ಭಾನುವಾರ, ಜುಲೈ 31, 2022

ಯಾರಿಗೆ ಬಂತು? ಎಲ್ಲಿಗೆ ಬಂತು? ಎಪ್ಪತ್ತೆöÊದರ ಸ್ವಾತಂತ್ರö್ಯ?

 


 


ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ರಾಷ್ಟ್ರ ಎಂಬ ಅರ್ಧ ಸತ್ಯದ ಬಿರುದನ್ನು ಹೊತ್ತಿರುವ ಭಾರತ ಈಗ ಎಪ್ಪತ್ತೈದರ ಸ್ವಾತಂತ್ರ್ಯದ ಸಂಭ್ರಮದಲ್ಲಿದೆ. ನನ್ನ ಹಿರಿಯ ಮಿತ್ರರಾದ ದಿ. ಸಿದ್ದಲಿಂಗಯ್ಯನವರುಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯಎಂಬ ಕವಿತೆಯನ್ನು ಬರೆದಿದ್ದರು. ಈಗ ಅದೇ ಕವಿತೆಯನ್ನು ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಸಮಯದಲ್ಲಿ ಮತ್ತೇ ಹಾಡಬೇಕಾಗಿದೆ.  ನಾಡಿನೆಲ್ಲೆಡೆ, ಮನೆ ಹಾಗೂ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಭಾರತ್ ಮಾತಾ ಕಿ ಜೈ ಎಂದು ಒಮ್ಮ ಘೋಷಣೆ ಹಾಕಿದರೆ ಸಂಭ್ರಮದ ದಿನಾಚರಣೆಯಿಂದ ನಿಜವಾದ ಸ್ಮರಣೆ ಸಾಧ್ಯವೆ? ಸ್ವಾತಂತ್ರ್ಯಕ್ಕಾಗಿ ಮನೆ ಮಠಗಳನ್ನು ಕಳೆದುಕೊಂಡು ಹೋರಾಡಿ ಅನಾಮಿಕರಂತೆ ಜೀವ ಕಳೆದುಕೊಂಡುವರ ಸ್ಮರಣೆಗಿಂತ ಇತ್ತೀಚೆಗೆ ನಮ್ಮ ಕಣ್ಣ ಮುಂದಿನ ನಕಲಿ ದೇಶಭಕ್ತರ ಭಜನೆ ಮತ್ತು ಆರಾಧನೆ ಮುಗಿಲು ಮುಟ್ಟುತ್ತಿದೆ. ಸ್ವಾತಂತ್ರ್ಯದ ಮೂಲ ಪರಿಕಲ್ಪನೆಗಳಾದ ಅಭಿವ್ಯಕ್ತಿಯ  ಸ್ವಾತಂತ್ರ್ಯ ಮತ್ತು ಧರ್ಮಾತೀತವಾಗಿ ಸ್ವತಂತ್ರವಾಗಿ ಬದುಕುವ ಸ್ವಾತಂತ್ರ್ಯ ಈಗ ಮಣ್ಣು ಪಾಲಾಗಿವೆ   ದೇಶದಲ್ಲಿ ಈಗ ಸಂವಿಧಾನ ಬದ್ಧ ಆಡಳಿತ ಇದೆಯಾ? ಎಂಬ ಪ್ರಶ್ನೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನನ್ನು ಕಾಡತೊಡಗಿದೆ. ಭಾರತಕ್ಕೆ ಸ್ವಾತಂತ್ರ ಲಭಿಸಿ ಎಪ್ಪತ್ತೈದು ವರ್ಷಗಳಾದವು ಗಮನಾರ್ಹ ಸಂಗತಿಯೆAದರೆ ಭಾರತದ ನಾಗರೀಕರ ಮೂಲಭೂತ ಸ್ವಾತಂತ್ರ್ಯವು ೧೯೭೫ ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂದಿಯವರು ಹೇರಿದ್ದ ತುರ್ತುಪರಿಸ್ಥಿತಿಯ ಅವಧಿಯಲ್ಲಿ ದಮನಗೊಂಡಿದ್ದ ಮಾದರಿಂಯಲ್ಲಿ ಈಗ ಎಪ್ಪತ್ತೈದನೆಯ ವರ್ಷದ ಸ್ವಾತಂತ್ರ್ಯದ ಆಚರಣೆಯ ಸಮಯದಲ್ಲಿ ಕೂಡ ದಮನಗೊಂಡಿದೆ.

ಭಾರತದ ಇತಿಹಾಸದಲ್ಲಿ ೧೯೭೫ ರಲ್ಲಿ  ಪ್ರಧಾನಿಯಾಗಿದದ್ದ ಇಂದಿರಾ ಗಾಂಧಿಯವರು ಜಾರಿಗೆ ತಂದಿದ್ದ ತುರ್ತುಪರಿಸ್ಥಿತಿ ಪರಿಣಾಮದಿಂದಾಗಿ ನಾಗರೀಕ ಹಕ್ಕುಗಳಿಂದ ಹಿಡಿದು, ಪತ್ರಿಕಾ ಸ್ವಾತಂತ್ರ , ಅಭಿವ್ಯಕ್ತಿ ಸ್ವಾತಂತ್ರ ಇವೆಲ್ಲವೂ ನಿಷ್ಕಿçಯವಾಗಿದ್ದ ಘಟನೆಗಳಿಗೆ ನನ್ನ ತಲೆಮಾರು ಸಾಕ್ಷಿಯಾಗಿತ್ತು. ಇಷ್ಟು ಮಾತ್ರವಲ್ಲದೆ  ಇಂದಿರಾ ಗಾಂಧಿಯವರ  ವಿರುದ್ಧ ಸಿಡಿದೆದ್ದ ಜಯಪ್ರಕಾಶ್ ನಾರಾಯಣ್ ಅವರ ಕ್ರಾಂತಿಕಾರಕ ಚಳುವಳಿಯಿಂದ ನಾವುಗಳು ಪ್ರಭಾವಿತರಾಗಿದ್ದೆವ ಜೆ.ಪಿ,ಯವರ ಚಿಂತನೆ ನಮ್ಮನ್ನು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಉದ್ದೀಪಿಸಿತ್ತು. ಇಂದಿಗೂ ನನ್ನ ತಲೆಮಾರಿನ ಬಹುತೇಕ ಹೋರಾಟಗಾರರು ಮತ್ತು ಲೇಖಕರು ಹಾಗೂ ಪತ್ರಕರ್ತರಲ್ಲಿ ಏನಾದರೂ ಒಂದಿಷ್ಟು ಬದ್ಧತೆ ಉಳಿದುಕೊಂಡಿದ್ದರೆ ಅದಕ್ಕೆ ಜಯಪ್ರಕಾಶ್ ನಾರಾಯಣರು ಹುಟ್ಟುಹಾಕಿದ್ದ  ಚಳುವಳಿಯು ಮೂಲ ಕಾರಣ ಎಂದು ನಿಸ್ಸಂಕೋಚವಾಗಿ ಹೇಳಬಹುದು

ನಮ್ಮಗಳ ಕಾಲೇಜು  ಶಿಕ್ಷಣದ  ನಡುವೆಯೂ ತುರ್ತುಪರಿಸ್ಥಿತಿಯ ಎಲ್ಲಾ ಕಠೋರ ನಿಯಮಗಳು, ಹಿಂಸೆ ಮತ್ತು ಭಯಾನಕ ವಾತಾವರಣಕ್ಕೆ   ನೇರ ಸಾಕ್ಷಿಯಾದ ಕಾರಣ  ನೆನಪುಗಳು ಇಂದಿಗೂ ಸಹ ಮಾಯದ ಗಾಯದ ಕಲೆಗಳಂತೆ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಂಡಿವೆ. ಕರ್ನಾಟಕದಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾರಣದಿಂದಾಗಿ ತುರ್ತುಪರಿಸ್ಥಿತಿಯ ಕಠೋರ ನಿಯಮಗಳು ತೀರಾ ಕಡಿಮೆ ಪ್ರಮಾಣದಲ್ಲಿದ್ದವು. ಸ್ನೇಹ ಲತಾ ರೆಡ್ಡಿಯವರಿಗೆ ಸರಿಯಾದ ವೈದ್ಯರ ಸೇವೆ ಮತ್ತು ಔಷಧ ದೊರೆಯದ ಕಾರಣ ಅವರು ಸೆರೆಮನೆಯಲ್ಲಿ ಅಸು ನೀಗಿದರು. ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಸಹೋದರ ಮೈಕಲ್ ಫೆರ್ನಾಂಡಿಸ್ ಅವರು ಬೆಂಗಳೂರಿನಲ್ಲಿ  ಪೊಲೀಸರ ಚಿತ್ರಹಿಂಸೆಗೆ ಗುರಿಯಾಗಿ ಶಾಶ್ವತ ಅಂಗವಿಕಲರಾದರು. ಇಂತಹ ಘಟನೆಗಳನ್ನು ಹೊರತು ಪಡಿಸಿದರೆ, ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದ ಎಲ್.ಕೆ.ಅದ್ವಾನಿಯಂತಹ ನಾಯಕರಿಂದ ಹಿಡಿದು ರಾಜ್ಯ ಮತ್ತು ರಾಷ್ಟç ನಾಯಕರನ್ನು ದೇವರಾಜ ಅರಸುರವರು ಅತ್ಯಂತ ಘನತೆ ಮತ್ತು ಪ್ರೀತಿಯಿಂದ ನೋಡಿಕೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಇಂದಿರಾ ಮತ್ತು ಅರಸು ನಡುವಿನ ವೈಮನಸ್ಸಿಗೆ ಪರೋಕ್ಷವಾಗಿ ಕಾರಣವಾಯಿತು.

