ಶನಿವಾರ, ನವೆಂಬರ್ 1, 2014

ಕೋಮುವಾದದ ನೆಲೆಗಳು ಮತ್ತು ಗ್ರಹಿಕೆಯ ದೋಷಗಳು



ಹಲವಾರು ಭಾಷೆ ಮತ್ತು ಧರ್ಮಗಳ ಸಂಗಮದ ನೆಲವಾದ ಭಾರತವನ್ನು ನಾವು ಬಹುಸಂಸ್ಕತಿಯ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆ. ಇಂತಹ ನಿಜವಾದ ಅರ್ಹತೆ ದೇಶಕ್ಕೆ ಇಂದಿನ ದಿನಮಾನಗಳಲ್ಲಿ ಇದೆಯಾ? ಎಂಬ ಪ್ರಶ್ನೆಯನ್ನು ನಮ್ಮ ನಮ್ಮ ಅಂತರಂಗಕ್ಕೆ ಹಾಕಿಕೊಂಡಾಗ ಮನಸ್ಸು ಮೌನ ಮತ್ತು ಮುಜುಗರದಿಂದ ಮುದುಡಿಹೋಗುತ್ತದೆ. ಭಾರತದ ನಿಜವಾದ ಚರಿತ್ರೆ ಯಾವುದು? ಎಂಬ ಪ್ರಶ್ನೆಯೂ ನಮ್ಮನ್ನು ತೀವ್ರವಾಗಿ ಕಾಡುತ್ತದೆ.
ಇವೊತ್ತಿಗೂ ಭಾರತದ ನೈಜ ಇತಿಹಾಸವೆಂಬುದು ಪ್ರಾಮಾಣಿಕವಾಗಿ ದಾಖಲಾಗಿಲ್ಲ. ಕ್ರಿ.. ಒಂದನೆಯ ಶತಮಾನದಿಂದ ಹಿಡಿದು ಹದಿನಾರು ಅಥವಾ ಹದಿನೇಳನೆಯ ಶತಮಾನದವರೆಗೆ ಭಾರತದಲ್ಲಿ ಪ್ರವಾಸ ಮಾಡಿದ ಚೀನಾ ಯಾತ್ರಿಕರುಪೋರ್ಚುಗೀಸರು, ಡಚ್ಚರು  ಮುಂತಾದ ಪ್ರವಾಸಿಗರ ದಿನಚರಿಯ ಪುಟಗಳ ಆಧಾರದ ಮೇಲೆ ಭಾರತದ ಇತಿಹಾಸ ಮತ್ತು ವಸ್ತುಸ್ಥಿತಿ ದಾಖಲಾಗಿದೆ. ಆನಂತರದ ದಿನಗಳಲ್ಲಿ ಬ್ರಿಟೀಷರ ಆಳ್ವಿಕೆಯಲ್ಲಿ ಬ್ರಿಟಿಷ್ ವಿದ್ವಾಂಸರು ಬರೆದ ಇತಿಹಾಸವೆಲ್ಲವೂ ಭಾರತದ ಅಧಿಕೃತ ಚರಿತ್ರೆಯಾಯಿತು.
ನೆಲದ ಸಂಸ್ಕøತಿಗೆ ಸಂಬಂಧಪಡವರ ಹಾಗೂ ಪಾಶ್ಚಿಮಾತ್ಯ ಕಣ್ಣಿನಿಂದ ನೋಡಿದ ಹಾಗೂ ಹೃದಯದಿಂದ ಗ್ರಹಿಸಿದವರ ಚಿಂತನೆಗಳು ಮತ್ತು ಕೃತಿಗಳು ನಮ್ಮ ಪಾಲಿಗೆ ಇತಿಹಾಸ ಪಠ್ಯಗಳಾದವು. ಆದರೆ  ಅವುಗಳಲ್ಲಿ ಬಹುತೇಕ ಪಾಲು ಒಂದೇ ಮಗ್ಗುಲಿನ ಚರಿತ್ರೆಯಾಗಿ ರೂಪುಗೊಂಡಿರುವುದನ್ನು  ಅಲ್ಲಗೆಳೆಯಲಾಗದು. ಕಾರಣದಿಂದಾಗಿ ಭಾರತದ ಚರಿತ್ರೆಯ ಮೂಲ ನೆಲೆಗಳನ್ನು ತೆರೆದ ಹೃದಯದಿಂದ ಶೋಧಿಸಿ, ಹೊಸ ಇತಿಹಾಸವನ್ನು ಸೃಷ್ಟಿಸುವ ಅಗತ್ಯವಿದೆ.


