ಸೋಮವಾರ, ಸೆಪ್ಟೆಂಬರ್ 9, 2013

ಭೂ ಮಸೂದೆಯೆಂಬ ಚಿನ್ನದ ಕತ್ತಿ

ಭಾರತದಲ್ಲಿ ಹಲವು ವರ್ಷಗಳಿಂದ, ಹಲವು ರೂಪಗಳಲ್ಲಿ ಅನ್ನದಾತರ ಪಾಲಿಗೆ ಸಾವಿನ ಕುಣಿಕೆಯಂತೆ, ನೆತ್ತಿಯ ಮೇಲಿನ ತೂಗುಕತ್ತಿಯಂತೆ ಇದ್ದ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಭೂಮಸೂದೆ ಇದೀಗ ಸಂಸತ್ತಿನಲ್ಲಿ ಅಂಗೀಕೃತವಾಗಿದೆ.ಚಿನ್ನದ  ಹಿಂದಿನ ಮಸೂದೆಗೂ, ಈಗಿನ ಮಸೂದೆಗೂ ಇರುವ ವೆತ್ಯಾಸವೆಂದರೆ, ಹಿಂದಿನದು ಕಬ್ಬಿಣದ ಕತ್ತಿಯಾಗಿತ್ತು, ಈಗಿನದು ಚಿನ್ನದ ಕತ್ತಿಯಾಗಿದೆ. ಆದರೆ, ಪರಿಣಾಮ ಮಾತ್ರ ಒಂದೇ ರೀತಿಯದು.
ಈವರೆಗೆ ಇದ್ದ ಅಡ್ಡಿ ಆತಂಕಗಳನ್ನು ಸಡಿಲಗೊಳಿಸಿ, ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡುವ, ಪುನರ್ವಸತಿ ಕಲ್ಪಿಸುವ  ಹಾಗೂ ಕೈಗಾರಿಕೆಗಳಗೆ ಭೂಮಿ ನೀಡುವ ಕುರಿತ ಹಕ್ಕನ್ನು ಗ್ರಾಮ ಪಂಚಾಯಿತಿಗಳಿಗೆ ವರ್ಗಾಯಿಸುವ  ಕಾಯ್ದೆಯಿಂದಾಗಿ ಭೂಮಿ ಕಳೆದುಕೊಳ್ಳುವವರಿಗೆ ಈ ಮಸೂದೆ  ನೆರವಾಗಲಿದೆ ಎಂಬ ವ್ಯಾಖ್ಯಾನಗಳು ಮುಂದುವರಿದಿವೆ. ಇನ್ನೊದೆಂಡೆ ಭೂ ಪರಿಹಾರ ಹೆಚ್ಚಾದ ಕಾರಣ ವಸತಿ ಕ್ರೇತ್ರದಲ್ಲಿ ಮನೆಗಳು ಮತ್ತು ನಿವೇಶನಗಳ ಬೆಲೆ ಗಗನಕ್ಕೇರುತ್ತವೆ ಎಂಬ ಆತಂಕ ಸೃಷ್ಟಿಯಾಗಿದೆ. ಮಾಧ್ಯಮಗಳಲ್ಲಿ ತಮ್ಮ ಅನ್ನದಾತರಾದ ಕಾರ್ಪೊರೇಟ್ ಕಂಪನಿಗಳ ಪರವಾಗಿ, ಮತ್ತು ಕೈಗಾರಿಕೆಗಳ ಪರವಾಗಿ ಬೆಳವಣಿಗೆ ಅಡ್ಡಿಯಾಗ ಬಲ್ಲ ಮಸೂದೆ ಎಂಬ ಆತಂಕದ ಚರ್ಚೆ ಎಗ್ಗಿಲ್ಲದೆ ಸಾಗಿದೆ.( ಈ ಲೇಖನ ಬರೆಯುತ್ತಿರುವ ವೇಳೆಯಲ್ಲಿ ಎನ್,ಡಿ.ಟಿ.ವಿ. ಯ ಪ್ರಾಫಿಟ್ ಛಾನಲ್ ನಲ್ಲಿ ಬೆಳಿಗ್ಗೆ 11 ರಿಂದ ಸತತ ಎರಡು ಗಂಟೆಗಳ ಕಾಲ ಚರ್ಚೆ ಸಾಗಿದೆ. )
ಕಾನೂನು, ಹಣ ಮತ್ತು  ತೋಳ್ಬಲಗಳ ನೆರವಿನಿಂದ ಈ ದೇಶದ ರೈತರನ್ನು , ಸಣ್ಣ ಹಿಡುವಳಿದಾರರನ್ನು ವಂಚಿಸಿದ ಕಥೆ, ಹಾಗೂ ಅವರಿಂದ ಬಲವಂತವಾಗಿ ಭೂಮಿಯನ್ನು ಕಸಿದುಕೊಂಡ ವಿವರಗಳು ಭಾರತದ ಹೀನ ಚರಿತ್ರೆಯೊಂದರ ಸಂಪುಟವಾಗಬಲ್ಲದು.  ಬ್ರಿಟೀಷರು 1894 ರಲ್ಲಿ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು , ಸ್ವಾತಂತ್ರ್ಯಾನಂತರದ 66 ವರ್ಷಗಳ ಕಾಲ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಈ ದೇಶದ ಜನಪ್ರತಿನಿಧಿಗಳು, ಆಡಳಿತಗಾರರು ಜಾರಿಯಲ್ಲಿಟ್ಟಿದ್ದರು ಎಂಬ ಸಂಗತಿಯೇ ಅಪಮಾನಕಾರಿಯಾದುದು. ಒಂದೆಡೆ ಸಂವಿಧಾನದಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿ, ಮತ್ತೊಂದೆಡೆ, ಅವನ ಸರ್ವಸ್ವವನ್ನು ಕಿತ್ತುಕೊಳ್ಳುವ ಹಗಲು ದರೋಡೆಯ ಕೃತ್ಯಗಳು ನಿರಂತರವಾಗಿ ಸಾಗುತ್ತಾ ಬಂದಿದೆ. ಇದು ಅಸಮಾನತೆಯ ಭಾರತವಷ್ಟೇ ಅಲ್ಲ, ಹಲವು ವೈರುಧ್ಯಗಳ ಭಾರತವೂ ಕೂಡ ಹೌದು.
1990 ರಲ್ಲಿ ಜಾಗತೀಕರಣ ವ್ಯವಸ್ಥೆಗೆ ಭಾರತ ಬಾಗಿಲು ತೆರೆದುಕೊಂಡ ಪರಿಣಾಮವಾಗಿ ಗರಿಗೆದರಿದ ಆರ್ಥಿಕ ಚಟುವಟಿಕೆಗಳ ಫಲವಾಗಿ ಭಾರತದಲ್ಲಿ ಭೂಮಿಗೆ ಇನ್ನಿಲ್ಲದ ಬೇಡಿಕೆ ಬಂದಿತು. ಮೂಲಭೂತ ಸೌಕರ್ಯಗಳಾದ ರಸ್ತೆ, ರೈಲು ಮಾರ್ಗ, ಬಂದರು ನಿರ್ಮಾಣ ಸೇರಿದಂತೆ, ಕೈಗಾರಿಕೆಗಳಿಗಾಗಿ, ವಿಶೇಷ ಆರ್ಥಿಕ ವಲಯ ಮತ್ತು ವಸತಿ ಕ್ರೇತ್ರದಲ್ಲಿ ಮನೆಗಳ ನಿರ್ಮಾಣ,ಹಾಗೂ ಬಡಾವಣೆಗಳು, ರಿಸಾರ್ಟ್ ಗಳಿಗಾಗಿ ಫಲವತ್ತಾದ ಕೃಷಿ ಭೂಮಿಗಳು ಬಲಿಯಾದವು. ಸ್ವತಃ ಸರ್ಕಾರಗಳು ಮಧ್ಯವರ್ತಿಗಳಂತೆ ನಿಂತು, ಸಾರ್ವಜನಿಕ ಉದ್ದಿಮೆಗಳಿಗೆ, ಖಾಸಾಗಿ ಕಂಪನಿಗಳಿಗೆ ರೈತರ ಭೂಮಿಯನ್ನು ವರ್ಗಾಯಿಸಿದವು. ಕೈಗಾರಿಕೋದ್ಯಮಿಗಳು ಮತ್ತು ಜನಪ್ರತಿನಿಧಿಗಳ ಅಪವಿತ್ರ ಮೈತ್ರಿಯಿಂದಾಗಿ ಈ ನೆಲದ ಕಾನೂನುಗಳು ಗಾಳಿಗೆ ತೂರಲ್ಪಟ್ಟವು. ಇಂತಹ ಪರಿಸ್ಥಿತಿಗೆ ಪೂರಕವಾಗಿ, ಭಾರತದ ಕೃಷಿ ಕ್ರೇತ್ರ ಕೂಡ ತೀರಾ ಚಿಂತಾಜನಕ ಸ್ಥಿತಿಯಲ್ಲಿತ್ತು. ಒಂದು ಕಾಲದಲ್ಲಿ ಅಸಂಖ್ಯಾತ ಕೃಷಿ ಕಾರ್ಮಿಕರಿಗೆ ಆಧಾರವಾಗಿದ್ದ ಕೃಷಿ ವಲಯ ಸ್ವತಃ ಭೂಮಾಲಿಕನಿಗೆ ಆಸರೆಯಾಗಿ ನಿಲ್ಲುವ  ನಂಬಿಕೆ ಕುಸಿದು ಹೋಗಿರುವ ಸ್ಥಿತಿ ಇವೊತ್ತಿಗೂ ಮುಂದುವರಿದಿದೆ. ಇದರಿಂದಾಗಿ ನಗರೀಕರಣದ ಬೆಳವಣಿಗೆ ಮತ್ತು ಕೈಗಾರಿಕೆ ಹಾಗೂ ವಸತಿ ಕ್ರೇತ್ರದಲ್ಲಿ ತೆರೆದುಕೊಂಡ ಉದ್ಯೋಗದ ಅವಕಾಶಗಳು, ಜನರನ್ನು ಹಳ್ಳಿಗಳಿಂದ ನಗರದತ್ತ ವಲಸೆ ಹೋಗಲು ಪ್ರೆರೇಪಿಸಿದವು.
ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸರ್ಕಾರಗಳು ನಿರ್ಧಿಷ್ಟ ಯೋಜನೆಗಿಂತ ಎರಡು ಅಥವಾ ಮೂರು ಪಟ್ಟು ಭೂಮಿಯನ್ನು ರೈತರಿಂದ ವಶಪಡಿಸಿಕೊಳ್ಳತೊಡಗಿದವು. ಶತಮಾನದಷ್ಟು ಹಳೆಯದಾದ ಭೂ ಸ್ವಾಧೀನ ಮಸೂದೆ ಸರ್ಕಾರಗಳ  ಕೈಗೆ ಸಿಕ್ಕ ಆಯುಧವಾಯಿತು. 1894 ರ ಪೆಬ್ರವರಿ 2 ರಂದು ಬ್ರಿಟೀಷರು, ಭಾರತದಲ್ಲಿ ಭೂಸ್ವಾಧೀನ ಕುರಿತ ಕಾನೂನನ್ನು ಅಸ್ತಿತ್ವಕ್ಕೆ ತಂದಿದ್ದರು. ರಸ್ತೆ, ರೈಲು ಮಾರ್ಗ, ಸಾರ್ವಜನಿಕ ಬಳಕೆಗೆ ಅವಶ್ಯಕ ಎನಿಸಿದರೆ, ಸರ್ಕಾರಗಳು ಖಾಸಾಗಿ ಭೂಮಿಯನ್ನು ನಿರ್ಧಿಷ್ಟ ಪರಿಹಾರ ನೀಡಿ ವಶಪಡಿಸಿಕೊಳ್ಳಬಹುದಿತ್ತು. ಇಂತಹ ಭೂಸ್ವಾಧೀನ ಪ್ರಕ್ರಿಯೆಗಳ ವಿರುದ್ಧ ಯಾವೊಬ್ಬ ಭಾರತದ ನಾಗರೀಕನೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ಇರಲಿಲ್ಲ.
ಬಹುತೇಕ ಯಥಾಸ್ಥಿತಿಯಲ್ಲಿ ಜಾರಿಯಲ್ಲಿದ್ದ  ಈ ಮಸೂದೆಯನ್ನು 2003 ರಲ್ಲಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರ ಹಲವು ತಿದ್ದುಪಡಿಯೊಂದಿಗೆ ಜಾರಿಗೆ ತರಲು ಪ್ರಯತ್ನಿಸಿ ವಿಫಲವಾಗಿತ್ತು. ಆನಂತರ 2007 ರಲ್ಲಿ ಕಾಂಗ್ರೇಸ್ ನೇತೃತ್ವದ ಯು.ಪಿ.ಎ ಸರ್ಕಾರ ಕೂಡ ಪರಿಹಾರ ಮತ್ತು ಪುನರ್ವಸತಿ ಇವುಗಳ ವಿಷಯದಲ್ಲಿ ಹಲವು ಮಾರ್ಪಾಡು ಮಾಡಿ ಜಾರಿಗೆ ತರಲು ಯತ್ನಿಸಿದಾಗ ಹಲವು ವಾದ ವಿವಾದಕ್ಕೆ ಗುರಿಯಾಗಿ ನೆನಗುದಿಗೆ ಬಿದ್ದಿತು. ಅಂತಿಮವಾಗಿ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯ ಅಂತಿಮ ದಿನಗಳಲ್ಲಿ ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. 2010 ರಿಂದ ಮೂಲೆಗುಂಪಾಗಿದ್ದ ಭೂ ಮಸೂದೆಗೆ 2013 ರ ಸೆಪ್ಟಂಬರ್ ಮೊದಲ ವಾರದಲ್ಲಿ  ಅಸ್ತಿತ್ವಕ್ಕೆ  ಬರಲು ಅವಕಾಶ ದೊರೆತಿದೆ. ಹೊಸ ಭೂಮಸೂದೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಯುತವಾದ ಪರಿಹಾರ ಸಿಗುವಂತೆ ಅವಕಾಶ ಮಾಡಿಕೊಡಲಾಗಿದೆ. ಈ ಅಂಶಗಳು ಈಗಾಗಲೇ ಬಂಡವಾಳಶಾಹಿ ಜಗತ್ತಿನ ನಿದ್ದೆ ಗೆಡಿಸಿದೆ.
ಇತ್ತೀಚೆಗಿನ ದಿನಗಳಲ್ಲಿ ಆಹಾರ ಮಸೂದೆ, ಭೂ ಮಸೂದೆ, ಆಂಧ್ರಪ್ರದೇಶದ ವಿಭಜನೆ, ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನ 371 ತಿದ್ದುಪಡಿ ಅನ್ವಯ ವಿಶೇಷ ಪ್ರಾತಿನಿಧ್ಯ ಮತ್ತು ಅಭಿವೃದ್ಧಿಗೆ ಆರ್ಥಿಕ ನೆರವು ಇವುಗಳ ಹಿಂದೆ ಇರುವ  ಓಲೈಕೆ ರಾಜಕಾರಣವನ್ನು ನಾವು ತಳ್ಳಿಹಾಕುವಂತಿಲ್ಲ. ಆಳುವ ಸರ್ಕಾರಗಳು ಯಾವುದೇ ಪಕ್ಷಕ್ಕೆ ಸೇರಿರಲಿ, ಚುನಾವಣೆಗಳು ಹತ್ತಿರವಾದಂತೆ ಸರ್ಕಾರಗಳ ಇಂತಹ ಸಹಾನುಭೂತಿಯ ನಡುವಳಿಕೆಗಳು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಇಂದಿನ ದಿನಗಳಲ್ಲಿ ಓಲೈಕೆ ರಾಜಕಾರಣ ಕೋಮುವಾದದಷ್ಟೇ ಅಪಾಯಕಾರಿ ಎಂಬುದನ್ನು ನಾವು ಅರಿಯಬೇಕಿದೆ.
ಹೊಸ ಭೂ ಮಸೂದೆಯ ಪ್ರಕಾರ ನಗರ ಪ್ರದೇಶಗಳಲ್ಲಿ ಭೂಮಿಯ ಮಾರುಕಟ್ಟೆ ಮೌಲ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ದರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಎರಡು ಪಟ್ಟು ಹೆಚ್ಚಿನ ದರದಲ್ಲಿ ಪರಿಹಾರ  ನೀಡುವಂತೆ ಪ್ರಸ್ತಾಪಿಸಲಾಗಿದೆ. ವಾಸದ ಮನೆಗಳಿದ್ದರೆ, ಮನೆಗಳನ್ನು ಕಳೆದುಕೊಳ್ಳುವವರಿಗೆ 20 ವರ್ಷಗಳ ಕಾಲ ಪ್ರತಿ ತಿಂಗಳು 2 ಸಾವಿರ ಮಾಸಾಶನ ಇಲ್ಲವೆ ಒಟ್ಟಿಗೆ 5 ಲಕ್ಷರೂಪಾಯಿ ಪರಿಹಾರ ನೀಡಲು ಕಾನೂನು ರೂಪಿಸಲಾಗಿದೆ, ಜೊತೆಗೆ ಬಹು ಮುಖ್ಯವಾಗಿ ಸ್ಥಳೀಯ ಸಂಸ್ಥೆಗಳ ( ಗ್ರಾಮ ಪಂಚಾಯಿತಿ) ಇವುಗಳ ಅನುಮತಿಯಿಲ್ಲದೆ ಯಾವುದೇ ಭೂಸ್ವಾಧೀನ ಪ್ರಕ್ರಿಯೆ ನಡೆಯುವಂತಿಲ್ಲ. ಹೊಸ  ಮಸೂದೆಯ ಈ ಎಲ್ಲಾ ಅಂಶಗಳು ಸಮಾಧಾನಕಾರಿಯಾಗಿದ್ದರೂ ಒಟ್ಟಾರೆ ಈ ಮಸೂದೆ “ಕೋಟೆಯನ್ನು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು” ಎಂಬ ಗಾದೆಯಂತಿದೆ. ಕಳೆದ ಎರಡು ದಶಕದ ಅವಧಿಯಲ್ಲಿ ದೇಶದ ಕೋಟ್ಯಾಂತರ ಹೆಕ್ಟೇರ್ ಫಲವತ್ತಾದ ಕೃಷಿ ಭೂಮಿ ಕೈಗಾರಿಗೆಳ ನೆಪದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾದ ಕೈ ಸೇರಿದೆ. ಇದಕ್ಕೆ ಈ ದೇಶದ ಬೇರೆ ರಾಜ್ಯದ ಉದಾಹರಣೆ ಬೇಡ. ನಮ್ಮ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಒಂದು ಭೂ ದಂಧೆಯ ವಿವರ ಹೀಗಿದೆ


