ಶುಕ್ರವಾರ, ಸೆಪ್ಟೆಂಬರ್ 21, 2018

ಮಧ್ಯಮ ಮಾರ್ಗದ ಪ್ರತಿಪಾದಕ : ಗಿರಡ್ಡಿ ಗೋವಿಂದರಾಜರ ನೆನಪುಗಳು






ಕನ್ನಡ ಸಾಂಸ್ಕøತಿಕ ಲೋಕದ ಪರಿಚಾರಕರಂತಿದ್ದ ಡಾ.ಗಿರಡ್ಡಿ ಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು. ಅವರ ನಿರ್ಗಮನದೊಂದಿಗೆ ಧಾರವಾಡ ಮತ್ತು ಕನ್ನಡದ ಸಾಹಿತ್ಯಲೋಕದಲ್ಲಿ ಸೃಷ್ಟಿಯಾದ ಶೂನ್ಯ ಬಹುಕಾಲ ನಮ್ಮನ್ನೆಲ್ಲಾ ಕಾಡುವಂತಹದ್ದು. ಸಂಶೋಧನೆಯ ಕ್ಷೇತ್ರದಲ್ಲಿ ಮಾರ್ಗದರ್ಶಕರಂತಿದ್ದ ಡಾ.ಎಂ.ಎಂ.ಕಲ್ಬುರ್ಗಿ ಮತ್ತು ವಿಮರ್ಶೆಯ ಲೋಕದಲ್ಲಿ ಮಾದರಿಯಾಗಿದ್ದ ಗಿರಡ್ಡಿ  ಇಬ್ಬರು ದಿಗ್ಗಜರ ಅಗಲಿಕೆಯ ನೋವನ್ನು ಜೀರ್ಣಿಸಿಕೊಳ್ಳುವುದು ಅವರ ಒಡನಾಡಿಗಳ ಪಾಲಿಗೆ ಸುಲಭದ ಸಂಗತಿಯಲ್ಲ.
ಧಾರವಾಡ ಮಣ್ಣಿನ ಹಾಗೂ ಇಲ್ಲಿನ ನೆಲಮೂಲ ಸಂಸ್ಸøತಿಯ  ವಾರಸುದಾರರಂತೆ ಬದುಕಿದ್ದ ಇಂತಹ  ಮಹಾನ್ ವಿದ್ವಾಂಸರ ಜೀವನ ಮತ್ತು ಸಾಧನೆಯನ್ನು ಸ್ಮರಣೆಯ ನೆಪದಲ್ಲಿ ಜೀವಂತವಾಗಿಡಲು ಅವರ ಅನೇಕ ಒಡನಾಡಿಗಳು ಮತ್ತು ಶಿಷ್ಯರು ಶ್ರಮಿಸುತ್ತಿದ್ದಾರೆ. ನಿಟ್ಟಿನಲ್ಲಿ ಗಿರಡ್ಡಿ ಗೋವಿಂದರಾಜರ ಜನ್ಮ ದಿನವಾದ ಇಂದು (22-9-2018) ಧಾರವಾಡದಲ್ಲಿಗಿರಡ್ಡಿ ಗೋವಿಂದರಾಜ ಪ್ರತಿಷ್ಟಾನಎಂಬ ಸಾಂಸ್ಕೃತಿಕ ಸಂಸ್ಥೆ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಅವರ ಆಸಕ್ತಿಯ ವಿಷಯಗಳಲ್ಲಿ ಒಂದಾದಬದಲಾಗುತ್ತಿರುವ ಜಗತ್ತುಕುರಿತು ರಾಷ್ಟ್ರೀಯ ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ. ಇದಲ್ಲದೆ, ಸಂಜೆ ಅವರ ಸಾಹಿತ್ಯ ಕೃತಿಗಳ ಆಧಾರಿತಆಮುಖ- ಮುಖನಾಟಕವನ್ನು  ಸಹ ಆಯೋಜಿಸಲಾಗಿದೆ.