ಭಾರತದ ಇತಿಹಾಸದ ಉದ್ದಕ್ಕೂ ಸಾಮ್ರಾಜ್ಯದ ವಿಸ್ತರಣೆಗಾಗಿ ಮತ್ತು  ಹೆಣ್ಣಿಗಾಗಿ ಹಾಗೂ ಧರ್ಮದ ಮೇಲುಗೈಗಾಗಿ ಅನೇಕ ರಕ್ತ ಪಾತಗಳು, ಕದನಗಳು  ಜರುಗಿಹೋಗಿವೆ. ಜೊತೆಗೆ  ಅವುಗಳಲ್ಲಿ ಕೆಲವು ಸಂಘರ್ಷಗಳಿಗೆ ಕೋಮುವಾದ ಸಂಘರ್ಷದ ಲೇಪನ ಬಳಿಯಲಾಗಿದೆ. ಅದೇ ರೀತಿ ಭಾರತದ ಅಮೂಲ್ಯ ಸಂಪತ್ತಿನ ಲೂಟಿಗಾಗಿ ದಂಡೆತ್ತಿ ಬಂದ ವಿದೇಶಿ ದಾಳಿಕೋರರ ಕೃತ್ಯಗಳನ್ನು ( ಮಹಮ್ಮದ್ ಘಜನಿ, ಮಹಮ್ಮದ್ ಘೋರಿ, ತೈಮೂರ್ ಇತ್ಯಾದಿ) ಅವರು ದೇವಸ್ಥಾನಗಳ ಮೇಲೆ ದಾಳಿ ಮಾಡಿದ ಕಾರಣಕ್ಕಾಗಿ ಹಿಂದೂ ಧರ್ಮದ ಮೇಲಿನ ದಾಳಿ ಎಂದು ಇತಿಹಾಸದ ಪುಟಗಳಲ್ಲಿ ಬಣ್ಣಿಸಲಾಗಿದೆ. ಇಂತಹ ಅನೇಕ ಅರ್ಧಸತ್ಯದಿಂದ ಕೂಡಿದ ಘಟನೆಗಳು ನಮ್ಮ ಪಾಲಿಗೆ ಇತಿಹಾಸವಾಗಿ ಬೋಧಿಸಲ್ಪಡುತ್ತಿರುವುದು ನಮ್ಮ ಪಾಲಿನ ದುರಂತ.
ಭಾರತದಂತಹ ಬಹು ಸಂಸ್ಕತಿಯ ನೆಲದಲ್ಲಿ ಜನಾಂಗೀಯ ಘರ್ಷಣೆಗಳು, ಧರ್ಮ ಕುರಿತಂತೆ ಕೋಮು ಘರ್ಷಣೆಗಳು ಹೊಸ ಸಂಗತಿಗಳೇನಲ್ಲ. ಕ್ರಿಸ್ತಪೂರ್ವದ ಬುದ್ಧ ಮತ್ತು ಮಹಾವೀರರ ಅನುಯಾಯಿಗಳ ಬಡಿದಾಟ ಮತ್ತು ಸಾಮೂಹಿಕ ಕಗ್ಗೊಲೆಯಿಂದ  ಹಿಡಿದು ಇಪ್ಪತ್ತೊಂದನೆಯ ಶತಮಾನದ ಕೋಮುವಾದದ ಹಿಂಸೆಯ ಅಧ್ಯಾಯಗಳವರೆಗೂ ಮುಂದುವರಿದಿದೆ. ಭಾರತದ ಚರಿತ್ರೆಯಲ್ಲಿ ಬೌದ್ದರು -ಜೈನರು, ಹಿಂದೂಗಳ - ಸಿಖ್ಖರು, ಸಿಖ್ಖರು - ಮುಸ್ಲಿಮರು, ಹಿಂದೂಗಳು - ಕ್ರೈಸ್ತರುಹಿಂದೂಮುಸ್ಲಿಮರು ಹೀಗೆ ಎಲ್ಲರೂ ತಮ್ಮ ಬದುಕಿನುದ್ದಕ್ಕೂ ಹೊಡೆದಾಡಿಕೊಂಡು ಬಂದಿದ್ದಾರೆ. ಅನ್ಯ ಧರ್ಮಗಳ ಬಗೆಗಿನ ಪ್ರೀತಿಸಹಿಷ್ಣುತೆ ಮತ್ತು ಗೌರವ ಇವುಗಳಿಗಿಂತ ಹೆಚ್ಚಾಗಿ  ದ್ವೇಷವೇ ಧರ್ಮದ ಮೂಲವೆಂತಾಗಿರುವ ದಿನಮಾನಗಳಲ್ಲಿ ಧರ್ಮಗಳ ಕುರಿತಂತೆ ಮಾತನಾಡುವಾಗ ಅಥವಾ ಬರೆಯುವಾಗ ಜಾಗೃತ ಮನಸ್ಸಿನಿಂದ ನಾವು ಸದಾ ಎಚ್ಚರಗೊಂಡಿರಬೇಕು.