ಇಂದಿನ ಪ್ರಧಾನಿ ನರೇಂದ್ರಮೋದಿಯವರು ಈಗ ಜಾರಿಗೆ ತಂದಿರುವ ಇಪ್ಪತ್ತೊಂದನೆಯ ಶತಮಾನದ ಅಗೋಚರ ತುರ್ತುಪರಿಸ್ಥಿತಿಯು ೧೯೭೫ ತುರ್ತುಪರಿಸ್ಥಿತಿಗಿಂತ ಏನೇನೂ ಭಿನ್ನವಾಗಿಲ್ಲ. ಇಂದಿರಾ ಗಾಂಧಿಯವರದು ತಮ್ಮ ಸರ್ವಾಧಿಕಾರದ ಮನೋಭಾವದಲ್ಲಿಯೂ ಕೂಡ ತಮ್ಮ ನಡೆ ಮತ್ತು ನುಡಿಗಳಲ್ಲಿ ಯಾವುದೇ ರೀತಿಯ ಮುಚ್ಚು ಮರೆ ಇರಲಿಲ್ಲ  ಈಗಿನ ಪ್ರಧಾನಿಯವರ ರೀತಿಯಲ್ಲಿ ತುಟಿಯಂಚಿನಲ್ಲಿ ಬೆಣ್ಣೆ ಮತ್ತು ಕಂಕುಳಲ್ಲಿ ದೊಣ್ಣೆ ಎನ್ನುವ ರೀತಿಯಲ್ಲಿ ಕಪಟತನ ತೋರಿಸಿರಲಿಲ್ಲ. ಅತ್ಯಂತ ವ್ಯವಸ್ಥಿತವಾಗಿ ನಾಗರೀಕ ಹಕ್ಕುಗಳನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಧಾರ್ಮಿಕ ಭಾವನೆಗೆ ಕೆಡಕನ್ನು ಉಂಟು ಮಾಡುವ ಹೇಳಿಕೆಗಳು ಎಂತಲೂ ಹಾಗೂ ರಾಜಕೀಯ ನಾಯಕನ ಕಾರ್ಯ ವೈಖರಿಯನ್ನು ಟೀಕಿಸಿದರೆ ಅದು ರಾಷ್ಟ್ರ ದ್ರೋಹವೆಂತಲೂ ಸೆರೆಮನೆಗೆ ದೂಡುವ ಈಗಿನ  ಪ್ರವೃತ್ತಿ  ನಮಗೆ ೧೯೭೫ ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಗೆ ತರುತ್ತಿದೆ. ಇಂದಿರಾ ಗಾಂಧಿಯವರು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು ನಿಜ ಆದರೆ, ಅದಕ್ಕಿಂತ ಭಿನ್ನವಾಗಿ ಈಗಿನ ಪ್ರಧಾನಿಯವರು ನಮಗೆ ಮಾಧ್ಯಮ ಸ್ವಾತಂತ್ರವನ್ನು ದಯಪಾಲಿಸಿದ್ದಾರೆ. ಏಕೆಂದರೆ, ಇಂದು ಭಾರತದಲ್ಲಿರುವ  ಶೇಕಡ ಎಂಬತ್ತರಷ್ಟು ಮಾಧ್ಯಮ ಸಂಸ್ಥೆಗಳು ಮೋದಿ ಭಜನಾ ಮಂಡಳಿಯ ಸದಸ್ಯರ ಒಡೆತನದಲ್ಲಿವೆ ಮುಖೇಶ್ ಅಂಬಾನಿ,  ಗೌತಮ್ ಅದಾನಿ,  ಟೈಮ್ಸ್ ಆಫ್ ಇಂಡಿಯಾ ಜೈನ್ ಕುಟುಂಬ ಹಾಗೂ   ಜೀ  ಸಮೂಹದ ಸುಭಾಶ್ ಚಂದ್ರ ಇಂತಹವರು ದಿನ ನಿತ್ಯದ ವಸ್ತು ಸ್ಥಿತಿಯನ್ನು ಹಾಗೂ ರಾಷ್ಟç ಜ್ವಲಂತ ಸಮಸ್ಯೆ ಮತ್ತು ಆರ್ಥಿಕ ಪರಿಸ್ಥಿತಿ ಇವುಗಳನ್ನು ಬದಿಗಿಟ್ಟು ಮೋದಿ ಸರ್ಕಾರದ ಭಜನೆಯಲ್ಲಿ  ನಿರತರಾಗಿದ್ದಾರೆ. ಅಂದು ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಸ್ಟೇಟ್ಮನ್ ಪತ್ರಿಕೆಗಳು ತೋರಿದ ಪತ್ರಿಕೋದ್ಯಮದ ಘನತೆಯನ್ನು ನಾವು ದಿನಗಳಲ್ಲಿ ಹಿಂದೂ ಮತ್ತು ಟೆಲಿಗ್ರಾಪ್ ಪತ್ರಿಕೆಗಳಲ್ಲಿ ಮತ್ತು ಎನ್.ಡಿ.ಟಿ.ವಿ. ದೃಶ್ಯ ಮಾಧ್ಯಮದಲ್ಲಿ  ಹಾಗೂ ಕೆಲವು ಇಂಗ್ಲೀಷ್ ಪತ್ರಕರ್ತರು ನಡೆಸುತ್ತಿರುವ  ದ ವೈರ್ ಮತ್ತು ದ ಪ್ರಿಂಟ್  ಇನ್  ಎಂಬ ಸಾಮಾಜಿಕ ರಾಣಗಳಲ್ಲಿ ಮಾತ್ರ ನೋಡಬಹುದಾಗಿದೆ.

ಭಾರತದ ಮಾಧ್ಯಮ ಕ್ಷೇತ್ರವು ನೈತಿಕವಾಗಿ ದಿವಾಳಿ ಎದ್ದು ಹೋಗಿರುವ ಈಗಿನ  ಸ್ಥಿತಿಗೆ ಜಾಗತಿಕ ಮಟ್ಟದಲ್ಲಿ ಆಶ್ಚರ್ಯದ ಜೊತೆಗೆ ಕಟುಟೀಕೆಗಳು ವ್ಯಕ್ತವಾಗುತ್ತಿವೆ. ಇಂದಿರಾ ಅವರ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಇದ್ದ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳು ಕೇಂದ್ರ ಸರ್ಕಾರ ಸಾಕಿದ ಗಿಣಿಗಳಂತೆ ಉಲಿಯುತ್ತಿದ್ದವು.  ಇಂದಿರಾ ಅವರ ಹಠಮಾರಿತನ ಮತ್ತು ಸರ್ವಾಧಿಕಾರದ ಪ್ರವೃತ್ತಿಯ ವಿರುದ್ಧ ಸಿಡಿದೆದ್ದ ಅಂದಿನ ಬಹುತೇಕ ಪತ್ರಿಕೆಗಳು ಅದರಲ್ಲೂ ವಿಶೇಷವಾಗಿ ಇಂಡಿಯನ್ ಎಕ್ಸ್ ಪ್ರಸ್ ಸಮೂಹದ ರಾಮನಾಥ ಗೋಯಂಕಾ ಅವರ ಹೋರಾಟ ಇಂದಿನ ಮಾಧ್ಯಮ ಕ್ಷೇತ್ರಕ್ಕೆ  ಮಾದರಿಯಾಗುವಂತಹದ್ದು.  ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ, ಕನ್ನಡದ ಬಹುತೇಕ ದಿನಪತ್ರಿಕೆಗಳು ತಮ್ಮ ಸಂಪಾದಕಿಯ ಬರೆವಣಿಗೆಯ ಸ್ಥಳವನ್ನು ಖಾಲಿಯಾಗಿ ಮುದ್ರಿಸಿ ಪ್ರತಿಭಟನೆ ತೋರಿದವು. ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣನವರು ಪತ್ರಿಕೆಯ ಮುಖಪುಟದಲ್ಲಿ ಎರಡು ಕಾಲಂ ವಿಸ್ತಾರದಲ್ಲಿ ಮೇಲಿನಿಂದ ಕೆಳಗಿನವರೆಗೂ ಪರಿಣಾಮಕಾರಿ ಶಬ್ದಗಳಲ್ಲಿ  ಬರೆಯುತ್ತಿದ್ದ ಸಂಪಾದಕೀಯವನ್ನು ಇಂದಿನ ತಲೆಮಾರಿನ ಪತ್ರಕರ್ತರು ಒಮ್ಮ ಗಮನಿಸುವುದು ಒಳಿತು.

ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದ ಕೂಮಿ ಕಪೂರ್ ಅವರು ಬರೆದ ಎಮರ್ಜೆನ್ಸಿ, ಪರ್ಸನಲ್ ಹಿಸ್ಟರಿ ಮತ್ತು  ಅನ್ಟೋಲ್ಡ್  ಸ್ಟೋರಿ ಆಫ್ ಎಮರ್ಜೆನ್ಸಿಎಂಬ ಜೆ.ಪಿ.ಗೋಯಲ್ ಅವರ ನೆನಪುಗಳ ಕೃತಿ ಇವುಗಳು ನಮಗೆ ೧೯೭೫ ತುರ್ತುಪರಿಸ್ಥಿತಿಯ ವಿವರಗಳನ್ನು ಸಮಗ್ರವಾಗಿ ಒದಗಿಸುತ್ತವೆ. ಇಂದಿರಾಗಾಂಧಿಯವರು ತಮ್ಮ ಆಪ್ತ ಕಾರ್ಯದರ್ಶಿಯಾಗಿದ್ದ ಕೇರಳ ಮೂಲದ ಆರ್.ಕೆ.ಧವನ್ ಮೂಲಕ ಹಾಗೂ ಅವರ ಪುತ್ರ ಸಂಜಯ್ಗಾAಧಿ ದೆಹಲಿಯ ಲೆಪ್ಟಿನೆಂಟ್ ಗವರ್ನರ್ ಆಗಿದ್ದ ಜಗಮೋಹನ್ ಮೂಲಕ ನಡೆಸಿದ ದಬ್ಬಳಾಳಿಕೆಯಿಂದಾಗಿ ಪ್ರಜಾಪ್ರಭತ್ವದ ಮೌಲ್ಯಗಳು ಮತ್ತು ಜನಸಾಮಾನ್ಯರು ಅನುಭವಿಸಿದ ಯಾತನೆಗಳನ್ನು ಕೃತಿಗಳು ನಮ್ಮೆದುರು ತೆರದಿಡುತ್ತವೆ. ಸಂಧರ್ಭದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಮಾಲಿಕ ರಾಮನಾಥ ಗೋಯೆಂಕಾ ಅವರ ಪತ್ರಿಕಾ ಕಚೇರಿಗಳ ಮೇಲೆ ನಿರಂತರ ದಾಳಿ ನಡೆದವು ಮತ್ತು ಕಂಪನಿಯ ವ್ಯವಹಾರ ಪಾರದರ್ಶಕವಾಗಿಲ್ಲ ಎಂಬ ನೆಪದಲ್ಲಿ ಮುನ್ನೂರಕ್ಕೂ ಅಧಿಕ ಮೊಕದ್ದಮೆಗಳು ದಾಖಲೆಯಾಗಿದ್ದವು ಪ್ರತಿಯೊಂದು ವಿಚಾರಣೆಗೆ ಸಂಸ್ಥೆಯ ಅಧ್ಯಕ್ಷರ  ಹಾಜರಾತಿ ಕಡ್ಡಾಯ ಎಂಬ ನಿಯಮವನ್ನು ಜಾರಿ ಮಾಡಲಾಗಿತ್ತು.  ಇಂತಹ ಸ್ಥಿತಿಯಲ್ಲಿ ವೃದ್ಧಾಪ್ಯದ ನಡುವೆಯೂ ಸಹ ರಾಮನಾಥ ಗೋಯಂಕಾ ಅವರು ಅಂದಿನ ಪ್ರಸಿದ್ಧ ವಕೀಲರಾಗಿದ್ದ ನಾರಿಮನ್ ಪಾಲ್ಕಿವಾಲ ಅವರನ್ನು ಕಟ್ಟಿಕೊಂಡು ಹೋರಾಡಿದ್ದರು. ಹಿರಿಯ ಗಾಂಧಿವಾದಿ ಹಾಗೂ ಜಯಪ್ರಕಾಶ್ ನಾರಾಯಣರ ಆಪ್ತರಾಗಿದ್ದ ಗೋಯಂಕಾರವರು ಯಾವ ಕಾರಣಕ್ಕೂ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಸರ್ವಾಧಿಕಾರಿ ಮನೋಭಾವಕ್ಕೆ ಹೆದರಿ ಗಾಳಿಗೆ ತೂರಬಾರದು ಎಂಬ ನಿಲುವಿಗೆ ಅಂಟಿಕೊಂಡು ಹೋರಾಡಿದ್ದರು. ದಿನಗಳಲ್ಲಿ ಪತ್ರಿಕೆಯ ಸಂಪಾದಕರಾಗಿದ್ದ ಕುಲದೀಪ್ ನಯ್ಯರ್ ಎಂಬ  ಅಪರೂಪದ ಪ್ರಾಮಾಣಿಕ ಪತ್ರಕರ್ತರು ರಾಮನಾಥ ಗೋಯಂಕಾ ಅವರ ಬೆಂಬಲಕ್ಕೆ ನಿಂತಿದ್ದರು.

2014  ರಲ್ಲಿ ಪ್ರಧಾನಿ ಹುದ್ದೆಗೆ ಏರಿದ ನಂತರ ನರೇಂದ್ರ ಮೋದಿಯವರ ಮುಂದೆ ಇದ್ದ ಎರಡು ಪ್ರಮುಖ ಗುರಿಗಳು ಈಗ ಸಾರ್ವಜನಿಕವಾಗಿ ಅನಾವರಣಗೊಂಡಿವೆ. ಅವುಗಳಲ್ಲಿ ಮೊದಲನೆಯದು ದೇಶಾದ್ಯಂತ  ನೈತಿಕತೆ ಮತ್ತು ಅನೈತಿಕತೆ ಇವುಗಳನ್ನು ದೂರವಿಟ್ಟು ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರುವುದು  ಮೊದಲನಯ ಗುರಿಯಾದರೆ,   ಎರಡನೆಯದಾಗಿ ತಮ್ಮ ನೇತೃತ್ವದ ಆಡಳಿತವನ್ನು ಬಹಿರಂಗವಾಗಿ ವಿಮರ್ಶಿಸುವ ಅಥವಾ ಟೀಕಿಸುವ ಲೇಖಕರು, ಪತ್ರಕರ್ತರು ಮತ್ತು ಹೋರಾಟಗಾರರನ್ನು ದೇಶ ದ್ರೋಹದ ಆಪಾಧನೆಯಡಿ  ಜಾಮೀನು ದೊರಕದಂತೆ ಸೆರೆಮನೆಗೆ ದೂಡುವುದು. ಎರಡನೆಯ ಗುರಿಯಾಗಿದೆ. ನರೇಂದ್ರ ಮೋದಿ ತನ್ನ ಎಂಟು ವರ್ಷದ ಅಧಿಕಾರದ ಆಡಳಿತಾವಧಿಯಲ್ಲಿ ಒಂದು ದಿನವಾದರೂ ದೇಶದ ಸಮಸ್ಯೆ ಕುರಿತಾಗಿ ಆಲೋಚಿಸಿದ ಬಗ್ಗೆಯಾಗಲಿ ಅಥವಾ ಆರ್ಥಿಕ ಸ್ಥಿತಿ ಗತಿಯ ಕುರಿತಾಗಿ ತಜ್ಞರ ಸಲಹೆ ಕೇಳಿದ ಕುರಿತಾಗಲಿ ಮಾಹಿತಿಯಿಲ್ಲ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ಮುಂಬೈ ಮತ್ತು ದೆಹಲಿಯಂತಹ ಪ್ರಮುಖ  ನಗರಗಳಿಂದ ನೂರಾರು ಕಿಲೋಮೀಟರ್ ದೂರದ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಹೊರಟಾಗ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಸರ್ಕಾರವು ನ್ಯಾಯಾಲಯಕ್ಕೆ ತನ್ನ ಬಳಿ ವಲಸೆ ಕಾರ್ಮಿಕರ ಕುರಿತಾಗಿ ಅಧಿಕೃತ ಮಾಹಿತಿಗಳಿಲ್ಲ ಎಂಬ ಹೇಳಿಕೆಯನ್ನು ನೀಡಿತು. ಭಾರತದ ನೆಲದಲ್ಲಿ ದುಡಿಯುವ ಕಾರ್ಮಿಕರ ಕುರಿತಾಗಿ ತನಗಿರುವ ಅಸಹನೆಯನ್ನು ಮತ್ತು ಬೇಜಾವ್ದಾರಿತನವನ್ನು ಅನಾವರಣಗೊಳಿಸಿತು.  ನಿರುದ್ಯೋಗದಿಂದ ಹತಾಶರಾಗಿರುವ ವಿದ್ಯಾವಂತ ಯುವಕರಿಗೆ ರಸ್ತೆಯಲ್ಲಿ ಪಕೋಡ ಮಾರಿ  ಜಿವನ ಸಾಗಿಸಿ ಎಂದು ಹೇಳಬಲ್ಲ ಇಂತಹ  ಪ್ರಧಾನಿಯನ್ನು ಬಹುಶಃ ಜಗತ್ತಿನಲ್ಲಿ ಯಾವ ರಾಷ್ಟçವೂ ನೋಡಿರಲು ಸಾಧ್ಯವಿಲ್ಲ.

ಪ್ರಜಾ ಪ್ರಭುತ್ವ ವ್ಯವಸ್ತೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕೋದ್ಯಮವನ್ನು ನಾಲ್ಕು ಆಧಾರ ಸ್ಥಂಭಗಳು ಎಂದು ಗುರುತಿಸಲಾಗಿದೆ. ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಲೊಪಗಳಾದರೆ ತಿದ್ದುವ ಹೊಣೆಗಾರಿಕೆ ಈವರೆಗೆ ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ  ಎರಡು ಆಧಾರ ಸ್ತಂಭಗಳು ಆಳುವವರ ಗುಲಾಮರಂತೆ ವರ್ತಿಸತೊಡಗಿವೆ. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಸವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು  ಅಧಿಕಾರಕ್ಕೆ ಹಾತೊರೆದು ನ್ಯಾಯಾಂಗದ ಘನತೆಯನ್ನು ಗಾಳಿಗೆ ತೂರುತ್ತಿದ್ದಾರೆ. ಹಿಂದೆ 2005 ರಲ್ಲಿ ಪಿ.ಸುಂದರಂ ಎಂಬ ನ್ಯಾಯಮೂರ್ತಿ ಕೇರಳದ ರಾಜ್ಯಪಾಲರಾಗಿದ್ದರು. ಈವರಗೆ  ನ್ಯಾಯಮೂರ್ತಿಗಳು ತನಿಖಾ ಆಯೋಗದ ಅಧ್ಯಕ್ಷರಾಗುವುದು ಅಥವಾ ಕಾನೂನುಗಳಿಗೆ ಸಂಬಂಧಪಟ್ಟ ಸಲಹಾ ಸಮಿತಿಗಳಿಗೆ ಅದ್ಯಕ್ಷರಾಗಿರುವುದನ್ನು  ಹೊರತು ಪಡಿಸಿದರೆ ಉಳಿದ ರಾಜಕೀಯ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳಿಲ್ಲ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೋಗಯ್ ಎಂಬ ವ್ಯಕ್ತಿಯು ಕಳೆದ ವರ್ಷ ಅಯೋಧ್ಯೆಯ ರಾಮಮಂದಿರದ ವಿಷಯದಲ್ಲಿ ಸರ್ಕಾರದ ಪರವಾಗಿ ತೀರ್ಪು ನೀಡಿದ್ದಕ್ಕೆ ಪ್ರತಿಫಲವಾಗಿ  ಈಗ ರಾಜ್ಯಸಭೆಗೆ ಸದಸ್ಯರಾಗಿ  ನಾಮಕರಣವಾಗುವುದರ ಮೂಲಕ  ನ್ಯಾಯಾಲಯ ಮತ್ತು ನ್ಯಾಯಮೂರ್ತಿಯ ಸ್ಥಾನದ  ಘನತೆಯನ್ನು ಕುಗ್ಗಿಸಿದ್ದಾರೆ. ಇಂತಹ ನಡುವಳಿಕೆಗಳು ಸರ್ಕಾರದ ಪರವಾಗಿ ತೀರ್ಪು ನೀಡುವುದು ಅಥವಾ ಸರ್ಕಾರದ ಅವ್ಯವಹಾರಗಳ ಕುರಿತಾಗಿ ಮೌನ ವಹಿಸಿದರೆ ಮುಂದಿನ ದಿನಗಳಲ್ಲಿ ನ್ಯಾಯಾಧೀಶರಿಗೆ  ಲಾಭವಾಗಲಿದೆ ಎಂಬ ಸಂದೇಶವನ್ನು ರವಾನಿಸುತ್ತಿವೆ.  ಹಾಗಾಗಿ ನ್ಯಾಯಾಂಗದ ಕಾರ್ಯವೈಖರಿ ಕುರಿತಂತೆ (ಕೆಲವು ನಿಷ್ಟಾವಂತ ನಾಯ್ಯಾಧೀಶರನ್ನು ಹೊರತು ಪಡಿಸಿ) ಜನಸಾಮಾನ್ಯರಿಗೆ ಇದ್ದ ನಂಬಿಕೆಯು ಕುಸಿದು ಹೋಗಿದೆ.

ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವೆಯಾಗಬೇಕಿದ್ದ ಮಾಧ್ಯಮ ಕ್ಷೇತ್ರವು ಈಗ  ಸಂಪೂರ್ಣವಾಗಿ ಶರಣಾಗತವಾಗುವುದರ ಮೂಲಕ ಯಾವುದೇ ಸಂಕೋಚ ಅಥವಾ ಮುಜುಗರವಿಲ್ಲದೆ ಆಳುವವರ ಮತ್ತು ಉಳ್ಳವರ ತುತ್ತೂರಿಯಾಗಿದೆ. ಇಂತಹ ದುಸ್ಥಿತಿಯ ನಡುವೆ ಪ್ರಮಾಣಿಕ ಹಾಗೂ ಘನತೆಯ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕಸಿದುಕೊಂಡಿದೆ. ಎರಡೂವರೆ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆಯನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕಿ ಎಂಬ ಯುವಕನನ್ನು ರಾಷ್ಟç ಮತ್ತು ರಾಜ್ಯ ಸರ್ಕಾರಗಳ ವಿರುದ್ಧದ ಕಾನೂನು ಬಾಹಿರ ಚಟುವಟಿಕೆ ಎಂಬ ಆಧಾರದ ಮೇಲೆ ಬಂಧಿಸಲಾಗಿದ್ದು  ಆತ ಜಾಮೀನು ದೊರೆಯದೆ ಇಂದಿಗೂ ಸಹ ಸೆರೆಮನೆಯಲ್ಲಿ ಬಂಧಿಯಾಗಿ ಕೊಳೆಯುತ್ತಿದ್ದಾನೆ. ಇಷ್ಟು ಮಾತ್ರವಲ್ಲದೆ ದೇಶವಿರೋಧಿ, ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂಬ ಹುಸಿ ಆರೋಪಗಳ ಮೇಲೆ  ದೇಶದ ಹಲವಾರು ಚಿಂತಕರನ್ನು, ನ್ಯಾಯವಾದಿಗಳನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಕಳೆದ ನಾಲ್ಕೈದು ವರ್ಷಗಳಿಂದ ಭಿಮಾ ಕೋರೆಗಾಂವ್ ಘಟನೆಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರಗಳಿಲ್ಲದಿದ್ದರೂ ಮಹಾರಾಷ್ಟ್ರದ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಪ್ರೊ.ಆನಂದ್ ತೇಲ್ದುಂಬೆ, ವರವರರಾವ್, ಸುಧಾಭಾರಧ್ವಾಜ್ ( ವರವರರಾವ್ ಮತ್ತು ಸುಧಾ ಭಾರದ್ವಾಜ್ ಇಬ್ಬರೂ ಅನಾರೋಗ್ಯದ ನಿಮಿತ್ತ ತಾತ್ಕಾಲಿಕವಾಗಿ ಜಾಮೀನು ಪಡೆದಿದ್ದಾರೆ) ಪ್ರೊ.ಹನಿಬಾಬು, ಅರುಣ್ ಫೆರಿರಾ ಸೇರಿದಂತೆ ದೆಹಲಿಯ ಜವಹರ ಲಾಲ್ ವಿಶ್ವ ವಿದ್ಯಾಲಯದ ಅನೇಕ ವಿದ್ಯಾರ್ಥಿ ಮುಖಂಡರನ್ನು ಬಂಧಿಸಿ ಸತ್ಯ ಹೇಳುವವವರಿಗೆ ಇಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.  ಸುಳ್ಳು ಸುದ್ದಿಗಳನ್ನು ಬಯಲಿಗೆಳೆಯುತ್ತಿದ್ದ ಆಲ್ಟ್ ನ್ಯೂಸ್ ಎಂಬ ಅಂತರ್ಜಾಲ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದ ಬೆಂಗಳೂರು ಮೂಲದ ಮಹಮ್ಮದ್ ಜಯಬೈರ್ ಎಂಬ ಯುವ ಪ್ರತಿಭಾವಂತನನ್ನು ಈಗ ಬಂಧಿಸಲಾಗಿತ್ತು. ಇದೀಗ ಈ ಯುವಕ ಜಾಮೀನನ ಮೇಲೆ ಹೊರಬಂದಿದ್ದಾನೆ.

ನಮ್ಮ ನಡುವಿನ ಸಾಕ್ಷಿ ಪ್ರಜ್ಞೆಯಂತೆ ಬದುಕುತ್ತಾ, ಬರೆಯುತ್ತಿರುವ ಹಿರಿಯ  ಸಾಹಿತಿ ದೇವನೂರು ಮಹಾದೇವ ಅವರು ಇತ್ತೀಚೆಗೆ ಬರೆದಆರ್.ಎಸ್.ಎಸ್ ಆಳ ಅಗಲಎಂಬ ಕೃತಿಯಲ್ಲಿ ದಾಖಲಿಸಿರುವ ಮಾತುಗಳು ಹೀಗಿವೆ. ‘ ಕಾಂಗ್ರೇಸ್ ಪಕ್ಷದ ಇಂದಿರಾ ಗಾಂದಿಯವರು ಕೂಡ ಸರ್ವಾಧಿಕಾರಿಯಾಗಿದ್ದರು ಆದರೆ ಅದು ಅಲ್ಪಾವಧಿಯವರೆಗೆ ಮಾತ್ರ. ಇಂದಿರಾ ಅವರ ಸರ್ವಾಧಿಕಾರವು ಕೇವಲ  ಆಡಳಿತಾತ್ಮಕ ಸರ್ವಾಧಿಕಾರವಾಗಿತ್ತು. ಇಂದಿರಾ ಅವರ ಸರ್ವಾಧಿಕಾರದಲ್ಲಿ ಕಾರ್ಯಾಂಗ, ನ್ಯಾಯಾಂಗ  ಹಾಗೂ ಪತ್ರಿಕಾ ರಂಗ ಮುಂತಾದ ಸ್ವಾಯತ್ತ ಸಂಸ್ಥೆಗಳು ಈಗಿನಷ್ಟು ನಿತ್ರಾಣಗೊಂಡಿರಲಿಲ್ಲ ಆದರೆ, ಇಂದಿನ ಮೋದಿಯವರ ಆಳ್ವಿಕೆಯಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಮಾಧ್ಯಮ ಸಂಸ್ಥೆಗಳು  ಉಸಿರಾಡಲು ಕಷ್ಟ ಪಡುತ್ತಿವೆ.

