ಸೋಮವಾರ, ಮಾರ್ಚ್ 31, 2025

ಬುದ್ದಿ ಮಾಂದ್ಯರ ಭಾರತದಲ್ಲಿ ನಕಲಿ ದೇವಮಾನವರ ಸುಗ್ಗಿ ಕುಣಿತ

 


 ದೇವರು, ಧರ್ಮ, ಧ್ಯಾನ ಮತ್ತು ಯೋಗ ಹಾಗೂ ಧಾರ್ಮಿಕ ಉಪನ್ಯಾಸಗಳು ಮಾರುಕಟ್ಟೆಯ ಸರಕುಗಳಂತೆ ಬಿಕರಿಯಾಗುತ್ತಿರುವ ಭಾರತದಲ್ಲಿ ಈಗ ನಕಲಿ ದೇವಮಾನರು ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಮೀರಿ ನಿಲ್ಲುವ ಅತೀತ ಮಾನವರಾಗಿದ್ದಾರೆ. ಪ್ರಧಾನಿ, ರಾಷ್ಟçಪತಿ, ಉಚ್ಛ ಮತ್ತು ಸವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಅವರ ಮುಂದೆ ನಡುಬಗ್ಗಿಸಿ ನಿಲ್ಲುವ ದಿನಗಳಲ್ಲಿ ಜನಸಾಮಾನ್ಯರನ್ನು ರಕ್ಷಿಸುವವರು ಯಾರು? ಇದು ದೇಶದ ಪ್ರಜ್ಞಾವಂತ ನಾಗರೀಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಕ್ರಿಸ್ತಪೂರ್ವ ಭಾರತದಲ್ಲಿ ಮನುಷ್ಯನ ಅಮಾನುಷ ಹಾಗೂ ಅವಿವೇಕದ ನಡೆಗಳನ್ನು ನಿಯಂತ್ರಿಸಲು ಸೃಷ್ಠಿಯಾದ ಧರ್ಮ ಮತ್ತು ದೇವರುೆಂಬ ಪರಿಕಲ್ಪನೆ ಇಪ್ಪತ್ತೊಂದನೇ ಶತಮಾನದಲ್ಲಿ ನಾಗರೀಕರನ್ನು ಮತ್ತು ಜನ ಸಾಮಾನ್ಯರನ್ನು ಶೋಷಿಸುವ ಅಸ್ತ್ರಗಳಾಗಿವೆ. ಕಳೆದ ಒಂದು ದಶಕದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಸಂವಿಧಾನಕ್ಕಿಂತ ಮುಖ್ಯವಾಗಿ ಶ್ರೀ ರಾಮ ಮತ್ತು ಕುಂಭಮೇಳ ಮುಖ್ಯವಾಗಿವೆ. ವೈಚಾರಿಕತೆ ಮತ್ತು ಆಧುನಿಕತೆಯತ್ತ ಸಾಗಬೇಕಿದ್ದ ಭಾರತವು ಈಗ ಕ್ರಿಸ್ತಪೂರ್ವದ ಕತ್ತಲೆಯ ಯುಗದತ್ತ ಮುನ್ನುಗ್ಗುತ್ತಿದೆ. ಎಲ್ಲೆಡೆ ನಕಲಿ ದೇವಮಾನವರು ತಾಂಡವ ನೃತ್ಯವನ್ನು ಪ್ರದರ್ಶಿಸಿತ್ತಿದ್ದಾರೆ. ಬಹುಸಂಸ್ಕೃತಿಯ ಭಾರತವು ಈಗ ಬುದ್ದಿಮಾಂದ್ಯರ ದೇಶವಾಗಿ ಪರಿವರ್ತನೆಗೊಂಡಿದೆ.

 