ಇಂದಿನ ದಿನಗಳಲ್ಲಿ ಕೋಮುವಾದ ಎಂದರೆ ಅದು ಹಿಂದೂ ಅಥವಾ ಮುಸ್ಲಿಂ ಧರ್ಮ ಕುರಿತಾಗಿ ಹೊಂದಿರುವ ಭಾವನೆಗಳು ಎಂದು ನಂಬಿಕೊಂಡು ಬರಲಾಗಿದೆ. ಇವೆರೆಡಕ್ಕೂ ಮೀರಿ ಅಂದರೆ ಜಾತ್ಯಾತೀತವಾಗಿ, ಧರ್ಮಾತೀತವಾಗಿ  ಬುದ್ಧನ ಮಧ್ಯಮ ಮಾರ್ಗದಲ್ಲಿ ನಡೆದು  ಧರ್ಮ ನಿರಪೇಕ್ಷ ಪ್ರಜ್ಞೆಯಿಂದ ಮತ್ತು ಮುಕ್ತ ಮನಸ್ಸಿನಿಂದ ಜಗತ್ತನ್ನು  ನೋಡುವ ವ್ಯಕ್ತಿಗಳನ್ನು ಮಾಕ್ರ್ಸ್ ಚಿಂತನೆಯ ವಾರಸುದಾರರು ಅಥವಾ ಎಡಪಂಥಿಯರು ಎಂಬ ಹಣೆಪಟ್ಟಿಯೊಂದಿಗೆ ಕರೆಯಲಾಗುತ್ತಿದೆ. ಜೊತೆಗ  ಇವರೆಲ್ಲರೂ ಇಸ್ಲಾಂ ಧರ್ಮದ ಸಹಾನುಭೂತಿಗಳು ಮತ್ತು ಹಿಂದೂ ಧರ್ಮದ ದಂಗೆಕೋರರು ಎಂದು ಬಣ್ಣಿಸಿಕೊಂಡು ಬರಲಾಗಿದೆ. ಇತಿಹಾಸವೆಂಬುದು ಕೇವಲ ಘಟಿಸಿಹೋದ ಘಟನೆಯೊಂದರ ಕುರಿತ ಮಾಹಿತಿ ಮಾತ್ರವಲ್ಲ, ಅದು ಮನುಷ್ಯ ಕುಲವು ತನ್ನ ಅವಿವೇಕತನದಿಂದ  ಎಸಗಿದ ಅಪರಾಧಗಳಿಗೆ ಸಾಕ್ಷಿ ಕೂಡ ಹೌದು. ಜೊತೆಗೆ ಅಂತಹ ತಪ್ಪುಗಳನ್ನು ಮಾನವಕುಲ ಮತ್ತೇ ಎಸಗದಂತೆ ದಾರಿ ತೋರಿಸುವ, ಎಚ್ಚರಿಸುವ ದಾರಿ ದೀಪ ಕೂಡ ಹೌದು. ಆದರೆ ಇಂದು ಇತಿಹಾಸ ಮಾಹಿತಿಗಳು ಭಾರತೀಯ ಸಮುದಾಯಗಳ ಪಾಲಿಗೆ ಜಾತಿ, ಧರ್ಮಗಳ ಬೇಧ ಭಾವವಿಲ್ಲದೆ  ತಮ್ಮ ಪೂರ್ವಿಕರು ಅನುಭವಿಸಿದ ನೋವಿಗೆ ಸೇಡು ತೀರಿಸಿಕೊಳ್ಳುವ ಆಯುಧಗಳಾಗಿ ಬಳಸಲ್ಪಡುತ್ತಿವೆ. ಇಂತಹ ಪೈಶಾಚಿಕ ಮನೋಭಾವವು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೆಚ್ಚಾಗಿ ಸಾಮಾಜಿಕ ವ್ಯಾಧಿಯಾಗಿ, ನೋವಾಗಿ ಸುಸಂಸ್ಕø ನಾಗರೀಕ ಸಮಾಜವನ್ನು ಕಾಡುತ್ತಾ ಬಾಧಿಸುತ್ತಿದೆ.