ಆರ್ ಎಸ್.ಎಸ್. ಸಂಸ್ಥೆಯ ಕನಸಿನ ಆಳ್ವಿಕೆಯು ಸಮಾಜದ ಎಲ್ಲಾ ಕ್ಷೇತ್ರಗಳನ್ನು ಕಬ್ಜಾ ಮಾಡಿಕೊಳ್ಳತೊಡಗಿದೆ. ಅಂದರೆ, ಪಕ್ಷ, ಸಮಾಜ, ಸಂಸ್ಕೃತಿ,  ಆಡಳಿತಾತ್ಮಕ, ಎಲ್ಲವಕ್ಕೂ ಏಕ ನಾಯಕತ್ವವೇ ಅಂತಿಮ ಎಂಬಂತಾಗಿದೆ ಇದು ಸರ್ವಾಧಿಕಾರವೆಂಬುದನ್ನು ನಾವು ನೆನಪಿಟ್ಟುಕೊಳ್ಳೊಣಎಂದು ಹೇಳಿರುವ ಮಾತುಗಳನ್ನು ಗಮನಿಸಿದರೆ ಅಥವಾ ಕುರಿತು ನಾವು ಗಂಭೀರವಾಗಿ ಆಲೋಚಿಸಿದರೆ  ಭಾರತದ ಪ್ರಜೆಗಳಾದ ನಾವು ಎಪ್ಪತ್ತೈದರ ಸ್ವಾತಂತ್ರ್ಯ ಸಂಭ್ರಮದ ಆಚರಣೆಯ ಮನಸ್ಥಿತಿಯಲ್ಲಿ ನಾವು ಇರಲು ಸಾಧ್ಯವೆ? ಇದು ನಮ್ಮಗಳ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ ಮಾತ್ರವಾಗಿರದೆ  ಭವಿಷ್ಯದ ಭಾರತದ ಬಗ್ಗೆ ಕೂಡ ನಾವು  ಆಲೋಚಿಸಬೇಕಿದೆ.

ಡಾ.ಎನ್.ಜಗದೀಶ್ ಕೊಪ್ಪ

( ಆಗಸ್ಟ್ ತಿಂಗಳ ಹೊಸತು ಮಾಸ ಪತ್ರಿಕೆಗೆ ಬರೆದ ಅಂಕಣ ಬರಹ)

 

 

 

 

 

 

 

 

 

 

 

 

 

 

 

 

ಸೋಮವಾರ, ಜುಲೈ 18, 2022

ಕೋಮುವಾದ ಮಾಧ್ಯಮದ ತಗಡಿನ ತುತ್ತೂರಿಗಳಿಗೆ ಮಾರ್ಕ್ ಟುಲಿಯ ಪಾಠಗಳು

 

 



ಕನ್ನಡ ಪತ್ರಿಕೋದ್ಯಮದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಬಹುತೇಕ ಭಾಗ ದೃಶ್ಯಮಾಧ್ಯಮಗಳು ಮತ್ತು ಮುದ್ರಣ ಮಾಧ್ಯಮಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ತಲುಪಿರುವ ಅಧೋಗತಿ ಮತ್ತು ಮುಸ್ಲಿಮರ ವಿರುದ್ಧ ವಿಷ ಕಕ್ಕುತ್ತಿರುವ ವೈಖರಿಯನ್ನು ಗಮನಿಸಿದರೆ ನಿಜಕ್ಕೂ ಆತಂಕವಾಗುತ್ತದೆ. ಜಾತಿ, ಧರ್ಮದ ಹಂಗಿಲ್ಲದೆ ಸಾಮಾನ್ಯ ಜನರ ಧ್ವನಿಯಾಗಿ ನಿಲ್ಲಬೇಕಾದ ಮಾಧ್ಯಮಗಳು ಆಳುವವರ ಹಾಗೂ ಹಿಂದೂ ಧರ್ಮದ ತಗಡಿನ ತುತ್ತೂರಿಗಳಂತೆ ಗೋಚರವಾದರೆ, ಪತ್ರಕರ್ತರು ಅಕ್ಷರದ ವ್ಯಭಿಚಾರಿಗಳಂತೆ ಕಾಣಿಸುತ್ತಾರೆ.

ಇಲ್ಲಿ ನಾನು ಎತ್ತುತ್ತಿರುವ ಪ್ರಶ್ನೆಗಳು ಕೇವಲ  ನನ್ನವು ಮಾತ್ರವಲ್ಲದೆ ಕನ್ನಡ ನೆಲದ ಪ್ರತಿಯೊಬ್ಬ ಪ್ರಜ್ಞಾವಂತನ ಪ್ರಶ್ನೆಗಳಾಗಿವೆ.

ಪ್ರಶ್ನೆ ಒಂದು- ಉಡುಪಿಯ ಕಾಲೇಜಿನಲ್ಲಿ ಸ್ಥಳಿಯ ಶಾಸಕನೊಬ್ಬ ಎತ್ತಿದ ಹಿಜಾಬ್ ಪ್ರಶ್ನೆ ನಿಜಕ್ಕೂ ಈ ಸಮಾಜದ ಸಮಸ್ಯೆಯಾಗಿತ್ತಾ? ಹರೆಯದ ಹೆಣ್ಣು ಮಕ್ಕಳು ಅವರು ಯಾವ ಧರ್ಮಕ್ಕೆ ಸೇರಿರಲಿ. ಸಾರ್ವಜನಿಕವಾಗಿ ತಲೆಯ ಮೇಲೆ ಸರಗಿನ ರೀತಿ ವಸ್ತ್ರ ಹಾಕಿಕೊಂಡು ಬಂದು ತರಗತಿಯಲ್ಲಿ ಕುಳಿತು ಮುಸುಕು ತೆಗೆದು ಪಾಠ ಕೇಳುವುದು ತಪ್ಪಾ? ಎಂದು ನೀವು ಕೇಳುವುದರ ಬದಲು  ಈ ವಿವಾದವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರಿ. ವಿಷ ಕಕ್ಕುವ ಅನಾಮಧೇಯ ನರಿ ನಾಯಿಗಳಿಗೆ ಇಲ್ಲದ ಪ್ರಚಾರವನ್ನು ನೀಡಿದಿರಿ. ಇದು ಪರೋಕ್ಷವಾಗಿ ಈಗ ತಾನೆ ಶಿಕ್ಷಣಕ್ಕೆ ತೆರೆದುಕೊಂಡು ಧರ್ಮದೊಳಗಿನ ಕಂದಾಚಾರಗಳಿಗೆ ಧ್ವನಿ ಎತ್ತಬೇಕಾಗಿದ್ದ ಹೆಣ್ಣುಮಕ್ಕಳ ಭವಿಷ್ಯವನ್ನು ಕಸಿದುಕೊಂಡಿರಿ. ಇದು ಮಾಧ್ಯಮದ ನಿಜವಾದ ನೈತಿಕ ಕ್ರಿಯೆ ಅಥವಾ ಕರ್ತವ್ಯವೆ? ದಯವಿಟ್ಟು ಇದಕ್ಕೆ ಉತ್ತರಬೇಡ. ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ. ಯಾವನೋ ಒಬ್ಬ ಅವಿವೇಕಿಯೊಬ್ಬ ಹೇಳಿದ ಅಂಬೇಡ್ಕರ್  ಬುರ್ಖಾವನ್ನು ವಿರೋಧಿಸಿದ್ದರು ಮಾತನ್ನು ಮಾಧ್ಯಮದಲ್ಲಿ ದೊಡ್ಡದಾಗಿ ಪ್ರತಿಬಿಂಬಿಸುವ ನಿಮಗೆ ಬುರ್ಖಾ ಮತ್ತು ಹಿಜಾಬ್ ನಡುವಿನ ವೆತ್ಯಾಸ ತಿಳಿಯಲಿಲ್ಲವೆ?

ಪ್ರಶ್ನೆ ಎರಡು-  ಮೂರು ಬಾರಿ ಶಾಸಕನಾಗಿ ಈಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ರೇಣುಕಾಚಾರ್ಯ ಎಂಬ ವೀರಶೈವ ಜನಾಂಗದ ವ್ಯಕ್ತಿ ತನ್ನ ಮಕ್ಕಳಿಗೆ ಬೇಡ ಜಂಗಮದ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ಮತ್ತು ಇದನ್ನು ಶಾಸನ ಸಭೆಯಲ್ಲಿ ಒಪ್ಪಿಕೊಂಡ ಸಂಗತಿಯನ್ನು ವರದಿ ಮಾಡಿದರೆ ನಿಮ್ಮ ಕರ್ತವ್ಯ ಮುಗಿಯಿತು ಎಂದು ಏಕೆ ಭಾವಿಸಿದಿರಿ? ಇದೊಂದು ಕ್ರಿಮಿನಲ್ ಅಪರಾಧವಲ್ಲವೆ? ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ಸಚಿವ ಸಂಪುಟದ ೆಲ್ಲಾ ಸವಲತ್ತುಗಳನ್ನು ಈ ವ್ಯಕ್ತಿ ಹೇಗೆ ಪಡೆಯಲು ಸಾಧ್ಯ? ಜನಪ್ರತಿಯಾಗಿ ಹುದ್ದೆ ಹೊಂದಲು ಅನರ್ಹನಾಗಿರುವ  ಈ ವ್ಯಕ್ತಿ ಅಥವಾ ಈ ಘಟನೆ ಬಗ್ಗೆ ಏಕೆ ಮೌನವಾಗಿದ್ದೀರಿ? ಈ ಸರ್ಕಾರದ ಮುಖ್ಯಮಂತ್ರಿಯಿಂದ ಹಿಡಿದು, ಸಚಿವ, ಶಾಸಕ ಹಾಗೂ ಎಲ್ಲಾ ಬಗೆಯ ಸರ್ಕಾರಿ ನೌಕರರು ಪಡೆಯುವ ಸವಲತ್ತು ಮತ್ತು ಸಂಬಳದಲ್ಲಿ ಬಡಕೂಲಿಕಾರರಿಂದ ಹಿಡಿದು ಜನಸಾಮಾನ್ಯರು ಧರ್ಮ, ಜಾತಿಯ ಬೇಧವಿಲ್ಲದೆ ಪಾವತಿಸಿದ ತೆರಿಗೆ ಹಣದ ಋಣವಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಬೇಕಾದ ನಿಮ್ಮ ಬದ್ಧತೆ ಮತ್ತು ನೈತಿಕತೆ ಎಲ್ಲಿ ಅಡಗಿ ಹೋಯಿತು?

