ಭಾನುವಾರ, ಮಾರ್ಚ್ 20, 2016

ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿಯ ಆತ್ಮಕಥೆ


ಮಾವೋವಾದಿ ನಕ್ಸಲ್ ಸಂಘಟನೆಯ ನಾಯಕನಾಗಿ ಆಂಧ್ರದಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿ ಆಳುವ ಸರ್ಕಾರಗಳಿಗೆ ದುಸ್ವಪ್ನದಂತೆ ಬದುಕಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪತ್ನಿ ಕೋಟೇಶ್ವರಮ್ಮನವರ ಆತ್ಮ ಕಥೆ “ ದ ಶಾರ್ಪ್ ನೀಪ್ ಆಫ್ ಮೆಮೋರಿ” ಕೃತಿಯನ್ನು ಓದುತ್ತಿದ್ದೆ. 1920 ರ ದಶಕದಲ್ಲಿ ಕೃಷ್ಣ ಜಿಲ್ಲೆಯ ಶ್ರೀಮಂತ ಕುಟುಂಬದಲ್ಲಿ ಜನಿಸಿ, ನಾಲ್ಕನೆಯ ವಯಸ್ಸಿಗೆ ಬಾಲ್ಯ ವಿವಾಹವಾಗಿ ಆರನೇ ವಯಸ್ಸಿಗೆ ವಿಧವೆಯಾಗಿ ವಿದ್ಯಾಭ್ಯಾಸ ಮುಂದುವರಿಸಿದ ಕೋಟೇಶ್ವರಮ್ಮ 1930 ರಲ್ಲಿ ಉತ್ತರ ಆಂಧ್ರದ ಗೋದಾವರಿ ಪ್ರದೇಶಕ್ಕೆ ಗಾಂಧೀಜಿ ಬೇಟಿ ನೀಡಿದಾಗ ಮೈ ಮೇಲಿದ್ದ ಒಡವೆಗಳನ್ನು ಗಾಂಧೀಜಿಯವರ ಹರಿಜನ ನಿಧಿಗೆ ನೀಡಿ, ಚರಕವನ್ನು ಕೈಗೆತ್ತಿಕೊಂಡವರು.ಆ ನಂತರ ಪ್ರಗತಿ ಪರ ಬರಹಗಾರಗಾರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಪ್ರಯತ್ನದಿಂದಾಗಿ ತಮ್ಮ ಹರೆಯದ ದಿನಗಳಲ್ಲಿ ಕೊಂಡಪಲ್ಲಿ ಸೀತಾರಾಮಯ್ಯನವರ ಕೈ ಹಿಡಿದು, ಆದಿವಾಸಿಗಳು, ಹರಿಜನರು, ಕೃಷಿ ಕೂಲಿ ಕಾರ್ಮಿಕರ ಹಕ್ಕುಗಳಿಗೆ ಹೋರಾಡುತ್ತಾ, ಸೀತಾರಾಮಯ್ಯನವರ ಜೊತೆಯಲ್ಲಿ ಕಾಡು ಮೇಡು ಅಲೆಯುತ್ತಾ, ಪೊಲೀಸರ ಕಣ್ಣು ತಪ್ಪಿಸಲು ವೇಷ ಮರೆಸಿಕೊಂಡು ಹಲವು ರಾಜ್ಯಗಳನ್ನು ಸುತ್ತಾಡಿದರು. ಮಕ್ಕಳಾದ ನಂತರ ಸೀತಾರಾಮಯ್ಯನವರಿಂದ ಪರಿತ್ಯಕ್ತರಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಾ ಮಕ್ಕಳು ಸಾಕಿ ಬೆಳಸಿದರು. 2012 ರಲ್ಲಿ ತಮ್ಮ 92 ನೆಯ ವಯಸ್ಸಿನಲ್ಲಿ ತೆಲುಗು ಭಾಷೆಯಲ್ಲಿ “ ನಿರ್ಜನ ವಾರಧಿ” ಹೆಸರಿನಲ್ಲಿ ಪ್ರಕಟವಾಗಿದ್ದ  ಈ ಕೃತಿ 2015 ರಲ್ಲಿ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದೆ. 

ಅವರ ತಮ್ಮ ಮೊದಲ ಅಧ್ಯಾಯಕ್ಕೆ “ಶಿಥಿಲಗೊಂಡ ಸೇತುವೆ” ಎಂಬ ಹೆಸರಿಟ್ಟು, ಆರಂಭದಲ್ಲಿ ಒಂದು ಕವಿತೆಯನ್ನು ದಾಖಲಿಸಿದ್ದಾರೆ. ಆ ಕವಿತೆ ಕನ್ನಡ ಅನುವಾದ  ಹೀಗಿದೆ.

ನೆನಪುಗಳು
ಕೆಲವು ನೆನಪುಗಳೇ ಹಾಗೆ
ಮೊಗ್ಗಿನಂತೆ ಅರಳುತ್ತವೆ
ಸುವಾಸೆನೆಗಳ ಮೂಲಕ
ಹೃದಯವನ್ನು ಆವರಿಸುತ್ತವೆ
ಸಂತೋಷದ ಕಣ್ಣಿರಲ್ಲಿ ತೋಯಿಸುತ್ತವೆ
ಅಂಗೈನಲ್ಲಿರುವ ಮುತ್ತಿನ ಹಾಗೆ
ಪಳ ಪಳ ಹೊಳೆಯುತ್ತವೆ.

ಕೆಲವು ನೆನಪುಗಳು
ಮುಳ್ಳಿನಂತೆ ಚುಚ್ಚುತ್ತವೆ
ವಿಷಾಧ ಮತ್ತು ದುಃಖಗಳೊಡನೆ
ಮನದೊಳಗೆ ಮನೆ ಮಾಡುತ್ತವೆ
ನಮ್ಮನ್ನು ಉಸಿರುಗಟ್ಟಿಸುತ್ತವೆ
ಎದೆಗೆ ನಾಟಿದ ಚೂಪುಗತ್ತಿಯ
ಕೊನೆಯಿರದ ನೋವಿನ ಹಾಗೆ.

ಕನಸು ಮತ್ತು ಆಕಾಂಕ್ಷೆಗಳು ಅಳಿಸಿ ಹೋಗಿವೆ
ಬೇಡದ ಸಂಗತಿಗಳು ಮೈ ಮೇಲೆ ಬಿದ್ದು
ಬದುಕು ಛಿದ್ರಗೊಂಡಿದೆ. ಮನಸು ಮಾತ್ರ
ನೆನಪುಗಳ ಶಿಕಾರಿಗೆ ಹೊರಟಿದೆ
ನನ್ನ ಹೃದಯವೆಂಬುದು ಒಡೆದ ಕನ್ನಡಿ ಚೂರು.
ನೆನಪುಗಳು ಪುಡಿ ಪುಡಿಯಾದ ಹೆಂಚುಗಳ ರಾಶಿ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