಾ ಅಮ್ಟೆ ನಿಧನರಾದರು. ಆದರೆ ಅವರ ಕನಸುಗಳು ಇಂದಿಗೂ ಅವರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮೂಲಕ ಮುಂದುವರಿದು ಸಾಕಾರಗೊಳ್ಳುತ್ತಿವೆ. 


ಬಾಬಾ ಅಮ್ಟೆಯವರ ಮೊಮ್ಮಗ ಕೌಸ್ತುಭ ಎಂಬ ಯುವಕ ಗುಡಿಕೈಗಾರಿಕೆಗಳ ಚಟುವಟಿಕೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತಿದ್ದರೆ. ಪ್ರಕಾಶ್ ಅಮ್ಟೆ ಮತ್ತು ವಿಕಾಸ್ ಅಮ್ಟೆ ಹಾಗೂ ಅವರ ಪತ್ನಿಯರು ಆಸ್ಪತ್ರೆ ಮತ್ತು ಆಶ್ರಮಗಳ ಹೊಣೆ ಹೊತ್ತಿದ್ದಾರೆ. ಇತ್ತೀಚೆಗೆ ಅಂದರೆ ಅಕ್ಟೋಬರ್ ತಿಂಗಳಿನಲ್ಲಿ ಮರಾಠಿ ಭಾಷೆಯಲ್ಲಿ ಬಾಬಾ ಅವರ ಪುತ್ರ ಪ್ರಕಾಶ್ ಅಮ್ಟೆಯವರ ಜೀವನ ಕುರಿತು ಸಿನಿಮಾ ತೆರೆಕಂಡಿದೆ. ನಾನಾಪಾಟೇಕರ್ ಪ್ರಕಾಶ್ ಅಮ್ಟೆ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈ ವರ್ಷದ ಯಶಸ್ವಿ ಮರಾಠಿ ಸಿನಿಮಾಗಳಲ್ಲಿ ಒಂದಾಗಿದ್ದು ಇದರಲ್ಲಿ ಬಾಬಾ ಅಮ್ಟೆಯವರ ಜೀವನ ಸಂದೇಶಗಳನ್ನೂ ಸಹ ನಾವು ಕಾಣಬಹುದಾಗಿದೆ.

ಮಂಗಳವಾರ, ಡಿಸೆಂಬರ್ 23, 2014

ಆಂಧ್ರ ದಲಿತ ಸಾಹಿತ್ಯದ ಹೊಸಬೆಳಕು- ಸತ್ಯನಾರಾಯಣ




ಭಾರತೀಯ ಸಾಹಿತ್ಯಕ್ಕೆ ಆತ್ಮ ಕಥನಗಳ ಮೂಲಕ ಹೊಸ ಸಂವೇದನೆ ಮತ್ತು ದೃಷ್ಟಿಕೋನವನ್ನು ನೀಡಿದ ಮರಾಠಿ ಭಾಷೆಯ ದಲಿತ ಮತ್ತು ಹಿಂದುಳಿದ ಜನಾಂಗದ ಆತ್ಮ ಕಥೆಗಳು ಇತರೆ ಭಾಷೆ ಮತ್ತು ಲೇಖಕರ ಮೇಲೆ ಅಗಾಧ ಪರಿಣಾಮವನ್ನು ಬೀರಿರುವುದನ್ನು ನಾವು ತಳ್ಳಿ ಹಾಕುವಂತಿಲ್ಲ. ಜೊತೆಗೆ ಆಯಾ ಭಾಷೆಯಲ್ಲಿನ ಹೊಸ ಸಾಹಿತ್ಯದ ಸೃಷ್ಟಿ ಮತ್ತು ಸೃಜನಶೀಲತೆಗೆ ಪರೋಕ್ಷವಾಗಿ ಕಾರಣವಾದವು. ಹಾಗಾಗಿ ಕಳೆದೊಂದು ದಶಕದಿಂದ ಕನ್ನಡ, ತೆಲುಗು, ತಮಿಳು ಸಾಹಿತ್ಯದಲ್ಲಿ ದಮನಿತರ ಲೋಕದ ಅನುಭವಗಳು ಆತ್ಮಕಥಾನಕದ ಮೂಲಕ ಅನಾವರಣಗೊಂಡು  ಈವರೆಗೆ ನಾವು ಕಾಣದ, ಕೇಳಿರದ ನರಕ ಸದೃಶ್ಯ ಲೋಕವೊಂದು ನಮ್ಮೆದುರು ಬಿಚ್ಚಿಕೊಳ್ಳುವುದರ ಜೊತೆಗೆ, ನಾವು ಬದುಕುತ್ತಿರುವ ವರ್ತಮಾನದ ಜಗತ್ತಿನಲ್ಲಿ ಇಂತಹದ್ದೊಂದು ಅಮಾನವೀಯ ಮತ್ತು ಕ್ರೌರ್ಯದ ಲೋಕ ಕೂಡ ಇತ್ತೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿವೆ. ಅಂತಹದೊಂದು ಆತ್ಮ ಕಥೆಯನ್ನು ಆಂಧ್ರದ ದಲಿತ ಕುಟುಂಬದಿಂದ ಬಂದ ನನ್ನ ಆತ್ಮೀಯ ಗೆಳಯರೂ ಆಗಿರುವ  ವೈ.ಬಿ. ಸತ್ಯನಾರಾಯಣರವರು ಇಂಗ್ಲೀಷ್ ಭಾಷೆಯಲ್ಲಿ ಬರೆದಿರುವಮೈ ಪಾದರ್ ಬಾಲಯ್ಯಆತ್ಮ ಕಥೆ ಈಗಾಗಲೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚಲನವನ್ನುಂಟು ಮಾಡಿದೆ.



                                                         (ಲೇಖಕರ ತಂದೆ ಬಾಲಯ್ಯ)

ಹೈದರಾಬಾದ್ ಉಸ್ಮಾನಿಯ ವಿಶ್ವ ವಿದ್ಯಾಲಯದಿಂದ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ. ಪದವಿ ಪಡೆದು ಮೂರು ದಶಕಗಳ ಕಾಲ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸಿರುವ ವೈ.ಬಿ.ಸತ್ಯನಾರಾಯಣ ಅವರು ಡಾ. ಅಂಬೇಡ್ಕರ್ ಅವರ ಕಟ್ಟಾ ಹಿಂಬಾಲಕರು ಮತ್ತು ಅವರ ಚಿಂತನೆಗಳ ಆರಾಧಕರು. ಕಳೆದ ಇಪ್ಪತ್ತೈದು ವರ್ಷಗಳಿಂದ ತೆಲುಗು ದಲಿತ ಸಾಹಿತ್ಯ  ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡವರಲ್ಲಿ ಪ್ರಮುಖರು. 2006 ರಲ್ಲಿ ಸಾವಿರಾರು ದಲಿತರ ಜೊತೆಗೂಡಿ ಹಿಂದೂ ಧರ್ಮವನ್ನು ತ್ಯಜಿಸಿ, ಬೌದ್ಧ ಧರ್ಮವನ್ನು ಅಪ್ಪಿಕೊಂಡ ಸತ್ಯನಾರಾಯಣರು ಸಿಕಂದರಾಬಾದ್ ನಗರದಲ್ಲಿ ವಾಸವಾಗಿದ್ದು, ಹೈದರಾಬಾದ್ ನಗರದಲ್ಲಿರುವದಲಿತ ಅಧ್ಯಯನ ಕೇಂದ್ರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನನ್ನಪ್ಪ ಬಾಲಯ್ಯಎಂಬ ವೈ.ಬಿ.