ಹುಬ್ಬಳ್ಳಿ ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ದಿ ನಿಗಮವು, ಸಮೀಪದ ಗೊಕುಲ ಗ್ರಾಮದ 707 ಎಕರೆ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರ ಕರ್ನಾಟಕ ಸರ್ಕಾರಕ್ಕೆ 599 ಎಕರೆ ಪ್ರದೇಶ ನೀಡಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಕರ್ನಾಟಕ ಸರ್ಕಾರ ಒಂದು ಎಕರೆಗೆ 26 ಲಕ್ಷ ರೂಪಾಯಿಗಳಂತೆ ಪರಿಹಾರಿ ನೀಡಿ, ಒಟ್ಟು 707 ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಂಡಿತು. ( ಪ್ರಸ್ತುತ ಭೂಮಿಯ ಮಾರುಕಟ್ಟೆಯ ಮೌಲ್ಯ ಪ್ರತಿ ಎಕರೆಗೆ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ) ಕರ್ನಾಟಕ ಸರ್ಕಾರದ ಕೆ.ಐ.ಡಿ.ಬಿ.ಕಾಯ್ದೆ 1966 ರ 28(8) ರ ಸೆಕ್ಷನ್ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ವಶಪಡಿಸಿಕೊಂಡ ಜಮೀನು ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದ ಪಕ್ಷದಲ್ಲಿ ಆ ಜಮೀನನ್ನು ಮೂಲ ಮಾಲೀಕರಿಗೆ ಒಪ್ಪಿಸಬೇಕು. ಆದರೆ, ಕರ್ನಾಟಕ ಕೈಗಾರಿಕಾ ಅಬಿವೃದ್ದಿ ನಿಗಮ ರೈತರಿಗೆ 26 ಲಕ್ಷ ನೀಡಿ ವಶಪಡಿಸಿಕೊಂಡಿದ್ದ ಹೆಚ್ಚವರಿ ಜಮಿನನ್ನು ತಲಾ ಎಕರೆಗೆ 50 ಲಕ್ಷ ರೂಪಾಯಿನಂತೆ ನಾರಾಯಣ ಮೂರ್ತಿಯವರ ಇನ್ಪೋಸಿಸ್ ಸಂಸ್ಥೆಗೆ 50 ಎಕರೆ, ಮತ್ತು ನಾರಾಯಣ ಮುರ್ತಿಯವರ ಷಡ್ಡುಗ( ಸುಧಾ ಮೂರ್ತಿಯವರ ತಂಗಿ ಜಯಶ್ರಿಯವರ ಪತಿ) ಅಮೇರಿಕಾದಲ್ಲಿರುವ ಖ್ಯಾತ ಐ.ಟಿ.ಉದ್ಯಮಿ ಗುರುರಾಜ್ ದೇಶಪಾಂಡೆ ನೇತೃತ್ವದ ದೇಶಪಾಂಡೆ ಪೌಂಡೇಶನ್ ಗೆ 12.26 ಎಕರೆ ಪ್ರದೇಶ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಬಾಲ್ಯದ ಸಹಪಾಠಿ ಹಾಗೂ ಹೋಟೆಲ್ ಉದ್ಯಮಿ ರಮೇಶ್ ಶೆಟ್ಟಿ ಎಂಬಾತನಿಗೆ ಪಂಚತಾರಾ ಹೋಟೆಲ್ ನಿರ್ಮಾಣಕ್ಕಾಗಿ 1.39 ಎಕರೆ ಪ್ರದೇಶವನ್ನು ಹಂಚಲಾಗಿದೆ. ಕೇವಲ ಒಂದು ವರ್ಷದ ಅವಧಿಯೊಳಗೆ ರೈತರಿಗೆ 26 ಲಕ್ಷ ನೀಡಿ, ವಶಪಡಿಸಿಕೊಂಡಿದ್ದ ಜಮೀನನ್ನು, ಕಾನೂನನ್ನು ಗಾಳಿಗೆ ತೂರಿ, ಎಕರೆಗೆ 50 ಲಕ್ಷರೂಪಾಯಿಗೆ ಮಾರಾಟ ಮಾಡಿದ ಕೆ.ಐ.ಡಿ.ಬಿ.ಯ ಈ ನಿರ್ಲಜ್ಜ ನಡುವಳಿಕೆಯನ್ನು ಗಮನಿಸಿದರೆ, ಹೊಸ ಭೂ ಮಸೂದೆ ಕುರಿತು ನಂಬಿಕೆಯಾಗಲಿ, ವಿಶ್ವಾಸವಾಗಲಿ ಬರಲು ಸಾದ್ಯವೆ?
ಇದು ಕರ್ನಾಟಕದ ಕತೆಯಾದರೆ, ದೆಹಲಿ- ಆಗ್ರಾ ನಡುವಿನ ಕಾರಿಡಾರ್ ರಸ್ತೆಗಾಗಿ43 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಮತ್ತು ಒರಿಸ್ಸಾದಲ್ಲಿ ಪೊಸ್ಕೊ ಕಂಪನಿಗಾಗಿ 16 ಸಾವಿರ ಹೆಕ್ಟೇರ್ ಭೂಮಿ, ಹಾಗೂ ಜಾರ್ಖಾಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯಲ್ಲಿ 4.400 ಹೆಕ್ಟೇರ್ ಭೂಮಿಯನ್ನು ಮಿತ್ತಲ್ ಉಕ್ಕಿನ ಕಾರ್ಖಾನೆಗಾಗಿ ವಶಪಡಿಸಿಕೊಳ್ಳಲಾಗಿದೆ. ಕಳೆದ ಎರಡು ದಶಕಗಳ ಅವದಿಯಲ್ಲಿ ದೇಶಾದ್ಯಂತ ಒಟ್ಟು ಐದು ಕೋಟಿ ರೈತರು, ಸಣ್ಣ ಹಿಡುವಳಿದಾರರು ಮತ್ತು ಅರಣ್ಯದಲ್ಲಿದ್ದ ಆದಿವಾಸಿಗಳು ಭೂಮಿ ಕಳೆದುಕೊಂಡು ಅತಂತ್ರರಾಗಿದ್ದಾರೆ.  ಅಕ್ರಮ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗುತ್ತಿದೆ ಎಂಬ ವಾಸ್ತವ ಸತ್ಯವನ್ನು  ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವರಾದ ಜೈರಾಂ ರಮೇಶ್ ಒಪ್ಪಿಕೊಂಡಿದ್ದಾರೆ.



ಸೋಮವಾರ, ಸೆಪ್ಟೆಂಬರ್ 2, 2013

ಪ್ರಧಾನಿ ಮನಮೌನ ಸಿಂಗ್ ಒಂದಿಷ್ಟು ನೆನಪುಗಳು

ಇತ್ತೀಚೆಗಿನ ದಿನಗಳಲ್ಲಿ ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಸದಾ ಸುದ್ಧಿಯಲ್ಲಿದ್ದಾರೆ. ಕಳೆದ ತಿಂಗಳಿನಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯ , ಇದರ ಪರಿಣಾಮವಾಗಿ ವಿದೇಶಿ ವಿನಿಮಯದ ಚಾಲ್ತಿ ಖಾತೆಯಲ್ಲಿ ಕರಗುತ್ತಿರುವ ಡಾಲರ್ ಮೊತ್ತದ  ಠೇವಣಿ, ಹಾಗೂ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆ ಇವೆಲ್ಲವೂ ಮತ್ತೇ ಭಾರತವನ್ನು 1991 ರ ಪರಿಸ್ಥಿತಿಗೆ ಕೊಂಡೊಯ್ಯಬಹುದೆಂಬ ಆತಂಕ ಎಲ್ಲಾ ವಲಯಗಳಿಂದ ಕೇಳಿಬರುತ್ತಿದೆ.
ಭಾರತ ಎದುರಿಸುತ್ತಿರು ಈ ಆರ್ಥಿಕ ಸಂಕಟ  ಬಹತೇಕ ಏಷ್ಯಾರಾಷ್ಟ್ರಗಳನ್ನು ಒಳಗೊಂಡಂತೆ ಅಭಿವೃದ್ಧಿಶೀಲ ರಾಷ್ಟ್ರಗಳನ್ನೂ ಕಾಡುತ್ತಿದೆ. ಚೇತರಿಸಿಕೊಂಡ ಅಮೇರಿಕಾದ ಆರ್ಥಿಕ ಅಭಿವೃದ್ಧಿಯಿಂದಾಗಿ ಡಾಲರ್ ಎದುರು ಬಹುತೇಕ ರಾಷ್ಟ್ರಗಳ ಕರೆನ್ಸಿ ಮೌಲ್ಯ ಕುಸಿಯುತ್ತಿದೆ. ಇದು ಒಂದು ತಾತ್ಕಾಲಿ ಸ್ಥಿತಿ. ಮಾತ್ರ. ಕರೆನ್ಸಿ ಮೌಲ್ಯದ ಕುಸಿತವನ್ನು ತಡೆಗಟ್ಟಲು ಅನೇಕ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಇವುಗಳಲ್ಲಿ ಏಕಾಏಕಿ ವಿದೇಶಿ ಸಾಂಸ್ತಿಕ ಹೂಡಿಕೆದಾರರು ಶೇರು ಮಾರುಕಟ್ಟೆಯಲ್ಲಿ ಹೂಡಿರುವ  ತಮ್ಮ ಬಂಡವಾಳವನ್ನು ಹಿಂತೆಗೆಯುವ ಕ್ರಮದ ಮೇಲೆ ನಿರ್ಭಂಧ ಅಥವಾ ಮಿತಿ ಹೇರುವುದು, ಆಮದು ವಸ್ತುಗಳ ಮೇಲೆ ಮಿತಿ ಇಲ್ಲವೆ ಅಧಿಕ ಸುಂಕ ಹೇರುವುದರ ಮೂಲಕ ನಿಯಂತ್ರಿಸುವ ಕ್ರಮ ಎಲ್ಲಾ ರಾಷ್ಟ್ರಗಳಲ್ಲಿ ಜಾರಿಯಲ್ಲಿವೆ. ಭಾರತದಲ್ಲಿ ಈಗಾಗಲೆ ವಿದೇಶಿ ಹೂಡಿಕೆದಾರರು ಈ ಮೊದಲು ಎರಡು ಲಕ್ಷ ಡಾಲರ್ ಹಣ ಹಿಂತೆಗೆಯಲು ಅವಕಾಶವಿತ್ತು. ಈಗ ಇದನ್ನು ಎಪ್ಪತ್ತು ಸಾವಿರ ಡಾಲರ್ ಗೆ ಮಿತಿ ಗೊಳಿಸಲಾಗಿದೆ. ಕಲರ್ ಟಿ.ವಿ.( ಎಲ್.ಸಿ.ಡಿ.ಟಿ.ವಿ.) ಇವುಗಳ ಮೇಲೆ ಶೇಕಡ 37ರಷ್ಟು ಅಧಿಕ ಶುಲ್ಕ ವಿಧಿಸಲಾಗುತ್ತಿದೆ. ಚಿನ್ನದ ಆಮದು ಮೇಲಿನ ಶುಲ್ಕವನ್ನು ಸಹ ಹೆಚ್ಚಿಸಲಾಗಿದೆ. ಹೀಗೆ ಆಮದು ಮಾಡಿಕೊಂಡ ವಸ್ತುಗಳಿಗೆ ಡಾಲರ್ ರೂಪದಲ್ಲಿ ಹಣ ಹರಿದುಹೋಗುತ್ತಿರುವುದನ್ನು ತಡೆಗಟ್ಟಲು ಅನೇಕ ಕ್ರಮಗಳು ಜಾರಿಯಲ್ಲಿವೆ, ಹಾಗಾಗಿ ಈಗ ಎದುರಾಗಿರುವ ಆರ್ಥಿಕ ಸಂಕಷ್ಟಗಳು ತಾತ್ಕಾಲಿಕ ಎಂದು ನಾವು ಸಮಾಧಾನ ಪಟ್ಟುಕೊಂಡರೂ ಸಹ ದೇಶದ ಜಿ.ಡಿ.ಪಿ. ಬೆಳವಣಿಗೆಯ ದರ 4.4 ಕ್ಕೆ ಕುಸಿದು ದೇಶದ ಒಟ್ಟು ಆರ್ಥಿಕ ಬೆಳವಣಿಗೆಯ ದರದ ಮೇಲೆ ಪರಿಣಾಮ ಬೀರಿದೆ.
ಇಡೀ ಜಗತ್ತಿನಲ್ಲಿ ಅತಿ ಕಡಿಮೆ ಮಾತನಾಡುವ ನಾಯಕ ಎಂದು ಜಾಗತಿಕವಾಗಿ ಪ್ರಸಿದ್ದರಾಗಿರುವ ನಮ್ಮ ಪ್ರಧಾನಿ, ಡಾ ಮನಮೋಹನ್  ಸಿಂಗ್ ರವರೋ? ಅಥವಾ ಮನಮೌನಸಿಂಗರೋ ಎಂಬ ಗೊಂದಲ ಉಂಟಾಗುತ್ತಿದೆ. ವರ್ತಮಾನದ ಜಗತ್ತಿನಲ್ಲಿ ಆರ್ಥಿಕ ಸುಧಾರಣೆಗಳ ಹರಿದಾರ ಎಂಬ ಖ್ಯಾತಿಗೆ ಒಳಗಾಗಿರುವ, ಸ್ವತಃ ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಙರಾಗಿರುವ ಮನಮೋಹನ್ ಸಿಂಗ್ ಬಹಳ ದಿನಗಳ ನಂತರ ಸಂಸತ್ತಿನಲ್ಲಿ ಮಾತನಾಡಿದ್ದಾರೆ, ಇದೇ ಮೊದಲ ಬಾರಿಗೆ ತಮ್ಮೊಳಗಿನ ಸಾತ್ವಿಕ ಸಿಟ್ಟನ್ನು ಹೊರಹಾಕಿದ್ದಾರೆ. ಪ್ರಧಾನಿಯವರು ರಾಜ್ಯ ಸಭೆಯಲ್ಲಿ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ವೈಖರಿ ನಿಜಕ್ಕೂ ಅವರನ್ನು ಬಲ್ಲವರಿಗೆ ವಿಸ್ಮಯವನ್ನುಂಟು ಮಾಡುವಂತಹದ್ದು, ಇಂತಹದ್ದೆ ಸಾತ್ವಿಕ ಸಿಟ್ಟನ್ನು ಅವರು ತಮ್ಮ ನೇತೃತ್ವದ ಯು.ಪಿ.ಎ . ಸರ್ಕಾರದ ಕಲ್ಲಿದ್ದಲು ಹಗರಣ ಮತ್ತು 2 ಜಿ. ಹಗರಣ ಹಾಗೂ ರೈಲ್ವೆ ಸಚಿವರ ಭ್ರಷ್ಠಾಚಾರದ ಪ್ರಕರಣದಲ್ಲಿ ತೋರಿದ್ದರೆ, ಕಾಂಗ್ರೇಸ್ ಪಕ್ಷಕ್ಕೆ ಮತ್ತು ದೇಶಕ್ಕೆ ಇಂತಹ ದಯನೀಯವಾದ ಸ್ಥಿತಿ ಬರುತ್ತಿರಲಿಲ್ಲ.
1991 ರ ವೇಳೆಯಲ್ಲಿ ಭಾರತ ಜಗತ್ತಿನಲ್ಲಿ ದಿವಾಳಿ ಏಳುತ್ತಿರುವ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಸ್ಥಿತಿಯಲ್ಲಿದ್ದಾಗ ದೇಶವನ್ನು ಸಂಕಟದಿಂದ ಪಾರು ಮಾಡಿದವರು ಇದೇ ಮನಮೋಹನ್ ಸಿಂಗ್ ಎಂಬುದು ಈಗಿನ ತಲೆ ಮಾರಿನ ಬಹುತೇಕ ಮಂದಿಗೆ  ಗೊತ್ತಿಲ್ಲದ ವಿಷಯ.
ಮೂಲತಃ ರಾಜಕಾರಣಿಯಲ್ಲದ ಮನಮೋಹನ್ ಸಿಂಗ್ ರಾಜಕೀಯಕ್ಕೆ ಬಂದದ್ದೂ ಕೂಡ ತೀರಾ ಆಕಸ್ಮಿಕ. ಅವರು ರಾಜಕೀಯಕ್ಕೆ ಬಾರದೇ ಇದ್ದರೆ, ಈಗಾಗಲೇ ಅರ್ಥಶಾಸ್ತ್ರದಲ್ಲಿ ಏಷ್ಯಾ ಖಂಡಕ್ಕೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ನಮ್ಮವರಾದ ಅಮರ್ತ್ಯಸೇನ್ ಮತ್ತು ನೆರೆಯ ಬಂಗ್ಲಾದ ಮಹಮದ್ ಯೂನಸ್ ಇವರಿಗಿಂತ ಮುಂಚೆ ಈ ಪ್ರಶಸ್ತಿಗೆ ಭಾಜನರಾಗುವ ಯೋಗ್ಯತೆ ಇವರಿಗೆ ಇತ್ತು. 20 ಮತ್ತು 21 ನೇ ಶತಮಾನದ ಆರ್ಥಿಕ ಸ್ಥಿತಿಗತಿಗಳ ಏರು ಪೇರು ಇವುಗಳ ಬಗ್ಗೆ ಅಪರೂಪದ ಒಳನೋಟಗಳುಳ್ಳ ಡಾ. ಮನಮೋಹನ್ ಸಿಂಗ್ ಇವೊತ್ತಿಗೂ ಜಗತ್ತಿನಾದ್ಯಂತ ಆರ್ಥಿಕ ಸುಧಾರಣೆಗಳ ಹರಿಕಾರ ಎಂದು ಗೌರವಿಸಲ್ಪಡುತ್ತಾರೆ. (ಇದೇ ರೀತಿ ಮಲೇಷಿಯಾದ ಮಾಜಿ ಪ್ರಧಾನಿ ಡಾ. ಮಹತೀರ್ ಕೂಡ ಇಂತಹ ಪ್ರಶಂಸೆಗೆ ಭಾಜನರಾಗಿದ್ದರು)
ಅತ್ಯಂತ ಕಡಿಮೆ ಮಾತನಾಡುವ ಹಾಗೂ ಸೌಮ್ಯ ಸ್ವಭಾವದ ಸಿಂಗರು ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ಮತ್ತು ಕಠಿಣ ನಿಯಮಗಳಿಗೆ ಬದ್ಧರಾಗಿರುತ್ತಾರೆ. ಅವರ ಅನುಭವ ಮತ್ತು ವಿದ್ಯೆಯ ಹಿನ್ನಲೆಯನ್ನು ನೋಡಿದವರು ಅವರ ಬಗ್ಗೆ ಲಘುವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಂಗ್ಲೆಂಡಿನ ಕೇಂಬ್ರಿಡ್ಜ್  ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ.ಪಡೆದು 1956 ರಲ್ಲಿ ಅರ್ಥಶಾಸ್ತ್ರದ ಪಿತಾಮಹಾ ಎನಿಸಿರುವ ಆಡಂಸ್ಮಿತ್ ಹೆಸರಿನಲ್ಲಿರುವ ಚಿನ್ನದ ಪದಕ ಗೆದ್ದ ಏಕೈಕ ಏಷ್ಯಾದ ಖಂಡದ ವ್ಯಕ್ತಿ ಡಾ. ಮನಮೋಹನ್ ಸಿಂಗ್ ರವ ರು.
ಹಲವಾರು ವರ್ಷಗಳ ಕಾಲ ಭಾರತದ ಹಲವು ವಿ.ವಿ.ಗಳು ಮತ್ತು ದೆಹಲಿಯ ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಸಂಸ್ಥೆಯಲ್ಲಿ ಪ್ರೊಪೆಸರ್ ಆಗಿದ್ದ ಸಿಂಗರು 1972 ರಿಂದ 1976 ರವರೆಗೆ ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿ, 1982ರಿಂದ 85 ರವರೆಗೆ ರಿಸರ್ವ್ ಬ್ಯಾಂಕಿನ ಗೌರ್ನರ್ ಆಗಿ, 1985ರಿಂದ 1987 ರ ವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಸೇವೆ ಸಲ್ಲಿಸಿ, ನಂತರ 1991ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾಗಿ ನೇಮಕಗೊಂಡರು. ಭಾರತದ ಆರ್ಥಿಕ ಪರಿಸ್ಥಿತಿ ಅತ್ಯಂತ ಹೀನ ಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಭಾರತಕ್ಕೆ ಇಂತಹ ವ್ಯಕ್ತಿಯೊಬ್ಬರು ಹಣಕಾಸು ಸಚಿವರಾಗುವುದು ಮುಖ್ಯವಾಗಿತ್ತು. ಪಿ.ವಿ. ನರಸಿಂಹರಾವ್ ತಮ್ಮ ರಾಜಕೀಯ ಜೀವನಲ್ಲಿ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ, ಇದೊಂದೆ.  ಏಕೆಂದರೆ, ಅದೇ ವರ್ಷದ( 1991) ಮೇ ತಿಂಗಳಿನ 21 ರಿಂದ 30 ರವರೆಗೆ ಭಾರತ ಸರ್ಕಾರ 67 ಟನ್ ಚಿನ್ನವನ್ನು ವಿಮಾನದಲ್ಲಿ ಕೊಂಡೊಯ್ದು ಬ್ಯಾಂಕ್ ಆಫ್ ಇಂಗ್ಲೆಂಡ್ ( 47 ಟನ್ ) ಮತ್ತು ಲಂಡನ್ ನಗರದ  ಸ್ವಿಟ್ಜರ್ ಲ್ಯಾಂಡ್ ಬ್ಯಾಂಕ್ ಶಾಖೆಯಲ್ಲಿ 20 ಟನ್ ಒತ್ತೆ ಇಟ್ಟು  ಎರಡು ಶತಕೋಟಿ ಡಾಲರ್ ಹಣವನ್ನು ಸಾಲವಾಗಿ ಪಡೆದಿತ್ತು. 1990 ರಲ್ಲಿ ಕಾಂಗ್ರೇಸ್  ಪಕ್ಷದ ಬಾಹ್ಯ ಬೆಂಬಲದೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ಚಂದ್ರಶೇಖರ್ ಅವರ ಸರ್ಕಾರ  ರಾಜೀವ್ ಗಾಂಧಿಯವರ ಫೋನ್ ಕದ್ದಾಲಿಸುತ್ತಿದೆ ಎಂಬ ಆರೋಪಕ್ಕೆ ಸಿಲುಕಿ 1991ರ ಮಾರ್ಚ್ ತಿಂಗಳಲ್ಲಿ  ಬಹುಮತ ಕಳೆದುಕೊಂಡು ಪತನಗೊಂಡಿತು. ನಂತರ ಉಸ್ತುವಾರಿ ಸರ್ಕಾರವಾಗಿ ಮುಂದುವರಿದಿತ್ತು. ಇದೇ ಸಮಯದಲ್ಲಿ ವಿದೇಶಿ ವಿನಿಮಯದ ಕೊರತೆಯಿಂದಾಗಿ  ದೇಶದ ಚಾಲ್ತಿ ಖಾತೆಯಲ್ಲಿ ವಿನಿಮಯಕ್ಕೆ ಇದ್ದ ಡಾಲರ್ ಕೇವಲ ಮೂರು ವಾರಗಳಿಗೆ ಸಾಕಾಗುವಷ್ಟು ಹಂತ ತಲುಪಿ ಭಾರತ ಸರ್ಕಾರದ ಸ್ಥಿತಿ ದಿವಾಳಿಅಂಚಿಗೆ ದೂಡಿತ್ತು. 1991ರ ಜೂನ್ ನಲ್ಲಿ ಚುನಾವಣೆಯ ನಂತರ ಸ್ಪೃಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಪಕ್ಷಕ್ಕೆ ಮನಮೋಹನ್ ಸಿಂಗ್ ಆರ್ಥಿಕ ಸುಧಾರಣೆಯ ಮಾಂತ್ರಿಕರಾದರು.