ಏಷ್ಯಾದ ಅಥವಾ ಅವಿಭಜಿತ ಭಾರತ ಉಪಖಂಡದ ಶತಮಾನದ ಅತಿಘೋರ ಮಾನವ ದುರಂತ ಎಂದು ಬಣ್ಣಿಸಲಾದ ಹಾಗೂ ಭಾರತದ ವಿಭಜನೆಯ ಸಂದರ್ಭದಲ್ಲಿ ಉಂಟಾದ ಹಿಂದೂಮುಸ್ಲಿಂ - ಸಿಖ್ಕರ ನಡುವಿನ ಕೋಮುಗಲಭೆಯಲ್ಲಿ ಸಾವಿರಾರು ಮಂದಿ ಕೊಲ್ಲಲ್ಪಟ್ಟರೆ, ಲಕ್ಷಾಂತರ ಕುಟುಂಬಗಳು ಬೀದಿಪಾಲಾದವು. ಇತಿಹಾಸದ ಇಂತಹ ಘೋರ ದುರಂತದಿಂದ ಭಾರತ, ಪಾಕ್ ನಾಗರೀಕರು ಎಂದಿಗೂ  ಪಾಠ ಕಲಿಯಲೇ ಇಲ್ಲ. 1947 ರಿಂದ ದೇಶದಲ್ಲಿ ನಿರಂತರ ನಡೆದ ಅಸಂಖ್ಯಾತ ಕೋಮುಘಲಭೆಗಳ ನಡೆದವು.  1984 ಅಕ್ಟೋಬರ್ 30 ರಂದು ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯ ನಂತರ  ರಾಜಧಾನಿ ದೆಹಲಿ ನಗರದ ಸೇರಿದಂತೆ ವಿವಿಧೆಡೆ ನಡೆದ ಸಿಖ್ಖರ ನರಮೇಧ ಹಾಗೂ 2002 ರಲ್ಲಿ ಗುಜರಾತಿನ ಗೋದ್ರಾದಲ್ಲಿ ನಡೆದ ಕೋಮುಗಲಭೆ ಇವೆಲ್ಲವೂ ಭಾರತದ ಇತಿಹಾಸಕ್ಕೆ ಅಂಟಿದ ಕಪ್ಪು ಚುಕ್ಕೆಗಳು ಎಂದು ದಾಖಲಿಸಬಹುದು. ಇಂತಹ ಅಮಾನವೀಯ ಘಟನೆಗಳಿಗೆ ಮತ್ತು ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತುತ್ತಿರುವ ಹಿಂದೂ - ಮುಸ್ಲಿಂ ಸಂಘಟನೆಗಳು ಇಂದಿಗೂ ತೆರೆ ಮರೆಯಲ್ಲಿ ಕ್ರಿಯಾಶೀಲವಾಗಿರುವುದು ಭಾರತದ ನಾಗರೀಕ ಜಗತ್ತು ತಲೆ ತಗ್ಗಿಸುವ ಸಂಗತಿಯಾಗಿದೆ.


ಧರ್ಮ, ಜಾತಿಗಿಂತ ಮಾನವೀಯತೆ ದೊಡ್ಡದು ಮತ್ತು ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಮಾನವ ಜೀವಿಗಳ ಪ್ರಾಣ ಅಮೂಲ್ಯವಾದುದು ಎಂಬ ಕನಿಷ್ಟ ತಿಳುವಳಿಕೆಯಿಲ್ಲದೆ ಪ್ರತಿಯೊಂದು ಕೋಮಿನ ಸಂಘಟನೆಗಳು ಇತಿಹಾಸದಲ್ಲಿ ಜರುಗಿದ ಘಟನೆಗಳಿಗೆ ಸೇಡು ತೀರಿಸಿಕೊಳ್ಳುವ ತವಕದಲಿ ತಮ್ಮ ತಮ್ಮ ಸಮುದಾಯದಲ್ಲ್ಲಿ ಕೋಮುವಾದವನ್ನು ಉದ್ದೇಪಿಸುತ್ತಿವೆ. ಇವುಗಳಲ್ಲಿ ಹಿಂದೂ ಧರ್ಮವನ್ನು ಗುತ್ತಿಗೆ ಹಿಡಿದಂತೆ ವರ್ತಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವ ಸಂಘ ಎಂಬ ಸಂಘಟನೆ ಪ್ರಮುಖವಾದುದು. ಹಿಂದೂ ಮಹಾ ಸಭಾ ಹೆಸರಿನಲ್ಲಿ ಸ್ವಾತಂತ್ರ್ಯ ಪೂರ್ವದಿಂದ ಕ್ರಿಯಾಶೀಲವಾಗಿದ್ದ ಸಂಸ್ಥೆ ಅಂತಿಮವಾಗಿ 1948 ಜನವರಿಯಲ್ಲಿ ಮಹಾತ್ಮ ಗಾಂಧೀಜಿಯವರನ್ನು ಬಲಿ ತೆಗೆದುಕೊಳ್ಳುವುದರ ಮೂಲಕ ನಿಷೇಧಕ್ಕೆ ಒಳಪಟ್ಟಿತು. ಆನಂತರ ಸಾಂಸ್ಕತಿಕ ಸಂಘಟನೆ ಎಂದು ಹೇಳಿಕೊಳ್ಳುವುದರ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರಿನಲ್ಲಿ ತಲೆ ಎತ್ತಿದ ಸಂಘಟನೆ ದೇಶ ಸೇವೆ ಮತ್ತು ಸಾಮಾಜಿಕ ಸೇವೆಗಿಂತ ಧರ್ಮದ ನೆಪದಲ್ಲಿ ಮನುಷ್ಯ ಮನುಷ್ಯರ ನಡುವೆ ಅಪನಂಬಿಕೆಯ ಬೀಜಗಳನ್ನು ಬಿತ್ತಿ ದೇಶದಲ್ಲಿ ಕೋಮು ಗಲಭೆಯನ್ನು ಹರಡುವುದರಲ್ಲಿ ಯಶಸ್ವಿಯಾಯಿತು. ಸಂಸ್ಥೆ ದೇಶಾದ್ಯಂತ ಹುಟ್ಟು ಹಾಕಿರುವ ಅನೇಕ ವಿದ್ಯಾ ಸಂಸ್ಥೆಗಳ ಪಠ್ಯದಲ್ಲಿ ತಮ್ಮ ಮೂಗಿನ ನೇರಕ್ಕೆ ಇತಿಹಾಸವನ್ನು ಸೃಷ್ಟಿಸಿಕೊಂಡು ಎಳೆಯ ಮಕ್ಕಳ ಎದೆಯಲ್ಲಿ ವಿಷಬೀಜವನ್ನು ಬಿತ್ತಲಾಗುತ್ತಿದೆ. ಸಂಸ್ಥೆಯ ಕರಾಳ ಇತಿಹಾಸವನ್ನು ದೆಹಲಿ ಮೂಲದ ಇತಿಹಾಸ ತಜ್ಞರೂ ಸೇರಿದಂತೆ ದೇಶದ ಹಲವಾರು ಇತಿಹಾಸ ಪಂಡಿತರು ಕರಾರು ವಕ್ಕಾದ ಅಂಕಿ ಅಂಶಗಳೋಂದಿಗೆ  ರಚಿಸಿ ಸಂಪಾದಿಸಿರುವಆರ್.ಎಸ್.ಎಸ್. ಟೆಕ್ಸ್ಟ್ ಅಂಡ್ ದಿ ಮರ್ಡರ್ ಆಪ್ ಮಹಾತ್ಮಗಾಂಧಿಎಂಬ ಕೃತಿ ಆರ್.ಎಸ್.ಎಸ್. ಸಂಘಟನೆಯ ಮುಖವಾಡವನ್ನು ಕಳಚಿಹಾಕಬಲ್ಲ ಕೃತಿಯಾಗಿದೆ. ಭಾರತವನ್ನಾಳಿದ ಬ್ರಿಟಿಷರ ವಿರುದ್ಧ ಹೋರಾಡಿದ ಸಂದರ್ಭದಲ್ಲಿ ಜಾತಿ ಧರ್ಮದ ನೆಲೆಗಳನ್ನು ಮೀರಿ ಹೋರಾಡಿದ ಅನೇಕ ಮುಸ್ಲಿಂ ಹೋರಾಟಗಾರರ ಬಗ್ಗೆ ಇತಿಹಾಸದ ಪ್ರಜ್ಞೆಯಿಲ್ಲದ ಸಂಘಟನೆಯು ದೇಶ ಭಕ್ತಿ ಮತ್ತು ಧರ್ಮ ಭಕ್ತಿಯ ನೆಪದಲ್ಲಿ ಹಿಂದೂ ಯುವಕರನ್ನು ಮುಸ್ಲಿಂರ ವಿರುದ್ಧ ಎತ್ತಿಕಟ್ಟುವುದನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡಿದೆ. ಇಂತಹ ಆಪತ್ ಸಮಯದಲ್ಲಿ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿರುವ ಅನೇಕ ರಾಜಕೀಯ ಪಕ್ಷಗಳು ನಾಗರೀಕರನ್ನು ವಿಶ್ವ ಮಾನವ ಪ್ರಜ್ಞೆಯಿಂದ ದೂರ ಸರಿಸಿ, ಅವರನ್ನು ಪುನಃ ಜಾತಿ ಮತ್ತು ಧರ್ಮದ ನೆಲೆಯತ್ತ ಕೊಂಡೊಯ್ಯುತ್ತಿವೆ.