0ತಹ ಚಾರಿತ್ರ್ಯಹೀನ ಇತಿಹಾಸವು ದಕ್ಷಿಣ  ಭಾರತದಲ್ಲಿ  ಪುಟ್ಟಪರ್ತಿ ಸಾಯಿಬಾಬಾನಿಂದ ಶಂಕುಸ್ಥಾಪನೆಗೊಂಡು, ಉತ್ತರ ಭಾರತದಲ್ಲಿ  1970 ದಶಕದಲ್ಲಿ ಇಂದಿರಾಗಾಂಧಿಯವರ ಆಡಳಿತದ ಅವಧಿಯಲ್ಲಿ ಧೀರೆಂದ್ರ ಬ್ರಹ್ಮಚಾರಿ ಎಂಬ ಯೋಗ ಗುರುವಿನಿಂದ ಆರಂಭವಾಯಿತು. ತುರ್ತುಪರಿಸ್ಥಿತಿಯ ಕಾಲದಲ್ಲಿ ಈತ ಇಡೀ ದೇಶವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದನು. 1924 ರಲ್ಲಿ ಉತ್ತರ ಪ್ರದೇಶದ ಮೈಥಿಲಿ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದ ಧೀರೇಂದ್ರ ಬ್ರಹ್ಮಚಾರಿ ಬಾಲ್ಯದಲ್ಲಿ ಮನೆ ತ್ಯೆಜಿಸಿ ವಾರಣಾಸಿಗೆ ಹೋಗಿ ಯೋಗವನ್ನು ಅಭ್ಯಾಸ ಮಾಡುವುದರ ಮೂಲಕ ಯೋಗ ಗುರುವಾಗಿ ಜಗತ್ತಿಗೆ ಗುರುತಿಸಿಕೊಂಡವನು. ದೆಹಲಿ, ಗುರುಗಾಂವ್ ( ಗುರುಗ್ರಾಮಮತ್ತು ಜಮ್ಮು ಕಾಶ್ಮೀರದಲ್ಲಿ ಯೋಗಾಶ್ರಮಗಳನ್ನು ತೆರೆದು ಪಾಶ್ಚಿಮಾತ್ಯರನ್ನು ಯೋಗದತ್ತ ಸೆಳೆದÀನು. ಅಂದಿನ ರಷ್ಯಾದ ಗಗನ ಯಾತ್ರಿಗಳಿಗೆ ಯೋಗ ಕಲಿಸಲು 1960 ದಶಕದಲ್ಲಿ ಸೋವಿಯತ್ ರಷ್ಯಾಕ್ಕೆ ಹೋಗಿ ಬಂದ ಧೀರೆಂದ್ರ ಬ್ರಹ್ಮಚಾರಿಯ ಆಶ್ರಮಕ್ಕೆ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರು ತಮ್ಮ ಪುತ್ರಿ ಇಂದಿರಾ ಗಾಂಧಿಗೆ ಯೋಗ ಕಲಿಸಲು ಕಳಿಸಿಕೊಟ್ಟ ನಂತರ ಆತನ ಬದುಕು ಹೊಸ ಆಯಾಮದತ್ತ ಹೊರಳಿತು. 1970 ದಶಕದ ಉತ್ತರಾರ್ಧದಲ್ಲಿ ಧೀರೇಂದ್ರ ಬ್ರಹ್ಮಚಾರಿ  ಸರ್ಕಾರಿ ಸ್ವಾಮ್ಯದ  ದೂರದರ್ಶನದಲ್ಲಿ ಪ್ರಸಾರವಾದ ಯೋಗಾಭ್ಯಾಸ ಎಂಬ ಕಾರ್ಯಕ್ರಮಗಳ ಮೂಲಕ ದೇಶವ್ಯಾಪಿ ಪ್ರಸಿದ್ಧಿ ಪಡೆದನು.

ಧೀರೆಂದ್ರ ಬ್ರಹ್ಮಚಾರಿ ಆಶ್ರಮಗಳು ಹವಾ ನಿಯಂತ್ರಿತ ವ್ಯವಸ್ಥೆಯ ಆಶ್ರಮಗಳಾಗಿದ್ದವು. ಆತನ ಬಳಿ ಹೆಲಿಕಾಪ್ಟರ್ ಹಾಗೂ ಲಘು ವಿಮಾನಗಳಿದ್ದವು. ಪ್ರಧಾನಿಯಾಗಿದ್ದ ಇಂದಿರಾಗಾಂದಿಯವರು ವಾರಕ್ಕೊಮ್ಮೆ ಆತನ ಆಶ್ರಮಕ್ಕೆ ತೆರಳಿ ಯೋಗಾಭ್ಯಾಸ ಮಾಡುತ್ತಿದ್ದರು. ದೇಶದ ರಾಜಕಾರಣಿಗಳು, ಅಧಿಕಾರಿಗಳು ಇಂದಿರಾಗಾಂಧಿಯ ಮೇಲೆ ಪ್ರಭಾವ ಬೀರಲು ಆತನ ಮುಂದೆ ಮಂಡಿಯೂರಿ ಕೂರುತ್ತಿದ್ದರು. ಬ್ರಹ್ಮಚಾರಿ ಉತ್ತರ ಭಾರತದ ವಿವಿಧ ಪ್ರದೇಶಗಳಲ್ಲಿ ಆಶ್ರಮ ಮತ್ತು ವಿಮಾನ ನಿಲ್ದಾಣಕ್ಕಾಗಿ ಸರ್ಕಾರಿ ಭೂಮಿಯನ್ನು ಉಚಿತವಾಗಿ ಪಡೆದಿದ್ದನು ಜೊತೆಗೆ ಭಾರತೀಯ ಸೇನೆಗೆ ವಿಮಾನ ಖರೀದಿಸಲು ರಷ್ಯಾದ ದಲ್ಲಾಳಿಯಾಗಿ ಕಾರ್ಯನಿರ್ವಹಿಸಿದ್ದನು. ಈತನ ಭೂಮಿ ವಿವಾದ, ದಲ್ಲಾಳಿ ವ್ಯªಹಾರಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಾಗಧೀರೆಂದ್ರ ಬ್ರಹ್ಮಚಾರಿ  1994   ಜೂನ್ ತಿಂಗಳಲ್ಲಿ  ಜಮ್ಮು ಮತ್ತು ಕಾಶ್ಮೀರದ ಉಧಮ್ಪುರ ಬಳಿ ನಡೆದ ತನ್ನ ಲಘು ವಿಮಾನ ಅಪಘಾತದಲ್ಲಿ ಮರಣ ಹೊಂದಿದನು.

ಧೀರೆಂದ್ರ ಭಹ್ಮಚಾರಿಯ ನಂತರ ದೆಹಲಿಯ ರಾಜಕೀಯದಲ್ಲಿ 1990 ದಶಕದಲ್ಲಿ ಅಂದಿನ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರ ಅವಧಿಯಲ್ಲಿ ಪ್ರಸಿದ್ಧಿಗೆ ಬಂದವನು   ಜ್ಯೋತಿಷಿ ಮತ್ತು ತಾಂತ್ರಿಕ ಜಗದ್ಗುರು ಎಂದು ಹೆಸರಾದ ಚಂದ್ರಸ್ವಾಮಿ. ಈತ ಮೂಲತಃ ರಾಜಸ್ಥಾನದ ಆಲ್ವಾರ್ ಸಮೀಪದ ಬೆಹ್ರೂರ್ ಎಂಬ ಪಟ್ಟಣದ ಜೈನ ಕುಟುಂಬದಲ್ಲಿ ಜನಿಸಿದವನು. ಈತನ ಕುಟುಂಬವು ಹೈದರಾಬಾದಿಗೆ ಸ್ಥಳಾಂತರಗೊಂಡಿದ್ದ ಕಾರಣ, ನೇಮಿಚಂದ್ ಜೈನ್ ಹೆಸರಿನ ಈತನು ಕಾಳಿಯ ಆರಾಧಕನಾಗಿ ಚಂದ್ರಸ್ವಾಮಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡನು. ಹೈದರಾಬಾದ್ ಮೂಲದ ಪಿ.ವಿ.ನರಸಿಂಹರಾವ್ ಅವರ ಸಂಬA ಬಳಸಿಕೊಂಡು ದೆಹಲಿಗೆ ಸ್ಥಳಾಂತರಗೊಂಡ ಈತ ಪ್ರಭಾವ ಜ್ಯೋತಿಷಿಯಾಗಿ, ರಾಜಕಾರಣದ ಕೇಂದ್ರ ಬಿಂದುವಾಗಿ ಬೆಳೆದನುದೆಹಲಿಯ ಕುತುಬ್ ಸಾಂಸ್ಥಿಕ ಪ್ರದೇಶದಲ್ಲಿ ವಿಶ್ವ ಧರ್ಮಾಯತನ್ ಸಂಸತ್ತು ಎಂದು ಕರೆಯಲ್ಪಡುವ ಆಶ್ರಮವನ್ನು ನಿರ್ಮಿಸಿದನು. ಆಶ್ರಮಕ್ಕಾಗಿ ಭೂಮಿಯನ್ನು ಇಂದಿರಾ ಗಾಂಧಿಯವರು ಮಂಜೂರು ಮಾಡಿದ್ದರು. ದೇಶವಿದೇಶದ ಸಿನಿಮಾ ತಾರೆಯರು, ಶಸ್ತಾçಸ್ತç ಮಾರಾಟದ ದಲ್ಲಾಳಿಗಳು, ರಾಜಕೀಯ ನಾಯಕರು ಚಂದ್ರಸ್ವಾಮಿಯ ಭಕ್ತರಾಗಿ ಮಾgರ್ಪಟ್ಟರು. ಅಮೇರಿಕಾದ ಅಧ್ಯಕ್ಷ ರಿಚರ್ಡ್ ನಿಕ್ಸನ್, ಇಂಗ್ಲೇಂಡಿನ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರಿಂದ ಹಿಡಿದುಮ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಚಂದ್ರಶೇಖರ್, ವಿ.ಪಿ.ಸಿಂಗ್ ಮೊದಲಾದ ರಾಜಕಾರಣಿಗಳ ಜೊತೆ ಈತನ ಸಂಪರ್ಕವಿತ್ತು. ಬಾಲಿವುಡ್ ತಾರೆ ಎಲಿಜಬೆತ್ ಟೇಲರ್, ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ, ಉದ್ಯಮಿಗಳಾದ ಟೈನಿ ರೋಲ್ಯಾಂಡ್ ಮತ್ತು ಮೊಹಮ್ಮದ್ ಅಲ್-ಫಾಯದ್ ಮತ್ತು ಅಪರಾಧ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಮುಂತಾದವರಿಗೆ ಚಂದ್ರಸ್ವಾಮಿ ಆಧ್ಯಾತ್ಮಿಕ ಸಲಹೆಯನ್ನು ನೀಡುತ್ತಿದ್ದನು ಎಂಬ ಸುದ್ದಿಯು ಕಾಲದಲ್ಲಿ ಮುಂಚೂಣಿಯಲ್ಲಿತ್ತು.