ಅರವತ್ತು ವರ್ಷಗಳ ಸುಧೀUರ್ಘ  ಕಾಲ ಡಾ. ಗಿರಡ್ಡಿಗೋವಿಂದರಾಜು ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಒಡನಾಟವಿರಿಸಿಕೊಂಡು ಸೃಷ್ಟಿಸಿದ ಸಾಹಿತ್ಯ, ನೀಡಿದ ಉಪನ್ಯಾಸಗಳು ಮತ್ತು ಸಂಪಾದಿಸಿಕೊಟ್ಟ ಕೃತಿಗಳು ಇವೆಲ್ಲವೂ ಕನ್ನಡದ ಸಾಂಸ್ಕತಿಕ ಲೋಕವನ್ನು ಶ್ರೀಮಂತಗೊಳಿಸಿವೆ. ಗಿರಡ್ಡಿಯವರು ಕೈ ಆಡಿಸದೆ ಇರುವ ಕ್ಷೇತ್ರಗಳಿಲ್ಲ. ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ಸಂಪಾದನೆ, ಅನುವಾದ ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ದೈತ್ಯ ಪ್ರತಿಭೆಯ ಹರವು ಹರಡಿದೆ. ತಾವು ಕೈ ಆಡಿಸಿದ ಪ್ರಕಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯ ಛಾಪನ್ನು ಒತ್ತುವುದರ ಮೂಲಕ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲೂ ಗಿರಡ್ಡಿಯವರು ತಮ್ಮ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.
ತಮ್ಮ ಸಾಹಿತ್ಯ ಕೃಷಿಯ  ಆರಂಭದ ದಿನಗಳಲ್ಲಿ  ಎರಡು ಕವನ ಸಂಕಲಗಳನ್ನು ಹೊರ ತಂದಿದ್ದ ಗಿರಡ್ಡಿಯವರು ಮರ್ಲಿನ್ ಮನ್ರೊ ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕದ ಗಮನ ಸೆಳೆದಿದ್ದರು. ಆನಂತರದ ದಿನಗಳಲ್ಲಿ  ಅವರು ಕಥಾ ಕ್ಷೇತ್ರದತ್ತ ಹೊರಳಿ, ಬರೆದ ಹಂಗು ಮತ್ತು ಮಣ್ಣು ಎಂಬ ನೀಳ್ಗತೆ ಇವುಗಳು ಕನ್ನಡ ಕಥಾಲೋಕದಲ್ಲಿ ಅನನ್ಯ ಕಥೆಗಳಾಗಿ ಉಳಿದುಕೊಂಡವು. ಇವುಗಳಲ್ಲಿ ಹಂಗು ಕಥೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು 1976 ರಲ್ಲಿ ನಿರ್ಮಿಸಿದ  ಕಥಾ ಸಂಗಮಎಂಬ ಸಿನಿಮಾದ ಮೂರು ಕಥೆಗಳಲ್ಲಿ ಒಂದಾಗಿರುವುದು ವಿಶೇಷ. ( ಸಿನಿಮಾ ರಜನಿಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು)  ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡದಲ್ಲಿ ಎಂ..  ಪದವಿ ಹಾಗೂ  ಇಂಗ್ಲೆಂಡಿನಲ್ಲಿ ಇಂಗ್ಲೀ ಷ್ ವಿಷಯದ ಭಾಷಾ ಶಾಸ್ತ್ರದಲ್ಲಿ ಎಂ.. ಪದವಿ ಪಡೆದಿದ್ದ ಗಿರಡ್ಡಿಯವರು ನಂತರ ಗುಲ್ಬರ್ಗಾ ವಿ.ವಿ.ಯಲ್ಲಿ ಶೈಲಿ ಶಾಸ್ತ್ರ ಕುರಿತಂತೆ ಪಿ.ಹೆಚ್.ಡಿ ಪದವಿ ಹಾಗೂ ಹೈದರಾಬಾದಿನ ಸೆಂಟ್ರಿಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯಿಂದ ಡಿಪ್ಲಮೊ ಇನ್ ಇಂಗ್ಲೀಷ್ನಲ್ಲಿ  ಪದವಿಯನ್ನು ಪಡೆದಿದ್ದರು. ಹೀಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೇಲೆ ಅವರಿಗಿದ್ದ ಆಳವಾದ ಜ್ಞಾನ ಮತ್ತು ವಿದ್ವತ್ತು ಕನ್ನಡದ ವಿಮರ್ಶೆಯ ಲೋಕಕ್ಕೆ ವರವಾಗಿ ಪರಿಣಮಿಸಿತು.