ಮನುಷ್ಯ ಕುಡಿಯುವ ನೀರಿಗೆ, ಉಸಿರಾಡುವ ಗಾಳಿಗೆ ಅಥವಾ ಆತನ ಬಡತನ, ಅಪಮಾನ, ಹಸಿವು, ನೋವು ನಿಟ್ಟುಸಿರು ಮತ್ತು ಆತನ ದೇಹದಲ್ಲಿ ಹರಿಯುವ ಬಿಸಿನೆತ್ತರಿಗೆ ಜಾತಿ ಧರ್ಮದ ಹಣೆಪಟ್ಟಿಯಿಲ್ಲ ಎಂಬ  ವಿವೇಕದ ಪ್ರಜ್ಞೆಯಿಲ್ಲದ  ವ್ಯಕ್ತಿ , ಆತ ಮುಸ್ಲಿಂಆಗಿರಲಿ, ಹಿಂದೂ ಆಗಿರಲಿ ಇಂತಹವನು ಮಾತ್ರ ಮೃಗದಂತೆ ವರ್ತಿಸಬಲ್ಲ. ಹಾಗಾಗಿ ವರ್ತಮಾನ ಜಗತ್ತಿನ ಧರ್ಮಗುರುಗಳು ನಮಗೆ ಆತ್ಮ ಸಾಕ್ಷಿ ಪ್ರಜ್ಞೆಯುಳ್ಳ ಮನುಷ್ಯರಂತೆ ಗೋಚರಿಸುವ ಬದಲಾಗಿ  ಧರ್ಮದೆಸರಿನಲ್ಲಿ ದ್ವೇಷ ಬಿತ್ತುವ ಪಿಶಾಚಿಗಳಂತೆ ಗೋಚರಿಸುತ್ತಾರೆ.
ಮಾತು ತೀರಾ ಕಠಿಣವೆನಿಸಿದರೂ ಸಹ ಹೇಳಲೇ ಬೇಕಾದ ವಾಸ್ತವ ಕಹಿ ಸಂಗತಿಯಿದು. ಧರ್ಮಾತೀತವಾಗಿ ಅಥವಾ ಜಾತ್ಯಾತೀತವಾಗಿ ಮಾತನಾಡುವುದು ಪ್ರಗತಿಪರ ಚಿಂತನೆಯ ಲಕ್ಷಣ ಎಂದುಕೊಂಡಿರುವ ನಾವು ಅನುಕಂಪದ ನೆಪದಲ್ಲಿ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಕೂಡ ಮುಸ್ಲಿಂ ಜಗತ್ತನ್ನು ಆವರಿಸಿಕೊಂಡಿರುವ ಮೌಡ್ಯದ ಬಗ್ಗೆ ಚಕಾರವೆತ್ತುತ್ತಿಲ್ಲ. ಸ್ವತಃ ಅದೇ ಸಮುದಾಯದಿಂದ ಬಂದು ಅಕ್ಷರ ಲೋಕದ ಮೂಲಕ ವೈಚಾರಿಕ ಜಗತ್ತನ್ನು ಪ್ರವೇಶಿಸಿ, ಬಿಡುಗಡೆಗೊಂಡ ಮುಸ್ಲಿಂ ಲೇಖಕರಂತೂ ತಮ್ಮ ಧರ್ಮದ ಅನಿಷ್ಟ ಕಟ್ಟು ಪಾಡುಗಳ ಬಗ್ಗೆ ಧ್ವನಿಯೆತ್ತಿದ್ದು ತೀರಾ ಅಪರೂಪದ ಸಂಗತಿ ಎಂದು ಹೇಳಬೇಕು.
ಇತ್ತೀಚೆಗೆ ಲಂಡನ್ ಮೂಲದ ಬಿ.ಬಿ.ಸಿ. ಛಾನಲ್ ಮತ್ತು ಎಕನಾಮಿಸ್ಟ್ ಪತ್ರಿಕೆ ನಡೆಸಿರುವ ಅದ್ಯಯನಗಳು ಮುಸ್ಲಿಂ ಜಗತ್ತಿನ ಬಡತನವನ್ನು ಮತ್ತು ಮೌಡ್ಯವನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ಅನಾವರಣಗೊಳಿಸಿವೆ. ತೀವ್ರ ಪೈಪೋಟಿಯಿಂದ  ಕೂಡಿರುವ ವರ್ತಮಾನದ ಸ್ಪರ್ಧಾತ್ಮಕ ಜಗತ್ತಿನಲ್ಲಿ  ಮಹುತೇಕ ಮುಸ್ಲಿಂರು ಶಿಕ್ಷಣದಿಂದ ವಂಚಿತರಾಗಿ  ಧರ್ಮದ ಪಂಜರದೊಳಗೆ ಬಂಧಿಯಾಗಿದ್ದಾರೆ. ಜಗತ್ತಿನಲ್ಲಿರುವ ಸುಮಾರು 162 ಕೋಟಿ ಮುಸ್ಲೀಮರಲ್ಲಿ ಶೇಕಡ 80 ರಷ್ಟು ಮಂದಿ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ 58 ರಾಷ್ಟ್ರಗಳಲ್ಲಿ ಅರಬ್ ರಾಷ್ಟ್ರಗಳನ್ನು ಹೊರತು ಪಡಿಸಿದರೆ, ಬಹುತೇಕ ರಾಷ್ಟ್ರಗಳು ಬಡತನದಲ್ಲಿ ಮುಳುಗಿಹೋಗಿವೆ. ಜಗತ್ತಿನ ಅತ್ಯಂತ ಬಡರಾಷ್ಟ್ರಗಳ ಪೈಕಿ ಪಾಕಿಸ್ಥಾನ, ಬಾಂಗ್ಲಾ, ಆಪ್ಘಾನಿಸ್ಥಾನ, ಸೋಮಾಲಿಯ, ನೈಜಿರಿಯಾ, ರುವಾಂಡ ಇವೆಲ್ಲವೂ ಮುಸ್ಲಿಂ ಧರ್ಮಗುರುಗಳು ಇಲ್ಲವೆ, ಬಂಡುಕೋರರು ಅಥವಾ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಮೂಲಕ ಪರೋಕ್ಷವಾಗಿ ಆಳಲ್ಪಡುತ್ತಿವೆ. ಒಟ್ಟು ಜಾಗತಿಕ ಸೇವೆ ಮತ್ತು ಸರಕುಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಕೊಡುಗೆ ಕೇವಲ ಐದರಷ್ಟು ಮಾತ್ರ.