ಸತ್ಯನಾರಾಯಣರ ಆತ್ಮ ಕಥನ ಆಂಧ್ರದ ಮಾದಿಗ ಜನಾಂಗದ ಮೂರು ತಲೆಮಾರುಗಳ ಹೋರಾಟದ ಕಥೆಯನ್ನು ಒಳಗೊಂಡಿರುವ ಅಪರೂಪದ ಕೃತಿ. ಐದು ವರ್ಷಗಳ ಹಿಂದೆ ಅಮೇರಿಕಾದಲ್ಲಿರುವ ತನ್ನ ಪುತ್ರಿಯ ಮನೆಗೆ ಹೋದಾಗ, ಮುದ್ದಾದ  ಮೊಮ್ಮಗಳನ್ನು ನೋಡಿ ಸ್ಪೂರ್ತಿಗೊಂಡ ಲೇಖಕರು, ಮುಂದಿನ ದಿನಗಳಲ್ಲಿ ನನ್ನ ಮೊಮ್ಮಗಳು ಅಮೇರಿಕಾದ ಇತಿಹಾಸ ಮತ್ತು  ಕರಿಯರ ಹೋರಾಟದ ಕಥನವನ್ನು ಓದುತ್ತಾಳೆ. ಅವಳು ಕಥೆಯ ಜೊತೆಗೆ ಕರಿಯರಿಗಿಂತ ಕೀಳಾಗಿ ಬದುಕಿದ  ತನ್ನ ಕುಟುಂಬದ ಹಿರಿಯರ ಬಲಿದಾನದ ಕಥನವನ್ನು ಓದಲಿ ಎಂಬ ಆಸೆಯಿಂದ ಕೃತಿಯನ್ನು ರಚಿಸಿದೆ ಎಂದು ದಾಖಲಿಸಿದ್ದಾರೆ. (ಇಂಡಿಯ ಟುಡೆ ಪತ್ರಿಕಾ ಬಳಗದ ಹಾರ್ಪರ್ಸ್ ಕಾಲಿನ್ ಲಿಮಿಟೆಡ್ ನವದೆಹಲಿ ಸಂಸ್ಥೆಯು 2011ರಲ್ಲಿ ಕೃತಿಯನ್ನು   ಪ್ರಕಟಿಸಿದೆಬಡತನ, ಹಸಿವು, ಅಪಮಾನ, ಕ್ರೌರ್ಯ ಇವುಗಳಿಗೆ ಭಾಷೆ, ಜಾತಿ ಅಥವಾ ಪ್ರಾದೇಶಿಕತೆಯ ಹಂಗಿಲ್ಲ ಎಂಬ ಸಂದೇಶವನ್ನು ಸಾರುವ ಕೃತಿಯಲ್ಲಿ  ಲೇಖಕರ ತಾತ ನರಸಯ್ಯ ಎಂಬಾತ ಬಾಲಕನಾಗಿದ್ದ ತನ್ನ ಪುತ್ರ ಬಾಲಯ್ಯನೊಂದಿಗೆ(ಲೇಖಕರ ತಂದೆ) ಹುಟ್ಟಿದ ಊರಾದ ಕರೀಂ ನಗರ ಜಿಲ್ಲೆಯ ವೆಂಗಪಲ್ಲಿಯನ್ನು ತೊರೆಯುವ ಹೃದಯ ವಿದ್ರಾವಕ ಸನ್ನಿವೇಶದೊಂದಿಗೆ  ಕಥೆ  ಆರಂಭವಾಗುತ್ತದೆ


ನರಸಯ್ಯ ಸತ್ತು ಹೋದ ತನ್ನ ಪತ್ನಿಯ ಶವವನ್ನು ಹೆಗಲಿಗೆ ಬಟ್ಟೆಯೊಂದರಲ್ಲಿ ಗಂಟಿನಂತೆ ಕಟ್ಟಿಕೊಂಡು, ತನ್ನ ಮಗ ಬಾಲಕ  ಬಾಲಯ್ಯನನ್ನು ( ಲೇಖಕರ ತಂದೆ) ಕೈ ಹಿಡಿದು ಕೊಂಡು ಇಳಿ ಸಂಜೆಯಲ್ಲಿ  ಊರು ತೊರೆದು ನದಿ ತೀರದಲ್ಲಿ ನಡುರಾತ್ರಿಯಲ್ಲಿ  ಏಕಾಂಗಿಯಾಗಿ ಪತ್ನಿಯ ಶವಸಂಸ್ಕಾರ ಮಾಡುತ್ತಾನೆ. ನಂತರ ತಾಯಿಯಿಲ್ಲದ ತಬ್ಬಲಿ ಮಗನ ಜೊತೆ ರಘುನಾಥಪಲ್ಲಿ ಎಂಬ ಊರಿನಲ್ಲಿದ್ದ ರೈಲ್ವೆ ನಿಲ್ದಾಣಕ್ಕೆ ಬಂದು ಪರಿಚಿತ ಗೆಳೆಯನ ಮೂಲಕ ಕೂಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾನೆ. ಗೂಡ್ಸ್ ಗಾಡಿಗಳಿಗೆ ಧವಸ ಧಾನ್ಯಗಳು ಮತ್ತು ಕಲ್ಲಿದ್ದಲು ತುಂಬುವ ದಿನಗೂಲಿಯಾಗಿ ಬದುಕು ಕಟ್ಟಿಕೊಳ್ಳುವ ಮೂಲಕ ಕಾಲದ ಬ್ರಿಟೀಷ್ ಅಧಿಕಾರಿಗಳ ಕೈ ಕೆಳೆಗೆ ದುಡಿದ ನರಸಯ್ಯ, ಪ್ರಥಮ ಬಾರಿಗೆ  ಅಸ್ಪøಶ್ಯತೆಯ ಬೇಡಿಯಿಂದ  ಕಳಚಿಕೊಳ್ಳುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಸ್ವಾತಂತ್ರ್ಯ ಪೂರ್ವದ ಆಂಧ್ರ ಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ಇದ್ದ ಆಚರಣೆಗಳು, ಹಳ್ಳಿಗಳ ರಚನೆ, ಗ್ರಾಮದೇವತೆಯ ಹಬ್ಬಗಳು, ಹೊಲೆ ಮಾದಿಗರೆನಿಸಿಕೊಂಡ ಮನುಷ್ಯರು ಕಮ್ಮ ಜಾತಿಯ ಜಮೀನ್ದಾರರರ ಕೈಯಲ್ಲಿ ನರಳಿದ ಹೃದಯ ವಿದ್ರಾವಕ ಘಟನೆಗಳು ಆತ್ಮ ಕಥನದಲ್ಲಿ ಪರಿಣಾಮಕಾರಿಯಾಗಿ ದಾಖಲಾಗಿವೆ.
ಲೇಖಕರ ಮುತ್ತಾತ ಚಮ್ಮಾರ ನರಸಯ್ಯ ಇಡೀ ಹಳ್ಳಿಯಲ್ಲಿ ದಲಿತರ ನಡುವೆ ತನ್ನ ನಡೆ ನುಡಿಗಳಿಂದ ಹೆಸರಾಗಿದ್ದವನು. ಒಮ್ಮೆ ಹೈದರಾಬಾದಿನ ನಿಜಾಮ ತನ್ನ ಕುದುರೆ ಸಾರೋಟಿನಲ್ಲಿ ವೆಂಗಪಲ್ಲಿ ಹಳ್ಳಿಯನ್ನು ಹಾಯ್ದು ಹೋಗುವ ಕಾರ್ಯಕ್ರಮದ ವಿಷಯ ತಿಳಿದ ನರಸಯ್ಯ, ನಿಜಾಮನಿಗಾಗಿ ಆಗ ತಾನೆ ಹುಟ್ಟಿ ಸತ್ತು ಹೋಗಿದ್ದ ಕರುವಿನ ಮೃದುವಾದ  ಚರ್ಮದಿಂದ ಒಂದು ಜೊತೆ ಸುಂದರ ವಾದ ಚಪ್ಪಲಿಗಳನ್ನು  ತಯಾರಿಸಿ, ತನ್ನ ಹೆಗಲ ಮೇಲಿನ ಕರವಸ್ತ್ರದಲ್ಲಿ ಇಟ್ಟುಕೊಂಡು ಕೊಂಡೊಯ್ದು ನಿಜಾಮನಿಗೆ ಉಡುಗೊರೆ ಯಾಗಿ ಅರ್ಪಿಸುತ್ತಾನೆ. ಚಪ್ಪಲಿಯನ್ನು ಕಾಲಿಗೆ ಧರಿಸಿ ನೋಡಿದ ನಿಜಾಮನಿಗೆ ಅವುಗಳ ನಿಖರವಾದ ಳತೆ ಮತ್ತು ಕಲಾತ್ಮಕತೆಯಿಂದ ಕೂಡಿದ ತಯಾರಿಕೆಯನ್ನು ಖುಷಿಯಾಗುತ್ತದೆಸಂತಸಗೊಂಡ ನಿಜಾಮನು ಸ್ಥಳದಲ್ಲೇ ಅಧಿಕಾರಿಗಳಿಗೆ ತಾಕೀತು ಮಾಡಿ ಚಮ್ಮಾರ ನರಸಯ್ಯನಿಗೆ  ಐವತ್ತು ಎಕರೆ ಜಮೀನನ್ನು ಉಡುಗೊರೆಯಾಗಿ ಮಂಜೂರು ಮಾಡುತ್ತಾನೆ.