ಪ್ರಶ್ನೆ ಮೂರು ಕಲ್ಬುರ್ಗಿ ನಗರದ ದಿವ್ಯಾ ಹಾಗರಗಿ ಎಂಬ ಬಿ.ಜೆ.ಪಿ.ಯ ಬೊಗಳು ನಾಯಿಯೊಂದು ಇತ್ತೀಚೆಗಿನ ವರ್ಷಗಳಲ್ಲಿ ಸ್ಥಾಪಿಸಿದ ಇಂಗ್ಲೀಷ್ ಶಾಲೆಯಲ್ಲಿ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹೆದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಪ್ರಮುಖ ಆರೋಪಿಯಾಗಿರುವ ಆಕೆ ಈವರೆಗೆ ಹೇಗೆ ತಲೆ ತಪ್ಪಿಸಿಕೊಂಡು ಇರಲು ಸಾಧ್ಯ? ಆಕೆ ನಮ್ಮ ಕಾರ್ಯಕರ್ತಳಲ್ಲ ಎಂದು ಹೇಳುವ ಬಿ.ಜೆ.ಪಿ. ನಾಯಕರ ಹೇಳಿಕೆಯನ್ನು ಅತ್ಯಂತ ಶ್ರದ್ಧೆಯಿಂದ ಪ್ರಕಟಿಸುವ ಮುನ್ನ ಕಳೆದ  ಎರಡು ಮೂರು ವರ್ಷಗಳಲ್ಲಿ ಒನಕೆ ಓಬವ್ವನ ವೇಷತೊಟ್ಟು ಮುಸ್ಲಿಮರ ವಿರುದ್ಧ ಆಡಿದ್ದ ಮಾತುಗಳನ್ನು ಪ್ರಕಟಿಸಿದ್ದ ನಿಮಗೆ ಆಕೆಯ ಇತಿಹಾಸ ಏಕೆ ಮರೆತು ಹೋಯಿತು? ಸರ್ಕಾರದ ಪರೀಕ್ಷೆಗಳನ್ನು ನಡೆಸುವಾಗ ಆಯ್ಕೆ ಮಾಡಿಕೊಳ್ಳುವ ವಿದ್ಯಾ ಸಂಸ್ಥೆಗಳ ಇತಿಹಾಸ ಮತ್ತು ಅನುಭವಗಳ ಕುರಿತು ಎಂದಾದರೂ ನೀವು ಪ್ರಶ್ನಿಸಿದ್ದೀರಾ? ಕಳೆದ ಅಕ್ಟೋಬರ್  ತಿಂಗಳಿನಲ್ಲಿ ಆಕೆಯ ವಿದ್ಯಾ ಸಂಸ್ಥೆಗೆ ಅವಕಾಶ ಹೇಗೆ ದೊರೆಯಿತು? ಇದಕ್ಕೆ ಶಿಫಾರಸ್ಸು ಮಾಡಿದವರು ಯಾರು? ಎಂದು ಈವರೆಗೆ ನೀವು ಪ್ರಶ್ನಿಸಿದ್ದೀರಾ? ನೀವು ಯಾರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದೀರಿ? ಈಗಲಾದರೂ ಸ್ಪಷ್ಟಪಡಿಸಿ.

ಪ್ರಶ್ನೆ ನಾಲ್ಕು- ತಮ್ಮ ಜೀವಮಾನದಲ್ಲಿ ಎಂದೂ ಕುರಿ, ಕೋಳಿ ಮೇಕೆ ತಿನ್ನದ ಹಿಂದೂ ಧರ್ಮದ ಮೇಲ್ಜಾತಿಯ ಹಲಾಲುಕೋರರಿಗೆ ಶೂದ್ರ, ದಲಿತ ಮತ್ತು ಮುಸ್ಲಿಂರ ಆಹಾರ ಸಂಸ್ಕೃತಿಯ ಬಗ್ಗೆ ಮಾತನಾಡಲು ಹಕ್ಕು ನೀಡಿದವರು ಯಾರು? ಹಲಾಲ್ ಮತ್ತು ಜಟ್ಕಾ ಎಂದೆಲ್ಲಾ ಬಡಬಡಿಸುತ್ತಿರುವ ಇವರು ಬೇಳೆ ತೊವ್ವೆಯಲ್ಲಿ ಅನ್ನು ಉಂಡು, ಹೆಸರು ಬೇಳೆ ಪಾಯಸ ಕುಡಿದು ಢರ್ ಎಂದು ತೇಗಿ, ಪುರ್ ಎಂದು ಹೂಸು ಬಿಡುವಾಗ,  ಈ ನಾಡಿನ ಶೂದ್ರರು, ದಲಿತರು ಇವರ  ಆಹಾರ ಸಂಸ್ಕೃತಿಯನ್ನು ಪ್ರಶ್ನಿಸಿದ ಉದಾಹರಣೆಗಳುಂಟಾ? ಇದು ಈ ದೇಶದ ನಾಗರೀಕರಿಗೆ ಸಂವಿಧಾನ ನೀಡಿರುವ ಹಕ್ಕಿನ ಉಲ್ಲಂಘನೆ ಎಂದು ನಿಮಗೆ ಏಕೆ ಅನಿಸಲಿಲ್ಲ? ಇದು ಪತ್ರಿಕೋದ್ಯಮವೇ?

ನಾನು ಮತ್ತು ನನ್ನ ತಲೆಮಾರಿನ ನೂರಾರು ಮಂದಿ ಗೆಳೆಯರು  ಪತ್ರಿಕೋದ್ಯಮದ ವೃತ್ತಿಯಲ್ಲಿ ಬದುಕು ಕಟ್ಟಿಕೊಂಡು ಘನತೆಯ ನಿವೃತ್ತಿ ಜೀವನ ನಡೆಸುತ್ತಿದ್ದೇವೆ. ನಾವ್ಯಾರೂ ನಿಮ್ಮ ಹಾಗೆ ಪತ್ರಿಕೋದ್ಯಮದ ಪದವಿ ಪಡೆದವರಲ್ಲ. ಸಾಮಾನ್ಯ ಪದವಿ ಪಡೆದು ಹಿರಿಯ ಪತ್ರಕರ್ತರ ವರದಿಗಳನ್ನು ಅವರ ಕಾರ್ಯ ವೈಖರಿ ಮತ್ತು ಜೀವನ ವಿಧಾನವನ್ನು ಪತ್ರಿಕೋಧ್ಯಮದ ಪಠ್ಯವನ್ನಾಗಿ ಮಾಡಿಕೊಂಡವರು. ನಮ್ಮ ಮುಂದೆ ಪಿ.ಲಂಕೇಶ್ ಇದ್ದರು, ಖಾದ್ರಿ ಶಾಮಣ್ಣನವರ ಸಂಪಾದಕಿಯ ಬರಹಗಳಿದ್ದವು, ವಡ್ಡರ್ಸೆ ರಘುರಾಮಶೆಟ್ಟರಿದ್ದರು. ಪ್ರಜಾವಾಣಿ, ಡೆಕ್ಕನ್ ಹೆರಾಲ್ಟ್ ನಲ್ಲಿ ಕೆ.ಎನ್. ಹರಿಕುಮಾರ್ ಎಂಬ ಸಂಪಾದಕರಿದ್ದರು ಹೀಗೆ ಕರ್ನಾಟಕದಲ್ಲಿ ಕನಿಷ್ಟ ಐವತ್ತು ಮಂದಿ ಹಿರಿಯ ಪತ್ರಕರ್ತರು ನಮಗೆ ಮಾರ್ಗದರ್ಶಿಗಳಾಗಿದ್ದರು.

ರಾಷ್ಟ್ರೀಯ ಮಟ್ಟದಲ್ಲಿ ನಮಗೆ ಕುಲದೀಪ್ ನಯ್ಯಾರ್, ವಿನೋದ್ ಮೆಹತಾ, ಖಶ್ವಂತ್ ಸಿಂಗ್ ಮತ್ತು ಮಾರ್ಕ್ ಟುಲಿ ಎಂಬ ಬಿ.ಬಿ.ಸಿ. ವರದಿಗಾರರ ಬರಹಗಳಿದ್ದವು. ಇಂತಹ ಮಹನೀಯರಿಂದ ನಾವು ಕಲಿತ ಪಾಠಗಳು ಜೀವನ ಪೂರ್ತಿ ನಮ್ಮನ್ನು ಮಾನಸಿಕವಾಗಿ ಭ್ರಷ್ಟರನ್ನಾಗಿಸದೆ ಜನಸಾಮಾನ್ಯರ ಪ್ರತಿನಿಧಿಯಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಸಹಾಕಾರಿಯಾದವು. ನೀವು ಮಾನವೀಯ ಮುಖವುಳ್ಳ ಪತ್ರಕರ್ತನಾಗಲು ಕನ್ನಡದಲ್ಲಿ ಪಿ.ಲಂಕೇಶರ ಟೀಕೆ ಟಿಪ್ಪಣಿ ಭಾಗ 1 ಮತ್ತು 2 ರ ಸಂಪುಟಗಳು ಮತ್ತು ಭಾರತದಲ್ಲಿ ನಾಲ್ಕು  ದಶಕಗಳ ಕಾಲ ಬಿ.ಬಿ.ಸಿ. ವರದಿಗಾರರಾಗಿದ್ದ ಮಾರ್ಕ್ ಟುಲಿ. ಅವರ   ಇಂಡಿಯಾಸ್  ಅನ್ ಎಂಡಿಂಗ್ ಜರ್ನಿ, ಮೋ ಪುಲ್ ಸ್ಟಾಪ್ ಇನ್ ಇಂಡಿಯಾ, ಹಾರ್ಟ್ ಆಫ್ ಇಂಡಿಯಾ, ಇಂಡಿಯಾ ಆನ್ ಮೂವ್ ಮುಂತಾದ ಕೃತಿಗಳನ್ನು ಓದಿದರೆ ಸಾಕು ಬಹುಮುಖಿ ಭಾರತವನ್ನು ಹೇಗೆ ಗ್ರಹಿಸಬೇಕು ಎಂಬುದು  ನಿಮಗೆ ಮನದಟ್ಟಾಗುತ್ತದೆ.


ಭಾರತದಲ್ಲಿ ಪ್ರಥಮವಾಗಿ ಪದ್ಮಶ್ರೀ ಗೌರವಕ್ಕೆ ಪಾತ್ರರಾದ  ಬ್ರಿಟನ್ ಮೂಲದ ಟುಲಿಯವರು ಈಗ ಕೊಲ್ಕತ್ತ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರ ಪ್ರತಿಯೊಂದು ಪ್ರಬಂಧ ರೂಪದ ಲೇಖನವು ಮುವತ್ತು ಪುಟಗಳಿಂದ ಅರವತ್ತು ಪುಟಗಳವರೆಗೆ ವ್ಯಾಪಿಸಿರುತ್ತದೆ. ಒಂದು ಘಟನೆಯನ್ನು ಅತ್ಯಂತ ಸೂಕ್ಷ್ಮವಾಗಿ ಹೀಗೂ ನೋಡಬಹುದೆ? ಎಂದು ಅವರ ಕೃತಿಗಳನ್ನು ಓದುವಾಗ ಆಶ್ಚರ್ಯವಾಗುತ್ತದೆ. ಈ ಕಾರಣಕ್ಕಾಗಿ  ಜಗತ್ ಪ್ರಸಿದ್ಧ ಟೈಮ್ಸ್ ವಾರಪತ್ರಿಕೆಯು ಮಾರ್ಕ್ ಟುಲಿ ಅವರನ್ನು ‘ ಬಹುಮುಖಿ ಸಂಸ್ಕೃತಿಯ  ಭಾರತವನ್ನು ಅಪ್ಪಟ ದೇಶಿ ಹೃದಯದಿಂದ ನೋಡಿದ ಮಹಾನ್ ಪತ್ರಕರ್ತ’ ಎಂದು ಬಣ್ಣಿಸಿದೆ. 1992 ರ ಡಿಸಂಬರ್ 6 ರಂದು ಸಂಜೆ ಐದು ಗಂಟೆಯ ವೇಳೆಗೆ ಸಂಘಪರಿವಾರದ ಭಕ್ತರು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕೆಡವಿ ಹಾಕಿದರು. ಆಗ ಇದ್ದುದ್ದು  ಆಕಾಶವಾಣಿ ಮತ್ತು ದೂರದರ್ಶನ ಮಾತ್ರ. ಪ್ರಧಾನಿ ಪಿ.ವಿ.ನರಸಿಂಹರಾವ್ ದೆಹಲಿಯಲ್ಲಿ ಮಹಾ ಮೌನಕ್ಕೆ ಶರಣಾಗಿದ್ದರು. ಸರ್ಕಾರದ ಮಾಧ್ಯಮಗಳು ಘಟನೆ ಬಗ್ಗೆ ಏನನ್ನೂ ಹೇಳದೆ, ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎಂಬ ಮಾತನ್ನು ಪದೇ ಪದೇ ಬಿತ್ತರಿಸುತ್ತಿದ್ದವು. ಸಂಜೆ ಆರು ಗಂಟೆಯ ಬಿ.ಬಿ.ಸಿ. ವಾರ್ತೆಯಲ್ಲಿ ಬಾಬರಿ ಮಸೀದಿ ಧ್ವಂಸವಾದ ಘಟನೆಯನ್ನು ಬಿತ್ತರಿಸುತ್ತಿದ್ದಂತೆ  ಕೇಂದ್ರ ಸರ್ಕಾರ ವಸ್ತು ಸ್ಥಿತಿಯನ್ನು ಪ್ರಸಾರಮಾಡುವುದು ಅನಿವಾರ್ಯವಾಯಿತು. ಇದು ಮಾರ್ಕ್ ಟುಲಿಯವರ ಪತ್ರಿಕೋದ್ಯಮದ ಬದ್ದತೆಗೆ ಇರುವ ಪ್ರಮುಖ ಸಾಕ್ಷಿ. ಇಂತಹ ಮಹನೀಯರಿಂದ ನಮ್ಮ ಮಾಧ್ಯಮದ ವಿಷಜಂತುಗಳು ಕಲಿಯುವುದು ಅಪಾರವಿದೆ.