ಭಾರತದ ಸ್ಥಿತಿ ಕೂಡ ಜಾಗತಿಕ ವಿದ್ಯಾಮಾನಕ್ಕಿಂತ ಭಿನ್ನವಾಗಿಲ್ಲ. ಭಾರತದ ಸುಮಾರು ಸುಮಾರು 120 ಕೋಟಿ ಜನಸಂಖ್ಯೆಯಲ್ಲಿ 13 ಕೋಟಿ 80 ಲಕ್ಷ ಜನ ಮುಸ್ಲಿಂರಿದ್ದು, ಇವರಲ್ಲಿ ಶೇಕಡ 31 ರಷ್ಟು ಮಂದಿ ಕಡು ಬಡತನದಲ್ಲಿದ್ದಾರೆ. (ಭಾರತದ ಆದಿವಾಸಿಗಳ ನಂತರ ಇವರ ಸ್ಥಿತಿ ಎರಡನೆಯದು) ಗ್ರಾಮಾಂತರ ಪ್ರದೇಶದಲ್ಲಿ ಶೇಕಡ 35.6 ರಷ್ಟು ಬಡವರಿದ್ದರೆ, ನಗರ ಪ್ರದೇಶದ ಕೊಳಚೆಗೇರಿಗಳಲ್ಲಿ ಶೇಕಡ 55.8 ರಷ್ಟು ಬಡವರಿದ್ದಾರೆ. ಇವರ ಸಾಕ್ಷರತಾ ಪ್ರಮಾಣದ ಸಂಖ್ಯೆ ಕೂಡ ಭಾರತದ ಸರಾಸರಿಗಿಂತ ಕಡಿಮೆಯಿದೆ. ಭಾರತದ ಸರಾಸರಿ ಸಾಕ್ಷರತೆಯ ಪ್ರಮಾಣ ಶೇಕಡ 65 ರಷ್ಟು ಇದ್ದರೆ, ಮದರಸಾ ಶಾಲೆಗಳ ಶಿಕ್ಷಣವೂ ಸೇರಿದಂತೆ ಮುಸ್ಲಿಂರ ಸಾಕ್ಷರತೆಯ ಪ್ರಮಾಣ ಶೇಕಡ 60 ರಷ್ಟಿದೆ. ಪ್ರತಿ 25 ಮಂದಿಗೆ ಒಬ್ಬ ಪದವೀಧರನಿದ್ದರೆ, ಪ್ರತಿ 55 ಮುಸ್ಲಿಂ ಮಂದಿಗೆ ಒಬ್ಬ ಸ್ನಾತಕೋತ್ತರ ಪದವೀಧರನಿದ್ದಾನೆ. ಉದ್ಯೋಗದಲ್ಲಿಯೂ ಕೂಡ ಇವರ ಸ್ಥಿತಿ  ಚಿಂತಾಜನಕವಾಗಿದೆ. ಭಾರತೀಯ ಸೇನೆಯಲ್ಲಿ ಶೇಕಡ 3ರಷ್ಟು, ಸರ್ಕಾರಿ ನೌಕರಿಯಲ್ಲಿ ಶೇಕಡ 7ರಷ್ಟು, ರೈಲ್ವೆಯಲ್ಲಿ ಶೇಕಡ 5ರಷ್ಟು, ಬ್ಯಾಂಕುಗಳಲ್ಲಿ ಶೇಕಡ 3.2 ರಷ್ಟು, ಮತ್ತು ನ್ಯಾಯಾಂಗ ಇಲಾಖೆಯಲ್ಲಿ ಶೇಕಡ 7.8 ರಷ್ಟು ಮತ್ತು ಭಾರತೀಯ ನಾಗರೀಕ ಸೇವೆಯಂತಹ ಅತ್ಯುನ್ನುತ ಹುದ್ದೆಯಲ್ಲಿ ಶೇಕಡ 1.8 ರಷ್ಟು ಇದ್ದಾರೆ.