ಎಂದೂ ಪ್ರಧಾನಿಯಾಗುವ ಕನಸು ಕಾಣದಿದ್ದ ಸಿಂಗ್ ಅವರಿಗೆ ಅನಿರೀಕ್ಷಿತ ವಾಗಿ ಈ ಹುದ್ದೆಯೂ ಒಲಿದು ಬಂತು. 2004 ರಲ್ಲಿ ಕಾಂಗ್ರೇಸ್ ಪಕ್ಷದ ನೇತೃತ್ವದ ಯು.ಪಿ.ಎ. ಒಕ್ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ, ಎಲ್ಲರ ನಿರೀಕ್ಷೆ ಸೋನಿಯಾ ಗಾಂಧಿ ಪ್ರಧಾನಿಯಾಗುತ್ತಾರೆ ಎಂಬುದಾಗಿತ್ತು. ಆದರೆ, ಸಂಘ ಪರಿವಾರದ ಪ್ರತಿಭಟನೆ ಮತ್ತು ಅವಹೇಳನ ಕಾರಿ ಮಾತುಗಳಿಂದ ( ವಿದೇಶಿ ಮಹಿಳೆ ಮತ್ತು ತಡವಾಗಿ ಅಂದರೆ, 1984ರ ನಂತರ ಭಾರತದ ಪೌರತ್ವ ಸ್ವೀಕರಿಸಿದರು ಎಂಬ ಅಪವಾದಗಳು) ನೊಂದ ಕಾಂಗ್ರೇಸ್ ಅಧ್ಯಕ್ಷೆ ಸೋನಿಯಾ ಅನಿರೀಕ್ಷಿತವಾಗಿ, ಮನಮೋಹನ್ ಸಿಂಗ್ ಅವರ ಹೆಸರು ಸೂಚಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಲ್ಲದೆ ಸಂಘ ಪರಿವಾರದ ಬಾಯಿ ಮುಚ್ಚಿಸಿದರು. ಆ ವೇಳೆಗೆ ಹಿಂದೂಗಳು ಬಹು ಸಂಖ್ಯೆಯಲ್ಲಿರುವ ಭಾರತದಲ್ಲಿ ರಾಷ್ಟ್ರಪತಿ ಮತ್ತು ಪ್ರಧಾನಿ ಹುದ್ದೆಗಳು ಅಲ್ಪ ಸಂಖ್ಯಾತ ಸಮುದಾಯದಿಂದ ಬಂದ (ಮುಸ್ಲಿಂ ಮತ್ತು ಸಿಖ್) ಇಬ್ಬರು ಪ್ರತಿಭಾವಂತ ಮೇಧಾವಿಗಳಾದ ಅಬ್ದುಲ್ ಕಲಾಂ ಮತ್ತು ಮನಮೋಹನ ಸಿಂಗ್ ಇವರಿಂದ ಅಲಂಕರಿಸಲ್ಪಟ್ಟಿದ್ದವು.
2004 ರಿಂದ 2009 ರವರೆಗೆ ಮೊದಲ ಅವಧಿಯಲ್ಲಿ ಸಿಂಗ್ ಅವರ ನೇತೃತ್ವದಲ್ಲಿ ಭಾರತದಲ್ಲಿ ಆದ ಆರ್ಥಿಕ ಸುಧಾರಣೆಗಳು ಮತ್ತು ಬೆಳವಣಿಗೆಗಳನ್ನು ನೋಡಿ ಇಡೀ ವಿಶ್ವವೇ ಬೆರಗುಗೊಂಡಿತು. ಸ್ವತಃ ಅಮೇರಿಕಾದ ಅಧ್ಯಕ್ಷ ರಾದ ಜಾರ್ಜ್ ಡಬ್ಲ್ಯು, ಬುಶ್ ಮತ್ತು ಬರಾಕ್ ಒಬಾಮರಂತಹವರು  ಸಲಹೆಗಳಿಗಾಗಿ ಸಿಂಗ್ ಎದುರು ಮಂಡಿಯೂರಿ ಕುಳಿತರು. ಭಾರತಕ್ಕೆ ಜಾಗತೀಕರಣದ ಹೆಬ್ಬಾಗಿಲು ತರೆದಿದ್ದು ಕೂಡ ಇದೇ ಮನಮೋಹನ ಸಿಂಗರು. 1991 ರಲ್ಲಿ ಬಾರತದ   ಆರ್ಥಿಕ ದುಸ್ಥಿತಿಯ ಪರಿಸ್ಥಿತಿಯನ್ನು ಬಳಸಿಕೊಂಡ ಅಂತರಾಷ್ಟ್ರೀಯ ಹಣಕಾಸು ನಿಧಿ( ಐ.ಎಂ.ಎಫ್0) ಸಾಲನೀಡುವಾಗ ವಿಧಿಸಿದ ಷರತ್ತುಗಳನ್ನು ಒಪ್ಪಿಕೊಂಡ ಮನಮೋಹನ ಸಿಂಗರು ರಚಾನತ್ಮಕ ಹೊಂದಾಣಿಕೆಗಳು ( Structarul Adjestments) ಕಾರ್ಯಕ್ರಮಗಳ ಮೂಲಕ ಹೊಂದಾಣಿಕೆ ಮಾಡಿಕೊಂಡರು.
ಜಾಗತೀಕರಣವನ್ನು ಒಪ್ಪಿಕೊಳ್ಳುತ್ತಲೇ ಭಾರತದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವುದು ಸಿಂಗರಿಗೆ ಮುಖ್ಯವಾಗಿತ್ತು. ಮೂಲತಃ ಸಿಂಗ್ ರವರು ಇಬ್ಬರು ವಿಭಿನ್ನ ವಿಚಾರ ಧಾರೆಗಳ ಪ್ರಾಧ್ಯಾಪಕರಿಂದ ಅರ್ಥಶಾಸ್ತ್ರವನ್ನು ಮೈಗೂಡಿಸಿಕೊಂಡಿದ್ದರು. ಕೇಂಬ್ರಿಡ್ಜ್ ವಿ.ವಿ.ಯಲ್ಲಿ ಸಮಾಜವಾದದ ಹಿನ್ನಲೆಯುಳ್ಳ ಖ್ಯಾತ ಅರ್ಥಶಾಸ್ತ್ರಜ್ಙೆ ಜೋನ್ ರಾಬಿನ್ ಸನ್ ಮತ್ತು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಬಂಡವಾಳಶಾಹಿ ಜಗತ್ತು ಮಾತ್ರ  ಪರ್ಯಾಯ ಎಂದು ನಂಬಿಕೊಂಡಿದ್ದ ನಿಕೋಲಸ್ ಕಾಲ್ಡರ್ ಇವರಿಗೆ ಗುರುಗಳಾಗಿದ್ದರು. ಇಬ್ಬರು ಗುರುಗಳ ವಿಚಾರೆಧಾರೆಯ ಜೊತೆಗೆ ತಮ್ಮದೇ ಆದ ಸುಧಾರಣೆಯ ಸೂತ್ರಗಳನ್ನು ಮನಮೋಹನ್ ಕಂಡುಕೊಂಡಿದ್ದರ ಫಲವಾಗಿ 2004ರಿಂದ 2010 ರ ವೇಳೆಗೆ ಭಾರತ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿ ಆರ್ಥಿಕ ರಾಷ್ಟ್ರವಾಗಿ ಬೆಳೆಯಲು ಸಾಧ್ಯವಾಯಿತು.

ಸಿಂಗ್ ರವರ ಇಷ್ಟೆಲ್ಲಾ ಸಾಧನೆ ಮತ್ತು ಶ್ರಮ ಯು.ಪಿ.ಎ. ಸರ್ಕಾರದ ಎರಡನೇಯ ಅವಧಿಯಲ್ಲಿ ಮಣ್ಣು ಪಾಲಾಯಿತು. ದೇಶದ ಹಲವಾರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡ ಕಾಂಗ್ರೇಸ್ ಪಕ್ಷ, ಅಧಿಕಾರಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ನಂಬಿಕೊಳ್ಳಬೇಕಾಯಿತು. ಈ ನೆಲದ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ನುಂಗಿ ನೀರು ಕುಡಿದು, ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಪ್ರಾದೇಶಿಕ ಪಕ್ಷಗಳ ಅನಾಲಾಯಕ್ ನಾಯಕರು ಇವರ ಸಚಿವ ಸಂಪುಟದಲ್ಲಿ ಸಚಿವರಾದರು. ಜೊತೆಗೆ ಸೋನಿಯಾ ಗಾಂಧಿಯವರ ಭಜನೆಯನ್ನು ತಮ್ಮ ಜೀವನದ ಏಕೈಕ ಗುರಿಯಾಗಿರಿಸಿಕೊಂಡ ಕೆಲವು ಕಾಂಗ್ರೇಸ್ ಭಟ್ಟಂಗಿಗಳು ಸಂಪುಟಕ್ಕೆ ಸೇರ್ಪಡೆಯಾದರು. ಇದರ ಪರಿಣಾಮವಾಗಿ 2.ಜಿ. ಹಗರಣ, ಕಲ್ಲಿದ್ದಲು ಹಗರಣ, ರೈಲ್ವೆ ಭ್ರಷ್ಟಾಚಾರದ ಹಗರಣಗಳಿಗೆ ಮನಮೋಹನ್ ಸಿಂಗ್ ಮೌನ ಸಾಕ್ಷಿಯಾದರು. ಯು.ಪಿ.ಎ. ಸರ್ಕಾರದ ಹಗರಣಗಳು ಇವರನ್ನು ದುರ್ಬಲ ಪ್ರಧಾನಿಯನ್ನಾಗಿ ಪ್ರತಿಭಿಂಬಿಸಿದವು. ಜಾಗತಿಕ ಮಟ್ಟದಲ್ಲಿ ಶ್ರೇಷ್ಟ ನಾಯಕ ಮತ್ತು ಪ್ರಧಾನಿ ಎಂದು ಹೊಗಳಿಸಿಕೊಂಡಿದ್ದ ಮನಮೋಹನ ಸಿಂಗರನ್ನು 2012 ರ ಸೆಪ್ಟಂಬರ್ ತಿಂಗಳಿನಲ್ಲಿ ಟೈಮ್ಸ್ ಪತ್ರಿಕೆ ಭಾರತದ “ವಿಫಲ ನಾಯಕ” ಎಂದು ಬಣ್ಣಿಸಿತು.

ಆರ್ಥಿಕ ವಿಷಯಗಳಲ್ಲಿ ಕಠಿಣ ನಿಲುವು ತಾಳುವ ಮನಮೋಹನ್ ಸಿಂಗ್ ರಾಜಕೀಯ ವಿಷಯಗಳಲ್ಲಿ ದುರ್ಬಲರಾದದ್ದು ಏಕೆ? ಸೋನಿಯಾ ಅವರ ಋಣದ ಭಾರ ಇವರನ್ನು ನಿಷ್ಕ್ರಿಯಗೊಳಿಸಿತೆ? ಇದಕ್ಕೆ ಕಾಲವೇ ಉತ್ತರಿಸಬೇಕು, ಆದರೆ, ಮನಮೋಹನ್ ಸಿಂಗರ ಬಗ್ಗೆ ನಮ್ಮ ಅಸಮಾಧಾನಗಳು, ಸಿಟ್ಟುಗಳು ಏನೇ ಇರಲಿ. ಭಾರತದ ಇತಿಹಾಸದಲ್ಲಿ ಪ್ರಧಾನಿಯಂತಹ ಅತ್ಯುನ್ನುತ ಹುದ್ದೆಗೆ ಏರಿ, ತಮ್ಮ ಕೈ ಮತ್ತು ಬಾಯಿಯನ್ನು ಶುದ್ಧವಾಗಿಟ್ಟುಕೊಂಡು, ತಮ್ಮ ಕುಟುಂಬದ ಸದಸ್ಯರನ್ನು ಅಧಿಕಾರದಿಂದ ದೂರವಿಟ್ಟ ಪ್ರಧಾನಿಗಳಲ್ಲಿ ಇವರು ಎರಡನೇಯವರು.(ಮೊದಲನೆಯವರು ಲಾಲ್ ಬಹುದ್ದೂರ್ ಶಾಸ್ತ್ರಿ) ಮನಮೋಹನ್ ಸಿಂಗರ ಸರಳತೆ ಎಂತಹದ್ದು ಎಂಬುದನ್ನು ಖುಷ್ವಂತ್ ಸಿಂಗ್ ತಮ್ಮ ಒಂದು ಅಂಕಣದಲ್ಲಿ ದಾಖಲಿಸಿದ್ದಾರೆ. 1999ರ ಲ್ಲಿ ತಮ್ಮಿಂದ ಎರಡು ಲಕ್ಷ ರೂಪಾಯಿಗಳನ್ನು ಮನಮೋಹನ್ ಸಿಂಗರು ಸಾಲ ಪಡೆದಿದ್ದರು. ಅಸ್ಸಾಂ ನಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ವೇಳೆಯಲ್ಲಿ ವಿಮಾನ ಯಾನ ಮತ್ತು ಟ್ಯಾಕ್ಸಿ ವೆಚ್ಚಕ್ಕಾಗಿ ಹಣ ಪಡೆದು ನಂತರ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. ಡಾ. ಮನಮೊಹನ ಸಿಂಗ್ ರವರ ದೌರ್ಬಲ್ಯಗಳ ನಡುವೆ ಅವರ ಬಗ್ಗೆ ಗೌರವ ಉಂಟಾಗುವುದು ಈ ಕಾರಣಕ್ಕಾಗಿ. ಒರ್ವ ಶಾಸಕನ ತನ್ನ ಒಂದು ಅವಧಿಯಲ್ಲಿ ಐದು ತಲೆಮಾರಿಗೆ ಆಗುವಷ್ಟು ಆಸ್ತಿ ಸಂಪಾದಿಸಲು ದರೋಡೆಗೆ ಇಳಿದಿರುವ ಸಂದರ್ಭದಲ್ಲಿ  ಕೇಂದ್ರ ಸಚಿವಾರಾಗಿದ್ದು, ದೇಶದ ವಿವಿಧ ಉನ್ನತ ಹುದ್ದಗಳಲ್ಲಿ ಕಾರ್ಯನಿರ್ವಹಿಸಿ, ಸಿಂಗ್ ಅವರು ಬದುಕುತ್ತಿರುವ ಸರಳ ಬದುಕಿನಿಂದಾಗಿ ಅವರ  ದುರಂತ ನಾಯಕನ ಇಮೇಜಿನ ನಡುವೆಯೂ  ಗೌರವ ಮೂಡುತ್ತದೆ..

ಭಾನುವಾರ, ಆಗಸ್ಟ್ 25, 2013

ಸಾವಿನ ಕುದುರೆಯೇರಿ ಹೊರಟವರ ಕಥನ



ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಸಂಭವಿಸುತ್ತಿರುವ ರಸ್ತೆಗಳಲ್ಲಿನ ಅಪಘಾತಗಳನ್ನು ಗಮನಿಸಿದರೆ, ಭಾರತ ಜಗತ್ತಿನ ವಾಹನ ಅಪಘಾತಗಳ ರಾಜಧಾನಿಯೇನೊ ಎಂದು ಅನಿಸತೊಡಗಿದೆ.  ಪ್ರತಿ ದಿನ ರಸ್ತೆಗಿಳಿಯುತ್ತಿರುವ ದ್ವಿಚಕ್ರವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳಿಂದ ದೇಶದ ರಸ್ತೆಗಳು ತುಂಬಿ ತುಳುಕುತ್ತಿವೆ.  ಇವುಗಳ ಜೊತೆಗೆ ವಾಹನ ಚಲಾಯಿಸುವಾಗ ಚಾಲಕರಿಗೆ ಇರಬೇಕಾದ ಶ್ರದ್ಧೆ ಮತ್ತು ಜವಾಬ್ದಾರಿಯ ಕೊರತೆಯಿಂದಾಗಿ ಅಪಘಾತಗಳ ಪ್ರಮಾಣ ಸಹ ಪ್ರತಿ ವರ್ಷ ಹೆಚ್ಚಾಗುತ್ತಲೆ ಇದೆ. ಜಗತ್ತಿನಲ್ಲಿ ನಡೆಯುವ ಅಪಘಾತಗಳ ಒಟ್ಟು ಸಂಖ್ಯೆಯ ಶೇಕಡ ಹತ್ತರಷ್ಟು ವಾಹನ ಅಪಘಾತಗಳು  ಭಾರತದಲ್ಲಿ ಸಂಭವಿಸುತ್ತಿವೆ.

ಭಾರತದಲ್ಲಿ ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳು ಅತಿ ಹೆಚ್ಚು ವಾಹನ ಅಪಘಾತ ಸಂಭವಿಸುವ ರಾಜ್ಯಗಳೆಂದು ಕುಖ್ಯಾತಿ ಗಳಿಸಿವೆ. ಕಳೆದ ಹತ್ತು ವರ್ಷಗಳಿಂದ ತಮಿಳುನಾಡು ರಾಜ್ಯ ಅಪಘಾತದ ಪ್ರಮಾಣದಲ್ಲಿ ಮುಂಚೂಣಿಯಲ್ಲಿದೆ, ಉತ್ತರ ಪ್ರದೇಶದಲ್ಲಿ ಸರಾಸರಿ ವರ್ಷಕ್ಕೆ 12ರಿಂದ 13 ಸಾವಿರ ಅಪಘಾತಗಳು ಸಂಭವಿಸದರೆ, ತಮಿಳುನಾಡಿನಲ್ಲಿ ಸರಾಸರಿ ವರ್ಷವೊಂದಕ್ಕೆ 13 ರಿಂದ 15 ಸಾವಿರ ವಾಹನ ಅಪಘಾತಗಳು ಸಂಭವಿಸುತ್ತಿವೆ. ಕರ್ನಾಟಕದಲ್ಲಿ ಈ ಪ್ರಮಾಣ 8.5 ಸಾವಿರದಿಂದ 9 ಸಾವಿರದ ವರೆಗೆ ಇದೆ.
ಭಾರತದಲ್ಲಿ ಸಂಭವಿಸುತ್ತಿರುವ ವಾಹನ ಅಪಘಾತಗಳಲ್ಲಿ ಶೇಕಡ 93 ರಷ್ಟು ಅಪಘಾತಗಳು ವಾಹನ ಚಾಲಕರ ಸ್ವಯಂಕೃತ ಅಪರಾಧಗಳಿಂದ ಸಂಭವಿಸಿದರೆ, ಉಳಿದ ಕೇವಲ 7 ರಷ್ಟು ಪ್ರಮಾಣದಲ್ಲಿ ವಾಹನಗಳ ತಾಂತ್ರಿಕ ವೈಫಲ್ಯಗಳಿಂದ ಜರುಗುತ್ತಿವೆ. ವಾಹನ ಚಲಾಯಿಸುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದ ಶೇಕಡ 30 ರಷ್ಟು, ಮದ್ಯಪಾನ ಸೇವನೆಯಿಂದಾಗಿ ಶೇಕಡ 33 ರಷ್ಟು ಅಪಘಾತಗಳು ಹಾಗೂ  ಉಳಿದ ಶೇಕಡ 30 ರಷ್ಟು ಅಪಘಾತಗಳು ಚಾಲಕರ ಮಿತಿಮೀರಿದ ವೇಗದಿಂದಾಗಿ ಸಂಭವಿಸುತ್ತಿವೆ.

ಕೇವಲ ಐದು ವರ್ಷಗಳ ಹಿಂದೆ ಪ್ರತಿ ಹತ್ತು ನಿಮಿಷಕ್ಕೆ ಭಾರತದಲ್ಲಿ  ಒಂದು ವಾಹನಗಳ ದುರಂತ ಸಂಭವಿಸುತ್ತಿತ್ತು. ಈಗ ಕೇವಲ ನಾಲ್ಕು ನಿಮಿಷಕ್ಕೆ ಒಂದರಂತೆ ದುರಂತ ಸಂಭವಿಸುತ್ತಿದ್ದು, ಪ್ರತಿ ಹತ್ತು ನಿಮಿಷಕ್ಕೆ ಒಂದು ಜೀವ ಬಲಿಯಾಗುತ್ತಿದೆ ಎಂದು ದೆಹಲಿ ಗಂಗಾರಾಂ ಆಸ್ಪತ್ರೆಯ ವೈದ್ಯ ತಜ್ಙ ಡಾ. ಬಿ.ಕೆ. ರಾವ್ ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಹದಿಮೂರು ಲಕ್ಷ ಜನತೆ ವಾಹನಗಳ ಅಪಘಾತಗಳಲ್ಲಿ ಜೀವ ಕಳೆದುಕೊಂಡಿದ್ದಾರೆ. ವಾಹನ ಚಲಾಯಿಸುವಾಗ ಚಾಲಕರು ಮೊಬೈಲ್ ಬಳಕೆ ಮಾಡುತ್ತಿರುವುದು, ಇತ್ತೀಚೆಗೆ ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಕೇಂದ್ರ ಸಾರಿಗೆ ಸ್ಪೃಷ್ಟ ಪಡಿಸಿದೆ. ಇತ್ತೀಚೆಗೆ ಹಾಸನ ಜಿಲ್ಲೆಯ ಬೇಲೂರು ಬಳಿಯ ವಿಷ್ಣು ಸಮುದ್ರದ ಬಳಿ ಸರ್ಕಾರಿ ಬಸ್ ಕೆರೆಗೆ ಉರುಳಲು ಕಾರಣವಾದದ್ದು ಕೂಡ ಇಂತಹ ಕಾರಣದಿಂದಾಗಿ.

ಆಶ್ಚರ್ಯಕರ ಸಂಗತಿಯೆಂದರೆ, ದ್ವಿಚಕ್ರ ವಾಹನಗಳ ಅಪಘಾತ ಶೇಕಡ ಹದಿನಾರರ ಪ್ರಮಾಣದಲ್ಲಿ ಇದ್ದು, ಇವೆಲ್ಲವೂ ಮಿತಿ ಮೀರಿದ ವೇಗ ಮತ್ತು ಮೊಬೈಲ್ ಬಳಕೆಯಿಂದ ಸಂಭವಿಸುತ್ತಿವೆ. ವಿಶೇಷವಾಗಿ ಉತ್ತರ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಕನಿಷ್ಟ ತಿಂಗಳಿಗೆ ಹತ್ತು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರರು ಮರಣಹೊಂದುತ್ತಿದ್ದಾರೆ. ಸುಮಾರು ಮುವತ್ತರಿಂದ ಅರವತ್ತು ಅಡಿಗಳ ರಸ್ತೆಯ ವಿಸ್ತೀರ್ಣದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ ಸಂಭವಿಸುತ್ತದೆ ಎಂದರೆ, ದ್ವಿಚಕ್ರ ಸವಾರರ ನಿರ್ಲಕ್ಷ್ಯ ಯಾವ ಪ್ರಮಾಣದಲ್ಲಿರಬಹುದು ನೀವೇ ಊಹಿಸಿಕೊಳ್ಳಿ.
ವಾಹನಗಳ ಚಾಲನೆ ಕುರಿತಂತೆ ಇರುವ ಅನನಭವ ಮತ್ತು ದಿವ್ಯ ನಿರ್ಲಕ್ಷ್ಯ ಹಾಗೂ ಪ್ರತಿ ಹಳ್ಳಿಗಳಲ್ಲಿ ಸೈಕಲ್ಗಳ ಸ್ಥಾನವನ್ನು ಆಕ್ರಮಿಸಿಕೊಂಡ ದ್ವಿಚಕ್ರವಾಹನಗಳು ಮತ್ತು ಬ್ಯಾಂಕ್ ನಿಂದ ಸುಲಭವಾಗಿ ಸಿಗುತ್ತಿರುವ ಸಾಲದ ಸೌಲಭ್ಯಗಳಿಂದಾಗಿ ಮಧ್ಯಮ ವರ್ಗಕ್ಕೆ ನಿಲುಕಿದ ಕಾರುಗಳಿಂದಾಗಿ ಇಡೀ ದೇಶವೇ ವಾಹನಗಳಿಂದ ಕಿಕ್ಕಿರಿಯುತ್ತಿದೆ. ಈವರೆಗೆ ಎಲ್ಲೆಂದರಲ್ಲಿ ಜನಜಂಗುಳಿ ಕಾಣುತ್ತಿದ್ದ ನಾವು ಈಗ ವಾಹನಗಳ ದಟ್ಟಣೆಯನ್ನೂ ಕಾಣುತ್ತಿದ್ದೇವೆ. ಇದು ಭಾರತದ ಸಮಸ್ಯೆಯೊಂದೇ ಅಲ್ಲ, ಬದಲಾಗಿ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ನಗರಗಳಲ್ಲಿ  ನಗರಗಳಲ್ಲಿ ಸುರಂಗ ರಸ್ತೆಗಳಾದವು, ಮೇಲಿನ ರಸ್ತೆಗಳಾದವೂ, ನಂತರ  ಬೇರೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ಅಸಹಾಯಕತೆಯಿಂದ ಕೈ ಚೆಲ್ಲಿ ಕುಳಿತಿರುವ ಸರ್ಕಾರಗಳು ಸಂಚಾರ ದಟ್ಟಣೆಯ ಸಮಸ್ಯೆಯನ್ನು ಜನರ ತಲೆಗೆ ವರ್ಗಾಯಿಸಿವೆ.

2012 ರಲ್ಲಿ 48 ಲಕ್ಷ ಕಾರುಗಳು ಭಾರತದಲ್ಲಿವೆ ಎಂದು ಅಂದಾಜಿಸಲಾಗಿದ್ದು, 2025 ರ ಇಸವಿ ವೇಳೆಗೆ ಭಾರತದಲ್ಲಿ ಕಾರುಗಳ ಸಂಖ್ಯೆ 4 ಕೊಟಿ, 60 ಲಕ್ಷ ಕ್ಕೆ ಏರಬಹುದೆಂದು ನಿರಿಕ್ಷಿಸಲಾಗಿದೆ.  ಈಗಿನ ವಾಹನಗಳ ಮಾರಾಟದ ಬೆಳವಣಿಗೆಯ  ವೇಗವನ್ನು ಮಾನದಂಡವನ್ನಾಗಿಟ್ಟುಕೊಂಡು ಇದನ್ನು ಅಂದಾಜಿಸಲಾಗಿದೆ. ಇವೊತ್ತಿನ ಭಾರತದ ರಸ್ತೆಗಳ ಪರಿಸ್ಥಿಯನ್ನು ಗಮನಿಸಿದರೆ, ಮುಂದಿನ ದಶಕಗಳಲ್ಲಿ ಜನ ಸಾಮಾನ್ಯರಿಗೆ ಭಾರತದ ರಸ್ತೆಗಳಲ್ಲಿ ನಡೆದಾಡಲು ಪ್ರವೇಶವಿಲ್ಲ ಎಂದಂತಾಯಿತು.
ರಸ್ತೆ ಸಂಚಾರದ ಸುರಕ್ಷತೆಯ ಕ್ರಮ ಕುರಿತಂತೆ ದೇಶದ ಎಲ್ಲಾ ರಾಜ್ಯಗಳ ಸಂಚಾರಿ ವಿಭಾಗದ ಪೊಲೀಸರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ, ಆದರೆ, ನಾವುಗಳು, ಅವಿವೇಕಿಗಳಂತೆ, ಅನಾಗರೀಕರಂತೆ ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು, ಇಲ್ಲವೆ, ಮಿತಿ ಮೀರಿದ ವೇಗದಲ್ಲಿ ಸಾವನ್ನು ಬೆನ್ನಟ್ಟಿ ಹೊರಟವರಂತೆ ವಾಹನ ಚಲಾಯಿಸಿದರೆ, ಇದಕ್ಕೆ ಪೊಲೀಸರ ಬಳಿ ಅಷ್ಟೇ ಅಲ್ಲ, ನಮ್ಮ ಬಳಿ ಕೂಡ ಯಾವ ಪರಿಹಾರ ತಾನೆ ಇದೆ?  ಅದನ್ನು ಎಲ್ಲಿ ಹುಡುಕುವುದು? ತಿಳಿಯುತ್ತಿಲ್ಲ.