 

ಪ್ರತಿಯೊಬ್ಬ ಪತ್ರಕರ್ತ ಓದಲೇಬೇಕಾಗಿರುವ ಕೃತಿ

 


ನಾನು ಕಳೆದ ಎರಡು ವರ್ಷಗಳಿಂದ ಎಲ್ಲಿಯೂ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ. ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ನಾಲ್ವಡಿಯವರ ಕುರಿತು ಉಪನ್ಯಾಸ ಹೊರತು ಪಡಿಸಿದರೆ, ನಿನ್ನೆ ಬೆಂಗಳೂರಿನಲ್ಲಿ ವಡ್ಡರ್ಸೆ ಅವರ ಕೃತಿ ಕುರಿತು ಮಾತನಾಡಲು ಭಾಗವಹಿಸಿದ್ದೆ. ಈ ಇಬ್ಬರು ಮಹನೀಯರ ಮೇಲಿದ್ದ ಗೌರವ ಇದಕ್ಕೆ ಪ್ರಮುಖ ಕಾರಣ.
ವಡ್ಡರ್ಸೆಯವರು ಒಂದು ರೀತಿಯಲ್ಲಿ ನನ್ನ ಪಾಲಿಗೆ ಗುರುಗಳು. ಪ್ರಜಾವಾಣಿಯಲ್ಲಿ ಇದ್ದಾಗ ನಂತರ ಮುಂಗಾರು ಪತ್ರಿಕೆ ಆರಂಭಿಸಿ ಅನಂತರ ಅವರು ತ್ಯೆಜಿಸಿ ಬಂದ ಮೇಲೆ ಅವರ ಕಷ್ಟದ ನೋವಿನ ಸಂಧರ್ಭದಲ್ಲಿ ನಿರಂತರವಾಗಿ ಒಡನಾಟ ಇರಿಸಿಕೊಂಡಿದ್ದೆ. ಅವರ ನಿಲುವುಗಳು, ಎಂತಹ ಸಂಧರ್ಭದಲ್ಲಿಯೂ ಸಹ ತಮಗೆ ನೋವುಂಟು ಮಾಡಿದವರ ಬಗ್ಗೆ ಒಂದು ಕೆಟ್ಟ ಶಬ್ದ ಮಾತನಾಡದ ಅವರ ಸಂತನಂತಹ ವ್ಯಕ್ತಿತ್ವ ಹಾಗೂ ಅಗಾಧವಾದ ನೆನಪಿನ ಶಕ್ತಿ ಈಗಲೂ ನನ್ನ ಮೇಲೆ ಪರಿಣಾಮ ಬೀರಿವೆ.
ಅವರು ಮುಂಗಾರು ಪತ್ರಿಕೆಗೆ ಬರೆದ ವ್ಯಕ್ತಿಚಿತ್ರಗಳು ಮತ್ತು ಸಂಪಾದಕೀಯ ಬರಹಗಳನ್ನು ನಾನು ಓದಿರಲಿಲ್ಲ. ಮಿತ್ರರಾದ ದಿನೇಶ್ ಅವುಗಳನ್ನು ಕಾಯ್ದಿಟ್ಟುಕೊಂಡಿದ್ದ ಕಾರಣ ಈಗ ಬೇರೇಯ ಮಾತು ಹೆಸರಿನಲ್ಲಿ ಪ್ರಕಟವಾಗುವುದರೊಂದಿಗೆ ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಅಮೂಲ್ಯ ಪಠ್ಯ ದೊರೆತಂತಾಗಿದೆ.
ಪಿ.ಲಂಕೇಶರ ಟೀಕೆ ಟಿಪ್ಪಣಿಯ ಮೊದಲ ಸಂಪುಟ ಕೂಡ ಇದೇ ಮಾದರಿಯ ಅಮೂಲ್ಯ ಕೃತಿ. ಈ ಎರಡು ಕೃತಿಗಳು ಒಬ್ಬ ಪ್ರಾಮಾಣಿಕ‌ ಹಾಗೂ ಪಾರದರ್ಶಕತೆಯ ಗುಣವುಳ್ಳ ಹಾಗೂ ರಾಗ ದ್ವೇಷಗಳಿಲ್ಲದ ಪತ್ರಕರ್ತ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿವೆ.
ವಡ್ಡರ್ಸೆಯವರು ಕಟ್ಟಿಕೊಟ್ಟಿರುವ ರಾಜಕೀಯ ವ್ಯಕ್ತಿಗಳ ಚಿತ್ರಣ ನಿಜವಾಗಿಯೂ ವಿಸ್ಮಯ ಮೂಡಿಸುವಂತಹದ್ದು. ಅದೇ ರೀತಿ ಸಾಮಾಜಿಕ ವಿಷಯಗಳ ಕುರಿತಂತೆ ಅವರು ತಾಳಿದ್ದ ನಿಲುವು ಇಂದಿಗೂ ಪ್ರಸ್ತುತವಾಗಿವೆ.
ಅವರು ತೊಂಬತ್ತರ ದಶಕದಲ್ಲಿ ಜಾಫರ್ ಷರೀಪರ ಕುರಿತಾಗಿ ‌ಸಾಧಕನ ಬದುಕು ಎಂಬ ಕೃತಿ ರಚಿಸಿದ್ದರು.
ಬೆಂಗಳೂರು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದ ಬಳಿಯ ಅತಿಥಿ ಗೃಹದಲ್ಲಿ ಮೂರು ತಿಂಗಳಕಾಲ ಉಳಿದು ಶೆಟ್ಟರು ಸಾಧಕನ ಬದುಕು ರಚಿಸಿದ್ದರು.
ಕೃತಿ ಬಿಡುಗಡೆಯಾದ ಮೂರು ನಾಲ್ಕು ದಿನಗಳ ನಂತರ ಎ.ಕೆ. ಸುಬ್ಬಯ್ಯನವರು ಕೃತಿಯ ಹೆಸರು ಮೀರ್ ಸಾಧಕನ ಬದುಕು ಎಂದು ಇರಬೇಕಾಗಿತ್ತು ಎನ್ನುವುದರ ಮೂಲಕ ಲೇವಡಿ ಮಾಡಿಬಿಟ್ಟರು. ಇದು ರಾಜ್ಯಾದ್ಯಂತ ಸುದ್ದಿಯಾಯಿತು. ಅದಕ್ಕೆ ಕಾರಣ ಕೂಡ ಇತ್ತು.
ವಾಸ್ತವವಾಗಿ ಚಿತ್ರದುರ್ಗ ಮೂಲದ ಜಾಫರ್ ಷರೀಪರು‌ಎಸ್.ನಿಜಲಿಂಗಪಗಪನವರ ಕಾರಿನ ಚಾಲಕರಾಗಿದ್ದರು. ನಿಜಲಿಂಗಪ್ಪ ಮತ್ತು ಇಂದಿರಾಗಾಂಧಿ ನಡುವೆ ನಡೆಯುತ್ತಿದ್ದ‌ ಶೀತಲ ಸಮರದಲ್ಲಿ ನಿಜಲಿಂಗಪ್ಪನವರ ರಾಜಕೀಯ ಚಟುವಟಿಕೆಗಳನ್ನು ಇಂದಿರಾ ಗಾಂಧಿಗೆ ತಲುಪಿಸುತ್ತಿದ್ದ ಜಾಫರ್ ಷರೀಪ್‌1969 ರಲ್ಲಿ ಬೆಂಗಳೂರು ಲಾಲ್ ಬಾಗಿನ‌ ಗಾಜಿನ‌ಮನೆಯಲ್ಲಿ ಕಾಂಗ್ರೇಸ್ ಇಬ್ಭಾಗವಾದಾಗ ಇಂದಿರಾ ಬಳಗ ಸೇರಿ ರಾಜಕೀಯದಲ್ಲಿ ಮೇಲೆ ಬಂದಿದ್ದರು.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ರಾತ್ರಿ ಊಟ ಮಾಡುವಾಗ ವಡ್ಡರ್ಸೆಯವರ ಜೊತೆ ವಿಷಯ ಪ್ರಸ್ತಾಪ ಮಾಡಿದೆ. ಅವರ ಉತ್ತರ ಹೀಗಿತ್ತು.
ತಮ್ಮಾ, ಸುಬ್ಬಯ್ಯನವರ ಹೇಳಿಕೆ ತೀಕ್ಷ್ಙವಾಗಿದ್ದರೂ ಸತ್ಯವಾಗಿದೆ. ನಾನು ಕೃತಿ ರಚನೆಯ ಸಂಧರ್ಭದಲ್ಲಿ ನಗಣ್ಯ ಎಂದು ಪರಿಗಣಿದ್ದ ವಿಷಯವನ್ನು ‌ಅವರು‌ ಮುನ್ನೆಲೆಗೆ ತಂದಿದ್ದಾರೆ. ಅವರ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲ. ಈ ಕೃತಿಯಲ್ಲಿ ಎ.ಕೆ. ಸುಬ್ಬಯ್ಯನವರ ಕುರಿತಾಗಿ ಶೆಟ್ಟರು ಅದ್ಭುತವಾದ ವ್ಯಕ್ತಿ ಚಿತ್ರವನ್ನು ದಾಖಲಿಸಿದ್ದಾರೆ. ಅದನ್ನು ಓದುವಾಗ ಈ ಘಟನೆ ನೆನಪಾಯಿತು.
ವಡ್ಡರ್ಸೆಯವರ ಇಂತಹ ಮನೋಭಾವ, ಆಲೋಚನೆಗಳು, ಜನಸಾಮಾನ್ಯರ ಬಗ್ಗೆ‌ ವಿಶೇಷವಾಗಿ ಹಿಂದುಳಿದವರ ಬಗ್ಗೆ ಅವರಿಗಿದ್ದ ಕಾಳಜಿಯಿಂದಾಗ‌ ನನ್ನ ತಲೆಮಾರಿನ ಪತ್ರಕರ್ತರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಇಂದು ಕೇವಲ ಐದು ವರ್ಷಗಳ ಕಾಲ ಪತ್ರಿಕೆ ಅಥವಾ ಛಾನಲ್ ಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದವರು ( ಎಲ್ಲರೂ ಅಲ್ಲ) ಕೋಟ್ಯಾಧೀಶರಾಗಿ‌ ಹೊರ ಬರುತ್ತಿದ್ದಾರೆ. ಭಿಕ್ಷಾಧೀಶರಾಗಿ ಹೊರಬಂದ ನನ್ನ ಕಾಲದ ಪತ್ರಕರ್ತರು ಹಣವಿಲ್ಲದಿದ್ದರೂ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಇದಕ್ಕೆ ಮುಖ್ಯ ಕಾರಣ ವಡ್ಡರ್ಸೆ ಅವರಂತಹ ಪತ್ರಕರ್ತರು ನಮ್ಮ ನಡುವೆ ಇದ್ದರು.
ಎರಡು ತಿಂಗಳ ಹಿಂದೆ ಪ್ರಮುಖ ದಿನಪತ್ರಿಕೆಯ ಸಂಪಾದಕನಿಗೆ ತಾನು ಹುದ್ದೆ ತ್ಯೆಜಿಸುವ ಹಿಂದಿನ ದಿನ ರಾಜ್ಯ ಸರ್ಕಾರ ಉತ್ತರ ಕನ್ನಡ ಜೆಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಐದು ಎಕರೆ ಭೂಮಿಯನ್ನು ಉಚಿತವಾಗಿ ‌ನೀಡಿದ‌ ಮಾಹಿತಿ ನನಗೆ ಇತ್ತೀಚೆಗಷ್ಟೇ ಗೊತ್ತಾಯಿತು.
ಇದು ಈಗಿನ ಪತ್ರಕರ್ತರಿಗೂ ಹಾಗೂ ವಡ್ಡರ್ಸೆ ರಘುರಾಮ ಶೆಟ್ಟರ ಕಾಲದ ಪತ್ರಕರ್ತರಿಗೂ ಇರುವ ವೆತ್ಯಾಸ.
ವಡ್ಡರ್ಸೆಯವರ ಈ ಕೃತಿ ಇದೀಗ ಎರಡನೇ ಮುದ್ರಣ ಕಂಡಿದೆ. ನೀವು ಓದಲೇಬೇಕಾದ ಕೃತಿ ಇದಾಗಿದೆ.