ವಿಷಯ ತಿಳಿದ ಊರಿನ ಜಮೀನ್ದಾರ ನರಸಯ್ಯನನ್ನು ಮನೆಗೆ ಕರೆಸಿಮಾದಿಗ ಸೂಳೆ ಮಗನೆ ಜಮೀನು ಪಡೆಯಲು ನಿನಗೆ ಯಾವ ಹಕ್ಕು ಕೊಟ್ಟವರು ಯಾರು? ಎಂದು ಬೆದರಿಕೆ ಹಾಕಿ ಐವತ್ತು ಎಕರೆ ಜಮೀನಿನಲ್ಲಿ ಎರಡು ಎಕರೆ ಹೊರತು ಪಡಿಸಿ ಉಳಿದ ನಲವತ್ತೆಂಟು ಎಕರೆ ಜಮೀನಿಗೆ ನರಸಯ್ಯನಿಂದ ಹೆಬ್ಬೆಟ್ಟಿನ ಸಹಿ ಪಡೆದು ತನ್ನದಾಗಿಸಿಕೊಳ್ಳುತ್ತಾನೆ. ನರಸಯ್ಯನಿಗೆ ಜಮೀನು ಕಳೆದುಕೊಂಡ ಬಗ್ಗೆ ಯಾವುದೇ ನೋವಾಗಲಿಲ್ಲ ಬದಲಾಗಿ, ದಿನ ನನ್ನನ್ನು ಕಂಬಕ್ಕೆ ಕಟ್ಟಿ ಜಮೀನ್ದಾರ ಹೊಡೆಯಲಿಲ್ಲ ಎಂಬ ಖುಷಿಯೇ ಹೆಚ್ಚಾಯಿತು. ವೇಳೆಗಾಗಲೇ ಚಮ್ಮಾರ ನರಸಯ್ಯನ ಮಗ ನರಸಯ್ಯ ( ಲೇಖಕರ ತಾತನ ಹೆಸರು ಕೂಡ ನರಸಯ್ಯ) ಜಮೀನ್ದಾರನ ಮನೆಯಲ್ಲಿ ಜೀತದಾಳು ಆಗಿ ಕೆಲಸ ಮಾಡುತ್ತಿರುತ್ತಾನೆ. ಮೇಲ್ಜಾತಿಯವರನ್ನು ಹೊರತು ಪಡಿಸಿ ದಲಿತರು, ಹಿಂದುಳಿದವರು ಜಮೀನು ಹೊಂದುವುದು, ವ್ಯವಸಾಯ ಮಾಡುವುದು ಕಾಲದ ತೆಲಂಗಾಣ ಪ್ರಾಂತ್ಯದಲ್ಲಿ  ಅಪರಾಧ ಎಂಬ ಅಲಿಖಿತ ಕಾನೂನು ಜಾರಿಯಲ್ಲಿತ್ತು. ಇಂತಹ ಅಸಹನೀಯ ವಾತಾವರಣದಲ್ಲಿ ಚಮ್ಮಾರ ನರಸಯ್ಯ ಮತ್ತು ಆತನ ಪತ್ನಿ ಪೋಚಮ್ಮ ಧಣಿಯ ಮನೆಯಲ್ಲಿ ಮಗ ನರಸಯ್ಯನನ್ನು ಜೀತದಾಳು ಕೆಲಸಕ್ಕೆ ಇರಿಸಿ, ತಾವು ಹೊಲದಲ್ಲಿ ಪುಕ್ಕಟೆಯಾಗಿ ದುಡಿಯುತ್ತಿದ್ದರು. ಫಸಲು ಬಂದ ಸಮಯದಲ್ಲಿ ಧಣಿ ನೀಡುತ್ತಿದ್ದ ಕೆಲವು ಬುಟ್ಟಿಗಳಷ್ಟು ಬತ್ತ ಮತ್ತು ಜೋಳ ಅವರ ಪಾಲಿಗೆ ಆಹಾರ ಮತ್ತು ಕೂಲಿಯ ಪ್ರತಿಫಲವಾಗಿತ್ತು.