ಭಾರತದ ಬಹುತೇಕ ಗ್ರಾಮಾಂತರದ ಪ್ರದೇಶದ ಶೇಕಡ 60 ರಷ್ಟು ಮಂದಿ ಮುಸ್ಲಿಂರು ಭೂರಹಿತ ಕೃಷಿ ಕಾರ್ಮಿಕರಾಗಿದ್ದು, ಸರ್ಕಾರಿ ಸಬ್ಸಿಡಿ ಯೋಜನೆಗಳಿಂದ ವಂಚಿತರಾಗಿರುವ ಕುಟುಂಬಗಳ ಪ್ರಮಾಣ ಸರಾಸರಿ ಐವತ್ತನ್ನು ದಾಟುತ್ತದೆ. ನಗರ ಪ್ರದೇಶಗಳಲ್ಲಿರುವ ಮುಸ್ಲಿಂರ ಸ್ಥಿತಿ ಗತಿಗಳಲ್ಲೂ ಕೂಡ ವೆತ್ಯಾಸ ಕಾಣುವುದಿಲ್ಲ. ಆದರೆ ಮುಸ್ಲಿಂ ಧರ್ಮಗುರುಗಳು ಹಳ್ಳಿ ಮತ್ತು ನಗರಗಳು ಎಂಬ ಬೇಧಭಾವವಿಲ್ಲದೆ, ಝಗಮಗಿಸುವ ವೈಭವೋಪೇತ ಮಸೀದಿಗಳನ್ನು ಕಟ್ಟಿಸಿ, ದಿನಕ್ಕೆ ಐದು ಬಾರಿ ನಮಾಜು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಹೊಟ್ಟೆಗೆ ಅನ್ನ, ನೆತ್ತಿಯ ಮೇಲೊಂದು ಸೂರು ಇರದಿದ್ದರೂ ಸರಿಯೇ ದೇವರ ಪ್ರಾರ್ಥನೆಯನ್ನು ಕಡ್ಡಾಯವಾಗಿ ಮಾಡಬೇಕು. ಇಂದು ಮಸೀದಿಗಿಂತ ಮುಖ್ಯವಾಗಿ  ಬೇಕಿರುವುದು ಶಾಲೆ ಮತ್ತು ಶೌಚಾಲಯ ಎಂಬ ಅರಿವು ಇವರಿಗಿಲ್ಲವಾಗಿದೆ.
ಹಿಂದೂಮುಸ್ಲಿಂ ಎಂಬ ಬೇಧ ಭಾವವಿಲ್ಲದೆ ಕೊಳೆಯುತ್ತಿರುವ ಧಾರ್ಮಿಕ ಗೊಡ್ಡು ಮನಸ್ಸುಗಳಿಗೆ ಶಿಕ್ಷಣ ಮತ್ತು ಜ್ಞಾನ ಇವುಗಳು ಬಡತನ ಎಂಬ ನರಕದಿಂದ ಪಾರು ಮಾಡಬಲ್ಲ ಏಕೈಕ ಪರಿಣಾಮಕಾರಿ ಮಾರ್ಗ ಎಂಬ ಸತ್ಯ ಗೊತ್ತಿಲ್ಲ. ಹಾಗಾಗಿ ಕೋಮುವಾದವೆಂಬುದು ಜಗತ್ತಿನಾದ್ಯಂತ  ರಕ್ತ ಬೀಜಾಸುರನಂತೆ ವಿವಿಧ ರೂಪ ತಾಳುತ್ತಿದೆ. ನಿಟ್ಟಿನಲ್ಲಿ ನಮ್ಮ ಗ್ರಹಿಕೆಯ ನೆಲೆಗಳು ಕೂಡ ಬದಲಾಗಬೇಕಿದೆ. ಕಾರಣಕ್ಕಾಗಿ ಕಾರ್ಲ್ ಮಾಕ್ರ್ಸ್ ಧರ್ಮವನ್ನು ಅಫೀಮು ಎಂದು ಕರೆದಿದ್ದ. ಅವನ ಚಿಂತನೆಇಂದಿಗೂ ಕೂಡ ಬದಲಾಗದೆ ಉಳಿದಿರುವುದು ವರ್ತಮಾನ ಜಗತ್ತಿನ ದುರಂತ.

            ( ಅಭಿಮನ್ಯು ಪಾಕ್ಷಿಕ ಪತ್ರಿಕೆಯ ದೀಪಾವಳಿ ಮತ್ತು ರಾಜ್ಯೋತ್ಸವ ವಿಶೇಷ ಸಂಚಿಕೆಗೆ ಬರೆದ ಲೇಖನ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