 ಚಂದ್ರಸ್ವಾಮಿಯ  ಮೇಲೆ  ಆರ್ಥಿಕ ಅಕ್ರಮ ಚಟುವಟಿಕೆಗಳ ಆರೋಪಗಳಿದ್ದವು. 1996 ರಲ್ಲಿ ಲಂಡನ್ ಮೂಲದ ಉದ್ಯಮಿಯೊಬ್ಬರಿಗೆ ಒಂದು ಲಕ್ಷ ಡಾಲರ್ ವಂಚನೆ ಮಾಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತುವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು  ಉಲ್ಲಂಘಿಸಿದ ಆರೋಪವನ್ನು ಸಹ ಆತ ಎದುರಿಸಬೇಕಾಯಿತು2011 ಜೂನ್ ತಿಂಗಳಲ್ಲಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಚಂದ್ರಸ್ವಾಮಿಗೆ ಒಂಬತ್ತು ಕೋಟಿ ರೂಪಾಯಿ ದಂqವನ್ನುÀ ವಿಧಿಸಿತು.   ಚಂದ್ರಸ್ವಾಮಿ  2017ರ  ಮೇ 23 ರಂದು ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದನು.

 ಇದೀಗ ಧೀರೆಂದ್ರ ಬ್ರಹ್ಮಚಾರಿ ಮತ್ತು ಚಂದ್ರಸ್ವಾಮಿ ಸ್ಥಾನವನ್ನು ಯೋಗಾ ಗುರು ಬಾಬಾ ರಾಮದೇವ್ ಆಕ್ರಮಿಸಿದ್ದಾನೆ1965 ರಲ್ಲಿ ಚಂಡಿಗಡ ಬಳಿಯ ಗ್ರಾಮವೊಂದರಲ್ಲಿ ಯಾದವ ಸಮುದಾಯದಲ್ಲಿ ಜನಿಸಿ, ಯೋಗಭ್ಯಾಸ ಮತ್ತು ತರಬೇತಿಯನ್ನು ವೃತ್ತಿಯಾಗಿಸಿಕೊಂಡು ರಾಮದೇವ್ ರಾಷ್ಟçಮಟ್ಟದಲ್ಲಿ ಬೆಳೆದವನು. 2003 ರಿಂದ ಖಾಸಾಗಿ ಚಾನಲ್ ಗಳ ಮೂಲಕ ಯೋಗ ತರಬೇತಿ  ಪ್ರದರ್ಶನ ಮತ್ತು ದೇಶದ ವಿವಿಧ ನಗರಗಳಲ್ಲಿ ಒಂದು ವಾರದ ಶೀಬಿರ ಹೀಗೆ ಜನಸಾಮಾನ್ಯರಲ್ಲಿ ಯೋಗದ ಆಸಕ್ತಿ ಬೆಳೆಸುತ್ತಾ, ರಾಜಕೀಯ ನಾಯಕರ ನಂಟು ಗಿಟ್ಟಿಸಿಕೊಂಡ ರಾಮದೇವ್ ಉತ್ತರಕಾಂಡ ಹರಿದ್ವಾರದ ಬಳಿ ರೂರ್ಕಿ ರಸ್ತೆಯಲ್ಲಿ ಬೃಹತ್ ಆಸ್ಪತ್ರೆ ಮತ್ತು ಆಶ್ರಮವನ್ನು ತೆರೆದನುಪತಾಂಜಲಿ ಹೆಸರಿನ ಮೂಲಕ ಆಯುರ್ವೇದ ಉತ್ಪಾದನೆಗಳನ್ನು ಮಾರಾಟ ಮಾಡಲು ತೊಡಗಿದ ಈತ ಇಂದು ಬಹುರಾಷ್ಟ್ರೀಯ ಕಂಪನಿಗಳು ತಯಾರಿಸುವ ಎಲ್ಲಾ ದೈನಂದಿನ ಬಳಕೆಯ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ. ಸಧ್ಯಕ್ಕೆ ಪತಾಂಜಲಿ ಹೆಸರಿನ ಗುಟ್ಕಾ, ವಿಸ್ಕಿ, ಮತ್ತು ಸಿಗರೇಟ್ ಉತ್ಪನ್ನಗಳು   ಮಾತ್ರ ಬಾಕಿ ಉಳಿದಿವೆ. ಪತಾಂಜಲಿ ಉತ್ಪನ್ನಗಳು ಶ್ರೇಷ್ಠ ಎಂಬ ಸುಳ್ಳು ಜಾಹಿರಾತುಗಳ ಮೂಲಕ ಸುಪ್ರೀಂಕೋರ್ಟ್ ನಿಂದ ನಾಲ್ಕೈದು ಬಾರಿ ಛೀಮಾರಿ ಹಾಕಿಸಿಕೊಂಡ ರಾಮದೇವ್ ದಂಡವನ್ನು ಸಹ ತೆತ್ತಿದ್ದಾನೆ. ಉತ್ತರಪ್ರದೇಶ, ಚಂಡಿಗಡ, ಮಹಾರಾಷ್ಟç ರಾಜ್ಯಗಳ ಬಿ.ಜೆ.ಪಿ. ಸರ್ಕಾರಗಳಿಂದ  ಸಾವಿರಾರು ಎಕರೆ ಭೂಮಿಯನ್ನು ರಿಯಾಯಿತಿ ಬೆಲೆಯಲ್ಲಿ ಪಡೆದಿದ್ದಾನೆ