ಸೋಮವಾರ, ಆಗಸ್ಟ್ 19, 2013

ಬಯಲು ಮಲ ವಿಸರ್ಜನೆಯ ಭಾರತ


ಇದು ದಶಕದ ಹಿಂದಿನ ಘಟನೆ. ಕರ್ನಾಟಕದ ಹಿರಿಯ ..ಎಸ್. ಅಧಿಕಾರಿಗಳಲ್ಲಿ ಒಬ್ಬರು ಹಾಗೂ ನನ್ನ ಪರಮಾಪ್ತ ಸ್ನಹಿತರಾದ ಎಲ್.ಕೆ. ಅತಿಕ್ ಅಹಮ್ಮದ್  (ತುಮಕೂರು ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು,  ದೆಹಲಿಯ ಪ್ರಧಾನ ಮಂತ್ರಿಗಳ ಕಛೇರಿಯಲ್ಲಿ ಹಿರಿಯ ಅಧಿಕಾರಿಯಾಗಿ ಐದು ವರ್ಷ ಸೇವೆ ಸಲ್ಲಿಸಿ, ಈಗ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಬ್ಯಾಂಕ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ) ಅವರು ಕರ್ನಾಟಕದ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಹಿರಿಯ ಐ.ಪಿ.ಎಸ್ ಅಧಿಕಾರಿ ವಿ.ಪಿ.ಬಳಿಗಾರ್ ಇದೇ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನ ಗ್ರಾಮ ನೈರ್ಮಲ್ಯ ಯೋಜನಾ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಶೌಚಾಲಯ ಬಳಸುವುದನ್ನು ಅಭ್ಯಾಸ ಮಾಡಿಸಬೇಕು ಮತ್ತು ಬಯಲು ಮಲವಿಸರ್ಜನೆಯ ಪದ್ಧತಿಯನ್ನು ತಪ್ಪಿಸಬೇಕೆಂಬುದು ಈ ಇಬ್ಬರ ಅಧಿಕಾರಿಗಳ ಕನಸಾಗಿತ್ತು. ಈ ಯೋಜನೆಗೆ ನನ್ನ ಪತ್ರಕರ್ತ ಮಿತ್ರ ಜಿ.ಎನ್. ಮೋಹನ್ ರವರ ಪತ್ನಿ ಹಾಗೂ ಹಿರಿಯ ಪತ್ರಕರ್ತೆ ಇ.ಎಸ್.ಸತ್ಯ ಅವರು ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕರ್ನಾಟಕದ ವಿವಿಧ ಕ್ರೇತ್ರಗಳ ಆಯ್ದ ವ್ಯಕ್ತಿಗಳನ್ನು ಬೆಂಗಳೂರಿನ ಕಾವೇರಿ ಭವನದಲ್ಲಿ ಒಂದು ದಿನದ ಸಮಾಲೋಚನೆಗೆ ಆಹ್ವಾನಿಸಲಾಗಿತ್ತು. ನಾನು ಸೇರಿದಂತೆ, ಬೆಂಗಳೂರು ವಿ.ವಿ. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ದಿ.ಪ್ರೊ.ಬಿ.ಎ. ಶ್ರೀಧರ, ನಾಟಕಕಾರ ಕೆ.ವೈ.ನಾರಾಯಣಸ್ವಾಮಿ, ರೈತಸಂಘದ ನಾಯಕಿ ಮಂಡ್ಯದ ಸುನಂದಾ ಜಯರಾಂ, ಚಂದ್ರಶೇಖರ ಕಂಬಾರರ ಪುತ್ರ ರಾಜಶೇಖರ ಕಂಬಾರ ಒಳಗೊಂಡಂತೆ ಸುಮಾರು ಇಪ್ಪತ್ತು ಮಂದಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಮುಂದಿದ್ದ ಸವಾಲುಗಳೆಂದರೆ, ಕರ್ನಾಟಕದ ಸರ್ಕಾರ ಸಬ್ಸಿಡಿ ದರದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿಕೊಟ್ಟಿದ್ದರೂ ಸಹ ಜನತೆ ಅದನ್ನು ಉಪಯೋಗಿಸಿದೆ, ತಮ್ಮ ಕುರಿ ಮೇಕೆಗಳ ಕೊಟ್ಟಿಗೆಯಾಗಿ, ಇಲ್ಲವೆ ಸೌದೆ ಮತ್ತು ಜಾನುವಾರಗಳ ಮೇವಿನ ಸಂಗ್ರಹದ ಕೊಠಡಿಯಾಗಿ ಉಪಯೋಗಿಸುತ್ತಿದ್ದರು. ಇದನ್ನು ತಪ್ಪಿಸುವ ಬಗೆ ಹೇಗೆ? ಇಂತಹ ಪದ್ಧತಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿತ್ತು.
ಈ ಸಮಸ್ಯೆಯನ್ನು ಇಟ್ಟುಕೊಂಡು ದಿನವಿಡಿ ಚರ್ಚಿಸಿದ ನಾವು ಅಂತಿಮವಾಗಿ ಸರ್ಕಾರಕ್ಕೆ ಸಲಹೆ ರೂಪದಲ್ಲಿ ಒಂದಿಷ್ಟು ಮಾರ್ಗದರ್ಶನ ನೀಡಿದೆವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಒಂದು, ಪ್ರಾಥಮಿಕ ಹಂತದಿಂದ ಮಕ್ಕಳಿಗೆ ಶೌಚಾಲಯ ಬಳಸುವ ಪದ್ಧತಿಯನ್ನು ರೂಢಿ ಮಾಡಿಸಬೇಕು, ಇದಕ್ಕಾಗಿ ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು, ಎರಡನೇಯದಾಗಿ ಉತ್ತರ ಕರ್ನಾಟಕದಲ್ಲಿ ಮಠಾಧೀಶರು ತಮ್ಮಪ್ರವಚನ ನೀಡುವ ಸಮಯದಲ್ಲಿ ಶೌಚಾಲಯ ಬಳಕೆ ಕುರಿತು ಅವರಿಂದ ಜನತೆಗೆ ಬುದ್ಧಿ ಹೇಳಿಸಬೇಕು. ಹಾಗೂ ಮೂರನೇಯದಾಗಿ ಸಾಧ್ಯವಾದರೆ, ಕರ್ನಾಟಕದ ಜನಪ್ರಿಯ ವ್ಯಕ್ತಿಗಳ ಸಂದೇಶಗಳನ್ನು ಒಳಗೊಂಡ, ಜಾಹಿರಾತು ಪ್ರಕಟಿಸುವುದು, ಹಾಗೂ ಜಾತ್ರೆ, ಉತ್ಸವ ಸಂದರ್ಭಗಳಲ್ಲಿ ಶೌಚಾಲಯ ಬಳಕೆ ಮತ್ತು ನೈರ್ಮಲ್ಯ ಯೋಜನೆಗಳ ಕುರಿತು ಪ್ರದರ್ಶನ, ಮಾಹಿತಿ ನೀಡುವ ಕಾರ್ಯಕ್ರಮಗಳು, ಇದಕ್ಕೆ ಪೂರಕವಾಗಿ ಬೀದಿ ನಾಟಕ, ಪರಿಸರ ಕುರಿತಾದ ಗೀತೆಗಳ ಹಾಡುಗಾರಿಕೆ ಇರಬೇಕು ಎಂದು ಸಲಹೆ ಮಾಡಿದ್ದವು. ದಶಕದ ನಂತರ ಗ್ರಾಮ ನೈರ್ಮಲ್ಯ ಯೋಜನೆಯನ್ನು ಪರಾಮರ್ಶಿಸಿದರೆ, ಯಾವುದೇ ಬದಲಾವಣೆ ಕಾಣುತ್ತಿಲ್ಲ. ಅದೇ ಉತ್ತರ ಕರ್ನಾಟಕದಲ್ಲಿ ಓಡಾಡುತ್ತಿರುವ ನನಗೆ ಅನುಭಕ್ಕೆ ಬಂದ ಸಂಗತಿಯೆಂದರೆ, ಬಯಲು ವಿಸರ್ಜನೆ, ಮತ್ತು ಶಾಚಾಲಯಗಳ ನಿರಾಕರಣೆ ಈ ಎರಡೂ ಸಂಗತಿಗಳು ಜನಗಳ ಬದಲಾಗದ ಮನಸ್ಥಿತಿಯೇನೋ ಎಂಬಂತಾಗಿದೆ. ವಯಸ್ಸಾದ ತಲೆಮಾರಿನ ಜನರನ್ನು ಅಧುನಿಕತೆಗೆ ಒಗ್ಗಿಸುವುದು ಕಷ್ಟದ ಕೆಲಸ ಎಂದು ಮನದಟ್ಟಾಗಿದೆ.
ಇದೇ ಎರಡು ಸಾವಿರದ ಇಸವಿಯಲ್ಲಿ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ಸಂಸ್ಥೆ “ ಶತಮಾನದ ಅಭಿವೃದ್ಧಿಯ ಗುರಿಗಳು” ( Millenium Devlopments Goals) ಎಂಬ ಹದಿನೈದು ವರ್ಷಗಳ ಯೋಜನೆಯನ್ನು ರೂಪಿಸಿತು. ಈ ಯೋಜನೆಯಲ್ಲಿ ಜಾಗತಿಕವಾಗಿ ಸಾಧಿಸಬೇಕಾದ  ಎಂಟು ವಿಷಯಗಳನ್ನು ಗುರಿಗಳನ್ನಾಗಿ ನಿರ್ಧರಿಸಲಾಗಿತ್ತು. ಅವುಗಳಲ್ಲಿ ಪ್ರಮಖವಾದವುಗಳೆಂದರೆ, ಬಡತನ ನಿವಾರಣೆ, ಲಿಂಗತಾರತಮ್ಯ ನಿವಾರಣೆ, ಮಹಿಳೆಯರಿಗೆ ಪುರುಷರಿಗೆ ಸಮಾನವಾಗಿ ಇರುವ ಹಕ್ಕುಗಳನ್ನು ಅಸ್ತಿತ್ವಕ್ಕೆ ತರುವುದು, ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸುವುದು, ಹೆರಿಗೆ ಸಂದರ್ಭದಲ್ಲಿನ ಮಹಿಳೆಯರ ಸಾವು ತಡೆಗಟ್ಟುವುದು, ಜಗತ್ತಿನ ಎಲ್ಲಾ ಪ್ರಜೆಗಳಿಗೆ ಶುದ್ಧವಾದ ಕುಡಿಯುವ ನೀರು ಮತ್ತು ಶೌಚಾಲಯ ನಿರ್ಮಾಣ ಹಾಗೂ ವಸತಿ ನಿರ್ಮಾಣ,  ಏಡ್ಸ್, ಹೆಚ್, ಐ, ವಿ ಒಳಗೊಂಡಂತೆ ಮಲೇರಿಯಾ, ವಾಂತಿ ಬೇಧಿ ಮುಂತಾದ ಕಾಯಿಲೆಗಳನ್ನು ತಡೆಗಟ್ಟುವುದು. ಹೀಗೆ ಜಗತ್ತಿನ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳ ವಿವಿಧ ರಂಗಗಳ ತಜ್ಙರ ನೇತೃತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಯಿತು. ಯೋಜನೆ ಜಾರಿಗೆ ಬಂದ ಏಳೂವರೆ ವರ್ಷಗಳ ನಂತರ ಕ್ರಮಿಸಿದ ಅರ್ಧ ದಾರಿಯಲ್ಲಿ ನಿಂತು, ಗುರಿಗಳ ಸಾಧನೆ ಕುರಿತು ನಡೆಸಿದ ಅಧ್ಯಯನ  ವರದಿ 2008ರಲ್ಲಿ ಪ್ರಕಟವಾಯಿತು. ವರದಿಯಲ್ಲಿ ತಜ್ಙರು ನಿರಾಸೆ ಮತ್ತು ಸಾಧಿಸಲಾಗದ ಅಸಹಾಯಕತೆಯನ್ನು ವ್ಯಕ್ತ ಪಡಿಸಿದ್ದರು. ಕೆಲವು ರಂಗಗಳಲ್ಲಿ ಈ ಯೋಜನೆ ವಿಫಲವಾಗಿತ್ತು. ( ನೋಡಿ- Mllenium Devlopment goals Report-2008)   ವಿಶೇಷವಾಗಿ ಏಷ್ಯಾ ರಾಷ್ಟ್ರಗಳಾದ ಭಾರತ, ಪಾಕಿಸ್ಥಾನ, ನೇಪಾಳ, ಬಂಗ್ಲಾ ಮುಂತಾದ ರಾಷ್ಟ್ರಗಳಲ್ಲಿ ಬಡತನ ನಿವಾರಣೆ ಮತ್ತು ಕುಡಿಯುವ ನೀರು, ಶೌಚಾಲಯ ಸಮಸ್ಯೆಗಳಲ್ಲಿ ಗಮನಾರ್ಹ ಬದಲಾವಣೆಯಾಗಿರಲಿಲ್ಲ. 2012ರ ವರದಿಯ ಪ್ರಕಾರ  ನೇಪಾಳ ಮತ್ತು ಶ್ರೀಲಂಕಾ ಒಂದಿಷ್ಟು ಪ್ರಗತಿ ಸಾಧಿಸಿವೆ. ಇಂತಹ ವೈಪಲ್ಯಗಳನ್ನು ಗುರಿಯಾಗಿಟ್ಟು ಕೊಂಡು ಭಾರತ ಸರ್ಕಾರ ಶೌಚಾಲಯ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು “ ನಿರ್ಮಲ್ ಭಾರತ್ ಅಭಿಯಾನ್” ಎಂಬ ಆಂಧೋಲನವನ್ನು ಆರಂಭಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಡವರಿಗಾಗಿ ಇಪ್ಪತ್ತು ಲಕ್ಷ ಮನೆಗಳನ್ನು 35 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ಕೇಂದ್ರ ಸಚಿವೆ ಗಿರಿಜಾ ವ್ಯಾಸ್ ಘೋಷಿಸಿದ್ದಾರೆ.
ಭಾರತದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನೇತಾರರು ಬಣ್ಣ ಬಣ್ಣದ ಮಾತು ಮತ್ತು ಅಕರ್ಷಕ ಯೋಜನೆಗಳನ್ನು ಘೋಷಿಸಬಲ್ಲರೆ ಹೊರತು, ಜಾರಿಯಾದ ಯೋಜನೆಗಳನ್ನು ಸುಸ್ಥಿಯಲ್ಲಿ ಕಾಪಾಡಿಕೊಳ್ಳಲು ಅಸಮರ್ಥರು. ದೇಶದ ಎಲ್ಲಾ ಸಮಸ್ಯೆಗಳಿಗೆ ಖಾಸಾಗಿಕರಣವೇ ಮದ್ದು ಎಂದು ನಂಬಿರುವ ಈ ಮಹಾನುಭಾವರು ಆದ್ಯತೆಯ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಮುಂತಾವುಗಳನ್ನು ಖಾಸಾಗಿ ಕ್ಷೇತ್ರಕ್ಕೆ ಒಪ್ಪಿಸಿ ಕಣ್ಮುಚ್ಚಿ ಕುಳಿತ್ತಿದ್ದಾರೆ. ಇಂತಹವರ ಅಸಮರ್ಥತೆಯಿಂದಾಗಿ ಭಾರತದಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ, ಆರೋಗ್ಯ, ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮಗಳಾಗಿ ದೇಶದ ಜ್ವಲಂತ ಸಮಸ್ಯೆಗಳಾಗಿ ಉಳಿದಿವೆ, ಮುಂದಕ್ಕೂ ಉಳಿಯುತ್ತವೆ.
ಭಾರತದ ಶೌಚಾಲಯ ಸಮಸ್ಯೆಗಳನ್ನು ಕುರಿತು. 2009ರಲ್ಲಿ ಏಷ್ಯಾ ಡೆವಲಪ್ಮೆಂಟ್ ಬ್ಯಾಂಕ್ ಪ್ರಕಟಿಸಿರುವ ಅಧ್ಯಯನ ವರದಿ “ India sanitation for All” ಹಾಗೂ ವಿಶ್ವ ಬ್ಯಾಂಕ್ 2011ರಲ್ಲಿ ಪ್ರಕಟಿಸಿರುವ” Water and sanitation program-2011 ಎಂಬ ಅಧ್ಯಯನಗಳು ಇಲ್ಲಿನ ಸ್ಥಿತಿಗತಿಗಳಿಗೆ ಕನ್ನಡಿ ಹಿಡಿದಂತಿವೆ. ಜಗತ್ತಿನ ಇಪ್ಪತ್ತು ರಾಷ್ಟ್ರಗಳಲ್ಲಿ ಅಲ್ಲಿನ ಜನಸಂಖ್ಯೆಯ ಶೇಕಡ 35 ರಷ್ಟು ಜನ ಶೌಚಾಲಯದಿಂದ ವಂಚಿತರಾಗಿದ್ದರೆ, ಭಾರತದಲ್ಲಿ ಜನಸಂಖ್ಯೆಯ ಶೇಕಡ 53ರಷ್ಟು ಜನ ಶೌಚಾಲಯಗಳಲ್ಲದೆ ಬಯಲು ವಿಸರ್ಜನೆಯ ಮೊರೆ ಹೋಗುತ್ತಿದ್ದಾರೆ. ಇವರಲ್ಲಿ ಶೇಕಡ 74 ರಷ್ಟು ಜನಸಂಖ್ಯೆ ಭಾರತದ ಗ್ರಾಮಾಂತರ ಪ್ರದೇಶದ ನಿವಾಸಿಗಳಾಗಿದ್ದಾರೆ. ಭಾರತದ ಇಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಐದು ವರ್ಷಗಳ ಕೆಳಗಿನ ಮಕ್ಕಳು ರೋಗರುಜಿನ, ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಕುತೂಹಲಕಾರಿಯಾದ ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಇಂಗ್ಲೆಂಡಿನ ಸಸ್ಸೆಕ್ಸ್ ವಿ.ವಿ.ಯ Institute of Devlopment studies ವಿಭಾಗದ ರಾಬರ್ಟ್ ಛೆಂಬರ್ಸ್ ಎಂಬುವರು ಈ ಕುರಿತು ಅಧ್ಯಯನ ನಡೆಸಿದ್ದಾರೆ. ಯೂನಿಸೆಫ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ. ಬಯಲಿನಲ್ಲಿ ಮಲ ವಿಸರ್ಜನೆ ಮಾಡುವುದರಿಂದ , ನೈರ್ಮಲ್ಯದ ಕೊರತೆ ಹಾಗೂ ಜಲ ಮೂಲಗಳ ಶುಚಿತ್ವ ನಾಶಗೊಳ್ಳುತ್ತಿದ್ದು ಇವುಗಳ ನೇರ ಪರಿಣಾಮಕ್ಕೆ ಮಕ್ಕಳು  ಬಲಿಯಾಗುತ್ತಿದ್ದಾರೆ ಎಂದು ಅಧ್ಯಯನದಲ್ಲಿ ದೃಢಪಟ್ಟಿದೆ.
ಇದು ಭಾರತದ ವೈರುಧ್ಯವೆಂದರೂ ತಪ್ಪಾಗಲಾರದು.  ಭಾರತದ ಸುಮಾರು 110ಕೋಟಿ ಜನಸಂಖ್ಯೆಗೆ 92 ಕೋಟಿ ಮೊಬೈಲ್ ಗಳಿಗೆ, ಆದರೆ, ಶೇಕಡ 50 ರಷ್ಟು ಶೌಚಾಲಯಗಳಿಲ್ಲ. ದೇಶದಲ್ಲಿ ಪ್ರತಿದಿನ ಅರ್ಥವಿಲ್ಲದ ಖಾಲಿಮಾತುಗಳಿಗೆ ಮೊಬೈಲ್ ಮೂಲಕ  ಜನ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತಿದ್ದಾರೆ. ಆದರೆ, ಈ ಹಣದಲ್ಲಿ ತಮ್ಮ ಮನೆಗೊಂದು ಶೌಚಾಲಯ ಕಟ್ಟಿಸಬಹುದು ಎಂಬ ಜ್ಙಾನ ನಮ್ಮ ಜನರಿಗಿಲ್ಲ. ಪ್ರತಿದಿನ ಭಾರತದಲ್ಲಿ ಮೊಬೈಲ್ ಕಂಪನಿಗಳಿಗೆ ಹರಿದು ಹೋಗುತ್ತಿರುವ ಹಣದಲ್ಲಿ ಕನಿಷ್ಟ ದಿನವೊಂದಕ್ಕೆ ಒಂದು ಲಕ್ಷ ಶೌಚಾಲಯಗಳನ್ನು ನಿರ್ಮಿಸಬಹುದು. ಗ್ರಾಮಾಂತರ ಪ್ರದೇಶದಲ್ಲಿ ಬಯಲು ವಿಸರ್ಜನೆ ಗ್ರಾಮದಿಂದ ದೂರದ ಹೊಲ ಗದ್ದೆ, ಕೆರೆ ಕಟ್ಟೆ ಸಮೀಪ ನಡೆದರೆ, ನಗರಗಳಲ್ಲಿ ಮನೆಯ ಸಮೀಪ, ಅಥವಾ ರೈಲ್ವೆ ಹಳಿಗಳ ಸಮೀಪವೆ ನಡೆಯುತ್ತದೆ. ಮುಂಬೈ ನಗರಕ್ಕೆ ಬೆಳಗಿನ ಜಾವ ರೈಲಿನಲ್ಲಿ ತಲುಪುವ ಪ್ರಯಾಣಿರಿಗೆ ನಗರದ ಹಳಿಗಳುದ್ದಕ್ಕೂ ಸಾಲಾಗಿ ಅಂಡು ತೋರಿಸುತ್ತಾ ಕುಳಿತ ಜನರು ಎದುರಾಗುತ್ತಾರೆ. ಇವರು ನಮಗೆ ಸ್ವಾಗತ ಕೋರುತ್ತಿದ್ದಾರಾ? ಅಥವಾ ಧಿಕ್ಕಾರದ ಪ್ರದರ್ಶನ ಮಾಡುತ್ತಿದ್ದಾರಾ? ಎಂಬ ಗೊಂದಲ ಕ್ಷಣಕಾಲ ಪ್ರಯಾಣಕರಲ್ಲಿ ಉಂಟಾಗುವುದು ಸಹಜ. ಕೊಳಗೇರಿಯಲ್ಲಿ ವಾಸಿಸುವ ಮಂದಿ ಎಷ್ಟು ನಿರ್ಲಿಪ್ತರೆಂದರೆ, ಅವರ ಗುಪ್ತಾಂಗಗಳನ್ನು ಪ್ರದರ್ಶನಕ್ಕಿಟ್ಟು ಕುಳಿತ ಅವರ ಮುಖದಲ್ಲಿ  ದಿಗಂಬರ ಜೈನ ಮುನಿಯ ಸ್ಥಿತಿ ಪ್ರಜ್ಙತೆ ಮನೆ ಮಾಡಿರುತ್ತದೆ.
ಇಂತಹ ಅಪಮಾನ ಹಾಗು ಆತಂಕಕಾರಿ ವಿಷಯಗಳನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ಭಾರತ ವಿಶ್ವದ ಬಲಿಷ್ಟ ಆರ್ಥಿಕ ಬೆಳವಣಿಗೆಯ ರಾಷ್ಟ್ರ ಎಂದು ಪ್ರತಿಬಿಂಬಿಸಿಕೊಳ್ಳುವುದು ನಿಜಕ್ಕೂ ಆತ್ಮವಂಚನೆಯ ಕೆಲಸವಾಗುತ್ತದೆ.
ಭಾರತದಲ್ಲಿ ಶೌಚಾಲಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಪ್ರತಿ ಮನೆಗೂ ಕಡ್ಡಾಯ ಮಾಡಲು ಅನೇಕ ಜಾಗತಿಕ ಸಂಸ್ಥೆಗಳು ಸಲಹೆ ಸೂಚನೆ ನೀಡಿವೆ. ಇದಲ್ಲದೆ, ಅನೇಕ ಯುವ ವಿಜ್ಙಾನಿಗಳು, ಸ್ವಯಂಸೇವಾ ಸಂಸ್ಥೆಗಳು ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಕಡಿಮೆ ವೆಚ್ಚದ ಆಧುನಿಕ ತಂತ್ರಜ್ಙಾನ ಮತ್ತು ಪರಿಸರ ಸ್ನೇಹಿಯಾದ ಶೌಚಾಲಯದ ಉಪಕರಣಗಳನ್ನು ಅವಿಷ್ಕರಿಸಿದ್ದಾರೆ.ಇದರ ಪ್ರಯೋಜನವನ್ನು ನಮ್ಮ ಸರ್ಕಾರಗಳು ಪ್ರಮಾಣಿಕವಾಗಿ ಬಳಸಿಕೊಳ್ಳಬೇಕು. ನಗರಗಳಲ್ಲಿ ವಸತಿ ಸಮಸ್ಯೆಯಿಂದಾಗಿ ಕೊಳಗೇರಿಗಳಲ್ಲಿ ವಾಸಿಸುವ ಬಡವರಿಗೆ ಸಮುದಾಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಯಲ್ಲಿ ಬಯಲು ಮಲ ವಿಸರ್ಜನೆಯ ಪರಿಣಾಮಗಳನ್ನು ತಿಳಿಸಿ ಶೌಚಾಲಯಗಳನ್ನು ಹೊಂದುವಂತೆ ಅವರ ಮನ ಒಲಿಸಬೇಕು. ಈ ಕೆಲಸ ಮಾಡಬೇಕಾದ ಸರ್ಕಾರದ ಕಛೇರಿಗಳ ಶೌಚಾಲಯಗಳು, ಬಸ್ ನಿಲ್ದಾಣದ ಶೌಚಾಲಯಗಳು, ಮತ್ತು ನಗರ ಸಭೆ, ಮಹಾನಗರ ಪಾಲಿಕೆ ನಿರ್ಮಿತ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವಾಗ ಜನತೆ ಸರ್ಕಾರದ ಮಾತುಗಳನ್ನು ಕೇಳಬಲ್ಲರೆ? ಇದು ಸಧ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ. ಈಗಿನ ನಮ್ಮ ಸರ್ಕಾರದ ಯೋಜನೆಗಳು ಹೇಗಿವೆಯೆಂದರೆ, ತಿಪ್ಪೆಗುಂಡಿಯ ಮೇಲೆ ನಿಂತು ಶುಚಿತ್ವದ ಪಾಠ ಹೇಳುವ ಮೂರ್ಖ ಶಿಖಾಮಣಿಯ ಚಿಂತನೆಗಳಂತಿವೆ.

ಸರ್ಕಾರಗಳ ಇಂತಹ ಅವಿವೇಕಗಳ ಪರಿಣಾಮವಾಗಿ ಭಾರತದ ಪ್ರಜೆ ವರ್ಷವೊಂದಕ್ಕೆ ಸರಾಸರಿ 48 ಡಾಲರ್ ಹಣವನ್ನು ( ಅಂದಾಜು ಮೂರುಸಾವಿರ ರೂಪಾಯಿ) ನೈರ್ಮಲ್ಯ ಕೊರತೆಯಿಂದಾದ ರೋಗರುಜಿನಗಳಿಗೆ ವ್ಯಯಮಾಡುತ್ತಿದ್ದಾನೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನ ಪ್ರಮಾಣದ ಶೇಕಡ 6ರಷ್ಟಿದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಈ ಪ್ರಮಾಣ ಕೇವಲ ಶೇಕಡ ಒಂದರಿಂದ ಎರಡರಷ್ಟಿದೆ.

ಗುರುವಾರ, ಆಗಸ್ಟ್ 15, 2013

ಹೆದ್ದಾರಿಗಳೆಂಬ ನರಕದ ಹಾದಿಗಳು


ಒಂದು ದೇಶದ ಆಧುನಿಕತೆಯ ಅಭಿವೃದ್ಧಿಯ ಮಂತ್ರಗಳು ಎಂದರೆ, ರಾಷ್ಟ್ರೀಯ ಹೆದ್ದಾರಿ, ಸೇತುವೆಗಳು ಮತ್ತು ನಗರಾಭಿವೃದ್ಧಿ. ಇದು ಪಾಶ್ಚಿಮಾತ್ಯ ಜಗತ್ತು ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಹೇಳಿಕೊಟ್ಟಿರುವ ಆಧುನಿಕತೆಯ ಪಾಠ. ಏಕೆಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳುವ ಕಾಮಗಾರಿಗಳು, ರಾಜಕಾರಣಿಗಳಿಗೆ ಸದಾ ಹಾಲು ಕರೆಯುವ ಹಸುಗಳಾದರೆ, ರಾಜಕೀಯ ಪಕ್ಷಗಳಿಗೆ ಬಂಡವಾಳವಿಲ್ಲದೆ, ದೇಣಿಗೆಯ ಹೆಸರಿನಲ್ಲಿ ಲಾಭ ತಂದುಕೊಡುವ ಉದ್ದಿಮೆಗಳು. ಹಾಗಾಗಿ ದೇಶದಲ್ಲಿ ಬರಗಾಲವಿರಲಿ, ಅತೀವೃಷ್ಟಿಯಿರಲಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾತ್ರ ನಿರಂತರ ನಡೆಯುತ್ತಿರಬೇಕು. ಉಳ್ಳವರು ಕುಡಿದ ನೀರು ಹೊಟ್ಟೆಯಲ್ಲಿ ಅಲುಗಾಡದ ಹಾಗೆ ದೇಶದ ರಸ್ತೆಗಳು ಇರಬೇಕು.
 ಸರ್ಕಾರಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಂದ ಎಷ್ಟು ಮಂದಿಗೆ ಉಪಯೋಗವಾಗುತ್ತದೆ ಎಂಬುದು ಮುಖ್ಯವಲ್ಲ, ಆಳುವ ಸರ್ಕಾರಗಳಿಗೆ ಮತ್ತು ಪಕ್ಷಗಳಿಗೆ  ಯೋಜನೆ ಎಷ್ಟು ಹಣ ತಂದುಕೊಡುತ್ತದೆ ಎಂಬುದು ಮುಖ್ಯವಾಗಿದೆ. ಇಂತಹ ಅವಿವೇಕದ ನಿರ್ಧಾರಗಳಿಂದ ಜಗತ್ತಿನ ಜೀವರಾಶಿಗಳಿಗೆ, ಪರಿಸರಕ್ಕೆ, ಹಳ್ಳಿಗಳಿಗೆ, ಅಲ್ಲಿನ ಜೀವಗಳಿಗೆ ಆಗುತ್ತಿರುವ ತೊಂದರೆಗಳಿಗೆ ಕಿವಿಗೊಡುವ ಮನುಷ್ಯರನ್ನು ನಾವೀಗ ಈ ಜಗತ್ತಿನಲ್ಲಿ ಹುಡುಕಬೇಕಾದ ಸ್ಥಿತಿ. ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ಮಹಾನಗರಗಳನ್ನು ಜೋಡಿಸುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ದೇಶಾದ್ಯಂತ ನೆಲಸಮವಾದ ಮರಗಳಿಗೆ, ಆ ಮರಗಳನ್ನು ಆಶ್ರಯಿಸಿದ್ದ ಪ್ರಾಣಿ ಪಕ್ಷಿ ಸಂಕುಲಗಳ ದುರಂತದ ಕಥೆಗೆ ಲೆಕ್ಕವಿಟ್ಟವವರಿಲ್ಲ. ಇಂತಹ  ಪ್ರಶ್ನೆಯೇ ಈಗ ಮೂರ್ಖತನದ ಅಥವಾ ಸಿನಿಕತನದ ವರ್ತನೆಯೆನೋ ಎಂಬಂತಾಗಿದೆ.