ಇಂತಹ ನರಕದ ಬದುಕಿನಿಂದ ಪಾರಾಗಲು ಜೀತದಾಳಾಗಿ ದುಡಿಯುತ್ತಿದ್ದ ಲೇಖಕರ ತಾತ ನರಸಯ್ಯ, ಮುಂದಿನ ದಿನಗಳಲ್ಲಿ ತನ್ನ ತಂದೆ ಮತ್ತು ತಾಯಿ ನಿಧಾನಾನಂತರ ಊರು ತೊರೆಯಲು ಯೋಚಿಸುತ್ತಾ ಇರುತ್ತಾನೆ. ಆಕಸ್ಮಿಕವೆಂಬಂತೆ ನಂತರದ ದಿನಗಳಗಳಲ್ಲಿ ತನ್ನ ಪತ್ನಿ ಅಬ್ಬಮ್ಮನ ಅಕಾಲಿಕ ಸಾವಿನ ನಂತರ, ಇದ್ದ ಎರಡು ಎಕರೆ ಜಮೀನನ್ನು ಹಾಗೇ ಬಿಟ್ಟು ಮಗನ ಜೊತೆ  ಊರು ತೊರೆಯುತ್ತಾನೆ.
ಹುಟ್ಟಿದ ಊರು  ತೊರೆದ ನರಸಯ್ಯ, ತನ್ನ ಮಗ ಬಾಲಕ ಬಾಲಯ್ಯನನ್ನು ರೈಲು ನಿಲ್ದಾಣಗಳಲ್ಲಿ ಬೆಳಸುತ್ತಾ, ಮುಂದೆ ಆತನಿಗೂ ಬ್ರಿಟೀಷ್ ಅಧಿಕಾರಿಗಳ ಕೈ  ಕಾಲು ಹಿಡಿದು  ರೈಲ್ವೆ ಇಲಾಖೆಯಲ್ಲಿ ಕೂಲಿ ಕೆಲಸ ಕೊಡಿಸುತ್ತಾನೆ. ಹೀಗೆ ಆಂಧ್ರ ಪ್ರದೇಶದಲ್ಲಿ ಹಲವಾರು ನಿಲ್ದಾಣಗಳಲ್ಲಿ ಕೂಲಿಯಾಳಾಗಿ ದುಡಿದು ಅಂತಿಮವಾಗಿ ಸಿಕಂದರಬಾದ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುವ ಬಾಲಯ್ಯ ಕೂಲಿ ಕಾರ್ಮಿಕರ ಗುಡಿಸಲಿನಲ್ಲಿ ಬದುಕುತ್ತಾ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾನೆ.
ಲೇಖಕರು ತಮ್ಮ ಆತ್ಮ ಕಥನದಲ್ಲಿ ತನ್ನ ತಂದೆಯ ಆದರ್ಶಗಳನ್ನು ಹೀಗೆ ಬಣ್ಣಿಸುತ್ತಾರೆ. “ ನನ್ನ ಅಪ್ಪ ಬಾಲÀಯ್ಯ ಅಂಬೇಡ್ಕರ್ ಅವರನ್ನು ಓದಿಕೊಂಡಿರಲಿಲ್ಲ, ಅನಕ್ಷರಸ್ತನಾಗಿದ್ದ ಅಪ್ಪನಿಗೆ ಅಂಬೇಡ್ಕರ್ ಪ್ರತಿಪಾದಿಸಿದ್ದಶಿಕ್ಷಣವೊಂದೇ ಅಸ್ಪøಶ್ಯತೆ ಮತ್ತು ಅಪಮಾನ, ಬಡತನಗಳಿಂದ ಪಾರಾಗಲು ದಲಿತರಿಗೆ ಇರುವ ಏಕೈಕ ಮಾರ್ಗಎಂಬ ವಿಚಾರವೂ ತಿಳಿದಿರಲಿಲ್ಲ. ಆದರೆ, ನನ್ನ ಮಕ್ಕಳು ರೈಲ್ವೆ ಅಧಿಕಾರಿಗಳ ಮಕ್ಕಳಂತೆ ಒಳ್ಳೆಯ ಶಾಲೆಗಳಲ್ಲಿ ಓದಬೇಕು ಮತ್ತು ರೈಲ್ವೆ ಇಲಾಖೆಯಲ್ಲಿ ಗುಮಾಸ್ತರಾಗಿ, ಇಲ್ಲವೆ ಸ್ಟೇಶನ್ ಮಾಸ್ಟರ್ ಗಳಾಗಿ ದುಡಿಯಬೇಕು. ಇವಿಷ್ಟೇ ಆತನ ಕನಸುಗಳಾಗಿದ್ದವು. ರೈಲ್ವೆ ಇಲಾಖೆಯೇ ಪ್ರಪಂಚವಾಗಿದ್ದ ನನ್ನಪ್ಪ ಎಂದೂ ನನ್ನ ಮಕ್ಕಳು ..ಎಸ್. ಅಥವಾ ಡಾಕ್ಟರ್ ಇಲ್ಲವೆ ಇಂಜಿನಿಯರ್ ಆಗಬೇಕೆಂದು ಕನಸು ಕಂಡವನಲ್ಲ.