 ಯಾವುದೇ ಬಂಡವಾಳ, ಭೂಮಿ, ಯಂತ್ರ ಅಥವಾ ನೌಕರರಿಲ್ಲದೆ ಬೃಹತ್ ಉದ್ಯಮಿಗಳಾಗುವ ಅವಕಾಶವನ್ನು ಭಾರತದ ಧಾರ್ಮಿಕ ಜಗತ್ತು ಈಗ ಎಲ್ಲರಿಗೂ ತೆರೆದಿಟ್ಟಿದೆ. ಯೋಗ, ಧ್ಯಾನ ಮತ್ತು ಆಕರ್ಷಕವಾಗಿ ಮಾತನಾಡುವ ಶಕ್ತಿ ಇದ್ದು ವಿದೇಶಿ ಭಕ್ರನ್ನು ಸೆಳೆಯುವ ಪ್ರತಿಭೆ  ಇದ್ದರೆ ಸಾಕು ಕೆಲವೇ ದಿನಗಳಲ್ಲಿ  ಕೋಟ್ಯಾಧೀಶರಾಗಿ ಬದಲಾಗಬಹುದು. ಇದಕ್ಕೆ ನಿತ್ಯಾನಂದ, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್  ಮುಂತಾದವರು ಇಂದು ನಮ್ಮೆದುರು ಸಾಕ್ಷಿಯಾಗಿದ್ದಾರೆ. ಇವರು ಮಾತ್ರವಲ್ಲದೆ ಒಂದು ಡಜನ್ಗೂ ಹೆಚ್ಚು ನಕಲಿ ದೇವಮಾನವರು ಕೊಲೆ, ಅತ್ಯಾಚಾರ ಆರೋಪದಡಿಯಲ್ಲಿ ಸೆರೆಮನೆಯ ಕಂಬಿಗಳನ್ನು ಎಣಿಸುತ್ತಿದ್ದಾರೆ. ಇವರಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಮತ್ತು  ಅಸರಾಮ್ ಬಾಪು ಹಾಗೂ ಬಿಡದಿ ಬಳಿಯ ನಿತ್ಯಾನಂದ ಪ್ರಮುಖರಾದವರು. ಸಧ್ಯಕ್ಕೆ  ನಿತ್ಯಾನಂದನು ದೇಶದಿಂದ ಪರಾರಿಯಾಗಿ ಈಕ್ವೆಡಾರ್ ದ್ವೀಪದಲ್ಲಿ ತನ್ನದೇ ಆದ ಕೈಲಾಸ ಆಶ್ರಮ ನಿರ್ಮಿಸಿಕೊಂಡು ವಾಸವಾಗಿದ್ದಾನೆ.