ನಾನು ಪದೇ ಪದೇ ಓಡಾಡುತ್ತಿರುವ ಬಂಗಳೂರು- ಮುಂಬೈನ ರಾಷ್ಟ್ರೀಯ ಹೆದ್ದಾರಿ ನಂಬರ್ ನಾಲ್ಕರಲ್ಲಿ ಮರಗಳಿಲ್ಲದ ರಸ್ತೆಯಲ್ಲಿ ಸಂಚರಿಸುವಾಗ ನರಕದ ರಸ್ತೆಯಲ್ಲಿ ಅಥವಾ ಸ್ಮಶಾನದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಹೋಗುತ್ತಿದ್ದೇನೆ ಎಂಬ ಅನುಭವವಾಗುತ್ತದೆ. ಗಂಟೆಗಟ್ಟಲೆ ಗೆಳೆಯರ ಕಾರಿನಲ್ಲಿ ಪ್ರಯಾಣಿಸುವಾಗ ಹುಬ್ಬಳ್ಳಿಯಿಂದ ಬೆಂಗಳೂರಿನುದ್ದಕ್ಕೂ, ಇಲ್ಲವೆ, ಧಾರವಾಡದಿಂದ ಮುಂಬೈನಗರದುದ್ದಕ್ಕೂ   ನೆರಳಿನಲ್ಲಿ ವಿಶ್ರಮಿಸಿಕೊಳ್ಳಲು ಮರಗಳಿಲ್ಲ, ನಾವು ಹೆದ್ದಾರಿಯಲ್ಲಿರುವ ಡಾಬಾಗಳನ್ನು ಆಶ್ರಯಿಸಬೇಕು. ಇದು, ರಾಷ್ಟ್ರೀಯ ಹೆದ್ದಾರಿ ನಂಬರ್ ನಾಲ್ಕರ ಕಥೆ ಮಾತ್ರವಲ್ಲ. ದೇಶದ ಎಲ್ಲಾ ಹೆದ್ದಾರಿಗಳ ಕಥೆಯೂ ಹೌದು. ಹೆದ್ದಾರಿಗಳ ನಡುವೆ ಇದ್ದ ಹಳ್ಳಿಗಳ ಹೃದಯವನ್ನು ಸೀಳಿ ಎರಡು ಭಾಗ ಮಾಡುವುದರ ಜೊತೆಗೆ ಹಳ್ಳಿಯ ಜನರ ಮುಕ್ತ ಓಡಾಟಕ್ಕೆ ನಿರ್ಭಂಧ ಹೇರುವ ತಡೆಗೋಡೆ ನಿರ್ಮಿಸಿಸಲಾಗಿದೆ. ರಸ್ತೆಯ ಈ ಬದಿಯ ಮನೆಯಿಂದ ಆ ಬದಿಯ ಮನೆಗೆ ತೆರಳಲು ಕಿಲೋಮೀಟರ್ ಸುತ್ತಿ ಬಳಸಿ ಬರಬೇಕಾದ ಸ್ಥಿತಿ. ಹಾಗಾಗಿ ರಸ್ತೆಯಂಚಿನ ಗ್ರಾಮಗಳ ಚಹರೆಗಳೆಲ್ಲಾ ಬದಲಾಗಿದ್ದು, ಅಸ್ತಿತ್ವ ಕಳೆದುಕೊಂಡ ಹಳ್ಳಿಗಳು ಈಗ ಬರೀ ಅಸ್ತಿಪಂಜರಗಳಾಗಿವೆ.
1998 ರಲ್ಲಿ ಎನ್.ಡಿ.ಎ. ಮೈತ್ರಿಕೂಟದ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಮಹಾನಗರಗಳಾದ ದೆಹಲಿ-ಕೊಲ್ಕತ್ತ, ಮುಂಬೈ-ಚೆನ್ನೈ ನಗರಗಳನ್ನು ಹೆದ್ದಾರಿ ಮೂಲಕ ಬೆಸೆಯಲು ಆರಂಭಿಸಿದ ಸುವರ್ಣ ಚತುಷ್ಪಥ ರಸ್ತೆಯ ಈ ಯೋಜನೆ  ವಿನ್ಯಾಸ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಯಿತು. 30 ಸಾವಿರ ಕೋಟಿಯ ನಾಲ್ಕು ರಸ್ತೆಗಳ 70 ಸಾವಿರದ 934 ಕಿಲೋಮೀಟರ್ ರಸ್ತೆಯನ್ನು ದೇಶಾದ್ಯಂತ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಯಿತು. ಎರಡನೇ ಹಂತದಲ್ಲಿ ಉತ್ತರದ ಶ್ರೀನಗರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ, ಮತ್ತು ಪೂರ್ವದ ಅರುಣಾಚಲ ಪ್ರದೇಶದಿಂದ ಪಶ್ಚಿಮದ ಗುಜರಾತಿನ ಪೋರ್ ಬಂದರ್ ವರೆಗೆ ಹೆದ್ದಾರಿ ರಸ್ತೆಗಳನ್ನು ಬೆಸೆಯಲು ಯೋಜನೆ ಕೈಗೊಳ್ಳಲಾಯಿತು. ಈ ಯೋಜನೆಯ ರಸ್ತೆ ಅಗಲೀಕರಣದ ನೆಪದಲ್ಲಿ ದೇಶಾದ್ಯಂತ ನೆಲಕ್ಕುರುಳಿದ ಶತಮಾನಗಳ ಇತಿಹಸವಿದ್ದ ಮರಗಳ ಮಾರಣಹೋಮ ಅಭಿವೃದ್ಧಿಯ ಹೆಸರಿನಲ್ಲಿ ನಡೆದು ಹೋಯಿತು. ರಸ್ತೆಯಂಚಿನಲ್ಲಿದ್ದ ಮರಗಳು ಕೇವಲ ನೆರಳು ನೀಡುವ ಮರಗಳಷ್ಟೇ ಆಗಿರಲಿಲ್ಲ, ಅವುಗಳಿಂದ ಪರಿಸರಕ್ಕೆ ಆಗುತ್ತಿದ್ದ ಲಾಭ, ಮರಗಳಲ್ಲಿ ಗೂಡು ಕಟ್ಟಿ ಆಶ್ರಯಿಸಿದ್ದ ಪಕ್ಷಿ ಸಂಕುಲ, ಹಣ್ಣುಗಳಿಗಾಗಿ ಮರಗಳತ್ತ ಬರುತ್ತಿದ್ದ ಪ್ರಾಣಿ ಪಕ್ಷಿಗಳು ( ಮಂಗ, ಅಳಿಲು, ಗಿಣಿ, ಕೊಕ್ಕರೆ, ಹದ್ದು, ಮೈನಾ, ಮುಂತಾದ ಜೀವ ಸಂಕುಲಗಳು) ಇವುಗಳ ಕುರಿತು ಯಾರೂ ಯೋಚಿಸಲಿಲ್ಲ. ಇಂತಹ ರಸ್ತೆಗಳ ನಿರ್ಮಾಣದಿಂದ ವಾಹನಗಳ ಮುಖಾ ಮುಖಿ ಡಿಕ್ಕಿಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳು ತಪ್ಪಿದವು ಆದರೆ ಇತರೆ ಅಪಘಾತಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಸುಗಮ ಸಂಚಾರದಿಂದ  ಸಮಯ ಉಳಿತಾಯ ಎನ್ನುವುದು ಈಗ  ಕೇವಲ ಭ್ರಮೆ.ಯಾಗಿದೆ.
ಈ ಮೊದಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಒಂಬತ್ತು ಗಂಟೆಯ ಪ್ರಯಾಣವಾಗಿತ್ತು. (ಬಸ್ ನಲ್ಲಿ ಹತ್ತು ಗಂಟೆ) ಈಗ ಸುಮಾರು ಏಳು ಗಂಟೆ ಅವಧಿಗೆ ಇಳಿದಿದೆ.  ನೆಲಮಂಗಲ ದಿಂದ ಮುವತ್ತು  ಕಿಲೋಮೀಟರ್ ದೂರದ ಬೆಂಗಳೂರು ಹೃದಯ ಭಾಗದ ಮೆಜಸ್ಷಿಕ್ ತಲುಪಲು ಎರಡು ಗಂಟೆ ಅವಧಿ ಬೇಕು. ಐದು ಗಂಟೆಯಲ್ಲಿ 395 ಕಿ.ಮಿ. ಚಲಿಸುವ ಪ್ರಯಾಣಿಕ,ನಂತರ ಎರಡು ಗಂಟೆಯಲ್ಲಿ ಕೇವಲ 30 ಕಿ.ಮಿ. ಚಲಿಸುವ ಒತ್ತಡಕ್ಕೆ ಸಿಲುಕುತ್ತಾನೆ. ಸಮಯದ ಉಳಿತಾಯದಲ್ಲಿ ಸಿಕ್ಕ ಲಾಭಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬ ಸಂಗತಿ ನಮ್ಮ ಅರಿವಿಗೆ ಬರುವುದಿಲ್ಲ. ಏಕೆಂದರೆ, ಇದರ ನಡುವೆ ಹೆದ್ದಾರಿ ಶುಲ್ಕ ಎಂಬ ಮೈ ಚರ್ಮ ಸುಲಿಯುವ ಪದ್ಧತಿಯೊಂದು ಜಾರಿಗೆ ಬಂದಿದೆ. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕನಿಷ್ಟ 10 ಕಡೆ ನಾವು ಒಂದುಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು. ಡೀಸಲ್ ಗೆ ಒಂದೂವರೆ ಸಾವಿರವಾದರೆ, ರಸ್ತೆ ಶುಲ್ಕಕ್ಕೆ ಒಂದು ಸಾವಿರ  ಇದು ಆಳುವ ಸರ್ಕಾರಗಳು ನಮ್ಮ ಅರಿವಿಗೆ ಬಾರದಂತೆ ನಮ್ಮನ್ನು ಸುಲಿಯುವ ಬಗೆ.



ದೆಹಲಿ- ಕೊಲ್ಕತ್ತ ನಡುವಿನ 1465 ಕಿ.ಮಿ. ದೂರದ ಗ್ರಾಂಡ್ ಟ್ರಕ್ ರೋಡ್ (ಜಿ.ಟಿ.ರೋಡ್) ಎಂಬ ಇತಿಹಾಸ ಪ್ರಸಿದ್ಧ ರಸ್ತೆಯಿದೆ. 1772ರಲ್ಲಿ ಬ್ರಿಟೀಷರ ಈಸ್ಟ್ ಇಂಡಿಯ ಕಂಪನಿಗೆ ನೆರವಾಗಲು, ಕೊಲ್ಕತ್ತದಿಂದ ದೆಹಲಿವರೆಗೆ ಮೊಗಲ್ ದೊರೆ ಶೇರ್ ಷಾ ನಿರ್ಮಾಣ ಮಾಡಿದ ಈ ರಸ್ತೆ, ಕೊಲ್ಕತ್ತ- ಬಾರ್ತಿ- ವಾರಣಾಸಿ, ಅಲಹಾಬಾದ್ ಕಾನ್ಪುರ ಮಥುರ-ಆಗ್ರಾ. ಹರ್ಯಾಣ  ಮೂಲಕ ದೆಹಲಿಯನ್ನು ಕೂಡುತ್ತದೆ. ರಾಷ್ಟ್ರೀಯ ಹೆದ್ದಾರಿ ನಂಬರ 2 ಹೆಸರಿನ ಈ ರಸ್ತೆಯ ಅಗಲೀಕರಣಕ್ಕಾಗಿ ಸುಮಾರು 18 ಲಕ್ಷ ಮರಗಳನ್ನು ನೆಲಕ್ಕುರುಳಿಸಲಾಯಿತೆಂದು ಅಂದಾಜಿಸಲಾಗಿದೆ. ಬಿಹಾರದ ಹಜಾರಿ ಬಾಗ್ ಪಟ್ಟಣದಿಂದ ರಾಂಚಿ ನಗರದವರೆಗೆ 110 ಕಿಲೋಮೀಟರ್ ರಸ್ತೆ ಅಗಲೀಕರಣಕ್ಕೆ ಜಾರ್ಕಾಂಡ್ ನ ಅರಣ್ಯ ಪ್ರದೇಶದಲ್ಲಿ 56 ಸಾವಿರ ಬೃಹತ್ ಮರಗಳನ್ನು ತೆರವುಗೊಳಿಸಲಾಯಿತು.
ಮೇಘಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 44 ರ ರಸ್ತೆ ಅಗಲೀಕರಣಕ್ಕೆ ಅಭಯಾರಣ್ಯದಲ್ಲಿ  ಕೇವಲ ಹತ್ತು ಕಿಲೋ ಮೀಟರ್ ದೂರಕ್ಕೆ 4800 ಮರಗಳನ್ನು ಕಡಿಯಲಾಗಿದೆ.  ಅತಿ ಕಡಿಮೆ ಮರಗಳಿರುವ ಗುಜರಾತ್ ರಾಜ್ಯದ ಜುನಾಗಡ್ ಜಿಲ್ಲೆಯಲ್ಲಿ ಜತೆಪುರ್ ಮತ್ತು ರಾಜ್ ಕೋಟ್ ನಡುವಿನ 100 ಕಿಲೋ ಮೀಟರ್ ಉದ್ದದ ರಸ್ತೆಯ ಅಗಲೀಕರಣಕ್ಕೆ 3ಸಾವಿರ ಮರಗಳು ಆಹುತಿಯಾದವು.

ಇತ್ತಿಚೇಗೆ ಸರ್ಕಾರಗಳು ಮತ್ತು ರಸ್ತೆ ನಿರ್ಮಾಣ ಕಂಪನಿಗಳ ನಡುವೆ ಅಪವಿತ್ರ ಮೈತ್ರಿ ಏರ್ಪಡುತ್ತಿದ್ದು, “ ನಿರ್ಮಿಸು, ನಿರ್ವಹಿಸು, ಹಸ್ತಾಂತರಿಸು ಎಂಬ ಯೋಜನೆ ಜಾರಿಗೆ ಬಂದಿದೆ.( B.T.O.)  ಎಷ್ಟೋ ಕಂಪನಿಗಳು ನಿಗಧಿತ ಅವಧಿ ಮುಗಿದಿದ್ದರೂ ಸರ್ಕಾರಕ್ಕೆ ರಸ್ತೆ ಅಥವಾ ಸೇತುವೆಗಳನ್ನು ಒಪ್ಪಿಸದೆ. ಶುಲ್ಕ ವಸೂಲಿ ಮಾಡುತ್ತಿವೆ. ಈ ಅಕ್ರಮ ವಸೂಲಾತಿಯಲ್ಲಿ ಕಂಪನಿ ಮತ್ತು ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳಿಗೆ ಸಮ ಪಾಲಿದೆ. ಈ ಕಾರಣಕ್ಕಾಗಿ ದೇಶದ ಎಲ್ಲಾ ರಾಜಕೀಯ ಪಕ್ಷಗಳು( ಎಡ ರಂಗದ ಪಕ್ಷ ಗಳು ಹೊರತು ಪಡಿಸಿ) ಮಾಹಿತಿ ಹಕ್ಕು ಕಾಯ್ದೆ ಅಡಿಯಿಂದ ತಮ್ಮ ತಮ್ಮ ರಾಜಕೀಯ ಪಕ್ಷಗಳನ್ನು ಕಾಪಾಡಿಕೊಳ್ಲಲು ಹೊಸ ಮಸೂದೆಗೆ ಮುಂದಾಗಿವೆ.  ಯು.ಪಿ.ಎ. ಮೈತ್ರಿಕೂಟದ ಕಾಂಗ್ರೇಸ್ ನೇತೃತ್ವದ ಕೇಂದ್ರ ಸರ್ಕಾರ ಆತ್ಮ ಸಾಕ್ಷಿ,ಯ ಪ್ರಜ್ಙೆ ಇಲ್ಲದಂತೆ ಈದಿನ ಪತ್ರಿಗಳ ಮುಖಪುಟದಲ್ಲಿ 67 ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಜಾಹಿರಾತು ಬಿಡುಗಡೆ ಮಾಡಿದೆ. ಅದರಲ್ಲಿರುವ ಘೋಷಣಾ ವಾಖ್ಯವೆಂದರೆ, “ ನಮ್ಮ ಪಾಲಿನ ಅಧಿಕಾರವನ್ನು ಪಡೆದುಕೊಳ್ಳುವುದೇ ಹಕ್ಕುಗಳಲೆಲ್ಲಾ ಮೂಲಭೂತ ಹಕ್ಕಾಗಿದೆ” ಪಾರದರ್ಶಕತೆಯೇ ಇಲ್ಲದ ಇಂತಹ ಪಕ್ಷಗಳಿಂದ ಅಥವಾ ಸರ್ಕಾರಗಳಿಂದ ನಾವು ಏನು ನಿರೀಕ್ಷಿಸಲು ಸಾಧ್ಯ?  ಇದನ್ನು  ಪ್ರಜಾಪ್ರಭುತ್ವದ ವ್ಯಂಗ್ಯ ಎಂದೇ ನಾವು ಕರೆಯಬೇಕಿದೆ.