ಜೀತದ ಬದುಕಿನಿಂದ ಬಸವಳಿದು, ಭಾರತೀಯ ರೈಲ್ವೆ ಇಲಾಖೆಯಲ್ಲಿ  ಕೂಲಿ ಮಾಡುತ್ತಾ, ಊರಿಂದ ಊರಿಗೆ ಅಲೆದು, ಸ್ವಾತಂತ್ರ್ಯ ಪಡೆಯುವ ಹಾಗೂ ಆಧುನಿಕ ಶಿಕ್ಷಣದಿಂದ ಜಾತಿ, ಅಪಮಾನಗಳನ್ನು ಮೀರಿ ಬೆಳೆಯುವ ಒಂದು ದಲಿತ ಕುಟುಂಬದ ಮೂರು ತಲೆಮಾರುಗಳ ಆತ್ಮ ಕಥನದಲ್ಲಿ ಮೊದಲ ಭಾಗದಲ್ಲಿ ತನ್ನ ತಂದೆ, ತಾತ, ಮುತ್ತಾತ ಇವರ ಕಥೆಯಿದ್ದರೆ, ಎರಡನೆಯ ಭಾಗದಲ್ಲಿ ಸಿಕಂದರಬಾದ್ ನಗರದಲ್ಲಿ ನಾಲ್ಕನೆಯ ತರಗತಿಗೆ ಶಾಲೆಗೆ ದಾಖಲಾಗುವ ಘಟನೆಯ ಮೂಲಕ ಲೇಖಕರ ಆತ್ಮ ಕಥೆ ಸ್ವಗತ ಶೈಲಿಯಲ್ಲಿ ಆರಂಭವಾಗುತ್ತದೆ.

 ಇತ್ತೀಚೆಗಿನ ದಿನಗಳಲ್ಲಿ ಆತ್ಮಕಥೆಗಳು ಅತಿಯಾದ ಆತ್ಮರತಿ ಇಲ್ಲವೆ ಓದುಗರ ಅನುಕಂಪ ಗಿಟ್ಟಿಸುವ ಶೈಲಿಯಲ್ಲಿ ಸೃಷ್ಟಿಯಾಗುತ್ತಿರುವುದು ವಿಪರ್ಯಾಸ. ಆದರೆ, ಎರಡು ಶೈಲಿಯನ್ನು ತೊರೆದು ಅತ್ಯಂತ ನಿರ್ಭಾವುಕ ಶೈಲಿಯಲ್ಲಿ ಕಥನವನ್ನು ಕಟ್ಟಿಕೊಟ್ಟಿರುವ ಲೇಖಕ ವೈ.ಬಿ. ಸತ್ಯನಾರಾಯಣ ಅವರು, ಆತ್ಮ ಕಥನ ಕುರಿತು ಬರೆಯುತ್ತಾ, ಇನ್ನು ಮುಂದೆ ನಾವು ಒಂದಾನೊಂದು ಊರಿನಲ್ಲಿ ಒಬ್ಬ ಬಡ ಬ್ರಾಹಣನಿದ್ದ ಎಂಬ ಕಥೆಯನ್ನು ಓದುವುದನ್ನು ನಿಲ್ಲಿಸೊಣ, ನಮ್ಮದೇ ಆದ ನೋವಿನ ಅಪಮಾನದ ಚರಿತ್ರೆಯನ್ನು  ಬರೆಯೋಣಎಂದಿರುವ ಮಾತುಗಳು ಪ್ರತಿಯೊಂದು  ಶೋಷಿತ ಸಮುದಾಯದಿಂದ ಬಂದು  ಅಕ್ಷರ ಲೋಕಕ್ಕೆ ತೆರೆದುಕೊಂಡ ದಲಿತರಿಗೆ ಮತ್ತು ದಮನಿತರಿಗೆ  ಆತ್ಮವಿಶ್ವಾಸ ತುಂಬುವ ಮಾತುಗಳಂತೆ ತೋರುತ್ತವೆ.