1970 ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಪರಂಪರೆಯನ್ನು ಹುಟ್ಟು ಹಾಕಿದ ಆದ್ಯರಲ್ಲಿ ಒಬ್ಬರಾದ ಡಾ.ಗಿರಡ್ಡಿ ಗೋವಿಂದರಾಜರು ತಮ್ಮ ವಸ್ತುನಿಷ್ಟ ಶೈಲಿಯಿಂದ ಕನ್ನಡ  ಕಥೆ ಮತ್ತು ಕಾವ್ಯ ಹಾಗೂ ಕಾದಂಬರಿ ಇವುಗಳ ಕಥಾವಸ್ತು, ಭಾಷೆ ಮತ್ತು ಶೈಲಿ ಇವುಗಳನ್ನು ವಿಮರ್ಶಿಸುತ್ತಾ, ಲೇಖಕ ಮತ್ತು ಓದುಗನ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ  ಓದುಗರ ಅಭಿರುಚಿಯ ದಿಕ್ಕನ್ನು ಬದಲಿಸಿದವರಲ್ಲಿ ಮುಖ್ಯರು. 70 ಮತ್ತು 80 ದಶಕದಲ್ಲಿ ನಿರಂತರವಾಗಿ ಹದಿನೈದು ವಿಮರ್ಶಾ ಕೃತಿಗಳನ್ನು ಬರೆದ ಕೀರ್ತಿ ಗಿರಡ್ಡಿಯವರದು. ತಾವು ಇಂಗ್ಲೆಂಡಿನಲ್ಲಿದ್ದ ಸಮಯದಲ್ಲಿ ಅಲ್ಲಿನ ರಂಗಭೂಮಿ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಭಾರತಕ್ಕೆ ಹಿಂತಿರುಗಿದ ನಂತರ ರಚಿಸಿದ ಇಂಗ್ಲೇಡಿನ ರಂಗಭೂಮಿಎಂಬ ಕೃತಿ ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆಯಾಗಿದೆ.. ವೃತ್ತಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರೂ ಸಹ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಧ್ಯಾನಿಸಿದ ಗಿರಡ್ಡಿಯವರು ವಚನ ಸಾಹಿತ್ಯ ಕುರಿತಂತೆ ಹಾಗೂ ಜಾನಪದ ಸಾಹಿತ್ಯ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.