ಭಾನುವಾರ, ಆಗಸ್ಟ್ 11, 2013

ಎಮು ಪಕ್ಷಿಗಳ ಸಾಕಣೆಯಲ್ಲಿ ಹೈರಾಣಾದವರು

ದೇಶದ ಗ್ರಾಮೀಣ ಭಾಗದ ರೈತರನ್ನು ಮತ್ತು ಮುಗ್ಧಜನರನ್ನು ವಂಚಿಸಲು ಸಮಾಜದಲ್ಲಿ ಹೊಸ ಹೊಸ ಆಯುಧಗಳು ಉತ್ಪತ್ತಿಯಾಗುತ್ತಲೇ ಇವೆ. ಈ ಆಯುಧಗಳು ಎಷ್ಟು ಸೂಕ್ಷ್ಮವಾಗಿವೆ ಎಂದರೆ, ಗಾಯದ ಗುರುತಾಗಲಿ, ನೋವಾಗಲಿ, ಸೋರುವ ನೆತ್ತರಿನ ಗುರುತಾಗಲಿ ಸಿಗದಂತೆ ನಮ್ಮನ್ನು ಸದ್ದಿಲ್ಲದೆ, ಸುದ್ಧಿಮಾಡದೆ,  ಕೊಲ್ಲಬಲ್ಲವು. ಇವುಗಳ ಜೊತೆಗೆ ಮನುಷ್ಯರ ಆಸೆ, ಆಕಾಂಕ್ಷೆಯನ್ನು ಮತ್ತು ಬಡತನವನ್ನು ಬಂಡವಾಳ ಮಾಡಿಕೊಂಡು ವಂಚಿಸುವ ನೂತನ ಜಗತ್ತೊಂದು ಪ್ರತಿ ವರ್ಷ ನಮ್ಮೆದುರು ಹೊಸ ರೂಪ ತಾಳುತ್ತಿದೆ. ಅಂತಹ ರೂಪಗಳಲ್ಲಿ ಈಗ ಎಮು ಎಂಬ ಪಕ್ಷಿಗಳ ಸಾಕಾಣಿಕೆಯ ಕರ್ಮಕಾಂಡವೂ ಒಂದು.
ಕಳೆದ ಹತ್ತು ವರ್ಷಗಳ ಹಿಂದೆ ಕರ್ನಾಟಕದ ರೈತರು ಸೆರಿದಂತೆ ಕೇರಳ ಮತ್ತು ತಮಿಳುನಾಡು ರೈತರು ವೆನಿಲಾ ಬೆಳೆ ತೆಗೆದು ಕೈ ಸುಟ್ಟಿಕೊಂಡರು. ಈ ವಂಚನೆಯ ಜಗತ್ತು ಮರೆಯಾಗುವ ಮುನ್ನವೇ ಹೊಸ ಜಗತ್ತು ನಮ್ಮೆದುರು ಸೃಷ್ಟಿಯಾಗಿದೆ. ವರ್ತಮಾನದ ಬದುಕಿನಲ್ಲಿ ಗಾಳಿ ಸುದ್ಧಿಯನ್ನು ನಂಬುವ ಜನರ ತಲೆಗೆ ಟೋಪಿ ಹಾಕುವ ಕಾಯಕ ಕಷ್ಟವೇನಲ್ಲ. ಈಗ ಇದೇ ರೈತರು ದಕ್ಷಿಣ ಭಾರತದಲ್ಲಿ ಎಮು ಪಕ್ಷಿಗಳ ಸಾಕಾಣಿಕೆಯ ಕೇಂದ್ರ ಸ್ಥಾಪಿಸಿ ಬರೋಬ್ಬರಿ ಸುಮಾರು ಐದು ಸಾವಿರ ಕೋಟಿ ಹಣ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಇದೇ ಆಗಸ್ಟ್ ತಿಂಗಳಿನಲ್ಲಿ ನಾನು ಐದು ದಿನಗಳ ಕಾಲ ತಮಿಳುನಾಡು ಪ್ರವಾಸದಲ್ಲಿದ್ದೆ. ಮಹದೇಶ್ವರ ಬೆಟ್ಟದ ಮಾರ್ಗವಾಗಿ, ಮೆಟ್ಟೂರು, ಭವಾನಿ ನೋಡಿಕೊಂಡು, ಈರೋಡಿನಲ್ಲಿ ದ್ರಾವಿಡ ಚಳವಳಿಯ ಸಂಸ್ಥಾಪಕ ಪೆರಿಯಾರ್ ರಾಮಸ್ವಾಮಿಯವರ ಮನೆಗೆ ಬೇಟಿ ನೀಡಿ, ನಂತರ ಪಳನಿಯತ್ತ ಪ್ರಯಾಣಿಸುತ್ತಿದ್ದೆ. ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗ ಪ್ರತಿ ಹಳ್ಳಿ. ಪಟ್ಟಣಗಳಲ್ಲಿ ತಮ್ಮ ಮನೆಯ ಬದಿಯಲ್ಲಿ  ಬಿಸಿಲಿಗೆ ತೆಂಗಿನ ಗರಿಯ ಚಪ್ಪರ ಹಾಕಿ 10 ರಿಂದ 20 ಪಕ್ಷಿಗಳನ್ನು ಸಾಕುತ್ತಿರುವುದು ಕಂಡು ಬಂತು. ನನಗೆ ಆಸ್ಟ್ರೀಚ್ ಪಕ್ಷಿ ಮತ್ತು ಟರ್ಕಿ ಕೋಳಿಗಳ ಪರಿಚಯವಿತ್ತು. ಆದರೆ, ಇವುಗಳಿಗಿಂತ ಭಿನ್ನವಾಗಿ ಪಕ್ಷಿಗಳಿರುವುದನ್ನು ನೋಡಿ ಸಹಜ ವಾಗಿ ಕುತೂಹಲವುಂಟಾಗಿತ್ತು. ಪಳನಿಯಿಂದ ಮಧುರೈ ನಗರಕ್ಕೆ ಹೊರಟಾಗ ಮತ್ತೆ ಇದೇ ರೀತಿಯ ಪಕ್ಷಿಗಳನ್ನು ನೋಡಿ ತಮಿಳುನಾಡಿನಲ್ಲಾಗಿರುವ ಹೊಸ ಬದಲಾವಣೆಯನ್ನು ಅರಿಯುವ ಕುತೂಹಲ ಉಂಟಾಯಿತು. ಮಧುರೈ ನಗರದಲ್ಲಿ ನಾನು ಸಾಮಾನ್ಯವಾಗಿ ಉಳಿದುಕೊಳ್ಳುವ ಹೋಟೆಲ್ ಅಭಿಮಾನ್ ನ ಮೇನೇಜರ್ ಮಾಣಿಕ್ಯಂ ನನ್ನು ಕುತೂಹಲದಿಂದ ಈ ಬಗ್ಗೆ ವಿಚಾರಿಸಿದೆ. ಆತ ನಮ್ಮ ಉದಯ ಟಿ.ವಿ. ಮಾತೃಸಂಸ್ಥೆಯಾದ ಸನ್ ಟಿ.ವಿ.ಯ ಛಾನಲ್ ಗಳಿಗೆ ಮಧುರೈ ಜಿಲ್ಲೆಯ ವಿತರಕ ಹಾಗಾಗಿ ಆತನಿಗೆ ಅಲ್ಲಿನ ಗ್ರಾಮೀಣ ಪ್ರದೇಶದ ಅನುಭವ ದಟ್ಟವಾಗಿದೆ.. ನನ್ನ ಮಾತು ಕೇಳಿದೊಡನೆ ನಗತೊಡಗಿದ ಮಾಣಿಕ್ಯಂ ಹೇಳಿದ ಮಾತುಗಳು ಮರ್ಮಕ್ಕೆ ತಾಗುವಂತಿದ್ದವು. “ ಸಾರ್, ಚೈನ್ ಸಿಸ್ಟಂ ಯೋಜನೆಗಳು ಮತ್ತು ನಕಲಿ ಮಾಲುಗಳ ತಯಾರಿಕೆಯಲ್ಲಿ ತಮಿಳಿನ ಜನ ದೇಶಕ್ಕೆ ಪ್ರಸಿದ್ಧರು. ಆದರೆ,  ಈಗ ನೋಡಿ, ತಮಿಳರ ಹಣೆಗೆ ನೆರೆಯ  ಆಂದ್ರದ ಜನ ಎಮು ಪಕ್ಷಿಗಳ ನೆಪದಲ್ಲಿ ಉಂಡೆ ನಾಮ ಹಚ್ಚುತ್ತಿದ್ದ್ದಾರೆ” ಎಂದು ನಗಾಡಿದ. ಅವನ ಮಾತುಗಳಲ್ಲಿ ಯಾವುದೇ ಅತಿಶಯೋಕ್ತಿ ಇರಲಿಲ್ಲ.
ಆಸ್ಟ್ರೇಲಿಯಾ ಮೂಲದ ಎಮು ಪಕ್ಷಿ ನಮ್ಮ ಕೋಳಿಯ ಹಾಗೆ ಹಾರಲಾರದ ಪ್ರಾಣಿ. ಇದರ ಮಾಂಸದಲ್ಲಿ ಅತಿ ಕಡಿಮೆ ಕೊಬ್ಬಿನ ಅಂಶವಿರುವುದರಿಂದ ಆ ದೇಶದಲ್ಲಿ ಇದರ ಮಾಂಸಕ್ಕೆ ಅಪಾರವಾದ ಬೇಡಿಕೆಯಿದೆ. ಜೊತೆಗೆ ಇದರ ಚರ್ಮಕ್ಕೂ ಬೇಡಿಕೆಯಿದ್ದು, ಎಮು ಪಕ್ಷಿಯ ಮಾಂಸದ ಕೊಬ್ಬಿನ ಅಂಶದಿಂದ ತಯಾರಾದ ಎಣ್ಣೆಯನ್ನು ಸೌಂದರ್ಯ ಸಾಧನಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.
ಭಾರತಕ್ಕೆ 1996 ರಲ್ಲಿ ಆಂಧ್ರದ ಕಾಕಿನಾಡ ಜಿಲ್ಲೆಯ ಮೂಲಕ ಪ್ರಥಮವಾಗಿ ಎಮು ಪಕ್ಷಿ ಪರಿಚಯವಾಯಿತು. ಭಾರತದಲ್ಲಿ ದಿನೇ ದಿನ ಮಾಂಸಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು ಈ ಪಕ್ಷಿಗಳನ್ನು ಮಾಂಸದ ಉದ್ದೇಶಕ್ಕೆ, ಟರ್ಕಿ ಕೋಳಿಗಳ ರೀತಿಯಲ್ಲಿ ಅಥವಾ ಮೊಲಗಳ ಹಾಗೆ ಬೆಳಸುವುದರ ಮೂಲಕ. ಎಮು ಪಕ್ಷಿಗಳ ಮಾಂಸದ  ಬಗ್ಗೆ ಪ್ರಚಾರ ಮಾಡಿದ್ದರೆ ಯಾವುದೆ ಅನಾಹುತ ಸಂಭವಿಸುತ್ತಿರಲಿಲ್ಲ. ಆದರೆ ತಮಿಳುನಾಡು ಮತ್ತು ಆಂಧ್ರದಲ್ಲಿ ಸೃಷ್ಟಿಯಾದ ಅನೇಕ ಬೋಗಸ್ ಕಂಪನಿಗಳು, ಎಮು ಪಕ್ಷಿಗಳನ್ನು ಆಸ್ಟೇಲಿಯಾದಿಂದ ತಂದು ಪರಿಚಯಿಸುವ ಬದಲು, ಅವುಗಳ ಸಂತತಿಯನ್ನು ಅಭಿವೃದ್ದಿಪಡಿಸಲು  ಇಲ್ಲಿನ ರೈತರಿಗೆ ಆಮೀಷ ತೋರಿಸತೊಡಗಿದವು.
ರೈತರು, ಕಂಪನಿಗೆ ಒಂದೂವರೆ ಲಕ್ಷ ರೂಪಾಯಿ ಠೇವಣಿ ಇಟ್ಟು , ಮೂರು ಜೊತೆ ಎಮು ಪಕ್ಷಿಗಳನ್ನು ಸಾಕಿದರೆ, ತಿಂಗಳಿಗೆ ಆರು ಸಾವಿರ ಹಣ ಮತ್ತು ವರ್ಷಕ್ಕೆ ಇಪ್ಪತ್ತು ಸಾವಿರ ಬೋನಸ್ ನಿಡುವುದಾಗಿ ಕಂಪನಿಗಳು ಪ್ರಚಾರ ಮಾಡಿದವು. ಕಂಪನಿಗಳ ಪ್ರಚಾರಕ್ಕೆ ಜನ ಮುಗಿಬಿದ್ದರು. ಎಮು ಪಕ್ಷಿಗಳ ಮೊಟ್ಟೆಗಳನ್ನು ತಲಾ ಎಂಟನೂರುಗಳಿಗೆ ಕಂಪನಿಗಳು ಆರಂಭದಲ್ಲಿ ಕೊಳ್ಳತೊಡಗಿದವು. ಎರಡು ಮೂರು ವರ್ಷಗಳ ಅವಧಿಯ ನಂತರ  ಎಮು ಪಕ್ಷಿಗಳನ್ನು ಮತ್ತು ಮೊಟ್ಟೆಗಳನ್ನು ವಾಪಸ್ ಕೊಳ್ಳಲಾಗುವುದು ಹಾಗೂ ಠೇವಣಿ ಹಣ ಹಿಂತಿರುಗಿಸಲಾಗುವುದು ಎಂಬ ಕಂಪನಿಗಳ ಮಾತು ನಂಬಿದ ಜನ ಮುಗಿಬಿದ್ದು ಒಂದೂವರೆ ಲಕ್ಷದಿಂದ ಹತ್ತು ಲಕ್ಷದವರೆಗೆ ಬಂಡವಾಳ ಹೂಡಿ ಎಮು ಸಾಕಾಣಿಕೆಯಲ್ಲಿ ತೊಡಗಿದರು. ಮೊದಲು ತಮಿಳುನಾಡಿನ ಈರೋಡ್ ಜಿಲ್ಲೆಯ ಪೆರೆಂದುರೈ ಎಂಬ ಊರಿನಲ್ಲಿ ಸುಸಿ ಎಮು ಪಾರ್ಮ್ ಎಂಬ ಬೋಗಸ್ ಕಂಪನಿಯಿಂದ ಆರಂಭವಾದ ಈ ಹುಚ್ಚು ಸಾಂಕ್ರಮಿಕ ರೋಗದಂತೆ ಎಲ್ಲೆಡೆ ಹಬ್ಬಿತು. ಹೀಗೆ ತಮಿಳುನಾಡು, ಆಂಧ್ರ, ಕೇರಳ, ಕರ್ನಾಟಕದಲ್ಲಿ ಸುಮಾರು 20 ಸಾವಿರ ಕುಟುಂಬಗಳು ಎಮು ಸಾಕಾಣಿಕೆಯಲ್ಲಿ ಬಂಡವಾಳ ತೊಡಗಿಸಿ ಇದೀಗ  ಅತಂತ್ರವಾಗಿವೆ.
ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ಜಿಲ್ಲೆಗಳಿಗೆ ನೆರೆಯ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಿಂದ ಎಮು ಸಾಕಾಣಿಕೆ ಪರಿಚಯವಾದರೆ, ಉತ್ತರ ಕರ್ನಾಟಕದ ಬಳ್ಳಾರಿ, ಕೊಪ್ಪಳ, ಹಾವೇರಿ ಮತ್ತು ಬೆಳಗಾವಿ ಮುಂತಾದ ಜಿಲ್ಲೆಗಳಿಗೆ ಆಂಧ್ರ ಕಂಪನಿಗಳಿಂದ ಎಮು ಸಾಕಾಣಿಕೆಯ ಪ್ರವೃತ್ತಿ  ಹರಡಿದೆ. ಈಗ ಮೊಟ್ಟೆಗಳು ಮಾರಾಟವಾಗತ್ತಿಲ್ಲ. ಎಮು ಪಕ್ಷಿಗಳಿಗೆ ಬೇಡಿಕೆಯಿಲ್ಲ, ಕಂಪನಿಗಳು ತಮ್ಮ ನಾಮ ಫಲಕಗಳನ್ನು ಮಗುಚಿಹಾಕಿ ರಾತ್ರೋ ರಾತ್ರಿ ಕಾಣೆಯಾಗಿವೆ. ಈಗ ರೈತರು ತಾವು ಸಾಕಿರುವ ನೂರಾರು ಎಮು ಪಕ್ಷಿಗಳಿಗೆ ಆಹಾರ ಒದಗಿಸಲಾಗಿದೆ ಹೈರಾಣಾಗಿದ್ದಾರೆ.


ಎಮು ಪಕ್ಷಿಗಳ ಮಾಂಸ ಬಳಕೆ ಕುರಿತಂತೆ ವ್ಯವಸ್ತಿತ ಪ್ರಚಾರ ಮಾಡಿದ್ದರೆ, ಇಂತಹ ದುರಂತ ಸಂಭವಿಸುತ್ತಿರಲಿಲ್ಲ ಎಂದು ಚೆನ್ನೈ ನಗರದ ಮದ್ರಾಸ್ ವಿ.ವಿ.ಯ ಕುಕ್ಕುಟ ವಿಜ್ಙಾನ ವಿಭಾಗದ ಮುಖ್ಯಸ್ಥರಾದ ಡಾ.ಎನ್. ರಾಮಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.  ಎಮು ಪಕ್ಷಿಗಳ ಅವೈ ಜ್ಙಾನಿಕ ಸಾಕಾಣಿಕೆಯಿಂದ ದಕ್ಷಿಣ ಭಾರತದಲ್ಲಿ ಸುಮಾರು ಐದು ಸಾವಿರ ಕೋಟಿ ಹಣವನ್ನು ಗ್ರಾಮೀಣ ಭಾಗದ ಮುಗ್ಧ ಜನರು ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಬುಧವಾರ, ಆಗಸ್ಟ್ 7, 2013

ಕಾಣೆಯಾದ ಗುಬ್ಬಚ್ಚಿಗಳ ನೆಪದಲ್ಲಿ


£ÁªÀÅ §zÀÄPÀÄwÛgÀĪÀ ªÀvÀðªÀiÁ£ÀzÀ F dUÀvÀÄÛ  ¥ÀqÉzÀÄPÉÆArgÀĪÀ ªÉÃUÀªÀ£ÀÄß UÀt£ÉUÉ vÉUÉzÀÄPÉÆ¼Àî¯ÁgÀzÀ C¸ÀºÁAiÀÄPÀvɬÄAzÀ NqÀÄwÛgÀĪÀ  £ÁªÀÅ ¸ÀºÀ EzÀgÉÆA¢UÉ zÁ¥ÀÄUÁ®Ä ºÁPÀÄwÛzÉÝêÉ, £ÀªÀÄä F NlPÉÌ UÀÄj, CxÀªÁ ¸ÁxÀðPÀªÁUÀĪÀ K£ÁzÀgÀÆ CA±ÀUÀ½ªÉAiÉÄ? AiÀiÁjUÀÆ UÉÆwÛ®è. NqÀĪÀ ¨sÀgÀzÀ°è £ÁªÀÅ PÀ¼ÉzÀÄPÉÆArzÀÄÝ JµÀÄÖ? UÀ½¹zÀÄÝ JµÀÄÖ? AiÀiÁgÀÆ ¯ÉPÀÌ«qÀ°®è, J®èQÌAvÀ ºÉZÁÑV  ¯ÉPÀÌ«qÀĪÀ UÉÆÃdÄ AiÀiÁjUÀÆ ¨ÉÃPÁV®è. J®ègÀAvÉ £ÁªÀÅ §zÀÄPÀ¨ÉÃPÀÄ EzÀÄ £ÀªÀÄä DzsÀĤPÀ §zÀÄQ£À ªÀÄÆ® ªÀÄAvÀæ.
 PÉêÀ® JgÀqÀÄ zÀ±ÀPÀUÀ¼À CªÀ¢üAiÀİè Erà dUÀvÀÄÛ £ÁªÀÅ £ÀA§¯ÁUÀzÀ ¹ÜwAiÀÄ°è §zÀ¯ÁªÀuÉUÉÆArvÀÄ. £ÀUÀgÀ ªÀÄvÀÄÛ UÁæªÀÄUÀ½UÉ EzÀÝ ªÉvÁå¸ÀUÀ¼À UÀrgÉÃSÉ ºÉüÀ ºÉ¸Àj®èzÀAvÉ C½¹ºÉÆÃ¬ÄvÀÄ. £ÀªÀÄä §zÀÄQ£À PÀæªÀÄ ªÀÄvÀÄÛ AiÉÆÃa¸ÀĪÀ «zsÁ£ÀUÀ¼ÀÄ ¥À®èlUÉÆ¼ÀÄîwÛzÀÝAvÉ £ÀªÀÄä DºÁgÀ, GqÀÄ¥ÀÄ, ¸ÁA¸ÀÌøwPÀ ZÀºÀgÉUÀ¼À £ÀqÀÄªÉ EzÀÝ ©£ÀßvÉUÀ¼ÀÄ ¸ÀºÀ C½¹ºÉÆÃzÀªÀÅ.EªÀÅUÀ¼À ¥ÀjuÁªÀÄ¢AzÁV  £ÁªÀÅ F dUÀwÛ£À°è PÀ¼ÉzÀÄPÉÆAqÀ C£ÉÃPÀ CA±ÀUÀ¼À£ÀÄß £É£À¦¹PÉÆ¼Àî¯ÁUÀzÀµÀÄÖ «¸ÀäøwUÉ  zÀÆqÀ®àmÉÖªÀÅ. £ÀªÀÄä F CeÁУÀªÀ£ÀÄß UÀt£ÉUÉ vÉUÉzÀÄPÉÆ¼Àî¯ÁUÀzÉ, £ÁUÀjÃPÀvÉAiÀÄ ªÀÄÄRªÁqÀ vÉÆlÄÖ ¸ÀºÀdªÉA§AvÉ §zÀÄPÀĪÀÅzÀ£ÀÆß PÀ°vɪÀÅ. £ÀªÀÄVÃUÀ PÀÈvÀPÀªÁV C¼ÀĪÀÅzÀÄ, £ÀUÀĪÀÅzÀÄ, ªÀiÁvÀ£ÁqÀĪÀÅzÀÄ, §zÀÄPÀĪÀÅzÀÄ J®èªÀÇ PÀgÀUÀvÀªÁVÀzÉ. £ÀªÀÄä PÀtÂÚÃjUÉ VèøÀj£ï ¨ÉÃPÁV®è, £ÀUÀÄ«UÉ PÁgÀt ºÀÄqÀÄPÀ¨ÉÃQ®è,  EAvÀºÀ £ÀªÀÄä PÀÈvÀPÀ ªÀÄvÀÄÛ PÀ¥Àl §zÀÄQ¤AzÁV £ÁªÀÅ F dUÀwÛ£À°è PÀ¼ÉzÀÄPÉÆAqÀ fêÀeÁ®UÀ¼À ¸ÀASÉå ªÀiÁvÀæ CUÀtÂvÀªÁzÀÄzÀÄ. CAvÀºÀªÀÅUÀ¼À ¥ÉÊQ, FªÀgÉUÉ £ÀªÀÄä MqÀ£ÁrAiÀiÁVzÀÝ ¥ÀÄlÖ fêÀzÀ ¥ÀQë  UÀħâaÑ PÀÆqÀ MAzÀÄ.