 ಇತ್ತೀಚೆಗಿನ ದಿನಗಳಲ್ಲಿ ಕೊಲೆ ಮತ್ತು ಅತ್ಯಾಚಾರದಂತಹ ಅಮಾನುಷ ಕೃತ್ಯಗಳಲ್ಲಿ ಭಾಗಿಯಾಗಿ ಭಾರತದಲ್ಲಿ ಏಳು ಮಂದಿ ಸೆರೆಮನೆ ವಾಸ ಅನುಭವಿಸುತ್ತಿದ್ದರೆ, ಕರ್ನಾಟಕದ ಸ್ವಾಮೀಜಿಯೊಬ್ಬನು  ‘’ಒಪ್ಪಿತ ಲೈಂಗಿಕ ಸಂಬಂಧ ಅತ್ಯಾಚಾರವಲ್ಲ’’ ಎಂಬ ನ್ಯಾಯಾಲಯದ ತೀರ್ಪಿನ ಅನ್ವಯ  ಮಠಾಧೀಶನಾಗಿ ಕಾವಿ ಧರಿಸಿ, ಶುದ್ಧ ಸನ್ಯಾಸಿ ಹಾಗೂ ಬ್ರಹ್ಮಚಾರಿಯ ವೇಷದಲ್ಲಿ ವಿಜೃಂಭಿಸುತ್ತಿದ್ದಾನೆ. ಇಂತಹವನ ಪಾದಪೂಜೆಯಲ್ಲಿ ನಮ್ಮ ಜನ ನಿರತರಾಗಿದ್ದಾರೆ. ಬುದ್ದಿಮಾಂದ್ಯ ಅಯೋಗ್ಯರಿಗೆ ಸನ್ಯಾಸಿ ಪದದ ಅರ್ಥ ಗೊತ್ತಿಲ್ಲ ಎಂದು ಹೇಳಲಾಗದು. ಧರ್ಮದ ಅಪೀಮು ಅವರನ್ನು ಆವರಿಸಿಕೊಂಡಿದೆ. ನಮ್ಮನ್ನಾಳುವ ಸರ್ಕಾರಗಳು ಪಂಚೇಂದ್ರಿಯಗಳನ್ನು ಕಳೆದುಕೊಂಡು ನಿಷ್ಕಿçಯವಾಗಿವೆ. ಇದಕ್ಕೆ ಶ್ರೇಷ್ಠ ಉದಾಹರಣೆ ಎಂದರೆ, 2024 ಜುಲೈ ತಿಂಗಳಿನಲ್ಲಿ ಉತ್ತರ ಪ್ರದೇಶದ ಲಕ್ನೋ ಬಳಿಯ ಹತ್ರಾಸ್ ಎಂಬ ಸ್ಥಳದಲ್ಲಿ ಬೋಲೆ ಬಾಬಾ ಎಂಬ ನಕಲಿ ದೇವ ಮಾನವನ ದರ್ಶನಕ್ಕೆ ಹೋದ ಭಕ್ರರ ನಡುವೆ ಕಾಲ್ತುಳಿತ ಉಂಟಾಗಿ ಒಟ್ಟು 121 ಮಂದಿ ಮೃತ ಪಟ್ಟರು. ಸೂರಜ್ ಪಾಲ್ ಸಿಂಗ್ ಎಂಬ ಹೆಸರಿನ ಈತ ದಶಕದ ಹಿಂದೆ ಓರ್ವ ಪೊಲೀಸ್ ಪೇದೆ ಆಗಿದ್ದವನು ದೇವಮಾನವನಾಗಿದ್ದ. ಘಟನೆ ಕುರಿತು ತನಿಖೆ ನಡೆಸಿದ ಉತ್ತರ ಪ್ರದೇಶದ ಸರ್ಕಾರವು ದುರಂತಕ್ಕೆ ಜಿಲ್ಲಾಡಳಿತದ ವೈಫಲ್ಯ ಎಂದು ಹೇಳಿ, ಬೋಲೆ ಬಾಬನನ್ನು ರಕ್ಷಿಸಿತು.

ಇವೆಲ್ಲಕ್ಕಿಂತ ಹೆಚ್ಚು ಆತಂಕವನ್ನುಂಟು ಮಾಡುವ ವಿಚಾರವೆಂದರೆ, ಪಂಜಾಬಿನ ಆಧ್ಯಾತ್ಮಿಕ ಪಂಥವಾದ  ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಎಂಬಾತನದು. ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ಈತ ಚಂಡಿಗಡದ ಹಿಸ್ಸಾರ್ ಬಳಿ ಆಶ್ರಮ ನಿರ್ಮಿಸಿಕೊಂಡು ಪಂಜಾಬಿಗಳ ಪಾಲಿಗೆ ನಡೆದಾಡುವ ದೇವನಾಗಿದ್ದನು. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ 2010 ರಿಂದ 2014 ನಡುವೆ ಒಟ್ಟು  42 ಬಾರಿ  ನ್ಯಾಯಾಲಯದ ಸಮನ್ಸ್ ಅನ್ನು ತಿರಸ್ಕರಿಸಿದ್ದನು. 2014 ರಲ್ಲಿ ಪೊಲೀಸರು ಈತನ ಆಶ್ರಮದ ಮೇಲೆ ದಾಳಿಮಾಡಿ ಶೋಧನೆ ನಡೆಸಿದಾಗಐವರು ಮಹಿಳೆಯರು ಮತ್ತು ಹದಿನೆಂಟು ತಿಂಗಳ ಮಗುವಿನ ಅಸ್ತಿಪಂಜರಗಳು ಪತ್ತೆಯಾಗಿದ್ದವು. ಮಹಿಳೆಯೊಬ್ಬಳು ಸಲ್ಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯವು ಇಪ್ಪತ್ತು ವರ್ಷಗಳ ಜೀವಾವಧಿ ಶಿಕ್ಷೆ ವಿಧಿಸಿದೆ. ಚುನಾವಣೆಯ ಸಂದರ್ಭದಲ್ಲಿ ವಿಶೇಷ ಪೆರೋಲ್ ಮೇಲೆ ಹೊರಬರುವ ಈತನು ತನ್ನ ಅನುಯಾಯಿಗಳಿಗೆ ಬಿ.ಜೆ.ಪಿ.ಗೆ ಮತ ನೀಡುವಂತೆ ಕರೆ ನೀಡುತ್ತಾನೆ.