ಭಾನುವಾರ, ಆಗಸ್ಟ್ 2, 2020

ರಾಮ ಮತ್ತು ರಹೀಮ ಇಬ್ಬರೂ ಇಲ್ಲದ ಅಯೋದ್ಯೆಯ ನೆಲದಲ್ಲಿ ನಿಂತು




ಕಳೆದ ವರ್ಷ ಜನವರಿಯ ಎರಡನೇ ವಾರದಲ್ಲಿ ಒಂದು ದಿನ ಅಯೋಧ್ಯೆ ನಗರದಲ್ಲಿದ್ದೆ. ಲಕ್ನೋ, ವಾರಣಾಸಿ ನಗರಗಳಿಗೆ  ಒಂದು ವಾರದ ಭೇಟಿ ನೀಡುವ ಮುನ್ನ ಎರಡು ದಿನ ಮುಂಚಿತವಾಗಿ ದೆಹಲಿಯಿಂದ  ನೇರವಾಗಿ ಫೈಜಾಭಾದ್ ಮತ್ತು ಅಯೋಧ್ಯಾ ನಗರಗಳಿಗೆ ತೆರಳಿದ್ದೆ.. ಕಳೆದ 28 ವರ್ಷಳಿಂದ ನಾನು ನೋಡಲು ಹಂಬಲಿಸುತ್ತಿದ್ದ ನಗರ ಇದೆನಾ? ಎನ್ನುವಷ್ಟು ಆಶ್ಚರ್ಯಕರ ರೀರಿತಿಯಲ್ಲಿ ಪುರಾತನ ನಗರವಾದ ಅಯೋಧ್ಯೆ ತಣ್ಣಗೆ ಮಲಗಿತ್ತು. ಪಕ್ಕದ ಸರಯೂ ನದಿ ಕೂಡ ಜಗತ್ತಿನ ಗೊಡವೆಗಳಿಗೂ ನನಗೂ ಏನು ಸಂಬಂಧವಿಲ್ಲ ಎಂಬಂತೆ ತಣ್ಣಗೆ ಹರಿಯುತ್ತಿತ್ತು.
ಜಗತ್ತಿನಾದ್ಯಂತ ಸುದ್ದಿಯಲ್ಲಿರುವ ನಗರವೆಂದು ಕುಖ್ಯಾತಿ ಪಡೆದು, ಹಲವು ಕಾರಣಕ್ಕಾಗಿ ಸದಾ ಉದ್ವಿಗ್ನಗೊಳ್ಳುವ ಅಯೋಧ್ಯೆ ಎಂಬ ಪುರಾತನ ನಗರ ನಾನು ಊಹಿಸಿಕೊಂಡಿದ್ದಕ್ಕಿಂತ ಭಿನ್ನವಾಗಿತ್ತು. ಕಿರಿದಾದ ರಸ್ತೆಗಳ ಎರಡು ಬದಿಯಲ್ಲಿ ಗತ ಇತಿಹಾಸದ ಕಥೆಗಳನ್ನು ಹೇಳುವ ಪುರಾತನ ಕಟ್ಟಡಗಳು, ಪ್ರತಿ ಹೆಜ್ಜೆ ಹೆಜ್ಜೆಗೂ ಎರದೆಗೆ ಬಿಲ್ಲನ್ನು ಏರಿಸಿ ನಿಂತ ರಾಮನ ಭಾವಚಿತ್ರಗಳು, ಭಕ್ತಿಗೆ ಪರಾಕಾಷ್ಟೆಯಂತಿದ್ದ ಹನುಮ ಈಗ ಉಗ್ರ ನರಸಿಂಹನಾಗಿ ಪರಿವರ್ತನೆ ಹೊಂದಿರುವ ಚಿತ್ರಗಳನ್ನು ನೋಡುತ್ತಾ ಆಧುನಿಕ ರಾಮ ಭಕ್ತರು ಕೃಷ್ಣನ ಕೈಯಲ್ಲಿರುವ ಕೊಳಲನ್ನು ಕಿತ್ತು, ಖಡ್ಗ ಕೊಡುವ ದಿನ ದೂರವಿಲ್ಲ ೆನಿಸಿತು.
ಅಲ್ಲಿನ ಮುಖ್ಯ ರಸ್ತೆಗಳಲ್ಲಿ ಹಾಗೂ  ರೈಲ್ವೆ ನಿಲ್ದಾಣಗಳಲ್ಲಿ ಜನಗಳಿಗಿಂತ ಹೆಚ್ಚಾಗಿ ತುಂಬಿ ತುಳುಕಾಡುವ ಬಿಡಾಡಿ ದನಗಳು, ಹಾಗೂ  ರಾಮ ಮಂದಿರಕ್ಕಾಗಿ ಶೇಖರಿಸಿದ ಇಟ್ಟಿಗೆಗಳು ಮತ್ತು ಕೆತ್ತಿದ ಕಲ್ಲಿನ ಕಂಬಗಳಿಗೆ ಅರಿಶಿನ ಕುಂಕುಮ ಬಳಿದು ನಮಸ್ಕರಿಸುವ ಜನರು, ಮತ್ತು ಈ ನಗರಕ್ಕೆ ಬರುವ ಪ್ರವಾಸಿಗರು ನೀಡುವ ಭಿಕ್ಷೆಯಿಂದ ಬದುಕು ನೂಕುತ್ತಿರುವ ಹಾಗೂ ಜಗದ ಎಲ್ಲಾ ಜಂಜಡಗಳಿಂದ ಬಿಡುಗಡೆಗೊಂಡಿಂತಿರುವ ಸನ್ಯಾಸಿಗಳು, ಅಲ್ಲಿನ ಸಿಹಿತಿಂಡಿ, ಹಾಗೂ ಇತರೆ ಅಂಗಡಿಯ ಮಾಲೀಕರನ್ನು ನೋಡುವಾಗ ನಗರಕ್ಕೆ ಏನೂ ಆಗಿಲ್ಲವೆಂಬಂತೆ ಬದುಕುತ್ತಿರುವ ಪರಿಯನ್ನು ನೋಡಿ ಆಶ್ಚರ್ಯವಾಯಿತು.
ಜಿಲ್ಲಾ ಕೇಂದ್ರವಾದ ಫೈಜಾಬಾದ್ ನಗರದಿಂದ  ಸುಮಾರು ಎಂಟರಿಂದ ಹತ್ತು ಕಿ.ಮಿ. ದೂರವಿರುವ ಅಯೋಧ್ಯಾ ನಗರಕ್ಕೆ  ಪ್ರತಿ ಐದು ನಿಮಿಷಕ್ಕೆ ಎಂಟು ಮಂದಿ ಕೂರುವ ಆಟೋಗಳು  ಪ್ರವಾಸಿಗರನ್ನು ಕೊಂಡೊಯ್ಯುತ್ತವೆ. ಇಲ್ಲಿನ ಬಹುತೇಕ ಆಟೋ ಚಾಲಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾನು ಪ್ರಯಾಣಿಸುತ್ತಿದ್ದ ಆಟೋದಲ್ಲಿ ಪ್ರಯಾಣಿಕರು ತುಂಬಿದ್ದರಿಂದ ಆಟೊ ಚಾಲಕ ತನ್ನ ಸೀಟಿನ ಪಕ್ಕದಲ್ಲಿ ನನ್ನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ  ನಾನು ಅವನ್ನು ಮಾತಿಗೆ ಎಳೆದು. “ವಿವಾದದಿಂದ ನಿಮ್ಮ ಸಮುದಾಯಕ್ಕೆ ತೊಂದರೆಯಾಗಿದೆಯಾ?’ ಎಂದು ಪ್ರಶ್ನಿಸಿದೆ. ತಣ್ಣಗೆ ಉತ್ತರಿಸಿದ.ಇಲ್ಲ ಸಾಹೇಬ್, ಪ್ರವಾಸಿಗರು ಜಾಸ್ತಿಯಾಗಿದ್ದಾರೆ, ನಮ್ಮ ಅನ್ನದ ಬಟ್ಟಲಿಗೆ ಯಾವ ತೊಂದರೆಯಾಗಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ಬರುವುದಾದರೆ, ಪ್ರವಾಸಿಗರನ್ನು ನಂಬಿಕೊಂಡು ಬದುಕುವ ನಮ್ಮಂತಹವರಿಗೆ ಸಂತೋಷದ ಸಂಗತಿಎಂದು. ಅತ್ಯಂತ ನಿರ್ಲಿಪ್ತೆಯಿಂದ ಕೂಡಿದ ಆತನ ಮಾತುಗಳಲ್ಲಿ ನಮಗೆ ರಾಮ ರಹೀಮರಿಗಿಂತ ಮುಖ್ಯವಾಗಿ ಕೂಡಿ ಬಾಳುವುದು ಹಾಗೂ ನೆಮ್ಮದಿಯಿಂದ ಇರುವುದು ಮುಖ್ಯವಾಗಿತ್ತು.
ಅಯೋಧ್ಯಾ ರಸ್ತೆಗಳಲ್ಲಿ ಓಡಾಡುತ್ತಿರುವಾಗ ಅಲ್ಲಿ ಶರ್ಮಾ ಎಂದು ಕರೆಸಿಕೊಳ್ಳುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಒಂದು ಹುಡುಗ  ನನ್ನ ಬಳಿ ಬಂದು “ಸರ್  ನಾನು ಎಸ್.ಎಸ್.ಎಲ್.ಸಿ. ಓದುತ್ತಿದ್ದೇನೆ. ನಿಮಗೆ ಮಾರ್ಗದರ್ಶಿಯಾಗಿ ನಗರವನ್ನು ಸುತ್ತಾಡಿಸುತ್ತೇನೆ” ಎಂದ. ನಿನ್ನ ಶುಲ್ಕ ಎಷ್ಟು? ಎಂದು ಕೇಳಿದಾಗ ಕೇವಲ ಐವತ್ತು ರೂಪಾಯಿ ಎಂದು ನುಡಿದ. ನನಗೆ ಆಶ್ಚರ್ಯವಾಯಿತು.  ರಜೆಯ ದಿನಗಳಲ್ಲಿ ಮಾತ್ರ ಕೆಲಸ ಮಾಡುತ್ತೇನೆ ಸರ್. ಶಿಕ್ಷಣಕ್ಕೆ ತಂದೆ ತಾಯಿಗೆ ಹೊರೆಯಾಗಿಲ್ಲ ಎಂದು ಆತ ನುಡಿದಾಗ ನನಗೆ ಖುಷಿಯಾಯಿತು.  ನಾನುಬಾಬರಿ ಮಸೀದಿ ಕೆಡವಿದ ಜಾಗಕ್ಕೆ ಕರೆದೊಯ್ದರೆ ಸಾಕುನಿನಗೆ ಐವತ್ತು ರೂ ಕೊಡುತ್ತೇನೆ ಎಂದು ಹುಡುಗನ  ಹೆಗಲ ಮೇಲೆ ಕೈ ಹಾಕಿ, ನನಗೆ ಮೊದಲು ಒಳ್ಳೆಯ ಚಹಾ ಅಂಗಡಿಗೆ ಕರೆದುಕೊಂಡು ಹೋಗು ಎಂದು ನುಡಿದೆ. 