ªÀÄ£ÀĵÀå£À ºÀÄlÄÖ ªÀÄvÀÄÛ ¨É¼ÀªÀtÂUÉAiÀÄ PÁ®¢AzÀ CªÀ£À MqÀ£ÁrAiÀiÁV, CªÀ£ÀÄ ªÁ¸À ªÀiÁrzÀ eÁUÀzÀ°è vÁ£ÀÆ ªÁ¸À ªÀiÁr. CªÀ£ÀÄ ©¸ÁrzÀ PÁ¼ÀÄ PÀrØ, ªÀģɬÄAzÀ vÉUÉzÀÄ ºÁQzÀ ºÀļÀÄ ºÀÄ¥ÀàmÉUÀ¼À£ÀÄß wAzÀÄ §zÀÄQzÀÝ UÀħâaÑUÀ¼ÀÄ £ÀªÀÄä Cj«UÉ ¨ÁgÀzÀAvÉ PÀtägÉAiÀiÁUÀÄwÛªÉ. EzÀÄ F zÉñÀzÀ CxÀªÁ F £Ár£À PÀxÉAiÀÄ®è, Erà dUÀvÀÄÛ UÀħâaÑUÀ¼À PÀtägÉAiÉÆA¢UÉ vÀ®ètUÉÆArzÉ. eÉÆvÉUÉ «±ÀézÀ J¯ÉèqÉ UÀA©üÃgÀ CzsÀåAiÀÄ£ÀUÀ¼ÀÄ DgÀA¨sÀUÉÆArªÉ. EAUÉèAr£À “ EAr¥ÉAqÉAmï”  ¥ÀwæPÉ 5 ®PÀë ¥ËAqï ºÀtªÀ£ÀÄß UÀħâaÑUÀ¼À  CzsÀåAiÀÄ£ÀPÁÌV «ÄøÀ°nÖzÉ. ¨sÁgÀvÀzÀ°è ªÀÄÄA¨ÉÊ£À ‘ ¨ÁA¨É £ÁåZÀÄgÀ¯ï »¸ÀÖj ¸ÉƸÉÊn” ¸ÀA¸ÉÜ PÉÃAzÀæ ¸ÀPÁðgÀzÀ £ÉgÀ«£ÉÆA¢UÉ “ £ÁUÀjÃPÀ UÀħâaÑ AiÉÆÃd£É” (Citizen Sparrow Project)  JA§ C©üAiÀiÁ£ÀªÉÇAzÀ£ÀÄß DgÀA©ü¹zÉ. FUÁUÀ¯Éà ¨sÁgÀvÀzÀ 6019 ¸ÀܼÀUÀ½AzÀ 4701 ªÀÄA¢ vÁªÀÅ §zÀÄQgÀĪÀ ¸ÀܼÀUÀ¼À°è UÀħâaÑUÀ¼À §UÉÎ CzsÀåAiÀÄ£À ªÀiÁr, 7461 ªÀgÀ¢UÀ¼À£ÀÄß ¨ÁA¨É £ÁåZÀÄZÀgÀ¯ï »¸ÀÖj ¸ÀA¸ÉÜUÉ PÀ½¹PÉÆnÖzÁÝgÉ. eÁUÀwPÀ ªÀÄlÖzÀ°è UÀħâaÑUÀ¼ÀÄ PÀtägÉAiÀiÁUÀÄwÛgÀĪÀ PÀÄjvÀÄ, ¤RgÀ PÁgÀtUÀ¼À£ÀÄß UÀÄgÀÄw¸À®Ä ¥ÀæAiÀÄvÀßUÀ¼ÀÄ ªÀÄÄAzÀĪÀj¢ªÉÉ, FUÁUÀ¯Éà PÉ®ªÀÅ CA±ÀUÀ¼À£ÀÄß ¥ÀvÉÛ ªÀiÁqÀ¯ÁVzÉ.
UÀħâaÑUÀ¼ÀÄ PÁuÉAiÀiÁUÀÄwÛgÀĪÀ PÀÄjvÀÄ £ÀqɹzÀ ¸ÀA±ÉÆÃzsÀ£ÉAiÀİè F PɼÀV£À CA±ÀUÀ¼À£ÀÄß UÀÄgÀÄw¸À¯ÁVzÉ.

MAzÀÄ- £ÀUÀjÃPÀgÀt¢AzÁV £ÀªÀÄä ªÀÄ£ÉAiÀÄ «£Áå¸ÀUÀ¼ÀÄ §zÀ¯ÁªÀuÉUÉÆAqÀªÀÅ. £ÀªÀÄä ªÀÄ£ÉAiÀÄ ªÀiÁqÀÄUÀ¼À°è UÀÆqÀÄ PÀnÖ ªÁ¹¸ÀÄwÛzÀÝ UÀħâaÑUÀ½UÉ eÁUÀ«®èzÀAvÁ¬ÄvÀÄ.

JgÀqÀÄ- PÁ¼ÀÄ, PÀrØ ªÀÄvÀÄÛ DºÁgÀzÀ PÉÆgÀvɬÄAzÁV UÀħâaÑUÀ¼À ¸ÀAvÁ£À QëÃt¸ÀvÉÆqÀVvÀÄ. F ªÉÆzÀ®Ä CAUÀr¬ÄAzÀ vÀAzÀ DºÁgÀ zsÁ£ÀåUÀ¼À£ÀÄß ªÀÄ£ÉAiÀÄ°è ¸ÀA¸ÀÌj¸ÀĪÀ ¥ÀzÀÝw¬ÄvÀÄÛ. ¸ÀA¸ÀÌgÀuÉAiÀİè G½zÀ PÁ¼ÀÄUÀ¼À£ÀÄß UÀħâaÑUÀ¼ÀÄ vÀªÀÄä ªÀÄjUÀ½UÉ Gt¸ÀÄwÛzÀݪÀÅ. EzÀ®èzÉ, ªÀÄ£ÉAiÀİèzÀÝ fgÀ¯É, £ÉÆt ªÀÄÄAvÁzÀªÀÅUÀ½UÉ £ÁªÀÅ «µÀ ¹A¥Àr¹ PÉÆ®ÄèªÀ ªÀiÁUÀð ºÀÄqÀÄQPÉÆAqÀ ¥ÀjuÁªÀÄ ºÀļÀÄ, Qæ«ÄUÀ¼ÀÄ CªÀÅUÀ¼À ¥Á°UÉ E®èªÁzÀªÀÅ.

ªÀÄÆgÀÄ- F ªÉÆzÀ®Ä £ÀªÀÄä £ÀUÀgÀUÀ¼À gÉÊ®Ä, §¸ï ¤¯ÁÝtUÀ¼ÀÄ ªÀÄvÀÄÛ ¸ÀPÁðj PÀbÉÃjUÀ¼À PÀlÖqÀUÀ¼ÀÄ UÀħâaÑUÀ½UÉ D¸ÀgÉAiÀiÁVzÀݪÀÅ, DzÀgÉ, J¯Áè PÀlÖqÀUÀ¼ÀÄ DzsÀĤPÀvÉAiÀÄ gÀÆ¥À ¥ÀqÉzÀÄ PÁAQæmï PÁqÁzÀ ¥ÀjuÁªÀÄ £ÀUÀgÀUÀ¼À°è UÀħâaÑ ªÀÄgÉAiÀiÁUÀvÉÆqÀVzÀªÀÅ.

£Á®ÄÌ,- £ÀUÀgÀUÀ¼À°è «±ÉõÀªÁV zÉêÀ¸ÁÜ£À ªÀÄvÀÄÛ ¥Áæxð£Á ªÀÄA¢gÀUÀ¼À §½ ¥ÁjªÁ¼ÀUÀ½UÉ PÁ¼ÀÄ ºÁQ CªÀÅUÀ¼À£ÀÄß ¥ÉÆÃ¶¸ÀĪÀ ¸ÀA¸ÀÌøwAiÉÆAzÀÄ £ÀªÀÄä £ÀqÀÄªÉ ¨É¼ÉzÀÄ §A¢vÀÄ. ¥ÁjªÁ¼ÀUÀ¼À eÉÆvÉ ¸Ét¸Ár, DºÁgÀ zÀQ̹PÉÆ¼ÀÄîªÀ CxÀªÁ UÀÆqÀÄ PÀlÄÖªÀ ZÉÊvÀ£Àå«®èzÀ ¥ÀÄlÖ ¥ÀQëUÀ¼ÁzÀ UÀħâaÑUÀ¼ÀÄ PÁuÉAiÀiÁUÀvÉÆqÀVzÀªÀÅ.

LzÀÄ- EªÉ®èQÌAvÀ UÀA©üÃgÀ ¥ÀjuÁªÀÄUÀ¼ÉAzÀgÉ, £ÀUÀgÀUÀ¼À°è ºÉaÑzÀ ±À§Þ ªÀiÁ°£Àå ªÀÄvÀÄÛ ªÉƨÉÊ¯ï ¥ÉÆÃ£ï ªÀÄvÀÄÛ ªÉƨÉʯï UÉÆ¥ÀÄgÀUÀ½AzÀ ¥Àæ¸Àj¸ÀĪÀ vÀgÀAUÁAvÀgÀUÀ½AzÀ ºÉÆgÀ¸ÀƸÀĪÀ «PÀgÀtUÀ¼ÀÄ UÀħâaÑ ªÀÄvÀÄÛ EvÀgÉ ¥ÀQëUÀ½UÉ C¥ÁAiÀĪÀ£ÀÄß vÀAzÉÆrتÉ.  «QgÀtUÀ¼ÀÄ ( Electro magnet pollution) UÀħâaÑUÀ¼À zÉúÀªÀ£ÀÄß PÀë QgÀtUÀ¼ÀAvÉ ºÁAiÀÄÄÝ ºÉÆÃUÀÄwÛªÉ.

E£ÀÄß UÁæªÀiÁAvÀgÀ ¥ÀæzÉñÀUÀ¼À CzsÀåAiÀÄ£À £ÀUÀgÀ ¥ÀæzÉñÀUÀ½VAzÀ ©ü£ÀߪÁV®è. UÁæªÀÄUÀ¼À°è DAiÀiÁ ¥ÁæzÉòPÀ ªÀÄvÀÄÛ ¨sËUÀƽPÀ ¥Àj¸ÀgÀPÉÌ C£ÀÄUÀÄtªÁV ¤ªÀiÁðtªÁUÀÄwÛzÀÝ ªÀÄ£ÉUÀ¼À «£Áå¸ÀUÀ¼ÀÄ PÀtägÉAiÀiÁV zÉñÁzÀåAvÀ KPÀgÀƦ Dgï.¹.¹. ªÀÄ£ÉUÀ¼ÀÄ C¹ÛvÀéPÉÌ §AzÀªÀÅ, F ªÉÆzÀ®Ä ºÉAa£À ªÀÄ£ÉUÀ¼À ªÀiÁqÀÄ, UÀÄr¸À®ÄUÀ¼À ¸ÀÆj£À°è UÀÆqÀÄ PÀlÄÖwÛzÀÝ UÀħâaÑUÀ½UÉ UÀÆqÀÄ PÀlÖ®Ä ºÀ½îUÀ¼À®Æè CªÀPÁ±À«®èzÀAvÁ¬ÄvÀÄ.  UÀħâaÑUÀ¼ÀÄ EvÀgÉ ¥ÀQëUÀ¼À ºÁUÉ ªÀÄgÀzÀ°è CxÀªÁ VqÀUÀ¼À ¥ÉÆzÉAiÀİè UÀÆqÀÄ PÀnÖ, ªÉÆmÉÖ ElÄÖ ªÀÄj ªÀiÁqÀĪÀÅzÀÄ wÃgÁ PÀrªÉÄ.
ºÉÆ®UÀzÉÝUÀ½UÉ wÃgÁ C¥ÁAiÀÄPÁjªÉ¤¹gÀĪÀ Qæ«Ä £Á±ÀPÀ ªÀÄvÀÄÛ QÃl£Á±ÀUÀ¼ÀÄ §¼ÀPÉUÉ §AzÀ ¥ÀjuÁªÀÄ ¨É¼ÉUÀ½UÉ ºÀvÀÄÛwÛzÀÝ QÃlUÀ¼ÀÄ ¸ÀºÀ UÀħâaÑUÀ¼À ¥Á°UÉ E®èªÁzÀªÀÅ. G¼ÀĪÉÄAiÀÄ £ÀAvÀgÀ ªÀÄtÂÚ£À°è zÉÆgÉAiÀÄÄwÛzÀÝ JgɺÀļÀÄUÀ¼ÀÄ ¸ÀºÀ ¨sÀÆ«Ä «µÀAiÀÄÄPÀÛªÁzÀÄzÀjAzÀ UÀħâaÑUÀ½VAvÀ ªÉÆzÀ¯É CªÀÅ PÀtägÉAiÀiÁzÀªÀÅ.
dUÀwÛ£À fêÀ eÁ®zÀ ¸ÀgÀ¥À½AiÀİè£À fëUÀ¼ÀÄ MAzÀPÉÆÌAzÀÄ CªÀ®A©¹PÉÆAqÀÄ §zÀÄQªÉ JA§ PÀ¤µÀÖ eÁУÀ ªÀÄvÀÄÛ w¼ÀĪÀ½PÉ £À«ÄäAzÀ zÀÆgÀªÁVzÉ. ®AqÀ£ï £ÀUÀgÀzÀ°è UÀħâaÑUÀ¼À PÀtägÉAiÀiÁUÀÄwÛgÀĪÀ PÀÄjvÀÄ £ÀqɹzÀ MAzÀÄ CzÀåAiÀÄ£À PÀÄvÀƺÀ®PÁj CA±ÀªÉÇAzÀ£ÀÄß ºÉÆgÀºÁQvÀÄ.
1920 gÀ ªÀgÉUÉ ®AqÀ£ï £ÀUÀgÀzÀ ©Ã¢UÀ¼À°è ¥ÀæAiÀiÁtÂPÀjUÉ PÀÄzÀÄgÉ UÁrUÀ¼ÀÄ §¼ÀPÉAiÀİèzÁÝUÀ C¥ÁgÀ ¥ÀæªÀiÁtzÀ°èzÀÝ UÀħâaÑUÀ½zÀݪÀÅ,  D£ÀAvÀgÀ mÁæªÀiï UÀ¼ÀÄ ( gÀ¸ÉÛAiÀÄ°è ºÀ½AiÀÄ ªÉÄÃ¯É ZÀ°¸ÀĪÀ §¸ï UÀ¼ÀÄ) ¥ÀjZÀAiÀĪÁzÀ £ÀAvÀgÀ QëÃt¹zÀªÀÅ, EzÀPÉÌ PÁgÀt ºÀÄqÀÄQzÁUÀ, PÀÄzÀÄgÉUÀ¼ÀÄ gÀ¸ÉÛAiÀÄ°è ºÁPÀÄwÛzÀÝ ®¢ÝAiÀİè fÃtðªÁUÀzÉ G½zÀ PÁ¼ÀÄUÀ¼ÀÄ UÀħâaÑUÀ½UÉ DºÁgÀªÁVvÀÄÛ JA§ÄzÀÄ ¨É¼ÀQUÉ §AvÀÄ. ®AqÀ£ï £ÀUÀgÀzÀ°è F ªÉÆzÀ®Ä ªÁ¸ÀªÁVzÀÝ UÀħâaÑUÀ¼À°è ±ÉÃPÀqÀ 90 gÀµÀÄÖ PÀtägÉAiÀiÁVªÉ JA§ÄzÀÄ zÀÈqÀ¥ÀnÖzÉ. ( EAUÉèÃAr£À°è ¥Àæw ªÀµÀð ¥ÀQëUÀ¼À UÀtÀw £ÀqɸÀ¯ÁUÀÄvÀÛzÉ) ¥Áæ£ïì £À ¥Áåj¸ï £ÀUÀgÀzÀ°è PÀ¼ÉzÀ ºÀvÀÄÛ ªÀµÀðUÀ¼À°è ¸ÀĪÀiÁgÀÄ JgÀqÀÄ ®PÀë UÀħâaÑUÀ¼ÀÄ PÀtägÉAiÀiÁVªÉ, C°è£À ¥ÁæaãÀ §ÈºÀvï PÀlÖqÀUÀ¼À°è ªÁ¸ÀªÁVzÀÝ UÀħâaÑUÀ¼ÀÄ £ÀUÀgÀzÀ ªÁºÀ£ÀUÀ¼À ±À§Þ ªÀiÁ°£Àå ªÀÄvÀÄÛ ªÉƨÉʯï UÉÆÃ¥ÀÄgÀUÀ¼À «QgÀtUÀ½AzÀ CªÀ£ÀwAiÀÄ CAaUÉ zÀÆqÀ®ànÖªÉ. ºÁUÁV EwÛÃZÉUÉ fêÀ «eÁÕ¤UÀ¼ÀÄ UÀħâaÑUÀ¼À£ÀÄß ¥Àj¸ÀgÀ §zÀ¯ÁªÀuÉAiÀÄ ¸ÀÆZÀPÀªÁV ªÀÄvÀÄÛ »ªÀÄPÀgÀrUÀ¼À£ÀÄß ªÁvÁªÀgÀtzÀ GµÀßvÉAiÀÄ §zÀ¯ÁªÀuÉAiÀÄ ¸ÀÆZÀPÀªÁVlÄÖPÉÆAqÀÄ CzsÀåAiÀÄ£À ªÀiÁqÀ®Ä DgÀA©ü¹zÁÝgÉ. F ¤nÖ£À°è ¨ÁA¨É £ÁåZÀÄgÀ¯ï »¸ÀÖj ¸ÀA¸ÉÜAiÀÄ qÁ. C¸ÉÆÃzï gÁªÀĤ, ªÀÄvÀÄÛ P˸ÀÄÛ¨sÀ ±ÀªÀÄð ºÁUÀÆ  zɺÀ° dªÀºÀgÀ¯Á¯ï £ÉºÀgÀÆ «.«.AiÀÄ fêÀ«eÁУÀ «¨sÁUÀzÀ «eÁФ qÁ ¸ÀÆAiÀÄð¥ÀæPÁ±ï EªÀgÀ CzsÀåAiÀÄ£ÀUÀ¼ÀÄ UÀħâaÑUÀ¼À gÀPÀëuÉUÉ zÁj¢Ã¥ÀªÁUÀ§®èªÀÅ. ¨sÁgÀvÀzÀ DAzsÀæ ¥ÀæzÉñÀ gÁdåªÉÇAzÀgÀ°è ±ÉÃPÀqÀ 80 gÀµÀÄÖ UÀħâaÑUÀ¼ÀÄ PÀtägÉAiÀiÁVgÀĪÀÅzÀÄ ¥ÀvÉÛAiÀiÁVzÉ. C°è£À gÉÊvÀgÀÄ ºÀwÛ ¨É¼ÉUÉ ªÀÄvÀÄÛ ¨sÀvÀÛzÀ ¨É¼ÉUÉ «Äw «ÄÃjzÀ QÃl£Á±ÀPÀ ªÀÄvÀÄÛ gÀ¸ÁAiÀĤPÀ UÉÆ§âgÀ §¼À¹gÀĪÀÅzÀÄ EzÀPÉÌ PÁgÀtªÁVzÉ.

«±ÀézÁåAvÀ ¥Àæw ªÀµÀð ªÀiÁZïð 20 gÀAzÀÄ UÀħâaÑUÀ¼À ¢£À JAzÀÄ DZÀj¸À¯ÁUÀÄwÛzÉ. £ÁªÀÅ dUÀwÛ£À°è ¤gÁPÀj¹zÀ fêÀUÀ½UÉ ªÀÄvÀÄÛ ªÀiÁqÀĪÀ CzsÁé£ÀUÀ½UÉ ªÀµÀðzÀ ªÀÄÄ£ÀÆßgÀÄ CgÀªÀvÉÛöÊzÀÄ ¢£ÀUÀ¼À£ÀÄß «ÄøÀ¯ÁVnÖzÉÝêÉ. ªÀµÀð ¥ÀÆwð ªÀÄPÀ̼À ¥Á®£É, ¥ÉÆÃµÀuɬÄAzÀ ªÀAavÀgÁzÀ vÀAzÉvÁ¬ÄUÀ½UÉ C¥ÀàA¢gÀ ¢£À, CªÀÄäA¢gÀ ¢£À J£ÀÄߪÀ ºÁUÉ UÀħâaÑUÀ¼À ¥Á°UÀÆ MAzÀÄ ¢£À. EªÉ®èªÀÇ JzÉAiÀİèzÀÝ ªÀiÁvÀÄUÀ¼ÀÄ ªÀÄvÀÄÛ ¨sÁªÀUÀ¼ÀÄ vÀÄnAiÀÄAaUÉ §AzÀ ¥ÀjuÁªÀÄ ºÀÄnÖPÉÆAqÀ PÀÈvÀPÀ ¢£ÁZÀgÀuÉUÀ¼ÁVªÉ.