 

ಇಂದಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬೆಹರಾನಿ ಎಂಬಲ್ಲಿ ಜನಿಸಿದ ಅಸರಾಂ ಬಾಪು ಎಂಬ ದೇವ ಮಾನವನೊಬ್ಬನು ಶ್ರೀ ಯೋಗಾ ವೇದಾಂತ ಸೇವಾ ಸಮಿತಿ ಹೆಸರಿನಲ್ಲಿ ಗುಜರಾತ್, ರಾಜಸ್ತಾನ ಸೇರಿದಂತೆ ಉತ್ತರ ಭಾರತದಲ್ಲಿ ನಾಲ್ಕನೂರಕ್ಕೂ ಹೆಚ್ಚು  ಆಶ್ರಮಗಳನ್ನು ತೆರೆದಿದ್ದನು. ಮಹಿಳೆಯೊಬ್ಬಳಿಗೆ ಹಿಡಿದಿರುವ ದುಷ್ಠ ಶಕ್ತಿಯನ್ನು ಬಿಡಿಸುತ್ತೇನೆ ಎಂದು ಹೇಳುವುದರ ಮೂಲಕ ನಿರಂತರ ಅತ್ಯಾಚಾರ   ಎಸಗುವುದರ ಜೊತೆಗೆ ತನ್ನ ಆಶ್ರಮದ ಅಪ್ರಾಪ್ತ ಬಾಲಕಿಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದನು. ಈತನಿಗೆ ಸ್ಥಳೀಯ ನ್ಯಾಯಾಲಯ ಮರಣ ದಂಡನೆ ವಿಧಿಸಿತ್ತು. ನಂತರ ಸರ್ವೋಚ್ಚ ನ್ಯಾಯಾಲಯವು ೮೩ ವರ್ಷದ ಅಸರಾಂ ಬಾಪುಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇಂತಹ ಪ್ರಕರಣಗಳು ಮತ್ತು ವ್ಯಕ್ತಿಗಳ ಕರಾಳ ಇತಿಹಾಸವು ದೇಶದುದ್ದಕ್ಕೂ ಇರುವುದು ಸುಳ್ಳಲ್ಲ.  ಇತ್ತೀಚೆಗಿನ ಪ್ರಸಿದ್ಧ ದೇವ ಮಾನವರಾದ ರವಿಶಂಕರ್ ಗುರೂಜಿ ಮತ್ತು ಜಗ್ಗಿ ವಾಸುದೇವ್ ಕುರಿತಾಗಿ ಇಂತಹ ಗಂಭಿರ ಪ್ರಕರಣಗಳು ಇಲ್ಲ. ಆದರೆ, ದಲಿತರ ಭೂಮಿ ಕಬಳಿಸಿದ ಹಾಗೂ ಅರಣ್ಯದಂಚಿನ ಆದಿವಾಸಿಗಳ ಭೂಮಿ ಆಕ್ರಮಿಸಿದ ಆರೋಪಗಳು ಇಬ್ಬರು ನಕಲಿ ದೇವಮಾನವರ ಮೇಲಿವೆ. ೨೦೨೨ ರಲ್ಲಿ ಶಭಶ್ರೀ ಎಂಬ ಮಹಿಳೆಯು ಜಗ್ಗಿ ವಾಸುದೇವ ಆಶ್ರಮಕ್ಕೆ ಯೋಗ ಕಲಿಯಲು ಹೋಗಿ, ಬೆಳಗಿನ ಜಾವ ಆಶ್ರಮದಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮರಾದಲ್ಲಿ ದಾಖಲಾಗಿದ್ದವು. ಆದರೆ, ಆಶ್ರಮದ ಹೊರಗೆ ಆಕೆ ಹತ್ಯೆಯಾಗಿದ್ದಳು.