 ಬದುಕು, ಬರೆವಣಿಗೆ ಹಾಗೂ  ಸಾಮಾಜಿಕ ಚಟುವಟಿಕೆ ಇವುಗಳಲ್ಲಿ ನಿರಂತವಾಗಿ ಅರವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರೂ ಸಹ ಗಿರಡ್ಡಿಯವರದು ಎಂದಿಗೂ  ಆರ್ಭಟ ಅಥವಾ ಅಬ್ಬರದ ನಡುವಳಿಕೆಯಲ್ಲ.  ತಮ್ಮ ವಸ್ತು ನಿಷ್ಟ ನೆಲೆಯಿಂದ ಅತ್ತ ಇತ್ತ ಕದಲದೆ ಹೇಳಬೇಕಾದ ನಿಷ್ಟುರ ಸತ್ಯಗಳನ್ನು ಅತ್ಯಂತ ಮೆದುಮಾತಿನಲ್ಲಿ ಹೇಳುತ್ತಾ ಬಂದರು. ಬೀದಿಗಳಿದು ಘೋಷಣೆ ಕೂಗಿದರೆ ಮಾತ್ರ ಪರಿವರ್ತನೆಯ ಹರಿಕಾರರು ಮತ್ತು ಕ್ರಾಂತಿಕಾರರು ಎಂದು ನಂಬಿರುವ ಕಾಲಘಟ್ಟದಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಸಾಂಸ್ಕøತಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಸೃಷ್ಟಿಸಿದರು. ಕಾರಣಕ್ಕಾಗಿ ಅತಿರೇಖದ ತುತ್ತ ತುದಿಗಳಂತಿರುವ ಎಡ ಮತ್ತು ಬಲಗಳ ತಾತ್ವಿಕ ಮಾರ್ಗವನ್ನು ತುಳಿಯಲು ನಿರಾಕರಿಸಿದ ಅವರು ಬುದ್ಧ ಮತ್ತು ಗಾಂಧೀಜಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ತಲೆ ಮಾರಿನ ಅನೇಕರಿಗೆ ಮಾಗದರ್ಶಕರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುಬೆ ಸಂವಹನ, ಮಾತುಕತೆ ಅಥವಾ  ಚರ್ಚೆ ಇಂತಹ ಕ್ರಿಯೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವ ಕಾಲಘಟ್ಟದಲ್ಲಿ ಅಸಹಿಷ್ಣುತೆ ಮತ್ತು ಹಿಂಸೆಯ ಹಿಂದಿನ ಕಾರಣಗಳನ್ನು ಗ್ರಹಿಸಲಾರದಷ್ಟು ಅಸೂಕ್ಷಮತೆ ನಾವು ಒಳಗಾಗಿದ್ದೆವೆ. ಈಕಾರಣದಿಂದಾಗಿ   ನಮಗಿನ್ನೂ ಗಿರಡ್ಡಿಯವರು ಪ್ರತಿಪಾದಿಸಿದ ಮಧ್ಯಮ ಮಾರ್ಗ ಸಮಗ್ರವಾಗಿ ಅರ್ಥವಾಗಿಲ್ಲ. ಧರ್ಮ ಅಥವಾ ಪಂಥಗಳ ನಡುವಿನ ಚಿಂತನೆಗ¼ ಕೊಡುಕೊಳೆಗೆ ಆಸ್ಪದವಿಲದೆ ಅನೇಕ ಬಗೆಯ ತಲ್ಲಣಗಳಿಗೆÀ ಪಲ್ಲಟಗಳಿಗೆ ಕಾರಣವಾಗುತ್ತಿರುವ ದಿನಮಾನಗಳಲ್ಲಿ ಗಿರಡ್ಡಿಯರ ಮಧ್ಯಮ ಮಾರ್ಗದ ಮಹತ್ವ  ಅರಿವಾಗತೊಡಗಿದೆ.