ಅಯೋಧ್ಯೆಯ ನಗರವು ನಮ್ಮ ಧಾರವಾಡದ ಪೇಡಾ ರೀತಿಯಲ್ಲಿ ಸಿಹಿ ತಿಂಡಿಗೆ ಪ್ರಸಿದ್ಧಿಯಾಗಿದೆ. ತನ್ನ ಗೆಳೆಯನ ಅಂಗಡಿಗೆ ಕರೆದೊಯ್ಯವ ಮಾರ್ಗದಲ್ಲಿ ಹುಡುಗ ನನ್ನ ವಿವರಗಳನ್ನು ಕೇಳುತ್ತಾ ಹೋದ. ತಕ್ಷಣ ನೆನಪಾದವನಂತೆಸರ್ ಒಬ್ಬ ಯುವಕ ನಿಮ್ಮ ಕರ್ನಾಟಕದವನು ನಮಗೆಲ್ಲಾ ತೀರಾ ಪರಿಚಿತ ಗೆಳೆಯನಾಗಿದ್ದಾನೆ. ಕಳೆದ ಆರು ತಿಂಗಳಿನಿಂದ ಇಲ್ಲಿನ ಹನುಮಾನ್ ಮಂದಿರದಲ್ಲಿ ನೀಡುವ ಪ್ರಸಾದ ತಿಂದು ಬದುಕುತ್ತಿದ್ದಾನೆ ಎಂದು ಹೇಳುತ್ತಾ, ನನ್ನನ್ನು ಸಿಹಿ ಮತ್ತು  ಚಹಾ ಮಾರಾಟದ  ಅಂಗಡಿಯಲ್ಲಿ ಕೂರಿಸಿ ಆತನನ್ನು ಕರೆತರಲು ಹೋದ. ನಾನು ಚಹಾ ಕುಡಿಯುತ್ತಿದ್ದಂತೆ ಯುವಕನನ್ನು ಕರೆತಂದು ನನ್ನ ಮುಂದೆ ನಿಲ್ಲಿಸಿದ. ಬಾಗಲಕೋಟೆಯ ಸುಮಾರು ಮುವತ್ತೈದು ವಯಸ್ಸಿನ ಬ್ರಾಹ್ಮಣ ಯುವಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಚಿಕ್ಕಪ್ಪನ ಜೊತೆ ಹೊಡೆದಾಡಿಕೊಂಡಿದ್ದ. ಪೋಲಿಸ್ ಠಾಣೆಯಲ್ಲಿ ಆತನ ವಿರುದ್ಧ ಮೊಕದ್ದಮೆ ದಾಖಲಾದ ಹಿನ್ನಲೆಯಲ್ಲಿ  ಪೊಲೀಸರಿಗೆ ಹೆದರಿಕೊಂಡು ಊರು ಬಿಟ್ಟಿದ್ದ. ನಂತರ ಪತ್ನಿಯು ಈತನನ್ನು ತ್ಯೆಜಿಸಿ, ತನ್ನ ಮಗುವಿನೊಂದಿಗೆ ತಮ್ಮನ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಬದುಕುತ್ತಿದ್ದಾಳೆ.  ಸಾಪ್ಟ್ ವೇರ್ ಇಂಜಿನಿಯರ್ ಆಗಿರುವ ಆಕೆಯ ಸಹೋದರ ಈತನನ್ನು ತನ್ನ ಮನೆಗೆ ಸೇರಿಸುತ್ತಿಲ್ಲ. ಮಗವನ್ನು ನೋಡಲು ಬಿಡುತ್ತಿಲ್ಲ. ಕಥೆಯನ್ನೆಲ್ಲಾ ನನ್ನ ಬಳಿ ಕನ್ನಡದಲ್ಲಿ ಹೆಳಿಕೊಂಡು ತಾನು ಹೊದ್ದಿದ್ದ ಕಾವಿ ವಸ್ತ್ರದಲ್ಲಿ ಮುಖ ಮುಚ್ಚಿಕೊಂಡು ಅಳತೊಡಗಿದ. “ ಸಾರ್ ನನ್ನ ಆರು ವರ್ಷದ ಮಗಳು ನೋಡಬೇಕು ಅಂತಾ ಆಸೆಯಾಗ್ತಿದೆ. ಜೀವನದಲ್ಲಿ ಇದು ಬಿಟ್ಟರೆ ನನಗೆ ಬೇರೆ ಆಸೆಯಿಲ್ಲಎಂದು ಆತ ಬಿಕ್ಕಳಿಸುವಾಗ  ಅಂಗಡಿಯಲ್ಲಿ ನಾವು ಮೌನವಾಗಿ ಅವನ ದುರಂತ ಕಥೆಗೆ ಸಾಕ್ಷಿಯಾದೆವು. ನನಗೆ ಗೈಡ್ ಆಗಿದ್ದ ಶರ್ಮ ಮತ್ತು ಆತನ ಅಂಗಡಿಯ ಗೆಳಯನಿಗೆ ಕನ್ನಡ ಅರ್ಥವಾಗದಿದ್ದರೂ ಇದೊಂದು ಕೌಟುಂಬಿಕ ದುರಂತ ಎಂಬುದು ಅವರಿಗೆ ಅರ್ಥವಾಗಿತ್ತು. ನಾಲ್ಕು ತಿಂಗಳ ಕಾಲ ಮಂತ್ರಾಲಯದಲ್ಲಿದ್ದ ಯುವಕ, ನಂತರ ಎರಡು ತಿಂಗಳು ಕಾಲ ಕಾಶಿಯಲ್ಲಿದ್ದು ಅಂತಿಮವಾಗಿ ಅಯೋಧ್ಯೆಯನ್ನು ತಲುಪಿದ್ದ. ತಲೆ ಕೂದಲು, ಗಡ್ಡವನ್ನು ಬೆಳೆಸಿಕೊಂಡು ಸಂಪೂರ್ಣವಾಗಿ ಸನ್ಯಾಸಿಯಾಗಿ ರೂಪಾಂತರಗೊಂಡಿದ್ದ.
“ತಮ್ಮಾ ನೀನು ಬಾಗಲಕೋಟೆಗೆ ಬರುವುದಾದರೆ, ನಿನ್ನ ಕೇಸ್ ಪರಿಹರಿಸಿಕೊಡುತ್ತೇನೆ ಎಂದು ಆತನಿಗೆ ಸಮಾಧಾನ ಹೇಳಿ, ಚಹಾ ಕುಡಿಸಿ, ಕೈಗೆ ಐನೂರು ರೂಪಾಯಿ ಕೊಡಲು ಹೋದಾಗ ಆತ ನೀರಾಕರಿಸಿದ. “”ನನಗೆ ಹಣದ ಅವಶ್ಯಕತೆ ಇಲ್ಲ ಸರ್ಎನ್ನುತ್ತಾ ಕೈ ಮುಗಿದು ನಿರಾಕರಿಸಿದ. ಕೊನೆಗೆ ನಾನೇ ಒತ್ತಾಯ ಮಾಡಿ ಆತನ ಖಾವಿ ಜುಬ್ಬಾದ ಜೇಬಿಗೆ ಇಟ್ಟು, ನನ್ನ ದೂರವಾಣಿ ನಂಬರ್ ನೀಡಿ ಸಮಾಧಾನ ಹೇಳಿದೆ. ನಂತರ ರಾಮ ಜನ್ಮ ಭೂಮಿ ವಿವಾದಿತ ಸ್ಥಳಕ್ಕೆ ನನ್ನ ಜೊತೆ ಬಂದ. ಅಲ್ಲಿನ ಪೋಲಿಸ್ ಸರ್ಪಗಾವಲು, ಹಾಗೂ ರಾಮ ಭಕ್ತರ ಉದ್ದನೆಯ ಸಾಲು ನೋಡಿ, ನನಗೆ ಒಳಗೆ ಹೋಗಿ ಅಲ್ಲಿ ಇಟ್ಟಿರುವ ರಾಮಲಲ್ಲಾ ಎಂಬ ಪ್ರತಿಮೆಗಳನ್ನು ನೋಡಲು ಆಸಕ್ತಿ ಬರಲಿಲ್ಲ. ನನಗೆ ಕ್ಷಣದಲ್ಲಿ ಈ ಅಯೋಧ್ಯಾ ನಗರವು ನನಗೆ ದೇವರ ಅಂದರೆ, ರಾಮ ಅಥವಾ ರಹಿಮರ ಪವಿತ್ರ ಕ್ಷೇತ್ರ ಎನಿಸುವುದಕ್ಕೆ ಬದಲಾಗಿ, ಜಗತ್ತಿನಿಂದ, ಸಮಾಜದಿಂದ ಮತ್ತು ಕುಟುಂಬದಿಂದ ತ್ಯೆಜಿಸಲ್ಪಟ್ಟವರ ಹಾಗೂ ಪ್ರೀತಿ ವಂಚಿತರ ಪಾಲಿಗೆ ತಾಯಿಯ ಮಡಿಲು ಎನಿಸಿತು.

ನಾನು ಸರಯೂ ನದಿ ತೀರಕ್ಕೆ ಹೋಗಿ, ಅಲ್ಲಿಂದ ಪೈಜಾಬಾದ್ ಗೆ ಬಸ್ ಅಥವಾ ಆಟೊ ಹಿಡಿಯಬೇಕಿತ್ತು. ಮತ್ತೊಮ್ಮೆ ಅಯೋಧ್ಯೆಗೆ ಬರುತ್ತೇನೆ ಎಂದು ಹೇಳುತ್ತಾ, ಅವರಿಗೆ ವಿದಾಯ ಹೇಳಿದಾಗ ಸಂಜೆ ಆರು ಗಂಟೆಯಾಗಿತ್ತು. ಚಳಿ ಆರಂಭವಾಗತೊಡಗಿತು. ಸರಯೂ ನದಿ ತೀರಕ್ಕೆ ಬಂದಾಗ, ಮುಂಖ್ಯ ಮಂತ್ರಿ ಆದಿತ್ಯನಾಥ ಯೋಗಿ  ಇಡೀ ಅಯೋಧ್ಯೆ ನಗರಿಗೆ ಹೊಸ ರೂಪು ಕೊಡಲು ತಯಾರಿ ನಡೆಸಿದ ಕಾರ್ಯಕ್ರಮಗಳು ಎದ್ದು ಕಾಣುತ್ತಿದ್ದವು. ನದಿಗೆ ಬ್ಯಾರೆಜ್ ಮಾದರಿಯಲ್ಲಿ ಅಡ್ಡಕಟ್ಟೆಯನ್ನು ಕಟ್ಟಿ ನದಿಯ ನೀರನ್ನು ಪುರಾತನ ಕಟ್ಟದ ಸುತ್ತಮುತ್ತಲಿನ ಸರೋವರಗಳಿಗೆ ತುಂಬಿಸುವ ಕಾಮಗಾರಿ ನಡೆಯುತ್ತಿತ್ತು. ದಡೆಯಲ್ಲಿ ಕುಳಿತು ಅಯೋಧ್ಯೆಯ ಪುರಾತನ ಕಟ್ಟಡಗಳನ್ನು ನೋಡುತ್ತಾ, ಅಲಿನ ನೂರೆಂಟು ಧರ್ಮಛತ್ರಗಳನ್ನು ವೀಕ್ಷಿಸುತ್ತಿದ್ದಾಗ ನಗರದ ಧರ್ಮಗಳಾಚೆಗಿನ ನೆಲೆಯಲ್ಲಿ ನಿಂತು ಎಲ್ಲಾ ತಬ್ಬಲಿಗಳನ್ನು ಪೋಷಿಸುತ್ತಿದೆ ಎನಿಸಿತು.
ನಾಡಿದ್ದು ಅಂದರೆ, ಆಗಸ್ಟ್ ಐದರಂದು ಅಯೋಧ್ಯೆ ನಗರದಲ್ಲಿ ರಾಮ ಮಂದಿರ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿದೆ.  ಇದು ದೇಶಭಕ್ತರ ಪಾಲಿಗೆ ಇದು ದಿಗ್ವಿಜಯ. ಆದರೆ, ಪ್ರಜ್ಞಾವಂತ ನಾಗರೀಕರ ಪಾಲಿಗೆ ಇದು ಕೇವಲ ಧರ್ಮದ ಉನ್ಮಾದ. ಏಕೆಂದರೆ, ಧರ್ಮದ ಹೆಸರಿನಲ್ಲಿ ರಕ್ತಸಿಕ್ತವಾಗಿರುವ ಭಾರತಕ್ಕೆ  ಈಗ  ಬೇಕಾಗಿರುವುದು ಮಂದಿರ ಮಸೀದಿಗಳಲ್ಲ, ಇಂತಹ ನಿರ್ಮಾಣಕ್ಕಿಂತ ಮುಖ್ಯವಾಗಿ ಮುರಿದು ಬಿದ್ದ ಮನಸ್ಸುಗಳನ್ನು ಕಟ್ಟಬೇಕಿದೆ.

ಜಗದೀಶ್ ಕೊಪ್ಪ