 ತಮಿಳುನಾಡಿನ ತಂಜಾವೂರು ಮತ್ತು ಕುಂಬಕೋಣಂ ನಡುವೆ ಇರುವ ಪಾಪನಾಶಂ ನಲ್ಲಿ 1956 ರಲ್ಲಿ ಜನಿಸಿದ ರವಿಶಂಕರ್, ಬೆಂಗಳೂರು ಸೆಂಟ್ ಜೋಸೆಫ್ ಕಾಲೇಜಿನ ವಿಜ್ಞಾನ ಪದವೀಧರ. ನಂತರ ಆದ್ಮಾತ್ಮಕ್ಕೆ ಒಲಿದು ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್ ಎಂಬ ಆಶ್ರಮ ನಿರ್ಮಿಸಿಕೊಂಡು ಅಂತರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಗುರು ಎಂದು ಪ್ರಸಿದ್ಧಿಯಾಗಿದ್ದಾನೆ. ದಲಿತರ ಭೂಮಿಯನ್ನು ಕಬಳಿಸಿದ ಆರೋಪವು ಈತನ ಮೇಲಿದೆ. ತೆಲುಗು ಮಾತೃಭಾಷೆಯ ಮೈಸೂರು ಮೂಲದ ಜಗ್ಗಿ ವಾಸುದೇವ್ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಸ್ನಾತಕೋತ್ತರ ಪದವೀಧರ.   ಕೌಟುಂಬಿಕ  ಕಲಹ  ಮತ್ತು ಪತ್ನಿಯ ಸಾವಿನಿಂದ  ಬೇಸತ್ತು ಕೊಯಮತ್ತೂರು ಬಳಿ ಅರಣ್ಯದಂಚಿನ ಬಳಿ ಶಿವಗಿರಿ ಎಂಬಲ್ಲಿ ಆಶ್ರಮ ನಿರ್ಮಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಈತನ ಕುರಿತಾಗಿ ಆದಿವಾಸಿಗಳ ಭೂಮಿಯನ್ನು ಆಕ್ರಮಿಸಿರುವ ದೂರುಗಳು ಹಾಗೂ ಕೆಲವು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿ ಬಲವಂತವಾಗಿ ಇರಿಸಿಕೊಂಡಿದ್ದಾನೆ ಎಂಬ ಆರೋಪಗಳಿವೆ. ಆದರೆ. ದೇಶದ ಪ್ರಧಾನಿಯಂತಹ ಪ್ರಭಾವಿ ವ್ಯಕ್ತಿಗಳು  ಇಂತಹ ವ್ಯಕ್ತಿಗಳ ಮುಂದೆ ನಡು ಬಗ್ಗಿಸಿ ನಿಲ್ಲುವಾಗ ಕಾನೂನು ಮತ್ತು ಸಂವಿಧಾನಗಳು ಇಂತಹವರ ಮುಂದೆ ಸೊಂಟ ಮುರಿದುಕೊಂಡು ಬಿದ್ದಿವೆ.

  ಕಾರಣದಿಂದಾಗಿ ಧರ್ಮಸ್ಥಳ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ದಶಕದಲ್ಲಿ ಸೌಜನ್ಯ, ಸುಚೇತಾ, ಭಾರತಿ, ನಂದಿತಾ, ಸೌಮ್ಯ ಭಟ್ ಹಾಗೂ ಅಕ್ಷತಾ ಎಂಬ ಯುವತಿಯರು ಅಮಾನುಷವಾಗಿ ಹತ್ಯೆಯಾದರೂ ಸಹ ಈವರೆಗೆ ಸಮಗ್ರವಾಗಿ  ತನಿಖೆಯಾಗಿಲ್ಲ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲಕರ್ನಾಟಕ ಸರ್ಕಾರ ಕಣ್ಣು ಮತ್ತು ಕಿವಿ ಮುಚ್ಚಿಕೊಂಡು ದೇವರು ಮತ್ತು ದೇವಮಾನವರ ಮುಂದೆ ಮಂಡಿಯೂರಿ ಕುಳಿತಿದೆ. ಇಂತಹ ನರಹೇಡಿಗಳ ಸರ್ಕಾರಗಳನ್ನು  ಹೊಗಳಲು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ವಂದಿಮಾಗಧರು ಟೊಕ ಕಟ್ಟಿಕೊಂಡು ಸರತಿ ಸಾಲಿನಲ್ಲಿ ನಿಂತಿದ್ದಾರೆ.

 (ಏಪ್ರಿಲ್ ತಿಂಗಳ ಹೊಸತು ಮಾಸಪತ್ರಿಕೆಯಲ್ಲಿ ಪ್ರಕಟವಾದ ‘’ಬಹುಸಂಸ್ಕೃತಿ’’ ಅಂಕಣ ಬರಹ)

ಚಿತ್ರಗಳು- ಕ್ರಮವಾಗಿ, 1- ಧೀರೆಂದ್ರಬ್ರಹ್ಮಚಾರಿ, 2- ಚಂದ್ರಸ್ವಾಮಿ 3- ರಾಮ್ ರಹೀಮ್ ಸಿಂಗ್, 5- ಅಸರಾಂ ಬಾಪು.

ಡಾ. ಎನ್.ಜಗದೀಶ್ ಕೊಪ್ಪ