ಸಾಹಿತ್ಯದದಲ್ಲಿ ಅನೇಕ ಪಂಗಡಗಳಾಗಿ ದ್ವೀಪದಂತೆ ಬರಹಗಾರರು ಬದುಕುತ್ತಿದ್ದ ಸಂದರ್ಭದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಡು ಸಾಹಿತ್ಯ ಸಂವಾದ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ,  ಆರು ವರ್ಷಗಳ ಹಿಂದೆ ಧಾರವಾಡದಲ್ಲಿ ಗಿರಡ್ಡಿಯವರು ತಮ್ಮ ಸಹಪಾಠಿ ಎಂ.ಎಂ.ಕಲ್ಬುರ್ಗಿಯವರ ಜೊತೆಗೂಡಿ  ಪ್ರಜಾವಾಣಿ ಸಹಭಾಗಿತ್ವದಲ್ಲಿ ಹುಟ್ಟು ಹಾಕಿದಧಾರವಾಡ ಸಾಹಿತ್ಯ ಸಂಭ್ರಮಎಂಬ ಕಾರ್ಯಕ್ರಮ ಇದೀಗ ಸಾಹಿತ್ಯದ ಮೈಲಿಗಲ್ಲಾಗಿದೆ. ಎಲ್ಲಾ ಬಗೆಯ ನಂಬಿಕೆ ಮತ್ತು ದೃಷ್ಟಿಕೋನದ ಬರಹಗಾರರು ಹಾಗೂ ಓದುಗರು ಒಂದೆಡೆ ಕಲೆತು ಸಾಹಿತ್ಯ, Àಂಸ್ಕøತಿ ಮತ್ತು ಕಲೆ ಹೀಗೆ ವಿವಿಧ ವಿಷಯಗಳ ಕುರಿತು ಮೂರು ದಿನಗಳ ಕಾಲ  ಗಂಭೀರವಾಗಿ ಚರ್ಚಿಸುವುದು ಸುಲಭದ ಮಾತಲ್ಲ., ಇಂತಹ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಗಿರಡ್ಡಿಯವರದು.
ಇತ್ತೀಚೆಗಿನ ದಿನಗಳಲ್ಲಿ ವಿಮರ್ಶೆಯಿಂದ ಕಳಚಿಕೊಂಡು ಲಲಿತ ಪ್ರಬಂಧಗಳನ್ನು ರಚಿಸುತ್ತಾ ಓದುಗರಲ್ಲಿ ಆಹ್ಲಾದಕರ ಹಾಗೂ ಪ್ರಫುಲ್ಲವಾದ ಮನಸ್ಸನ್ನು ಸೃಷ್ಟಿ ಮಾಡಿದ್ದ ಅವರು,  ದೇವದತ್ತ ಪಟ್ನಾಯಕ್ ಅವರ ಜಯ ಎಂಬ ಮಹಾಭಾರತz ಇಂಗ್ಲೀಷ್À ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ  ಅನುವಾದದ ಶೈಲಿ ಮತ್ತು ಕ್ರಿಯೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇದು ಅವರ ಪಾಲಿಗೆ ಕೊನೆಯ ಕೃತಿಯಾಯಿತು.
ಇಂದು ಗಿರಡ್ಡಿಗೋವಿಂದರಾಜರು ನಮ್ಮೊಡನಿಲ್ಲ ಆದರೆ, ಅವರ ಸಾಹಿತ್ಯಕೃತಿಗಳು, ಅವರ ಗಂಭೀರವಾದ ಚರ್ಚೆ, ತಿಳಿಹಾಸ್ಯ, ತನ್ನ ಶಿಷ್ಯ ಬಳಗಕ್ಕೆ ಸಾಹಿತ್ಯವನ್ನು ಉಣಬಡಿಸುತ್ತಿದ್ದ ರೀತಿ ಇವೆಲ್ಲವೂ ಅವರ ನೆನಪುಗಳ ಜೊತೆ ನಮ್ಮೊಳಗೆ ಸದಾ ಹಸಿರಾಗಿರುತ್ತವೆ.
( ಇಂದು ಡಾ.ಗಿರಡ್ಡಿ ಗೋವಿಂದರಾಜರ ಜನ್ಮದಿನ.( 22-9-2018) ಈ ದಿನ ಧಾರವಾಡದಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಆರಂಭಗೊಳ್ಳುತ್ತಿದೆ. ಇದರ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪ್ರಜಾವಾಣಿ ಆವೃತ್ತಿಯ ಮೆಟ್ರೊ ಪುರವಣಿಗೆಗೆ ಬರೆದ ಲೇಖನ)
ಚಿತ್ರಗಳು ಸೌಜನ್ಯ- ಡೆಕ್ಕನ್ ಹೆರಾಲ್ಡ್ ಮತ್ತು ದ.ಹಿಂದೂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